ಜೂನ್ ತಿಂಗಳಿಗೆ ‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ‘ಟಾಕ್ಸಿಕ್’ ಎದುರು ಪೈಪೋಟಿ? – Kannada News | Ram Charan starrer Peddi movie release date again pushed to June

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಯಾವುದೇ ಪ್ರಚಾರ ಕಾರ್ಯಗಳು ನಡೆಯದ ಕಾರಣ ಸಿನಿಮಾ ಮುಂದೂಡಿಕೆ ಆಗಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಈಗ ಆ ಊಹೆ ನಿಜವಾಗಿದೆ. ಚಿತ್ರತಂಡ ಅಧಿಕೃತವಾಗಿ ಇದನ್ನು ಘೋಷಿಸಿದೆ. ‘ಪೆದ್ದಿ’ (Peddi) ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಆದರೆ ನಿಖರವಾಗಿ ಹೊಸ ಬಿಡುಗಡೆ ದಿನಾಂಕವನ್ನು (Peddi Release Date) ತಿಳಿಸಿಲ್ಲ. ಹಾಗಾಗಿ ಈ ಸಿನಿಮಾದ ಬಿಡುಗಡೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹಾಗೆಯೇ ಮುಂದುವರಿದಿದೆ.

ಸೋಶಿಯಲ್ ಮೀಡಿಯಾದಲ್ಲಿ ‘ಪೆದ್ದಿ’ ಚಿತ್ರತಂಡದವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ನಮ್ಮ ಹಾಡುಗಳು ಮತ್ತು ಗ್ಲಿಂಪ್ಸ್‌ಗಳಿಗೆ ನೀವು ನೀಡಿದ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ‘ಪೆದ್ದಿ’ ಚಿತ್ರದ ಮೇಲೆ ನೀವು ತೋರುತ್ತಿರುವ ಪ್ರೀತಿ ಮತ್ತು ಉತ್ಸಾಹವನ್ನು ಕಂಡು ನಮಗೆ ನಿಜಕ್ಕೂ ಸಂತೋಷವಾಗಿದೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ನಾವು ಚಿತ್ರದ ಎಡಿಟಿಂಗ್ ನೋಡಿದ್ದು, ಬಂದಿರುವ ಔಟ್‌ಪುಟ್ ಬಗ್ಗೆ ನಮಗೆ ಅತ್ಯಂತ ತೃಪ್ತಿಯಿದೆ’ ಎಂದು ಚಿತ್ರತಂಡ ಹೇಳಿದೆ.

‘ನಮ್ಮ ಕೈಯಲ್ಲಿ ಇಂತಹ ಉತ್ತಮ ಕಂಟೆಂಟ್ ಇರುವುದರಿಂದ, ಅದನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರಲು ನಾವು ಬಯಸುತ್ತೇವೆ. ಅದಕ್ಕಾಗಿ, ನಮ್ಮ ತಾಂತ್ರಿಕ ವರ್ಗ ಮತ್ತು ಪೋಸ್ಟ್-ಪ್ರೊಡಕ್ಷನ್ ತಂಡಕ್ಕೆ ಇನ್ನಷ್ಟು ಸಮಯ ನೀಡುವುದು ಅಗತ್ಯ ಎಂದು ನಮಗೆ ಅನಿಸಿದೆ. ಇದರಿಂದ ಅವರು ಚಿತ್ರವನ್ನು ಪರಿಪೂರ್ಣತೆಯೊಂದಿಗೆ ಹೊರತರಲು ಸಾಧ್ಯವಾಗುತ್ತದೆ. ನಿಮಗೆ ಅತ್ಯುತ್ತಮವಾದ ಥಿಯೇಟರ್ ಅನುಭವವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ’ ಎಂದಿದೆ ‘ಪೆದ್ದಿ’ ತಂಡ.

‘ಚಿತ್ರದ ಬಿಡುಗಡೆಯನ್ನು ನಾವು ಜೂನ್ ತಿಂಗಳಿಗೆ ಮುಂದೂಡಲು ನಿರ್ಧರಿಸಿದ್ದೇವೆ. ನಿಖರವಾದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ನಿಮ್ಮ ನಿರಂತರ ಬೆಂಬಲ ಮತ್ತು ತಾಳ್ಮೆಗೆ ಧನ್ಯವಾದಗಳು. ಇದು ನಮಗೆ ಬಹಳ ಮುಖ್ಯವಾದುದು’ ಎಂದು ಪೆದ್ದಿ ಚಿತ್ರತಂಡದವರು ಮಾಹಿತಿ ನೀಡಿದ್ದಾರೆ. ಹೊಸ ಬಿಡುಗಡೆ ದಿನಾಂಕವನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರಕ್ಕೆ ಜಾನ್ವಿ, ಮೃಣಾಲ್ ಮೆರುಗು: ಶೀಘ್ರವೇ ಸಾಂಗ್ ಶೂಟಿಂಗ್ ಶುರು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಆ ಸಿನಿಮಾ ತೆರೆಕಾಣಲಿದೆ. ಭಾರಿ ನಿರೀಕ್ಷೆ ಇರುವುದರಿಂದ ಜೂನ್ ತಿಂಗಳು ಪೂರ್ತಿ ‘ಟಾಕ್ಸಿಕ್’ ಅಬ್ಬರ ಇರಲಿದೆ. ಅದೇ ತಿಂಗಳಲ್ಲಿ ‘ಪೆದ್ದಿ’ ಬಿಡುಗಡೆ ಆಗುತ್ತಿರುವುದರಿಂದ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB vs LSG IPL 2026 Live Score: ಆರ್​ಸಿಬಿ- ಲಕ್ನೋ ಮುಖಾಮುಖಿ – Kannada News | Royal Challengers Bengaluru vs Lucknow Super Giants IPL 2026 Live Cricket Score RCB vs LSG Match on 15th April latest news in Kannada

ಐಪಿಎಲ್ 2026 ರ 23 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಂದ್ಯವನ್ನು ತಮ್ಮ ತವರು ಮೈದಾನವಾದ ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಈ ಪಂದ್ಯದಲ್ಲಿ, ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಮ್ಮ ಮೊದಲ ತವರು ಗೆಲುವನ್ನು ಎದುರು ನೋಡುತ್ತಿದೆ, ಏಕೆಂದರೆ ಆರ್​ಸಿಬಿ ತಮ್ಮ ತವರು ನೆಲದಲ್ಲಿ ಲಕ್ನೋ ತಂಡವನ್ನು ಎಂದಿಗೂ ಸೋಲಿಸಿಲ್ಲ.

