ಬೆಂಗಳೂರಿಗರೇ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ; ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್ – Kannada News | Beat the Bengaluru Heat: Health Tips for Residents

ಬೆಂಗಳೂರಲ್ಲಿ ಗ್ರೀಷ್ಮ ಋತುವಿನ (ಬೇಸಿಗೆ ಕಾಲದ) ಪ್ರಭಾವ ಸ್ವಲ್ಪ ಮೃದುವಾಗಿದ್ದರೂ ಮಧ್ಯಾಹ್ನದ ಪ್ರಖರ ಸೂರ್ಯರಶ್ಮಿ ಮತ್ತು ಒಣ ಉಷ್ಣ ಗಾಳಿ ಆರೋಗ್ಯದ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತವೆ. ಈ ಕಾಲದಲ್ಲಿ ವಾತ ಮತ್ತು ಪಿತ್ತ ದೊಷ ಸಂಬಂಧಿ ರೋಗಗಳ ಸಂಭವ ಹೆಚ್ಚು. ಬಿಸಿಲಿನ ತೀವ್ರ ತಾಪವು ಬಲವನ್ನು ಕಡಿಮೆ ಮಾಡುತ್ತದೆ ಮತ್ತು ಕಾರಣವಿಲ್ಲದೆ ಜನ ಆಯಾಸದಿಂದ ಬಳಲುತ್ತಾರೆ. ಇದೆಲ್ಲದರಿಂದ ಕಾಪಾಡಿಕೊಳ್ಳಲು ಕೆಲವು ಸರಳ ಉಪಾಯಗಳನ್ನು ಅನುಸರಿಸುವುದು ಬಹಳ ಉತ್ತಮ. ಈ ಕುರಿತು, ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು (Dr. Samhita) ಅವರು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಡಾ. ಸಂಹಿತಾ ಹೇಳಿರುವ ಸಿಂಪಲ್ ಟಿಪ್ಸ್:

  • ಬೇಸಿಗೆ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಇದು ನಿರ್ಜಲೀಕರಣ ಸಮಸ್ಯೆಯನ್ನು ತಡೆಗಟ್ಟುತ್ತದೆ. ದಿನಕ್ಕೆ ಕನಿಷ್ಠ 2.5 –3 ಲೀಟರ್ ನೀರು ಕುಡಿಯಬೇಕು. ಹಾಗೆಯೇ, ಎಳನೀರು, ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ ಮತ್ತು ಋತು ಅನುಸಾರ ಹಣ್ಣಿನ ರಸ, ಜ್ಯೂಸ್ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.
  • ಮಧ್ಯಾಹ್ನ 11ರಿಂದ 3 ಗಂಟೆಯ ವರೆಗೆ, ಎಲ್ಲಿಯವರೆಗೂ ತೀಕ್ಷ್ಣ ಸೂರ್ಯಕಿರಣಗಳು ಇರುತ್ತವೆಯೊ ಅಲ್ಲಿಯವರೆಗು ಆದಷ್ಟು ಹೊರಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಹೊರಗೆ ಹೋಗಬೇಕಾದರೆ ಹಗುರವಾದ ಹತ್ತಿ ಬಟ್ಟೆ ಧರಿಸಿ, ಕ್ಯಾಪ್ ಅಥವಾ ಛತ್ರಿ ಬಳಸಬೇಕು. ಇದು ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಲು ಸಹಕಾರಿ.
  • ಬೇಸಿಗೆ ಕಾಲದಲ್ಲಿ ಜಠರಾಗ್ನಿಯು ಬಹಳ ಮಂದವಾಗಿರುತ್ತದೆ. ಹಾಗಾಗಿ ಹಸಿವಾದಲ್ಲಿ ಸುಲಭವಾಗಿ ಜೀರ್ಣವಾಗುವ ಲಘು ಆಹಾರ ಸೇವನೆ ಉತ್ತಮ. ಆದಷ್ಟು ಮನೆಯಲ್ಲಿ ತಯಾರಿಸಿದ ಬಿಸಿಯಾಗಿರುವ ತಾಜಾ ಅಡುಗೆ ಸೇವಿಸಬೇಕು. ಆಹಾರದಲ್ಲಿನ ಸಣ್ಣ ಪುಟ್ಟ ವ್ಯತ್ಯಾಸಗಳು ಅಜೀರ್ಣ, ಬೇಧಿ ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
  • ಇನ್ನು ಬೇಸಿಗೆಯಲ್ಲಿ ಇನ್ನೊಂದು ಮುಖ್ಯವಾದ ವಿಚಾರ ಚರ್ಮದ ಸಮಸ್ಯೆ. ವಾತಾವರಣದ ಉಷ್ಣತೆ ಹೆಚ್ಚಿರುವುದರಿಂದ ಚರ್ಮವು ಬೇಗ ಒಣಗಿ ಕಾಂತಿಹೀನವಾಗುತ್ತದೆ. ಹಾಗಾಗಿ ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಬೇಸಿಗೆಯ ಬಿಸಿಲಿನಿಂದ ಶರೀರದಲ್ಲಿ ತೇವಾಂಶ ಕಡಿಮೆ ಇರುತ್ತದೆ. ಹಾಗಾಗಿ ಮಾಯಿಶ್ಚರೈಸರ್ ಬಳಕೆ ಚರ್ಮ ಒಣಗದಂತೆ ಕಾಪಾಡುತ್ತದೆ. ಪ್ರತಿದಿನ ಸ್ನಾನಕ್ಕೆ ಮೊದಲು ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಲಘುವಾಗಿ ಅಭ್ಯಂಗಮಾಡಿ ನಂತರ ಸ್ನಾನ ಮಾಡಿದರೆ ಚರ್ಮದ ತೇವಾಂಶ ಕಾಯ್ದಿಟ್ಟುಕೊಳ್ಳಬಹುದು.
  • ಪ್ರತೀದಿನ ಎರಡು ಬಾರಿ ಮುಖ ತೊಳೆಯುವುದು ಅಗತ್ಯ. ಇದು ಬೇಸಿಗೆಯ ಬೆವರನ್ನು, ಬೆವರಿನ ವಾಸನೆಯನ್ನು ತಗ್ಗಿಸುತ್ತದೆ.
  • ಸನ್‌ಸ್ಕ್ರೀನ್ (SPF 30 ಅಥವಾ ಹೆಚ್ಚು) ಬಳಸುವುದು ಬಹಳ ಮುಖ್ಯ, ಏಕೆಂದರೆ ಇದು ಸೂರ್ಯ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
  • ಅಲೋವೆರಾ ಅಥವಾ ಹಾಲಿನ ಕೆನೆಯನ್ನು ಮುಖಕ್ಕೆ ಹೆಚ್ಚಿಕೊಳ್ಳುವುದರಿಂದ ಮುಖದ ತೇವಾಂಶವನ್ನು ಕಾಪಾಡಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಬಿಸಿಲಿನಿಂದ ಆಗುವ ಕಪ್ಪು ಕಲೆಗಳನ್ನು ನಿವಾರಿಸಲು ಶ್ರೀಗಂಧದ ಪುಡಿ ಹಾಲಿನ ಕೆನೆಯೊಂದಗೆ ಅಥವಾ ಅರಿಶಿನ ಪುಡಿ ಹಾಲಿನ ಕೆನೆ, ಜೇನುತುಪ್ಪದ ಮಿಶ್ರಣ, ಅಥವಾ ಕಡಲೆ ಹಿಟ್ಟು ಜೇನುತುಪ್ಪದ ಮಿಶ್ರಣ ನಿಯಮಿತವಾಗಿ ಮುಖ ಕೈ-ಕಾಲುಗಳಿಗೆ ಹಚ್ಚಬಹುದು.
  • ಮನೆಯಿಂದ ಆಚೆ ಹೋಗುವ ಮೊದಲು ಆದಷ್ಟು ಕೈ- ಕಾಲು ಮುಖ ಬಿಸಿಲಿಗೆ ತೋರದಂತೆ ರಕ್ಷಿಸಿಕೊಳ್ಳುವುದು ಉತ್ತಮ.
  • ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಹೆಚ್ಚು ಇರಲಿ. ವಿಶೇಷವಾಗಿ ಕಲ್ಲಂಗಡಿ, ಸೌತೆಕಾಯಿ, ಮತ್ತು ಮೊಸರು ದೇಹಕ್ಕೆ ತಂಪು ನೀಡುತ್ತವೆ. ಮಸಾಲೆಯುಕ್ತ ಮತ್ತು ಹೆಚ್ಚು ಎಣ್ಣೆಯ ಆಹಾರವನ್ನು ಕಡಿಮೆ ಮಾಡುವುದು ಉತ್ತಮ.

