ಬೆಂಗಳೂರು: ಅಂಜನಾಪುರದಲ್ಲಿ ಮನೆ ಗೇಟ್ ಒಳಗೇ ಬಂತು ಚಿರತೆ!

ಬೆಂಗಳೂರು, ಫೆಬ್ರವರಿ 10: ಬೆಂಗಳೂರಿನ ಅಂಜನಾಪುರದಲ್ಲಿ ಚಿರತೆ ಬಂದಿರುವ ಸಿಸಿಟಿವಿ ವಿಡಿಯೋ ಕೆಲವು ದಿನಗಳ ಹಿಂದೆ ಜನರನ್ನು ಭಯಭೀತರನ್ನಾಗಿಸಿತ್ತು. ಇದೀಗ ಮತ್ತೆ ಅಂಜನಾಪುರದ 5ಜಿ ಬ್ಲಾಕ್​​ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಂದೀಪ್ ಎಂಬುವರ ಮನೆ ಗೇಟ್​ ಬಳಿ ಚಿರತೆ ಕಾಣಿಸಿಕೊಂಡಿದೆ. ತಡರಾತ್ರಿ ಮನೆ ಗೇಟ್ ಒಳಗೇ ಬಂದ ಚಿರತೆ ನಂತರ ಹೊರ ಹೋಗುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆನ್​ಲೈನ್ ಗೇಮಿಂಗ್ ಅಡಿಕ್ಷನ್: ಯುವಜನತೆಯನ್ನು ಸಾವಿನತ್ತ ಸೆಳೆಯುತ್ತಿದೆ ಗೇಮಿಂಗ್ ಗೀಳು! – Kannada News | Why Online Gaming Addiction Is Turning Deadly for Youth

ಯುವಜನತೆಯನ್ನು ಸಾವಿನತ್ತ ಸೆಳೆಯುತ್ತಿದೆ ಗೇಮಿಂಗ್ ಗೀಳು!

ಒಂದು ಕಾಲದಲ್ಲಿ ಮೈದಾನಕ್ಕಿಳಿದು ಆಡುವುದು, ದೋಸ್ತರೊಂದಿಗೆ ಹರಟೆ ಹೊಡೆಯುವುದೇ ಮಕ್ಕಳ ಮತ್ತು ಯುವಕರ ಪಾಲಿನ ಮನರಂಜನೆ ಆಗಿತ್ತು. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಆನ್​ಲೈನ್​ ಗೇಮಿಂಗ್ (Online Gaming), ಈ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಪಬ್​ಜಿ, ಫ್ರೀಫೈರ್ ಎಂದು ಅಡಿಕ್ಟ್ ಆಗಿರುವ ಇಂದಿನ ಯುವ ಸಮಾಜದಲ್ಲಿ ಜನರ ಜೀವಕ್ಕೂ ಬೆಲೆ ಇಲ್ಲದಂತಾಗಿದೆ. ಕೆಲ ವರ್ಷಗಳ ಹಿಂದೆ ಇದೇ ಗೇಮಿಂಗ್ ಗೀಳಿಗೆ ಬಿದ್ದು, ಯುವಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರು. ಇಂದು ಆ ಗೀಳು ಇನ್ನೂ ವಿಕೋಪಕ್ಕೆ ತಿರುಗಿ ಇಡೀ ಕುಟುಂಬವೇ ಪ್ರಾಣ ಕಳೆದುಕೊಳ್ಳುವ ದುಸ್ಥಿತಿ ಬಂದಿದೆ. ಅದಕ್ಕೆ ಉದಾಹರಣೆಯಾಗಿ ಇತ್ತೀಚಿನ ಮೂರು ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸಿವೆ.

ಘಟನೆ-1: ಗಾಜಿಯಾಬಾದ್ – ಆಟದ ಅಂತಿಮ ಟಾಸ್ಕ್‌ಗಾಗಿ ಮೂವರು ಸಹೋದರಿಯರ ಬಲಿ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನೆಲೆಸಿದ್ದ 12, 14 ಮತ್ತು 16 ವರ್ಷದ ಮೂವರು ಸಹೋದರಿಯರು ಕೋರಿಯನ್ ಲವ್ ಗೇಮ್​ ಒಂದಕ್ಕೆ ಇನ್ನಿಲ್ಲದಂತೆ ಅಡಿಕ್ಟ್ ಆಗಿದ್ದರು. ಕೋವಿಡ್ ಸಮಯದಲ್ಲಿ ಮೂವರು ಟೈಮ್ ಪಾಸ್​ಗೆಂದು ಈ ಗೇಮ್​ ಆಡಲು ಶುರು ಮಾಡಿದ್ದರೂ ಕ್ರಮೇಣ ಅದು ಚಟವಾಗಿ ಪರಿಣಮಿಸಿತ್ತು. ಎಷ್ಟರ ಮಟ್ಟಿಗೆಂದರೆ ಅಕ್ಕ-ತಂಗಿಯರೆಲ್ಲರೂ ಶಾಲೆಗೆ ಹೋಗುವುದನ್ನೂ ನಿಲ್ಲಿಸಿದ್ದರು. ಇವರ ವರ್ತನೆಗೆ ಬೇಸತ್ತ ತಂದೆ-ತಾಯಿ ಆಟವಾಡಬೇಡಿ ಎಂದು ತಡೆದಾಗ, ಮಾನಸಿಕ ಒತ್ತಡಕ್ಕೆ ಸಿಲುಕಿದ ಮಕ್ಕಳು, ಬೆಳಗಿನ ಜಾವ 2 ಗಂಟೆಗೆ, ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಒಬ್ಬೊಬ್ಬರಾಗಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ ಬೆಂಗಳೂರು: ಫ್ರೀಫೈರ್ ಗೇಮ್​​ಗೆ ಅಡಿಕ್ಟ್! ಅಕ್ಕನ ಮಗನನ್ನೇ ಕೊಂದ ಮಾವ