Source link

IPL 2026: ಐದು ತಂಡಗಳ ನಾಯಕರಿಂದ 84 ಲಕ್ಷ ರೂ. ದಂಡ ವಸೂಲಿ – Kannada News | IPL 2026 Slow Over Rate Fines: Rs 84 Lakh Collected from Captains So Far

ಈ ಐದು ತಂಡಗಳ ನಾಯಕರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಅಗ್ರಸ್ಥಾನದಲ್ಲಿದ್ದು, ಎರಡು ಬಾರಿ ಈ ನಿಯಮ ಮುರಿದಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ಇದುವರೆಗೆ 36 ಲಕ್ಷ ರೂ. ದಂಡ ವಿಧಿಸಲಾಗಿದೆ. ಅವರ ನಾಯಕತ್ವದಲ್ಲಿ, ಪಂಜಾಬ್ ತಂಡ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿಧಾನಗತಿಯ ಓವರ್ ಬೌಲಿಂಗ್ ಮಾಡಿದೆ. ಅಯ್ಯರ್ ಅವರಿಗೆ ಮೊದಲ ಬಾರಿಗೆ 12 ಲಕ್ಷ ಮತ್ತು ಎರಡನೇ ಬಾರಿಗೆ 24 ಲಕ್ಷ ರೂಗಳನ್ನು ದಂಡ ವಿಧಿಸಲಾಗಿದೆ.

Source link

ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿ ನಾಳೆ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ – Kannada News | Tamil Nadu to hoist black flags tomorrow CM MK Stalin announces protests against delimitation

ಚೆನ್ನೈ, ಏಪ್ರಿಲ್ 15: ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ (MK Stalin) ಕ್ಷೇತ್ರಗಳ ಪುನರ್ವಿಂಗಡಣೆಯನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯನ್ನು ಟೀಕಿಸಿದ ಸಿಎಂ ಸ್ಟಾಲಿನ್, “ಒಂದು ಕಾಲದಲ್ಲಿ ನಮ್ಮ ತಲೆಯ ಮೇಲೆ ನೇತಾಡುತ್ತಿದ್ದ ಕತ್ತಿ ಈಗ ನಮ್ಮ ಗಂಟಲಿಗೆ ಇಳಿದಿದೆ” ಎಂದು ಹೇಳಿದ್ದಾರೆ.

ಸಂವಿಧಾನಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೂರು ಮಸೂದೆಗಳನ್ನು ಪ್ರಸ್ತಾಪಿಸಿದೆ. ಅವುಗಳೆಂದರೆ, ಸಂವಿಧಾನದ 131ನೇ ತಿದ್ದುಪಡಿ ಮಸೂದೆ 2026, ಕ್ಷೇತ್ರಗಳ ಪುನರ್ ವ್ಯಾಖ್ಯಾನ ಮಸೂದೆ 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ 2026. ಈ ಮಸೂದೆಗಳನ್ನು ನಾಳೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗುವುದು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಇತರ ಪಕ್ಷದ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ; ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್ – Kannada News | Beat the Bengaluru Heat: Health Tips for Residents

ಬೆಂಗಳೂರಲ್ಲಿ ಗ್ರೀಷ್ಮ ಋತುವಿನ (ಬೇಸಿಗೆ ಕಾಲದ) ಪ್ರಭಾವ ಸ್ವಲ್ಪ ಮೃದುವಾಗಿದ್ದರೂ ಮಧ್ಯಾಹ್ನದ ಪ್ರಖರ ಸೂರ್ಯರಶ್ಮಿ ಮತ್ತು ಒಣ ಉಷ್ಣ ಗಾಳಿ ಆರೋಗ್ಯದ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತವೆ. ಈ ಕಾಲದಲ್ಲಿ ವಾತ ಮತ್ತು ಪಿತ್ತ ದೊಷ ಸಂಬಂಧಿ ರೋಗಗಳ ಸಂಭವ ಹೆಚ್ಚು. ಬಿಸಿಲಿನ ತೀವ್ರ ತಾಪವು ಬಲವನ್ನು ಕಡಿಮೆ ಮಾಡುತ್ತದೆ ಮತ್ತು ಕಾರಣವಿಲ್ಲದೆ ಜನ ಆಯಾಸದಿಂದ ಬಳಲುತ್ತಾರೆ. ಇದೆಲ್ಲದರಿಂದ ಕಾಪಾಡಿಕೊಳ್ಳಲು ಕೆಲವು ಸರಳ ಉಪಾಯಗಳನ್ನು ಅನುಸರಿಸುವುದು ಬಹಳ ಉತ್ತಮ. ಈ ಕುರಿತು, ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು (Dr. Samhita) ಅವರು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಡಾ. ಸಂಹಿತಾ ಹೇಳಿರುವ ಸಿಂಪಲ್ ಟಿಪ್ಸ್:

  • ಬೇಸಿಗೆ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಇದು ನಿರ್ಜಲೀಕರಣ ಸಮಸ್ಯೆಯನ್ನು ತಡೆಗಟ್ಟುತ್ತದೆ. ದಿನಕ್ಕೆ ಕನಿಷ್ಠ 2.5 –3 ಲೀಟರ್ ನೀರು ಕುಡಿಯಬೇಕು. ಹಾಗೆಯೇ, ಎಳನೀರು, ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ ಮತ್ತು ಋತು ಅನುಸಾರ ಹಣ್ಣಿನ ರಸ, ಜ್ಯೂಸ್ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.
  • ಮಧ್ಯಾಹ್ನ 11ರಿಂದ 3 ಗಂಟೆಯ ವರೆಗೆ, ಎಲ್ಲಿಯವರೆಗೂ ತೀಕ್ಷ್ಣ ಸೂರ್ಯಕಿರಣಗಳು ಇರುತ್ತವೆಯೊ ಅಲ್ಲಿಯವರೆಗು ಆದಷ್ಟು ಹೊರಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಹೊರಗೆ ಹೋಗಬೇಕಾದರೆ ಹಗುರವಾದ ಹತ್ತಿ ಬಟ್ಟೆ ಧರಿಸಿ, ಕ್ಯಾಪ್ ಅಥವಾ ಛತ್ರಿ ಬಳಸಬೇಕು. ಇದು ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಲು ಸಹಕಾರಿ.
  • ಬೇಸಿಗೆ ಕಾಲದಲ್ಲಿ ಜಠರಾಗ್ನಿಯು ಬಹಳ ಮಂದವಾಗಿರುತ್ತದೆ. ಹಾಗಾಗಿ ಹಸಿವಾದಲ್ಲಿ ಸುಲಭವಾಗಿ ಜೀರ್ಣವಾಗುವ ಲಘು ಆಹಾರ ಸೇವನೆ ಉತ್ತಮ. ಆದಷ್ಟು ಮನೆಯಲ್ಲಿ ತಯಾರಿಸಿದ ಬಿಸಿಯಾಗಿರುವ ತಾಜಾ ಅಡುಗೆ ಸೇವಿಸಬೇಕು. ಆಹಾರದಲ್ಲಿನ ಸಣ್ಣ ಪುಟ್ಟ ವ್ಯತ್ಯಾಸಗಳು ಅಜೀರ್ಣ, ಬೇಧಿ ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
  • ಇನ್ನು ಬೇಸಿಗೆಯಲ್ಲಿ ಇನ್ನೊಂದು ಮುಖ್ಯವಾದ ವಿಚಾರ ಚರ್ಮದ ಸಮಸ್ಯೆ. ವಾತಾವರಣದ ಉಷ್ಣತೆ ಹೆಚ್ಚಿರುವುದರಿಂದ ಚರ್ಮವು ಬೇಗ ಒಣಗಿ ಕಾಂತಿಹೀನವಾಗುತ್ತದೆ. ಹಾಗಾಗಿ ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಬೇಸಿಗೆಯ ಬಿಸಿಲಿನಿಂದ ಶರೀರದಲ್ಲಿ ತೇವಾಂಶ ಕಡಿಮೆ ಇರುತ್ತದೆ. ಹಾಗಾಗಿ ಮಾಯಿಶ್ಚರೈಸರ್ ಬಳಕೆ ಚರ್ಮ ಒಣಗದಂತೆ ಕಾಪಾಡುತ್ತದೆ. ಪ್ರತಿದಿನ ಸ್ನಾನಕ್ಕೆ ಮೊದಲು ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಲಘುವಾಗಿ ಅಭ್ಯಂಗಮಾಡಿ ನಂತರ ಸ್ನಾನ ಮಾಡಿದರೆ ಚರ್ಮದ ತೇವಾಂಶ ಕಾಯ್ದಿಟ್ಟುಕೊಳ್ಳಬಹುದು.
  • ಪ್ರತೀದಿನ ಎರಡು ಬಾರಿ ಮುಖ ತೊಳೆಯುವುದು ಅಗತ್ಯ. ಇದು ಬೇಸಿಗೆಯ ಬೆವರನ್ನು, ಬೆವರಿನ ವಾಸನೆಯನ್ನು ತಗ್ಗಿಸುತ್ತದೆ.
  • ಸನ್‌ಸ್ಕ್ರೀನ್ (SPF 30 ಅಥವಾ ಹೆಚ್ಚು) ಬಳಸುವುದು ಬಹಳ ಮುಖ್ಯ, ಏಕೆಂದರೆ ಇದು ಸೂರ್ಯ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
  • ಅಲೋವೆರಾ ಅಥವಾ ಹಾಲಿನ ಕೆನೆಯನ್ನು ಮುಖಕ್ಕೆ ಹೆಚ್ಚಿಕೊಳ್ಳುವುದರಿಂದ ಮುಖದ ತೇವಾಂಶವನ್ನು ಕಾಪಾಡಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಬಿಸಿಲಿನಿಂದ ಆಗುವ ಕಪ್ಪು ಕಲೆಗಳನ್ನು ನಿವಾರಿಸಲು ಶ್ರೀಗಂಧದ ಪುಡಿ ಹಾಲಿನ ಕೆನೆಯೊಂದಗೆ ಅಥವಾ ಅರಿಶಿನ ಪುಡಿ ಹಾಲಿನ ಕೆನೆ, ಜೇನುತುಪ್ಪದ ಮಿಶ್ರಣ, ಅಥವಾ ಕಡಲೆ ಹಿಟ್ಟು ಜೇನುತುಪ್ಪದ ಮಿಶ್ರಣ ನಿಯಮಿತವಾಗಿ ಮುಖ ಕೈ-ಕಾಲುಗಳಿಗೆ ಹಚ್ಚಬಹುದು.
  • ಮನೆಯಿಂದ ಆಚೆ ಹೋಗುವ ಮೊದಲು ಆದಷ್ಟು ಕೈ- ಕಾಲು ಮುಖ ಬಿಸಿಲಿಗೆ ತೋರದಂತೆ ರಕ್ಷಿಸಿಕೊಳ್ಳುವುದು ಉತ್ತಮ.
  • ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಹೆಚ್ಚು ಇರಲಿ. ವಿಶೇಷವಾಗಿ ಕಲ್ಲಂಗಡಿ, ಸೌತೆಕಾಯಿ, ಮತ್ತು ಮೊಸರು ದೇಹಕ್ಕೆ ತಂಪು ನೀಡುತ್ತವೆ. ಮಸಾಲೆಯುಕ್ತ ಮತ್ತು ಹೆಚ್ಚು ಎಣ್ಣೆಯ ಆಹಾರವನ್ನು ಕಡಿಮೆ ಮಾಡುವುದು ಉತ್ತಮ.