ಈ ಸರಳ ಸಲಹೆಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್‌ನಲ್ಲಿ ವಿಶೇಷ ತ್ರಿಶತಕ ಬಾರಿಸುವ ಹೊಸ್ತಿಲಿನಲ್ಲಿ ವಿರಾಟ್ ಕೊಹ್ಲಿ

Source link

Health Tips: ಅಡುಗೆಗೆ ಎಣ್ಣೆ ಉತ್ತಮವೋ ಅಥವಾ ಬೆಣ್ಣೆಯೋ? ತಜ್ಞರ ಉತ್ತರ ಇಲ್ಲಿದೆ – Kannada News | Oil vs. Butter: Choosing the Best for Cooking, Health and Flavor – A Complete Guide

Oil Vs. Butter

ಅಡುಗೆಯಲ್ಲಿ ಎಣ್ಣೆ ಮತ್ತು ಬೆಣ್ಣೆಯ ನಡುವಿನ ಸ್ಪರ್ಧೆ ಇಂದು ನಿನ್ನೆಯದಲ್ಲ. ಬೆಣ್ಣೆಯು ತನ್ನ ಕೆನೆಯಂತಹ ಸ್ವರೂಪ ಮತ್ತು ಅದ್ಭುತ ರುಚಿಯಿಂದ ಅಡುಗೆಮನೆಯ ಆಕರ್ಷಣೆಯಾಗಿದ್ದರೆ, ಸಸ್ಯ ಆಧಾರಿತ ಎಣ್ಣೆಗಳು (ಉದಾಹರಣೆಗೆ ಆಲಿವ್ ಎಣ್ಣೆ) ಹೃದಯದ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಪೂರಕವಾಗಿವೆ. ರುಚಿಗಾಗಿ ಬೆಣ್ಣೆಯೋ ಅಥವಾ ಆರೋಗ್ಯಕ್ಕಾಗಿ ಎಣ್ಣೆಯೋ ಎನ್ನುವ ಆಯ್ಕೆ ನಮ್ಮ ಅಡುಗೆಯ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ.

ಎಣ್ಣೆಯ ಮಹತ್ವ ಮತ್ತು ವಿಧಗಳು:

ಎಣ್ಣೆಯು ಆಹಾರಕ್ಕೆ ಪೌಷ್ಟಿಕಾಂಶ ಮತ್ತು ಆಕೃತಿಯನ್ನು ನೀಡುತ್ತದೆ. ಭಾರತೀಯ ಅಡುಗೆಯಲ್ಲಿ ಮುಖ್ಯವಾಗಿ ಐದು ವಿಧದ ಎಣ್ಣೆಗಳನ್ನು ಬಳಸಲಾಗುತ್ತದೆ:

  • ಸಾಸಿವೆ ಎಣ್ಣೆ: ಒಮೆಗಾ-3 ಸಮೃದ್ಧವಾಗಿದ್ದು, ಹೆಚ್ಚಿನ ಉಷ್ಣತೆಯ ಅಡುಗೆಗೆ ಸೂಕ್ತ.
  • ದೇಸಿ ತುಪ್ಪ: ಅಡುಗೆಯ ರುಚಿ ಹೆಚ್ಚಿಸಲು ಮತ್ತು ಪೋಷಕಾಂಶಗಳಿಗಾಗಿ ಅತ್ಯುತ್ತಮ.
  • ತೆಂಗಿನ ಎಣ್ಣೆ: ಕರಾವಳಿ ಭಾಗದ ಅಡುಗೆಗಳಿಗೆ ಮತ್ತು ಮಧ್ಯಮ ಉಷ್ಣತೆಯ ಅಡುಗೆಗೆ ಪ್ರಶಸ್ತ.
  • ಶೇಂಗಾ ಎಣ್ಣೆ: ಇದು ಸೌಮ್ಯ ರುಚಿ ಹೊಂದಿದ್ದು, ಹುರಿಯಲು ವ್ಯಾಪಕವಾಗಿ ಬಳಕೆಯಾಗುತ್ತದೆ.
  • ಎಳ್ಳೆಣ್ಣೆ: ಉಪ್ಪಿನಕಾಯಿ ಮತ್ತು ಒಗ್ಗರಣೆಗಳಿಗೆ ಇದು ವಿಶೇಷ ರುಚಿ ನೀಡುತ್ತದೆ.

