ಬೆಂಗಳೂರಲ್ಲಿ ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ – Kannada News | Bengaluru: Greater Bengaluru Authority Demolishes Unauthorized Houses; Over 190 Structures Razed

ಬೆಂಗಳೂರು, ಡಿಸೆಂಬರ್​ 20: ನಗರದಲ್ಲಿ ಅನಧಿಕೃತ ನಿವೇಶನಗಳ ವಿರುದ್ಧ ಜಿಬಿಎ ಸಮರ ಸಾರಿದೆ. ಇಂದು ಬೆಳ್ಳಂಬೆಳಗ್ಗೆ ಶ್ರೀನಿವಾಸಪುರದ ಕೋಗಿಲು ಲೇಔಟ್​ನಲ್ಲಿ 200 ಹೆಚ್ಚು ಮನೆಗಳ ತೆರವು ಕಾರ್ಯ ಮಾಡಲಾಗಿತು. 14 ಎಕರೆ ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 190ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಲಾಗಿದೆ. ಜಿಬಿಎ ಕಾರ್ಯಕ್ಕೆ ಸೂರು ಕಳೆದುಕೊಂಡವರು ಹಿಡಿಶಾಪ ಹಾಕಿದ್ದಾರೆ. ಒಂದೇ ಒಂದೂ ಸೂಚನೆ ಕೊಡದೇ ಕೆಡವಿದ್ದಾರೆ ಅಂತಾ ಕೆಂಡಕಾರದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನೀವು ಕೂಡ ಮುಖದವರೆಗೂ ಬ್ಲಾಂಕೆಟ್ ಹೊದ್ದು ಮಲಗ್ತೀರಾ ಈ ಅಭ್ಯಾಸ ಎಷ್ಟು ಡೇಂಜರ್ ನೋಡಿ! – Kannada News | Face Covering at Night: How It Affects Breathing & Health

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ದಿನದಿಂದ ದಿನಕ್ಕೆ ಚಳಿ (winter) ಹೆಚ್ಚಾಗುತ್ತಿದೆ. ಈ ರೀತಿ ತಾಪಮಾನ ಕಡಿಮೆಯಾದಾಗ, ಸ್ವಾಭಾವಿಕವಾಗಿ ಚಳಿಯಿಂದ ರಕ್ಷಣೆ ಪಡೆಯಲು ಮುಖದ ವರೆಗೆ ಬೆಡ್ ಶಿಟ್ ಅಥವಾ ಕಂಬಳಿ ಹೊದ್ದು ಮಲಗುತ್ತೇವೆ. ಇದು ಉಷ್ಣತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಬಹಳ ಆರಾಮದಾಯಕವೆನಿಸುತ್ತದೆ, ಆದರೆ ಇತ್ತೀಚಿನ ಸಂಶೋಧನೆ ಹೇಳುವ ಪ್ರಕಾರ, ಈ ರೀತಿಯ ಅಭ್ಯಾಸ ಉಸಿರಾಟದ ವ್ಯವಸ್ಥೆಯ ಮೇಲೆ ಗಮನಾರ್ಹ ಒತ್ತಡವನ್ನು ಬೀರುತ್ತದೆ ಎಂದು ತಿಳಿಸಿದೆ. ಹೌದು, ರಾತ್ರಿ ಮಲಗುವಾಗ ಮುಖ ಮುಚ್ಚಿಕೊಳ್ಳುವುದರಿಂದ (Face Covering at Night) ಉಸಿರಾಟ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾದರೆ ಇದು ಆರೋಗ್ಯದ ಮೇಲೆ ಯಾವ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆ ಮಾಡುವ ಸಮಯದಲ್ಲಿ ಮುಖವನ್ನು ಕಂಬಳಿ ಅಥವಾ ಬೆಡ್ ಶಿಟ್ ನಿಂದ ಮುಚ್ಚಿಕೊಂಡು ಮಲಗುವುದರಿಂದ, ನಾವು ಹೊರಹಾಕುವ ಗಾಳಿ (ಕಾರ್ಬನ್ ಡೈಆಕ್ಸೈಡ್) ಹೊರಹೋಗಲು ಜಾಗವಿಲ್ಲದೆ ಅಲ್ಲಿಯೇ ಸಿಲುಕುತ್ತದೆ. ಪರಿಣಾಮವಾಗಿ, ನಾವು ಅರಿವಿಲ್ಲದೆಯೇ ಪದೇ ಪದೇ ಇಂಗಾಲದ ಡೈಆಕ್ಸೈಡ್ ಅನ್ನು ಉಸಿರಾಡುತ್ತೇವೆ. ಇದು ದೇಹವು ಪಡೆಯುವ ತಾಜಾ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಬೆಳಿಗ್ಗೆ ಎಚ್ಚರಗೊಳ್ಳುವಾಗ ತಲೆನೋವು ಕಂಡುಬರುವುದು, ದಿನವಿಡೀ ದಣಿದ ಅನುಭವ, ಏಕಾಗ್ರತೆಯ ಕೊರತೆ, ನಿದ್ರೆ ಮಾಡುವಾಗ ಆಗಾಗ ಎಚ್ಚರಗೊಳ್ಳುವಂತಹ ಸಮಸ್ಯೆಗಳು ಉದ್ಭವಿಸಬಹುದು. ಅಷ್ಟು ಮಾತ್ರವಲ್ಲ, ಮುಖ ಮುಚ್ಚಿಕೊಳ್ಳುವುದರಿಂದ ಆ ಪ್ರದೇಶದಲ್ಲಿ ತೇವಾಂಶ ಮತ್ತು ಬೆವರು ಸಂಗ್ರಹವಾಗುತ್ತದೆ. ಕಂಬಳಿಯ ಮೇಲಿನ ಧೂಳು ಮತ್ತು ಬ್ಯಾಕ್ಟೀರಿಯಾಗಳು ಕೂಡ ಚರ್ಮದ ಸಂಪರ್ಕಕ್ಕೆ ಬರಬಹುದು, ಇದು ಮೊಡವೆ ಮತ್ತು ಉರಿಯೂತದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ನಿದ್ರೆಯ ಸಮಯದಲ್ಲಿ ದೇಹದ ಉಷ್ಣತೆಯ ಹೆಚ್ಚಳವು ನಿದ್ರೆಗೆ ಅಡ್ಡಿಪಡಿಸುತ್ತದೆ.