ಈ ಸರಳ ಸಲಹೆಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್‌ನಲ್ಲಿ ವಿಶೇಷ ತ್ರಿಶತಕ ಬಾರಿಸುವ ಹೊಸ್ತಿಲಿನಲ್ಲಿ ವಿರಾಟ್ ಕೊಹ್ಲಿ

Source link

Health Tips: ಅಡುಗೆಗೆ ಎಣ್ಣೆ ಉತ್ತಮವೋ ಅಥವಾ ಬೆಣ್ಣೆಯೋ? ತಜ್ಞರ ಉತ್ತರ ಇಲ್ಲಿದೆ – Kannada News | Oil vs. Butter: Choosing the Best for Cooking, Health and Flavor – A Complete Guide

Oil Vs. Butter

ಅಡುಗೆಯಲ್ಲಿ ಎಣ್ಣೆ ಮತ್ತು ಬೆಣ್ಣೆಯ ನಡುವಿನ ಸ್ಪರ್ಧೆ ಇಂದು ನಿನ್ನೆಯದಲ್ಲ. ಬೆಣ್ಣೆಯು ತನ್ನ ಕೆನೆಯಂತಹ ಸ್ವರೂಪ ಮತ್ತು ಅದ್ಭುತ ರುಚಿಯಿಂದ ಅಡುಗೆಮನೆಯ ಆಕರ್ಷಣೆಯಾಗಿದ್ದರೆ, ಸಸ್ಯ ಆಧಾರಿತ ಎಣ್ಣೆಗಳು (ಉದಾಹರಣೆಗೆ ಆಲಿವ್ ಎಣ್ಣೆ) ಹೃದಯದ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಪೂರಕವಾಗಿವೆ. ರುಚಿಗಾಗಿ ಬೆಣ್ಣೆಯೋ ಅಥವಾ ಆರೋಗ್ಯಕ್ಕಾಗಿ ಎಣ್ಣೆಯೋ ಎನ್ನುವ ಆಯ್ಕೆ ನಮ್ಮ ಅಡುಗೆಯ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ.

ಎಣ್ಣೆಯ ಮಹತ್ವ ಮತ್ತು ವಿಧಗಳು:

ಎಣ್ಣೆಯು ಆಹಾರಕ್ಕೆ ಪೌಷ್ಟಿಕಾಂಶ ಮತ್ತು ಆಕೃತಿಯನ್ನು ನೀಡುತ್ತದೆ. ಭಾರತೀಯ ಅಡುಗೆಯಲ್ಲಿ ಮುಖ್ಯವಾಗಿ ಐದು ವಿಧದ ಎಣ್ಣೆಗಳನ್ನು ಬಳಸಲಾಗುತ್ತದೆ:

  • ಸಾಸಿವೆ ಎಣ್ಣೆ: ಒಮೆಗಾ-3 ಸಮೃದ್ಧವಾಗಿದ್ದು, ಹೆಚ್ಚಿನ ಉಷ್ಣತೆಯ ಅಡುಗೆಗೆ ಸೂಕ್ತ.
  • ದೇಸಿ ತುಪ್ಪ: ಅಡುಗೆಯ ರುಚಿ ಹೆಚ್ಚಿಸಲು ಮತ್ತು ಪೋಷಕಾಂಶಗಳಿಗಾಗಿ ಅತ್ಯುತ್ತಮ.
  • ತೆಂಗಿನ ಎಣ್ಣೆ: ಕರಾವಳಿ ಭಾಗದ ಅಡುಗೆಗಳಿಗೆ ಮತ್ತು ಮಧ್ಯಮ ಉಷ್ಣತೆಯ ಅಡುಗೆಗೆ ಪ್ರಶಸ್ತ.
  • ಶೇಂಗಾ ಎಣ್ಣೆ: ಇದು ಸೌಮ್ಯ ರುಚಿ ಹೊಂದಿದ್ದು, ಹುರಿಯಲು ವ್ಯಾಪಕವಾಗಿ ಬಳಕೆಯಾಗುತ್ತದೆ.
  • ಎಳ್ಳೆಣ್ಣೆ: ಉಪ್ಪಿನಕಾಯಿ ಮತ್ತು ಒಗ್ಗರಣೆಗಳಿಗೆ ಇದು ವಿಶೇಷ ರುಚಿ ನೀಡುತ್ತದೆ.