ಘಟನೆ – 2: ಬೆಂಗಳೂರು – ಗೇಮ್ ಚಟಕ್ಕೆ ಬಿದ್ದವನ ಕೊಲೆ, ಬಳಿಕ ಸಾಮೂಹಿಕ ಆತ್ಮಹತ್ಯೆ

ಸೋಲದೇವನಹಳ್ಳಿಯಲ್ಲಿ ಫ್ರೀಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಬಾಲಕ ಅಮೋಘಕೀರ್ತಿ ಹಣಕ್ಕಾಗಿ ಮನೆಯವರನ್ನು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಆತನ ಮಾವ ನಾಗಪ್ರಸಾದ್ ಬಾಲಕನನ್ನೇ ಕೊಲೆ ಮಾಡಿದ್ದ. ಈ ಅಪರಾಧದ ಪಶ್ಚಾತ್ತಾಪ, ಸಮಾಜದ ಒತ್ತಡ ಮತ್ತು ಮನೋವ್ಯಥೆ ಕುಟುಂಬವನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು. ಕೊಲೆ ಬಳಿಕ ಜೈಲು ಸೇರಿದ್ದವ ನಂತರ ಜಾಮೀನಿನ ಮೇಲೆ ಹೊರಬಂದು ಟೆಂಪಲ್ ರನ್ ಮಾಡಿದರೂ ಮನಸ್ಸಿಗೆ ಶಾಂತಿ ಸಿಕ್ಕಿರಲಿಲ್ಲ. ಕೊನೆಗೆ ಬಿಹಾರ ಪ್ರವಾಸದ ವೇಳೆ ನಾಗಪ್ರಸಾದ್ ಸೇರಿದಂತೆ ಕುಟುಂಬದ ನಾಲ್ವರೂ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕನೊಬ್ಬನ ಗೇಮಿಂಗ್ ಚಟ ಇಡೀ ಕುಟುಂಬವನ್ನೇ ಸುಡುಗಾಡು ಸೇರಿಸಿದೆ.

ಇದನ್ನೂ ಓದಿ ಫ್ರೀಫೈರ್​​ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗನನ್ನೇ ಕೊಂದಿದ್ದ ಮಾವ ಸೇರಿ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣು!

ಕೇವಲ ಮಾನಸಿಕ ಒತ್ತಡ ಮಾತ್ರವಲ್ಲ, ದೈಹಿಕವಾಗಿಯೂ ಪರಿಣಾಮ ಬೀರುತ್ತೆ ಆನ್​ಲೈನ್ ಗೇಮ್!

ಆನ್​ಲೈನ್ ಗೇಮ್​ ಕೇವಲ ಮಾನಸಿಕ ಮಾತ್ರವಲ್ಲದೆ ದೈಹಿಕವಾಗಿಯೂ ಮಾರಕವಾಗಿದೆ ಎಂಬುದಕ್ಕೆ ಮೀರತ್​ನ ಘಟನೆಯೊಂದು ಸಾಕ್ಷಿಯಾಗಿದೆ.  22 ವರ್ಷದ ಮೊಹಮ್ಮದ್ ಕೈಫ್ ಪಬ್‌ಜಿ ಗೇಮ್‌ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದ. ರಾತ್ರಿ 3 ಗಂಟೆಗೆ ಪಬ್‌ಜಿ ಆಡುತ್ತಿದ್ದಾಗಲೇ ಅವನಿಗೆ ಹೈಪರ್‌ಟೆನ್ಷನ್ ಉಂಟಾಗಿ, ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು. ರಕ್ತದೊತ್ತಡ 300ಕ್ಕಿಂತ ಹೆಚ್ಚಾಗಿತ್ತು. ಎರಡು ದಿನಗಳ ಚಿಕಿತ್ಸೆ ಬಳಿಕವೂ ಕೈಫ್ ಪ್ರಾಣ ಕಳೆದುಕೊಂಡಿದ್ದಾನೆ. ವೈದ್ಯರ ಪ್ರಕಾರ, ಡೋಪಮೈನ್ ಹೆಚ್ಚಳ, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡವೇ ಈ ಸಾವಿಗೆ ಕಾರಣ. ಇದು ನೇರವಾಗಿ ಆತ್ಮಹತ್ಯೆಯಲ್ಲದಿದ್ದರೂ, ಗೇಮ್ ಗೀಳಿಗೆ ಬಿದ್ದ ಯುವಕ ಹೊರಗಿನ ಪ್ರಪಂಚವನ್ನೇ ಮರೆತು, ತನ್ನ ಆರಗ್ಯವನ್ನೂ ಲೆಕ್ಕಿಸದೆ, ಹಗಲು ರಾತ್ರಿ ಗೇಮ್ ಆಡಿ ತನ್ನ ಪ್ರಾಣವನ್ನು ತಾನೆ ಕಳೆದುಕೊಂಡ ಘಟನೆಯಾಗಿದೆ.

ಇದನ್ನೂ ಓದಿ ಆನ್​ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಸಹೋದರಿಯರು 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

 ಆನ್‌ಲೈನ್ ಗೇಮಿಂಗ್ ವಿರುದ್ದ ಕರ್ನಾಟಕದ ಧ್ವನಿ

ಇಂತಹ ಹಲವು ಘಟನೆಗಳು ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್ ಹಾಗೂ ಜೂಜಾಟದ ವಿರುದ್ಧ ವಿವಿಧ ಹಂತಗಳಲ್ಲಿ ರಾಜಕೀಯ ವಲಯದಿಂದ ಗಟ್ಟಿ ಧ್ವನಿಗಳು ಕೇಳಿಬಂದಿವೆ. 2021ರಲ್ಲಿ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆಯನ್ನು ಮಂಡಿಸುವ ಮೂಲಕ ಆನ್‌ಲೈನ್ ಗೇಮಿಂಗ್ ನಿಷೇಧಕ್ಕೆ ಆಗಿನ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಪ್ರಮುಖ ಪಾತ್ರ ವಹಿಸಿದ್ದರು.

ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಆನ್‌ಲೈನ್ ಜೂಜಾಟ ನಿಷೇಧಕ್ಕೆ ಆಗ್ರಹಿಸಿದ ಬೃಹತ್ ವಿದ್ಯಾರ್ಥಿ ರ್ಯಾಲಿಯಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆನ್‌ಲೈನ್ ಗೇಮಿಂಗ್‌ನಿಂದ ಸಮಾಜಕ್ಕೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಂಪುಟ ಸಭೆಯಲ್ಲಿ ನಿಷೇಧದ ಪರವಾಗಿ ಧ್ವನಿ ಎತ್ತಿದ್ದರು. ಇತ್ತೀಚೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆನ್‌ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ತರಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೋ ಓದಿ ಹೆಡ್​ಫೋನ್ ಹಾಕಿಕೊಂಡು ಪಬ್​​ಜಿ ಆಡುತ್ತಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಹೆಚ್ಚಾಯ್ತು ರಕ್ತದೊತ್ತಡ, ಮೆದುಳಿನಲ್ಲಿ ರಕ್ತಸ್ರಾವವಾಗಿ ಸಾವು