ಕಂಬಳಿಯಿಂದ ಮುಖ ಮುಚ್ಚಿ ಮಲಗುವ ಅಭ್ಯಾಸ ಯಾರಿಗೆ ಹೆಚ್ಚು ಅಪಾಯಕಾರಿ?

ಈ ಅಭ್ಯಾಸವು ಅಸ್ತಮಾ, ಸೈನಸ್ ಮತ್ತು ಅಲರ್ಜಿ ಸಮಸ್ಯೆಗಳಿರುವವರಿಗೆ ತುಂಬಾ ಅಪಾಯಕಾರಿ. ಅದರಲ್ಲಿಯೂ ಶಿಶುಗಳಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ

ಮುನ್ನೆಚ್ಚರಿಕೆ ಅಥವಾ ಪರ್ಯಾಯಗಳು:

  • ಯಾವಾಗಲೂ ಕಂಬಳಿ ಅಥವಾ ಬೆಡ್ ಶಿಟ್ ಅನ್ನು ಭುಜದವರೆಗೆ ಮಾತ್ರ ಹೊದ್ದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
  • ಬೆಚ್ಚಗಿರಲು ದಪ್ಪ ಬಟ್ಟೆ ಅಥವಾ ಸಾಕ್ಸ್‌ಗಳನ್ನು ಧರಿಸಿ.
  • ಹತ್ತಿಯ ಹಾಸಿಗೆಯನ್ನು ಬಳಸಿ.
  • ಬೆಳಕು ಬರದೆ ಕತ್ತಲೆಯಾಗಬೇಕೆಂದರೆ ಮುಖದ ಮೇಲೆ ಕಂಬಳಿ ಅಥವಾ ಬೆಡ್ ಶಿಟ್ ಹಾಕಿಕೊಳ್ಳುವ ಬದಲು ಐ ಮಾಸ್ಕ್ ಧರಿಸಿ.
  • ನಿಮ್ಮ ಪಾದಗಳ ಬಳಿ ಬಿಸಿನೀರಿನ ಬಾಟಲಿಗಳನ್ನು ಇಡುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ – Kannada News | Bigg Boss Kannada season 12 new promo released

