ಉದ್ಯೋಗದಲ್ಲಿ ಒತ್ತಡ, ಮಾತಿನಿಂದ ಸಂಘರ್ಷ ಸಾಧ್ಯ. ಆತ್ಮವಿಶ್ವಾಸ ಉಳಿಯುತ್ತದೆ. ವಸ್ತುಗಳ ಉತ್ಪನ್ನ ಮಾಡುವವರಿಗೆ ನೌಕರರ ಕೊರತೆ ಕಾಣಿಸಬಹುದು. ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸದು. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು. ತಂದೆಯಿಂದ ಮಾನಸಿಕವಾಗಿ ನೋವಾಗಲಿದೆ. ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ನಿಮ್ಮನ್ನು ಅಳೆಯುವ ಜನರ ಸಂಖ್ಯೆ ಅಧಿಕವಾದೀತು. ಎಲ್ಲರೂ ನಾನಾ ಪ್ರಶ್ನೆಗಳನ್ನು ಕೇಳುವರು. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಗಿಂತ ಉತ್ತಮವಾಗಿದೆ. ಕಾರ್ಯಕ್ಷೇತ್ರದಿಂದ ಹೆಚ್ಚುವರಿ ಆದಾಯ ಬರುವುದು. ನಿಮ್ಮ ಬದ್ಧತೆಯನ್ನು ಉಳಿಸಿಕೊಳ್ಳಿ. ಮಂಗಳ ವಾರ ಹನುಮಾನ್ ಚಾಲೀಸ್ ನ್ನು ಪ್ರಾತಃಕಾಲದಲ್ಲಿ ಪಠಿಸಿ.
ವೃಷಭ ರಾಶಿ :
ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ತಪ್ಪಲಿದೆ. ಕುಟುಂಬದಲ್ಲಿ ಭಾವನಾತ್ಮಕತೆಗೆ ಚರ್ಚೆ. ಉದ್ಯೋಗದಲ್ಲಿ ಗೊತ್ತಾಗದೇ ನಿಮ್ಮ ಮೇಲೆ ಅಪವಾದಗಳು ಬರಬಹುದು. ಅದನ್ನು ತಾಳ್ಮೆ ತಿಳಿಸಿ, ಸರಿ ಮಾಡಿಕೊಳ್ಳುವಿರಿ. ಆರೋಗ್ಯದ ವ್ಯತ್ಯಾಸದಿಂದ ನಿಮ್ಮ ಮುಖ್ಯ ಕಾರ್ಯಗಳನ್ನು ಮಾಡಲು ಆಗದು. ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಆರೋಗ್ಯವು ಸಾಮಾನ್ಯವಾಗಿ ಇರಲಿದೆ. ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅನಂತರವೂ ಕೆಲಸ ತಡವಾಗಿ ಪೂರ್ಣಗೊಳ್ಳುತ್ತದೆ. ಅನೇಕ ಲಾಭದ ಅವಕಾಶಗಳು ಸಿಗುತ್ತವೆ. ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹೊಸ ಸಂಬಂಧದ ಮೂಲಕ ಅದೃಷ್ಟ ಬರಬಹುದು. ಲಕ್ಷ್ಮೀ ಅಷ್ಟೋತ್ತರ ಪಠನ.
ಮಿಥುನ ರಾಶಿ:
ನಿಮ್ಮ ಸಂಪರ್ಕ ಸೇತು ತುಂಡಾಗಬಹುದು. ನಿರ್ಧಾರಗಳಲ್ಲಿ ಗೊಂದಲವನ್ನು ಮೀರಲಾಗದು. ಉನ್ನತ ವಿದ್ಯಾಭ್ಯಾಸಕ್ಕೆ ಹಿರಿಯರಿಂದ ಆಶೀರ್ವಾದವನ್ನು ಪಡೆದುಕೊಳ್ಳುವಿರಿ. ಇನ್ನೊಬ್ಬರಲ್ಲಿ ಪ್ರೀತಿ ಮೂಡುವ ಸಾಧ್ಯತೆ ಇದೆ. ಹಳೆಯ ಗೆಳೆಯರು ನಿಮಗೆ ಆಕಸ್ಮಿಕವಾಗಿ ಸಿಕ್ಕಾರು. ಈ ವಾರ ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ಇನ್ನೊಬ್ಬರ ಭಾವಕ್ಕೆ ಸ್ಪಂದಿಸುವ ಗುಣವಿರುವುದು. ನಾನಾ ಪ್ರಕಾರದ ಖರ್ಚುಗಳಿಂದ ದುಬಾರಿ ಎನಿಸಬಹುದು. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಮಕ್ಕಳನ್ನು ಹಿಡೆತಕ್ಕೆ ತರಲು ಪ್ರಯತ್ನಿಸುವಿರಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳುವುದು ಬೇಡ. ಸಹೋದರಿಯ ಮತ್ತು ಸಂಗಾತಿಯ ಬೆಂಬಲ ಪಡೆಯುವಿರಿ. ಮಹಾವಿಷ್ಣುವಿನ ಸ್ತೋತ್ರ ಮಾಡಿ.
ಕರ್ಕಾಟಕ ರಾಶಿ:
ಈ ವಾರ ನಿಮ್ಮ ಕಾರ್ಯಗಳಲ್ಲಿ ಉತ್ಸಾಹವಿದ್ದರೂ ಹಿತಶತ್ರುಗಳು ನಿಮ್ಮ ಕಾರ್ಯವನ್ನು ಕಾಳು ಮಾಡಿಯಾರು. ಅಧಿಕಾರಿ ವರ್ಗದಿಂದ ನಿಮ್ಮ ಮೇಲೆ ಒತ್ತಡವು ಬರಬಹುದು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ. ನಷ್ಟದ ಪ್ರಮಾಣವು ಅಧಿಕವಾಗುವುದು. ಮರೆವಿನಿಂದ ನಿಮ್ಮ ವಸ್ತುಗಳು ನಷ್ಟವಾಗಬಹುದು. ಅಪರಿಚಿತರ ವ್ಯವಹಾರವನ್ನು ಕಡಿಮೆ ಮಾಡಿ. ನಿಮ್ಮನ್ನು ನೀವೇ ಬೈದುಕೊಳ್ಳುವ ಸ್ಥಿತಿ ಬರಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ದೈನಂದಿನ ವ್ಯಾಪಾರಿಗಳು ಹೆಚ್ಚು ಶ್ರಮಿಸಬೇಕು. ನಿಮ್ಮ ಮನೋವಿಕಾರದಿಂದ ಇತರರಿಗೂ ಕಷ್ಟವಾದೀತು. ದುರ್ಗಾಸ್ತೋತ್ರವನ್ನು ಮಾಡಿ.
ಸಿಂಹ ರಾಶಿ:
ಕೊನೆಯ ವಾರ ನೀವು ಗೊತ್ತಿಲ್ಲ, ಅನುಭವವಿಲ್ಲದ ಕೆಲಸಗಳನ್ನು ಮಾಡಲು ಹೋಗಬೇಕಾಗುವುದು. ಇದರಿಂದ ನಿಮಗೆ ಆತಂಕವು ಉಂಟಾಗಬಹುದು. ಕೆಲವನ್ನು ಅನುಭವಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು. ಸಮಯಕ್ಕಾಗಿ ನೀವು ಕಾಯುವುದು ಅನಿವಾರ್ಯವಾದೀತು. ನಿಮ್ಮ ಸಹಕಾರದ ಗುಣವು ಎಲ್ಲರಿಗೂ ಮೆಚ್ಚುಗೆಯಾದೀತು. ಸ್ವಯಂಕೃತ ಅಪರಾಧದಿಂದ ನಿಮಗೆ ಕಿಂಚಿತ್ತೂ ಬೇಸರವಾಗದು. ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು. ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಚಿತ್ರಣವನ್ನು ಬದಲಿಸುವಿರಿ. ಹಣವು ಒಮ್ಮೆ ಕೈಗೆ ಬಂದರೆ, ಸಾಹಸ ಕಾರ್ಯಗಳಿಗೆ ವಿಯೋಗ. ಶಿವಕಾರುಣ್ಯಕ್ಕೆ ಪಾತ್ರರಾಗಿ.
ಕನ್ಯಾ ರಾಶಿ:
ರಾಶಿಯ ಅಧಿಪತಿ ಚತುರ್ಥದಲ್ಲಿ ಇರುವ ಕಾರಣ ಇಷ್ಟವಿಲ್ಲದಿದ್ದರೂ ಜವಾಬ್ದಾರಿಯನ್ನು ನಿರ್ವಹಿಸಬೇಕಾದೀತು. ನಿಮ್ಮ ಮಾತುಗಳನ್ನು ಉಳಿಸಿಕೊಳ್ಳಲು ಶ್ರಮದ ಅಗತ್ಯವಿದೆ. ತಾಯಿಯಿಂದ ಆರ್ಥಿಕ ಸಹಾಯವನ್ನೂ ಸಿಗಲಿದ್ದು ತೃಪ್ತಿದಾಯಕವಾಗಲಿದೆ. ಈ ವಾರ ನೀವು ವಾಹನವನ್ನು ಖರೀದಿಸುವ ಯೋಜನೆಯನ್ನು ಮುಂದೂಡುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆಯನ್ನು ನಿಯಂತ್ರಿಸುವಿರಿ. ನಿಮ್ಮ ಮಾತಿಗೆ ಆಕ್ಷೇಪಗಳು ಬರಬಹುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಎಲ್ಲ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮನಸ್ಸಿನ ನಕಾರಾತ್ಮಕ ಭಾವನೆಗಳು ನಿಮ್ಮನ್ನು ಮಾನಸಿಕವಾಗಿ ವಿಚಲಿತಗೊಳಿಸುವುದು. ದಾನದಿಂದ ವಿಘ್ನ ದೂರ.
ತುಲಾ ರಾಶಿ:
ಶುಕ್ರನು ತೃತೀಯದಲ್ಲಿ ಇದ್ದು ಹಣಕಾಸಿನ ಕ್ರಮಬದ್ದ ಹೂಡಿಕೆ ಮತ್ತು ಖರ್ಚುಗಳ ಬಗ್ಗೆ ಸಂಗಾತಿಯ ಜೊತೆ ಚಿಂತನೆ ನಡೆಸುವಿರಿ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಅನಿರೀಕ್ಷಿತ ಪ್ರಶಂಸೆ ಹಾಗು ಗೌರವಗಳು ಸಿಗಲಿವೆ. ಆಲಸ್ಯದಿಂದ ಹೊರಬರುವ ಮನಸ್ಸಾಹುವುದು. ಭಾವನಾತ್ಮಕ ಚಿಂತನೆಗಳು ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮವನ್ನು ನೀಡಬಹುದು. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಆಕ್ಷೇಪಗಳು ಎಲ್ಲವು ಮುರಿದು ಬೀಳಬಹುದು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಈ ವಾರ ನಿಮ್ಮ ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ನಿಮಗೆ ಸಾಮಾಜಿಕವಾಗಿ ಗೌರವವನ್ನು ಪಡೆಯುವಿರಿ. ಭೋಜನದಿಂದ ಸಂತೃಪ್ತಿಪಡಿಸಿ.
ವೃಶ್ಚಿಕ ರಾಶಿ:
ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ನಿಮ್ಮ ಯೋಜನೆಯ ಮುಖ್ಯ ಕೆಲಸಗಳು ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ನಿರಾಳವೆನಿಸಬಹುದು. ಪರಸ್ಥಳ ವಾಸದಿಂದ ನಿಮಗೆ ಕಸಿವಿಸಿಯಾಗುವ ಸಾಧ್ಯತೆ ಇದೆ. ಮನೆಯ ಹಿರಿಯರ ಮಾತುಗಳು ನಿಮ್ಮನ್ನು ಕಾಡಬಹುದು. ದುಃಸ್ವಪ್ನಗಳಿಂದ ನಿಮ್ಮ ಮನಸ್ಸು ವಿಕಾರವಾಗುವುದು. ಈ ವಾರ ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡಬಹುದು. ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳುಮಾಡುವರು. ಎಂದೋ ಮಾಡಿದ ಕಾರ್ಯಕ್ಕೆ ಪಶ್ಚಾತ್ತಾಪಪಡಬೇಕಾದೀತು. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಇರುವುದು. ಈ ಕಾರಣದಿಂದಾಗಿ ಜನರಿಂದ ಟೀಕೆ ಬರುವುದು. ನೀವು ವಾಸ್ತವಕ್ಕಿಂತ ಕಾಲ್ಪನಿಕತೆಯಲ್ಲಿ ಹೆಚ್ಚು ಇರುತ್ತೀರಿ. ಸುಬ್ರಹ್ಮಣ್ಯ ಸ್ತೋತ್ರವನ್ನು ಬಿಡುವುದು ಬೇಡ.
ಧನು ರಾಶಿ:
ಗುರುವಿನ ಆಧಿಪತ್ಯವಿರುವ ಕಾರಣ ಕಾರ್ಯದ ಒತ್ತಡವು ನಿಮಗೆ ಏನು ಮಾಡಬೇಕೆಂದು ತೋಚದೇ ಇದ್ದರೂ ಹೋದಂತೆ ದಾರಿ ತೆರಯುತ್ತ ಹೋಗುವುದು. ಆಪ್ತರ ಮಾತಿನಿಂದ ನೀವು ದುಃಖಪಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚನ್ನು ನೀವು ಮಾಡಬೇಕಾಗಯವುದು. ಅನಾರೋಗ್ಯದಿಂದ ಇದ್ದರೂ ನಿಮ್ಮ ಕರ್ತವ್ಯವನ್ನು ಮಾಡುವಿರಿ. ಉದ್ಯೋಗದಲ್ಲಿ ಒತ್ತಡಗಳು ಇರುವುದುರಿಂದ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ವಾರದಲ್ಲಿ ಅನ್ಯರನ್ನು ನೋಡಿ ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಅಸಭ್ಯ ಮಾತುಗಳು ಕೆಲವರಿಂದ ಕೇಳಿಬರಬಹುದು. ಗುರುಸೇವೆಗೆ ನಿಮ್ಮ ಸ್ವಲ್ಪ ಸಮಯವನ್ನು ಮೀಸಲಿಡಿ.
ಮಕರ ರಾಶಿ:
ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ತುರ್ತು ಹಣಕಾಸಿನ ಸಮಸ್ಯೆಯು ಎದುರಾದ ಸ್ನೇಹಿತರಿಂದ ಸಂಪತ್ತನ್ನು ಪಡೆದುಕೊಳ್ಳುವಿರಿ. ನ್ಯಾಯಾಲಯದಲ್ಲಿ ನಿಮಗೆ ಜಯ ಸಿಗುವ ಸಂಭವವು ಅಸಾಧ್ಯ. ವ್ಯಾಪಾರದಲ್ಲಿ ಹಿನ್ನಡೆಯನ್ನು ಪಡೆಯಬೇಕಾಗುವುದು. ವಿದ್ಯಾಭ್ಯಾಸದ ಗಮನವು ಬೇರೆ ಕಡೆಗೆ ಹೋಗಬಹುದು. ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು. ದೈವದ ಭೀತಿಯಿಂದ ಭಕ್ತಿ ಹೆಚ್ಚಾಗಲಿದೆ. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣವಾಗಲಿದೆ. ದುಃಸ್ವಪ್ನಗಳು ಬೀಳಬಹುದು. ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ವ್ಯವಹಾರದಲ್ಲಿ, ಮಾತುಗಳು ಹೆಚ್ಚು ತೀವ್ರವಾಗಿರಲಿದ್ದು, ಅದರ ಸರಿಯಾದ ಪ್ರಯೋಜನ ವಿಳಂಬದಿಂದ ಬರುವುದು. ಶಿವಕವಚವನ್ನು ಪಾರಾಯಣ ಮಾಡಿ.