ಬೆಣ್ಣೆಯ ಬಹುಮುಖಿ ಬಳಕೆಬೆಣ್ಣೆಯು ಕೇವಲ ಬ್ರೆಡ್ ಮೇಲೆ ಹಚ್ಚಲು ಮಾತ್ರವಲ್ಲದೆ, ಸಾಸ್ ತಯಾರಿಕೆಯಲ್ಲಿ ಮತ್ತು ತರಕಾರಿಗಳನ್ನು ಹುರಿಯಲು ಬಹುಪಯೋಗಿಯಾಗಿದೆ. ಇದರಲ್ಲಿ ಉಪ್ಪು ರಹಿತ ಬೆಣ್ಣೆ (ಬೇಕಿಂಗ್‌ಗೆ ಸೂಕ್ತ), ಉಪ್ಪು ಸೇರಿಸಿದ ಬೆಣ್ಣೆ (ತಕ್ಷಣದ ರುಚಿಗೆ), ಕಲ್ಚರ್ಡ್ ಬೆಣ್ಣೆ (ಹುದುಗಿಸಿದ ಕ್ರೀಮ್‌ನಿಂದ ತಯಾರಿಸಿದ್ದು), ಮತ್ತು ಗಿಡಮೂಲಿಕೆ ಮಿಶ್ರಿತ ಕಾಂಪೌಂಡ್ ಬೆಣ್ಣೆ ಎಂಬ ವಿವಿಧ ಪ್ರಕಾರಗಳಿವೆ. ಬೆಣ್ಣೆಯು ಆಹಾರಕ್ಕೆ ಒಂದು ರೀತಿಯ ಮೃದುತ್ವ ಮತ್ತು ಸುಗಂಧವನ್ನು ನೀಡುತ್ತದೆ.

ಇದನ್ನೂ ಓದಿ: ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಎಷ್ಟು ದಿನ ಬದುಕಬಹುದು? ಒಂದು ದಿನ ನಿದ್ರೆ ಬಿಟ್ಟರೆ ಏನೆಲ್ಲಾ ಆಗುತ್ತೆ ನೋಡಿ

ಅಡುಗೆಯಲ್ಲಿ ‘ಹೊಗೆ ಬಿಂದು’ವಿನ ಪ್ರಾಮುಖ್ಯತೆ (Smoke Point)ಎಣ್ಣೆ ಅಥವಾ ಬೆಣ್ಣೆಯನ್ನು ಆರಿಸುವಾಗ ಅವುಗಳ ‘ಹೊಗೆ ಬಿಂದು’ (Smoke Point) ಅರಿಯುವುದು ಬಹಳ ಮುಖ್ಯ. ಬೆಣ್ಣೆಯು ಸುಮಾರು 160°C (320°F) ಉಷ್ಣತೆಯಲ್ಲಿ ಸುಡಲಾರಂಭಿಸುತ್ತದೆ, ಆದ್ದರಿಂದ ಇದನ್ನು ಕಡಿಮೆ ಉಷ್ಣತೆಯ ಅಡುಗೆಗೆ ಮಾತ್ರ ಬಳಸಬೇಕು. ಆದರೆ ಹೆಚ್ಚಿನ ಎಣ್ಣೆಗಳು 260°C/500°Fಗಿಂತ ಹೆಚ್ಚುಗಿಂತಲೂ ಹೆಚ್ಚಿನ ಉಷ್ಣತೆಯನ್ನು ತಡೆದುಕೊಳ್ಳಬಲ್ಲವು. ಹೀಗಾಗಿ, ಕರಿಯಲು ಅಥವಾ ಅತಿ ಉಷ್ಣತೆಯ ಅಡುಗೆಗೆ ಎಣ್ಣೆಯನ್ನು ಬಳಸಿ, ಕೊನೆಯಲ್ಲಿ ರುಚಿಗಾಗಿ ಬೆಣ್ಣೆಯನ್ನು ಸೇರಿಸುವುದು ಜಾಣತನ.

ಬೇಕಿಂಗ್‌ನಲ್ಲಿ ಎಣ್ಣೆ vs ಬೆಣ್ಣೆಬೇಕಿಂಗ್ ವಿಷಯಕ್ಕೆ ಬಂದರೆ ಇವೆರಡೂ ಭಿನ್ನವಾಗಿ ಕೆಲಸ ಮಾಡುತ್ತವೆ. ಬೆಣ್ಣೆಯಲ್ಲಿ ಶೇ.80 ಕೊಬ್ಬು ಮತ್ತು ಶೇ. 20 ನೀರಿನಾಂಶ ಇರುವುದರಿಂದ, ಇದು ಬಿಸ್ಕತ್ತು ಅಥವಾ ಕೇಕ್‌ಗಳಿಗೆ ಪದರದಂತಹ ರಚನೆ ಮತ್ತು ಗಾಳಿಯನ್ನು ನೀಡುತ್ತದೆ. ಎಣ್ಣೆಯು ಶೇ. 100 ಕೊಬ್ಬಾಗಿದ್ದು, ಕೇಕ್ ಅಥವಾ ಬ್ರೆಡ್‌ಗಳನ್ನು ಹೆಚ್ಚು ಕಾಲ ಮೃದುವಾಗಿ ಮತ್ತು ತೇವಭರಿತವಾಗಿ ಇಡುತ್ತದೆ.

ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ನಿಮ್ಮ ಜೊತೆಗಿರುವವರು ನಿಮ್ಮನ್ನು ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಎಂಬುದರ ಚಿಹ್ನೆಗಳಿವು – Kannada News | Chanakya Niti: Acharya Chanakya says such people are selfish

ಆಚಾರ್ಯ ಚಾಣಕ್ಯರು (Acharya Chanakya) ಯಶಸ್ಸು, ಶ್ರೀಮಂತಿಕೆ ಮಾತ್ರವಲ್ಲದೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಚಾಣಕ್ಯರ ಈ ತತ್ವಗಳು  ನಮ್ಮನ್ನು ಸರಿ ದಾರಿಯಲ್ಲಿ ನಡೆಯಲು ಸಹಾಯ ಮಾಡುತ್ತವೆ. ಅಲ್ಲದೆ ಆಚಾರ್ಯ ಚಾಣಕ್ಯರು ತಮ್ಮ  ತತ್ವಗಳಲ್ಲಿ, ನಮ್ಮ ಸುತ್ತಮುತ್ತಲಿನವರ ನಡವಳಿಕೆಯನ್ನು ಯಾವಾಗಲೂ ಗಮನಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಅವರ ಪ್ರಕಾರ, ನಮ್ಮ ಸುತ್ತಮುತ್ತ ಇರುವ ಎಲ್ಲವರೂ ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ, ಕೆಲವರು ನಮ್ಮನ್ನು ಅವರ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸ್ವಾರ್ಥಿ ಜನರನ್ನು ಗುರುತಿಸುವುದು ಹೇಗೆ ಎಂಬುದನ್ನು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಸ್ವಾರ್ಥಿ ಜನರಲ್ಲಿ ಯಾವೆಲ್ಲಾ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.