ಕಳೆದ ಒಂದು ವರ್ಷದಲ್ಲಿ ಭಾರತದ 100ಕ್ಕೂ ಹೆಚ್ಚು ಜೀವಗಳು ಇದೇ ಗೇಮ್ ಗೀಳಿಗೆ ಬಲಿಯಾಗಿವೆ. ಅಪ್ರಾಪ್ತರಿಗೆ ಟಾಸ್ಕ್ ಆಧಾರಿತ, ಹಿಂಸಾತ್ಮಕ ಹಾಗೂ ಮಾನಸಿಕ ಒತ್ತಡ ನೀಡುತ್ತಿರುವ ಈ ಆನ್​ಲೈನ್ ಗೇಮ್​ಗಳು ಇನ್ನೆಷ್ಟು ಜೀವಗಳನ್ನು ಬಲಿಪಡೆಯಬೇಕೆಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ – Kannada News | Sunetra Pawar Assumes Office as Maharashtra’s Deputy Chief Minister

ಪುಣೆ, ಫೆಬ್ರವರಿ 10: ಎನ್​ಸಿಪಿಯ ಹಿರಿಯ ನಾಯಕಿ ಸುನೇತ್ರಾ ಪವಾರ್ ಇಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಸಚಿವಾಲಯಕ್ಕೆ ಆಗಮಿಸಿ ತಮ್ಮ ಕೆಲಸ ಆರಂಭಿಸಿದ್ದಾರೆ. ಸುನೇತ್ರಾ ಪವಾರ್ ಅವರು ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿರುವುದರಿಂದ ಇದು ಮಹಾರಾಷ್ಟ್ರ ರಾಜಕೀಯದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಸುನೇತ್ರಾ ಅವರ ಪತಿ ಅಜಿತ್ ಪವಾರ್ ಅವರ ಹಠಾತ್ ನಿಧನದ ನಂತರ ಅವರು ಈ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಅಧಿಕಾರ ವಹಿಸಿಕೊಳ್ಳುವ ಮೊದಲು, ಸುನೇತ್ರಾ ಪವಾರ್ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದಾದರ್‌ನ ಚೈತ್ಯಭೂಮಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಅವರು ತಮ್ಮ ಹಿರಿಯ ಮಗ ಪಾರ್ಥ್ ಪವಾರ್ ಮತ್ತು ಹಿರಿಯ ಎನ್‌ಸಿಪಿ ನಾಯಕರೊಂದಿಗೆ ಸಚಿವಾಲಯಕ್ಕೆ ತೆರಳಿದರು. ಸುನೇತ್ರಾ ಪವಾರ್ ಅವರಿಗೆ ಈ ಹಿಂದೆ ಅಜಿತ್ ಪವಾರ್ ಹೊಂದಿದ್ದ ಅದೇ ಖಾತೆಗಳನ್ನು ನೀಡಲಾಗಿದೆ. ಜನವರಿ 31 ರಂದು ರಾಜಭವನದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಅವರಿಗೆ ಪ್ರಮಾಣವಚನ ಬೋಧಿಸಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಜೈಲಿಗೆ ಹೋದ ಖ್ಯಾತ ಕಮಿಡಿಯನ್ ಸಹಾಯಕ್ಕೆ ಧಾವಿಸಿದ ಸೋನು ಸೂದ್ – Kannada News | Sonu Sood extended his help to Rajpal Yadav

ಸೋನು ಸೂದ್ (Sonu Sood), ಕೋವಿಡ್ ಸಮಯದಲ್ಲಿ ಮಾಡಿದ ಅಭೂತಪೂರ್ವ ಸಮಾಜ ಸೇವೆ ಅವರಿಗೆ ‘ಮಸೀಹ’ (ದೇವರ ಅವತಾರ) ಎಂಬ ಹೆಸರು ತಂದುಕೊಟ್ಟಿದೆ. ಕೋವಿಡ್ ಬಳಿಕವೂ ಸಹ ಸೋನು ಸೂದ್ ಅವರು ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರೆಸಿದ್ದಾರೆ. ಹಲವಾರು ಮಕ್ಕಳ ಶಿಕ್ಷಣ, ಆರೋಗ್ಯ ಚಿಕಿತ್ಸೆಗಳಿಗೆ ನೆರವಾಗುತ್ತಲೇ ಇದ್ದಾರೆ. ಇದೀಗ ಸೋನು ಸೂದ್, ತಮ್ಮದೇ ಚಿತ್ರರಂಗದ ಸಹನಟನಿಗೆ ಸಹಾಯ ಘೋಷಿಸಿದ್ದಾರೆ. ಇತ್ತೀಚೆಗಷ್ಟೆ ಜೈಲುಪಾಲಾದ ಖ್ಯಾತ ಹಾಸ್ಯ ನಟ ರಾಜ್​​ಪಾಲ್ ಯಾದವ್​​ ಅವರಿಗೆ ತಾವು ಸಹಾಯ ಮಾಡುವುದಾಗಿ ಸೋನು ಸೂದ್ ಹೇಳಿದ್ದಾರೆ.

9 ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯವು ರಾಜ್​​ಪಾಲ್ ಯಾದವ್ ಅವರು ಅಪರಾಧಿ ಎಂದು ತೀರ್ಪು ನೀಡಿದ್ದು, ರಾಜ್​ಪಾಲ್ ಅವರಿಗೆ ಶಿಕ್ಷೆ ವಿಧಿಸಿದೆ. ಜೈಲಿಗೆ ಹೋಗುವ ಮುಂಚೆ ಹೇಳಿಕೆ ನೀಡಿದ್ದ ರಾಜ್​ಪಾಲ್ ಯಾದವ್, ತಮ್ಮ ಬಳಿ ಹಣವೂ ಇಲ್ಲ, ಯಾರೂ ಸ್ನೇಹಿತರೂ ಇಲ್ಲ’ ಎಂದಿದ್ದರು. ಇದೀಗ ಸೋನು ಸೂದ್, ರಾಜ್​ಪಾಲ್ ಯಾದವ್ ಅವರಿಗೆ ನೆರವಾಗಲು ಮುಂದೆ ಬಂದಿದ್ದಾರೆ.

ರಾಜ್​ಪಾಲ್ ಯಾದವ್​​ಗೆ ಸಹಾಯ ಮಾಡಲು ಮುಂದೆ ಬಂದಿರುವ ಸೋನು ಸೂದ್, ರಾಜ್​ಪಾಲ್ ಅವರಿಗೆ ತಮ್ಮ ಸಿನಿಮಾನಲ್ಲಿ ಪಾತ್ರ ನೀಡುವ ಜೊತೆಗೆ ಅವರಿಗೆ ಒಳ್ಳೆಯ ಮೊತ್ತವನ್ನು ಮುಂಗಡವಾಗಿ ನೀಡುವುದಾಗಿಯೂ ಸಹ ಹೇಳಿದ್ದಾರೆ. ಅಲ್ಲದೆ, ಇದು ನಾನು ಅವರಿಗೆ ಮಾಡುತ್ತಿರುವ ಸಹಾಯ ಏನಲ್ಲ ಬದಲಿಗೆ ಒಬ್ಬ ಕಲಾವಿದನಿಗೆ ನೀಡುತ್ತಿರುವ ಬೆಂಬಲ ಅಷ್ಟೆ ಎಂದಿದ್ದಾರೆ.