ಕುಂಭ ರಾಶಿ:
ಕೊನೆಯ ವಾರದಲ್ಲಿ ನಿಮಗೆ ವಸ್ತ್ರ ಮತ್ತು ಅಗತ್ಯ ವಸ್ತುಗಳ ವ್ಯಾಪಾರಿಗಳಿಗೆ ಸಂತಸವಿರುವುದು. ಹೆಚ್ಚು ಖರೀದಿಯ ಆರ್ಡರ್ ಗಳು ಬರಲಿದೆ. ದೈನಂದಿನ ಕೆಲಸದಲ್ಲಿ ಬದಲಾವಣೆಯನ್ನು ನೀವು ಅಪೇಕ್ಷಿಸುವಿರಿ. ಕಾರ್ಯ ಕ್ಷೇತ್ರದಲ್ಲಿ ಒತ್ತಡವಿರುವ ಕಾರಣ ಮನಸ್ಸಿಗೆ ಸಿಗಬೇಕಾದ ಶಾಂತಿಯ ಕೊರೆತೆಯೂ ಇರಲಿದೆ. ಮಾತಿನ ಕಾರಣದಿಂದ ಈ ವಾರ ದಾಂಪತ್ಯದಲ್ಲಿ ನಿರಾಸಕ್ತಿ ಉಂಟಾಗಬಹುದು. ಪಾಲುದಾರಿಕೆಯಲ್ಲಿ ಸಮಸ್ಯೆ ಕಾಣಿಸುವುದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಿಸಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ಹರಿಹರಸುತನಿಗೆ ಶರಣಾಗುವ ಕಾಲ.
ಮೀನ ರಾಶಿ:
ಈ ವಾರ ನಿಮಗೆ ಯಂತ್ರೋಪಕರಣಗಳ ಮಾರಾಟದಿಂದ ಹೆಚ್ಚಿನ ಲಾಭವನ್ನು ನೀವು ಕಾಣಬಹುದು. ನಿಮ್ಮದೇ ಸ್ಥಿರಾಸ್ತಿ ವ್ಯವಹಾರದಲ್ಲಿ ನಿಮಗೆ ಅನುಕೂಲವಾಗುವಂತೆ ಆಗುವುದು. ಮಾನಸಿಕ ನೆಮ್ಮದಿಯು ನಿಮ್ಮ ಹಲವು ಕೆಲಸಗಳನ್ನು ಮಾಡಲು ಸಹಾಯಕವಾಗುವುದು. ವಾಹನದ ತೊಂದರೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗುವುದು. ಮರಣ ಭಯವು ಕಾಡಬಹುದು. ತೆಗಳಿಕೆಯನ್ನು ಛಲವಾಗಿ ತೆಗೆದುಕೊಳ್ಳುವಿರಿ. ಯಾರ ಮೇಲೂ ಅವಮಾನ ಬೇಡ. ಈ ವಾರ ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು. ಹಿಂದಿನ ತಪ್ಪುಗಳು ಪಾಠವಾಗುವುದು. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗದು. ತಂದೆಯ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಕೆಲವು ವಿಷಯಗಳ ಬಗ್ಗೆ ಮನೆಯ ಹಿರಿಯರಿಂದ ಮಾರ್ಗದರ್ಶನ. ತಿಲದಾನವನ್ನು ಮಾಡಿ, ಕಷ್ಟಪರಿಹಾರದ ಸಂಕಲ್ಪದಿಂದ ಭಾರತೀಯ ಗೋವುಗಳಿಗೆ ಗೋಗ್ರಾಸ ನೀಡಿ.
ಚಿತ್ರದುರ್ಗ, ಡಿಸೆಂಬರ್ 28: ಮೊದಲ ಪೋಕ್ಸೋ ಪ್ರಕರಣ ಸಂಬಂಧ ಡಾ. ಶಿವಮೂರ್ತಿಮುರುಘಾ ಶರಣರಿಗೆ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಬಿಗ್ ರಿಲೀಫ್ ನೀಡಿರುವ ನಡುವೆ ಅವರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಮಠದ ಆಡಳಿತದಲ್ಲಿ ಮುರುಘಾ ಶರಣರ ಹಸ್ತಕ್ಷೇಪಕ್ಕೆ ನ್ಯಾಯಾಲಯದ ನಿರ್ಬಂಧದ ನಡುವೆ ಮಠದ ಆಸ್ತಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
‘ನಾಲ್ಕು ನಿವೇಶನ ಮಾರಾಟ’
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿರುವ 2 ಕೋಟಿ ರೂ. ಮೌಲ್ಯದ ಒಟ್ಟು ನಾಲ್ಕು ನಿವೇಶನಗಳನ್ನು ಮಂಜುನಾಥ್ ಎಂಬುವರಿಗೆ ಸ್ಪೇಷಲ್ ಜಿಪಿಎ ನೀಡಿ ಮಾರಾಟ ಮಾಡಲಾಗಿದೆ. ಈ ಬಗ್ಗೆ ಪ್ರಕಾಶ್ ಎಂಬುವರು ಮಠದ ಆಡಳಿತ ಸಮಿತಿ ಅಧ್ಯಕ್ಷ ಶಿವಯೋಗಿ ಕಳಸದ್ಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಶಿವಯೋಗಿ ಅವರು, ಕಾನೂನು ತಜ್ಞರಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದಾಖಲಾಗಿದ್ದ ಮೊದಲ ಪೋಕ್ಸೋ ಕೇಸ್ ಸಂಬಂಧ ಮುರುಘಾ ಶ್ರೀ ನಿರ್ದೋಷಿ ಎಂದು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಹೇಳಿತ್ತು. ಮಠದ ಹಾಸ್ಟೆಲ್ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ದೂರು ನೀಡಿದ್ದರು. ಆಗಸ್ಟ್ 27ರಂದು ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. 2022ರ ಸೆಪ್ಟಂಬರ್ 1ರಂದು ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿಯನ್ನ ಪೊಲೀಸರು ಬಂಧಿಸಿದ್ದರು. ಚಾರ್ಜ್ಶೀಟ್ ವೇಳೆ ಎ3 ಬಸವಾದಿತ್ಯ, ಎ5 ವಕೀಲ ಗಂಗಾಧರಯ್ಯ ಅವರನ್ನು ಕೈಬಿಡಲಾಗಿತ್ತು. ಪ್ರಕರದ ವಿಚಾರಣೆ ನಡೆಸಿ ನ್ಯಾಯಾಲಯ ಮುರುಘಾ ಶರಣರ ಜೊತೆ 2ನೇ ಆರೋಪಿ ರಶ್ಮಿ, 4ನೇ ಆರೋಪಿ ಪರಮಶಿವಯ್ಯ ಕೂಡ ನಿರ್ದೋಷಿ ಎಂದು ಇತ್ತೀಚೆಗೆ ತೀರ್ಪು ಪ್ರಕಟಿಸಿತ್ತು.
ಬೆಂಗಳೂರು, ಡಿಸೆಂಬರ್ 28: ಕರ್ನಾಟಕದಲ್ಲಿ ಕುರ್ಚಿ ಕದನ ಮುಂದುವರೆದಿದ್ದು, ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಈ ವಿಚಾರವಾಗಿ ಹೈಕಮಾಂಡ್ ನಿರ್ಧಾರದ ನಿರೀಕ್ಷೆಯಿತ್ತು. ಆದರೆ ಮುಖ್ಯಮಂತ್ರಿ ಪಟ್ಟ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದು ಇದಕ್ಕೆ ಕಾರಣವಾಗಿದೆ. ವಿಪಕ್ಷ ನಾಯಕ ಜನವರಿ 8ರಂದು ದೆಹಲಿಗೆ ಮರಳಲಿದ್ದು, ಅವರ ವಾಪಸಾತಿಯ ನಂತರವೇ ಹೈಕಮಾಂಡ್ ನಾಯಕರ ಜೊತೆಗೆ ಪ್ರತ್ಯೇಕ ಸಭೆ ನಡೆಯುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಇತ್ತ ಕೈ ಶಾಸಕರು ಮಂತ್ರಿ ಪಟ್ಟಕ್ಕೆ ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಆದರೆ ಇದರ ನಿರ್ಧಾರವು ರಾಹುಲ ಗಾಂಧಿ ಬಂದ ಬಳಿಕವೇ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ದೆಹಲಿಗೆ ತೆರಳಿ CWC ಸಭೆಯಲ್ಲಿ ಭಾಗವಹಿಸಿದ್ದರು.ಈ ವೇಳೆ ರಾಜ್ಯದ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
ಎಲ್ಲ ಕಡೆಯಿಂದಲೂ ಸಂತೋಷ ತರುವಂಥ ಸುದ್ದಿ ಬರಲಿದೆ. ಹೊಸದಾಗಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಇಂಟರ್ ವ್ಯೂ ಬರಬಹುದು, ಹಾಗೆ ಬಂದಂಥ ಇಂಟರ್ ವ್ಯೂದಲ್ಲಿ ಯಶಸ್ಸು, ಅಂದುಕೊಂಡಂಥ ಸಂಬಳ, ಸ್ಥಾನ ಹೀಗೆ ಎಲ್ಲವೂ ಸಿಗಲಿದೆ. ನೀವು ಮಾಡಬೇಕಾದದ್ದೆಲ್ಲ ಇಷ್ಟೆ; ಗುರುವಾರದ ದಿನ ಸಾಯಿಬಾಬ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆಯಿರಿ. ಅಲ್ಲಿ ನಿಮಗೆ ಮಾಡಿಸಬೇಕು ಎಂದೆನಿಸುವ ಸೇವೆಯೊಂದನ್ನು ಮಾಡಿಸುವುದರಿಂದ ಒಳಿತಾಗಲಿದೆ. ಗೃಹಾಲಂಕಾರ ವಸ್ತುಗಳು, ಫ್ಯಾನ್, ಗೀಸರ್, ಏಸಿ, ಸ್ಟೌ ಹೇಗೆ ಹಲವು ವಸ್ತುಗಳನ್ನು ಖರೀದಿಸುವ ಯೋಗ ಈ ವಾರ ನಿಮ್ಮ ಪಾಲಿಗೆ ಇದೆ. ಉದ್ಯೋಗ ಸ್ಥಳದಲ್ಲಿ ಇತರರಿಂದ ಬಗೆಹರಿಸುವುದಕ್ಕೆ ಸಾಧ್ಯವಾಗದಿದ್ದ ಸಮಸ್ಯೆಯೊಂದನ್ನು ನೀವು ಬಗೆಹರಿಸಲಿದ್ದೀರಿ. ಇದರಿಂದ ನಿಮ್ಮ ಕೀರ್ತಿ- ಪ್ರತಿಷ್ಠೆಗಳು ಹೆಚ್ಚಲಿವೆ.
ಕೃಷಿಕರು:
ದೇವಸ್ಥಾನಕ್ಕೆ ಅಂತಲೋ ಶಾಲೆಗೆ ಅಂತಲೋ ಅಥವಾ ಊರ ಜನರು ಓಡಾಡಲಿಕ್ಕೆ ಅಂತಲೋ ತಮ್ಮ ಜಾಗವನ್ನು ಬಿಟ್ಟುಕೊಡುವುದಕ್ಕೆ ತೀರ್ಮಾನಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಕುಟುಂಬದ ಎಲ್ಲರನ್ನೂ ಒಪ್ಪಿಸುವುದಕ್ಕೆ ನೀವು ಯಶಸ್ವಿ ಆಗಲಿದ್ದೀರಿ. ನಿಮ್ಮ ಬಳಿಯಿರುವ ಅಥವಾ ನೀವು ಬೆಳೆದಿರುವ ಕೃಷಿ ಉತ್ಪನ್ನಕ್ಕೆ ಉತ್ತಮ ಬೆಲೆ ದೊರೆಯಲಿದೆ. ಅದಕ್ಕೆ ಬೇಡಿಕೆ ಹೆಚ್ಚಳ ಆಗಲಿದೆ. ನೀವು ಅಂದುಕೊಂಡೇ ಇರದೆ ಆದಾಯವು ಹೆಚ್ಚಳ ಆಗುವ ಯೋಗ ಇದೆ. ಪ್ರಭಾವಿಗಳ ಸಂಪರ್ಕ ದೊರೆತು, ರಾಜಕೀಯದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು
ವೃತ್ತಿನಿರತರು:
ಪದೋನ್ನತಿ ದೊರೆಯುವಂಥ ಅವಧಿ ಇದಾಗಿರುತ್ತದೆ. ನಿಮ್ಮದೇ ವೃತ್ತಿಯ ಸಂಘ- ಸಂಸ್ಥೆಗಳಲ್ಲಿ ಯಾವುದಾದರೂ ಮುಖ್ಯ ಹಾಗೂ ಪ್ರಭಾವಿ ಹುದ್ದೆಗೆ ನಿಮ್ಮ ಹೆಸರನ್ನು ಸೂಚಿಸಲಿದ್ದಾರೆ. ಇನ್ನು ತಾತ್ಕಾಲಿಕವಾಗಿ ಅಥವಾ ಪ್ರಭಾರಿಯಾಗಿ ಅಂತ ನೇಮಕ ಮಾಡಿದ್ದು ಕಾಯಂ ಆಗುವ ಅವಕಾಶಗಳು ಹೆಚ್ಚಿವೆ. ಸ್ವಂತ ಕಚೇರಿಗಾಗಿ ಸ್ಥಳ ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ.
ವಿದ್ಯಾರ್ಥಿಗಳು:
ಮಾನಸಿಕ ಖಿನ್ನತೆ ಕಾಡಬಹುದು. ಅದಕ್ಕೆ ಮುಖ್ಯ ಕಾರಣ ಏನೆಂದರೆ, ನಿಮ್ಮ ಮೇಲೆ ನಿಮಗೇ ಇರುವ ನಿರೀಕ್ಷೆಯು ಭಾರವಾಗಿ ಪರಿಣಮಿಸಬಹುದು. ಇತರರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ. ಮೌನವಾಗಿದ್ದರೆ ನೆಮ್ಮದಿ ಇರುತ್ತದೆ. ಆದರೆ ಹಾಗಿರುವುದಕ್ಕೆ ಮಾನಸಿಕ ನಿಯಂತ್ರಣ ತುಂಬ ಮುಖ್ಯವಾಗುತ್ತದೆ. ಸಾಧ್ಯವಾದಲ್ಲಿ ದಿನಕ್ಕೆ ಹತ್ತು ನಿಮಿಷ ಧ್ಯಾನವನ್ನು ಮಾಡಿ.
