Headlines

ಮಳೆ ಅಭಾವದಿಂದ ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ – Kannada News | Karnataka Drought: Farmers Uproot Crops, Mantralaya Faces Severe Water Scarcity

ರಾಯಚೂರು, ಆಗಸ್ಟ್​​ 04: ಕರ್ನಾಟಕದ ಹಲವು ಜಿಲ್ಲೆಗಳು ಭೀಕರ ಬರಗಾಲದ ಕರಿನೆರಳಿನಲ್ಲಿವೆ. ಕೆಲವೆಡೆ ಮಳೆ ಕರುಣೆ ತೋರಿದರೂ, ಬಹುತೇಕ ಕಡೆ ಮಳೆ ಕೈಕೊಟ್ಟಿದೆ. ಇದರ ಪರಿಣಾಮವಾಗಿ ರೈತರು ತಾವು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಮಳೆಯಿಲ್ಲದೆ ಹತಾಶರಾಗಿ ಹಲವೆಡೆ ಹೆಸರು, ಉದ್ದು ಸೇರಿದಂತೆ ಇತರೆ ಬೆಳೆಗಳನ್ನು ಕಿತ್ತೆಸೆಯುತ್ತಿದ್ದಾರೆ. ರಾಯಚೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ಸಂಪೂರ್ಣವಾಗಿ ಬತ್ತಿಹೋಗಿದ್ದು, ಎಲ್ಲಿ ನೋಡಿದರೂ ಬಂಡೆಗಳೇ ಕಾಣುತ್ತಿವೆ. ಇದರಿಂದ ರಾಯಚೂರು-ಆಂಧ್ರ ಗಡಿ ಭಾಗದಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ನದಿಯಿಲ್ಲದೆ ರೈತರು…

Read More

ರಾಷ್ಟ್ರೀಯ ಹಿತಾಸಕ್ತಿಗೆ ಅಗತ್ಯ ಕ್ರಮ; ಗಡಿಯಲ್ಲಿ ಚೀನಿ ಫಿರಂಗಿ ನಿಯೋಜಿಸಿದ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ – Kannada News | Chinese Artillery Deployed Along Pakistan Border; India Says It Will Take Necessary Steps for National Interest

ನವದೆಹಲಿ, ಆಗಸ್ಟ್ 4: ಪಾಕಿಸ್ತಾನವು (Pakistan) ಭಾರತದ ಗಡಿಯ ಬಳಿ ಚೀನಾ ನಿರ್ಮಿತ ಸುಮಾರು 250 SH-15 ಸ್ವಯಂಚಾಲಿತ ಹಾಫಿಟ್ಜರ್ ಪಿರಂಗಿಗಳನ್ನು ನಿಯೋಜಿಸಿದೆ. ಈ ವರದಿಗಳಿಗೆ ಭಾರತ ಪ್ರತಿಕ್ರಿಯೆ ನೀಡಿದ್ದು, “ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸುರಕ್ಷತೆಯ ರಕ್ಷಣೆಗೆ ಅಗತ್ಯವಿರುವ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧ” ಎಂದು ತಿಳಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಡಿಯ ಭಯೋತ್ಪಾದನೆ ಮತ್ತು ದೇಶದ ಭದ್ರತೆಯ ವಿಷಯದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ….

Read More

Heart-Kidney Health: ಉಗುರಿನ ಈ ಬಿಳಿ ಗುರುತು ನಿಮ್ಮ ಆರೋಗ್ಯದ ಬಗ್ಗೆ ಏನನ್ನು ಸೂಚಿಸುತ್ತದೆ? – Kannada News | Nail Half Moon (Lunula): Signs You Should Never Ignore About Your Health

ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಸಣ್ಣ ಬದಲಾವಣೆಗಳು ಆರೋಗ್ಯದ ಬಗ್ಗೆ ಮಹತ್ವದ ಸುಳಿವುಗಳನ್ನು ನೀಡಬಹುದು. ಅವುಗಳಲ್ಲಿ ಉಗುರಿನ ಕೆಳಭಾಗದಲ್ಲಿರುವ ಬಿಳಿ ಅರ್ಧಚಂದ್ರಾಕಾರದ ಗುರುತು (Lunula) ಕೂಡ ಒಂದು. ಕೆಲವರಿಗೆ ಇದು ಸ್ಪಷ್ಟವಾಗಿ ಕಾಣಿಸಿದರೆ, ಇನ್ನೂ ಕೆಲವರಿಗೆ ಬಹಳ ಚಿಕ್ಕದಾಗಿರಬಹುದು ಅಥವಾ ಕಾಣದೇ ಇರಬಹುದು. ಇದನ್ನು ಕೆಲವರು ಸಾಮಾನ್ಯ ಸಂಗತಿಯೆಂದು ಭಾವಿಸಿದರೆ, ಮತ್ತೊಂಡಷ್ಟು ಜನ ಧಾರ್ಮಿಕ ನಂಬಿಕೆಗಳೊಂದಿಗೆ ಕೂಡ ಸಂಪರ್ಕಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಲುನುಲಾದ ಬಣ್ಣ, ಗಾತ್ರ ಅಥವಾ ಕಾಣುವ ರೀತಿಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಅದು…