ಇದನ್ನೂ ಓದಿ:ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಸೋನು ಸೂದ್, ಚಿತ್ರರಂಗದ ಇತರರು ಸಹ ಮುಂದೆ ಬಂದು ರಾಜ್​ಪಾಲ್ ಯಾದವ್ ಅವರಿಗೆ ಸಹಾಯ ಮಾಡಬೇಕು ಎಂದಿದ್ದಾರೆ. ‘ರಾಜ್‌ಪಾಲ್ ಯಾದವ್ ಒಬ್ಬ ಪ್ರತಿಭಾನ್ವಿತ ನಟ, ಅವರು ನಮ್ಮ ಚಿತ್ರರಂಗಕ್ಕೆ ವರ್ಷಗಳ ಕಾಲ ಮರೆಯಲಾಗದ ನೆನಪುಗಳನ್ನು ನೀಡಿದ್ದಾರೆ. ಕೆಲವೊಮ್ಮೆ ಸಂದರ್ಭಗಳು ಸಂಕಟಮಯ ಆಗಿಬಿಡುತ್ತವೆ, ಈಗ ಅವರ ಸಮಯ ಕ್ರೂರವಾಗಿದೆ. ಅವರು, ನಾನು ಬದುಕುತ್ತಿರುವ ಚಿತ್ರರಂಗದ ಭಾಗವೇ ಆಗಿದ್ದಾರೆ ಮತ್ತು ನಿರ್ಮಾಪಕರು, ನಿರ್ದೇಶಕರು, ಸಹೋದ್ಯೋಗಿಗಳು ಒಟ್ಟಾಗಿ ನಿಲ್ಲುವ ಕ್ಷಣ ಎಂದು ನಾನು ನಂಬುತ್ತೇನೆ. ಭವಿಷ್ಯದ ಕೆಲಸಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಬಹುದಾದ ಸಣ್ಣ ಮುಂಗಡ ಮೊತ್ತ ದಾನವಲ್ಲ, ಅದು ಘನತೆ’ ಎಂದಿದ್ದಾರೆ.

ಆ ಮೂಲಕ ಸಿನಿಮಾಕ್ಕಾಗಿ ಅಡ್ವಾನ್ಸ್ ಹಣವನ್ನು ನೀಡುವ ಮೂಲಕ ರಾಜ್​ಪಾಲ್ ಯಾದವ್ ಅವರಿಗೆ ಈ ಕ್ಷಣದಲ್ಲಿ ನೆರವಾಗಬೇಕಿದೆ ಎಂದಿದ್ದಾರೆ. ಅಸಲಿಗೆ ರಾಜ್​ಪಾಲ್ ಯಾದವ್ ಅವರಿಗೆ ಚಿತ್ರರಂಗದಲ್ಲಿ ಕೆಲವು ಗೆಳೆಯರಿದ್ದಾರೆ. ವರುಣ್ ಧವನ್ ತಂದೆ ಡೇವಿಡ್ ಧವನ್, ರಾಜ್​ಪಾಲ್ ಅವರಿಂದ ಸಾಕಷ್ಟು ಕೆಲಸ ತೆಗೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಿಯದರ್ಶನ್ ಸಹ ಸಾಕಷ್ಟು ಕೆಲಸ ಮಾಡಿಸಿಕೊಂಡಿದ್ದಾರೆ. ಇನ್ನೂ ಕೆಲವು ನಿರ್ದೇಶಕರುಗಳು ಸಹ ರಾಜ್​ಪಾಲ್ ಯಾದವ್ ಅವರಿಂದ ಕೆಲಸ ಮಾಡಿಸಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ ಅವರು ಬಹುತೇಕ ಮೌನವಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಲ್ಲಿ ಗನ್​​ ಹಿಡಿದು ಕಾಂಗ್ರೆಸ್​​ ಮುಖಂಡನ ಡ್ಯಾನ್ಸ್​: ವಿಡಿಯೋ ವೈರಲ್​ – Kannada News | Afzalpur Congress Leader Matheen Ahmed Patel Sparks Controversy Dancing With Gun

ಕಲಬುರಗಿ, ಫೆಬ್ರವರಿ 10: ಮದುವೆ ಸಮಾರಂಭವೊಂದರಲ್ಲಿ ಅಫಜಲ್ಪುರ ಕಾಂಗ್ರೆಸ್ ಮುಖಂಡ ಮತಿನ್ ಅಹ್ಮದ್ ಪಟೇಲ್ ಪಿಸ್ತೂಲ್ ಹಿಡಿದು ದುರಂಧರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಶಾಸಕ ಎಂ.ವೈ.ಪಾಟೀಲ್ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿರುವ ಮತಿನ್ ಪಟೇಲ್ ಅವರ ಈ ಶೋ ಆಫ್ ನಡೆ ಕಾನೂನುಬಾಹಿರ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕವಾಗಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವುದು ಅಪರಾಧ. ಅದರಲ್ಲೂ ಮದುವೆ ಸಮಾರಂಭದಂತಹ ಜನಸಂದಣಿಯ ಪ್ರದೇಶದಲ್ಲಿ ಪಿಸ್ತೂಲ್ ಹಿಡಿದು ಬಿಲ್ಡಪ್ ನೀಡಿರುವುದು ಗಂಭೀರ ವಿಚಾರ ಎಂದು ಪರಿಗಣಿಸಿ ಈ ಸಂಬಂಧ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಮತಿನ್ ಪಟೇಲ್ ಬಳಸಿದ ಪಿಸ್ತೂಲ್ ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆ ಹಾಗೂ ಅದಕ್ಕೆ ಪರವಾನಿಗೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Mayuranathaswamy Temple: ಪಾರ್ವತಿ ದೇವಿಯೇ ಶಿವಲಿಂಗ ಪ್ರತಿಷ್ಠಾಪಿಸಿದ ಮಯೂರನಾಥ ದೇವಾಲಯ ಎಲ್ಲಿದೆ ಗೊತ್ತಾ? – Kannada News | Mayuranathaswamy Temple Mayiladuthurai: Shiva and Peacock Goddess Legend

