Headlines

ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ ವಹಿಸಿದ ಸಿಎಂ ಡಿಕೆ ಶಿವಕುಮಾರ್: ತಕ್ಷಣ ಪ್ರವಾಸಕ್ಕೆ ಸೂಚನೆ – Kannada News | Karnataka Drought Survey: CM Assigns Districts to Ministers for Ground Assessment

ಬೆಂಗಳೂರು, ಆಗಸ್ಟ್ 4: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜಿಲ್ಲಾವಾರು ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜವಾಬ್ದಾರಿ ವಹಿಸಿದ್ದಾರೆ. ತಮಗೆ ವಹಿಸಿರುವ ಜಿಲ್ಲೆಗಳಿಗೆ ತಕ್ಷಣ ಪ್ರವಾಸ ಕೈಗೊಂಡು, ಪ್ರತಿಯೊಂದು ತಾಲೂಕಿನಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ಸಚಿವರು ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿ, ಮಳೆ, ಬೆಳೆ ಹಾನಿ, ಬರದ ಸ್ಥಿತಿ ಸೇರಿದಂತೆ ವಾಸ್ತವಾಂಶಗಳ ವರದಿಯನ್ನು ತಕ್ಷಣ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ…

Read More

Chamundeshwari Vardhanti Mahotsav: ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಸಂಭ್ರಮ! – Kannada News | Grand Chamundeshwari Vardhanti Mahotsav Celebrated at Mysurus Chamundi Hills

ಮೈಸೂರು, ಆಗಸ್ಟ್ 04: ನಾಡದೇವಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಚಾಮುಂಡೇಶ್ವರಿ ದೇವಸ್ಥಾನವು ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು. ಈ ಮಹತ್ವದ ದಿನದಂದು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 5 ಗಂಟೆಯಿಂದಲೇ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಅಭಿಷೇಕ ಮತ್ತು ಪೂಜೆಗಳನ್ನು ನೆರವೇರಿಸಲಾಯಿತು. ವರ್ಧಂತಿ ಮಹೋತ್ಸವದ ಪ್ರಯುಕ್ತ ದೇವಾಲಯವನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಮುಖ್ಯದ್ವಾರದಲ್ಲಿ ತೆಂಗಿನ ಗರಿಗಳು, ಕಬ್ಬು ಮತ್ತು ವಿವಿಧ ಬಗೆಯ ಸುಂದರ ಹೂವುಗಳನ್ನು ಬಳಸಿ ಭವ್ಯವಾದ…

Read More

Kottankulangara Temple: ಈ ದೇವಾಲಯದಲ್ಲಿ ಪುರುಷರು ಸೀರೆ ಉಡಲೇಬೇಕು; ಇಲ್ಲದಿದ್ದರೆ ದೇವಿಯ ದರ್ಶನ ಸಿಗಲ್ಲ, ಕಾರಣವೇನು ಗೊತ್ತಾ? – Kannada News | Kottankulangara Temple: Where Men Don Sarees and Makeup to Seek Goddess Devi’s Blessings

ಭಾರತದ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಆಚರಣೆಗಳಿವೆ. ಆದರೆ ಕೇರಳದ ಕೊಲ್ಲಂ ಜಿಲ್ಲೆಯ ಚವಲಕರ ಬಳಿ ಇರುವ ‘ಕೊಟ್ಟಂಕುಳಂಗರ ಶ್ರೀದೇವಿ ದೇವಾಲಯ’ದ ಸಂಪ್ರದಾಯ ಇಡೀ ಜಗತ್ತಿನ ಗಮನ ಸೆಳೆದಿದೆ. ಈ ದೇವಾಲಯದಲ್ಲಿ ದೇವಿಯ ದರ್ಶನ ಪಡೆಯಲು ಬಯಸುವ ಪುರುಷರು ಸಾಮಾನ್ಯ ಉಡುಪುಗಳನ್ನು ಧರಿಸಿ ಪ್ರವೇಶಿಸುವಂತಿಲ್ಲ. ಬದಲಿಗೆ, ಸೀರೆಯನ್ನುಟ್ಟು, ಸಂಪೂರ್ಣವಾಗಿ ಮಹಿಳೆಯಂತೆ ಶೃಂಗಾರಗೊಂಡ ನಂತರವೇ ದೇವಿಯ ಸನ್ನಿಧಿ ಪ್ರವೇಶಿಸಲು ಅವಕಾಶ ಸಿಗುತ್ತದೆ. ಚಮಯವಿಳಕ್ಕು ಹಬ್ಬ: ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ದೇವಾಲಯದಲ್ಲಿ ‘ಚಮಯವಿಳಕ್ಕು’ (Chamayavillakku)…

Read More

3.5 ತಿಂಗಳ ನಂತರ ಮನೆಗೆ ಮರಳಿದ ಸಾಕುನಾಯಿ: ಅಂಬಾಜಿ ದೇವಿ ಹರಕೆ ತೀರಿಸಲು 60 ಕಿ.ಮೀ ನಡೆದ ಮಾಲೀಕ – Kannada News | Missing Dog Returns: Owner Walks 60km to Ambaji Temple for Vow Fulfilment