ಬಿಗ್​​ಬಾಸ್ (Bigg Boss) ಮನೆಯಲ್ಲಿ ಕೆಲವೊಮ್ಮೆ ಸ್ಪರ್ಧಿಗಳು ಮಕ್ಕಳಿಗಿಂತಲೂ ಕಡೆಯಾಗಿ ವರ್ತಿಸುತ್ತಾರೆ. ತೀರ ಸಿಲ್ಲಿ ವಿಷಯಗಳಿಗೆ ಸಿಲ್ಲಿಯಾಗಿ ಜಗಳ ಮಾಡುತ್ತಾರೆ. ಉದ್ದೇಶಪೂರ್ವಕವಾಗಿ ಹಠ ಮಾಡುತ್ತಾರೆ. ಇದ್ದಕ್ಕಿದ್ದಂತೆ ಕಣ್ಣೀರು ಹಾಕುತ್ತಾರೆ ಇನ್ನೂ ಏನೇನೋ. ಕಳೆದ ವಾರ ಬಿಗ್​​ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ಆಡಿಸಲಾಗಿತ್ತು. ಅದಕ್ಕೆ ರಾಶಿಕಾ ಉಸ್ತುವಾರಿ ಆಗಿದ್ದರು. ಆ ಟಾಸ್ಕ್​​​ ಗೊಂದಲಗಳ ಗೂಡಾಗಿತ್ತು. ಇದೀಗ ಸುದೀಪ್ ಅವರು ಆ ಟಾಸ್ಕ್ ವಿಷಯನ್ನೇ ಮುಖ್ಯವಾಗಿ ಹಿಡಿದುಕೊಂಡು ಇಡೀ ಮನೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಆಧುನಿಕ ಸಮಾಜದ ಸಂಬಂಧಗಳ ಕಡೆಗೆ ಬೆಳಕು ಚೆಲ್ಲುವ ಒಂದು ಪುಟ್ಟ ಕಾದಂಬರಿ’ನಮಗೂಂದು ಸೊಸೆ ಬೇಕು!’ – Kannada News | K. Satyanarayana’s ‘Namagoondu Sose Beku!’: Family, Marriage and Society

K. Satyanarayana’s ‘Namagoondu Sose Beku!’

ಕನ್ನಡದ ಸಾಹಿತ್ಯ ಲೋಕದಲ್ಲಿ ಕೆ. ಸತ್ಯನಾರಾಯಣ ಅವರು ಅತ್ಯಂತ ಪ್ರಮುಖ ಕಥೆಗಾರರು ಮತ್ತು ಕಾದಂಬರಿಕಾರರು. ಅವರ ಲೇಖನಿಯಲ್ಲಿ ಮೂಡಿದ ಇತ್ತೀಚಿನ ಕೃತಿಯೆಂದರೆ ‘ನಮಗೂಂದು ಸೊಸೆ ಬೇಕು!’ ಕಾದಂಬರಿ. ಇದು ಸಮಾಜದಲ್ಲಿನ ಕೌಟುಂಬಿಕ ಸಂಬಂಧಗಳು, ವಿವಾಹ ವ್ಯವಸ್ಥೆ ಮತ್ತು ಮನೆಗೆ ಸೊಸೆಯನ್ನು ಹುಡುಕುವ ಪ್ರಕ್ರಿಯೆಯಲ್ಲಿ ಎದುರಾಗುವ ಹಾಸ್ಯ ಹಾಗೂ ವಾಸ್ತವದ ಸಂಗತಿಗಳನ್ನು ಆಧರಿಸಿದ ಕಥೆಯಾಗಿದೆ.

ಏನಿದೆ ಕಾದಂಬರಿಯಲ್ಲಿ?

ಈ ಕಾದಂಬರಿಯು ಮಹಾಭಾರತದ ಉತ್ತರೆಯ ಮುಗ್ಧತೆ ಮತ್ತು ವಿರಾಟರಾಜನರ ಮನೆಯ ಕಥೆಯೊಂದಿಗೆ ಆಧುನಿಕ ಸಮಾಜದ ಸಂಬಂಧಗಳ ಕಡೆಗೆ ಬೆಳಕು ಚೆಲ್ಲುವ ಒಂದು ಪುಟ್ಟ ಕಾದಂಬರಿ. ಪುಸ್ತಕವು ಕುಟುಂಬದ ಮೌಲ್ಯಗಳು, ಸಂಬಂಧಗಳಲ್ಲಿನ ಸಂಘರ್ಷ, ಮತ್ತು ತಲೆಮಾರುಗಳ ನಡುವಿನ ವ್ಯತ್ಯಾಸಗಳನ್ನು ವಾಸ್ತವಿಕವಾಗಿ ಚಿತ್ರಿಸುವುದಲ್ಲದೇ, ವಿಶೇಷವಾಗಿ ಸೊಸೆಯ ಪಾತ್ರ ಮತ್ತು ಕುಟುಂಬದ ಜವಾಬ್ದಾರಿಗಳ ಸುತ್ತ ಸುತ್ತುತ್ತದೆ. ಓದುಗರು ಕಾದಂಬರಿ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದರೂ, ಅದರ ಸರಳ ನಿರೂಪಣೆ ಮತ್ತು ಭಾವನಾತ್ಮಕ ಆಳವು ಗಮನ ಸೆಳೆಯುತ್ತದೆ. ಇದು ಕೇವಲ ಯುದ್ಧಕ್ಕೆ ಸೀಮಿತವಾಗದೆ, ಉತ್ತರೆಯ ಮುಗ್ಧತೆ ಮತ್ತು ಬದುಕಿನ ಸಂಜೆಯವರೆಗಿನ ಪಯಣವನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ.