ಬೆಣ್ಣೆಯ ಬಹುಮುಖಿ ಬಳಕೆಬೆಣ್ಣೆಯು ಕೇವಲ ಬ್ರೆಡ್ ಮೇಲೆ ಹಚ್ಚಲು ಮಾತ್ರವಲ್ಲದೆ, ಸಾಸ್ ತಯಾರಿಕೆಯಲ್ಲಿ ಮತ್ತು ತರಕಾರಿಗಳನ್ನು ಹುರಿಯಲು ಬಹುಪಯೋಗಿಯಾಗಿದೆ. ಇದರಲ್ಲಿ ಉಪ್ಪು ರಹಿತ ಬೆಣ್ಣೆ (ಬೇಕಿಂಗ್‌ಗೆ ಸೂಕ್ತ), ಉಪ್ಪು ಸೇರಿಸಿದ ಬೆಣ್ಣೆ (ತಕ್ಷಣದ ರುಚಿಗೆ), ಕಲ್ಚರ್ಡ್ ಬೆಣ್ಣೆ (ಹುದುಗಿಸಿದ ಕ್ರೀಮ್‌ನಿಂದ ತಯಾರಿಸಿದ್ದು), ಮತ್ತು ಗಿಡಮೂಲಿಕೆ ಮಿಶ್ರಿತ ಕಾಂಪೌಂಡ್ ಬೆಣ್ಣೆ ಎಂಬ ವಿವಿಧ ಪ್ರಕಾರಗಳಿವೆ. ಬೆಣ್ಣೆಯು ಆಹಾರಕ್ಕೆ ಒಂದು ರೀತಿಯ ಮೃದುತ್ವ ಮತ್ತು ಸುಗಂಧವನ್ನು ನೀಡುತ್ತದೆ.

ಇದನ್ನೂ ಓದಿ: ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಎಷ್ಟು ದಿನ ಬದುಕಬಹುದು? ಒಂದು ದಿನ ನಿದ್ರೆ ಬಿಟ್ಟರೆ ಏನೆಲ್ಲಾ ಆಗುತ್ತೆ ನೋಡಿ

ಅಡುಗೆಯಲ್ಲಿ ‘ಹೊಗೆ ಬಿಂದು’ವಿನ ಪ್ರಾಮುಖ್ಯತೆ (Smoke Point)ಎಣ್ಣೆ ಅಥವಾ ಬೆಣ್ಣೆಯನ್ನು ಆರಿಸುವಾಗ ಅವುಗಳ ‘ಹೊಗೆ ಬಿಂದು’ (Smoke Point) ಅರಿಯುವುದು ಬಹಳ ಮುಖ್ಯ. ಬೆಣ್ಣೆಯು ಸುಮಾರು 160°C (320°F) ಉಷ್ಣತೆಯಲ್ಲಿ ಸುಡಲಾರಂಭಿಸುತ್ತದೆ, ಆದ್ದರಿಂದ ಇದನ್ನು ಕಡಿಮೆ ಉಷ್ಣತೆಯ ಅಡುಗೆಗೆ ಮಾತ್ರ ಬಳಸಬೇಕು. ಆದರೆ ಹೆಚ್ಚಿನ ಎಣ್ಣೆಗಳು 260°C/500°Fಗಿಂತ ಹೆಚ್ಚುಗಿಂತಲೂ ಹೆಚ್ಚಿನ ಉಷ್ಣತೆಯನ್ನು ತಡೆದುಕೊಳ್ಳಬಲ್ಲವು. ಹೀಗಾಗಿ, ಕರಿಯಲು ಅಥವಾ ಅತಿ ಉಷ್ಣತೆಯ ಅಡುಗೆಗೆ ಎಣ್ಣೆಯನ್ನು ಬಳಸಿ, ಕೊನೆಯಲ್ಲಿ ರುಚಿಗಾಗಿ ಬೆಣ್ಣೆಯನ್ನು ಸೇರಿಸುವುದು ಜಾಣತನ.

ಬೇಕಿಂಗ್‌ನಲ್ಲಿ ಎಣ್ಣೆ vs ಬೆಣ್ಣೆಬೇಕಿಂಗ್ ವಿಷಯಕ್ಕೆ ಬಂದರೆ ಇವೆರಡೂ ಭಿನ್ನವಾಗಿ ಕೆಲಸ ಮಾಡುತ್ತವೆ. ಬೆಣ್ಣೆಯಲ್ಲಿ ಶೇ.80 ಕೊಬ್ಬು ಮತ್ತು ಶೇ. 20 ನೀರಿನಾಂಶ ಇರುವುದರಿಂದ, ಇದು ಬಿಸ್ಕತ್ತು ಅಥವಾ ಕೇಕ್‌ಗಳಿಗೆ ಪದರದಂತಹ ರಚನೆ ಮತ್ತು ಗಾಳಿಯನ್ನು ನೀಡುತ್ತದೆ. ಎಣ್ಣೆಯು ಶೇ. 100 ಕೊಬ್ಬಾಗಿದ್ದು, ಕೇಕ್ ಅಥವಾ ಬ್ರೆಡ್‌ಗಳನ್ನು ಹೆಚ್ಚು ಕಾಲ ಮೃದುವಾಗಿ ಮತ್ತು ತೇವಭರಿತವಾಗಿ ಇಡುತ್ತದೆ.

ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ನಿಮ್ಮ ಜೊತೆಗಿರುವವರು ನಿಮ್ಮನ್ನು ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಎಂಬುದರ ಚಿಹ್ನೆಗಳಿವು – Kannada News | Chanakya Niti: Acharya Chanakya says such people are selfish

ಆಚಾರ್ಯ ಚಾಣಕ್ಯರು (Acharya Chanakya) ಯಶಸ್ಸು, ಶ್ರೀಮಂತಿಕೆ ಮಾತ್ರವಲ್ಲದೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಚಾಣಕ್ಯರ ಈ ತತ್ವಗಳು  ನಮ್ಮನ್ನು ಸರಿ ದಾರಿಯಲ್ಲಿ ನಡೆಯಲು ಸಹಾಯ ಮಾಡುತ್ತವೆ. ಅಲ್ಲದೆ ಆಚಾರ್ಯ ಚಾಣಕ್ಯರು ತಮ್ಮ  ತತ್ವಗಳಲ್ಲಿ, ನಮ್ಮ ಸುತ್ತಮುತ್ತಲಿನವರ ನಡವಳಿಕೆಯನ್ನು ಯಾವಾಗಲೂ ಗಮನಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಅವರ ಪ್ರಕಾರ, ನಮ್ಮ ಸುತ್ತಮುತ್ತ ಇರುವ ಎಲ್ಲವರೂ ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ, ಕೆಲವರು ನಮ್ಮನ್ನು ಅವರ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸ್ವಾರ್ಥಿ ಜನರನ್ನು ಗುರುತಿಸುವುದು ಹೇಗೆ ಎಂಬುದನ್ನು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಸ್ವಾರ್ಥಿ ಜನರಲ್ಲಿ ಯಾವೆಲ್ಲಾ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.

ಸ್ವಾರ್ಥಿ ಜನರಲ್ಲಿ ಯಾವೆಲ್ಲಾ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ:

ತಮ್ಮ ಅಗತ್ಯಗಳಿಗಾಗಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತರೆ: ನಿಮ್ಮ ಸುತ್ತಮುತ್ತಲಿರುವ ಯಾರಾದರೂ ನಿಮ್ಮನ್ನು ಅವರ ಅಗತ್ಯ ಕಾರ್ಯಗಳಿರುವಾಗ ಮಾತ್ರ ನೆನಪಿಸಿಕೊಂಡರೆ ಅವರು ಸ್ವಾರ್ಥಿಗಳೆಂದು ಅರ್ಥ. ಅಂತಹ ಜನರು ನಿಮ್ಮ ಕಷ್ಟಕ್ಕೆ ಸ್ಪಂದಿಸುವುದಿಲ್ಲ, ಬದಲಾಗಿ ಅವರ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಸಹಾಯ ಪಡೆದ ಬಳಿಕ ನಿಮ್ಮ ಜೊತೆ ಮಾತನಾಡದೆ ಇರಬಹುದು.  ಇಂತಹ ಜನರು ಸಂಬಂಧ ಮತ್ತು ಭಾವನೆಗಳಿಗೆ ಎಂದೂ ಬೆಲೆ ಕೊಡುವುದಿಲ್ಲ. ಹಾಗಾಗಿ ಇಂತಹ ಜನರೊಂದಿಗೆ ಸ್ನೇಹ ಮಾಡುವಾಗ ಎಚ್ಚರದಿಂದ ಇರುವುದು ಒಳ್ಳೆಯದು.

ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು: ನಿಮ್ಮನ್ನು ಅವರವರ ಸ್ವಾರ್ಥಗಳಿಗಾಗಿ ಬಳಸಿಕೊಳ್ಳುವ ಜನ ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ, ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ. ನೀವು ಸಮಸ್ಯೆಯಿಂದ ಬಳಲುತ್ತಿದ್ದರೂ, ಒತ್ತಡದಲ್ಲಿದ್ದರೂ ಅಥವಾ ದುಃಖಿತರಾಗಿದ್ದರೂ ಸಹ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಅವರಿಗೆ ಸಹಾಯ ಬೇಕಾದಾಗ ಮಾತ್ರ ಸ್ನೇಹಪರವಾಗಿ ವರ್ತಿಸುತ್ತಾರೆ.  ಈ ಜನರಲ್ಲಿ ನೀವು ಎರಡು ರೀತಿಯ ನಡವಳಿಕೆಯನ್ನು ನೋಡಬಹುದು. ಒಂದೆಡೆ, ಅವರಿಗೆ ನಿಮಗೆ ಅಗತ್ಯವಿರುವಾಗ ಅವರು ನಿಮಗೆ ತುಂಬಾ ಹತ್ತಿರವಾಗುತ್ತಾರೆ, ಆದರೆ ನಿಮಗೆ ಅಗತ್ಯವಿರುವಾಗ, ಅವರು ನಿಮ್ಮ ಭಾವನೆಗಳನ್ನು ನಿರ್ಲಕ್ಷಿಸುತ್ತಾರೆ. ಇಂತಹ ಜನರಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಇದನ್ನೂ ಓದಿ: ನಾಲ್ಕು ತಪ್ಪು ನಿರ್ಧಾರಗಳು ಜೀವವನ್ನು ಹಾಳು ಮಾಡಬಹುದು ಎನ್ನುತ್ತಾರೆ ಚಾಣಕ್ಯ

 ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡದಿರುವುದು: ನೀವು ಈ ಮನುಷ್ಯ ನಮ್ಮವರು ಎಂದು ನಿಮ್ಮ ಕೈಲಾದಷ್ಟು ಸಹಾಯ ಮಾಡುತ್ತೀರಿ. ಅದೇ ನಿಮ್ಮ ಕೈಯಿಂದ ಸಹಾಯ ಪಡೆದ ಆ ಮನುಷ್ಯ ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಮಾಡದಿದ್ದರೆ, ಅವನಷ್ಟು ಸ್ವಾರ್ಥಿ ಮತ್ತೊಬ್ಬನಿರಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನಿಜವಾದ ಸ್ನೇಹಿತ ನಮ್ಮ ಪ್ರತಿಯೊಂದು ಕಷ್ಟದ ಸಂದರ್ಭದಲ್ಲಿಯೂ ನಮಗೆ ಸಹಾಯ ಹಸ್ತ ಚಾಚುತ್ತಾನೆ.  ನಿಮ್ಮ ಸಹಾಯಕ್ಕಾಗಿ ಧಾವಿಸದ ಸ್ನೇಹಿತ, ಆತ್ಮೀಯರ ಜೊತೆ ನೀವು ಎಚ್ಚರಿಕೆಯಿಂದ ಇರುವುದೇ ಒಳ್ಳೆಯದು. ಏಕೆಂದರೆ ಅಂತಹ ಜನರು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.

ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಅಥವಾ ಬೆಂಬಲದ ಕೊರತೆ: ಮುಂದೆಯಿಂದ ನಗುನಗುತ್ತಾ ವರ್ತಿಸಿ ಆದ್ರೆ ಮನಸ್ಸಿನಿಂದ ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಪಡುವ ಒಂದಷ್ಟು ಜನರಿದ್ದಾರೆ.  ಅವರು ನಿಮ್ಮ ಪ್ರಗತಿಯನ್ನು ಎಂದಿಗೂ ಪೂರ್ಣ ಹೃದಯದಿಂದ ಸ್ವೀಕರಿಸುವುದಿಲ್ಲ. ಅಲ್ಲದೆ ಅವರು ನಿಮಗೆ ಯಾವುದೇ ಬೆಂಬಲವನ್ನು ಸಹ ನೀಡುವುದಿಲ್ಲ. ಅವರು ತಮ್ಮ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಇಂತಹ ಜನರಿಂದ ಆದಷ್ಟು ದೂರವಿರುವುದೇ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ – Kannada News | India’s cumulative exports reach 860 billion USD in 2025 26, all time record high

ನವದೆಹಲಿ, ಏಪ್ರಿಲ್ 15: ಕಳೆದ ಹಣಕಾಸು ವರ್ಷದಲ್ಲಿ (2025-26) ಭಾರತದ ಒಟ್ಟು ರಫ್ತು (cumulative exports) 860.09 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವರ್ಷವಾದ 2024-25ರಲ್ಲಿ 825.26 ಬಿಲಿಯನ್ ಡಾಲರ್ ರಫ್ತು ದಾಖಲಾಗಿತ್ತು. ಅದಕ್ಕೆ ಹೋಲಿಸಿದರೆ 2025-26ರಲ್ಲಿ ರಫ್ತು ಶೇ. 4.22ರಷ್ಟು ಹೆಚ್ಚಳ ಆಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಯಾವ ಹಣಕಾಸು ವರ್ಷದಲ್ಲೂ ದಾಖಲಾದ ಅತ್ಯಧಿಕ ರಫ್ತು ಪ್ರಮಾಣ ಇದಾಗಿದೆ. ಇದರಲ್ಲಿ ಸರಕು ಮತ್ತು ಸೇವೆ ಎರಡೂ ಒಳಗೊಂಡಿವೆ.

‘ಭಾರತದ ಒಟ್ಟಾರೆ ರಫ್ತು ಹೊಸ ದಾಖಲೆ ಮಟ್ಟಕ್ಕೆ ಏರಿದೆ. 2025-26ರ ಹಣಕಾಸು ವರ್ಷದಲ್ಲಿ ಒಟ್ಟೂ ಸರಕು ಮತ್ತು ಸೇವೆಗಳ ರಫ್ತು 860.09 ಬಿಲಿಯನ್ ಡಾಲರ್ ಇರಬಹುದು ಎಂದು ಅಂದಾಜಿಸಲಾಗಿದೆ. 2024-25ರಲ್ಲಿ 825.26 ಬಿಲಿಯನ್ ಡಾಲರ್ ರಫ್ತಾಗಿತ್ತು. ಶೇ. 4.22ರಷ್ಟು ರಫ್ತು ಏರಿಕೆ ಆಗಿದೆ. ಜಾಗತಿಕ ವ್ಯಾಪಾರದಲ್ಲಿ ಭಾರತದ ಉಪಸ್ಥಿತಿ ಮತ್ತಷ್ಟು ಬಲಗೊಂಡಿದೆ’ ಎಂದು ಕೇಂದ್ರ ವಾಣಿಜ್ಯ ಇಲಾಖೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಹಾರ್ಮುಜ್ ನಂತರ ಮಲಕ್ಕಾ ಜಲಸಂಧಿ ಮೇಲೆ ಅಮೆರಿಕ ಕಣ್ಣು; ಭಾರತದ ಬಗಲಿನಲ್ಲೇ ದೊಡ್ಡ ಅಪಾಯದ ಬೀಸುಗತ್ತಿ

2025-26ರಲ್ಲಿ ಭಾರತದ ಸರಕು ರಫ್ತು (Mercantile exports) 441.78 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದಲ್ಲಿ ಅದು 437.70 ಬಿಲಿಯನ್ ಡಾಲರ್​ನಷ್ಟು ಇತ್ತು. ಸರಕುಗಳ ರಫ್ತು ಶೇ. 0.93ರಷ್ಟು ಹೆಚ್ಚಿದೆ. ಭಾರತ ರಫ್ತು ಮಾಡಿರುವ ಸರಕುಗಳಲ್ಲಿ ಪ್ರಮುಖವಾದುದು ಪೆಟ್ರೋಲಿಯ ಉತ್ಪನ್ನಗಳು, ಎಂಜಿನಿಯರಿಂಗ್ ಸರಕುಗಳು, ಕಲ್ಲಿದ್ದಲು, ಖನಿಜ, ಇತರ ಅದಿರುಗಳು, ಸಂಸ್ಕರಿತಿ ಖನಿಜಗಳು, ಕರಕುಶಲ ವಸ್ತುಗಳು ಇತ್ಯಾದಿ ಸೇರಿವೆ.

