Naga Panchami 2026: ನಾಗರ ಪಂಚಮಿಯಂದು ಜೀವಂತ ಹಾವಿಗೆ ಹಾಲು ಎರೆಯುವುದು ಶಾಸ್ತ್ರ ಸಮ್ಮತವೇ? – Kannada News | Naga panchami 2026 offering milk to snakes sacred tradition or harmful myth

ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, 2026 ರಲ್ಲಿ ಆಗಸ್ಟ್ 17 ರಂದು ಸೋಮವಾರ ನಾಗರ ಪಂಚಮಿ ಬಂದಿದೆ. ಕುಟುಂಬದ ಕ್ಷೇಮ, ಅಭಿವೃದ್ಧಿ, ಸಂತಾನ ಭಾಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಭಕ್ತರು ಈ ದಿನ ನಾಗ ದೇವತೆಯನ್ನು ಪೂಜಿಸುತ್ತಾರೆ.

ನಾಗ ಆರಾಧನೆಯ ಆಧ್ಯಾತ್ಮಿಕ ಹಾಗೂ ಪೌರಾಣಿಕ ಹಿನ್ನೆಲೆ:

ಹಿಂದೂ ಸಂಪ್ರದಾಯದಲ್ಲಿ ನಾಗ ದೇವತೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಹಾವುಗಳು ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದವುಗಳು. ಶಿವನು ವಾಸುಕಿ ನಾಗನನ್ನು ತನ್ನ ಕೊರಳಿನಲ್ಲಿ ಧರಿಸಿರುವುದು ಪ್ರಕೃತಿಯ ಶಕ್ತಿ, ರಕ್ಷಣೆ ಮತ್ತು ಸಮತೋಲನದ ಸಂಕೇತವಾಗಿದೆ. ನಾಗರ ಪಂಚಮಿಯಂದು ಭಕ್ತರು ನಾಗ ದೇವತೆಯ ವಿಗ್ರಹ, ನಾಗಶಿಲೆ ಅಥವಾ ಶಿವಲಿಂಗಕ್ಕೆ ಹಾಲು, ನೀರು, ಅರಿಶಿನ-ಕುಂಕುಮ, ಕುಶ ಹುಲ್ಲು ಮತ್ತು ಹೂವುಗಳನ್ನು ಅರ್ಪಿಸಿ ಪೂಜಿಸುತ್ತಾರೆ. ಹೀಗೆ ಮಾಡುವುದರಿಂದ ನಾಗ ದೇವತೆಯ ಆಶೀರ್ವಾದ ದೊರೆತು, ಕಾಳಸರ್ಪ ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.

ಜೀವಂತ ಹಾವಿಗೆ ಹಾಲು ಕೊಡುವುದು ಶಾಸ್ತ್ರ ಸಮ್ಮತವೇ?

ದೇಶದ ಹಲವು ಭಾಗಗಳಲ್ಲಿ ನಾಗರ ಪಂಚಮಿಯಂದು ಜೀವಂತ ಹಾವುಗಳಿಗೆ ಹಾಲು ಕುಡಿಸುವ ಅಥವಾ ಹಾಲು ಎರೆಯುವ ಪದ್ಧತಿ ಕಂಡುಬರುತ್ತದೆ. ಆದರೆ ಶಾಸ್ತ್ರಗಳು ಮತ್ತು ಪುರಾಣಗಳು ನಾಗದೇವತೆಯ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರೂ, ಜೀವಂತ ಹಾವುಗಳಿಗೆ ಬಲವಂತವಾಗಿ ಹಾಲು ಅರ್ಪಿಸಬೇಕೆಂದು ಎಲ್ಲಿಯೂ ಸ್ಪಷ್ಟ ಸೂಚನೆ ನೀಡಿಲ್ಲ. ವಿದ್ವಾಂಸರ ಪ್ರಕಾರ, ಹಾಲು ಎಂಬುದು ನಾಗಶಿಲೆ, ನಾಗದೇವತೆಯ ಮೂರ್ತಿ ಅಥವಾ ಶಿವಲಿಂಗಕ್ಕೆ ಅರ್ಪಿಸುವ ಭಕ್ತಿಪೂರ್ವಕ ‘ನೈವೇದ್ಯ’ವೇ ಹೊರತು, ಜೀವಂತ ಸರೀಸೃಪಗಳಿಗೆ ನೀಡುವ ಆಹಾರವಲ್ಲ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ವಿಜ್ಞಾನ ಏನು ಹೇಳುತ್ತದೆ? ಹಾವುಗಳು ನಿಜಕ್ಕೂ ಹಾಲು ಕುಡಿಯುತ್ತವೆಯೇ?

ವನ್ಯಜೀವಿ ತಜ್ಞರ ಪ್ರಕಾರ ಹಾವುಗಳು ಸ್ವಾಭಾವಿಕವಾಗಿ ಶೀತಲ ರಕ್ತದ, ಮಾಂಸಾಹಾರಿ ಜೀವಿಗಳಾಗಿವೆ. ಅವುಗಳ ನೈಸರ್ಗಿಕ ಆಹಾರ ಪದ್ಧತಿಯಲ್ಲಿ ಹಾಲಿಗೆ ಯಾವುದೇ ಸ್ಥಾನವಿಲ್ಲ ಮತ್ತು ಹಾಲಿನಲ್ಲಿರುವ ಲ್ಯಾಕ್ಟೋಸ್ ಜೀರ್ಣಿಸಿಕೊಳ್ಳುವ ಶಕ್ತಿ ಅವುಗಳಿಗಿರುವುದಿಲ್ಲ. ಹಬ್ಬದ ಸಮಯದಲ್ಲಿ ಹಾವಾಡಿಗರು ಹಾವುಗಳನ್ನು ಹಲವು ದಿನಗಳ ಕಾಲ ನೀರು ನೀಡದೆ ಸೆರೆಯಲ್ಲಿಟ್ಟುರುತ್ತಾರೆ. ತೀವ್ರ ಬಾಯಾರಿಕೆ ಮತ್ತು ಒತ್ತಡದ ಕಾರಣದಿಂದ ಜೀವ ಉಳಿಸಿಕೊಳ್ಳಲು ಹಾವುಗಳು ಎದುರಿಗಿರುವ ಹಾಲನ್ನು ನೀರೆಂದು ಭಾವಿಸಿ ಕುಡಿಯುತ್ತವೆ. ಆದರೆ ಇದು ಅವುಗಳ ಶ್ವಾಸಕೋಶ ಮತ್ತು ಜಠರಕ್ಕೆ ತೀವ್ರ ಹಾನಿಯನ್ನುಂಟುಮಾಡಿ, ಅವುಗಳ ಸಾವಿಗೆ ಕಾರಣವಾಗಬಹುದು.