ಮತ್ಸ್ಯ ದೇಶದ ಅರಮನೆಯ ವೈಭವದೊಂದಿಗೆ ಆರಂಭವಾಗಿ, ಸೊಸೆಯ ಹುಡುಕಾಟದ ಮೂಲಕ ಕುಟುಂಬದ ಸಂಬಂಧಗಳ ಸೂಕ್ಷ್ಮತೆಗಳನ್ನು ವಿವರಿಸುವ ಈ ಕಾದಂಬರಿ, ಆಧುನಿಕ ಸೊಸೆ ಮತ್ತು ಹಳೆಯ ಪೀಳಿಗೆಯ ಆಲೋಚನೆಗಳ ನಡುವಿನ ಸಂಘರ್ಷ, ಮಹಿಳೆಯರ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ಚರ್ಚಿಸುತ್ತದೆ. ಕಾದಂಬರಿಯು ಸರಳ ಭಾಷೆಯಲ್ಲಿದ್ದು, ಸುಲಭವಾಗಿ ಓದಿಸಿಕೊಳ್ಳುವಂತಿದೆ. ಪಾತ್ರಗಳ ಭಾವನಾತ್ಮಕ ಆಳ ಮತ್ತು ವಾಸ್ತವಿಕ ಚಿತ್ರಣ ಓದುಗರಿಗೆ ಹತ್ತಿರವಾಗುವಂತೆ ಮಾಡಿದರೆ, ಸೊಸೆಯ ಪಾತ್ರದ ಮೂಲಕ ಭಾರತೀಯ ಸಮಾಜದಲ್ಲಿನ ಮಹಿಳೆಯರ ಪಾತ್ರದ ವಿಶ್ಲೇಷಣೆಗೆ ಇದು ಒಂದು ಮಾರ್ಗದರ್ಶಿಯಾಗಿದೆ.ಇದು ಕುಟುಂಬದ ನಾಟಕ ಮತ್ತು ಆಧುನಿಕ ಜೀವನದ ಸವಾಲುಗಳನ್ನು ಚೆನ್ನಾಗಿ ನಿರೂಪಿಸುತ್ತದೆ. ಒಟ್ಟಾರೆಯಾಗಿ ‘ನಮಗೊಂದು ಸೊಸೆ ಬೇಕು’ ಒಂದು ಪುಟ್ಟ ಕಾದಂಬರಿಯಾಗಿದ್ದರೂ, ಕುಟುಂಬ ಸಂಬಂಧಗಳ ಕುರಿತು ಆಳವಾದ ಚಿಂತನೆಗೆ ಹಚ್ಚುವ ಕೃತಿಯಾಗಿದೆ. (ವಿವಿಧ ಮೂಲಗಳಿಂದ ಮಾಹಿತಿ ಪಡೆಯಲಾಗಿದೆ)

ಲೇಖಕರ ಬಗ್ಗೆ

ಕೆ. ಸತ್ಯನಾರಾಯಣ ಏಪ್ರಿಲ್ 21, 1954 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಜನಿಸಿದ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದಿದ್ದಾರೆ.ಭಾರತೀಯ ಕಂದಾಯ ಸೇವೆಗೆ ಸೇರಿದ ಇವರು, ಆದಾಯ ತೆರಿಗೆ ಇಲಾಖೆಯಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸಿ, 2014 ರಲ್ಲಿ ಪ್ರಧಾನ ಮುಖ್ಯ ಆಯುಕ್ತರಾಗಿ ನಿವೃತ್ತರಾದರು.ಇವರು ಸುಮಾರು 36 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಕಥೆ, ಕಾದಂಬರಿ, ಪ್ರಬಂಧ ಮತ್ತು ವಿಮರ್ಶೆಗಳಲ್ಲಿ ಸಕ್ರಿಯರಾಗಿದ್ದಾರೆ.ಸಾವಿನ ದಶಾವತಾರ, ಹನ್ನೊಂದನೆಯ ಇಂದ್ರಿಯ, ನಕ್ಸಲ್ ವರಸೆ, ಮತ್ತು ಚಿಕ್ಕಪುಟ್ಟಮ್ಮನವರ ಗೃಹನ್ಯಾಯ, ರಾಜಧಾನಿಯಲ್ಲಿ ಶ್ರೀಮತಿಯರು, ಸನ್ನಿಧಾನ, ವಿಕಲ್ಪ ಎಂದು ಹಲವು ಕೃತಿಗಳನ್ನು ರಚಿಸಿದ್ದಾರೆ.

