ಬೆಂಗಳೂರು, (ಫೆಬ್ರವರಿ 10): ಅಭಿವೃದ್ಧಿ ಹೆಸರಿನಲ್ಲಿ ಜಮೀನಿನಲ್ಲಿ 30 ಮರಗಳನ್ನು ಕಡಿದು ಪರಿಹಾರ ಕೊಡದ ಸರ್ಕಾರದ ವಿರುದ್ಧ ರೈತ ಆಕ್ರೋಶಗೊಂಡಿದ್ದು, ವಿಧಾನಸೌಧದ ಮುಂದೆ ಇರುವ ಶ್ರೀಗಂಧದ ಮರ ಕಡಿದು ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ವಿಶುಕುಮಾರ್ ಎನ್ನುವರ ಜಮೀನಿನಲ್ಲಿ 30 ಮರಗಳನ್ನು ಕಡಿಯಲಾಗಿದೆ. ಆದ್ರೆ, ಇದಕ್ಕೆ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸೇಡಿಗಾಗಿ ವಿಧಾನಸೌಧದ ಬಳಿ ಇರುವ ಗಂಧದ ಮರವನ್ನು ಕಡಿದು ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿಶುಕುಮಾರ್,ಪರಿಹಾರ ಕೊಟ್ಟಿಲ್ಲ, ನನ್ನ ಮಕ್ಕಳ ಬರ್ತಡೆ ನೆನಪಿಗಾಗಿ ಗಿಡ ನೆಟ್ಟಿದ್ದೆ. ಹೆದ್ದಾರಿ ಪಕ್ಕ ಇದೆ ಎಂದು ಮರವನ್ನು ಕಡಿದುಹಾಕಿದ್ದಾರೆ. ಕೋರ್ಟ್ ನಲ್ಲಿ ಪರಿಹಾರವನ್ನು ನೀಡಬೇಕೆಂದು ಆದೇಶವಾದರೂ ಸಹ ಅರಣ್ಯ ಇಲಾಖೆ ಕೊಟ್ಟಿಲ್ಲ. ಮೂವತ್ತು ಮರ ಕಡಿದಿದ್ದಾರೆ. ಅದಕ್ಕಾಗಿ ನಾನು ಮುನ್ನೂರು ಮರ ಕಡಿಯುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು, ಫೆ.10: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಯುವಕನೊಬ್ಬ ಕನ್ನ ಹಾಕಿದ್ದಾನೆ. ಈ ಘಟನೆ ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿದ್ದ 241 ಗ್ರಾಂ ಚಿನ್ನಾಭರಣ, 2.8 ಕೆಜಿ ಬೆಳ್ಳಿ
1.3 ಲಕ್ಷ ನಗದು ಕಳ್ಳತನ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದರು. ಮಾಲೀಕರು ಆಕೆಯ ಮೇಲೆ ಅತೀವ ನಂಬಿಕೆ ಇಟ್ಟು ಮನೆಯ ಕೀಲಿ ಕೈಯನ್ನು ಆಕೆಯ ಬಳಿಯೇ ನೀಡುತ್ತಿದ್ದರು. ಈ ಮಹಿಳೆಯ ಜೊತೆಗೆ ಆಕೆಯ ತಂಗಿಯ ಮಗನೂ ಸಹ ಆಗಾಗ ಇರುತ್ತಿದ್ದನು.
ದೊಡ್ಡಮ್ಮನ ಬಳಿಯಿದ್ದ ಮನೆಯ ಕೀಲಿಯನ್ನು ಯುವಕ ಚಾಲಾಕಿತನದಿಂದ ಪಡೆದುಕೊಂಡಿದ್ದಾನೆ.ಮಾಲೀಕರು ಇಲ್ಲದ ಸಮಯ ನೋಡಿ ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ ಬೆಲೆಬಾಳುವ ಆಭರಣ ಮತ್ತು ನಗದನ್ನು ದೋಚಿದ್ದಾನೆ. ಮನೆಯಲ್ಲಿ ಕಳ್ಳತನವಾದ ಬಗ್ಗೆ ಮನೆಯವರು ದೂರು ನೀಡಿದ್ದಾರೆ. ಒಟ್ಟು 241 ಗ್ರಾಂ ಚಿನ್ನ, 2.8 ಕೆಜಿ ಬೆಳ್ಳಿ, 1.3 ಲಕ್ಷ ನಗದು ಕಳ್ಳತನ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡ ಬಸವನಗುಡಿ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾದ ಎಲ್ಲಾ ಚಿನ್ನ, ಬೆಳ್ಳಿ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಎಷ್ಟೇ ನಂಬಿಕಸ್ಥ ಕೆಲಸಗಾರರಾಗಿದ್ದರೂ, ಮನೆಯ ಕೀಲಿ ಕೈಗಳನ್ನು ಅವರ ಬಳಿ ಬಿಟ್ಟು ಹೋಗುವುದು ಸುರಕ್ಷಿತವಲ್ಲ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಇನ್ನು ಬಸವನಗುಡಿ ಪೊಲೀಸರು ಈ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ನವದೆಹಲಿ, ಫೆಬ್ರವರಿ 10: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (Himanta Biswa Sarma) ಇಂದು ತಮ್ಮ ವಿರುದ್ಧ ಮಾಡಲಾದ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ, “ಇಂದು ಪತ್ರಿಕಾಗೋಷ್ಠಿಯ ಮೂಲಕ ನನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ” ಎಂದು ಬರೆದಿದ್ದಾರೆ.