ಮಹಿಳೆಯರು:
ಸರ್ಕಾರಿ ಕೆಲಸಗಳಲ್ಲಿ ಇದ್ದಲ್ಲಿ ಹೆಚ್ಚುವರಿ ಜವಾಬ್ದಾರಿ ಹೆಗಲೇರಲಿದೆ. ಒಂದು ವೇಳೆ ವರ್ಗಾವಣೆಗೆ ಪ್ರಯತ್ನ ಪಡುತ್ತಿದ್ದಲ್ಲಿ ನಿಮಗೆ ಬೇಕಾದಂಥ ಸ್ಥಳಕ್ಕೆ ವರ್ಗಾ ಆಗಲಿದೆ. ಮಕ್ಕಳ ಶೈಕ್ಷಣಿಕ ಸಾಧನೆಯು ಹೆಮ್ಮೆಯನ್ನು ಮೂಡಿಸುತ್ತದೆ. ಹಲ್ಲಿನ ವಸಡಿಗೆ ಸಂಬಂಧಿಸಿದಂತೆ ಕೆಲವು ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಅಥವಾ ಈಗಾಗಲೇ ಇದೆ ಎಂದಾದಲ್ಲಿ ಸೂಕ್ತ ವೈದ್ಯೋಪಚಾರವನ್ನು ಪಡೆದುಕೊಳ್ಳುವುದು ಉತ್ತಮ.
ಸಂಗಾತಿಯ ವರ್ತನೆ ಮುಜುಗರ, ಬೇಸರ ಹಾಗೂ ಆತಂಕವನ್ನು ಮೂಡಿಸಲಿದೆ. ತಂದೆ- ತಾಯಿಗಳ ಜತೆಗೆ ಮನಸ್ತಾಪ ಮೂಡಲಿದ್ದು, ಈ ಹಿಂದೆ ನೀವು ತೆಗೆದುಕೊಂಡ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ತೀರ್ಮಾನಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಲಿದೆ. ನಿಮ್ಮ ಕಡೆಯಿಂದ ಯಾವ ಉದ್ದೇಶ ಇಟ್ಟುಕೊಂಡು ಆ ನಿರ್ಧಾರ ಕೈಗೊಂಡಿರಿ ಎಂಬುದನ್ನು ಹೇಳುವುದಕ್ಕೆ ಸಹ ಅವಕಾಶ ಇಲ್ಲದಂತಾಗುತ್ತದೆ. ಇನ್ನು ಇದೇ ವೇಳೆ ಇಷ್ಟು ಕಾಲ ಉಳಿಸಿಕೊಂಡು ಬಂದಿದ್ದ ವರ್ಚಸ್ಸು, ಹೆಸರಿಗೆ ಕಳಂಕ ತರುವಂತೆ ಕೆಲವರು ನಿಮ್ಮ ವಿರುದ್ಧ ಅಪಪ್ರಚಾರ ಮಾಡಲಿದ್ದಾರೆ. ಮಾನಸಿಕವಾಗಿ ಇದರಿಂದ ಕುಗ್ಗಲಿದ್ದೀರಿ. ನಿಮ್ಮಲ್ಲಿ ಯಾರು ಈಗಾಗಲೇ ಅನಾರೋಗ್ಯದ ಕಾರಣಕ್ಕೆ ಮಾತ್ರೆ- ಔಷಧದಂಥದ್ದನ್ನು ತೆಗೆದುಕೊಳ್ಳುತ್ತಿದ್ದೀರೋ ಅಂಥವರಿಗೆ ಅಲರ್ಜಿ ಆಗಬಹುದು. ಮುಖ ಊದಿಕೊಳ್ಳುವುದು, ದದ್ದು ಏಳುವುದು, ಚರ್ಮದ ಮೇಲೆ ಮರಿಮರಿಯಂತೆ ಏಳುವುದು ಇಂಥದ್ದು ಆಗಬಹುದು.
ಕೃಷಿಕರು:
ಯಂತ್ರೋಪಕರಣದ ಖರೀದಿ ಮಾಡಬಹುದು. ಅದೇ ವೇಳೆ ಟ್ರಾಕ್ಟರ್, ಟಿಲ್ಲರ್, ಅಡಿಕೆ ಸುಲಿಯುವ ಯಂತ್ರ ಇಂಥವುಗಳು ಹಳೆಯದಾಗಿದ್ದಲ್ಲಿ ಅದನ್ನು ವಿನಿಮಯ ಮಾಡಿಸಿ, ಹೊಸದನ್ನು ಖರೀದಿಸುವುದಕ್ಕೆ ಮನಸ್ಸು ಮಾಡಲಿದ್ದೀರಿ. ಕುಟುಂಬದಲ್ಲಿ ದೇವತಾ ಕಾರ್ಯಗಳನ್ನು ಆಯೋಜಿಸುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ನಿಮಗೆ ಬರಬೇಕಾದ ಬಾಕಿ ಹಣದ ವಸೂಲಿಗೆ ಹೆಚ್ಚಿನ ಶ್ರಮವನ್ನು ಹಾಕಲಿದ್ದೀರಿ.
ವೃತ್ತಿನಿರತರು:
ಉತ್ಸಾಹವೇ ಇಳಿದುಹೋಗುವಂತಹ ಕೆಲವು ಬದಲಾವಣೆಗಳು ಆಗಲಿವೆ. ನೀವು ರೂಪಿಸಿದ ಯೋಜನೆ, ಕಾರ್ಯತಂತ್ರ, ಲೆಕ್ಕಾಚಾರಗಳನ್ನು ಜೊತೆಯಲ್ಲಿಯೇ ಕೆಲಸ ಮಾಡುವ ವ್ಯಕ್ತಿಯೊಬ್ಬರು ಪ್ರತಿಸ್ಪರ್ಧಿಗಳಿಗೆ ಸೋರಿಕೆ ಮಾಡುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಕೆಲವು ವ್ಯಾವಹಾರಿಕ ಒಪ್ಪಂದಗಳು ಕೊನೆಗೊಂಡು, ಆದಾಯದಲ್ಲಿ ಇಳಿಕೆ ಆಗುವುದರಿಂದ ಒತ್ತಡ ಸೃಷ್ಟಿಯಾಗಲಿದೆ. ರಿಟೈರ್ ಮೆಂಟ್ ಗಾಗಿ ಎಂದು ಹೂಡಿಕೆ ಮಾಡುತ್ತಾ ಬಂದಿದ್ದ ಹಣವನ್ನು ತೆಗೆಯಬೇಕಾದ ಸನ್ನಿವೇಶ ಎದುರಾಗಬಹುದು.
ವಿದ್ಯಾರ್ಥಿಗಳು:
ಅಂಗೈ ತೋರಿಸಿ ಅವಲಕ್ಷಣವಾಯಿತು ಎಂಬಂಥ ಅನುಭವ ಆಗಲಿದೆ. ನೆರವು ನೀಡಬಹುದು ಎಂದುಕೊಂಡು, ಒಬ್ಬ ವ್ಯಕ್ತಿಯ ಬಳಿ ಕೇಳಿದರೆ ಅವರು ಸಹಾಯ ಮಾಡದಿದ್ದರೆ ಪರವಾಗಿಲ್ಲ, ಆದರೆ ನಿಮ್ಮ ಸಾಮರ್ಥ್ಯವನ್ನು ಹೀಗಳೆದು, ಮೂದಲಿಸಿ, ಅವಮಾನ ಮಾಡಬಹುದು. ಇದು ನಿಮಗೆ ಮರೆಯಲಾಗದಂಥ ಗಾಯ ಮಾಡಬಹುದು ಹಾಗೂ ಇದೇ ವೇಳೆ ಇನ್ಯಾವತ್ತೂ ಯಾರ ಬಳಿಯೂ ಸಹಾಯ ಕೇಳಬಾರದು ಎನಿಸಲಿದೆ.
ಮಹಿಳೆಯರು:
ಬೇರೆ ಯಾರೋ ಮಾಡಿದ ತಪ್ಪಿಗೆ ನಿಮಗೆ ಅವಮಾನವನ್ನು ಮಾಡಲಿದ್ದಾರೆ. ಎಷ್ಟು ಸಮರ್ಥನೆ ಮಾಡಿಕೊಂಡರೂ ಸಾಕ್ಷ್ಯಾಧಾರದ ಸಹಿತವಾಗಿ ಸಾಬೀತು ಮಾಡಿದರೂ ನೀವು ಏನು ಹೇಳಬೇಕು ಅಂದುಕೊಂಡಿರುತ್ತೀರೋ ಅದನ್ನು ಕೇಳಿಸಿಕೊಳ್ಳುವುದಕ್ಕೆ ನಿಮ್ಮ ಎದುರಿಗೆ ಇರುವವರು ಸಿದ್ಧರಿರುವುದಿಲ್ಲ. ಯಾವುದೇ ಕೆಲಸದಲ್ಲಿ ಆಸಕ್ತಿ ಕುದುರದೆ ಕೆಲವು ತಪ್ಪು- ಅವಘಡಗಳು ಸಹ ಸಂಭವಿಸಬಹುದು, ಎಚ್ಚರದಿಂದ ಇರಿ.
ಸಂಭಾವಿತರಾಗಿ ಇರುವುದು ಬೇರೆ, ಸಂಭಾವಿತರಂತೆ ನಟಿಸುವುದು ಬೇರೆ. ಈ ವಾರ ನೀವು ಸ್ವಭಾವತಃ ಏನಾಗಿದ್ದೀರೋ ಅದೇ ಆಗಿದ್ದಲ್ಲಿ ಒಳ್ಳೆಯದು. ಒಂದು ವೇಳೆ ಎದುರಿಗೆ ಇರುವವರನ್ನು ಮೆಚ್ಚಿಸಬೇಕು ಎಂದೇನಾದರೂ ನಟನೆ ಮಾಡಿದಿರೋ ಅವಮಾನಕ್ಕೆ ಗುರಿ ಆಗಬೇಕಾಗುತ್ತದೆ. ಊಟ- ತಿಂಡಿ ವಿಚಾರದಲ್ಲಿ ಆಹಾರ ಪಥ್ಯವನ್ನು ಪಾಲಿಸುವುದಕ್ಕೆ ಪ್ರಯತ್ನಿಸಿ. ಬಾಯಿ ರುಚಿಗೆ ಬಿದ್ದು, ನಿಮ್ಮ ದೇಹಕ್ಕೆ ಒಗ್ಗದ ಆಹಾರ ಪದಾರ್ಥಗಳನ್ನು ಸೇವಿಸಿದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯವಸ್ಥೆಯ ಬಗ್ಗೆಯೋ ವ್ಯಕ್ತಿಯ ಬಗ್ಗೆಯೋ ಸಿಟ್ಟು ಬಂದಲ್ಲಿ ಅದನ್ನು ಆ ತಕ್ಷಣವೇ ಹೊರಗೆ ಹಾಕಿಬಿಡಬೇಕು ಎಂಬ ಆತುರ ಅಥವಾ ಚಡಪಡಿಕೆ ಬೇಡ. ಏಕೆಂದರೆ ನಿಮ್ಮ ಆಲೋಚನಾ ವಿಧಾನದಲ್ಲಿಯೇ ತಪ್ಪುಗಳಿರುವ ಅವಕಾಶಗಳು ಇರುತ್ತವೆ. ಆದ್ದರಿಂದ ಒಟ್ಟಾರೆಯಾಗಿ ನಿಮ್ಮ ಸಿಟ್ಟಿಗೆ ಕಾರಣ ಆದ ಅಂಶ ಯಾವುದು ಹಾಗೂ ಅದು ನಿಜವಾಗಿಯೂ ಆ ವ್ಯವಸ್ಥೆಯ ಅಥವಾ ವ್ಯಕ್ತಿಯ ತಪ್ಪಾಗಿದೆಯಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡಿ.
ಕೃಷಿಕರು:
ನಿಮ್ಮ ಬಳಿ ಇರುವಂಥ ಭೂಮಿಗೆ ದಿಢೀರನೆ ಬೆಲೆ ಬಂದಿದೆ ಎಂಬ ಸಂಗತಿಯನ್ನು ಗೆಳೆಯರೋ ಅಥವಾ ಕುಟುಂಬ ಸದಸ್ಯರೋ ಹೀಗೆ ಯಾರಾದರೊಬ್ಬರು ಕಿವಿಗೆ ಹಾಕಲಿದ್ದಾರೆ. ಅಥವಾ ನೀವಾಗಿಯೇ ತೆರಳಿದ ಕಚೇರಿಯೊಂದರಲ್ಲಿಯೋ ಸಂಸ್ಥೆಯಲ್ಲಿಯೋ ತಿಳಿದುಬರಲಿದೆ. ಒಂದು ವೇಳೆ ನಿಮ್ಮ ಜಮೀನಿಗೆ ಒಳ್ಳೆ ಬೆಲೆಯೇ ಬಂದಿದೆ ಎಂದುಕೊಂಡು, ಮಾರಾಟ ಮಾಡುತ್ತೇನೆ ಎಂದು ನಿಮಗೆ ನೀವೇ ಹೇಳಿಕೊಂಡರೂ ಮಾರಾಟ ಆಗಿಬಿಡುವ ಸಾಧ್ಯತೆಗಳು ಹೆಚ್ಚಿವೆ.
ವೃತ್ತಿನಿರತರು:
ಇತರರ ಕೆಲಸ- ಕಾರ್ಯಗಳನ್ನು ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದಾರೆ. ಒಂದೇ ಕೆಲಸವನ್ನು ಇಬ್ಬರಿಗೆ ಮಾಡುವುದಕ್ಕೆ ಹೇಳಿ, ನಿಮ್ಮದೇ ಮರೆವಿನ ಕಾರಣಕ್ಕೆ ಜೊತೆಯಲ್ಲಿ ಕೆಲಸ ಮಾಡುವವರ ಕಣ್ಣಿನಲ್ಲಿ ಸಣ್ಣವರಾಗಲಿದ್ದೀರಿ. ಆದ್ದರಿಂದ ಯಾರಿಗೆ ಯಾವ ಕೆಲಸ ವಹಿಸಿದ್ದೀರಿ ಎಂಬುದನ್ನು ಒಂದು ಕಡೆ ದಾಖಲಿಸಿಕೊಳ್ಳಿ. ಒಂದು ವೇಳೆ ಆ ವಿಚಾರದಲ್ಲಿ ಅನುಮಾನ ಬಂದರೆ ಸಂಬಂಧಪಟ್ಟವರ ಬಳಿಯೇ ಮಾತನಾಡಿ, ಸಂದೇಹ ಬಗೆಹರಿಸಿಕೊಳ್ಳಿ.