ಸ್ವಾರ್ಥಿ ಜನರಲ್ಲಿ ಯಾವೆಲ್ಲಾ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ:

ತಮ್ಮ ಅಗತ್ಯಗಳಿಗಾಗಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತರೆ: ನಿಮ್ಮ ಸುತ್ತಮುತ್ತಲಿರುವ ಯಾರಾದರೂ ನಿಮ್ಮನ್ನು ಅವರ ಅಗತ್ಯ ಕಾರ್ಯಗಳಿರುವಾಗ ಮಾತ್ರ ನೆನಪಿಸಿಕೊಂಡರೆ ಅವರು ಸ್ವಾರ್ಥಿಗಳೆಂದು ಅರ್ಥ. ಅಂತಹ ಜನರು ನಿಮ್ಮ ಕಷ್ಟಕ್ಕೆ ಸ್ಪಂದಿಸುವುದಿಲ್ಲ, ಬದಲಾಗಿ ಅವರ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಸಹಾಯ ಪಡೆದ ಬಳಿಕ ನಿಮ್ಮ ಜೊತೆ ಮಾತನಾಡದೆ ಇರಬಹುದು.  ಇಂತಹ ಜನರು ಸಂಬಂಧ ಮತ್ತು ಭಾವನೆಗಳಿಗೆ ಎಂದೂ ಬೆಲೆ ಕೊಡುವುದಿಲ್ಲ. ಹಾಗಾಗಿ ಇಂತಹ ಜನರೊಂದಿಗೆ ಸ್ನೇಹ ಮಾಡುವಾಗ ಎಚ್ಚರದಿಂದ ಇರುವುದು ಒಳ್ಳೆಯದು.

ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು: ನಿಮ್ಮನ್ನು ಅವರವರ ಸ್ವಾರ್ಥಗಳಿಗಾಗಿ ಬಳಸಿಕೊಳ್ಳುವ ಜನ ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ, ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ. ನೀವು ಸಮಸ್ಯೆಯಿಂದ ಬಳಲುತ್ತಿದ್ದರೂ, ಒತ್ತಡದಲ್ಲಿದ್ದರೂ ಅಥವಾ ದುಃಖಿತರಾಗಿದ್ದರೂ ಸಹ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಅವರಿಗೆ ಸಹಾಯ ಬೇಕಾದಾಗ ಮಾತ್ರ ಸ್ನೇಹಪರವಾಗಿ ವರ್ತಿಸುತ್ತಾರೆ.  ಈ ಜನರಲ್ಲಿ ನೀವು ಎರಡು ರೀತಿಯ ನಡವಳಿಕೆಯನ್ನು ನೋಡಬಹುದು. ಒಂದೆಡೆ, ಅವರಿಗೆ ನಿಮಗೆ ಅಗತ್ಯವಿರುವಾಗ ಅವರು ನಿಮಗೆ ತುಂಬಾ ಹತ್ತಿರವಾಗುತ್ತಾರೆ, ಆದರೆ ನಿಮಗೆ ಅಗತ್ಯವಿರುವಾಗ, ಅವರು ನಿಮ್ಮ ಭಾವನೆಗಳನ್ನು ನಿರ್ಲಕ್ಷಿಸುತ್ತಾರೆ. ಇಂತಹ ಜನರಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಇದನ್ನೂ ಓದಿ: ನಾಲ್ಕು ತಪ್ಪು ನಿರ್ಧಾರಗಳು ಜೀವವನ್ನು ಹಾಳು ಮಾಡಬಹುದು ಎನ್ನುತ್ತಾರೆ ಚಾಣಕ್ಯ

 ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡದಿರುವುದು: ನೀವು ಈ ಮನುಷ್ಯ ನಮ್ಮವರು ಎಂದು ನಿಮ್ಮ ಕೈಲಾದಷ್ಟು ಸಹಾಯ ಮಾಡುತ್ತೀರಿ. ಅದೇ ನಿಮ್ಮ ಕೈಯಿಂದ ಸಹಾಯ ಪಡೆದ ಆ ಮನುಷ್ಯ ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡದಿದ್ದರೆ, ಅವನಷ್ಟು ಸ್ವಾರ್ಥಿ ಮತ್ತೊಬ್ಬನಿರಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನಿಜವಾದ ಸ್ನೇಹಿತ ನಮ್ಮ ಪ್ರತಿಯೊಂದು ಕಷ್ಟದ ಸಂದರ್ಭದಲ್ಲಿಯೂ ನಮಗೆ ಸಹಾಯ ಹಸ್ತ ಚಾಚುತ್ತಾನೆ.  ನಿಮ್ಮ ಸಹಾಯಕ್ಕಾಗಿ ಧಾವಿಸದ ಸ್ನೇಹಿತ, ಆತ್ಮೀಯರ ಜೊತೆ ನೀವು ಎಚ್ಚರಿಕೆಯಿಂದ ಇರುವುದೇ ಒಳ್ಳೆಯದು. ಏಕೆಂದರೆ ಅಂತಹ ಜನರು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.

ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಅಥವಾ ಬೆಂಬಲದ ಕೊರತೆ: ಮುಂದೆಯಿಂದ ನಗುನಗುತ್ತಾ ವರ್ತಿಸಿ ಆದ್ರೆ ಮನಸ್ಸಿನಿಂದ ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಪಡುವ ಒಂದಷ್ಟು ಜನರಿದ್ದಾರೆ.  ಅವರು ನಿಮ್ಮ ಪ್ರಗತಿಯನ್ನು ಎಂದಿಗೂ ಪೂರ್ಣ ಹೃದಯದಿಂದ ಸ್ವೀಕರಿಸುವುದಿಲ್ಲ. ಅಲ್ಲದೆ ಅವರು ನಿಮಗೆ ಯಾವುದೇ ಬೆಂಬಲವನ್ನು ಸಹ ನೀಡುವುದಿಲ್ಲ. ಅವರು ತಮ್ಮ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಇಂತಹ ಜನರಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ – Kannada News | India’s cumulative exports reach 860 billion USD in 2025 26, all time record high

ನವದೆಹಲಿ, ಏಪ್ರಿಲ್ 15: ಕಳೆದ ಹಣಕಾಸು ವರ್ಷದಲ್ಲಿ (2025-26) ಭಾರತದ ಒಟ್ಟು ರಫ್ತು (cumulative exports) 860.09 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವರ್ಷವಾದ 2024-25ರಲ್ಲಿ 825.26 ಬಿಲಿಯನ್ ಡಾಲರ್ ರಫ್ತು ದಾಖಲಾಗಿತ್ತು. ಅದಕ್ಕೆ ಹೋಲಿಸಿದರೆ 2025-26ರಲ್ಲಿ ರಫ್ತು ಶೇ. 4.22ರಷ್ಟು ಹೆಚ್ಚಳ ಆಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಯಾವ ಹಣಕಾಸು ವರ್ಷದಲ್ಲೂ ದಾಖಲಾದ ಅತ್ಯಧಿಕ ರಫ್ತು ಪ್ರಮಾಣ ಇದಾಗಿದೆ. ಇದರಲ್ಲಿ ಸರಕು ಮತ್ತು ಸೇವೆ ಎರಡೂ ಒಳಗೊಂಡಿವೆ.

‘ಭಾರತದ ಒಟ್ಟಾರೆ ರಫ್ತು ಹೊಸ ದಾಖಲೆ ಮಟ್ಟಕ್ಕೆ ಏರಿದೆ. 2025-26ರ ಹಣಕಾಸು ವರ್ಷದಲ್ಲಿ ಒಟ್ಟೂ ಸರಕು ಮತ್ತು ಸೇವೆಗಳ ರಫ್ತು 860.09 ಬಿಲಿಯನ್ ಡಾಲರ್ ಇರಬಹುದು ಎಂದು ಅಂದಾಜಿಸಲಾಗಿದೆ. 2024-25ರಲ್ಲಿ 825.26 ಬಿಲಿಯನ್ ಡಾಲರ್ ರಫ್ತಾಗಿತ್ತು. ಶೇ. 4.22ರಷ್ಟು ರಫ್ತು ಏರಿಕೆ ಆಗಿದೆ. ಜಾಗತಿಕ ವ್ಯಾಪಾರದಲ್ಲಿ ಭಾರತದ ಉಪಸ್ಥಿತಿ ಮತ್ತಷ್ಟು ಬಲಗೊಂಡಿದೆ’ ಎಂದು ಕೇಂದ್ರ ವಾಣಿಜ್ಯ ಇಲಾಖೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಹಾರ್ಮುಜ್ ನಂತರ ಮಲಕ್ಕಾ ಜಲಸಂಧಿ ಮೇಲೆ ಅಮೆರಿಕ ಕಣ್ಣು; ಭಾರತದ ಬಗಲಿನಲ್ಲೇ ದೊಡ್ಡ ಅಪಾಯದ ಬೀಸುಗತ್ತಿ

2025-26ರಲ್ಲಿ ಭಾರತದ ಸರಕು ರಫ್ತು (Mercantile exports) 441.78 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದಲ್ಲಿ ಅದು 437.70 ಬಿಲಿಯನ್ ಡಾಲರ್​ನಷ್ಟು ಇತ್ತು. ಸರಕುಗಳ ರಫ್ತು ಶೇ. 0.93ರಷ್ಟು ಹೆಚ್ಚಿದೆ. ಭಾರತ ರಫ್ತು ಮಾಡಿರುವ ಸರಕುಗಳಲ್ಲಿ ಪ್ರಮುಖವಾದುದು ಪೆಟ್ರೋಲಿಯ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ಕಲ್ಲಿದ್ದಲು, ಖನಿಜ, ಇತರ ಅದಿರುಗಳು, ಸಂಸ್ಕರಿತಿ ಖನಿಜಗಳು, ಕರಕುಶಲ ವಸ್ತುಗಳು ಇತ್ಯಾದಿ ಸೇರಿವೆ.