Read More

ಆಗಸ್ಟ್ 16ರಿಂದ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಶುರು; ಈ ಬಾರಿ ಅಗ್ನಿಪರೀಕ್ಷೆ – Kannada News | Bigg Boss Kannada Season 13 Agniparikshe Episodes Telecast from August 16 in Colors Kannada

ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಇರುವ ಜನಪ್ರಿಯತೆ ಅಪಾರ. ಕನ್ನಡದಲ್ಲಿ ಈಗಾಗಲೇ 12 ಸೀಸನ್​ಗಳು ಯಶಸ್ವಿಯಾಗಿ ಮುಗಿದಿವೆ. 13ನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಆರಂಭಕ್ಕಾಗಿ ಕಾದಿದ್ದ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಬಾರಿ ಬಿಗ್ ಬಾಸ್ ಯಾವಾಗ ಪ್ರಾರಂಭ ಆಗಲಿದೆ ಎಂಬ ಪ್ರಶ್ನೆಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿ ಉತ್ತರ ನೀಡಿದೆ. ಹೊಸ ಪ್ರೋಮೋ ಮೂಲಕ…

Read More

ಮಳೆಗಾಲದಲ್ಲಿ ಕೀಲು ನೋವು, ಬಿಗಿತ ಹೆಚ್ಚಾಗಲು ಕಾರಣವೇನು? ತಡೆಗಟ್ಟುವ ಸರಳ ಮಾರ್ಗಗಳು ಇಲ್ಲಿವೆ – Kannada News | Rainy Season Joint Pain: Causes, Risk Factors and Ways to Find Relief

ಮಳೆಗಾಲ ಆರಂಭವಾದ ಕೂಡಲೇ ಮೊಣಕಾಲು ನೋವು, ಸೊಂಟ ನೋವು, ಭುಜ ನೋವು, ಕೀಲುಗಳಲ್ಲಿ ಬಿಗಿತ (Joint Stiffness) ಹೆಚ್ಚಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಇದು ಕೇವಲ ವಯಸ್ಸಾದವರ ಸಮಸ್ಯೆಯಲ್ಲ, ಈಗಾಗಲೇ ಆಸ್ಟಿಯೋಆರ್ಥ್ರೈಟಿಸ್ (Osteoarthritis), ರುಮಟಾಯ್ಡ್ ಆರ್ಥ್ರೈಟಿಸ್ (Rheumatoid Arthritis) ಅಥವಾ ಹಳೆಯ ಗಾಯಗಳಿಂದ ಬಳಲುತ್ತಿರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಲವರು ಇದನ್ನು ಕೇವಲ “ಮಳೆಗಾಲದ ಪರಿಣಾಮ” ಎಂದು ನಿರ್ಲಕ್ಷಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಇಂದು ರಾಷ್ಟ್ರೀಯ ಮೂಳೆ ಮತ್ತು ಕೀಲುಗಳ…

Read More

ಹೆಬ್ಬಾಳ ಜಂಕ್ಷನ್​​ನಲ್ಲಿ ಟ್ರಾಫಿಕ್​​ ಸಮಸ್ಯೆಗೆ ಮುಕ್ತಿ ನೀಡಲು ಮುಂದಾದ ಬಿಡಿಎ: ಟ್ವಿನ್ ಟನಲ್ ಯೋಜನೆಗೆ ಚಾಲನೆ – Kannada News | BDA Launches Twin Tunnel Project to Ease Traffic at Bengaluru’s Hebbal Junction

ಬೆಂಗಳೂರು, ಆಗಸ್ಟ್​​ 04: ಬೆಂಗಳೂರಿನ (Bangaluru) ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರತಿದಿನ ಎದುರಾಗುವ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಬಿಡಿಎ (BDA) ಮಹತ್ವದ ಯೋಜನೆಗೆ ಚಾಲನೆ ನೀಡಿದೆ. ಹೆಬ್ಬಾಳ ಜಂಕ್ಷನ್‌ನಿಂದ ಕೆವಿಎಎಫ್‌ಎಸ್‌ಯು ಕ್ಯಾಂಪಸ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ ಟ್ವಿನ್ ಟನಲ್ ಸುರಂಗ ಮಾರ್ಗದ ಕಾಮಗಾರಿಗಳಿಗೆ ಪ್ರಾಥಮಿಕ ಚಾಲನೆ ಸಿಕ್ಕಿದೆ. ಮುಂದಿನ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಬಿಡಿಎ ಹೊಂದಿದೆ. 2.2 ಕಿ.ಮೀ ಉದ್ದ: 1,130 ಕೋಟಿ ರೂ ಅಧಿಕ ವೆಚ್ಚ ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ…