ವಿದ್ಯಾರ್ಥಿಗಳು:
ಭಾರೀ ಮುಜುಗರಕ್ಕೆ ಗುರಿ ಆಗುವ ಸನ್ನಿವೇಶಗಳು ಎದುರಾಗಲಿವೆ. ನಿಮಗೆ ಗೊತ್ತಿರುವ ವಿಚಾರಗಳೇ ಸಮಯಕ್ಕೆ ಸರಿಯಾಗಿ ನೆನಪಿಗೆ ಬಾರದೆ ಹೋಗಲಿದೆ. ಅಥವಾ ನಿಮಗೆ ವಹಿಸಿದ ಜವಾಬ್ದಾರಿಯನ್ನು ಲಕ್ಷ್ಯ ನೀಡಿ ಮಾಡುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಇನ್ನು ಇತರರನ್ನು ನಿಮ್ಮ ಜೊತೆಗೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಿಕೊಳ್ಳಬೇಡಿ.
ಮಹಿಳೆಯರು:
ಮನೆಯಲ್ಲಿನ ವಸ್ತುಗಳನ್ನು ಹುಡುಕುವುದಕ್ಕೆ, ಮನೆ ಸ್ವಚ್ಛ ಮಾಡುವುದಕ್ಕೆ, ಬೇಡಿರುವುದು ಹಾಗು ಬೇಕಿರುವುದು ಎಂದು ವಸ್ತುಗಳನ್ನು ವರ್ಗೀಕರಿಸುವುದಕ್ಕೆ ಹೆಚ್ಚಿನ ಸಮಯ ಹೋಗಲಿದೆ. ನಿಮಗೆ ಸಹಾಯ ಮಾಡುವುದಾಗಿ ಮಾತು ನೀಡಿದವರು ನೆರವು ನೀಡುವುದಕ್ಕೆ ಸಾಧ್ಯವಾಗದೆ, ನಿಮ್ಮ ಒಬ್ಬರ ಮೇಲೇ ಒತ್ತಡ ಹೆಚ್ಚಾಗಲಿದೆ.
ನೀರಸವಾಗಿ ವಾರದ ಶುರುವಿನಲ್ಲಿ ಇದ್ದರೂ ನಿಮಗೆ ಅಂದಾಜು ಕೂಡ ಸಿಗದಂಥ ಎನರ್ಜಿವೊಂದು ನಿಮ್ಮಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಈ ಅವಧಿಯಲ್ಲಿ ನಿಮ್ಮಲ್ಲಿ ಅಂದುಕೊಳ್ಳದೆ ಕೆಲವರು ಹೊಸ ವ್ಯವಹಾರ- ವ್ಯಾಪಾರಗಳನ್ನು ದಿಢೀರನೆ ಶುರು ಮಾಡುವ ಸಾಧ್ಯತೆಗಳಿವೆ. ಇನ್ನೂ ಅಚ್ಚರಿಯ ವಿಷಯ ಏನೆಂದರೆ ಹಣಕಾಸಿನ ಹೊಂದಾಣಿಕೆಗೆ ಸ್ವಲ್ಪ ಪ್ರಯತ್ನ ಮಾಡಿದರೂ ಸಾಕು, ಅದರಲ್ಲಿ ಯಶಸ್ವಿ ಕೂಡ ಆಗಿಬಿಡುತ್ತೀರಿ. ಯಾವ ಕೆಲಸವನ್ನು ಮಾಡುವುದಕ್ಕೆ ಕುಟುಂಬ ಸದಸ್ಯರು ಅಥವಾ ನಿಮ್ಮ ಆಪ್ತರು ತಡೆಯುತ್ತಾ ಬಂದಿರುತ್ತಾರೋ ಅದನ್ನು ಮುಂದುವರಿಸುವುದಕ್ಕೆ ಒಂದು ಮಾತು ಕೂಡ ಅಡ್ಡ ಹೇಳದೆ ಸುಮ್ಮನಾಗಿ ಬಿಡುವ ಸಾಧ್ಯತೆಗಳಿವೆ. ಇನ್ನು ಯಾರು ನಿಮ್ಮದೇ ಹಣ ಒಂದು ಕಡೆ ತಗುಲಿ ಹಾಕಿಕೊಂಡು, ಅದನ್ನು ಅಲ್ಲಿಂದ ಹೊರಗೆ ತೆಗೆದುಕೊಳ್ಳುವುದಕ್ಕೆ ಹರಸಾಹಸ ಮಾಡುತ್ತಿರುವಿರೋ ಅಂಥವರಿಗೆ ಹಣವನ್ನು ತೆಗೆದುಕೊಳ್ಳುವುದು ಸಾಧ್ಯವಾಗಲಿದೆ.
ಕೃಷಿಕರು:
ನಿಮ್ಮ ಗೆಳೆಯರು, ಆಪ್ತರ ಅನಾರೋಗ್ಯ ಸಮಸ್ಯೆಗಳು ಅಥವಾ ಆರ್ಥಿಕ ಸಮಸ್ಯೆಗಳು ಮಾನಸಿಕವಾಗಿ ಚಿಂತೆಗೆ ಗುರಿ ಆಗುವಂತೆ ಮಾಡುತ್ತವೆ. ನಿಮ್ಮ ಮೂಲ ಸ್ವಭಾವ ಏನಿದೆಯೋ ಅದನ್ನೇ ಬದಲಾಯಿಸಿಕೊಂಡು, ಅವರ ಸಲುವಾಗಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೀರಿ. ಇನ್ನು ಇಷ್ಟು ಸಮಯ ಏನು ಬೆಳೆಯುತ್ತಿದ್ದರೋ ಅವೆಲ್ಲವನ್ನು ಬಿಟ್ಟು, ಹೊಸತನ್ನು ಬೆಳೆಯುವ ಕಡೆಗೆ ಮನಸ್ಸು ವಾಲಲಿದೆ. ನಿಮ್ಮಲ್ಲಿ ಕೆಲವರು ಸ್ವಲ್ಪ ಪ್ರಮಾಣದ ಭೂಮಿಯನ್ನು ಗುತ್ತಿಗೆಗೆ ನೀಡುವುದಕ್ಕಾಗಿ ನಿರ್ಧಾರ ಮಾಡಬಹುದು.
ವೃತ್ತಿನಿರತರು:
ಇತ್ತೀಚೆಗೆ ಅಳವಡಿಸಿಕೊಂಡ ಪದ್ಧತಿಗಳು ಅಥವಾ ಕೆಲಸಕ್ಕಾಗಿ ನೇಮಿಸಿಕೊಂಡ ವ್ಯಕ್ತಿಗಳು ಅಥವಾ ಒಂದು ವೇಳೆ ಸೇವಾಶುಲ್ಕದಲ್ಲಿ ಮಾಡಿದ ಬದಲಾವಣೆಗಳು ಹೀಗೆ ಯಾವುದಾದರೂ ಒಂದರಲ್ಲಿ ಅಸಮಾಧಾನ ಮೂಡಲಿದೆ. ಮುಂಚಿನಂತೆಯೇ ನಡೆದುಕೊಂಡು ಹೋಗಲಿ ಎಂದು ಪದೇಪದೇ ಅನಿಸಲಿದೆ. ಈ ಬಗ್ಗೆ ನಿಮ್ಮ ಸಂಗಾತಿ ಅಥವಾ ಬಹಳ ಆಪ್ತ ವಲಯದವರ ಜತೆಗೆ ಚರ್ಚೆ ಕೂಡ ಮಾಡಲಿದ್ದೀರಿ. ಆದರೆ ಅವರು ನೀಡುವ ಸಲಹೆ- ಸೂಚನೆಗಳು ಮನಸ್ಸಿಗೆ ಸಮಾಧಾನ ತರುವುದಿಲ್ಲ.
ವಿದ್ಯಾರ್ಥಿಗಳು:
ಈಗ ಸೇರಿರುವ ಅಥವಾ ಮಾಡುತ್ತಿರುವ ಕೋರ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಮುಖ್ಯವಾಗಿ ಆ ಕೋರ್ಸ್ ಗೆ ಬೇಡಿಕೆ ಇಲ್ಲ ಎಂದು ಹಲವರು ನಿಮ್ಮೆದುರು ಪದೇಪದೇ ಹೇಳುತ್ತಾರೋ ಅಥವಾ ಆ ವಿಷಯದ ಬಗ್ಗೆ ಕಲಿಕೆಯ ಆಸಕ್ತಿಯೇ ಹೋಗಿಬಿಡುತ್ತದೋ ಒಟ್ಟಿನಲ್ಲಿ “ಇದು ನನಗೆ ಬೇಕಾ?” ಎಂಬ ಪ್ರಶ್ನೆ ಒಳಗಿಂದ ಗುದ್ದಿಕೊಂಡು ಬರಲಿದೆ. ಈ ಬಗ್ಗೆ ನಿಮ್ಮ ಪೋಷಕರ ಜತೆಗೆ ಮಾತುಕತೆ ನಡೆಸುವ ಮುಂಚೆ ಸಾವಿರ ಬಾರಿ ಆಲೋಚಿಸುವುದು ಉತ್ತಮ.
ಮಹಿಳೆಯರು:
ಕುಟುಂಬದ ಒಳಗಿನ ಗುಟ್ಟನ್ನು ಎಷ್ಟೇ ಆಪ್ತರಾದವರ ಬಳಿಯೂ ಹೇಳಿಕೊಳ್ಳಬೇಡಿ. ಏಕೆಂದರೆ ಈ ವಾರ ನೀವು ಏನು ಹೇಳಿಕೊಂಡಿರುತ್ತೀರೋ ಅದು ಯಥಾವತ್ತಾಗಿ ಕುಟುಂಬದ ಹಿರಿಯರ ಬಳಿಯೇ ಬರುವ ಸಾಧ್ಯತೆಗಳಿವೆ. ಒಂದರ ಹಿಂದೆ ಒಂದು ಎಂಬಂತೆ ನಿಮ್ಮ ನಿರ್ಧಾರಗಳು ಹಾಗೂ ಸ್ವಭಾವದಲ್ಲಿನ ಬದಲಾವಣೆಗಳು ಕುಟುಂಬಸ್ಥರಲ್ಲಿ ಆತಂಕಕ್ಕೆ ಕಾರಣವಾಗಲಿದೆ.
ನೀವು ವಿಪರೀತ ವಾಚಾಳಿಗಳಾಗಿದ್ದಲ್ಲಿ ಇದು ನಿಮಗೆ ಹೆಚ್ಚು ಅನ್ವಯ ಆಗಲಿದೆ. ಈ ವಾರ ಮಾತಿಗೆ ಬಿಡುವು ನೀಡಿ. ಎದುರಿಗೆ ಇರುವ ವ್ಯಕ್ತಿಗೆ ಬೇಕಿದೆಯೋ ಬೇಡವೋ ಸಲಹೆ- ಸೂಚನೆಗಳನ್ನು ನೀಡುವುದು, ಯಾವುದೇ ಕೆಲಸ ಆಗಲಿ ನಾನು ಮಾಡಿಕೊಂಡು ಬರ್ತೀ ಅಂತ ನೀವಾಗಿಯೇ ಮೇಲು ಬಿದ್ದು ಹೋಗುವುದು ಇಂಥವನ್ನೆಲ್ಲ ಮಾಡಬೇಡಿ. ನಿಮ್ಮ ಹುದ್ದೆಯ ಘನತೆ- ಗೌರವವನ್ನು ಕಾಪಾಡಿಕೊಳ್ಳುವುದಕ್ಕೆ ಹೆಚ್ಚಿನ ಮುಖ್ಯತ್ವವನ್ನು ನೀಡಿ. ಪ್ರೀತಿ- ಪ್ರೇಮದಲ್ಲಿ ಇರುವವರು ಭಾವನಾತ್ಮಕ ಕ್ಷಣಗಳಲ್ಲಿಯೋ ಅಥವಾ ಬಹಳ ಸಂತೋಷವಾಗಿ ಇರುವಾಗಲೋ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಭರವಸೆ- ಮಾತುಗಳನ್ನು ಯಾರಿಗೂ ನೀಡಬೇಡಿ. ಅಥವಾ ನಿಮಗೆ ಯಾವುದೋ ಹಣ ಬರುವುದರಲ್ಲಿದೆ, ಅದು ಬಂದ ತಕ್ಷಣ ದೊಡ್ಡ ಮೊತ್ತವನ್ನು ನಿನಗೇ ಕೊಡುತ್ತೀನಿ ಎಂಬ ಮಾತನ್ನೆಲ್ಲ ಹೇಳುವುದಕ್ಕೆ ಹೋಗಬೇಡಿ. ಅದರಲ್ಲೂ ಸ್ತ್ರೀಯರಿಗೆ ಮಾತು ಕೊಡುವುದಕ್ಕೆ ಹೋಗಬೇಡಿ.
ಕೃಷಿಕರು:
ಜಮೀನಿನಲ್ಲಿ ಹಲವು ಕೆಲಸಗಳನ್ನು ಮಾಡಿಸಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ಕೃಷಿ ಕೂಲಿ ಕಾರ್ಮಿಕರನ್ನು ಹುಡುಕುತ್ತಿದ್ದಲ್ಲಿ ದೊರೆಯಲಿದ್ದಾರೆ. ಇನ್ನು ಯಾರು ಗುತ್ತಿಗೆಗೋ ಅಥವ ಇಷ್ಟು ಅವಧಿಗೆ ಅಂತ ಭೋಗ್ಯಕ್ಕೋ ಭೂಮಿಯನ್ನು ಪಡೆದು, ಆರಂಭ ಮಾಡಿಸಬೇಕು ಎಂದು ಇರುತ್ತೀರೋ ಅಂಥವರ ಉದ್ದೇಶ ಈಡೇರುವ ಸಾಧ್ಯತೆಗಳು ಹೆಚ್ಚಲಿವೆ. ಹಳೆ ಸ್ನೇಹಿತರು ಅಥವಾ ಸಂಬಂಧಿಕರು ನಿಮ್ಮ ಕೆಲಸ- ಕಾರ್ಯಗಳಲ್ಲಿ ಜೊತೆಯಾಗಿ ನಿಲ್ಲುವುದಾಗಿ ಮಾತು ನೀಡಲಿದ್ದಾರೆ.
ವೃತ್ತಿನಿರತರು:
ಈ ವಾರ ದೊಡ್ಡ ದೊಡ್ಡ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಕಚೇರಿ ನವೀಕರಣ, ಸ್ಥಳಾಂತರ ಅಥವಾ ಭೋಗ್ಯಕ್ಕೆ ಹಾಕಿಕೊಳ್ಳುವುದು ಅಥವಾ ಖರೀದಿಯನ್ನೇ ಮಾಡುವುದು ಹೀಗೆ ಮುಖ್ಯವಾದ ನಿರ್ಧಾರ ಅದಾಗಿರಲಿದೆ. ನಿಮ್ಮ ಕೆಲಸ ಹಾಗೂ ವೈಖರಿಯನ್ನು ಮೆಚ್ಚಿಕೊಂಡು, ಹೊಸ ಕ್ಲೈಂಟ್ ಗಳು ಒಪ್ಪಂದದ ಅವಧಿ ಹೆಚ್ಚಿಸುವುದಕ್ಕೋ ಅಥವಾ ಈಗ ನೀಡುತ್ತಿರುವ ಮೊತ್ತಕ್ಕಿಂತ ಹೆಚ್ಚು ನೀಡುವುದಕ್ಕೋ ಮುಂದಾಗಲಿದ್ದಾರೆ.