ರಾಜಕೀಯ ಒತ್ತಡ ಅಥವಾ ಸಾರ್ವಜನಿಕ ದಾಳಿಗೆ ನಾವು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಪುನರುಚ್ಚರಿಸಿದರು. ಅವರಿಗೆ ಸ್ವಲ್ಪವೂ ಧೈರ್ಯವಿದ್ದರೆ, ಅವರ ಬಳಿ ಪುರಾವೆಗಳಿದ್ದರೆ ನ್ಯಾಯಾಲಯದ ಮುಂದೆ ಆರೋಪವನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
Assam CM Himanta Biswa Sarma tweets, “Today, I have filed a defamation case seeking Rs 500 crore in damages against Congress leaders Jitendra Singh, Bhupesh Baghel and Gaurav Gogoi for making false, malicious and defamatory allegations against me through a press conference.” pic.twitter.com/MuhmZcTrfP
ಸಿಎಂ ಹಿಮಂತ ಬಿಸ್ವ ಶರ್ಮ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕವಾಗಿ ಘೋಷಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಇದು ಸಿವಿಲ್ ಮತ್ತು ಕ್ರಿಮಿನಲ್ ಪರಿಹಾರಗಳನ್ನು ಅನುಸರಿಸುವ ಉದ್ದೇಶವನ್ನು ಸೂಚಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ಸಂಘಟಿತ ಅಪಪ್ರಚಾರ ಮತ್ತು ರಾಜಕೀಯ ನಾಟಕೀಯ ತಂತ್ರಗಳನ್ನು ಆಶ್ರಯಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗಾಂಧಿ ಕುಟುಂಬದ ಆಜ್ಞೆಯ ಮೇರೆಗೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಫೆಬ್ರವರಿ 4ರಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಹಿಮಂತ್ ಬಿಸ್ವಾ ಅವರ ಮೇಲೆ ಭ್ರಷ್ಟಾಚಾರ, ಅಕ್ರಮ ಆಸ್ತಿಗಳ ಆರೋಪ ಮಾಡಿದ್ದರು. ಅವರು ವೀಡಿಯೊಗಳ ಮೂಲಕ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ಸ್ಟಾರ್ ನಟರುಗಳಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಅರಬ್ ದೇಶಗಳಲ್ಲಿ ಭಾರತೀಯ ಸಿನಿಮಾಗಳಿಗೆ (Indian Movies) ಭಾರಿ ದೊಡ್ಡ ಮಾರುಕಟ್ಟೆ ಇದೆ. ಯಾವ ಮಟ್ಟಿಗೆಂದರೆ ಅರಬ್ ದೇಶದ ಚಿತ್ರರಂಗದಲ್ಲಿ ನಿರ್ಮಾಣಗೊಂಡ ಸಿನಿಮಾಗಳಲ್ಲಿ ಭಾರತದ ಸ್ಟಾರ್ ನಟರುಗಳು ನಟಿಸಿದ್ದಾರೆ. ಅದುವೇ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್. ಬಾಲಿವುಡ್ನ ಈ ಇಬ್ಬರು ಸ್ಟಾರ್ ನಟರು ಇದೀಗ ಸೌದಿಯ ಸಿನಿಮಾನಲ್ಲಿ ನಟಿಸಿದ್ದಾರೆ.
ಸೌದಿ ಚಿತ್ರರಂಗದಲ್ಲಿ ನಿರ್ಮಾಣಗೊಂಡಿರುವ ‘ದಿ ಸೆವೆನ್ ಡಾಗ್ಸ್’ ಹೆಸರಿನ ಭರ್ಜರಿ ಆಕ್ಷನ್ ಸಿನಿಮಾನಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದ್ದು, ಸಲ್ಮಾನ್ ಮತ್ತು ಸಂಜಯ್ ದತ್ ಅವರುಗಳು ಟ್ರೈಲರ್ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಸಲ್ಮಾನ್ ಹಾಗೂ ಸಂಜಯ್ ಅವರು ಸಹ ಸಖತ್ ಪವರ್ಫುಲ್ ಪಾತ್ರಗಳಲ್ಲಿಯೇ ಸಿನಿಮಾನಲ್ಲಿ ಕಾಣಿಸಿಕೊಂಡಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ.