ಭಕ್ತಿಯ ಜೊತೆಗೆ ಪ್ರಕೃತಿಯ ಸಂರಕ್ಷಣೆಯೂ ಅತ್ಯಗತ್ಯ:

ನಾಗರ ಪಂಚಮಿಯು ಪ್ರಕೃತಿ ಹಾಗೂ ಜೀವರಾಶಿಯನ್ನು ಗೌರವಿಸುವ ಸುಂದರ ಹಬ್ಬವಾಗಿದೆ. ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಜೀವಂತ ಹಾವುಗಳನ್ನು ಹಿಡಿದು ಕಿರುಕುಳ ನೀಡುವುದಾಗಲಿ ಅಥವಾ ಅವುಗಳ ಜೀವಕ್ಕೆ ಅಪಾಯ ತರುವುದಾಗಲಿ ಸರಿಯಾದ ಅಭ್ಯಾಸವಲ್ಲ. ನಾಗದೇವತೆಯ ಸಂಕೇತವಾಗಿ ನಾಗಶಿಲೆ, ಮಣ್ಣಿನ ನಾಗನ ಮೂರ್ತಿ ಅಥವಾ ಶಿವಲಿಂಗಕ್ಕೆ ಹಾಲು ಅರ್ಪಿಸಿ ಪೂಜಿಸುವ ಮೂಲಕ ಧಾರ್ಮಿಕ ಸಂಪ್ರದಾಯವನ್ನೂ ಗೌರವಿಸಬಹುದು ಮತ್ತು ವನ್ಯಜೀವಿಗಳನ್ನು ರಕ್ಷಿಸಿ ಪ್ರಕೃತಿಯ ಸಮತೋಲನವನ್ನೂ ಕಾಯ್ದುಕೊಳ್ಳಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅರಣ್ಯ ಇಲಾಖೆ ವೈಫಲ್ಯ: ಚಿರತೆ ಹಿಡಿಯಲು ಟಾಸ್ಕ್ ಫೋರ್ಸ್ ರಚಿಸಿಕೊಂಡ ಬ್ಯಾಡರಹಳ್ಳಿ ಜನ! – Kannada News | Bengaluru Byadarahalli Leopard Scare: Locals Form Own Task Force After Forest Department Fails

ಚಿರತೆ ಹಿಡಿಯಲು ಟಾಸ್ಕ್ ಫೋರ್ಸ್ ರಚಿಸಿಕೊಂಡ ಬ್ಯಾಡರಹಳ್ಳಿ ಜನ!

ಬೆಂಗಳೂರು, ಆಗಸ್ಟ್ 04: ಬ್ಯಾಡರಹಳ್ಳಿಯಲ್ಲಿ ಒಂಟಿ ಚಿರತೆಯ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದ್ದು, ಇಡೀ ಏರಿಯಾದ ಜನರು ಭಯದಿಂದ ದಿನ ದೂಡುವಂತಾಗಿದೆ. ಕಳೆದ ಹಲವು ದಿನಗಳಿಂದ ಸಾರ್ವಜನಿಕ ನಿದ್ರೆ ಗೆಡಿಸಿರುವ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳ ಈ ಉದಾಸೀನತೆ ಹಾಗೂ ನಿರ್ಲಕ್ಷ್ಯದಿಂದ ಎಚ್ಚೆತ್ತ ಬ್ಯಾಡರಹಳ್ಳಿಯ ಸ್ಥಳೀಯರೇ ಈಗ ಸ್ವತಃ ಅಖಾಡಕ್ಕಿಳಿದಿದ್ದು, ‘ಚಿರತೆ ಟಾಸ್ಕ್ ಫೋರ್ಸ್’ ರಚಿಸಿಕೊಂಡು ಕಾರ್ಯಾಚರಣೆಗೆ ಧುಮುಕಿದ್ದಾರೆ!

6 ಡೇಂಜರ್ ಜೋನ್‌ಗಳಲ್ಲಿ ನಿರಂತರ ‘ನೈಟ್ ಬೀಟ್’

ಅರಣ್ಯ ಇಲಾಖೆಯನ್ನು ನಂಬಿ ಕೂತರೆ ಜೀವಕ್ಕೇ ಕಂಟಕ ಎಂಬ ತೀರ್ಮಾನಕ್ಕೆ ಬಂದಿರುವ ಸಾರ್ವಜನಿಕರು, ಚಿರತೆ ಸಂಚರಿಸುವ 6 ಪ್ರಮುಖ ಡೇಂಜರ್ ಜೋನ್‌ಗಳನ್ನು ಗುರುತಿಸಿದ್ದಾರೆ. ಪ್ರಿಯದರ್ಶಿನಿ ಲೇಔಟ್ ಹಿಂಭಾಗ, ಆಯುರ್ ಆಶ್ರಮ, ಪಾವನಿ ಚಾಟ್ಸ್ ಜಂಕ್ಷನ್, ಗೋಶಾಲೆ, ಬಾಲಾಜಿ ಲೇಔಟ್ ಹಾಗೂ ದ್ವಾರಕಾವಾಸ ರಸ್ತೆಗಳಲ್ಲಿ ಇಂಚಿಂಚೂ ಜಾಗವನ್ನು ತನಿಖೆ ಮಾಡಲು ಪ್ಲಾನ್ ರೂಪಿಸಲಾಗಿದೆ.

ರಾತ್ರಿ 11:00 ರಿಂದ ಬೆಳಗಿನ ಜಾವ 5:30 ರವರೆಗೆ ಮುಚ್ಚಿದ ವಾಹನಗಳಲ್ಲಿ ಕನಿಷ್ಠ ನಾಲ್ಕೈದು ಜನರ ತಂಡ ಸ್ಥಳೀಯವಾಗಿ ‘ನೈಟ್ ಬೀಟ್’ ನಡೆಸಲಿದ್ದು, ಪ್ರತಿ ಪಾಯಿಂಟ್‌ನಲ್ಲಿ 10-15 ನಿಮಿಷ ತಂಗಿ ಪರಿಶೀಲಿಸಲಿದೆ. ಚಿರತೆಯ ಚಲನವಲನ ಕಂಡುಬಂದ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಲು ಸ್ಥಳೀಯರು ಸಿದ್ಧರಾಗಿದ್ದಾರೆ.