ಪುಸ್ತಕದ ವಿವರ

ಪುಸ್ತಕದ ಹೆಸರು: ನಮಗೂಂದು ಸೊಸೆ ಬೇಕು, ಲೇಖಕರು: ಕೆ. ಸತ್ಯನಾರಾಯಣ, ಪ್ರಕಾಶಕರು: ವೀರಲೋಕ, ಬೆಲೆ: 150, ಪುಟಗಳ ಸಂಖ್ಯೆ: 139

Source link

ಕಲಬುರಗಿ: ಬಿಜೆಪಿ ಕಾರ್ಯಕರ್ತನ ಮನೆಯಲ್ಲೇ ಪಕ್ಷದ ಕಾರ್ಯಕರ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ – Kannada News | Kalaburagi Incident: BJP Woman Worker Dies After Fire Incident at Party Activist’s House

ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ, ಜ್ಯೋತಿ ಪಾಟೀಲ್

ಕಲಬುರಗಿ, ಡಿಸೆಂಬರ್ 20: ಕಲಬುರಗಿ (Kalaburagi) ಜಿಲ್ಲೆಯ ನಂದಿಕೂರ್ ಗ್ರಾಮದಲ್ಲಿ ಬಿಜೆಪಿ (BJP) ಕಾರ್ಯಕರ್ತೆ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಈ ಘಟನೆ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ ಅವರ ಮನೆಯ ಆವರಣದಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆ ಬಳಿಕ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆತ್ಮಹತ್ಯೆ ನಡೆದ ಮಲ್ಲಿನಾಥ್ ಬಿರಾದಾರರ ಮನೆ ನಂದಿಕೂರ್ ಗ್ರಾಮದಲ್ಲಿದ್ದು, ಘಟನೆ ನಂತರ ಕುಟುಂಬಸ್ಥರು ಮನೆ ಖಾಲಿ ಮಾಡಿಕೊಂಡು ತೆರಳಿದ್ದಾರೆ. ಸದ್ಯ ಮನೆಗೆ ಬೀಗ ಹಾಕಲಾಗಿದ್ದು, ಸ್ಥಳದಲ್ಲಿ ನಿಶ್ಯಬ್ದ ವಾತಾವರಣ ನಿರ್ಮಾಣವಾಗಿದೆ.

ಪೊಲೀಸ್ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಜ್ಯೋತಿ ಪಾಟೀಲ್ ತಡರಾತ್ರಿ ಮಲ್ಲಿನಾಥ್ ಬಿರಾದಾರರ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಮಲ್ಲಿನಾಥ್ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಜ್ಯೋತಿ ಪಾಟೀಲ್ ಬಾಗಿಲು ಬಡಿದಿದ್ದರು. ಮಲ್ಲಿನಾಥ್ ಬಿರಾದಾರ್ ಪತ್ನಿ, ಮೂವರು ಮಕ್ಕಳು ಮನೆಯಲ್ಲಿ ವಾಸಮಾಡುತ್ತಿದ್ದರು. ಇವರು ಬಾಗಿಲು ತೆರೆದ ತಕ್ಷಣ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಜ್ಯೋತಿ ಪಾಟೀಲ್ ಕಲಬುರಗಿಯ ಬ್ರಹ್ಮಪುರ ಬಡಾವಣೆಯ ನಿವಾಸಿಯಾಗಿದ್ದಾರೆ. ಆದರೆ ಈ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಪತಿ ಹೇಳಿದ್ದೇನು?

ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಅವರ ಪತಿ ಚಿದಾನಂದ ಅವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆ ಎಂದು ನನಗೆ ಅನಿಸುತ್ತಿಲ್ಲ. ಅವಳು ಯಾಕೆ ಪೆಟ್ರೋಲ್ ಸುರಿದುಕೊಂಡು ಸಾಯಬೇಕು? ಇದು ಕೊಲೆ ಆಗಿರಬಹುದೆಂಬ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ ಪೊಲೀಸ್! ವಂಚಕನ ಖಾತೆಯಲ್ಲಿ 1000 ಕೋಟಿ ರೂ.ಗೂ ಹೆಚ್ಚು ವಹಿವಾಟು