ಈ ಹಿಂದೆ ಸೂಪರ್ ಹಿಟ್ ಆಗಿದ್ದ ಸೌದಿ ಸಿನಿಮಾ ‘ಬ್ಯಾಡ್ ಬಾಯ್ಸ್ ಫಾರ್ ಲೈಫ್’ ಸಿನಿಮಾ ನಿರ್ದೇಶಿಸಿದ್ದ ಅದಿಲ್ ಇಲ್ ಅರಬ್ಬಿ ಮತ್ತು ಬಿಲಾಲ್ ಫಲಾಹ್ ಅವರುಗಳು ನಿರ್ದೇಶನ ಮಾಡಿರುವ ‘ದಿ ಸೆವೆನ್ ಡಾಗ್ಸ್’ ಸಿನಿಮಾನಲ್ಲಿ ಸಲ್ಮಾನ್ ಮತ್ತು ಸಂಜಯ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ನಾಯಕ ಪಾತ್ರದಲ್ಲಿ ಇಜಿಪ್ಟಿಯನ್ ನಟ ಕರೀಮ್ ಅಬ್ದಿಲ್ ಅಜೀಜ್ ಮತ್ತು ಅಹ್ಮದ್ ಇಜ್ ನಟಿಸಿದ್ದಾರೆ. ಸಿನಿಮಾದ ನಾಯಕಿ ಹಾಲಿವುಡ್ ಸ್ಟಾರ್ ನಟಿ ಮೋನಿಕಾ ಬೆಲೂಚಿ.
ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಸಲ್ಮಾನ್ ಖಾನ್ ಸೂಟು ಧರಿಸಿ, ಏಜೆಂಟ್ ರೀತಿ ಕಾಣಿಸಿಕೊಂಡಿದ್ದಾರೆ. ‘ನೀನ್ಯಾಕೊ ಕ್ರಿಮಿನಲ್ ರೀತಿ ಕಾಣುತ್ತಿದ್ದೀಯ’ ಎಂಬ ಡೈಲಾಗ್ ಅನ್ನು ಸಹ ಪಾತ್ರವೊಂದಕ್ಕೆ ಹೇಳುತ್ತಿರುವ ದೃಶ್ಯ ಟ್ರೈಲರ್ನಲ್ಲಿದೆ. ಇನ್ನು ಸಂಜಯ್ ದತ್, ಪಾರ್ಟಿ ಮಾಡುತ್ತಾ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಟ್ರೈಲರ್ನಲ್ಲಿದೆ. ಸಿನಿಮಾದ ಕತೆ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಏಜೆಂಟ್ಗಳದ್ದು ಎಂಬುದು ಸಹ ಟ್ರೈಲರ್ನಿಂದ ತಿಳಿದು ಬರುತ್ತಿದೆ.
ಇದೊಂದು ಅದ್ಧೂರಿ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸಖತ್ ಚೇಸಿಂಗ್ ಮತ್ತು ಆಕ್ಷನ್ ಸಿನಿಮಾಗಳಿದ್ದು ಅವುಗಳ ತುಣುಕುಗಳನ್ನು ಟ್ರೈಲರ್ನಲ್ಲಿ ತೋರಿಸಲಾಗಿದೆ. ಅದ್ಧೂರಿ ಕಾರುಗಳು, ಹೆಲಿಕಾಪ್ಟರ್, ವಿಮಾನಗಳು ಹೇರಳವಾಗಿವೆ ಸಿನಿಮಾನಲ್ಲಿ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಆದರೆ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ತಿಂಗಳು ಬಾಕಿ ಇದೆ.
ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಉಪಯುಕ್ತವಾದ ಜೀವನದ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಯಾವ ರೀತಿ ಜೀವನ ನಡೆಸಬೇಕು, ಯಶಸ್ಸಿಗಾಗಿ ಏನು ಮಾಡಬೇಕು, ನೆಮ್ಮದಿಯ ಜೀವನ ನಡೆಸಲು ಮಾಡಬೇಕಾದದ್ದೇನು ಎಂಬಿತ್ಯಾದಿ ವಿಷಯಗಳನ್ನು ತಿಳಿಸಿದ್ದಾರೆ. ಅದೇ ರೀತಿ ಅವರು ಈ ಐದು ಬಗೆಯ ಸಮಸ್ಯೆಗಳು ಯಾರ ಜೀವನದಲ್ಲಿ ಇರುತ್ತದೆಯೋ ಅವರು ಖಂಡಿತವಾಗಿಯೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ, ಅವರು ಯಾವಾಗಲೂ ಚಿಂತೆಯಲ್ಲಿಯೇ ಮುಳುಗಿರುತ್ತಾರೆ ಎಂದು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ, ಯಾವ ವಿಷಯಗಳು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುತ್ತದೆ, ಮಾನಸಿಕವಾಗಿ ದುರ್ಬಲಗೊಳಿಸುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಮನುಷ್ಯನ ನೆಮ್ಮದಿ ಹಾಳಾಗಲು ಇವೇ ಮುಖ್ಯ ಕಾರಣ:
ಕಟುವಾಗಿ ಮಾತನಾಡುವ ಜನರೊಂದಿಗೆ ಇರುವುದು: ಚಾಣಕ್ಯರು ಹೇಳುವಂತೆ, ನಿರಂತರವಾಗಿ ಕಟುವಾಗಿ ಮಾತನಾಡುವ ಅಥವಾ ಇತರರನ್ನು ಅವಮಾನಿಸುವ ಜನರೊಂದಿಗೆ ಬದುಕುವುದು ತುಂಬಾ ಕಷ್ಟ. ಅವರೊಂದಿಗೆ ವಾಸಿಸುವುದರಿಂದ ಮಾನಸಿಕ ಶಾಂತಿ ಕದಡುತ್ತದೆ, ನೆಮ್ಮದಿ ಹಾಳಾಗುತ್ತದೆ. ಜೊತೆಗೆ ಪ್ರತಿಕ್ಷಣವೂ ಸಹ ನೋವಿನಿಂದಲೇ ಇರಬೇಕಾಗುತ್ತದೆ. ಹೀಗೆ ಇಂತಹ ಜನರೊಂದಿಗೆ ಇರುವವರು ಎಂದಿಗೂ ಸುಖ ಜೀವನ ನಡೆಸಲು ಸಾಧ್ಯವೇ ಇಲ್ಲ.
