Headlines

ಮನೆ ಟೆರೇಸ್‌ ಮೇಲೆ ಸುಲಭವಾಗಿ ಬೆಳೆಯಬಹುದು ಡ್ರ್ಯಾಗನ್‌ ಫ್ರೂಟ್;‌ ಇದಕ್ಕಾಗಿ ಈ ಸಲಹೆ ಅನುಸರಿಸಿದರೆ ಸಾಕು – Kannada News | How to grow dragon fruit on home terrace

ಡ್ರ್ಯಾಗನ್‌ ಹಣ್ಣಿನಲ್ಲಿ (dragon fruit) ಕ್ಯಾಲೋರಿ ಕಡಿಮೆ ಆದರೆ ಕಬ್ಬಿಣ, ಸತು, ಪ್ರೋಟೀನ್‌, ರಂಜಕ, ಮೆಗ್ನೇಸಿಯಂನಂತಹ  ಅಗತ್ಯ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಹಣ್ಣು ತೂಕ ಇಳಿಕೆಗೆ, ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಚರ್ಮದ ಆರೋಗ್ಯಕ್ಕೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾನೇ ಸಹಕಾರಿ.  ಹೀಗೆ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್‌ ಹಣ್ಣು ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ. ಜೊತೆಗೆ ಈ ಹಣ್ಣಿನ ಬೆಲೆಯೂ ಜಾಸ್ತಿ. ಆದ್ದರಿಂದ ಈ ಹಣ್ಣನ್ನು ಮನೆಯಲ್ಲಿ ಬೆಳೆಯುವುದು ತುಂಬಾನೇ ಕಷ್ಟಕರವೆಂದು ಅನೇಕರು ಭಾವಿಸುತ್ತಾರೆ. ಆದ್ರೆ…

Read More

‘ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳಲಿಲ್ಲ’: ಕಂಬ್ಯಾಕ್ ಬಗ್ಗೆ ಪ್ರೀತಿ ಜಿಂಟಾ ಮಾತು – Kannada News | Preity Zinta speaks about Hindi Movie Comeback with Batwara 1947 Film

2000ರ ದಶಕದಲ್ಲಿ ಬಾಲಿವುಡ್‌ನ ಅತ್ಯಂತ ಯಶಸ್ವಿ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಲ್ಲಿ ಒಬ್ಬರಾಗಿದ್ದ ಪ್ರೀತಿ ಜಿಂಟಾ (Preity Zinta) ಅವರು ಮದುವೆ ಮತ್ತು ಮಕ್ಕಳು ಆದ ನಂತರ ಬಣ್ಣದ ಲೋಕದಿಂದ ದೂರ ಉಳಿದಿದ್ದರು. 2008ರ ನಂತರ ಅಪರೂಪಕ್ಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, 2018ರ ಬಳಿಕ ತಮ್ಮ ಪೂರ್ಣ ಸಮಯವನ್ನು ಕುಟುಂಬ ಮತ್ತು ಮಕ್ಕಳ ಪಾಲನೆಗಾಗಿಯೇ ಮೀಸಲಿಟ್ಟಿದ್ದರು. ಇದೀಗ ಬರೋಬ್ಬರಿ 8 ವರ್ಷಗಳ ಸುದೀರ್ಘ ವಿರಾಮದ ನಂತರ ರಾಜ್​ಕುಮಾರ್ ಸಂತೋಷಿ ನಿರ್ದೇಶನದ ‘ಬಟ್ವಾರಾ 1947’ (Batwara…

Read More

ಒಟಿಟಿಯಿಂದ ಡಿಲೀಟ್ ಆಗಲಿವೆ ಸ್ಟಾರ್ ನಟಿಯರ ಎರಡು ಸಿನಿಮಾಗಳು – Kannada News | Oh Baby and Game Over movies to be deleted from Netflix soon

ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಿನಿಮಾ (Cinema) ಒಂದು ವಾರಕ್ಕೆ ಎತ್ತಂಗಡಿ ಆಗುತ್ತವೆ, ತುಂಬಾ ಚೆನ್ನಾಗಿದ್ದರೆ ಮೂರು ಹೆಚ್ಚೆಂದರೆ ನಾಲ್ಕು ವಾರ ಓಡಬಹುದು. ಆದರೆ ಒಟಿಟಿಗೆ ಬರುವ ಸಿನಿಮಾಗಳು ವರ್ಷಗಳ ಕಾಲವಾದರೂ ಅಲ್ಲೇ ಇರುತ್ತವೆ. ಎಷ್ಟೋ ವರ್ಷ ಹಳೆಯ ಸಿನಿಮಾಗಳು ಒಟಿಟಿಯಲ್ಲಿ ಈಗ ನೋಡಲು ಲಭ್ಯ. ಇಂದು ಬಿಡುಗಡೆ ಆಗುವ ಸಿನಿಮಾಗಳನ್ನು ಎಷ್ಟೋ ವರ್ಷಗಳ ಬಳಿಕವೂ ನೋಡಬಹುದು. ಆದರೆ ಆಗಾಗ್ಗೆ ಕೆಲವು ಸಿನಿಮಾಗಳು ಒಟಿಟಿಯಿಂದ ಡಿಲೀಟ್ ಆಗುತ್ತಿರುತ್ತವೆ. ಇದೀಗ ಎರಡು ದಕ್ಷಿಣ ಭಾರತೀಯ ಸಿನಿಮಾಗಳು ಒಟಿಟಿಯಿಂದ ಡಿಲೀಟ್ ಆಗುತ್ತಿವೆ….

Read More

ಮ್ಯಾನ್ಮಾರ್‌ನೊಂದಿಗೆ ಭಾರತದ ಭೂಪ್ರದೇಶ ವಿನಿಮಯದ ಚರ್ಚೆ; ವಿದೇಶಾಂಗ ಸಚಿವಾಲಯ ಮಾಹಿತಿ – Kannada News | India to exchange territory with Myanmar what MEA said

ನವದೆಹಲಿ, ಆಗಸ್ಟ್ 5: ಮಣಿಪುರದ ಗಡಿ ಭಾಗದಲ್ಲಿ ದಶಕಗಳಿಂದ ಇತ್ಯರ್ಥವಾಗದೆ ಉಳಿದಿರುವ ಗಡಿ ರೇಖೆಯನ್ನು ಇತ್ಯರ್ಥಪಡಿಸಲು ಭಾರತ ಮತ್ತು ಮ್ಯಾನ್ಮಾರ್ ಭೂಪ್ರದೇಶ ವಿನಿಮಯದ ಸಾಧ್ಯತೆಗಳನ್ನು ಪರಿಶೀಲಿಸುತ್ತಿವೆ ಎನ್ನಲಾಗಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal), “ಗಡಿಯಲ್ಲಿ ಇನ್ನೂ ಇತ್ಯರ್ಥವಾಗದ ಕೆಲವು ಪ್ರದೇಶಗಳಿವೆ. ಆ ವಲಯಗಳ ಕುರಿತು ಚರ್ಚೆಗಳು ಪ್ರಸ್ತುತ ನಡೆಯುತ್ತಿವೆ” ಎಂದು ಖಚಿತಪಡಿಸಿದ್ದಾರೆ. ಮಣಿಪುರದ ಗಡಿಯಲ್ಲಿ ಮ್ಯಾನ್ಮಾರ್‌ನೊಂದಿಗೆ ಭೂಮಿ ವಿನಿಮಯ ಮಾಡಿಕೊಳ್ಳಲು ಭಾರತ ಯೋಚಿಸುತ್ತಿದೆಯೇ? ಎಂಬ…

Read More

IND vs SL: ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ; ಟೆಸ್ಟ್ ಸರಣಿಗೆ ಸ್ಟಾರ್ ಪ್ಲೇಯರ್ ಎಂಟ್ರಿ

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇದೇ ಆಗಸ್ಟ್ 15 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಶ್ರೀಲಂಕಾ ತಲುಪಿದೆ. ಶುಭ್​ಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ ಮೊದಲಿಗೆ ಅಭ್ಯಾಸ ಪಂದ್ಯವನ್ನು ಆಡಲಿದೆ. ಆ ಬಳಿಕ ಟೆಸ್ಟ್ ಸರಣಿ ಆರಂಭವಾಗಲಿದೆ(PC-PTI). ಈ ಟೆಸ್ಟ್ ಸರಣಿಗಾಗಿ ತಂಡದ ಜೊತೆಗೆ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಶ್ರೀಲಂಕಾಕ್ಕೆ ಪ್ರಯಾಣಿಸಿರಲಿಲ್ಲ. ಹೀಗಾಗಿ ಅವರು ಈ ಸರಣಿಯನ್ನು ಆಡುವುದು ಅನುಮಾನ ಎನ್ನಲಾಗುತ್ತಿತ್ತು. ಇದಕ್ಕೆ ಕಾರಣ ಗಾಯದಿಂದ…