ಅಹಮದಾಬಾದ್, ಆಗಸ್ಟ್​ 04: ಸಾಕುಪ್ರಾಣಿ ಮತ್ತು ಅದರ ಮಾಲೀಕರ ನಡುವಿನ ಮುರಿಯಲಾಗದ ಪ್ರೀತಿ ಹಾಗೂ ನಂಬಿಕೆಗೆ ಸಾಕ್ಷಿಯಾಗುವ ಹೃದಯಸ್ಪರ್ಶಿ ಘಟನೆಯೊಂದು ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ. ಸುಮಾರು ಮೂರೂವರೆ ತಿಂಗಳಿನಿಂದ ಕಾಣೆಯಾಗಿದ್ದ ‘ಟೈಗರ್’ ಹೆಸರಿನ ಲ್ಯಾಬ್ರಡಾರ್ ತಳಿಯ ಸಾಕು ನಾಯಿ(Dog) ಅಚ್ಚರಿಯ ರೀತಿಯಲ್ಲಿ ಮನೆಗೆ ಮರಳಿದ್ದು, ಹರಕೆ ತೀರಿಸಲು ಮಾಲೀಕ ಹಾಗೂ ಸಿಬ್ಬಂದಿ ಪ್ರಸಿದ್ಧ ಅಂಬಾಜಿ ದೇವಸ್ಥಾನಕ್ಕೆ 60 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಪಾದಯಾತ್ರೆ ನಡೆಸಿದ್ದಾರೆ. ಮೂರು ತಿಂಗಳ ಶೋಧ ಮತ್ತು ಹರಕೆ ಹೋಟೆಲ್ ಮಾಲೀಕರಾಗಿದ್ದ ಬನಸ್ಕಾಂತ ನಿವಾಸಿಯೊಬ್ಬರ…

Read More

ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..! – Kannada News | Women’s Asia Cup 2026 Date and Schedule

ಮಹಿಳಾ ಟಿ20 ಏಷ್ಯಾಕಪ್ 2026 ರ ಪಂದ್ಯಾವಳಿಯು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಈ ಟೂರ್ನಿಗಾಗಿ ಡೇಟ್ ಫಿಕ್ಸ್ ಮಾಡಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ. ಎಸಿಸಿ ಇಮೇಲ್ ಮತ್ತು ಲೋಗೋ ಹಂಚಿಕೆ: ಜುಲೈ 22 ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಅಧಿಕೃತ ಇಮೇಲ್ ಒಂದನ್ನು ಕಳುಹಿಸಿದೆ. ಅದರಲ್ಲಿ ಪಂದ್ಯಾವಳಿಯ ಅಧಿಕೃತ…

Read More

ಅಜಿತ್ ಕುಮಾರ್ 64ನೇ ಸಿನಿಮಾಗೆ ‘ಡೇರ್‌ಡೆವಿಲ್’ ಶೀರ್ಷಿಕೆ; ರೇಸಿಂಗ್ ಸಾಕ್ಷ್ಯಚಿತ್ರ ‘ಗ್ಲಾಡಿಯೇಟರ್ಸ್’ ಫಸ್ಟ್ ಲುಕ್ ಔಟ್ – Kannada News | Ajith Kumar’s AK64 Titled ‘Daredevil’; First Look of Racing Documentary ‘Gladiators’ Released

ತಮಿಳು ಚಿತ್ರರಂಗದ ನಟ ಅಜಿತ್ ಕುಮಾರ್ (Ajit Kumar) ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ಈಗ ಅವರು ಹೊಸ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಸಿಹಿ ಸುದ್ದಿ ಸಿಕ್ಕಿದೆ. ಅಜಿತ್ ಅವರ 64ನೇ ಸಿನಿಮಾಗೆ ‘ಡೇರ್‌ಡೆವಿಲ್’ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಜೊತೆಗೆ ಅಜಿತ್ ಅವರ ಕಾರು ರೇಸಿಂಗ್ ಪಯಣದ ಕುರಿತ ‘ಗ್ಲಾಡಿಯೇಟರ್ಸ್’ ಸಾಕ್ಷ್ಯಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಶಾಲಿನ್ ನಿರ್ಮಾಣದ ‘ಡೇರ್‌ಡೆವಿಲ್’ ಅಜಿತ್ ಅಭಿನಯದ ‘ಎಕೆ…

Read More

ಬೀದಿ ಬದಿ ವ್ಯಾಪಾರಿಗಳ ಎತ್ತಂಗಡಿಯಾದರೂ ಪಾದಚಾರಿಗಳಿಗೆ ಜಾಗವಿಲ್ಲ! ಗಾಂಧಿ ಬಜಾರ್‌ನಲ್ಲಿ ಅಕ್ರಮ ಪಾರ್ಕಿಂಗ್ ಕಾಟ – Kannada News | Bengaluru Gandhi Bazaar Footpath Encroachment and Illegal Parking Trouble Pedestrians