ಭಾರೀ ಸಾಲದ ಹೊರೆ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಹೆಚ್ಚು ಸಾಲದಲ್ಲಿದ್ದಾಗ, ಆತ ನೆಮ್ಮದಿಯಿಂದ ಮಲಗಲು ಸಾಧ್ಯವಾಗುವುದಿಲ್ಲ, ಆತ ಸಂಪೂರ್ಣ ನೆಮ್ಮದಿಯನ್ನೇ ಕಳೆದುಕೊಳ್ಳುತ್ತಾನೆ. ಆತ ಸದಾ ತನ್ನ ಸಾಲವನ್ನು ಮರುಪಾವತಿಸುವ ಆಲೋಚನೆಯಲ್ಲಿ ಮುಳುಗಿರುತ್ತಾನೆ. ಈ ಮಾನಸಿಕ ಒತ್ತಡವು ಆತನನ್ನು ಒಳಗಿನಿಂದ ಸುಡುತ್ತದೆ.
ಅವಿಧೇಯ ಮಕ್ಕಳು: ಮಕ್ಕಳು ದಾರಿ ತಪ್ಪಿದರೆ ಅಥವಾ ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅಂತಹ ಮಕ್ಕಳನ್ನು ಪಡೆದ ಪೋಷಕರು ತೀವ್ರ ದುಃಖಿತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ತಮ್ಮ ಸ್ವಂತ ಮಕ್ಕಳಿಂದ ಉಂಟಾಗುವ ಈ ದುಃಖವು ಒಬ್ಬ ವ್ಯಕ್ತಿಯನ್ನು ಒಳಗಿನಿಂದ ಸುಡುತ್ತದೆ, ಮತ್ತು ಆ ವ್ಯಕ್ತಿಯೂ ಸದಾ ತನ್ನ ಮಗ ಅಥವಾ ಮಗಳು ನೀಡಿದಂತಹ ಆ ನೋವಿನ ಮಾತನ್ನೇ ನೆನೆಯುತ್ತಿರುತ್ತಾರೆ. ಈ ಅಂಶ ಆತನ ನೆಮ್ಮದಿಯನ್ನು ಸಹ ಹಾಳು ಮಾಡುತ್ತದೆ.
ಬಡತನ ಮತ್ತು ಅವಮಾನ: ಬಡತನದ ಕಾರಣದಿಂದಾಗಿ ಸಮಾಜದಲ್ಲಿ ಯಾರಾದರೂ ಅವಮಾನಕ್ಕೊಳಗಾದಾಗ, ಅದು ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಈ ಅವಮಾನವು ಮನಸ್ಸಿಗೆ ಆಳವಾಗಿ ನೋವುಂಟು ಮಾಡುತ್ತಾರೆ. ಈ ಅವಮಾನವನ್ನು ಪದೇ ಪದೇ ನೆನೆದು, ಆತ ದುಃಖ ಪಡುತ್ತಾನೆ. ಇದು ಆತನ ಸಂಪೂರ್ಣ ನೆಮ್ಮದಿಯನ್ನೇ ಹಾಳು ಮಾಡಿ ಬಿಡುತ್ತದೆ.