ಬೀಗ ಜಡಿದು ಹೋರಾಟಕ್ಕೂ ಸಿದ್ಧ

“ನಾವು ದಿನವೂ ಭಯದಲ್ಲೇ ಬದುಕುತ್ತಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿಯೇ ನಾವೇ ಸ್ವತಃ ನೈಟ್ ಬೀಟ್ ಮಾಡಲು ನಿರ್ಧರಿಸಿದ್ದೇವೆ” ಎಂದು ಸ್ಥಳೀಯ ನಿವಾಸಿಗಳಾದ ಶಂಭು ಶೇಖರ್ ಹಾಗೂ ಸಿ.ಡಿ. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಸರ್ಕಾರಿ ಯಂತ್ರದ ವೈಫಲ್ಯಕ್ಕೆ ಸೆಡ್ಡು ಹೊಡೆದು ಬ್ಯಾಡರಹಳ್ಳಿ ಜನರೇ ಅಖಾಡಕ್ಕಿಳಿದಿದ್ದು, ಸ್ಥಳೀಯರ ಈ ಬಿಗ್ ಆಪರೇಷನ್‌ಗೆ ಕಿಲಾಡಿ ಚಿರತೆ ಲಾಕ್ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

18 ಸೈನಿಕರ ಸಾವು, ಭೂಗತ ಬಂಕರ್‌ಗಳ ಸವಾಲು: ಇರಾನ್ ಬಿಕ್ಕಟ್ಟಿನಲ್ಲಿ ಸಿಲುಕಿ ಅಸಾಂಪ್ರದಾಯಿಕ ಹಾದಿ ತುಳಿದ ಟ್ರಂಪ್ ಆಡಳಿತ – Kannada News | US Iran Crisis: Trump’s Unconventional Path, Underground Bunkers and 18 Casualties

ವಾಷಿಂಗ್ಟನ್, ಆಗಸ್ಟ್​ 04: ಮಧ್ಯಪ್ರಾಚ್ಯದಲ್ಲಿ ಇರಾನ್‌(Iran)ನೊಂದಿಗಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಮೇಲೆ ಒತ್ತಡ ಹೇರಲು ಹಾಗೂ ಶಿಕ್ಷಿಸಲು ಹೊಸ, ಸೃಜನಶೀಲ ಮತ್ತು ಅಸಾಂಪ್ರದಾಯಿಕ ಮಾರ್ಗಗಳನ್ನು ಹುಡುಕುವಂತೆ ಅಮೆರಿಕ ಮಿಲಿಟರಿಯ ಜಂಟಿ ಪಡೆ ಯುಎಸ್ ಸೆಂಟ್ರಲ್ ಕಮಾಂಡ್ ತನ್ನ ಮಿಲಿಟರಿ ವಿಶ್ಲೇಷಕರಿಗೆ ಮತ್ತು ಕಿರಿಯ ಶ್ರೇಣಿಯ ಸೈನಿಕರಿಗೆ ಸೂಚಿಸಿದೆ.

ಸಿಎನ್‌ಎನ್ ವರದಿಯ ಪ್ರಕಾರ, ಸೆಂಟ್ಕಾಮ್‌ನ ಗುಪ್ತಚರ ವಿಭಾಗವು ಸೈನಿಕರಿಗೆ ಇ-ಮೇಲ್ ಕಳುಹಿಸುವ ಮೂಲಕ ಹೊಸ ತಂತ್ರಗಳಿಗೆಆಹ್ವಾನ ನೀಡಿದೆ. ಸಾಂಪ್ರದಾಯಿಕ ಸೈನಿಕ ಆಯ್ಕೆಗಳು ಮುಗಿಯುತ್ತ ಬಂದಿರುವುದರಿಂದ ಈ ರೀತಿ ‘ಕ್ರೌಡ್‌ಸೋರ್ಸಿಂಗ್’ ಶೈಲಿಯಲ್ಲಿ ಸಲಹೆಗಳನ್ನು ಆಹ್ವಾನಿಸಿರುವುದು ಅಮೆರಿಕ ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹೆಜ್ಜೆಯಾಗಿದೆ.

ಕಳೆದ ಕೆಲವು ವಾರಗಳಿಂದ ಅಮೆರಿಕ ಪಡೆಗಳು ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ನಿರಂತರ ವಾಯುದಾಳಿಗಳನ್ನು ನಡೆಸುತ್ತಿದ್ದರೂ, ಇರಾನ್ ತನ್ನ ಪಟ್ಟು ಸಡಿಲಿಸಿಲ್ಲ. ಕೇವಲ ವಾಯುಪಡೆಯಿಂದಲೇ ಯುದ್ಧದ ಎಲ್ಲಾ ಗುರಿಗಳನ್ನು ತಲುಪಲು ಸಾಧ್ಯವಿಲ್ಲ ಎಂದು ಅಮೆರಿಕದ ಹಿರಿಯ ಸೇನಾಧಿಕಾರಿ ಜನರಲ್ ಡ್ಯಾನ್ ಕೇನ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಮತ್ತಷ್ಟು ಓದಿ:
ಇರಾನ್ ಜತೆ ಮತ್ತೆ ಶಾಂತಿ ಮಾತುಕತೆ, ದಾಳಿ ರದ್ದು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಇರಾನ್‌ನ ಪ್ರಮುಖ ಪರಮಾಣು ನೆಲೆಗಳು ಪಿಕಾಕ್ಸ್ ಪರ್ವತ ಶ್ರೇಣಿಯ ಅತ್ಯಂತ ಆಳವಾದ ಭೂಗರ್ಭದಲ್ಲಿ ಬಂಕರ್‌ಗಳಲ್ಲಿ ಇರುವುದರಿಂದ, ಕೇವಲ ಬಾಂಬ್‌ಗಳಿಂದ ಅವುಗಳನ್ನು ನಾಶಪಡಿಸುವುದು ಅಸಾಧ್ಯವಾಗಿದೆ. ಗ್ರೌಂಡ್ ಟ್ರೂಪ್ಸ್​​ ಕಳುಹಿಸುವುದು ಅತ್ಯಂತ ಅಪಾಯಕಾರಿ ಎಂಬುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಭಿಪ್ರಾಯವಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ಸಂಘರ್ಷದಲ್ಲಿ ಈಗಾಗಲೇ 18 ಅಮೆರಿಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವಾರ ಇರಾನ್ ಮೇಲೆ ಬೃಹತ್ ಪ್ರಮಾಣದ ‘ಅಭೂತಪೂರ್ವ ದಾಳಿ’ ನಡೆಸಲು ಟ್ರಂಪ್ ಯೋಜಿಸಿದ್ದರು. ಆದರೆ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಯುದ್ಧದ ತೀವ್ರತೆ ತಗ್ಗಿಸುವಂತೆ ಮತ್ತು ‘ವಿಷನ್ 2030’ ಯೋಜನೆಗೆ ಧಕ್ಕೆಯಾಗದಂತೆ ತಡೆಯುವಂತೆ ವಿನಂತಿಸಿದ ನಂತರ ಆ ಬೃಹತ್ ದಾಳಿಯನ್ನು ಅಮೆರಿಕ ಹಿಂಪಡೆದಿತ್ತು.