ಮಯೂರನಾಥ ಸ್ವಾಮಿ ದೇವಾಲಯImage Credit source: Pinterest

ತಮಿಳುನಾಡು ರಾಜ್ಯವು ಅನೇಕ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವದ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಅದಕ್ಕಾಗಿಯೇ ಇದನ್ನು “ದೇವಾಲಯಗಳ ನಾಡು” ಎಂದು ಕರೆಯಲಾಗುತ್ತದೆ. ಅರುಣಾಚಲೇಶ್ವರ, ಚಿದಂಬರಂ ನಟರಾಜ ಹಾಗೂ ಮೀನಾಕ್ಷಿ ಅಮ್ಮನ್ ದೇವಾಲಯಗಳಂತೆ ಹಲವು ಶೈವ ಕ್ಷೇತ್ರಗಳ ನಡುವೆ ಮೈಲಾಡುತುರೈನಲ್ಲಿ ಇರುವ ಮಯೂರನಾಥ ಸ್ವಾಮಿ ದೇವಾಲಯವೂ ತನ್ನ ಪುರಾತನತೆ, ವೈಶಿಷ್ಟ್ಯಮಯ ಪುರಾಣ ಕಥೆಗಳು ಮತ್ತು ಭವ್ಯ ವಾಸ್ತುಶಿಲ್ಪದಿಂದ ವಿಶೇಷ ಸ್ಥಾನ ಪಡೆದಿದೆ. ಇದು ಕೇವಲ ಭಕ್ತರಿಗಷ್ಟೇ ಅಲ್ಲದೆ ಇತಿಹಾಸ ಮತ್ತು ಸಂಸ್ಕೃತಿ ಪ್ರಿಯರಿಗೂ ಆಕರ್ಷಕ ತಾಣವಾಗಿದೆ.

ಈ ದೇವಾಲಯದ ಅತ್ಯಂತ ವಿಶಿಷ್ಟ ಅಂಶವೆಂದರೆ, ಇಲ್ಲಿ ಶಿವನು ‘ಮಯೂರನಾಥ’ ರೂಪದಲ್ಲಿ ಪೂಜಿಸಲ್ಪಡುವುದು. ಪುರಾಣಗಳ ಪ್ರಕಾರ, ಪಾರ್ವತಿ ದೇವಿಯೇ ನವಿಲಿನ ರೂಪದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾಳೆ. ದಕ್ಷ ಪ್ರಜಾಪತಿಯ ಯಜ್ಞದಲ್ಲಿ ಉಂಟಾದ ಅವಮಾನ ಮತ್ತು ಆತ್ಮಶುದ್ಧಿಗಾಗಿ ಪಾರ್ವತಿ ದೇವಿ ತಪಸ್ಸು ಮಾಡಿ, ತನ್ನ ಮುಂದಿನ ಜನ್ಮದಲ್ಲಿ ನವಿಲಾಗಿ ಹುಟ್ಟಿ ಶಿವನ ಆರಾಧನೆ ಮಾಡಿದಳು ಎಂದು ಕಥೆಗಳು ಹೇಳುತ್ತವೆ. ಈ ಕಾರಣದಿಂದಲೇ ‘ಮಯೂರ’ (ನವಿಲು) + ‘ನಾಥ’ (ಶಿವ) ಎಂಬ ಹೆಸರಿನಿಂದ ದೇವಾಲಯಕ್ಕೆ ಮಯೂರನಾಥ ಎಂದು ಹೆಸರು ಬಂದಿದೆ. ಇಲ್ಲಿ ಪಾರ್ವತಿ ದೇವಿಯನ್ನು ಅಭಯಾಂಬಿಕಾ ಮತ್ತು ಅಭಯಪ್ರದಾಂಬಿಕಾ ಎಂದು ಪೂಜಿಸಲಾಗುತ್ತದೆ.

ಮಯೂರನಾಥ ದೇವಾಲಯವು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಮೈಲಾಡುತುರೈ (ಹಿಂದೆ ಮಾಯಾವರಂ) ಪಟ್ಟಣದಲ್ಲಿ ಇದೆ. ಭವ್ಯವಾದ ಒಂಬತ್ತು ಅಂತಸ್ತಿನ ರಾಜಗೋಪುರ, ಸುಂದರ ಶಿಲ್ಪಗಳು, ಸೂಕ್ಷ್ಮವಾದ ಕಲ್ಲಿನ ಕೆತ್ತನೆಗಳು ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಈ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿವೆ. ಪ್ರಾಚೀನ ಶಾಸನಗಳ ಪ್ರಕಾರ, ಈ ದೇವಾಲಯವನ್ನು ಚೋಳರ ಕಾಲದಲ್ಲಿ, ಕ್ರಿ.ಶ. 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬರುತ್ತದೆ. ಶಿಲ್ಪಕಲೆ ಮತ್ತು ಕಟ್ಟಡ ವಿನ್ಯಾಸದಲ್ಲಿ ಆ ಕಾಲದ ಕಲಾತ್ಮಕ ಮೆರುಗು ಸ್ಪಷ್ಟವಾಗಿ ಕಾಣಿಸುತ್ತದೆ.

ಸ್ಥಳೀಯ ದಂತಕಥೆಯ ಪ್ರಕಾರ, ದಕ್ಷ ಯಜ್ಞದ ಸಂದರ್ಭದಲ್ಲಿ ಯಜ್ಞಗುಂಡದಲ್ಲಿದ್ದ ಮರಿ ನವಿಲು ಭಯದಿಂದ ಪಾರ್ವತಿ ದೇವಿಯ ಮಡಿಲಲ್ಲಿ ಅಡಗಿಕೊಂಡಿತು. ಆ ನವಿಲನ್ನು ರಕ್ಷಿಸಲು ಪಾರ್ವತಿ ದೇವಿ ತಪಸ್ಸು ಕೈಗೊಂಡಳು. ಆ ತಪಸ್ಸಿನ ಫಲವಾಗಿ ಅವಳು ಮುಂದಿನ ಜನ್ಮದಲ್ಲಿ ನವಿಲಾಗಿ ಹುಟ್ಟಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವನ ಅನುಗ್ರಹ ಪಡೆದಳು. ಈ ಕಥೆ ಭಕ್ತರಲ್ಲಿ ಭಕ್ತಿ, ಕರುಣೆ ಮತ್ತು ಆತ್ಮಶುದ್ಧಿಯ ಸಂದೇಶವನ್ನು ಸಾರುತ್ತದೆ.

ಇದನ್ನೂ ಓದಿ: ದಿನಕ್ಕೆ 5 ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ, ಈ ಅದ್ಭುತ ದೇವಸ್ಥಾನ ಎಲ್ಲಿದೆ ಗೊತ್ತಾ?

