ಜೀ ಕನ್ನಡದಲ್ಲಿ ದೈವಿಕ ಸಂಭ್ರಮ: ‘ಶ್ರೀ ರಾಘವೇಂದ್ರ ಮಹಾತ್ಮೆ’ಯಲ್ಲಿ ವೆಂಕಟನಾಥರ ಸನ್ಯಾಸ ದೀಕ್ಷೆಯ ಮಹಾ ಸಂಚಿಕೆ – Kannada News | Sri Raghavendra Mahatme: Venkatanatha’s Sanyasa Deekshe on Zee Kannada
ಜೀ ಕನ್ನಡ ವಾಹಿನಿಯಲ್ಲಿ (Zee Kannada) ವಿವಿಧ ರೀತಿಯ ಧಾರಾವಾಹಿಗಳು ಪ್ರಸಾರ ಕಾಣುತ್ತಿರುವುದು ಗೊತ್ತೇ ಇದೆ. ಪಕ್ಕಾ ಫ್ಯಾಮಿಲಿ ಡ್ರಾಮಾಗಳು ಒಂದು ಕಡೆ ಆದರೆ, ಮಾಟ-ಮಂತ್ರದ ಕಥೆ ಮತ್ತೊಂದು ಕಡೆ. ಇದರ ಜೊತೆಗೆ ದೇವರ ಕುರಿತಾದ ಧಾರಾವಾಹಿಗಳು ಕೂಡ ಪ್ರಸಾರ ಕಾಣುತ್ತಿವೆ. ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿ ಎಲ್ಲರ ಮನ ಗೆದ್ದಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಯರ ಪವಿತ್ರ ಜೀವನ ಚರಿತ್ರೆಯನ್ನು ತೆರೆಮೇಲೆ ತಂದಿರುವ ಈ ಸರಣಿಗೆ ಕಿರುತೆರೆ ವೀಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಯರ ಕಥೆಯು…