ಸಾಂಕೇತಿಕ ಗೆಲುವಿಗೆ ಟ್ರಂಪ್ ಪ್ಲಾನ್: ಯುದ್ಧದಿಂದ ಗೌರವಾನ್ವಿತವಾಗಿ ಹೊರಬರಲು ಟ್ರಂಪ್ ಈಗ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇರಾನ್‌ಗೆ ಸಂಪೂರ್ಣ ಶರಣಾಗತಿಯಾಗಲು ಸವಾಲು ಎಸೆಯುವ ಜೊತೆಗೆ, ಸಾಂಕೇತಿಕ ದಾಳಿಗಳನ್ನು ನಡೆಸಿ ಯುದ್ಧ ಕೊನೆಗೊಳಿಸಲು ವಾಷಿಂಗ್ಟನ್ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕ ಮತ್ತು ಇರಾನ್ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಅಮೆರಿಕದ ನೌಕಾಪಡೆ ಜಲಸಂಧಿಗೆ ಉಕ್ಕಿನ ಗೋಡೆಯಂತೆ ದಿಗ್ಬಂಧನ ಹೇರಿದ್ದರೆ, ಇರಾನ್ ವಿನಾಯಿತಿ ನೀಡಲು ನಿರಾಕರಿಸಿದೆ. ಅಮೆರಿಕದ ಸಿಐಎ ಹಾಗೂ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ ನೀಡಿದ ಆಂತರಿಕ ವರದಿಯ ಪ್ರಕಾರ, ಪ್ರಸ್ತುತ ಅಮೆರಿಕ ನಡೆಸುತ್ತಿರುವ ವಾಯುದಾಳಿಗಳು ಇರಾನ್ ಸರ್ಕಾರದ ರಾಜತಾಂತ್ರಿಕ ನಿಲುವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕ್ರಿಕೆಟ್‌ನಿಂದ ಅಖಿಲೇಶ್ ರೆಡ್ಡಿಗೆ 8 ವರ್ಷಗಳ ನಿಷೇಧ! – Kannada News | USA Cricketer Akhilesh Reddy Banned for 8 Years

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭ್ರಷ್ಟಾಚಾರ ನಿರೋಧಕ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುನೈಟೆಡ್ ಸ್ಟೇಟ್ಸ್ (USA) ತಂಡದ ಆಫ್-ಸ್ಪಿನ್ನರ್ ಬೋಡುಗುಮ್ ಅಖಿಲೇಶ್ ರೆಡ್ಡಿ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಎಂಟು ವರ್ಷಗಳ ಕಾಲ ಕಠಿಣ ನಿಷೇಧ ಹೇರಿದೆ.

ನಿಷೇಧಕ್ಕೆ ಕಾರಣವೇನು?

2025ರಲ್ಲಿ ನಡೆದ ಅಬುಧಾಬಿ ಟಿ10 ಟೂರ್ನಿಯಲ್ಲಿ ಅಖಿಲೇಶ್ ರೆಡ್ಡಿ ‘ಆಸ್ಪಿನ್ ಸ್ಟಾಲಿಯನ್ಸ್’ ತಂಡದ ಪರ ಕಣಕ್ಕಿಳಿದಿದ್ದರು. ಈ ವೇಳೆ ಅವರು ತನ್ನದೇ ತಂಡದ ಸಹ ಆಟಗಾರನೊಬ್ಬನನ್ನು ಭೇಟಿಯಾಗಿ, ಬೌಲಿಂಗ್ ಮಾಡುವಾಗ ಉದ್ದೇಶಪೂರ್ವಕವಾಗಿ ಹೆಚ್ಚು ರನ್ ಬಿಟ್ಟುಕೊಡುವಂತೆ (ಫಿಕ್ಸಿಂಗ್) ಪ್ರಚೋದಿಸಿದ್ದರು. ಆದರೆ ಆ ಆಟಗಾರ ಇದಕ್ಕೆ ಒಪ್ಪದೆ ತಕ್ಷಣವೇ ಭ್ರಷ್ಟಾಚಾರ ನಿರೋಧಕ ಅಧಿಕಾರಿಗೆ ದೂರು ನೀಡಿದ್ದರು.

ತನಿಖೆ ಆರಂಭವಾಗುತ್ತಿದ್ದಂತೆ ಅಖಿಲೇಶ್ ರೆಡ್ಡಿ ಅವರು ತಮ್ಮ ಮೊಬೈಲ್‌ನಲ್ಲಿದ್ದ ವಾಟ್ಸಾಪ್ ಸಂದೇಶಗಳು ಹಾಗೂ ಅಗತ್ಯ ದಾಖಲೆಗಳನ್ನು ಡಿಲೀಟ್ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ಹೀಗಾಗಿ ಅವರ ವಿರುದ್ಧ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಭ್ರಷ್ಟಾಚಾರದ ಆರೋಪದಡಿಯಲ್ಲಿ ತನಿಖೆ ಆರಂಭಿಸಿತ್ತು.

ಐಸಿಸಿ ಟ್ರಿಬ್ಯುನಲ್ ತೀರ್ಪು:

ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಆಂಟಿ-ಕರಪ್ಷನ್ ಕೋಡ್ ಅಡಿಯಲ್ಲಿ ಸ್ವತಂತ್ರ ನ್ಯಾಯಮಂಡಳಿಯು ವಿಚಾರಣೆ ನಡೆಸಿ ಅಖಿಲೇಶ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದೆ. ಅವರ ಮೇಲಿದ್ದ ಪ್ರಮುಖ ಮೂರು ಆರೋಪಗಳು ಸಾಬೀತಾಗಿವೆ.

  • ನಿಯಮ 2.1.1: ಪಂದ್ಯದ ಫಲಿತಾಂಶ ಅಥವಾ ಪ್ರಗತಿಯನ್ನು ಅಸಹಜವಾಗಿ ಬದಲಾಯಿಸಲು ಪ್ರಯತ್ನಿಸಿದ್ದು.
  • ನಿಯಮ 2.1.4: ಮತ್ತೊಬ್ಬ ಆಟಗಾರನನ್ನು ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರೇರೇಪಿಸಿದ್ದು ಅಥವಾ ಆಮಿಷ ಒಡ್ಡಿದ್ದು.
  • ನಿಯಮ 2.4.7: ತನಿಖೆಗೆ ಸಹಕರಿಸದೆ ಫೋನ್ ಡೇಟಾ ಡಿಲೀಟ್ ಮಾಡಿ ಅಡ್ಡಿಪಡಿಸಿದ್ದು.