ಈ ಕ್ಷೇತ್ರಕ್ಕೆ ಆಧ್ಯಾತ್ಮಿಕ ಮಹತ್ವವೂ ಅಪಾರವಾಗಿದೆ. ದೇವಾಲಯದ ಆವರಣದಲ್ಲಿ ಪಾರ್ವತಿ ದೇವಿ ಆಲದ ಮರದ ಕೆಳಗೆ ತಪಸ್ಸು ಮಾಡಿದಳು ಎಂದು ನಂಬಲಾಗುತ್ತದೆ. ಹತ್ತಿರದ ಕಾವೇರಿ ನದಿ ಮತ್ತು ವೃಷಭ ತೀರ್ಥ ಸಂಗಮವನ್ನು ‘ದಕ್ಷಿಣ ತ್ರಿವೇಣಿ ಸಂಗಮ’ ಎಂದು ಕರೆಯುತ್ತಾರೆ. ಪ್ರತಿ ಹುಣ್ಣಿಮೆಯಂದು ಇಲ್ಲಿ ಸ್ನಾನ ಮಾಡಿದರೆ ಪಾಪಕ್ಷಯ ಮತ್ತು ಮನಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಮಹಾಶಿವರಾತ್ರಿ, ಕಾರ್ತಿಕ ಮಾಸ ಹಾಗೂ ಇತರ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಈ ದೇವಾಲಯ ಭಕ್ತರಿಂದ ಕಿಕ್ಕಿರಿದು ಕಾಣುತ್ತದೆ. ಶಿವನ ನಾಮಸ್ಮರಣೆ, ವಿಶೇಷ ಪೂಜೆಗಳು ಮತ್ತು ಉತ್ಸವಗಳು ಭಕ್ತರಿಗೆ ಆಧ್ಯಾತ್ಮಿಕ ಉಲ್ಲಾಸವನ್ನು ನೀಡುತ್ತವೆ. ಹೀಗಾಗಿ ಮಯೂರನಾಥ ದೇವಾಲಯವು ಕೇವಲ ಐತಿಹಾಸಿಕ ಸ್ಮಾರಕವಲ್ಲ, ಶಿವಭಕ್ತರಿಗಾಗಿ ಶಾಂತಿ, ಭಕ್ತಿ ಮತ್ತು ಆತ್ಮಚಿಂತನೆಯ ಜೀವಂತ ಕೇಂದ್ರವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ – Kannada News | US reduces tariffs on Bangladesh to 19pc, after both countries sign for trade deal

ಅಮೆರಿಕ ಬಾಂಗ್ಲಾದೇಶ ವ್ಯಾಪಾರ ಒಪ್ಪಂದ

ಢಾಕಾ, ಫೆಬ್ರುವರಿ 10: ಅಮೆರಿಕ ಮತ್ತು ಬಾಂಗ್ಲಾದೇಶ ಮಧ್ಯೆ ವ್ಯಾಪಾರ ಒಪ್ಪಂದ (US Bangladesh trade deal) ಏರ್ಪಟ್ಟಿದೆ. ಎರಡೂ ದೇಶಗಳು ಒಪ್ಪಂದಕ್ಕೆ ಸಹಿಹಾಕಿವೆ. ಅದರ ಪ್ರಕಾರ, ಬಾಂಗ್ಲಾದೇಶಕ್ಕೆ ವಿಧಿಸುವ ಟ್ಯಾರಿಫ್ ಅನ್ನು ಅಮೆರಿಕ ಶೇ. 19ಕ್ಕೆ ಇಳಿಸಲಿದೆ. ಅಮೆರಿಕದ ಸಾಮಗ್ರಿಗಳಿಂದ ತಯಾರಾದ ಕೆಲ ಜವಳಿ ಮತ್ತು ಉಡುಪುಗಳ ಮೇಲೆ ಅಮೆರಿಕ ಟ್ಯಾರಿಫ್​ನಿಂದ ಪೂರ್ಣ ವಿನಾಯಿತಿ ಕೊಡಲಿದೆ.

ಇದಕ್ಕೆ ಬದಲಾಗಿ, ಅಮೆರಿಕದ ಹೆಚ್ಚಿನ ಉತ್ಪನ್ನಗಳಿಗೆ ಬಾಂಗ್ಲಾದೇಶದ ಮಾರುಕಟ್ಟೆಗೆ ಮುಕ್ತ ಪ್ರವೇಶ ಸಿಗಲಿದೆ. ಸೋಯಾ ಉತ್ಪನ್ನಗಳು, ಡೈರಿ ಉತ್ಪನ್ನಗಳು, ಬೀಫ್, ಯಂತ್ರೋಪಕರಣ, ವಾಹನ, ವಾಹನ ಬಿಡಿಭಾಗಗಳು, ರಾಸಾಯನಿಕ, ಹಣ್ಣು, ವೈದ್ಯಕೀಯ ಸಾಧನ ಇತ್ಯಾದಿ ಅಮೆರಿಕದ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ಬಾಂಗ್ಲಾದೇಶ ಆದ್ಯತೆಯ ಮೇಲೆ ಅವಕಾಶ ಕಲ್ಪಿಸಲಿದೆ.

ಇದನ್ನೂ ಓದಿ: ಹಲವು ಇಂಧನದ ಮೂಲಗಳನ್ನು ಅವಲಂಬಿಸುವುದು ಭಾರತದ ಕಾರ್ಯತಂತ್ರ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪ್ರತಿಕ್ರಿಯೆ

ಹಾಗೆಯೇ, ಅಮೆರಿಕದ ವಾಹನ ಸುರಕ್ಷತೆ ಮತ್ತು ಆಹಾರ ಗುಣಮಟ್ಟದ ಪ್ರಮಾಣಪತ್ರ ಮತ್ತು ಮಾನದಂಡಗಳನ್ನು ಬಾಂಗ್ಲಾದೇಶ ಸ್ವೀಕರಿಸಲಿದೆ. ಮರುತಯಾರಿತ ಸರುಕಗಳ ಮೇಲಿನ ಆಮದು ನಿರ್ಬಂಧವನ್ನು ತೆಗೆದುಹಾಕಲಿದೆ ಎಂದು ಅಮೆರಿಕದ ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ 15 ವರ್ಷದಲ್ಲಿ 15 ಬಿಲಿಯನ್ ಡಾಲರ್​ನಷ್ಟು ಅಮೆರಿಕನ್ ಇಂಧನ ಉತ್ಪನ್ನಗಳು, ಹಾಗೂ 3.5 ಬಿಲಿಯನ್ ಡಾಲರ್​ನಷ್ಟು ಕೃಷಿ ಉತ್ಪನ್ನಗಳನ್ನು ಖರೀದಿಸಲು ಬಾಂಗ್ಲಾದೇಶ ಬದ್ಧವಾಗಿದೆ. ಬಿಮಾನ್ ಬಾಂಗ್ಲಾದೇಶ್ ಏರ್ಲೈನ್ಸ್ ಸಂಸ್ಥೆ 14 ಬೋಯಿಂಗ್ ವಿಮಾನಗಳನ್ನು ಖರೀದಿಸಲು ಉದ್ದೇಶಿಸಿದೆ. ಇತರ ದೇಶಗಳ ಬದಲು ಅಮೆರಿಕದಿಂದ ಮಿಲಿಟರಿ ಉಪಕರಣಗಳನ್ನು ಬಾಂಗ್ಲಾದೇಶ ಖರೀದಿ ಮಾಡಲಿದೆ ಎಂದು ಒಪ್ಪಂದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ?

ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಬಾಂಗ್ಲಾದೇಶಕ್ಕೆ ಶೇ. 37ರಷ್ಟು ಪ್ರತಿಸುಂಕ ಹಾಕಿದ್ದರು. ನಂತರ ಅದನ್ನು ಶೇ. 20ಕ್ಕೆ ಇಳಿಸಲು ಬಾಂಗ್ಲಾದೇಶ ಯಶಸ್ವಿಯಾಗಿತ್ತು. ಈಗ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಟ್ಯಾರಿಫ್ ಶೇ. 19ಕ್ಕೆ ಇಳಿದಿದೆ. ಇದೇ ವೇಳೆ, ಭಾರತವು ಟ್ಯಾರಿಫ್ ಅನ್ನು ಶೇ. 18ಕ್ಕೆ ಇಳಿಸಲು ಯಶಸ್ವಿಯಾಗಿರುವುದು ಕುತೂಹಲದ ಸಂಗತಿ. ಬಾಂಗ್ಲಾದೇಶಕ್ಕೆ ಜವಳಿ ರಫ್ತು ಪ್ರಮುಖ ಆದಾಯ ಮೂಲವಾಗಿದೆ. ಭಾರತದ ಟೆಕ್ಸ್​ಟೈಲ್ಸ್ ಉದ್ಯಮಕ್ಕೆ ಕಡಿಮೆ ಟ್ಯಾರಿಫ್​ನ ಅನುಕೂಲ ಸಿಕ್ಕಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಥುರಾದಲ್ಲಿ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ – Kannada News | Five Members of a Family Found Dead in Suspected Suicide Case in Mathura

ಮಥುರಾ, ಫೆಬ್ರವರಿ 10: ಒಂದೇ ಕುಟುಂಬ ಐವರು ಸದಸ್ಯರು ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಪತಿ, ಪತ್ನಿ ಮತ್ತು ಅವರ ಮೂವರು ಮಕ್ಕಳು ರಾತ್ರಿಯಿಡೀ ಹಾಲಿಗೆ ವಿಷ ಬೆರೆಸಿ ಕುಡಿದಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ ಅವರು ಎಚ್ಚರಗೊಳ್ಳದಿದ್ದಾಗ, ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಐವರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ಪರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಗಳು ಮೊದಲು ತಮ್ಮ ಮೂವರು ಮಕ್ಕಳ ಹಾಲಿಗೆ ವಿಷ ಬೆರೆಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಈ ಭಯಾನಕ ಹೆಜ್ಜೆ ಇಟ್ಟಿದ್ದಕ್ಕೆ ಕಾರಣವೇನೆಂದು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಕುಟುಂಬದ ದುರಂತ ನಷ್ಟದ ನಂತರ ಇಡೀ ಪ್ರದೇಶವು ಶೋಕದಲ್ಲಿ ಮುಳುಗಿದೆ. ಕುಟುಂಬವು ಈ ಕಠಿಣ ಕ್ರಮ ಕೈಗೊಳ್ಳಲು ಕಾರಣವೇನೆಂದು ಸಂಬಂಧಿಕರು ಮತ್ತು ನೆರೆಹೊರೆಯವರು ಇನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮತ್ತಷ್ಟು ಓದಿ: ಕೈಕೊಟ್ಟ 3 ವರ್ಷ ಪ್ರೀತಿಸಿದ ಪ್ರೇಯಸಿ: ನೊಂದ ಬಾಡಿಬಿಲ್ಡರ್​​ ತೆಗೆದುಕೊಂಡಿದ್ದು ದುಡುಕಿನ ನಿರ್ಧಾರ

ಮತ್ತೊಂದು ಘಟನೆ
ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಾಗಪ್ರಸನ್ನ, ತಾಯಿ ಸುಮಂಗಲಾ(78), ಸಹೋದರಿ ಶಿಲ್ಪಾ(48), ಶ್ರುತಾ (43) ಆತ್ಮಹತ್ಯೆಗೆ ಶರಣಾದವರು.

ಘಟನಾ ಸ್ಥಳದ ವಿಡಿಯೋ

ಕೆಲ ತಿಂಗಳ ಹಿಂದೆ ಫ್ರೀಫೈರ್ ಗೇಮ್ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾವ ನಾಗಪ್ರಸಾದ್ ಕೊಲೆ ಮಾಡಿದ್ದರು. ಬಾಲಕನ ಸಾವಿನ ಹಿನ್ನೆಲೆ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮೃತ ಶರೀರಗಳ ಬಳಿ ನಿದ್ರೆ ಮಾತ್ರೆಗಳು ಸಿಕ್ಕಿದ್ದು, ಈ ಮಾತ್ರೆಗಳ ಓವರ್ ಡೋಸ್​ನಿಂದಲೇ ಕುಟುಂಬ ಮೃತಪಟ್ಟಿದೆ ಎನ್ನಲಾಗಿದೆ.

ಬಾಲಕ ಅಮೋಘಕೀರ್ತಿ ಮೊಬೈಲ್ ​ನಲ್ಲಿ ಫ್ರೀಫೈರ್ ಗೇಮ್​​ ಗೆ ಅಡಿಕ್ಟ್ ಆಗಿದ್ದ. ಗೇಮ್ ಚಟಕ್ಕೆ ಬಿದ್ದು ಪದೇ ಪದೇ ಹಣ ಕೇಳುತ್ತಿದ್ದ. ಇದರಿಂದ ಬೇಸತ್ತ ನಾಗಪ್ರಸಾದ್ ಬಾಲಕ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ. ಘಟನೆಯ ಬಳಿಕ ಹಣದ ಕೊರತೆಯಿಂದ ಮೆಜೆಸ್ಟಿಕ್‌ನಲ್ಲಿ ಮೂರು ದಿನ ಕಾಲ ತಂಗಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದನು. ಪೊಲೀಸರು ಆತನ ಮೇಲೆ ಎಫ್​ಐಆರ್ ದಾಖಲಿಸಿ ಜೈಲಿನಲ್ಲಿಟ್ಟಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಲಿಸುತ್ತಿದ್ದ KSRTC ಬಸ್‌ನ ಆಕ್ಸೆಲ್ ಕಟ್​​: ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ – Kannada News | Ksrtc bus axle snaps in chamarajanagar major tragedy averted