ಮಾರ್ಚ್​ನಲ್ಲಿ ಸರಕುಗಳ ವ್ಯಾಪಾರ ಅಂತರ ಕಡಿಮೆ

ಮಾರ್ಚ್ ತಿಂಗಳಲ್ಲಿ ಭಾರತದ ಸರಕು ವ್ಯಾಪಾರ ಅಂತರ, ಅಂದರೆ ಟ್ರೇಡ್ ಡೆಫಿಸಿಟ್ 20.98 ಬಿಲಿಯನ್ ಡಾಲರ್​ಗೆ ಇಳಿದಿದೆ. ಫೆಬ್ರುವರಿಯಲ್ಲಿ 36.61 ಬಿಲಿಯನ್ ಡಾಲರ್​ಗಳಷ್ಟಿದ್ದ ಸರಕುಗಳ ರಫ್ತು ಮಾರ್ಚ್​ನಲ್ಲಿ 38.92 ಬಿಲಿಯನ್ ಡಾಲರ್​ಗೆ ಏರಿದೆ. ಸರಕುಗಳ ಆಮದು 63.71 ಬಿಲಿಯನ್ ಡಾಲರ್​ನಿಂದ 59.9 ಬಿಲಿಯನ್ ಡಾಲರ್​ಗೆ ತಗ್ಗಿದೆ.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಮಾರ್ಚ್ ತಿಂಗಳಲ್ಲಿ ಭಾರತ ಉತ್ತಮ ವಹಿವಾಟುಗಳನ್ನು ನಡೆಸಿರುವುದು ಗಮನಾರ್ಹ ಸಂಗತಿ. ಆದರೆ, ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ 2025-26ರ ಮಟ್ಟದ ವ್ಯಾಪಾರವನ್ನು ನಿರೀಕ್ಷಿಸಲು ಕಷ್ಟವಾಗಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯೋಗೀಶ್ ಗೌಡ ಕೊಲೆ ಕೇಸ್: ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಜನ ದೋಷಿ, ಕೋರ್ಟ್ ಮಹತ್ವದ ತೀರ್ಪು – Kannada News | Bengaluru special court convicts Congress MLA Vinay Kulkarni And others accused in Dharwad Yogesh Gowda Murder Case

ಬೆಂಗಳೂರು/ಧಾರವಾಡ, (ಏಪ್ರಿಲ್ 15): ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ  ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ (Dharwad Yogesh Gowda Murder Case) ಅಂತಿಮ ತೀರ್ಪು ಪ್ರಕಟವಾಗಿದೆ. ಮಾಜಿ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಸೇರಿ 21ರ ಪೈಕಿ 19  ಮಂದಿ ಆರೋಪಿಗಳು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Bengaluru Special Court Verdict)   ಇಂದು (ಏಪ್ರಿಲ್ 15) ತೀರ್ಪು ನೀಡಿ ಆದೇಶ ಹೊರಡಿಸಿದೆ.

21 ಆರೋಪಿಗಳ ಪೈಕಿ 19 ಮಂದಿ ದೋಷಿ

21 ಆರೋಪಿಗಳ ಪೈಕಿ ಇಬ್ಬರು ಮಾಫಿಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೈಕಿ ಕೋರ್ಟ್, 19 ಆರೋಪಿಗಳನ್ನ ದೋಷಿ ಎಂದು ತೀರ್ಪು ನೀಡಿದೆ.  ಎ1 ಬಸವರಾಜ ಮುತ್ತಗಿ ಮಾಫಿಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ. ಇದರಿಂದ ಇವರಿಬ್ಬರನ್ನು ಹೊರತುಪಡಿಸಿ ಉಳಿದವರ ತೀರ್ಪು ಪ್ರಕಟಿಸಿದೆ.

ಎ2 ವಿಕ್ರಮ್, ಎ3 ಕೀರ್ತಿ ಕುಮಾರ್, ಎ 4 ಸಂದೀಪ್, ಎ5 ವಿನಾಯಕ್, ಎ6 ಮಹಾಬಲೇಶ್ವರ್ ಅಲಿಯಾಸ್ ಮುದಕ, ಎ 7 ಸಂತೋಷ್, ಎ 8 ದಿನೇಶ್, ಎ 9 ಅಶ್ವಥ್, ಎ10 ಸುನಿಲ್, ಎ 11 ನಜೀರ್ ಅಹಮದ್, ಎ 12 ಷಾನವಾಜ್, ಎ 13 ನೂತನ್ , ಎ14 ಹರ್ಷಿತ್, ಎ15 ವಿನಯ್ ಕುಲಕರ್ಣಿ, ಎ 16 ಚಂದ್ರು ಮಾಮ, ಎ18 ವಿಕಾಸ್ ಕಲಬುರ್ಗಿ, ಎ 19 ಚನ್ನಕೇಶವ ಟಿಂಗರಿಕರ್, ಎ20 ವಾಸುದೇವ ನಿಲೇಕಣಿ, ಎ21 ಸೋಮಶೇಖರ್ ನ್ಯಾಮಗೌಡ

ಪ್ರಕರಣದ ಹಿನ್ನೆಲೆ

ಧಾರವಾಡದ ಜಿಲ್ಲಾ  ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಅವರನ್ನು 2016ರ ಜೂನ್ 15ರಂದು  ಸಪ್ತಾಪುರ ಬಡಾವಣೆಯ ಜಿಮ್​​ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದ್ರೆ, ಕೊಲೆಯಾದ ಯೋಗೇಶ್‌ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಬಳಿಕ ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು. ಅಲ್ಲದೇ ಈ ಕೊಲೆಯಲ್ಲಿ ವಿನಯ್‌ ಕುಲಕರ್ಣಿ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು.  ಈ ಹಿನ್ನೆಲೆಯಲ್ಲಿ 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು, ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್‌ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