ಮಾರ್ಚ್​ನಲ್ಲಿ ಸರಕುಗಳ ವ್ಯಾಪಾರ ಅಂತರ ಕಡಿಮೆ

ಮಾರ್ಚ್ ತಿಂಗಳಲ್ಲಿ ಭಾರತದ ಸರಕು ವ್ಯಾಪಾರ ಅಂತರ, ಅಂದರೆ ಟ್ರೇಡ್ ಡೆಫಿಸಿಟ್ 20.98 ಬಿಲಿಯನ್ ಡಾಲರ್​ಗೆ ಇಳಿದಿದೆ. ಫೆಬ್ರುವರಿಯಲ್ಲಿ 36.61 ಬಿಲಿಯನ್ ಡಾಲರ್​ಗಳಷ್ಟಿದ್ದ ಸರಕುಗಳ ರಫ್ತು ಮಾರ್ಚ್​ನಲ್ಲಿ 38.92 ಬಿಲಿಯನ್ ಡಾಲರ್​ಗೆ ಏರಿದೆ. ಸರಕುಗಳ ಆಮದು 63.71 ಬಿಲಿಯನ್ ಡಾಲರ್​ನಿಂದ 59.9 ಬಿಲಿಯನ್ ಡಾಲರ್​ಗೆ ತಗ್ಗಿದೆ.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಮಾರ್ಚ್ ತಿಂಗಳಲ್ಲಿ ಭಾರತ ಉತ್ತಮ ವಹಿವಾಟುಗಳನ್ನು ನಡೆಸಿರುವುದು ಗಮನಾರ್ಹ ಸಂಗತಿ. ಆದರೆ, ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ 2025-26ರ ಮಟ್ಟದ ವ್ಯಾಪಾರವನ್ನು ನಿರೀಕ್ಷಿಸಲು ಕಷ್ಟವಾಗಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯೋಗೀಶ್ ಗೌಡ ಕೊಲೆ ಕೇಸ್: ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಜನ ದೋಷಿ, ಕೋರ್ಟ್ ಮಹತ್ವದ ತೀರ್ಪು – Kannada News | Bengaluru special court convicts Congress MLA Vinay Kulkarni And others accused in Dharwad Yogesh Gowda Murder Case

ಬೆಂಗಳೂರು/ಧಾರವಾಡ, (ಏಪ್ರಿಲ್ 15): ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ  ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ (Dharwad Yogesh Gowda Murder Case) ಅಂತಿಮ ತೀರ್ಪು ಪ್ರಕಟವಾಗಿದೆ. ಮಾಜಿ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಸೇರಿ 21ರ ಪೈಕಿ 19  ಮಂದಿ ಆರೋಪಿಗಳು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Bengaluru Special Court Verdict)   ಇಂದು (ಏಪ್ರಿಲ್ 15) ತೀರ್ಪು ನೀಡಿ ಆದೇಶ ಹೊರಡಿಸಿದೆ.

21 ಆರೋಪಿಗಳ ಪೈಕಿ 19 ಮಂದಿ ದೋಷಿ

21 ಆರೋಪಿಗಳ ಪೈಕಿ ಇಬ್ಬರು ಮಾಫಿಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೈಕಿ ಕೋರ್ಟ್, 19 ಆರೋಪಿಗಳನ್ನ ದೋಷಿ ಎಂದು ತೀರ್ಪು ನೀಡಿದೆ.  ಎ1 ಬಸವರಾಜ ಮುತ್ತಗಿ ಮಾಫಿಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ. ಇದರಿಂದ ಇವರಿಬ್ಬರನ್ನು ಹೊರತುಪಡಿಸಿ ಉಳಿದವರ ತೀರ್ಪು ಪ್ರಕಟಿಸಿದೆ.

ಎ2 ವಿಕ್ರಮ್, ಎ3 ಕೀರ್ತಿ ಕುಮಾರ್, ಎ 4 ಸಂದೀಪ್, ಎ5 ವಿನಾಯಕ್, ಎ6 ಮಹಾಬಲೇಶ್ವರ್ ಅಲಿಯಾಸ್ ಮುದಕ, ಎ 7 ಸಂತೋಷ್, ಎ 8 ದಿನೇಶ್, ಎ 9 ಅಶ್ವಥ್, ಎ10 ಸುನಿಲ್, ಎ 11 ನಜೀರ್ ಅಹಮದ್, ಎ 12 ಷಾನವಾಜ್, ಎ 13 ನೂತನ್ , ಎ14 ಹರ್ಷಿತ್, ಎ15 ವಿನಯ್ ಕುಲಕರ್ಣಿ, ಎ 16 ಚಂದ್ರು ಮಾಮ, ಎ18 ವಿಕಾಸ್ ಕಲಬುರ್ಗಿ, ಎ 19 ಚನ್ನಕೇಶವ ಟಿಂಗರಿಕರ್, ಎ20 ವಾಸುದೇವ ನಿಲೇಕಣಿ, ಎ21 ಸೋಮಶೇಖರ್ ನ್ಯಾಮಗೌಡ

ಪ್ರಕರಣದ ಹಿನ್ನೆಲೆ

ಧಾರವಾಡದ ಜಿಲ್ಲಾ  ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಅವರನ್ನು 2016ರ ಜೂನ್ 15ರಂದು  ಸಪ್ತಾಪುರ ಬಡಾವಣೆಯ ಜಿಮ್​​ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದ್ರೆ, ಕೊಲೆಯಾದ ಯೋಗೇಶ್‌ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಬಳಿಕ ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು. ಅಲ್ಲದೇ ಈ ಕೊಲೆಯಲ್ಲಿ ವಿನಯ್‌ ಕುಲಕರ್ಣಿ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು.  ಈ ಹಿನ್ನೆಲೆಯಲ್ಲಿ 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು, ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್‌ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

2016 ಜೂನ್‌ನಲ್ಲಿ ಯೋಗಿಶ್ ಗೌಡ ಕೊಲೆಯಾಗಿತ್ತು. ಶಾಸಕ ವಿನಯ್ ಕುಲಕರ್ಣಿ (Vinay Kulkarni) ಮೇಲೆ ಕೊಲೆಗೆ ಒಳಸಂಚು ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ ಪೊಲೀಸರ ಮುಂದೆ ಆರು ಜನ ಆರೋಪಿಗಳು ಶರಣಾಗಿದ್ದರು. ಯೋಗಿಶ್ ಗೌಡ ಕುಟುಂಬಸ್ಥರ ಮನವಿ ಮೇರೆಗೆ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. 2019ರಲ್ಲಿ ಸಿಬಿಐ ಗೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ತನಿಖೆ ನಡಸಿದ್ದ ಸಿಬಿಐ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version