Read More

ರೈತರ ಜಮೀನು ಕಬಳಿಸಲು ಅಧಿಕಾರಿಗಳಿಂದಲೇ ಸಂಚು?: ಪಹಣಿ ಪತ್ರದಲ್ಲಿ ರಾತ್ರೋ ರಾತ್ರಿ ಇಳಿಕೆ ಕಂಡ ಜಾಗದ ವಿಸ್ತೀರ್ಣ! – Kannada News | Land Record Scam Alleged in Mundgod: 25 Farmers Find Land Area Reduced Overnight in RTC; Petition Uttara Kannada DC

ದಾಂಡೇಲಿ, ಆಗಸ್ಟ್​​ 05: ಇಷ್ಟು ವರ್ಷಗಳ ಕಾಲ ಕುಟುಂಬಕ್ಕೆ ಆಧಾರವಾಗಿದ್ದ ಜಮೀನಿನ ಪಹಣಿ ಪತ್ರದಲ್ಲಿ ರಾತ್ರೋರಾತ್ರಿ ವಿಸ್ತೀರ್ಣ ಕಡಿಮೆ ಆಗಿ ನಮೂದಾಗಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಕೇಳಿಬಂದಿದೆ. ಕಳೆದ 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ ಜಮೀನಿನ ದಾಖಲೆ ಕಂಡು ಅನ್ನದಾತರಿಗೆ ತೀವ್ರ ಆಘಾತವಾಗಿದ್ದು, ಕಾಲುವೆ ಪಕ್ಕದ ಜಮೀನು ಅತಿಕ್ರಮಣ ಮಾಡಲು ನೀರಾವರಿ ಇಲಾಖೆಯ ಅಧಿಕಾರಿಗಳೇ ಈ ರೀತಿ ಸಂಚು ರೂಪಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ತಮಗೆ ನ್ಯಾಯ…

Read More

‘ತದ್ವಿರುದ್ದ’ ಸಿನಿಮಾ ಬಗ್ಗೆ ಸುಚೇಂದ್ರ ಪ್ರಸಾದ್ ಬಿಚ್ಚುಮಾತು: ವಿಡಿಯೋ – Kannada News | Actor Suchendra Prasad talks about Tadvirudha movie

ಖ್ಯಾತ ನಟ ಸುಚೇಂದ್ರ ಪ್ರಸಾದ್ (Suchendra Prasad) ಅವರು ‘ತದ್ವಿರುದ್ಧ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಇದೊಂದು ಭಿನ್ನ ಕತೆಯುಳ್ಳ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸುಚೇಂದ್ರ ಪ್ರಸಾದ್, ವಿಕ್ರಮ್ ರಾಮಯ್ಯ, ಸುಮನ್‌ ರಂಗನಾಥ್‌, ಐಶ್ವರ್ಯಾ ಶೆಟ್ಟಿ, ಪೂಜಾ ಗೌಡ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾದ ಬಗ್ಗೆ ನಟ ಸುಚೇಂದ್ರ ಪ್ರಸಾದ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಜೊತೆಗೆ ತಮ್ಮ ಪಾತ್ರದ ವಿಶೇಷತೆಯ ಬಗ್ಗೆ, ತಾವೇಕೆ ಗಾಲಿ ಕುರ್ಚಿಯಲ್ಲಿ ಕೂತು ನಟಿಸಿದ್ದು ಇನ್ನೂ ಕೆಲವು ವಿಷಯಗಳನ್ನು ಸುಚೇಂದ್ರ ಪ್ರಸಾದ್ ಮಾತನಾಡಿದ್ದಾರೆ….

Read More

ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ ಇದ್ದರೆ ಯಾರು ಭರಿಸಬೇಕು? ಆರ್​ಬಿಐ ಗವರ್ನರ್ ಹೇಳಿದ್ದಿದು – Kannada News | Who pays if MDR fixed for UPI payments, RBI governor clarifies