ಘಟನೆಯ ಎಲ್ಲ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಫರಹತಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣ ಏನು, ಯಾರಾದರೂ ಇದಕ್ಕೆ ಕಾರಣರಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಾಕ್ಷ್ಯ ಸಂಗ್ರಹ ಹಾಗೂ ವಿಚಾರಣೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಿಚರ್ಡ್ ಆಂಟನಿ’ ಸಿನಿಮಾ ಕುರಿತು ರಾಜ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ – Kannada News | Rakshit Shetty’s ‘Richard Anthony’: Raj B Shetty’s Hint Sparks Delay Speculation

ರಕ್ಷಿತ್ ಶೆಟ್ಟಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಕಳೆದ ಕೆಲ ಸಮಯದಿಂದ ಯಾರ ಕಣ್ಣೀಗು ಕಾಣಿಸುತ್ತಿಲ್ಲ. ಅವರು ‘ರಿಚರ್ಡ್ ಆಂಟನಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೇ ರಾಜ್ ಅವರು ನೀಡಿದ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಆ ಚಿತ್ರಕ್ಕಾಗಿ ಇನ್ನೂ ಎಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆ ಮೂಡಿದೆ.

ರಾಜ್ ಬಿ. ಶೆಟ್ಟಿ ಅವರು ‘45’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಟ್ರೇಲರ್​​ನಲ್ಲಿ ಹಿಂಟ್ ಸಿಕ್ಕಿದೆ. ಓರ್ವ ಜನಸಾಮಾನ್ಯನ ಪಾತ್ರದಲ್ಲಿ ರಾಜ್ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಸಂದರ್ಶನಗಳನ್ನು ಅವರು ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ರಕ್ಷಿತ್ ಶೆಟ್ಟಿ ಬಗ್ಗೆಯೂ ಪ್ರಶ್ನೆ ಎದುರಾಗುತ್ತಿದೆ. ಸಂದರ್ಶನ ಒಂದರಲ್ಲಿ ರಾಜ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ‘45’ ಸಿನಿಮಾ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್​ಗೆ ಶಾಕ್

ರಿಷಬ್ ಹಾಗೂ ರಾಜ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತಿದೆ. ಆದರೆ, ಇದನ್ನು ರಾಜ್ ಅಲ್ಲಗಳೆದಿದ್ದಾರೆ. ಅಲ್ಲದೆ, ಎಲ್ಲರ ಸಿನಿಮಾಗಳಲ್ಲಿ ಕೆಲಸ ಮಾಡಲು ಅವರು ಸಿದ್ಧರಿದ್ದಾರಂತೆ. ‘ರಕ್ಷಿತ್ ಅವರು ರಿಚರ್ಡ್​ ಆಂಟನಿ ಸ್ಟಾರ್ಟ್ ಮಾಡಿದ್ರು ಅಂದ್ರೆ’ ಎಂದು ಏನನ್ನೋ ಹೇಳಲು ರಾಜ್ ಮುಂದಾದರು. ‘ನಾನು ಅದರಲ್ಲಿ ಕೆಲಸ ಮಾಡಲು ರೆಡಿ’ ಎಂದು ಅವರು ಹೇಳಲು ಮುಂದಾಗಿರಬಹುದು. ಆದರೆ, ಫ್ಯಾನ್ಸ್ ಇಲ್ಲಿ ಗಮನಿಸಿದ್ದೇ ಬೇರೆ. ಈ ವಿಡಿಯೋಗೆ ಫ್ಯಾನ್ಸ್ ರಿಯಾಕ್ಟ್ ಮಾಡಿದ್ದಾರೆ.

‘ಮಾಡಿದ್ರು ಅಂದ್ರೆ’ ಎಂಬುದರ ನಿಜವಾದ ಅರ್ಥವೇನು ಎಂದು ಅನೇಕರು ಕೇಳಿದ್ದಾರೆ. ‘ಹಾಗಾದ್ರೆ ಅವರು ಸಿನಿಮಾ ಕೆಲಸನ ಇನ್ನೂ ಆರಂಭಿಸಿಲ್ಲವೇ’ ಎಂದು ಅನೇಕರು ಕೇಳುತ್ತಿದ್ದಾರೆ. 2023ರಲ್ಲಿ ಬಂದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:48 pm, Sat, 20 December 25

Source link

ಹುಷಾರಿಲ್ಲ ಅಂತಾ ಆಸ್ಪತ್ರೆಗೆ ಹೋದ್ರೆ ಡಾಕ್ಟರ್ ನಾಲಿಗೆ ತೋರಿಸಿ ಎನ್ನುವುದಕ್ಕೆ ಕಾರಣ ಏನ್ ಗೊತ್ತಾ? – Kannada News | Tongue Colors & What They Mean: Vitamin Deficiency Signs