ವಿದ್ಯಾರ್ಥಿಗಳು:
ಪ್ರವಾಸಕ್ಕೆ ತೆರಳುವ ಯೋಗ ಕಂಡುಬರುತ್ತಿದೆ. ಅದರಲ್ಲೂ ಅಧ್ಯಯನ ಪ್ರವಾಸಗಳಿಗೆ ತೆರಳಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ವಿಶ್ವಾಸ ಹೆಚ್ಚಾಗಲಿದೆ. ಆಲೋಚನಾ ಧಾಟಿ, ಧೋರಣೆ, ವೈಖರಿ ಇವುಗಳ ಬಗ್ಗೆ ಎಲ್ಲ ಇತರರು ಮೆಚ್ಚುಗೆಯ ಮಾತುಗಳನ್ನು ಆಡಲಿದ್ದಾರೆ. ಇನ್ನು ನಿಮ್ಮಲ್ಲಿ ಕೆಲವರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಚಿತ್ರಕಲೆ, ಸಂಗೀತ, ವಾದನಗಳನ್ನು ನುಡಿಸುವಂಥ ತರಬೇತಿಗೆ ಸೇರ್ಪಡೆ ಆಗುವ ಅವಕಾಶಗಳು ಹೆಚ್ಚಿವೆ.
ಮಹಿಳೆಯರು:
ಸಂಘ- ಸಂಸ್ಥೆಗಳಲ್ಲಿ ಬಹಳ ಉತ್ಸಾಹದಿಂದ ತೊಡಗಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಪದಾಧಿಕಾರಿಗಳಾಗಿ, ಅಧ್ಯಕ್ಷೆ-ಉಪಾಧ್ಯಕ್ಷೆ ಅಥವಾ ಕಾರ್ಯದರ್ಶಿಯಂಥ ಹುದ್ದೆಗಳಿಗೆ ನೇಮಕ ಆಗುವ ಅವಕಾಶಗಳಿವೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅವರು ಉಪಕಾರ ಸ್ಮರಣೆ ಎಂಬಂತೆ ನಿಮಗೆ ಕೆಲವು ಸಹಾಯಗಳನ್ನು ಮಾಡಲಿದ್ದಾರೆ.
ನೀವೇನಾದರೂ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾರ್ಯ ನಿರ್ವಹಿಸುವವರಾಗಿದ್ದಲ್ಲಿ ಬಿಡುವಿಲ್ಲದಷ್ಟು ಕೆಲಸಗಳು ಹುಡುಕಿಕೊಂಡು ಬರಲಿವೆ. ಈ ಹಿಂದೆ ನೀವಾಗಿಯೇ ಆ ಕೆಲಸವನ್ನು ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಕೈ ಬಿಟ್ಟಿದ್ದಲ್ಲಿ ಅವೇ ಕೆಲಸಗಳು ನಿಮ್ಮನ್ನು ಅರಸಿ ಬರಲಿವೆ. ಇನ್ನು ನಿಮ್ಮಲ್ಲಿ ರೆಕಾರ್ಡಿಂಗ್ ಸ್ಟುಡಿಯೋ ನಡೆಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಗೆ ಸಾಲಕ್ಕಾಗಿ ಪ್ರಯತ್ನವನ್ನು ಪಡುತ್ತಿದ್ದೀರಿ ಎಂದಾದಲ್ಲಿ ಇಲ್ಲಿವರೆಗಿನ ಅಡೆ-ತಡೆಗಳು ನಿವಾರಣೆ ಆಗಲಿವೆ. ಸಣ್ಣ- ಪುಟ್ಟ ಸಂಗತಿಗಳ ಮೇಲೂ ನೀವು ಕೊಡುವ ಗಮನ ಹಾಗೂ ತೆಗೆದುಕೊಳ್ಳುವ ಮುಂಜಾಗ್ರತೆಯಿಂದಾಗಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ಇತರರಿಗೆ ಇರುವಂಥ ಗೌರವ ಹೆಚ್ಚಾಗುವ ಸಾಧ್ಯತೆಗಳಿವೆ.
ಕೃಷಿಕರು:
ಸಣ್ಣ- ಪುಟ್ಟ ಅಪಘಾತಗಳಾಗುವ ಯೋಗ ಇದೆ. ಆದ್ದರಿಂದ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಿ. ಶಾರ್ಟ್ ಸರ್ಕೀಟ್, ವಿದ್ಯುತ್ ಅವಘಡ ಇಂಥದ್ದು ಏನಾದರೂ ಆಗಬಹುದು. ಮನೆಯಲ್ಲಿ ಇರಲಿ ಅಥವಾ ಜಮೀನಿನಲ್ಲಿ ಇರಲಿ ವೈರಿಂಗ್, ಅರ್ಥಿಂಗ್ ಇವೆಲ್ಲ ಸರಿಯಾಗಿವೆಯಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಪರೀಕ್ಷಿಸಿಕೊಳ್ಳುವುದು ಕ್ಷೇಮ. ನಿಮ್ಮದು ಎಂದಿರುವಂಥ ಯಾವ ಜವಾಬ್ದಾರಿಯನ್ನು ಇತರರಿಗೆ ವಹಿಸುವುದಕ್ಕೆ ಹೋಗಬೇಡಿ.
ವೃತ್ತಿನಿರತರು:
ವಿಪರೀತ ಅಲೆದಾಟ ಇರುತ್ತದೆ. ನೀವೇ ಗೊಂದಲ ಮಾಡಿಕೊಂಡು, ಪದೇಪದೇ ಓಡಾಡುತ್ತೀರೋ ಅಥವಾ ಆ ಸಂದರ್ಭ ಹಾಗೆ ಒದಗಿಬರುತ್ತದೋ ಒಟ್ಟಾರೆಯಾಗಿ ವಿನಾಕಾರಣದ ಸುತ್ತಾಟ ನಿಮ್ಮ ಪಾಲಿಗೆ ಇರುತ್ತದೆ. ನಿಮ್ಮಲ್ಲಿ ಕೆಲವರಿಗೆ ಹಿಂಜರಿಕೆ ಅಥವಾ ಧೈರ್ಯಗೆಡುವಂಥ ಪರಿಸ್ಥಿತಿ ಎದುರಾಗುತ್ತದೆ. ಲಾಯಕ್ಕಾದ ನಿರ್ಧಾರ ಅಂತ ನೀವು ಅಂದುಕೊಂಡಿದ್ದನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿ ಆಗಿಬಿಡುತ್ತದೆ. ಈ ಸ್ಥಿತಿ ಇದು ಒಂದು ವಾರ ಮಾತ್ರ.
ವಿದ್ಯಾರ್ಥಿಗಳು:
ವಿಧಿಯಾಟದ ಮೇಲೆ ನಂಬಿಕೆ ಸಿಕ್ಕಾಪಟ್ಟೆ ಆಗಿಬಿಡುತ್ತದೆ. ನಾವು ಏನು ಅಂದುಕೊಂಡರೆ ಏನು ಬಂತು, ಅದನ್ನು ನಿರ್ಧರಿಸುವ ಶಕ್ತಿ ಬೇರೆ ಯಾವುದೋ ಇದೆ ಎಂಬುದು ಬಲವಾಗಿ ನಿಮ್ಮ ಒಳಗೆ ಬೇರೂರುತ್ತದೆ. ದೇವಸ್ಥಾನಗಳಿಗೆ, ತೀರ್ಥಕ್ಷೇತ್ರಗಳಿಗೆ ಅಚಾನಕ್ ಆಗಿ ತೆರಳುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರು ಪ್ರತಿಭಾ ಪ್ರದರ್ಶನಗಳಲ್ಲಿ ಭಾಗೀ ಆಗಿ, ಜನಪ್ರಿಯತೆಯನ್ನು ಪಡೆಯುವ ಯೋಗ ಇದೆ.
ಮಹಿಳೆಯರು:
ಟ್ರೆಕ್ಕಿಂಗ್ ತೆರಳುವ, ಬೆಟ್ಟ- ಗುಡ್ಡಗಳು ಇರುವಂಥ ಪ್ರದೇಶಗಳಿಗೆ ಹೋಗುವ ಸಾಧ್ಯತೆಗಳಿವೆ. ಅದರಲ್ಲೂ ಮಹಿಳಾ ಸಂಘಗಳು, ಗುಂಪುಗಳು, ಕ್ಲಬ್ ಇಂಥವುಗಳಲ್ಲಿ ಸಕ್ರಿಯರಾಗಿ ಇರುವವರಿಗೆ ಈ ಸಾಧ್ಯತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ. ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಶಸ್ತ್ರಚಿಕಿತ್ಸೆ ಆಗಬಹುದು ಅಥವಾ ಫಿಜಿಯೋಥೆರಪಿ ಆರಂಭಿಸುವ ಅವಕಾಶಗಳಿವೆ.
ಆಸ್ತಿ, ವಾಹನಗಳು, ಅಡ್ವಾನ್ಸ್ ಅಗ್ರಿಮೆಂಟ್ ಈ ರೀತಿಯ ಕಾಗದ- ಪತ್ರ- ದಾಖಲಾತಿಗಳಿಗೆ ಸಂಬಂಧಿಸಿದಂತೆ ಹುಡುಕಾಟ ನಡೆಸುತ್ತಿದ್ದೀರಿ, ಎಷ್ಟು ಹುಡುಕಿದರೂ ಮನೆಯಲ್ಲಿ ಅದು ಸಿಗುತ್ತಿಲ್ಲ ಅಂತಾದಲ್ಲಿ ಅವು ಸಿಗಬಹುದು ಅಥವಾ ಅದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬ ಮಾರ್ಗ ಗೋಚರ ಆಗಲಿದೆ. ವಾಹನ ಕಲಿಯುತ್ತಿರುವವರು ಈ ವಾರ ಒಂದು ಬಗೆಯ ಆತ್ಮವಿಶ್ವಾಸವನ್ನು ಪಡೆದುಕೊಳ್ಳಲಿದ್ದೀರಿ. ಎಲ್ಲ ವಿಚಾರಗಳಲ್ಲೂ ಪಾರದರ್ಶಕವಾಗಿರಿ, ಯಾವುದೇ ವಿಚಾರವನ್ನು ಮುಚ್ಚಿಡುವುದಕ್ಕೆ ಹೋಗಬೇಡಿ. ನೀವು ಈಗಾಗಲೇ ಕೈಗೆತ್ತಿಕೊಂಡಿರುವ ಪ್ತಾಜೆಕ್ಟ್ ಗೆ ಸಂಬಂಧಿಸಿದಂತೆ ಪ್ಲಾನ್ ಬಿ ಎಂಬುದು ಸಹ ಇಟ್ಟುಕೊಳ್ಳಿ. ನಿಮ್ಮ ಬಗ್ಗೆ ಯಾರಾದರೂ ವಿಮರ್ಶತ್ಮಾಕವಾಗಿ ಮಾತನಾಡಿದಲ್ಲಿ ಅವರನ್ನು ಶತ್ರುವಂತೆ ಕಾಣುವುದಕ್ಕೆ ಹೋಗಬೇಡಿ.
ಕೃಷಿಕರು:
ಸಂಘ- ಸಂಸ್ಥೆಗಳ ಮೂಲಕವಾಗಿ ಸಾಲಕ್ಕೆ ಪ್ರಯತ್ನವನ್ನು ಪಡುತ್ತಿದ್ದೀರಿ ಅಂತಾದಲ್ಲಿ ಅದು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅಥವಾ ಚೀಟಿ ಹಾಕಿದ್ದೀರಿ, ಅದರ ಹಣವನ್ನು ತೆಗೆದುಕೊಳ್ಳಬೇಕು ಎಂದುಕೊಂಡಿದ್ದೀರಿ ಅಂತಾದರೂ ಅದು ಸಾಧ್ಯವಾಗಲಿದೆ. ಹಣವನ್ನು ಎಲ್ಲಿ ವಿನಿಯೋಗ ಮಾಡಬೇಕು ಅಂದುಕೊಂಡಿದ್ದೀರೋ ಅಲ್ಲಿಗೇ ವಿನಿಯೋಗಿಸಿ. ಈ ವಾರ ನಿಮ್ಮಲ್ಲಿ ಕೆಲವರಿಗೆ ಐಷಾರಾಮಿ ವಸ್ತು- ವಿಷಯಗಳ ಕಡೆಗೆ ಹೆಚ್ಚಿನ ಆಕರ್ಷಣೆ ಇರುತ್ತದೆ.
ವೃತ್ತಿನಿರತರು:
ನಿಧಾನಕ್ಕೆ ನಿಮ್ಮ ಕೆಲವು ತಪ್ಪು ತೀರ್ಮಾನಗಳು, ನಿರ್ಧಾರಗಳು ಹಾಗೂ ವ್ಯಕ್ತಿಗಳ ಜತೆಗಿನ ಸ್ನೇಹ- ಸಂಬಂಧದಿಂದ ಕಳೆದುಕೊಂಡಿದ್ದು ಏನು ಇವೆಲ್ಲವೂ ಒಂದೊಂದಾಗಿ ಅರಿವಿಗೆ ಬರುತ್ತಾ ಸಾಗುತ್ತದೆ. ಏಕಾಏಕಿ ಕೆಲವು ವ್ಯಕ್ತಿಗಳ ಜತೆಗೆ ಮಾತುಕತೆಯನ್ನೇ ನಿಲ್ಲಿಸಿಬಿಡುವ ಅವಕಾಶಗಳಿವೆ. ಕಾರಣವೇ ಹೇಳದಂತೆ ಕೆಲವು ಸ್ಥಳಗಳಲ್ಲಿ ಮೌನವಾಗಿ ಇದ್ದುಬಿಡಲಿದ್ದೀರಿ. ನಿಮಗೆ ಅನಿಸುವುದರಲ್ಲೋ ಆತ್ಮವಿಮರ್ಶೆ ಮಾಡಿಕೊಳ್ಳುವುದೋ ಖಂಡಿತಾ ತಪ್ಪಲ್ಲ. ಆದರೆ ಏಕಾಏಕಿ ಎಲ್ಲ ನಿರ್ಧಾರಗಳನ್ನು ಜಾರಿಗೆ ತಂದುಬಿಡುವುದು ಅನಾಹುತಕಾರಿ, ಎಚ್ಚರವಿರಲಿ.
ವಿದ್ಯಾರ್ಥಿಗಳು:
ಸಣ್ಣ- ಪುಟ್ಟದಾದ್ದರೂ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಅದರಲ್ಲೂ ಆಸ್ತಮಾ, ಕಫ, ಕೆಮ್ಮು ಈ ರೀತಿಯಾದ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಹೈರಾಣ ಮಾಡಿಬಿಡುತ್ತವೆ. ಬಾಯಿ ಚಪಲವನ್ನು ಕಡಿಮೆ ಮಾಡಿಕೊಳ್ಳಿ. ವೈದ್ಯರು ಈಗಾಗಲೇ ನೀಡಿರುವ ಆಹಾರ ಪಥ್ಯದ ಎಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಿ. ಇತರರು ಪುಸಲಾಯಿಸಿದರು ಅನ್ನೋ ಕಾರಣಕ್ಕೆ ನಿಮಗೇನೂ ಸಮಸ್ಯೆಯೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳಬೇಡಿ.