ಯಾವಾಗಿನಿಂದ ನಿಷೇಧ ಜಾರಿ?

ಅಖಿಲೇಶ್ ರೆಡ್ಡಿ ಅವರನ್ನು ನವೆಂಬರ್ 21, 2025 ರಂದೇ ತಾತ್ಕಾಲಿಕ ಅಮಾನತ್ತಿನಲ್ಲಿಡಲಾಗಿತ್ತು. ಹೀಗಾಗಿ ಈ 8 ವರ್ಷಗಳ ನಿಷೇಧದ ಅವಧಿಯು ಅದೇ ದಿನಾಂಕದಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ 7 ಆಟಗಾರರು ಗಾಯಾಳು!

26 ವರ್ಷದ ಅಖಿಲೇಶ್ ರೆಡ್ಡಿ ಏಪ್ರಿಲ್ 2025 ರಲ್ಲಿ ಕೇಮನ್ ಐಲ್ಯಾಂಡ್ಸ್ ವಿರುದ್ಧ ಆಡುವ ಮೂಲಕ ಯುಎಸ್ಎ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಒಟ್ಟು 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಐಸಿಸಿ ವಿಧಿಸಿರುವ ಈ ಕಠಿಣ ಶಿಕ್ಷೆಯು ಜಾಗತಿಕ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಸ್ಥಾನವಿಲ್ಲ ಎಂಬ ಖಡಕ್ ಸಂದೇಶವನ್ನು ರವಾನಿಸಿದೆ.

Source link

ಟೀಮ್ ಇಂಡಿಯಾದ 7 ಆಟಗಾರರು ಗಾಯಾಳು! – Kannada News | Team India’s Injury Crisis: 7 Key Players Sidelined

ಸಾಯಿ ಸುದರ್ಶನ್: ಟೀಮ್ ಇಂಡಿಯಾದ ಯುವ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಕಾಲಿನ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಅವರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರಿಗೆ ಫಿಟ್‌ನೆಸ್ ಪರೀಕ್ಷೆ ನಡೆಯಲಿದ್ದು, ಅವರು ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. (PC: Getty Images)

Source link

ಕೋಲಾರ–ಚಿಕ್ಕಬಳ್ಳಾಪುರ ಶಾಸಕರ ಪ್ರತ್ಯೇಕ ಸಭೆ: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ, ಮುಂದಿನ ನಡೆ ಬಗ್ಗೆ ಚರ್ಚೆ – Kannada News | Kolar Chikkaballapur Congress MLAs Hold Meeting Over Karnataka Cabinet Berths Denial

ಕೋಲಾರ, ಆಗಸ್ಟ್ 4: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ (Karnataka Cabinet Expansion) ಕೋಲಾರ (Kolar) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಯಾವುದೇ ಶಾಸಕರಿಗೂ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ, ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಲು ಮುಂದಾಗಿದ್ದಾರೆ. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್, ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಏಳು ಶಾಸಕರು ಭಾಗವಹಿಸುವ ಸಾಧ್ಯತೆ ಇದೆ. ವಿಧಾನಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್ ಹಾಗೂ ನಜೀರ್ ಅಹಮದ್ ಬಾಗಿ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಕೆಜಿಎಫ್ ಶಾಸಕಿ ರೂಪಕಲಾ ಅವರು ಸಭೆಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎರಡು ಜಿಲ್ಲೆಗಳ ಏಳು ಶಾಸಕರ ಪೈಕಿ ಯಾರಿಗೂ ಸಚಿವ ಸ್ಥಾನ ಸಿಗದಿರುವ ಹಿನ್ನೆಲೆಯಲ್ಲಿ, ಪಕ್ಷದೊಳಗೆ ತಮ್ಮ ಮುಂದಿನ ನಡೆ ಏನಾಗಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ

ಕಾಂಗ್ರೆಸ್ ಹೈಕಮಾಂಡ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಕಡೆಗಣಿಸಿದೆ ಎಂಬ ಅಸಮಾಧಾನ ಶಾಸಕರಲ್ಲಿ ವ್ಯಕ್ತವಾಗಿದೆ. ಸರ್ಕಾರದ ಮೊದಲ ಅವಧಿಯಲ್ಲಿ ಚಿಂತಾಮಣಿ ಶಾಸಕ ಎಂ.ಸಿ. ಸುಧಾಕರ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಎರಡನೇ ಅವಧಿಯಲ್ಲಿ ಕೋಲಾರ ಜಿಲ್ಲೆಯ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ಇತ್ತು ಎನ್ನಲಾಗಿತ್ತು. ಆದರೆ ಸಂಪುಟ ವಿಸ್ತರಣೆಯಲ್ಲಿ ಎರಡೂ ಜಿಲ್ಲೆಗಳಿಂದ ಯಾರಿಗೂ ಸ್ಥಾನ ಸಿಗದಿರುವುದು ಶಾಸಕರಿಗೆ ನಿರಾಸೆ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಬೇಕೇ ಅಥವಾ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವೊಲಿಸಬೇಕೇ ಎಂಬ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

ಕೆ.ಎಚ್. ಮುನಿಯಪ್ಪ ವಿರುದ್ಧ ನಾರಾಯಣಸ್ವಾಮಿ ಆರೋಪ

ಸಚಿವ ಸ್ಥಾನ ಕೈತಪ್ಪಲು ಸಚಿವ ಕೆ.ಎಚ್. ಮುನಿಯಪ್ಪ ಅವರೇ ಕಾರಣ ಎಂಬ ಗಂಭೀರ ಆರೋಪವನ್ನು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾಡಿದ್ದಾರೆ. ಕೊನೆಯ ಕ್ಷಣದವರೆಗೂ ತಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು ಎಂದು ಹೇಳಿರುವ ಅವರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಆಯ್ಕೆಯಾಗಿರುವ ಏಕೈಕ ಬಲಗೈ ಸಮುದಾಯದ ಶಾಸಕ ತಾವು ಎಂದು ಉಲ್ಲೇಖಿಸಿದ್ದಾರೆ.

ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿತ್ತು. ಆದರೆ ತಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ನಾರಾಯಣಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ; ರಾಜೀನಾಮೆ ಎಚ್ಚರಿಕೆ, ಬೆಂಬಲಿಗರ ಪ್ರತಿಭಟನೆ

ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಮೋಸ ಮಾಡಿದ್ದಾರೆ ಎಂದು ನಾರಾಯಣಸ್ವಾಮಿ ನೇರ ಆರೋಪ ಮಾಡಿದ್ದು, ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನೊಳಗಿನ ಅಸಮಾಧಾನ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಭಾರಿ ಗೆಲುವು: 30 ವರ್ಷಗಳ ಬಿಜೆಪಿ ಭದ್ರಕೋಟೆ ಧೂಳಿಪಟ, ಪತ್ನಿ ಜಾಹ್ನವಿ ಹೇಳಿದ್ದೇನು? – Kannada News | Prashant Kishor Marks Political Debut With Big Bankipur Bypoll Victory

ಬಂಕಿಪುರ, ಆಗಸ್ಟ್ 04: ಪ್ರಸಿದ್ಧ ಚುನಾವಣಾ ತಂತ್ರಜ್ಞ ಹಾಗೂ ‘ಜನ್ ಸುರಾಜ್’ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ 19,324 ಮತಗಳ ಭಾರಿ ಅಂತರದ ಭವ್ಯ ಗೆಲುವು ಸಾಧಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಅದ್ಧೂರಿ ಪಾದಾರ್ಪಣೆ ಮಾಡಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, ಪ್ರಶಾಂತ್ ಕಿಶೋರ್ ಅವರು ಒಟ್ಟು 64,151 ಮತಗಳನ್ನು ಪಡೆದರೆ, ಅವರ ನಿಕಟ ಸ್ಪರ್ಧಿ ಬಿಜೆಪಿಯ ನೀರಜ್ ಕುಮಾರ್ 44,827 ಮತಗಳನ್ನು ಗಳಿಸಿದರು. ಆರ್‌ಜೆಡಿ (RJD) ಅಭ್ಯರ್ಥಿ ರೇಖಾ ಕುಮಾರಿ ಕೇವಲ 14,273 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ನಾನು ರಾಜಕೀಯದಿಂದ ದೂರವೇ ಇರುತ್ತೇನೆ: ಪ್ರಶಾಂತ್ ಕಿಶೋರ್ ಪತ್ನಿ ಸ್ಪಷ್ಟನೆ
ಗಂಡನ ಐತಿಹಾಸಿಕ ಗೆಲುವಿನ ಕುರಿತು ಖಾಸಗಿ ವಾಹಿನಿ ಎನ್​ಡಿಟಿವಿ ಜತೆ ಮಾತನಾಡಿದ ಪ್ರಶಾಂತ್ ಕಿಶೋರ್ ಅವರ ಪತ್ನಿ ಡಾ. ಜಾಹ್ನವಿ ದಾಸ್, ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ. ಈ ದೊಡ್ಡ ಗೆಲುವಿಗಾಗಿ ಮಾ ಕಾಮಾಕ್ಯ ದೇವಿ, ಬಂಕಿಪುರ ಮತ್ತು ಬಿಹಾರದ ಜನತೆಗೆ ಹಾಗೂ ಜನ್ ಸುರಾಜ್ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದಗಳು ಎಂದಿದ್ದಾರೆ.
ನೀವು ರಾಜಕೀಯಕ್ಕೆ ಬರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಿಂದ ನಾನು ಎಂದಿಗೂ ದೂರವೇ ಇರುತ್ತೇನೆ. ಆ ಕೆಲಸ ನಿರ್ವಹಿಸಲು ಅವರ ಬಳಿ ಅತ್ಯುತ್ತಮ ತಂಡವಿದೆ. ಆದರೆ ವೈಯಕ್ತಿಕ ಜೀವನದಲ್ಲಿ ಅವರಿಗೆ ಪೂರ್ಣ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ನಾನಿಲ್ಲಿ ಯಾವುದೇ ಪವಾಡ ಮಾಡಿಲ್ಲ. ಕೇವಲ 30 ದಿನಗಳ ಕಠಿಣ ಶ್ರಮದಿಂದ ಬಿಜೆಪಿಯ 30 ವರ್ಷಗಳ ಸುರಕ್ಷಿತ ಭದ್ರಕೋಟೆಯನ್ನು ಕೆಡವಿದ್ದೇನೆ ಎಂದರು. ಬಂಕಿಪುರ ಕ್ಷೇತ್ರದ ಜನರಿಗೆ ನನ್ನ ಬಾಗಿಲು ಸದಾ ತೆರೆದಿರುತ್ತದೆ. ಕೇವಲ 3 ತಿಂಗಳಲ್ಲಿ ಬಂಕಿಪುರದಲ್ಲಿ ಪ್ರತ್ಯಕ್ಷ ಬದಲಾವಣೆಯನ್ನು ನೀವು ನೋಡಲಿದ್ದೀರಿ ಎಂದು ಅಭಿವೃದ್ಧಿಯ ಭರವಸೆ ನೀಡಿದರು.

ಮತ್ತಷ್ಟು ಓದಿ: ಬಂಕಿಪುರ, ಡಾಟಿಯಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು ಏಕೆ?; ಪ್ರಶಾಂತ್ ಕಿಶೋರ್ ಗೆಲುವಿಗೆ ಕಾರಣವೇನು?

ಬಿಹಾರ ರಾಜಕೀಯದಲ್ಲಿ ಹೊಸ ಅಲೆ: ಕಳೆದ ಎರಡು ವರ್ಷಗಳಿಂದ ‘ಜನ್ ಸುರಾಜ್’ ಪಾದಯಾತ್ರೆಯ ಮೂಲಕ ಬಿಹಾರದಾದ್ಯಂತ ಸಂಚರಿಸಿದ್ದ ಪ್ರಶಾಂತ್ ಕಿಶೋರ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಬಂಕಿಪುರ ಕ್ಷೇತ್ರವು ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಕ್ಷೇತ್ರವಾಗಿತ್ತು. ದಶಕಗಳಿಂದ ಬಿಜೆಪಿಯ ತೆಕ್ಕೆಯಲ್ಲಿದ್ದ ಈ ನಗರ ಕ್ಷೇತ್ರವನ್ನು ಕಳೆದುಕೊಂಡಿರುವುದು ಕೇಸರಿ ಪಡೆಗೆ ತೀವ್ರ ರಾಜಕೀಯ ಆಘಾತ ತಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಹಳ್ಳಿ ಪವರ್’ ಅಂಗಳಕ್ಕೆ ಘಾಟಿ ಗಾನವಿ ಸಹೋದರಿ ದರ್ಶಿನಿ ಎಂಟ್ರಿ: ಮೊದಲ ದಿನವೇ ಜಗಳ – Kannada News | Ghati Gaanvi Sister Darshini Enters Halli Power Reloaded: Heated Argument Breaks Out on Day 1

ಮಾಡ್ರನ್ ಕಾರ್ಪೆಟ್‌ನಿಂದ ಹಳ್ಳಿಯ ಅಂಗಳಕ್ಕೆ ಕಾಲಿಡಲಿರುವ 16 ಚೆಲುವೆಯರಿಗೆ ಬದುಕು ಕಲಿಸಲು ಸಜ್ಜಾಗಿರುವ ಜೀ ಕನ್ನಡದ ‘ಹಳ್ಳಿ ಪವರ್ రీಲೋಡೆಡ್’ (Halli Power Reloaded) ಶೋ ಈಗಿನಿಂದಲೇ ಭಾರೀ ಸದ್ದು ಮಾಡುತ್ತಿದೆ. ಕಳೆದ ‘ಹಳ್ಳಿ ಪವರ್’ ಸೀಸನ್​ನ ಘಾಟಿ ಗಾನವಿ ಅವರ ಸಹೋದರಿ ದರ್ಶಿನಿ ಈ ಶೋಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಕಾಲಿಡುತ್ತಿದ್ದಂತೆಯೇ ಇತರ ಸ್ಪರ್ಧಿಗಳೊಂದಿಗೆ ವಾಕ್ಸಮರ ನಡೆಸುವ ಮೂಲಕ ವಾತಾವರಣ ಬಿಸಿಯೇರಿಸಿದ್ದಾರೆ.