ಮನೆಯಲ್ಲಿ ನಿರಂತರ ಜಗಳಗಳು: ಗಂಡ ಹೆಂಡತಿಯ ನಡುವೆ ಅಥವಾ ಕುಟುಂಬದೊಳಗೆ ನಿರಂತರವಾಗಿ ಜಗಳ ನಡೆಯುತ್ತಿದ್ದರೆ, ಅಂತಹ ಮನೆ ನರಕಕ್ಕೆ ಸಮಾನವಾಗಿರುತ್ತದೆ. ಅಂತಹ ಮನೆಯಲ್ಲಿ ವಾಸಿಸುವವರಿಗೆ ನೆಮ್ಮದಿ ಎಂಬುದು ಇರುವುದಿಲ್ಲ, ಈ ಅಶಾಂತಿ ಸಂಪೂರ್ಣ ಮಾನಸಿಕ ನೆಮ್ಮದಿಯನ್ನೇ ನಾಶ ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಕಾರವಾರ, (ಫೆಬ್ರವರಿ 10): ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಮೂಲದ ಸುಚಿತ್ರಾ ಹಾಗೂ ಪ್ರಿಯಕರ ಕಮಲಾಕರ್ ಭಟ್ ಗುರೂಜಿ ಹಿಂದಿನ ಕರಾಳ ಮತ್ತು ಕುತೂಹಲಕಾರಿ ಸಂಗತಿಗಳು ಇದೀಗ ಒಂದೊಂದಾಗಿ ಹೊರಬರುತ್ತಿವೆ. ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗುತ್ತಿದ್ದಂತೆಯೇ ಜೋಡಿ ಹಳ್ಳಿಯ ಬಗೆ ಬಗೆಯ ವಿಡಿಯೋಗಳು, ಆಡಿಯೋಗಳು ವೈರಲ್ ಆಗುತ್ತಿವೆ. ರೀಲ್ಸ್ ರಾಣಿಯಾಗಿರುವ ಸುಚಿತ್ರಾ, ಕಮಲಾಕರ್ ಭಟ್ ನೊಂದಿಗೆ ಹಲವು ರೀಲ್ಸ್ ಮಾಡಿರುವ ವಿಡಿಯೋಗಳು ಸಹ ವೈರಲ್ ಆಗುತ್ತಿವೆ. ತನ್ನ ಮೈಮಾಟದಿಂದ ಕಮಲಾಕರ್ ಭಟ್ ನನ್ನು ಬುಟ್ಟಿಗೆ ಹಾಕಿಕೊಂಡ ಸುಚಿತ್ರಾ, ತನ್ನ ತಾಳಕ್ಕೆ ತಕ್ಕಂತೆ ಕುಣಿಸಿದ್ದಾಳೆ. ಭಟ್ಟನ ಹಣದಿಂದ ಕಾರು, ಬೈಕು ಅಂತ ಐಷಾರಾಮಿ ನಡೆಸಿದ್ದು, ಇದೀಗ ಭಟ್ಟನನ್ನು ತನ್ನ ತಾಳಕ್ಕೆ ಕುಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಿನಿಮಾ (Cinema) ಸಬ್ಸಿಡಿ ವಿಚಾರವಾಗಿ ಇತ್ತೀಚೆಗೆ ಮತ್ತೆ ಚರ್ಚೆ ಶುರುವಾಗಿದ್ದು, ಇದೀಗ ನಿರ್ಮಾಪಕರ ಸಂಘ ಕೆ ಮಂಜು ಅವರು ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಸಬ್ಸಿಡಿಯನ್ನು ಕಡಿಮೆ ಮಾಡಿ ಎಂದು ಕೆಲವರು ಹೇಳಿದ್ದಾರೆ, ಆದರೆ ನಿರ್ಮಾಪಕರಾಗಿ ನಾವು ಕೇಳುತ್ತಿರುವುದು ಸಬ್ಸಿಡಿ ಕಡಿಮೆ ಮಾಡುವುದು ಬೇಡ, ಈಗ 150 ಸಿನಿಮಾಗಳಿಗೆ ಕೊಡುತ್ತಿದ್ದಾರೆ ಅದನ್ನು 200 ಸಿನಿಮಾಗಳಿಗೆ ವಿಸ್ತರಿಸಿ, ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆ ಇದೆ, ಅದರಲ್ಲೂ ನಿರ್ಮಾಪಕರಿಗೆ ಇನ್ನೂ ಹೆಚ್ಚಿನ ಸಮಸ್ಯೆ ಇದೆ, ಸಬ್ಸಿಡಿಯನ್ನು ಕಡಿಮೆ ಮಾಡುವ ಬಗ್ಗೆ ಯಾರೂ ಮಾತನಾಡುವುದು ಬೇಡ ಎಂದು ಮಂಜು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…
ಈ ಸಿನಿಮಾದ ಶೀರ್ಷಿಕೆಯೇ ‘ಸೂಪರ್ ಹಿಟ್’. ನಾಗೇಂದ್ರ ಪ್ರಸಾದ್ ಅವರ ಸಹೋದರ ವಿಜಯಾನಂದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಗಿಲ್ಲಿ ನಟ (Gilli Nata), ಗೌರವ್ ಶೆಟ್ಟಿ, ಶ್ವೇತಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಫೆಬ್ರವರಿ 27ರಂದು ‘ಸೂಪರ್ ಹಿಟ್’ (Super Hit) ರಿಲೀಸ್ ಆಗಲಿದೆ. ರಿಲೀಸ್ ಡೇಟ್ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಯಿತು. ಅದರಲ್ಲಿ ಗಿಲ್ಲಿ ನಟ, ಸಾಧುಕೋಕಿಲ, ನಾಗೇಂದ್ರ ಪ್ರಸಾದ್, ನಿರ್ಮಾಪಕ ಜಿ. ಉಮೇಶ್ ಮುಂತಾದವರು ಭಾಗಿಯಾಗಿದ್ದರು.