ಗಾಂಧಿ ಬಜಾರ್‌ನಲ್ಲಿ ಅಕ್ರಮ ಪಾರ್ಕಿಂಗ್ ಕಾಟImage Credit source: tv9 ಬೆಂಗಳೂರು, ಆಗಸ್ಟ್ 4: ಬೆಂಗಳೂರು (Bengaluru) ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಪಾದಚಾರಿಗಳ ಸುರಕ್ಷತೆಗೆ ಅಗತ್ಯವಾದ ಮೂಲಸೌಕರ್ಯ ಮಾತ್ರ ಇನ್ನೂ ಸಮರ್ಪಕವಾಗಿಲ್ಲ. ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ ಫುಟ್‌ಪಾತ್‌ಗಳನ್ನೇ ವಾಹನಗಳ ಪಾರ್ಕಿಂಗ್ ಹಾಗೂ ಅತಿಕ್ರಮಣಕ್ಕೆ ಬಳಸುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಂಧಿ ಬಜಾರ್‌ನ ಹಲವು ಕಡೆ ಫುಟ್‌ಪಾತ್‌ಗಳ ಮೇಲೆ ಕಾರು, ಬೈಕ್‌ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಮತ್ತೊಂದೆಡೆ ಬೀದಿ ಬದಿ…

Read More

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ; ರಾಜೀನಾಮೆ ಎಚ್ಚರಿಕೆ, ಬೆಂಬಲಿಗರ ಪ್ರತಿಭಟನೆ – Kannada News | Karnataka Cabinet Expansion: Congress MLAs Protest Over Denied Ministerial Berths

ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಂದರ್ಭದ ಚಿತ್ರImage Credit source: tv9 ಬೆಂಗಳೂರು, ಆಗಸ್ಟ್ 4: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ (Karnataka Cabinet Expansion) ನಡೆದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕಿಚ್ಚು ಹೊತ್ತಿಕೊಂಡಿದೆ. ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದು ಅದು ಹುಸಿಯಾದ ಬೆನ್ನಲ್ಲೇ ಹಲವು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ಶಾಸಕ ಸ್ಥಾನ ಹಾಗೂ ನಿಗಮ-ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ…

Read More

Karnataka Dam Water Level: ಕೆಆರ್‌ಎಸ್, ಆಲಮಟ್ಟಿಗೆ ಬೃಹತ್‌ ಒಳಹರಿವು! ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ – Kannada News | Karnataka Reservoir Water Level on August 03; KRS, Almatti, Hemavathi Inflow Increases

ಬೆಂಗಳೂರು, ಆಗಸ್ಟ್ 04: ಕಾವೇರಿ, ಕೃಷ್ಣಾ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ರೈತರ ಮುಖದಲ್ಲಿ ಹರ್ಷ ಮೂಡಿಸುವ ಜೊತೆಗೆ, ಕೆಲವು ಕಡೆ ಕಾಲುವೆ ದುರಸ್ತಿ ಕೊರತೆಯಿಂದ ಭೀತಿಯೂ ಎದುರಾಗಿದೆ. 1. ಕೆಆರ್‌ಎಸ್ ಜಲಾಶಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಡ್ಯಾಂಗೆ ಬೃಹತ್ ಪ್ರಮಾಣದ ಒಳಹರಿವು ದಾಖಲಾಗಿದೆ. ಗರಿಷ್ಠ ಮಟ್ಟ:…

Read More

‘ಗೂಗ್ಲಿ’ಯಲ್ಲಿ ಯಶ್​​ಗೆ ಬರೆದ ಡೈಲಾಗ್ ನಿಜವಾಯ್ತು; ಜಾಗತಿಕ ಮಟ್ಟದಲ್ಲಿ ‘ಟಾಕ್ಸಿಕ್’ ಹವಾ – Kannada News | From Googly to Toxic: Yash Global Success Proves Pavan Wadeyar Dialogue Right

ರಾಕಿಂಗ್ ಸ್ಟಾರ್ ಯಶ್ ಅವರ ‘ಕೆಜಿಎಫ್’ ಸರಣಿಯ ಯಶಸ್ಸಿನ ನಂತರ, ಅವರ ಪ್ರತಿಯೊಂದು ಸಿನಿಮಾ ಕೂಡ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಾಲಿಗೆ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ (Toxic Movie) ಸೇರ್ಪಡೆಯಾಗಿದೆ . ಚಿತ್ರದ ಗ್ಲೋಬಲ್ ಮಟ್ಟದ ಕ್ರೇಜ್ ನೋಡಿದ ‘ಗೂಗ್ಲಿ’ ಚಿತ್ರದ ನಿರ್ದೇಶಕ ಪವನ್ ಒಡೆಯರ್, ಅಂದು ತಾವು ಸಿನಿಮಾಗಾಗಿ ಬರೆದಿದ್ದ ಡೈಲಾಗ್‌ ಒಂದನ್ನು ನೆನಪಿಸಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ. ‘ಗೂಗ್ಲಿ’ಯ ಆ ಒಂದು ಮಾತು ಇಂದು ಅಕ್ಷರಶಃ ಸತ್ಯ…

Read More