2016 ಜೂನ್‌ನಲ್ಲಿ ಯೋಗಿಶ್ ಗೌಡ ಕೊಲೆಯಾಗಿತ್ತು. ಶಾಸಕ ವಿನಯ್ ಕುಲಕರ್ಣಿ (Vinay Kulkarni) ಮೇಲೆ ಕೊಲೆಗೆ ಒಳಸಂಚು ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ ಪೊಲೀಸರ ಮುಂದೆ ಆರು ಜನ ಆರೋಪಿಗಳು ಶರಣಾಗಿದ್ದರು. ಯೋಗಿಶ್ ಗೌಡ ಕುಟುಂಬಸ್ಥರ ಮನವಿ ಮೇರೆಗೆ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. 2019ರಲ್ಲಿ ಸಿಬಿಐ ಗೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ತನಿಖೆ ನಡಸಿದ್ದ ಸಿಬಿಐ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕ್ಷೇತ್ರ ಪುನರ್ ವಿಂಗಡಣೆಯಾದರೆ ನಿಜಕ್ಕೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಾ? ಸ್ಥಾನಗಳ ಲೆಕ್ಕಾಚಾರ ಇಲ್ಲಿದೆ – Kannada News | Delimitation Became Flashpoint Between Centre And South Indian States what New Numbers says

ನವದೆಹಲಿ, ಏಪ್ರಿಲ್ 15: ಪ್ರಸ್ತಾವಿತ ಸೀಮಾ ನಿರ್ಣಯದ (Delimitation) ಕುರಿತಾದ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಿಂದ ಹೆಚ್ಚುತ್ತಿರುವ ಪ್ರತಿರೋಧವನ್ನು ಎದುರಿಸುತ್ತಿದೆ. ಕರ್ನಾಟಕ, ತೆಲಂಗಾಣ, ತಮಿಳುನಾಡು ಕ್ಷೇತ್ರ ಮರು ವಿಂಗಡಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದರಿಂದ ತಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿವೆ. ಈ ಸೀಮಾ ನಿರ್ಣಯ ಜಾರಿಯಾದರೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಆಗುವ ಪರಿಣಾಮಗಳೇನು?

ಜನಸಂಖ್ಯೆ ಆಧಾರಿತ ಸೀಮಾ ನಿರ್ಣಯವು ಉತ್ತರದ ರಾಜ್ಯಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ದಕ್ಷಿಣದ ರಾಜ್ಯಗಳ ನಾಯಕರು ವಾದಿಸುತ್ತಿದ್ದಾರೆ. ಅಲ್ಲಿ ಜನಸಂಖ್ಯಾ ಬೆಳವಣಿಗೆ ಹೆಚ್ಚಾಗಿದೆ. ಹೀಗಾಗಿ, ಆ ಭಾಗಕ್ಕೆ ಹೆಚ್ಚು ಸ್ಥಾನಗಳು ಸಿಗುತ್ತವೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬುದು ಅವರ ವಾದ.

ಹಾಗಾದರೆ, ದಕ್ಷಿಣದ ರಾಜ್ಯಗಳ ನಾಯಕರ ಆರೋಪ ನಿಜವೇ? ಸೀಮಾ ನಿರ್ಣಯ ನಾರಿಯಾದರೆ ದಕ್ಷಿಣ ಭಾರತದ ಯಾವ ರಾಜ್ಯಗಳ ಸ್ಥಾನ ಎಷ್ಟಕ್ಕೆ ಏರಿಕೆಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ. ಈ ಮಾಹಿತಿಗಳನ್ನು ಕೇಂದ್ರ ಸರ್ಕಾರದ ಮೂಲಗಳು ನೀಡಿವೆ.

ಇದನ್ನೂ ಓದಿ: ಒಗ್ಗಟ್ಟಿನಿಂದ ನಿಲ್ಲುತ್ತೇವೆ; ಕ್ಷೇತ್ರ ಪುನರ್ ವಿಂಗಡಣೆ ವಿರುದ್ಧ ಒಂದಾದ ದಕ್ಷಿಣ ಭಾರತ

ತಮಿಳುನಾಡು ಪ್ರಸ್ತುತ 39 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಪುನರ್ ವಿಂಗಡಣೆ ಮಾಡಿದ್ದರೆ ಅದು 49 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು 50% ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು ಈಗ 59 ಸ್ಥಾನಗಳನ್ನು ಹೊಂದಲಿದೆ.

ಕೇರಳ ಪ್ರಸ್ತುತ 20 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ, ಅದು 23 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು 50% ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು ಈಗ 30 ಸ್ಥಾನಗಳನ್ನು ಹೊಂದಲಿದೆ.

ಆಂಧ್ರಪ್ರದೇಶ ಪ್ರಸ್ತುತ 25 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರದ ಮೇಲೆ ಮಾತ್ರ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ ಅದು 33 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು 50% ಹೆಚ್ಚಿಸುವ ಕೇಂದ್ರದ ಸೂತ್ರದ ಪ್ರಕಾರ, ಅದು ಈಗ 37 ಸ್ಥಾನಗಳನ್ನು ಹೊಂದಲಿದೆ.

ಒಡಿಶಾ ಪ್ರಸ್ತುತ 21 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ, ಅದು 28 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು ಶೇ. 50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು 31 ಸ್ಥಾನಗಳನ್ನು ಹೊಂದಲಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವೇದಿಕೆ ಸಜ್ಜು; ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸಲು ಮೋದಿ ಸರ್ಕಾರ ಪ್ರಸ್ತಾಪ

ತೆಲಂಗಾಣ ಪ್ರಸ್ತುತ 17 ಸ್ಥಾನಗಳನ್ನು ಹೊಂದಿದೆ. 2011ರ ಜನಗಣತಿಯ ಆಧಾರವಾಗಿಯೇ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ, ಅದು 24 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು ಶೇ. 50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು 25 ಸ್ಥಾನಗಳನ್ನು ಹೊಂದುತ್ತದೆ.