ಟೀಸರ್ ಮೂಲಕ ‘ಸೂಪರ್ ಹಿಟ್’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಯಿತು. ಜಿ. ಉಮೇಶ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ವಿಜಯಾನಂದ್ ಅವರು ಮಾತನಾಡಿದರು. ಕಥೆ ಬರೆಯಲು ಶುರು ಮಾಡಿದಾಗಿನಿಂದ ಈವರೆಗೂ ಎಲ್ಲವೂ ಹೂವೆತ್ತಿಟ್ಟಷ್ಟೇ ಸಲೀಸಾಗಿ ನಡೆಯುತ್ತಾ ಬಂದಿದೆ ಎಂಬ ಧನ್ಯತಾ ಭಾವ ವ್ಯಕ್ತಪಡಿಸಿದರು. ಯಾವುದೇ ಕೊರತೆ ಆಗದಂತೆ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಜಿ. ಉಮೇಶ್ ಅವರ ಸಿನಿಮಾಪ್ರೇಮವನ್ನು ಕೊಂಡಾಡಿದರು.
ಸಿನಿಮಾ ಮೂಡಿಬಂದ ರೀತಿಯ ಬಗ್ಗೆ ವಿಜಯಾನಂದ್ ಅವರಿಗೆ ಹೆಮ್ಮೆ ಇದೆ. ಅಲ್ಲದೇ ಈ ಸಿನಿಮಾ ಖಂಡಿತಾ ಹಿಟ್ ಆಗುತ್ತದೆ ಎಂಬ ಭರವಸೆ ಕೂಡ ಅವರಿಗೆ ಇದೆ. ಈಗಾಗಲೇ ಹೊಸ ಒಟಿಟಿ ಸಂಸ್ಥೆಯೊಂದು ‘ಸೂಪರ್ ಹಿಟ್’ ಸಿನಿಮಾದ ಹಕ್ಕುಗಳನ್ನು ಖರೀದಿಸಿದೆ ಎಂಬ ಸಿಹಿ ಸುದ್ದಿಯನ್ನು ಅವರು ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಧುಕೋಕಿಲ ಅವರು ಗಿಲ್ಲಿ ಬಗ್ಗೆ ಮೆಚ್ಚುಗೆ ಸೂಚಿಸಿದರು.
‘ಸೂಪರ್ ಹಿಟ್’ ಟೀಸರ್:
‘ಸೂಪರ್ ಹಿಟ್’ ಸಿನಿಮಾಗೆ ನಾಗೇಂದ್ರ ಪ್ರಸಾದ್ ಅವರು ಸಂಗೀತ ನೀಡಿ, ಸಾಹಿತ್ಯ ಬರೆದಿದ್ದಾರೆ. ಅಲ್ಲದೇ ಒಂದು ಪ್ರಮುಖ ಪಾತ್ರ ಕೂಡ ಮಾಡಿದ್ದಾರೆ. ಗಿಲ್ಲಿಯ ಜನಪ್ರಿಯತೆ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂಬುದನ್ನು ನಾಗೇಂದ್ರ ಪ್ರಸಾದ್ ಪುನರುಚ್ಚರಿಸಿದರು. ಗಿಲ್ಲಿ ನಟ ಅಭಿನಯದ ಸಿನಿಮಾ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಜಿ. ಉಮೇಶ್ ಅವರ ‘ವಿಜಯಲಕ್ಷ್ಮಿ ಎಂಟರ್ ಪ್ರೈಸಸ್’ ಮೂಲಕ ‘ಸೂಪರ್ ಹಿಟ್’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ಅವರು ಈ ಚಿತ್ರಕ್ಕೆ ನಾಯಕರಾಗಿದ್ದು, ಶ್ವೇತಾ ಅವರು ನಾಯಕಿಯಾಗಿದ್ದಾರೆ. ಆರ್.ಡಿ. ನಾಗಾರ್ಜುನ ಅವರು ಛಾಯಾಗ್ರಹಣ ಮಾಡಿದ್ದಾರೆ. ಶ್ರೀಕಾಂತ್ ಅವರ ಸಂಕಲನ ಈ ಸಿನಿಮಾಗಿದೆ. ಡ್ರ್ಯಾಗನ್ ಮಂಜು, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜಿಜಿ, ಗಿರಿ, ಕರಿಸುಬ್ಬು, ಟಿನಿಸ್ ಕೃಷ್ಣ, ವಂಶಿ, ಮಂಜಣ್ಣ, ಬಿ.ಎನ್. ಮಂಗಳಾ, ಮಂಗಳೂರು ಮೀನನಾಥ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ.