ನೀವು ಗಮನಿಸಿರಬಹುದು, ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಗೆ ಹೋದರೆ, ವೈದ್ಯರು ಮೊದಲು ನಾಲಿಗೆ ತೋರಿಸಲು ಹೇಳುತ್ತಾರೆ. ಆದರೆ ನಮ್ಮ ಆರೋಗ್ಯಕ್ಕೂ ಇದಕ್ಕೂ ಏನು ಸಂಬಂಧ ಎಂದು ಎಂದಾದರೂ ಯೋಚಿಸಿದ್ದೀರಾ… ಏಕೆಂದರೆ ನಾಲಿಗೆ (Tongue) ಆರೋಗ್ಯಕ್ಕೆ ಹಿಡಿದ ಕೈ ಗನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ, ನಮ್ಮ ದೇಹದ ಆಂತರಿಕ ಆರೋಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯವಾಗಿ, ಆರೋಗ್ಯಕರ ನಾಲಿಗೆ ಗುಲಾಬಿ ಬಣ್ಣದಲ್ಲಿದ್ದು ಸ್ವಲ್ಪ ತೇವವಾಗಿರುತ್ತದೆ. ಈ ಬಣ್ಣದಲ್ಲಿನ ಸ್ವಲ್ಪ ಬದಲಾವಣೆ ಕೂಡ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದಾಗಿದೆ. ಹಾಗಾದರೆ ಯಾವ ಬಣ್ಣ ಯಾವ ರೋಗವನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಬಣ್ಣವು ಯಾವ ರೋಗವನ್ನು ಹೇಳುತ್ತದೆ?

ಬಿಳಿ ಲೇಪನ: ನಾಲಿಗೆಯ ಮೇಲೆ ಬಿಳಿ ಪದರ ರೂಪುಗೊಂಡಿದ್ದರೆ, ಅದು ಬ್ಯಾಕ್ಟೀರಿಯಾದ ಸೋಂಕು ಅಥವಾ ಬಾಯಿಯ ಸ್ವಚ್ಛವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಮಕ್ಕಳು, ವೃದ್ಧರು ಮತ್ತು ಮಧುಮೇಹ ಅಥವಾ ಉಸಿರಾಟದ ಸಂಬಂಧಿ ಕಾಯಿಲೆ ಇರುವವರಲ್ಲಿ ಕಂಡುಬರುತ್ತದೆ.

ಕೆಂಪು ನಾಲಿಗೆ: ನಾಲಿಗೆ ತುಂಬಾ ಕೆಂಪಗಾಗಿದ್ದರೆ, ಅದು ದೇಹದಲ್ಲಿ ವಿಟಮಿನ್ ಬಿ -12 ಕೊರತೆ ಅಥವಾ ತೀವ್ರ ಜ್ವರವನ್ನು ಸೂಚಿಸುತ್ತದೆ.

ಹಳದಿ ಬಣ್ಣ: ನಾಲಿಗೆ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಕಾಮಾಲೆ ಅಥವಾ ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಬಾಯಿ ಸ್ವಚ್ಛವಾಗಿಲ್ಲದಿರುವುದು ಕೂಡ ಇದಕ್ಕೆ ಕಾರಣವಾಗಬಹುದು.

ನೇರಳೆ ಬಣ್ಣ: ನಾಲಿಗೆ ನೇರಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಅದು ಹೃದಯ ಸಂಬಂಧಿತ ಸಮಸ್ಯೆ ಅಥವಾ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತಿಲ್ಲ ಎಂಬುದನ್ನು ಹೇಳುತ್ತದೆ.

ಗಾಢ ಅಥವಾ ಕಪ್ಪು ಬಣ್ಣ: ತೀವ್ರವಾದ ಬ್ಯಾಕ್ಟೀರಿಯಾದ ಸೋಂಕಿನ ಸಂದರ್ಭಗಳಲ್ಲಿ ಅಥವಾ ಧೂಮಪಾನ ಅಥವಾ ಮಾದಕ ದ್ರವ್ಯ ಸೇವನೆಯ ಅಭ್ಯಾಸ ಹೊಂದಿರುವವರಲ್ಲಿ ನಾಲಿಗೆ ಗಾಢ ಬಣ್ಣಕ್ಕೆ ತಿರುಗುತ್ತದೆ.

ಕಂದು ಬಣ್ಣ: ನಾಲಿಗೆ ಕಂದು ಬಣ್ಣದಲ್ಲಿದ್ದರೆ, ಅದು ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯನ್ನು ಸೂಚಿಸುತ್ತದೆ.