ಮಹಿಳೆಯರು:
ಗಟ್ಟಿ ನಿರ್ಧಾರಗಳನ್ನು ಮಾಡುವ ಅವಧಿ ಇದಾಗಿರುತ್ತದೆ. ನಿಮ್ಮನ್ನು ಭಾವನಾತ್ಮಕವಾಗಿ ಕುಗ್ಗಿಸಿ, ಅದರ ಲಾಭವನ್ನು ಪಡೆಯುವುದಕ್ಕೆ ಕೆಲವರು ಯತ್ನಿಸುತ್ತಿದ್ದಾರೆ ಅಥವಾ ಮುಂಚಿನಿಂದಲೂ ಅವರು ಇದನ್ನೇ ಮಾಡಿಕೊಂಡು ಬಂದಿದ್ದರು ಎಂಬುದು ನಿಮ್ಮ ಅರಿವಿಗೆ ಬರಲಿದೆ. ಕೆಲವು ವಿಚಾರಗಳನ್ನು ಮರೆಯುವುದಕ್ಕೆ, ಹೊಸ ವ್ಯಕ್ತಿಯಾಗಿ ಕಾಣಿಸಿಕೊಳ್ಳುವುದಕ್ಕಾಗಿ ನಿಮ್ಮಲ್ಲಿ ಕೆಲವರು ಏಕಾಂಗಿಯಾಗಿ ಪ್ರವಾಸಕ್ಕೆ ತೆರಳುವುದಕ್ಕೆ ಸಹ ನಿರ್ಧಾರ ಮಾಡಬಹುದು.
ಚಿತ್ರರಂಗದಲ್ಲಿ ಇರುವವರಿಗೆ, ಅದರಲ್ಲೂ ನಟನೆ, ನಿರ್ದೇಶನದ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಮುಖ್ಯವಾದ ಅವಧಿ ಇದಾಗಿರುತ್ತದೆ. ಇನ್ನು ನೀವು ಉಪಯೋಗಕ್ಕೆ ಬಾರದು ಎಂದುಕೊಂಡಿದ್ದ ಕಥೆಯೋ ಅಥವಾ ನೀವು ಮಾಡಿಟ್ಟುಕೊಂಡಿರುವ ಹಾಡುಗಳ ಸಾಹಿತ್ಯವೋ ನಿಮ್ಮ ಕೈ ಹಿಡಿಲಿವೆ. ಅದಕ್ಕೆ ಕಾರಣ ಆಗುವ ಸಂಗತಿ ಏನೆಂದರೆ, ನಿಮಗೆ ಗುರುಗಳು ಅಥವಾ ಗುರು ಸಮಾನರಾದವರು ಕೆಲವು ಅವಕಾಶಗಳ ಬಗ್ಗೆ ಹೇಳಬಹುದು ಅಥವಾ ಕೊಡಿಸುವ ಸಾಧ್ಯತೆಗಳಿವೆ. ಆದ್ದರಿಂದ ಇಂಥ ವ್ಯಕ್ತಿಗಳು ನಿಮ್ಮನ್ನು ಭೇಟಿ ಆಗುವಂತೆ ಹೇಳಿದಲ್ಲಿ ಕಡ್ಡಾಯವಾಗಿ ಅಂಥವರನ್ನು ಭೇಟಿ ಆಗಿ, ಅವರ ಜೊತೆಗೆ ಸಮಾಧಾನವಾಗಿ ಮಾತನಾಡುವುದಕ್ಕೆ ಪ್ರಯತ್ನಿಸಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ಹುಡುಕಿಕೊಂಡು ಬರಲಿವೆ.
ಕೃಷಿಕರು:
ನಿಮಗೆ ಆಗಬೇಕಾದ ಕೆಲಸಗಳನ್ನು ನಯವಾಗಿ ಮಾಡಿ, ಮುಗಿಸಿಕೊಳ್ಳಲಿದ್ದೀರಿ. ಕೆಲವು ಸಮಯದಿಂದ ಲಕ್ಷ್ಯವೇ ಕೊಡುವುದಕ್ಕೆ ಆಗಿರಲಿಲ್ಲ ಎಂಬಂಥ ವಿಚಾರಗಳ ಕಡೆಗೆ ನಿಮ್ಮ ಗಮನವು ಹೋಗಲಿದೆ. ಮಕ್ಕಳ ಶಿಕ್ಷಣ, ಮದುವೆ, ಉದ್ಯೋಗ, ಆರೋಗ್ಯ ಹೀಗೆ ಏಕಕಾಲಕ್ಕೆ ಹಲವು ವಿಚಾರಗಳು ನಿಮಗೆ ಆದ್ಯತೆ ಆಗಲಿವೆ. ನಿಮ್ಮ ಪ್ರಭಾವವನ್ನು ಬಳಸಿ, ಏನೆಲ್ಲ ಅನುಕೂಲವನ್ನು ಪಡೆದುಕೊಳ್ಳಬಹುದು ಎಂಬ ಬಗ್ಗೆ ಗಂಭೀರವಾಗಿ ಆಲೋಚನೆಯನ್ನು ಮಾಡಲಿದ್ದೀರಿ.
ವೃತ್ತಿನಿರತರು:
ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ಬಹಳ ಚುರುಕಾಗಿ ಇದ್ದು, ಕೆಲವು ಆರ್ಡರ್ ಗಳನ್ನು ನಿಮ್ಮ ಕಡೆಗೆ ಸೆಳೆದುಕೊಳ್ಳಲಿದ್ದೀರಿ. ಈ ಹಿಂದೆ ಯಾರು ನಿಮಗೆ ಸಹಾಯ ಮಾಡುವ ನೆಪದಲ್ಲಿ ದಾರಿ ತಪ್ಪಿಸಿದ್ದರೋ ಅಂಥವರಿಗೆ ಪಾಠವನ್ನು ಕಲಿಸಲಿದ್ದೀರಿ. ನಿಮಗೆ ಹೊಳೆಯುವಂಥ ಹೊಸ ಸಂಗತಿಗಳನ್ನು ತಕ್ಷಣವೇ ಅಳವಡಿಸಿಕೊಳ್ಳುವುದರಿಂದ ಹಲವು ಬಗೆಯಲ್ಲಿ ಅನುಕೂಲಗಳು ಆಗಲಿವೆ.
ವಿದ್ಯಾರ್ಥಿಗಳು:
ಗ್ಯಾಜೆಟ್, ಟ್ಯಾಬ್ ಲೆಟ್, ಸ್ಮಾರ್ಟ್ ವಾಚ್, ಲ್ಯಾಪ್ ಟಾಪ್ ಇಂಥವನ್ನು ಏನನ್ನಾದರೂ ಖರೀದಿಸುವ ಯೋಗ ಕಂಡುಬರುತ್ತಿದೆ. ನೀವು ಈ ಹಿಂದೆ ಹಲವು ಸಲ ಹಠ ಮಾಡಿ ಕೇಳಿದ್ದರೂ ತಂದುಕೊಡದಿದ್ದ ವಸ್ತುಗಳನ್ನು ಈ ವಾರ ನಿಮ್ಮ ಪೋಷಕರು ತಂದುಕೊಡುವ ಅವಕಾಶಗಳು ಹೆಚ್ಚಿವೆ. ಇಷ್ಟು ಸಮಯ ನಿಮಗೆ ಹಿಂಜರಿಕೆಯಾಗಿ ಕಾಡುತ್ತಿದ್ದ ಸಬ್ಜೆಕ್ಟ್ ಗಳನ್ನು ತುಂಬ ಚೆನ್ನಾಗಿ ಕಲಿಸುವಂಥ ವ್ಯಕ್ತಿಗಳು ನಿಮಗೆ ದೊರೆಯಲಿದ್ದಾರೆ.
ಮಹಿಳೆಯರು:
ಉದ್ಯೋಗ ವಿಚಾರಕ್ಕೆ ಆದ್ಯತೆ ಕೊಡಲಿದ್ದೀರಿ. ಈಗ ನೀವು ಮಾಡುತ್ತಿರುವ ಉದ್ಯೋಗದಿಂದ ಬದಲಾವಣೆಗೆ ಮುಂದಾಗಬಹುದು ಅಥವಾ ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲೇ ಬಡ್ತಿ ಪಡೆಯುವುದಕ್ಕೆ ಮೇಲಧಿಕಾರಿಗಳ ಜೊತೆಗೆ ಚರ್ಚೆ ಕೂಡ ನಡೆಸಬಹುದು. ಆದರೆ ನಿಮ್ಮ ಯಾವುದೇ ಪ್ರಯತ್ನವಾಗಲೀ ಫಲಪ್ರದವಾಗಲಿದೆ. ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬರಬೇಕಾದ ಅನುದಾನ, ಹಣಕಾಸು ಬಾಕಿ ಇದ್ದಲ್ಲಿ ಈ ವಾರ ಅದನ್ನು ಪಡೆದುಕೊಳ್ಳುವ ಅಥವಾ ಅದು ಬಾರದಂತೆ ಆಗಲು ಎದುರಾಗಿರುವ ಸಮಸ್ಯೆ ಬಗೆಹರಿಸುವ ದಾರಿ ಗೊತ್ತಾಗುತ್ತದೆ.
ನಿಮ್ಮ ಈ ಮುಂಚಿನ ಕೆಲವು ತೀರ್ಮಾನಗಳು ಹಾಗೂ ಕುಟುಂಬದ ಸದಸ್ಯರಿಗೂ ಗೊತ್ತಿರದಂತೆ ಮಾಡಿದ್ದ ವ್ಯವಹಾರಗಳಲ್ಲಿ ಸಮಸ್ಯೆಗಳು ತಲೆದೋರಲಿವೆ. ಒಂದು ವೇಳೆ ನಿಮ್ಮ ಆಸ್ತಿ ಯಾವುದಾದರೂ ಮಾರಿದ್ದರಿಂದ ಬಂದಿದ್ದ ಹಣದಲ್ಲಿ ಏನಾದರೂ ಹೂಡಿಕೆ ಮಾಡಿದ್ದೀರಿ ಅಂತಾದಲ್ಲಿ ಅದರ ಮೌಲ್ಯದಲ್ಲಿ ಇಳಿಕೆ ಆಗಲಿದೆ. ಒಂದು ಕಡೆ ಮನೆಯಲ್ಲಿ ಇದನ್ನು ಹೇಳಲಿಕ್ಕೆ ಆಗದಂಥ ಪರಿಸ್ಥಿತಿ, ಇನ್ನೊಂದು ಕಡೆ ಮಾನಸಿಕವಾಗಿ ಗಟ್ಟಿಯಾಗಿ ಇರುವುದಕ್ಕೆ ಆಗದ ಸನ್ನಿವೇಶದಲ್ಲಿ ಸಿಲುಕಿಕೊಂಡು ಪರಿತಪಿಸುವಂಥ ಸನ್ನಿವೇಶ ನಿಮ್ಮದಾಗಲಿದೆ. ಎಲ್ಲಿಯದೋ ಕೋಪ, ನಿರಾಶೆ ಇನ್ನೆಲ್ಲಿಯೋ ತೋರಿಸಿಕೊಳ್ಳುವಂತೆ ಆಗಲಿದೆ. ನಿಮ್ಮ ಬಗ್ಗೆ ಮನೆಯಲ್ಲಿ ಮುಂಚೆ ತೋರಿಸಿದಂತೆ ಗೌರವಾದರಗಳನ್ನು ತೋರಿಸುತ್ತಿಲ್ಲ ಎಂದು ನಿಮ್ಮ ಒಳಮನಸ್ಸು ಹೇಳುವುದಕ್ಕೆ ಆರಂಭಿಸಲಿದೆ.
ಕೃಷಿಕರು:
ತಲೆಸುತ್ತು, ಕಣ್ಣು ಕತ್ತಲೆ ಬಂದಂತಾಗುವುದು, ಕಾಲು ಊತ ಇಂಥ ಸಮಸ್ಯೆಗಳಿಂದ ಬಳಲುವಂತಾಗುತ್ತದೆ. ಯಾವ ವ್ಯಕ್ತಿಯ ಬಗ್ಗೆ ನಿಮಗೆ ಸಂಪೂರ್ಣ ಗೊತ್ತಿದೆ ಎಂದು ನೀವು ಅಂದುಕೊಂಡಿರುತ್ತೀರೋ ಆತ ನೀವಂದುಕೊಂಡಂತೆ ಅಲ್ಲ ಎಂಬುದು ಗಮನಕ್ಕೆ ಬರಲಿದೆ. ನಿಮ್ಮ ಅಕ್ಕಪಕ್ಕದ ಜಮೀನಿನವರೋ ಅಥವಾ ಮನೆಯವರ ಜೊತೆಗೋ ಗಡಿಯ ವಿಚಾರಕ್ಕೆ ಮಾತಿಗೆ ಮಾತು ಬೆಳೆದು, ಜಗಳ ಆಗುವ ಸಾಧ್ಯತೆಗಳು ಹೆಚ್ಚಿವೆ. ಇತರರ ಮಾತಿಗೆ ಏಕಾಏಕಿ ಸಿಟ್ಟಿಗೇಳುವುದರಿಂದ ಕೆಲವು ಸಮಸ್ಯೆಗಳನ್ನು ನೀವು ಮಾಡಿಕೊಳ್ಳಲಿದ್ದೀರಿ.
ವೃತ್ತಿನಿರತರು:
ನಿಮ್ಮ ಉಳಿತಾಯವೋ ಅಥವಾ ಹೂಡಿಕೆಯ ಹಣವನ್ನೋ ತೆಗೆದು, ಅದರಿಂದ ಕೆಲವು ಸಾಲವನ್ನು ಮರುಪಾವತಿ ಮಾಡುವ ತೀರ್ಮಾನವನ್ನು ಮಾಡಲಿದ್ದೀರಿ. ನಿಮ್ಮದೇ ಆರೋಗ್ಯದ ಸಂಗತಿಯು ಆದ್ಯತೆಯನ್ನು ಪಡೆದುಕೊಳ್ಳುತ್ತದೆ. ನಿಮ್ಮಲ್ಲಿ ಕೆಲವರು ಪ್ರಕೃತಿ ಚಿಕಿತ್ಸಾ ಕೇಂದ್ರಗಳಿಗೆ ದಾಖಲಾಗಿ, ಚಿಕಿತ್ಸೆಗಳನ್ನು ಪಡೆದುಕೊಳ್ಳುವ ನಿರ್ಧಾರ ಕೈಗೊಳ್ಳಲಿದ್ದೀರಿ. ನಿಮಗೆ ಇರುವಂಥ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಿರ್ಧಾರ ಮಾಡುತ್ತೀರಿ.