ಬಾರಾಬಂಕಿ, ಫೆಬ್ರವರಿ 10: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬಾಬರಿ ಮಸೀದಿ ವಿಷಯದ ಬಗ್ಗೆ ತಮ್ಮ ಕಠಿಣ ನಿಲುವನ್ನು ಪುನರುಚ್ಚರಿಸಿದ್ದಾರೆ. ಬಾಬರಿ ಮಸೀದಿಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ. ಈ ಸರ್ಕಾರ ಹೇಳಿದ್ದನ್ನೇ ಮಾಡುತ್ತದೆ ಮತ್ತು ಮಾಡುವುದನ್ನಷ್ಟೇ ಹೇಳುತ್ತದೆ. ನಾವು ಹೇಳಿದಂತೆಯೇ ರಾಮಜನ್ಮ ಭೂಮಿಯಲ್ಲಿ ಬಾಲರಾಮನಿಗೆ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.
ಬಾರಾಬಂಕಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾನು ನೀಡಿದ ಭರವಸೆಗಳನ್ನು ಈಡೇರಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಅಯೋಧ್ಯೆಯ ಬಗ್ಗೆ ಬಿಜೆಪಿಯ ನಿಲುವನ್ನು ನೆನಪಿಸಿಕೊಂಡ ಅವರು, “ನಾವು ರಾಮಲಲ್ಲಾ ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದೆವು, ಇದರಲ್ಲಿ ಯಾವುದರೂ ಸಂದೇಹವಿದೆಯೇ? ತೀರ್ಪಿನ ದಿನಕ್ಕಾಗಿ ಕಾಯುತ್ತಿರುವವರು ಕೊಳೆತುಹೋಗುತ್ತಾರೆ. ಏಕೆಂದರೆ ಅಂತಹ ದಿನ ಎಂದಿಗೂ ಬರುವುದಿಲ್ಲ” ಎಂದು ಸಿಎಂ ಯೋಗಿ ಹೇಳಿದ್ದಾರೆ.
ಭಾರತದ ಪರಂಪರೆ, ಅದ್ಭುತ ಸಂಪ್ರದಾಯಗಳು ಮತ್ತು ಸನಾತನ ಧರ್ಮದ ಬಗ್ಗೆ ಗೌರವವನ್ನು ಒತ್ತಿ ಹೇಳುತ್ತಾ, ಕೇಸರಿ ಧ್ವಜವು ಯಾವಾಗಲೂ ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕೇಸರಿ ಧ್ವಜ ಹಾರಿಸಿರುವುದು ಸನಾತನದ ಸಂಕೇತ ಎಂದು ಸಿಎಂ ಯೋಗಿ ಬಣ್ಣಿಸಿದ್ದಾರೆ.
#WATCH | Barabanki: Uttar Pradesh CM Yogi Adityanath says, “Some opportunists remember Lord Ram when they face crises and forget Him later. So, Lord Ram has also forgotten them. They will not succeed now. They will never go forward now. There is no place for these ‘Ramdrohis’… pic.twitter.com/pWkZPPhwIQ
ಇದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಠಿಣ ಸಂದೇಶ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಜನರು ನಿಯಮಗಳ ಪ್ರಕಾರ ಬದುಕಲು ಕಲಿಯಬೇಕು. ಕಾನೂನನ್ನು ಪಾಲಿಸುವವರು ಪ್ರಯೋಜನ ಪಡೆಯುತ್ತಾರೆ ಮತ್ತು ಅನುಸರಿಸದವರು ನರಕದತ್ತ ಸಾಗುತ್ತಾರೆ. ಕಾನೂನನ್ನು ಉಲ್ಲಂಘಿಸುವ ಮೂಲಕ ಸ್ವರ್ಗವನ್ನು ತಲುಪಬಹುದು ಎಂದು ನಂಬುವವರ ಕನಸುಗಳು ಎಂದಿಗೂ ನನಸಾಗುವುದಿಲ್ಲ” ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಫೆ.10: ಬೆಂಗಳೂರಿಗರೇ ಬೀದಿ.. ಬೀದಿಯಲ್ಲಿ ಸಿಗುವ ಐಸ್ ಕ್ರೀಂ ತಿನ್ನುವ ಮುನ್ನ ಈ ಸುದ್ದಿಯನ್ನು ಒಮ್ಮೆ ಗಮನವಿಟ್ಟು ಓದಿ. ಇತ್ತೀಚಿಗೆ ನಗರದಲ್ಲಿ ಇದೊಂದು ದಂಧೆಯಾಗಿ ನಡೆಯುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರಲು ಇಂತಹ ಆಹಾರಗಳೇ ಕಾರಣ ಎಂದು ಹೇಳಲಾಗುತ್ತಿದೆ. ಬೆಂಳೂರಿನಲ್ಲಿ ಇಂತಹ ಆಹಾರ ವಿಚಾರದಲ್ಲಿ ಅನೇಕ ಘಟನೆಗಳ ಬಗ್ಗೆ ವರದಿಗಳು ಆಗಿವೆ. ಇದೀಗ ಬೆಂಗಳೂರು ಗ್ರಾಮಾಂತರದಲ್ಲಿ ಐಸ್ ಕ್ರೀಂ ತಯಾರಿಕೆಗೆ ಬಳಸುವ ನೀರಿನ ಬಗ್ಗೆ ಕಳವಳಕಾರಿ ವರದಿಯೊಂದು ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಇಂದು ಪತ್ತೆಯಾದ ಈ ಭಯಾನಕ ಸತ್ಯವು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ದೇವನಹಳ್ಳಿ ತಹಶೀಲ್ದಾರ್ ಅನಿಲ್ ನೇತೃತ್ವದ ಅಧಿಕಾರಿಗಳ ತಂಡವು ನಡೆಸಿದ ದಿಢೀರ್ ದಾಳಿಯಿಂದ ಜನರೇ ಶಾಕ್ ಆಗುವ ವಿಚಾರವೊಂದು ಪತ್ತೆಯಾಗಿದೆ. ಐಸ್ ಕ್ರೀಂ ತಯಾರಿಕಾ ಘಟಕದಲ್ಲಿ ಪಾಚಿ ಕಟ್ಟಿದ ನೀರು, ಧೂಳು ಮತ್ತು ಗಲೀಜಿನ ನಡುವೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಐಸ್ ಕ್ರೀಂ ಸಿದ್ಧಪಡಿಸುವುದು ಪತ್ತೆಯಾಗಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಅತ್ಯಂತ ಕಳಪೆ ಮತ್ತು ಅಶುಚಿಯಾದ ವಾತಾವರಣದಲ್ಲಿ ಉತ್ಪಾದನೆ ನಡೆಯುತ್ತಿರುವುದು ಕಂಡುಬಂದಿದೆ.