ಐಟಿ ಉದ್ಯೋಗಿ ಹಾಗೂ ಉದ್ಯಮಿ ದರ್ಶಿನಿ!

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ದರ್ಶಿನಿ, ತಮ್ಮ ಪರಿಚಯ ಮಾಡಿಕೊಳ್ಳುತ್ತಾ ತಾವು ಐಟಿ ಉದ್ಯೋಗಿ ಹಾಗೂ ಬೊಬಾ ಟೀ ಉದ್ಯಮ ನಡೆಸುತ್ತಿರುವ ಉದ್ಯಮಿ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಅವರ ಚಹಾ ಬೆಲೆಯ ಪ್ರಸ್ತಾಪ ಬಂದಾಗ, ಹಳ್ಳಿಯ ಹಿರಿಯ ಜೀವವೊಂದು 5 ರೂಪಾಯಿ ಚಹಾದ ಬಗ್ಗೆ ಮಾತನಾಡಿದರೆ, ದರ್ಶಿನಿ ತಮ್ಮ ಬೊಬಾ ಟೀ ಬೆಲೆ 120 ರೂಪಾಯಿ ಎಂದು ಹೇಳುವುದು ಪ್ರೋಮೋದಲ್ಲಿ ಕಂಡುಬಂದಿದೆ.

ಮೊದಲ ದಿನವೇ ಶುರುವಾಯ್ತು ಜಗಳದ ಬಿಸಿ!

ವೇದಿಕೆಯಲ್ಲಿ ದರ್ಶಿನಿ ಪ್ರವೇಶಿಸುತ್ತಿದ್ದಂತೆ ಇತರ ಸ್ಪರ್ಧಿಗಳ ಜೊತೆ ಮಾತಿನ ಚಕಮಕಿ ಆರಂಭವಾಗಿದೆ. ‘ದರ್ಶಿನಿ ಈ ಶೋನ ವಿಲನ್ ಆಗಲಿದ್ದಾರೆ’ ಎಂದು ಸಹೋದರಿ ಘಾಟಿ ಗಾನವಿ ಕಾಮೆಂಟ್ ಮಾಡಿದ್ದಾರೆ. ‘ದೊಡ್ಡಮ್ಮ ಅವರ ಮೌತ್ ಪೀಸ್ ಬಂದುಬಿಟ್ಟಿದೆ’ ಎಂದು ಮತ್ತೋರ್ವ ಸ್ಪರ್ಧಿ ತಿರುಗೇಟು ನೀಡಿದ್ದಾರೆ. ಇದಕ್ಕೆ ತೀವ್ರವಾಗಿ ಕಿಡಿಕಾರಿದ ಗಾನ್ವಿ ಮತ್ತು ದರ್ಶಿನಿ, ‘ನಿನ್ನ ಬಾಯಿ ಮುಚ್ಚು, ನೀನು ನನ್ನನ್ನು ಶಾಟ್ ಅಪ್ ಎನ್ನಲು ಸಾಧ್ಯವಿಲ್ಲ’ ಎಂದು ಏಕವಚನದಲ್ಲೇ ಕೂಗಾಡಿದ್ದಾರೆ. ‘ನಾನು ಈ ಶೋನ ಮೊದಲ ರನ್ನರ್ ಅಪ್’ ಎಂದು ಹೇಳಿಕೊಳ್ಳುವ ಸ್ಪರ್ಧಿಗೆ ಗಾನವಿ ತಕ್ಕ ಉತ್ತರ ನೀಡಿದ್ದು, ಮೊದಲ ದಿನವೇ ರಗಡ್ ಆಗಿ ‘ಹಳ್ಳಿ ಪವರ್’ ಆಟ ಶುರುವಾಗಿದೆ.

ಇದನ್ನೂ ಓದಿ: ಜೀ ಕನ್ನಡದಲ್ಲಿ ಆಗಸ್ಟ್ 8ರಿಂದ ‘ಹಳ್ಳಿ ಪವರ್ ರೀಲೋಡೆಡ್’ ಧಮಾಕಾ

ಪ್ರಸಾರ ಸಮಯದ ವಿವರ:

ಈ ರೋಚಕ ಹಾಗೂ ಸಸ್ಪೆನ್ಸ್‌ನಿಂದ ಕೂಡಿದ ‘ಹಳ್ಳಿ ಪವರ್ ರೀಲೋಡೆಡ್’ ಗ್ರ್ಯಾಂಡ್ ಓಪನಿಂಗ್ ಇದೇ ಆಗಸ್ಟ್ 8ರಿಂದ ಪ್ರಸಾರವಾಗಲಿದೆ. ಈ ಶೋ ಶನಿವಾರ ಮತ್ತು ಭಾನುವಾರ ರಾತ್ರಿ 9:00 ಗಂಟೆಗೆ ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೀ ಕನ್ನಡದಲ್ಲಿ ‘ಹೊಸ ಕಥೆಗಳ ಪರ್ವ’: ಕಿರುತೆರೆಗೆ ಕಾಲಿಡಲು ಸಜ್ಜಾಗಿವೆ 5 ಹೊಸ ಧಾರಾವಾಹಿಗಳು – Kannada News | Zee Kannada Announces 5 New Serials Under Hosa Kathegala Parva and Halli Power Reality Show

ಜೀ ಕನ್ನಡ ಧಾರಾವಾಹಿಗಳುImage Credit source: Zee Kannada

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಜೀ ಕನ್ನಡ’ ತನ್ನ ವೀಕ್ಷಕರಿಗೆ ಸಾಲು ಸಾಲು ಹೊಸ ಮನರಂಜನೆಯ ಕೊಡುಗೆ ನೀಡಲು ಮುಂದಾಗಿದೆ. ‘ಹೊಸ ಕಥೆಗಳ ಪರ್ವ’ ಹೆಸರಿನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ 5 ಹೊಚ್ಚ ಹೊಸ ಧಾರಾವಾಹಿಗಳ ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದ್ದು, ಕಿರುತೆರೆ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಜೀ ಕನ್ನಡಕ್ಕೆ ಬರಲಿರುವ ಆ 5 ಹೊಸ ಧಾರಾವಾಹಿಗಳು:

ಶಿವ ಶಕ್ತಿ: ಬಾಕ್ಸಿಂಗ್‌ ಕನಸು ಹೊತ್ತ ಶಕ್ತಿಗೆ ‘ಶಿವ’ನ ಬೆಂಬಲ ಮತ್ತು ಪ್ರೇರಣೆ ಸಿಕ್ಕರೆ ಏನಾಗಬಹುದು ಎಂಬ ರೋಚಕ ಕ್ರೀಡಾ-ಭಾವನಾತ್ಮಕ ಹಿನ್ನೆಲೆಯ ಕಥೆ ಇದು.

ಅರಸಿ: ಮನೇಲಿ ಕೆಲಸದವಳ ಮಗಳಾಗಿದ್ದರೂ, ತನ್ನ ಗುಣ ಹಾಗೂ ನಡೆಯಿಂದ ಇಡೀ ಊರೇ ಮೆಚ್ಚುವಂತೆ ಬೆಳೆಯುವ ಸ್ವಾಭಿಮಾನಿ ಹುಡುಗಿಯ ಕಥೆಯನ್ನು ‘ಅರಸಿ’ ತರಲಿದೆ.

ರಾಮ್ ಲೀಲಾ: ಒಬ್ಬ ಸೂಪರ್‌ಸ್ಟಾರ್ ಮತ್ತು ಆತನನ್ನೇ ಅಪಾರವಾಗಿ ಆರಾಧಿಸುವ ಅಭಿಮಾನಿ ಹುಡುಗಿಯ ನಡುವಿನ ಬಾಂಧವ್ಯ ಹಾಗೂ ಕಥಾಹಂದರ ‘ರಾಮ್ ಲೀಲಾ’.

ಮಿಲನ: ಜೀವನದ ತಿರುವುಗಳಲ್ಲಿ ಎದುರಾಗುವ ಹಾಗೂ ನವಜೋಡಿಗಳ ಕಥೆಯನ್ನು ಹೇಳುವ ಪಯಣವೇ ‘ಮಿಲನ’.

ಗೌರಿಪುತ್ರ: ‘ಅಮ್ಮನ ಆಸೆಯೇ ಉಸಿರು’ ಎಂದು ಬದುಕುವ ತಾಯಿ-ಮಗನ ಬಾಂಧವ್ಯವನ್ನು ಎತ್ತಿಹಿಡಿಯುವ ಭಾವನಾತ್ಮಕ ಧಾರಾವಾಹಿ ‘ಗೌರಿಪುತ್ರ’.

ಈ ಎಲ್ಲಾ 5 ಧಾರಾವಾಹಿಗಳು ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದ್ದು, ಶೀಘ್ರದಲ್ಲೇ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಲಿವೆ. ಇದರ ಜೊತೆಗೆ ಮೋಕ್ಷಿತಾ ಪೈ ನಟನೆಯ ‘ಜಗದ್ಧಾತ್ರಿ’ ಧಾರಾವಾಹಿ ಕೂಡ ತೆರೆಗೆ ಬರಲಿದೆ. ಹೊಸ ಐದು ಧಾರಾವಾಹಿಗಳು ಮಧ್ಯಾಹ್ನ ಪ್ರಸಾರ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆ. 2ಕ್ಕೆ ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಆಡಿಷನ್

ಆಗಸ್ಟ್ 8ರಿಂದ ‘ಹಳ್ಳಿ ಪವರ್’ ಆರಂಭ

ಧಾರಾವಾಹಿಗಳ ಹಬ್ಬದ ಜೊತೆಗೆ, ಗ್ರಾಮೀಣ ಸೊಗಡು ಹಾಗೂ ಕದನ ಕುತೂಹಲ ಮೂಡಿಸುವ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್’ ಕೂಡ ಇದೇ ಆಗಸ್ಟ್ 8ರಿಂದ ಪ್ರಸಾರವಾಗಲಿದ್ದು, ವೀಕ್ಷಕರಿಗೆ ಪಕ್ಕಾ ಮನರಂಜನೆ ನೀಡಲಿದೆ. ಅಕುಲ್ ಬಾಲಾಜಿ ಈ ಶೋ ನಡೆಸಿಕೊಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ! – Kannada News | Bengaluru Crime: Rowdy Nuisance in Peenya, Car Vandalized; Police Negligence Alleged

ಬೆಂಗಳೂರು, ಆಗಸ್ಟ್ 04: ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಹೋಬನಹಳ್ಳಿಯಲ್ಲಿ ಪುಡಿ ರೌಡಿಗಳ ಹಾವಳಿ ಮಿತಿಮೀರಿದ್ದು, ಸ್ಥಳೀಯರು ಭೀತಿಯಲ್ಲಿ ದಿನ ದೂಡುವಂತಾಗಿದೆ. ಗಣಿ ಮತ್ತು ನಂಜುಂಡ ಎಂಬ ಪುಂಡರು ಗಾಂಜಾ ಹಾಗೂ ಡ್ರಗ್ಸ್ ಸೇವಿಸಿ ಏರಿಯಾದಲ್ಲಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ.

ಕಳೆದ 3ನೇ ತಾರೀಖಿನಂದು ರಾತ್ರಿ ಸ್ಥಳೀಯರು ಇವರ ಪುಂಡಾಟವನ್ನು ಪ್ರಶ್ನಿಸಿದ್ದಕ್ಕೆ, ಆಕ್ರೋಶಗೊಂಡ ಆರೋಪಿಗಳು ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಗ್ಲಾಸ್ ಒಡೆದು ದಾಂಧಲೆ ನಡೆಸಿದ್ದಾರೆ. ಈ ಕೃತ್ಯದ ವಿಡಿಯೋ ಹಾಗೂ ವ್ಹೀಲಿಂಗ್ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆರೋಪಿಗಳ ಹಾವಳಿಗೆ ಬೇಸತ್ತು ಸಂತ್ರಸ್ತರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಸೂಕ್ತ ಸಾಕ್ಷ್ಯಗಳಿದ್ದರೂ ಪೊಲೀಸರು ಎಫ್‌ಐಆರ್‌ (FIR) ದಾಖಲಿಸದೇ ಕೇವಲ ಎನ್‌ಸಿಆರ್‌ (NCR) ಮಾಡಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version