ಕಿತ್ತಳೆ ಬಣ್ಣ: ಒಣ ಬಾಯಿ ಅಥವಾ ಕಳಪೆ ನೈರ್ಮಲ್ಯದಿಂದಾಗಿ ನಾಲಿಗೆಯ ಮೇಲೆ ಕಿತ್ತಳೆ ಬಣ್ಣ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: 30 ದಿನ ಮಾಂಸಾಹಾರ ಸೇವಿಸದಿದ್ದರೆ ಏನಾಗುತ್ತೆ ನೋಡಿ…

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

  • ನಾಲಿಗೆಯ ಬಣ್ಣದಲ್ಲಿನ ಬದಲಾವಣೆಯು ಎರಡು ವಾರಗಳಿಗಿಂತ ಹೆಚ್ಚು ಕಾಲ ಕಂಡುಬರುವುದು.
  • ಬಣ್ಣ ಬದಲಾವಣೆಯೊಂದಿಗೆ ಜ್ವರ, ಗಂಟಲು ನೋವು ಅಥವಾ ಹೊಟ್ಟೆ ನೋವು.
  • ನಾಲಿಗೆಯ ಮೇಲೆ ಅಸಾಮಾನ್ಯ ಕಲೆಗಳು ಅಥವಾ ನೋವು ಕಾಣಿಸಿಕೊಳ್ಳುವುದು.

ಜೀರ್ಣಕ್ರಿಯೆಯ ತೊಂದರೆಗಳು, ಅಧಿಕ ರಕ್ತದೊತ್ತಡ ಮತ್ತು ಕೆಲವು ರೀತಿಯ ಕ್ಯಾನ್ಸರ್ ಲಕ್ಷಣಗಳು ಸಹ ಆರಂಭದಲ್ಲಿ ನಾಲಿಗೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಪ್ರತಿದಿನ ಹಲ್ಲುಜ್ಜುವಾಗ ನಾಲಿಗೆಯನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಮಾಡಿಕೊಳ್ಳುವುದು ಒಳ್ಳೆಯದು. ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದರೆ, ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬಂದಿವೆ ಕೆಲ ಆಸಕ್ತಿಗಳ ಸಿನಿಮಾಗಳು: ಇಲ್ಲಿದೆ ಪಟ್ಟಿ – Kannada News | OTT Release this week from December 15 to December 20

ರಶ್ಮಿಕಾ ಮಂದಣ್ಣ ನಟಿಸಿರುವ ಹಿಂದಿ ಸಿನಿಮಾ ‘ಥಮ’ ಈ ವಾರ ಒಟಿಟಿಗೆ ಬಂದಿದೆ. ಆಯುಷ್ಮಾಕ್ ಖುರಾನಾ, ನವಾಜುದ್ದೀನ್ ಸಿದ್ಧಿಖಿ ನಟಿಸಿರುವ ಈ ಹಾರರ್ ಸಿನಿಮಾ ಡಿಸೆಂಬರ್ 16ಕ್ಕೆ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಕಂಡಿದೆ.

Source link

ಟೀಮ್ ಇಂಡಿಯಾದಿಂದ ಗಿಲ್​ಗೆ ಗೇಟ್ ಪಾಸ್: ಭಾರತ ತಂಡದಲ್ಲಿ 2 ಬದಲಾವಣೆ – Kannada News | India Squad For T20 World Cup 2026: Shubman Gill Dropped

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

Video: ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ

ಹಾಪುರ್, ಡಿಸೆಂಬರ್ 20: ಉತ್ತರ ಪ್ರದೇಶದ ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯ ಹಾಪುರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಜೀವಕ್ಕೆ ಕುತ್ತು ತರಬಹುದಾದ ಅಪಾಯಕಾರಿ ಸಾಹಸವನ್ನು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿಯ ಮೇಲಿರುವ ರೈಲ್ವೆ ಸೇತುವೆಯ ಮೇಲೆ ವ್ಯಕ್ತಿಯೊಬ್ಬ ನೇತಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಜನನಿಬಿಡ ರಸ್ತೆಯಲ್ಲಿ ಭಾರೀ ವಾಹನಗಳು ಮತ್ತು ಕಾರುಗಳು ಕೆಳಗೆ ಹಾದು ಹೋಗುವಾಗ ಸ್ಟಂಟ್ ಮಾಡಿದ್ದಾನೆ. ಈ ಸಾಹಸವನ್ನು ಕೇವಲ ರೆಕಾರ್ಡಿಂಗ್ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಯಾವುದೇ ಸುರಕ್ಷತಾ ಸಾಧನಗಳು ಆತನ ಬಳಿ ಇರಲಿಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Exit mobile version