ಇಲ್ಲಿ ತಯಾರಾದ ಐಸ್ ಕ್ರೀಂಗಳನ್ನು ಪ್ಯಾಕಿಂಗ್ ಮಾಡಿ ವಿತರಿಸುವಾಗ, ಅವುಗಳ ಮೇಲೆ ತಯಾರಿಕೆಯ ದಿನಾಂಕ (MFG Date) ಮತ್ತು ಅವಧಿ ಮುಗಿಯುವ ದಿನಾಂಕ (Expiry Date) ಅನ್ನು ಮನಬಂದಂತೆ ನಮೂದಿಸಲಾಗುತ್ತಿತ್ತು. ಇದು ಗ್ರಾಹಕರ ಮೇಲೆ ದೊಡ್ಡ ಪರಿಣಾಮವನ್ನೇ ಬೀರುವುದು. ಘಟಕದ ಸ್ಥಿತಿಯನ್ನು ಕಂಡು ಸ್ವತಃ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ತಕ್ಷಣವೇ ಈ ಐಸ್ ಕ್ರೀಂ ತಯಾರಿಕಾ ಘಟಕಕ್ಕೆ ಬೀಗ ಜಡಿದು (Seize) ಸೀಲ್ ಮಾಡುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.
ಆಹಾರ ಸುರಕ್ಷತಾ ಇಲಾಖೆಯಿಂದ ಈ ಘಟಕಕ್ಕೆ ನೋಟಿಸ್ ನೀಡಿ, ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಗ್ರಾಹಕರು ಐಸ್ ಕ್ರೀಂ ಖರೀದಿಸುವಾಗ ಕೆಲವೊಂದು ವಿಚಾರಗಳನ್ನು ಗಮನಿಸಲೇಬೇಕು. ಎಫ್ಎಸ್ಎಸ್ಎಐ (FSSAI) ಪರವಾನಗಿ ಇರುವ ಅಧಿಕೃತ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ಗಳನ್ನು ಮಾತ್ರ ಖರೀದಿ ಮಾಡಬೇಕು. ಪ್ಯಾಕೆಟ್ ಮೇಲೆ ನಮೂದಿಸಲಾದ ತಯಾರಿಕೆಯ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕ ಸ್ಪಷ್ಟವಾಗಿದೆಯೇ ಎಂದು ನೋಡಿ. ಅದು ಅಳಿಸಿ ಹೋಗಿದ್ದರೆ ಅಥವಾ ಕೈಬರಹದಲ್ಲಿ ತಿದ್ದಿದ್ದರೆ ಖರೀದಿಸಬೇಡಿ. ಐಸ್ ಕ್ರೀಂ ಪ್ಯಾಕೆಟ್ ಒಳಗೆ ಅಥವಾ ಮೇಲೆ ಹೆಚ್ಚು ಐಸ್ ಹರಳುಗಳು (ಮಂಜುಗಡ್ಡೆಯಂತೆ) ಇರುವುದು ಕಂಡುಬಂದರೆ, ಅದು ಸರಿಯಾದ ತಾಪಮಾನದಲ್ಲಿ ಸ್ಟೋರ್ ಆಗಿಲ್ಲ ಅಥವಾ ಕೆಟ್ಟಿದೆ ಎಂದರ್ಥ. ತಿನ್ನುವಾಗ ಯಾವುದೇ ಹಳಸಿದ ವಾಸನೆ ಅಥವಾ ರಾಸಾಯನಿಕದ ರುಚಿ ಬಂದರೆ ಕೂಡಲೇ ತಿನ್ನುವುದನ್ನು ನಿಲ್ಲಿಸಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.