ಮುಂಬೈ, ಆಗಸ್ಟ್ 5: ಯುಪಿಐ (UPI) ಡಿಜಿಟಲ್ ಪಾವತಿಗಳ ಮೇಲೆ ಮುಂದಿನ ದಿನಗಳಲ್ಲಿ ಶುಲ್ಕ ವಿಧಿಸಲಾಗುವುದೇ ಮತ್ತು ಈ ವೆಚ್ಚವನ್ನು ಯಾರು ಭರಿಸಲಿದ್ದಾರೆ ಎಂಬ ಚರ್ಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಸಂಜಯ್ ಮಲ್ಹೋತ್ರಾ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಮಂಡನೆ ಮಾಡಿರುವ ವಿಧೇಯಕದಲ್ಲಿ ಯುಪಿಐ ಪಾವತಿಯನ್ನು ಪ್ರಸ್ತಾಪಿಸಿಲ್ಲ. ಎಂಡಿಆರ್ ದರವನ್ನು ನಿಗದಿ ಮಾಡಿಲ್ಲ. ಅಥವಾ ಎಂಡಿಆರ್​ಗೆ ಹಣದ ಮಿತಿಯನ್ನೂ ಪ್ರಸ್ತಾಪಿಸಿಲ್ಲ ಎಂದು ತಿಳಿಸಿರುವ ಆರ್​ಬಿಐ ಗವರ್ನರ್, ಎಂಡಿಆರ್ ಅನ್ನು ಗ್ರಾಹಕರ ಹೊರತಾಗಿ ಸರ್ಕಾರವೋ, ವರ್ತಕರೋ ಅಥವಾ…

Read More

ಬಾಂಗ್ಲಾದೇಶ ಆಟಗಾರನನ್ನು ಖರೀದಿಸಿದ ಕಾವ್ಯಾ ಮಾರನ್ – Kannada News | Kavya Maran Sparks New Controversy: Sunrisers Eastern Cape Signs Bangladesh Player Rishad Hossain

ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾಲೀಕರಾದ ಕಾವ್ಯಾ ಮಾರನ್ (Kavya Maran) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ, ಚರ್ಚೆಗೆ ಕಾರಣ ತಂಡದ ಪ್ರದರ್ಶನವಲ್ಲ, ಬದಲಿಗೆ ತಮ್ಮ ಮಾಲೀಕತ್ವದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ (Sunrisers Eastern Cape) ತಂಡಕ್ಕೆ ಬಾಂಗ್ಲಾದೇಶ ಆಟಗಾರನನ್ನು ಖರೀದಿಸಿರುವುದು. ಕೆಲವು ತಿಂಗಳ ಹಿಂದೆ ಇದೇ ಕಾವ್ಯಾ ಮಾರನ್ ತಮ್ಮ ತಂಡಕ್ಕೆ ಪಾಕಿಸ್ತಾನದ ಆಟಗಾರನನ್ನು ಖರೀದಿಸಿ ವಿವಾದಕ್ಕೆ ಕಾರಣರಾಗಿದ್ದರು. ಇದೀಗ ಬಾಂಗ್ಲಾದೇಶ ಆಟಗಾರನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ವಾಸ್ತವವಾಗಿ ಕಾವ್ಯಾ ಮಾರನ್ ಐಪಿಎಲ್‌ನಲ್ಲಿ ತಂಡವನ್ನು ಹೊಂದಿರುವಂತೆ…

Read More

ಸೋರೆಕಾಯಿ ಜ್ಯೂಸ್ ಕುಡಿಯುವವರೇ ಗಮನಿಸಿ! ಹೃದಯ, ಜೀರ್ಣಕ್ರಿಯೆ, ತೂಕ ಇಳಿಕೆಗೆ ಸಿಗುವ ಆರೋಗ್ಯ ಲಾಭಗಳು – Kannada News | Bottle Gourd Juice for Heart Health: Benefits, Side Effects & Best Time to Drink

ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಬಯಸುವವರು ಸಹಜ ಪಾನೀಯಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಂತಹ ಪಾನೀಯಗಳಲ್ಲಿ ಸೋರೆಕಾಯಿ (Bottle Gourd) ಜ್ಯೂಸ್ ಕೂಡ ಪ್ರಮುಖವಾಗಿದೆ. ಕಡಿಮೆ ಕ್ಯಾಲೊರಿ, ಹೆಚ್ಚು ನೀರಿನ ಅಂಶ, ಫೈಬರ್ ಹಾಗೂ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಸೋರೆಕಾಯಿ ಜ್ಯೂಸ್ ಜೀರ್ಣಕ್ರಿಯೆ ಸುಧಾರಿಸಲು, ತೂಕ ನಿಯಂತ್ರಣಕ್ಕೆ ಮತ್ತು ದೇಹವನ್ನು ಹೈಡ್ರೇಟ್‌ ಆಗಿಡಲು ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ತಯಾರಿಸಿ, ಮಿತ ಪ್ರಮಾಣದಲ್ಲಿ ಸೇವಿಸುವುದು ಅತ್ಯಂತ ಮುಖ್ಯ. ಹಾಗಾದರೆ ಇದರ ಸೇವನೆಯಿಂದ ಸಿಗುವ…

Read More