ಚಾಮರಾಜನಗರ, ಫೆಬ್ರವರಿ 10: ಜಿಲ್ಲೆಯ ತ್ರಯಂಬಕಪುರ ಗೇಟ್ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಆಕ್ಸೆಲ್ ಏಕಾಏಕಿ ಕಟ್ ಆಗಿದ್ದು, ಸಂಭವನೀಯ ದೊಡ್ಡ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಚಾಮರಾಜನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್​ನ ಆಕ್ಸೆಲ್ ಮುರಿದ ಕಾರಣ ಬಸ್ ಮಾರ್ಗ ಮಧ್ಯದಲ್ಲೇ ನಿಂತಿದೆ. ಇದರಿಂದಾಗಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆ ಅನುಭವಿಸಿದ್ದಾರೆ. ಬಸ್‌ಗಳ ಸ್ಥಿತಿಗತಿಯನ್ನು ಪರಿಶೀಲಿಸದೆ ಹೇಗೆ ಡಿಪೋದಿಂದ ಹೊರಗೆ ಕಳುಹಿಸಲಾಗುತ್ತದೆ ಎಂದು ಪ್ರಯಾಣಿಕರು ಪ್ರಶ್ನಿಸಿದ್ದು, ಒಂದು ಸಣ್ಣ ಎಡವಟ್ಟಾಗಿದ್ದರೂ ಕೂಡ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಧಿಕಾರ ಹಂಚಿಕೆ ಚರ್ಚೆ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಮಹತ್ವದ ಹೇಳಿಕೆ ನೀಡಿದ ಡಿಕೆ ಶಿವಕುಮಾರ್ – Kannada News | Power Sharing Row: No Secret Talks With CM Siddaramaiah, Says DK Shivakumar at Bengaluru Airport

ಬೆಂಗಳೂರು, ಫೆಬ್ರವರಿ 10: ಕರ್ನಾಟಕ ಕಾಂಗ್ರೆಸ್​ನಲ್ಲಿ(Congress) ಅಧಿಕಾರ ಹಂಚಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಹತ್ವದ ಹೇಳಿಕೆ ನೀಡಿದ್ದಾರೆ. ದೆಹಲಿಗೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಅವರು, ಸಿಎಂ ಸಿದ್ದರಾಮಯ್ಯ ಜತೆ ಕದ್ದುಮುಚ್ಚಿ ಯಾವುದೇ ಮಾತುಕತೆ ನಡೆಸಿಲ್ಲ. ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಎಲ್ಲರೂ ಸೇರಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದೊಳಗೆ ಅನಗತ್ಯ ಗೊಂದಲ ಸೃಷ್ಟಿಸುವ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ‘ಬಾಯಿ ಮುಚ್ಚಿಕೊಂಡಿರಬೇಕು’ ಎಂದು ಹೇಳಿದ್ದಾರೆ. ಈ ಸೂಚನೆಯನ್ನು ಪಕ್ಷದ ಎಲ್ಲರೂ ಪಾಲಿಸಬೇಕು. ಮಂತ್ರಿಗಳು, ಶಾಸಕರು ಅಥವಾ ಯಾರೇ ಆಗಲಿ, ನೀಡುವ ಹೇಳಿಕೆಗಳು ಪಕ್ಷಕ್ಕೆ ಹಾನಿಕಾರಕವಾಗಬಾರದು, ಬದಲಿಗೆ ಪಕ್ಷಕ್ಕೆ ಒಳಿತು ಮಾಡುವಂತಿರಬೇಕು. ಇಂತಹ ಹೇಳಿಕೆಗಳಿಂದ ಯಾರಿಗೂ ಯಾವುದೇ ಪ್ರಯೋಜನವಾಗುವುದಿಲ್ಲ, ಬದಲಾಗಿ ಪಕ್ಷದ ಇಮೇಜ್‌ಗೆ ಧಕ್ಕೆ ಉಂಟಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಯತೀಂದ್ರ ಅವರಿಗೆ ನೋಟಿಸ್ ನೀಡುವ ವಿಚಾರವಾಗಿ ಇಕ್ಬಾಲ್ ಹುಸೇನ್ ಅವರು ಪ್ರಶ್ನೆ ಮಾಡಿದ್ದಾರೆ. ತಾವು ಮಾತನಾಡಿದರೆ ನೋಟಿಸ್ ನೀಡುತ್ತಾರೆ, ಯತೀಂದ್ರ ಅವರಿಗೆ ಏಕೆ ನೋಟಿಸ್ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ ಎಂಬ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, ‘ಈ ವಿಷಯದ ಬಗ್ಗೆ ಹೈಕಮಾಂಡ್‌ ಬಳಿ ಕೇಳೋಣ ಬಿಡಿ’ ಎಂದರು.

ಪ್ರತಿದಿನವೂ ನನಗೆ ಶುಭದಿನ: ಡಿಕೆ ಶಿವಕುಮಾರ್

ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಡಿಕೆಶಿವಕುಮಾರ್, ಪ್ರತಿದಿನವೂ ನನಗೆ ಶುಭದಿನ. ಪ್ರತಿದಿನವೂ ಕಷ್ಟದ ದಿನವೂ ಹೌದು, ಯಾವುದೂ ಕೂಡ ಸುಲಭವಲ್ಲ ಎಂದು ಹೇಳಿದರು. ಸಾರ್ವಜನಿಕ ಜೀವನದಲ್ಲಿ ನಿತ್ಯ ಟೀಕೆಗಳು, ಕಷ್ಟಗಳು, ಕಾರ್ಪಣ್ಯಗಳು ಇದ್ದೇ ಇರುತ್ತವೆ. ಸಮಸ್ಯೆಗಳನ್ನು ಬಗೆಹರಿಸಲು ಅಡಕುಗಳು, ತೊಡಕುಗಳು ಸಹಜ. ಇವೆಲ್ಲವನ್ನೂ ಎದುರಿಸಬೇಕು ಮತ್ತು ನಮ್ಮ ಕೆಲಸವನ್ನು ಮುಂದುವರಿಸಬೇಕು ಎಂದರು.

ಇದನ್ನೂ ಓದಿ: ಸಿಎಂ ಬಜೆಟ್​ಗೆ ಸಜ್ಜಾದ ಹೊತ್ತಲ್ಲೇ ಡಿಕೆ ಶಿವಕುಮಾರ್​ಗೆ ಅಸಮಾಧಾನ? ದೆಹಲೀಲಿ ದುಃಖ, ದುಮ್ಮಾನ ಚರ್ಚಿಸ್ತೀನೆಂದ ಡಿಸಿಎಂ

ಪ್ರತಿಯೊಂದು ದಿನವೂ ಹೊಸ ಆರಂಭ, ಸಂತೋಷದ ದಿನ, ಯಶಸ್ಸಿನ ದಿನ. ರಾಜಕೀಯ ಸವಾಲುಗಳ ನಡುವೆಯೂ ತಮ್ಮ ಕರ್ತವ್ಯ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುವ ಕಡೆಗೆ ತಮ್ಮ ಗಮನವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version