ವಿದ್ಯಾರ್ಥಿಗಳು:
ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಜಾಸ್ತಿ ಆಗಲಿದೆ. ನೀವಾಯಿತು ಹಾಗೂ ನಿಮ್ಮ ಓದಾಯಿತು ಎಂಬಂತೆ ಇರುವವರು ಸಹ ಉತ್ಸಾಹದಿಂದ ಕ್ರೀಡೆ ಮೊದಲಾದವುಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲಿದ್ದೀರಿ. ಮನೆಯಲ್ಲಿ ನಿಮ್ಮ ಮೇಲೆ ಪ್ರೀತಿ- ಅಕ್ಕರಾಸ್ಥೆ ಹೆಚ್ಚಾಗಲಿದೆ. ಒಂದು ವೇಳೆ ನೀವು ವಾಹನ ಓಡಿಸುವ ವಯಸ್ಸಿನವರಾಗಿದ್ದಲ್ಲಿ ನಿಮಗೆ ವಾಹನವನ್ನು ಕೊಡಿಸುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ನಿಮಗೆ ಬಹಳ ಸಂತೋಷ ಆಗಲಿದೆ.
ಮಹಿಳೆಯರು:
ಸ್ವಂತವಾಗಿ ವ್ಯವಹಾರ- ವ್ಯಾಪಾರ ಆರಂಭಿಸಬೇಕು ಎಂದುಕೊಳ್ಳುತ್ತಾ ಇದ್ದೀರಿ ಅಂತಾದಲ್ಲಿ ಈ ವಾರ ನಿಮ್ಮ ಉದ್ದೇಶಕ್ಕೆ ಪೂರಕವಾದ ಬೆಳವಣಿಗೆಗಳು ಆಗಲಿವೆ. ಕೆಲವರು ನಿಮ್ಮ ಜೊತೆ ಪಾರ್ಟನರ್ ಆಗುವುದಕ್ಕೆ ಮುಂದೆ ಬರಬಹುದು. ಮತ್ತೆ ಕೆಲವರು ತಾವು ಹಣ ಹೂಡುವುದಾಗಿಯೂ, ನೀವು ವ್ಯವಹಾರ ಮಾಡಿಕೊಂಡು ಹೋಗಿ ಎಂದು ಕೇಳಿಕೊಳ್ಳಬಹುದು.
ಆಪ್ಟಿಕಲ್ ಇಲ್ಯೂಷನ್Image Credit source: Social Media
ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಬ್ಯುಸಿನೇ. ಈ ಬಿಡುವಿಲ್ಲದ ಕೆಲಸದ ನಡುವೆ ಮೈಂಡ್ ರಿಲ್ಯಾಕ್ಸ್ ಆಗಿಸಲು ಒಗಟುಗಳನ್ನು ಬಿಡಿಸುವತ್ತ ಆಸಕ್ತಿ ತೋರಿಸುತ್ತಾರೆ. ಆಪ್ಟಿಕಲ್ ಇಲ್ಯೂಷನ್ ನಂತಹ (Optical Illusion) ಒಗಟಿನ ಚಿತ್ರಗಳು ಬಿಡಿಸಿ ತಮ್ಮ ಮೆದುಳಿನ ಸಾಮರ್ಥ್ಯ ಪರೀಕ್ಷಿಸಿಕೊಳ್ಳುತ್ತಾರೆ. ನೀವೇನಾದ್ರೂ ಇಂತಹ ಒಗಟಿನ ಚಿತ್ರವನ್ನು ಬಿಡಿಸಲು ಆಸಕ್ತಿ ತೋರಿಸುತ್ತಿದ್ದೀರಾ ಅಂತಾದ್ರೆ ಈ ಚಿತ್ರವು ನಿಮಗೆ ಸಹಾಯಕವಾಗಿದೆ. ಇದರಲ್ಲಿರುವ ಸವಾಲು ಇಲ್ಲಿರುವ ಸೂಜಿಯನ್ನು ಗುರುತಿಸುವುದು. ಈ ಒಗಟು ಬಿಡಿಸಲು ನಿಮಗೆ ಇರುವ ಸಮಯಾವಕಾಶ 25 ಸೆಕೆಂಡುಗಳು ಮಾತ್ರ ಎನ್ನುವುದು ತಲೆಯಲ್ಲಿರಲಿ.
ಈ ಚಿತ್ರದಲ್ಲಿ ಏನು ಕಾಣಿಸುತ್ತಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹಚ್ಚಹಸಿರಾದ ಮರಗಳು, ಸಸ್ಯಗಳು ಮತ್ತು ಹುಲ್ಲು ಇವೆ. ಇಲ್ಲಿ ಆಮೆ ನಿಧಾನವಾಗಿ ನಡೆಯುತ್ತಿದ್ದರೆ, ಮೊಲವು ಮರದ ನೆರಳಿನಲ್ಲಿ ಮಲಗಿದೆ. ಆದರೆ ಈ ಚಿತ್ರದಲ್ಲಿ ಸೂಜಿಯನ್ನು ಜಾಣತನದಿಂದ ಮರೆ ಮಾಡಲಾಗಿದೆ. ನೀವು ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಉತ್ತರ ಹೇಳಲು ಪ್ರಯತ್ನಿಸಿ.
ಈ ಒಗಟಿನ ಚಿತ್ರವನ್ನು ಮೊದಲು ನೋಡಿದಾಗ ಹಚ್ಚ ಹಸಿರಿನ ಮರಗಿಡಗಳು, ಮೊಲ ಹಾಗೂ ಆಮೆಯನ್ನು ಮಾತ್ರ ಕಾಣುತ್ತೀರಿ. ಸಹಜವಾಗಿ ಈ ಚಿತ್ರವು ನಿಮ್ಮ ಕಣ್ಣನ್ನು ಮೋಸಗೊಳಿಸಿ, ಸೂಜಿ ನಿಮ್ಮ ಕಣ್ಣಿಗೆ ಕಾಣದಂತೆ ಮಾಡುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಸೂಜಿ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ. ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಈ ಕೆಳಗಿನ ಚಿತ್ರದಲ್ಲಿ ಸೂಜಿ ಎಲ್ಲಿದೆ ಎಂದು ನಾವೇ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಡಿಸೆಂಬರ್ 28: ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಗಾಳಿಯ ಗುಣಮಟ್ಟ (Bengaluru Air Quality) ಕುಸಿಯುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 165 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಕಳೆದ 4 ವರ್ಷಗಳಲ್ಲಿ ಈ ವರ್ಷವೇ ಗಾಳಿಯ PM (Particulate Matter) ಪ್ರಮಾಣ ಸಹ ಮಿತಿ ಮೀರಿದೆ. ಇಂದೂ ಸಹ PM2.5 68 ಇದ್ದರೆ, PM10 95 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.
ಮಿತಿ ಮೀರುತ್ತಿದೆ ಸೂಕ್ಷ್ಮಾಣುಗಳ ಪ್ರಮಾಣ
ಬೆಂಗಳೂರಿನಲ್ಲಿ 1.2 ಕೋಟಿ ದಾಟಿರುವ ವಾಹನಗಳಿಂದ ಹೊರಸೂಸುವ ಹೊಗೆ ನಗರದ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್ ಮತ್ತು ವೈಟ್ಫೀಲ್ಡ್ನಂತಹ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ.
PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
ಮುನಿಸು, ಪರಸ್ಪರ ಸಮಯ ಕಳೆಯದೆ ಇರುವುದು ಇಂತಹ ಸಣ್ಣ ಸಣ್ಣ ಸಂಗತಿಗಳು ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸುವಂತೆ ಸಕಾರಾತ್ಮಕ ಅಭ್ಯಾಸಗಳು ಸಂಬಂಧವನ್ನು (relationship) ಬಲಪಡಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಆದರೆ ಇಂದಿನ ಈ ಬಿಡುವಿಲ್ಲದ ಜೀವನಶೈಲಿಯ ಕಾರಣದಿಂದಾಗಿ ವಿಶೇಷವಾಗಿ ಸಂಗಾತಿಗಳಿಗೆ ಪರಸ್ಪರ ಸಮಯವನ್ನು ಕಳೆಯುವುದು ಸವಾಲಿನ ಕೆಲಸವಾಗಿದೆ. ಕಾರ್ಯನಿರತ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ದಿನಗಟ್ಟಲೆ ಮಾತನಾಡಲು, ಸಮಯ ಕಳೆಯಲು ಸಾಧ್ಯವಾಗದಿದ್ದರೂ, ಬೆಳಗಿನ ದಿನಚರಿಯಲ್ಲಿ ಸಂಗಾತಿಗಳಿಬ್ಬರು ಈ ಒಂದಷ್ಟು ಕೆಲಸಗಳನ್ನು ಮಾಡುವ ಮೂಲಕ ದಾಂಪತ್ಯ, ಪ್ರೀತಿಯ ಬಂಧವನ್ನು ಬಲಪಡಿಸಿಕೊಳ್ಳಬಹುದು. ಪ್ರೀತಿಯನ್ನು ಬಲಪಡಿಸುವ ಆ ಬೆಳಗಿನ ದಿನಚರಿ ಯಾವುವು ಎಂಬುದನ್ನು ನೋಡೋಣ.
ಸಂಬಂಧವನ್ನು ಬಲಪಡಿಸಲು ಸಂಗಾತಿಗಳಿಬ್ಬರ ಬೆಳಗಿನ ದಿನಚರಿ ಹೀಗಿದ್ದರೆ ಚೆಂದ:
ಪ್ರೀತಿಯ ಶುಭೋದಯ: ದಿನವನ್ನು ಉತ್ತಮ ಮನಸ್ಥಿತಿಯಲ್ಲಿ ಪ್ರಾರಂಭಿಸಲು, ದಂಪತಿಗಳು ಎದ್ದ ತಕ್ಷಣ ಒಬ್ಬರಿಗೊಬ್ಬರು ಪ್ರೀತಿಯಿಂದ ಶುಭೋದಯವನ್ನು ತಿಳಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಈ ಸಣ್ಣ ಅಭ್ಯಾಸವು ನಿಮ್ಮ ಸಂಬಂಧದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ.
ಒಟ್ಟಿಗೆ ಉಪಹಾರ ಸೇವಿಸುವುದು: ಕೆಲಸದ ಕಾರಣದಿಂದಾಗಿ, ನೀವು ದಿನವಿಡೀ ನಿಮ್ಮ ಸಂಗಾತಿಯೊಂದಿಗೆ ಮಾತನಾಡಲು ಸಾಧ್ಯವಾಗದಿರಬಹುದು ಮತ್ತು ಸಂಜೆ ಮನೆಗೆ ಬಂದ ಬಳಿಕವೂ ಸಹ, ಕೆಲಸದ ಆಯಾಸದಿಂದಾಗಿ ನೀವು ಸರಿಯಾಗಿ ಮಾತನಾಡಲು ಸಾಧ್ಯವಾಗದಿರಬಹುದು. ಹಾಗಾಗಿ ಬೆಳಗ್ಗೆ ಸಿಗುವ ಸ್ವಲ್ಪ ಸಮಯದಲ್ಲಿ ಅಡುಗೆಮನೆಯಲ್ಲಿ ಉಪಾಹಾರವನ್ನು ತಯಾರಿಸುತ್ತಾ, ಇಬ್ಬರೂ ಜೊತೆಗೆ ಉಪಹಾರ ಸೇವಿಸುತ್ತಾ ಸ್ವಲ್ಪ ಸಮಯವನ್ನು ಒಟ್ಟಿಗೆ ಕಳೆಯಬಹುದು. ಒಟ್ಟಿಗೆ ಕಳೆಯುವ ಈ ಸ್ವಲ್ಪ ಸಮಯ ಕೂಡ ದಂಪತಿಗಳ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ.
ಒಟ್ಟಿಗೆ ವ್ಯಾಯಾಮ ಮಾಡುವುದು: ಬೆಳಗಿನ ನಡಿಗೆ, ಯೋಗ ಅಥವಾ ಲಘು ವ್ಯಾಯಾಮವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲದೆ, ದಂಪತಿಗಳು ಒಟ್ಟಿಗೆ ಬೆಳಗಿನ ವ್ಯಾಯಾಮ ಮಾಡುವುದು ಸಂಬಂಧವನ್ನು ಉಲ್ಲಾಸಗೊಳಿಸುತ್ತದೆ ಮತ್ತು ಈ ಸಮಯವು ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಒಬ್ಬರಿಗೊಬ್ಬರು ಉಪಹಾರ ತಯಾರಿಸುವುದು: ನಿಮ್ಮ ಸಂಗಾತಿಗಾಗಿ ಪ್ರೀತಿಯಿಂದ ಅವರ ನೆಚ್ಚಿನ ಉಪಹಾರ ತಯಾರಿಸಿ. ಈ ಸಣ್ಣ ಪ್ರಯತ್ನ ಸಹ ನಿಮ್ಮ ಸಂಬಂಧಕ್ಕೆ ಮಾಧುರ್ಯವನ್ನು ನೀಡುತ್ತದೆ.
ಮೊಬೈಲ್ ಫೋನ್ನಿಂದ ದೂರವಿರಿ: ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುತ್ತಾ ಸಮಯ ಕಳೆಯುವ ಬದಲು ಆ ಸಮಯವನ್ನು ಸಂಗಾತಿಯೊಂದಿಗೆ ಕಳೆಯಿರಿ. ಪರಸ್ಪರ ಮಾತನಾಡಿ. ಇದು ಖಂಡಿತವಾಗಿಯೂ ಪ್ರೀತಿಯನ್ನು ಮತ್ತಷ್ಟು ಬಲಪಡಿಸುತ್ತದೆ.
ಧನ್ಯವಾದ ಹೇಳಲು ಮರೆಯಬೇಡಿ: ಪ್ರತಿದಿನ ಬೆಳಿಗ್ಗೆ, ನಿಮ್ಮ ಸಂಗಾತಿಗೆ ಒಂದು ಥ್ಯಾಂಕ್ಸ್ ಹೇಳಿ, ಅವರನ್ನು ಹೊಗಳಿ, ಅವರು ಮಾಡುವ ಸಣ್ಣ ಕೆಲಸಗಳಿಗೂ ಅವರನ್ನು ಶ್ಲಾಘಿಸಿ. ಈ ಅಭ್ಯಾಸವು ನಿಮ್ಮ ಸಂಬಂಧಕ್ಕೆ ಸಕಾರಾತ್ಮಕತೆಯನ್ನು ತರುವುದಲ್ಲದೆ, ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.
ಈ ಅಭ್ಯಾಸಗಳು ನಿಮ್ಮ ದಿನಕ್ಕೆ ಪರಿಪೂರ್ಣ, ಸಕಾರಾತ್ಮಕ ಆರಂಭವನ್ನು ನೀಡುವುದಲ್ಲದೆ, ನಿಮ್ಮ ಬಂಧವನ್ನು ಬಲಪಡಿಸುತ್ತವೆ, ನಿಮ್ಮ ಸಂಬಂಧವನ್ನು ರಿಫ್ರೆಶ್ ಮಾಡುತ್ತವೆ ಮತ್ತು ಜೀವನವನ್ನು ಸುಂದರಗೊಳಿಸುತ್ತವೆ.
ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಆದರೆ ಅದು ಆಟಗಾರರ ನಡುವಣ ಸಮಸ್ಯೆಯಿಂದಾಗಿ ಅಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ಬದಲಾಗಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನಡೆಯಿಂದಾಗಿ ಸಮಸ್ಯೆಗಳು ಉದ್ಭವಿಸಿದೆ. 2024ರ ಟಿ20 ವಿಶ್ವಕಪ್ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ನೇಮಿಸಲಾಯಿತು.
ಗಂಭೀರ್ ಅವರ ಕೋಚಿಂಗ್ ಶೈಲಿ ಕಟ್ಟುನಿಟ್ಟು ಎಂಬುದು ಈಗಾಗಲೇ ಆಟಗಾರರಿಗೆ ಮನವರಿಕೆಯಾಗಿದೆ. ಇದುವೇ ಈಗ ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿನ ವಾತಾವರಣದ ಬದಲಾವಣೆಗೆ ಕಾರಣವಾಗಿದೆ. ಅದರಲ್ಲೂ ಆಟಗಾರರು ಭಯಭೀತಿಯಲ್ಲೇ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಿಟಿಐ ವರದಿಯ ಪ್ರಕಾರ , ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ನಂತರ, ಟೀಮ್ ಇಂಡಿಯಾ ಆಟಗಾರರು ತಮ್ಮ ಸ್ಥಾನದ ಬಗ್ಗೆ ಹೆಚ್ಚು ಅಸುರಕ್ಷಿತರಾಗಿದ್ದಾರೆ. ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯಲ್ಲಿ ಈ ಸಮಸ್ಯೆ ಕಂಡುಬಂದಿರಲಿಲ್ಲ.
ದ್ರಾವಿಡ್ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ, ಆಟಗಾರರಿಗೆ ತಮ್ಮ ಪಾತ್ರಗಳ ಬಗ್ಗೆ ಸ್ಪಷ್ಟತೆ ಇತ್ತು. ಅಲ್ಲದೆ ತಮ್ಮನ್ನು ತಾವು ಸಾಬೀತುಪಡಿಸಲು ಹೆಚ್ಚಿನ ಅವಕಾಶಗಳನ್ನು ಹೊಂದಿದ್ದರು. ಆದಾಗ್ಯೂ ಈಗ ಪರಿಸ್ಥಿತಿ ಬದಲಾಗಿದೆ ಮತ್ತು ಹಲವಾರು ಕಾರಣಗಳಿಗಾಗಿ ಅನೇಕ ಆಟಗಾರರು ತಮ್ಮ ಸ್ಥಾನದ ಬಗ್ಗೆ ಚಿಂತಿತರಾಗಿದ್ದಾರೆ.
ಗೌತಮ್ ಗಂಭೀರ್ ಅವರು ಕೋಚ್ ಆದ ಬಳಿಕ ರೋಹಿತ್ ಶರ್ಮಾ ಅವರನ್ನೇ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅತ್ಯುತ್ತಮ ಫಾರ್ಮ್ನಲ್ಲಿದ್ದ ಪ್ರಮುಖ ಆಟಗಾರರನ್ನು ಗಂಭೀರ್ ನಡೆಸಿಕೊಂಡ ರೀತಿಯಿಂದಾಗಿ ಇತರೆ ಆಟಗಾರರಿಗೂ ಕೆಟ್ಟ ಸಂದೇಶ ರವಾನೆಯಾಗಿದೆ. ಅಂದರೆ ಇಲ್ಲಿ ಯಾರೂ ಖಾಯಂ ಅಲ್ಲ ಎಂಬುದನ್ನು ಟೀಮ್ ಇಂಡಿಯಾ ಕೋಚ್ ಪರೋಕ್ಷವಾಗಿ ಸಾರಿದ್ದಾರೆ.
ಅದರಲ್ಲೂ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಸ್ಥಾನಗಳನ್ನು ನಿಗದಿಪಡಿಸಬಾರದು ಎಂದು ಗಂಭೀರ್ ನಂಬುತ್ತಾರೆ. ಹೀಗಾಗಿಯೇ ಆರಂಭಿಕ ಜೋಡಿಯನ್ನು ಹೊರತುಪಡಿಸಿ ಉಳಿದ ಬ್ಯಾಟಿಂಗ್ ಕ್ರಮಾಂಕಗಳನ್ನು ಬದಲಿಸುತ್ತಿರುತ್ತಾರೆ. ಇದರಿಂದ ಆಟಗಾರರಲ್ಲೂ ಅನಿಶ್ಚಿತತೆ ಮನೆ ಮಾಡಿದೆ. ತಂಡದ ಸಂಯೋಜನೆಗಳ ಹೆಸರಿನಲ್ಲಿ ಆಡುವ ಹನ್ನೊಂದರಲ್ಲಿ ಆಗಾಗ್ಗೆ ಬದಲಾವಣೆ ಮಾಡುತ್ತಿರುವುದು ಕೂಡ ಆಟಗಾರರನ್ನು ಚಿಂತೆಗೀಡು ಮಾಡಿದೆ.
ಇದಕ್ಕೆ ತಾಜಾ ಉದಾಹರಣೆ ಶುಭ್ಮನ್ ಗಿಲ್. ಏಷ್ಯಾಕಪ್ ವೇಳೆ ಗಿಲ್ ಅವರನ್ನು ಟಿ20 ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಯಿತು. ಇದರಿಂದ ಸಂಜು ಸ್ಯಾಮ್ಸನ್ ಆರಂಭಿಕನ ಸ್ಥಾನ ಕಳೆದುಕೊಂಡರು. ಆ ಬಳಿಕ ತಂಡದಿಂದಲೇ ಹೊರಬಿದ್ದರು. ಇದೀಗ ಗಿಲ್ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಅಲ್ಲದೆ ಸಂಜು ಸ್ಯಾಮ್ಸನ್ ಮತ್ತೆ ಆರಂಭಿಕರಾಗಿದ್ದಾರೆ.
ಇಂತಹ ಬದಲಾವಣೆಯಿಂದಾಗಿ ಆಟಗಾರರಲ್ಲಿ ಅಸುರಕ್ಷಿತತೆ ಮನೆ ಮಾಡಿದೆ. ಅದರಲ್ಲೂ ಆರಂಭಿಕನಾಗಿ ಆಡುತ್ತಿದ್ದ ಆಟಗಾರರನ್ನು ಏಕಾಏಕಿ ತಂಡದಿಂದ ಕೈ ಬಿಟ್ಟು ಇದೀಗ ಮತ್ತೆ ಆರಂಭಿಕನಾಗಿ ಆಯ್ಕೆ ಮಾಡಿದರೆ ಆತನ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂದಾಜು ಕೂಡ ಟೀಮ್ ಇಂಡಿಯಾ ಕೋಚ್ಗೆ ಇಲ್ಲವಾ ಎಂಬ ಪ್ರಶ್ನೆಯೊಂದುಬ ಹುಟ್ಟಿಕೊಂಡಿದೆ.
ರಾಹುಲ್ ದ್ರಾವಿಡ್ ಅವರ ಅವಧಿಯಲ್ಲಿ, ಡ್ರೆಸ್ಸಿಂಗ್ ರೂಮ್ ಸಂತೋಷ ಮತ್ತು ಆತ್ಮವಿಶ್ವಾಸದಿಂದ ತುಂಬಿತ್ತು. ಆಟಗಾರರು ಹಿಂಜರಿಕೆಯಿಲ್ಲದೆ ಆಡುತ್ತಿದ್ದರು. ಗೌತಮ್ ಗಂಭೀರ್ ಅವಧಿಯಲ್ಲಿ ಎಲ್ಲವೂ ಕಟ್ಟುನಿಟ್ಟಾಗಿದೆ. ಅವರ ಈ ವರ್ತನೆಯು ಆಟಗಾರರ ಮೇಲೆ ಪರಿಣಾಮ ಬೀರುತ್ತಿದೆ.
ಇತ್ತೀಚೆಗೆ, ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲೇ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ತಂಡದ ನಿರ್ವಹಣೆಯ ಬಗ್ಗೆ ಧ್ವನಿಯೆತ್ತಿದ್ದರು. ಟೀಮ್ ಇಂಡಿಯಾ ಆಟಗಾರರಲ್ಲಿ ” ಭಯ ಮತ್ತು ಅಭದ್ರತೆಯ ವಾತಾವರಣ ” ವನ್ನು ಸೃಷ್ಟಿಸುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದರು.
ಇಂತಹ ವಾತಾವರಣ ನಿರ್ಮಾಣವಾದರೆ ತಂಡದಲ್ಲಿ ಬಹಳಷ್ಟು ಗೊಂದಲಗಳಾಗುತ್ತದೆ . ಆಟಗಾರರಿಗೆ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ. ಇದೇ ಕಾರಣದಿಂದಾಗಿ ಎಲ್ಲರೂ ಭಯದಿಂದ ಆಡುತ್ತಿದ್ದಾರೆ ಎಂದು ಮೊಹಮ್ಮದ್ ಕೈಫ್ ವಿವರಿಸಿದ್ದರು. ಇದಕ್ಕೆ ಉದಾಹರಣೆಯಾಗಿ, ಸರ್ಫರಾಝ್ ಖಾನ್ ಶತಕ ಗಳಿಸಿದರೂ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ . ಏತನ್ಮಧ್ಯೆ, ಸೌತ್ ಆಫ್ರಿಕಾ ವಿರುದ್ಧ 87 ರನ್ ಗಳಿಸಿದರೂ ಸಾಯಿ ಸುದರ್ಶನ್ ಅವರನ್ನು ಮುಂದಿನ ಪಂದ್ಯದಿಂದ ಕೈಬಿಡಲಾಯಿತು . ಒಬ್ಬ ಆಟಗಾರ 100 ರನ್ ಗಳಿಸಿದ ನಂತರವೂ ಆತ್ಮವಿಶ್ವಾಸವನ್ನು ಗಳಿಸದಿದ್ದರೆ, ಇತರ ಆಟಗಾರರು ಹೇಗೆ ಆತ್ಮವಿಶ್ವಾಸವನ್ನು ಗಳಿಸುತ್ತಾರೆ? ” ಎಂದು ಕೈಫ್ ಪ್ರಶ್ನಿಸಿದ್ದರು.
ಇದೀಗ ಪಿಟಿಐ ವರದಿಯಲ್ಲೂ, ಗೌತಮ್ ಗಂಭೀರ್ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಆಟಗಾರರಲ್ಲಿ ಅಸುರಕ್ಷಿತ ಭಾವನೆ ಮೂಡಿದೆ ತಿಳಿಸಲಾಗಿದೆ. ಅಲ್ಲದೆ ಆಟಗಾರರು ತಮ್ಮ ಸ್ಥಾನಗಳ ಬಗ್ಗೆ ಚಿಂತಿತರಾಗಿದ್ದಾರೆ. ಇಂತಹ ಕಾರಣಗಳಿಂದಾಗಿ ಟೀಮ್ ಇಂಡಿಯಾ ಆಟಗಾರರು ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ. ಈ ಸಮಸ್ಯೆಗಳನ್ನು ಸರಿದೂಗಿಸಿ ಗೌತಮ್ ಗಂಭೀರ್ ಮತ್ತೊಮ್ಮೆ ಭಾರತ ತಂಡಕ್ಕೆ ವಿಶ್ವಕಪ್ ಗೆದ್ದು ಕೊಡಲಿದ್ದಾರಾ ಕಾದು ನೋಡಬೇಕಿದೆ.
ಚಾಮರಾಜನಗರ, ಡಿಸೆಂಬರ್ 28: ಡಿಜೆ ವಾಹನ ವಶಕ್ಕೆ ಪಡೆದ ಪೊಲೀಸರ ನಡೆಗೆ ಆಕ್ರೋಶಗೊಂಡು ಹನುಮ ಭಕ್ತರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಹನುಮ ಜಯಂತಿ ಹಿನ್ನೆಲೆ ನಿನ್ನೆ ಸಂಜೆ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಈ ವೇಳೆ ಆಯೋಜಕರು ಅನುಮತಿ ಪಡೆಯದೆ ಡಿಜೆ ಬಳಸಿದ ಕಾರಣ ಟ್ರ್ಯಾಕ್ಟರ್ ಸಮೇತ ಪೊಲೀಸರು ಡಿಜೆ ವಶಕ್ಕೆ ಪಡೆದಿದ್ದರು. ಪೊಲೀಸರು ವಾಹನ ವಶಕ್ಕೆ ಪಡೆಯುತ್ತಿದ್ದಂತೆ ರೊಚ್ಚಿಗೆದ್ದ ಹನುಮ ಭಕ್ತರು, ರಾತ್ರಿ ಗುಂಡ್ಲುಪೇಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮೈಕ್ ಹಾಗೂ ಸೌಂಡ್ ಬಾಕ್ಸ್ ಬಳಸಲು ಅನುಮತಿ ಪಡೆದಿರುವುದಾಗಿ ತಿಳಿಸಿದ್ದು, ರಾಜಕೀಯ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ವಾರಂತ್ಯದಲ್ಲಿ ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ (BBK 12) ಶೋ ನಡೆಸಿಕೊಡಲು ಸಾಧ್ಯವಾಗಿಲ್ಲ. ಅವರ ಬದಲಿಗೆ ಬೇರೆ ಬೇರೆ ಅತಿಥಿಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಭಾನುವಾರದ (ಡಿಸೆಂಬರ್ 28) ಸಂಚಿಕೆಗೆ ನಟಿ, ನಿರೂಪಕಿ ಅನುಪಮಾ ಗೌಡ ಅವರು ಆಗಮಿಸಿದ್ದಾರೆ. ದೊಡ್ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಅವರು ಚುಟುವಟಿಕೆ ನೀಡಿದ್ದಾರೆ. ಈ ವೇಳೆ ಮ್ಯೂಟೆಂಟ್ ರಘು ಬಗ್ಗೆ ಅಶ್ವಿನಿ ಗೌಡ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅದೇ ರೀತಿ, ಅಶ್ವಿನಿ ಗೌಡ (Ashwini Gowda) ಕುರಿತು ರಘು ಅವರು ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘14ನೇ ವಾರದಲ್ಲಿ ಇದ್ದೇವೆ. ಆವತ್ತು ರಘುನ ಕಂಡೆ, ಇವತ್ತು ಒಂದು ಮಗುನಾ ನೋಡಿದೆ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ‘ವ್ಯಕ್ತಿಯಾಗಿ ಅಶ್ವಿನಿ ಗೌಡ ನನಗೆ ತುಂಬಾ ಇಷ್ಟ’ ಎಂದು ರಘು ಹೇಳಿದ್ದಾರೆ. ಇದನ್ನೆಲ್ಲ ಕಂಡು ಗಿಲ್ಲಿ ನಟ ಅವರಿಗೆ ಅಚ್ಚರಿ ಆಗಿದೆ. ‘ನಿಜವಾಗಿಯೂ ಇದು ಸ್ವಯಂವರ ಥರ ಫೀಲ್ ಆಗುತ್ತಿದೆ’ ಎಂದು ಗಿಲ್ಲಿ ನಟ (Gilli Nata) ಅವರು ಹೇಳಿದ್ದಾರೆ.