Read More

ಶಾಸಕ ಎಸ್​ಎನ್​​ ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿದಕ್ಕೆ ಭುಗಿಲೆದ್ದ ಆಕ್ರೋಶ: ನಾಳೆ 3 ತಾಲೂಕುಗಳ ಬಂದ್‌ಗೆ ಕರೆ! – Kannada News | Cabinet Expansion; Protests Erupt as SN Subba Reddy Misses Ministerial Post; Three Taluks to Observe Bandh

ಶಾಸಕ ಎಸ್.ಎನ್.ಸುಬ್ಬಾರೆಡ್ಡಿImage Credit source: tv9 kannada ಚಿಕ್ಕಬಳ್ಳಾಪುರ, ಆಗಸ್ಟ್​​ 04: ಸಚಿವ ಸಂಪುಟ ವಿಸ್ತರಣೆಯಲ್ಲಿ (Cabinet Expansion) ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ (MLA Subbareddy) ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಾವಿರಾರು ಕಾರ್ಯಕರ್ತರು ಶಾಸಕರ ಮನೆ ಮುಂದೆ ಜಮಾಯಿಸಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ನಾಳೆ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ಮೂರು ತಾಲೂಕುಗಳ ಬಂದ್‌ಗೆ ಕರೆ ನೀಡಲಾಗಿದೆ. ಮತ್ತೊಂದೆಡೆ ಪಕ್ಷದ…

Read More

ಉದಯನಿಧಿ ಸ್ಟಾಲಿನ್‌ ಬಂಧಿಸಿದ್ದು ಉತ್ತಮ ನಿರ್ಧಾರ: ಖಡಕ್ ಆಗಿ ಹೇಳಿದ ಕಂಗನಾ ರಣಾವತ್‌ – Kannada News | Kangana Ranaut reacts to Udhayanidhi Stalin detention over Trisha Krishnan remarks

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್‌ (Trisha Krishnan) ಕುರಿತು ಸಾರ್ವಜನಿಕ ಸಭೆಯಲ್ಲಿ ಅಸಭ್ಯ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದರು. ಈ ಘಟನೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದು, ಇದೀಗ ಬಾಲಿವುಡ್‌ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್‌ (Kangana Ranaut) ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿರುವ…

Read More

ಶೇಖ್ ಹಸೀನಾ ಅವರ ನಾಳೆಯ ಸುದ್ದಿಗೋಷ್ಠಿಗೂ ನಮಗೂ ಸಂಬಂಧವಿಲ್ಲ; ಭಾರತ ಸ್ಪಷ್ಟನೆ – Kannada News | Organised by private media India distances itself from Sheikh Hasina’s August 5 press conference

ನವದೆಹಲಿ, ಆಗಸ್ಟ್ 4: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಆಗಸ್ಟ್ 5ರಂದು ನಡೆಸಲಿರುವ ಮಾಧ್ಯಮ ಸಂವಾದಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ. 2024ರಲ್ಲಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ನಂತರ ಅಧಿಕಾರ ಕಳೆದುಕೊಂಡು ದೇಶ ತೊರೆದಿದ್ದ ಶೇಖ್ ಹಸೀನಾ ದೆಹಲಿಯಲ್ಲಿ ಆಶ್ರಯ ಪಡೆದಿದ್ದರು. ಅದಾದ ಬಳಿಕ ಅವರ ಮೊದಲ ಮಾಧ್ಯಮ ಗೋಷ್ಠಿ ಇದಾಗಿದೆ. ಈ ಕಾರ್ಯಕ್ರಮವನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸುತ್ತಿದ್ದು, ಇದರಲ್ಲಿ ವ್ಯಕ್ತವಾಗುವ ಯಾವುದೇ ಅಭಿಪ್ರಾಯಗಳನ್ನು…

Read More

Better Sleep Tips: ಮಲಗುವ ಮುನ್ನ ಈ ಕೆಲಸ ಮಾಡಿದ್ರೆ, ರಾತ್ರಿ ನೆಮ್ಮದಿಯಿಂದ ನಿದ್ರೆ ಮಾಡಬಹುದು – Kannada News | Here are some tips to get good sleep

ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ, ನೀರು ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಲು ನಿತ್ಯ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ (good sleep) ಪಡೆಯುವುದು ಸಹ ಅಷ್ಟೇ ಮುಖ್ಯ. ಹೌದು ನಿದ್ರೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಮನಸ್ಥಿತಿಯನ್ನು ಚೆನ್ನಾಗಿಡಲು, ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಆದರೆ ಇಂದಿನ ಒತ್ತಡದ ಹಾಗೂ ಅನಾರೋಗ್ಯಕರ ಜೀವನಶೈಲಿಯ ಕಾರಣ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ರೀತಿ ನಿಮಗೂ ಕೂಡ ರಾತ್ರಿ…

Read More