ಕರ್ನಾಟಕ ಪ್ರಸ್ತುತ 28 ಸ್ಥಾನಗಳನ್ನು ಹೊಂದಿದೆ. ಕೇವಲ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರೆ, ಅದು 41 ಸ್ಥಾನಗಳನ್ನು ಹೊಂದುತ್ತಿತ್ತು. ಆದರೆ ಎಲ್ಲಾ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಮತ್ತು 50% ಹೆಚ್ಚಿಸುವ ಕೇಂದ್ರ ಸರ್ಕಾರದ ಸೂತ್ರದ ಪ್ರಕಾರ, ಅದು ಈಗ 42 ಸ್ಥಾನಗಳನ್ನು ಹೊಂದಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಕ್ಷೇತ್ರ ಪುನರ್ ವಿಂಗಡಣೆ ಎಂದರೇನು?:

ಪುನರ್ ವಿಂಗಡಣೆ ಎಂದರೆ ಜನಸಂಖ್ಯಾ ಬದಲಾವಣೆಗಳ ಆಧಾರದ ಮೇಲೆ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಪರಿಶೀಲಿಸಿ ಬದಲಾಯಿಸುವ ಪ್ರಕ್ರಿಯೆ. ಪ್ರತಿ ಕ್ಷೇತ್ರದ ಜನಸಂಖ್ಯೆಯು ಸರಿಸುಮಾರು ಸಮಾನವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಜನಗಣತಿಯ ನಂತರ ನಡೆಸಲಾಗುತ್ತದೆ. ಭಾರತದಲ್ಲಿ ಕೊನೆಯದಾಗಿ ಸಂಪೂರ್ಣ ಪುನರ್ವಿಂಗಡಣೆ 2002ರಲ್ಲಿ ನಡೆಸಲಾಯಿತು. ಪ್ರಸ್ತುತ, 2026ರ ನಂತರ ಮತ್ತೆ ಕ್ಷೇತ್ರ ಪುನರ್ವಿಂಗಡಣೆಯಾಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಲು ಅರ್ಜುನ್ ‘ರಾಕಾ’ ಲುಕ್ ಸಿದ್ಧಪಡಿಸಲು ಪ್ರತಿ ದಿನ 4 ಗಂಟೆ ಮೇಕಪ್ – Kannada News | Allu Arjun spends 4 hours a day on makeup for his Raaka movie getup

‘ಪುಷ್ಪ 2’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ನಟ ಅಲ್ಲು ಅರ್ಜುನ್ (Allu Arjun) ಅವರ ಮುಂದಿನ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ. ಈಗ ಅವರು ‘ರಾಕಾ’ (Raaka) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅದರಲ್ಲಿ ಅಲ್ಲು ಅರ್ಜುನ್ ಅವರ ಗೆಟಪ್ ಗಮನ ಸೆಳೆದಿದೆ. ಆ ಗೆಟಪ್ ಸಲುವಾಗಿ ಅವರು ಎಷ್ಟು ಶ್ರಮ ಹಾಕಿದ್ದಾರೆ ಎಂಬ ವಿಷಯ ಈಗ ಗೊತ್ತಾಗಿದೆ. ಈ ಚಿತ್ರಕ್ಕೆ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಅಟ್ಲಿ ಮತ್ತು ಅಲ್ಲು ಅರ್ಜುನ್ ಜೊತೆಯಾಗಿ ಸಿನಿಮಾ ಮಾಡುತ್ತಿರುವುದರಿಂದ ಸಹಜವಾಗಿಯೇ ‘ರಾಕಾ’ ಚಿತ್ರದ ಬಗ್ಗೆ ಹೈಪ್ ಹೆಚ್ಚಾಗಿದೆ. ಈ ಸಿನಿಮಾದ ಕಥೆ ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸಲು ಆರಂಭಿಸಿದ್ದಾರೆ. ಅರ್ಧ ಮೃಗ, ಅರ್ಧ ಮನುಷ್ಯನ ರೀತಿ ಕಾಣುವ ಗೆಟಪ್ ಧರಿಸಿ ಅಲ್ಲು ಅರ್ಜುನ್ ಅವರು ಫ್ಯಾನ್ಸ್ ಎದುರು ಝಲಕ್ ನೀಡಿದ್ದಾರೆ.

ಈ ಗೆಟಪ್ ಹಾಕುವುದು ಅಷ್ಟು ಸುಲಭವಲ್ಲ. ಈ ಲುಕ್​ಗಾಗಿ ಅಲ್ಲಿ ಅರ್ಜುನ್ ಅವರು ಪ್ರತಿ ದಿನ 3ರಿಂದ 4 ಗಂಟೆಗಳ ಕಾಲ ಶ್ರಮ ಹಾಕಿದ್ದಾರೆ. ಸಿನಿಮಾ ಮೇಲೆ ಅಲ್ಲು ಅರ್ಜುನ್ ಅವರಿಗೆ ಇರುವ ಪ್ರೀತಿ ಎಷ್ಟು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪ್ರತಿ ಪಾತ್ರಕ್ಕೂ ಅಲ್ಲು ಅರ್ಜುನ್ ಅವರು ಇದೇ ರೀತಿ ಶ್ರಮ ಹಾಕುತ್ತಾರೆ. ಸ್ಟಾರ್ ನಟನಾದ ಮೇಲೂ ಅವರು ಈ ರೀತಿ ಬದ್ಧತೆ ತೋರಿಸುತ್ತಿರುವುದು ಅವರ ಯಶಸ್ಸಿಗೆ ಕಾರಣ ಆಗಿದೆ.

ಫಸ್ಟ್ ಲುಕ್ ಬಿಡುಗಡೆ ಆದ ಬಳಿಕ ‘ರಾಕಾ’ ಕ್ರೇಜ್ ಜೋರಾಗಿದೆ. ಈ ಮೊದಲು ‘ಪುಷ್ಪ’ ಸಿನಿಮಾದ ‘ತಗ್ಗೆದಲೇ’ ಸ್ಟೈಲ್ ವೈರಲ್ ಆಗಿತ್ತು. ಈಗ ‘ರಾಕಾ’ ಕೂಡ ಅದೇ ರೀತಿ ಟ್ರೆಂಡ್ ಆಗುವ ಲಕ್ಷಣ ಕಾಣಿಸಿದೆ. ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗೆ ನಡೆದ ಟಿ20 ಪಂದ್ಯದಲ್ಲಿ ‘ರಾಕಾ’ ರೀತಿ ಪೋಸ್ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: ‘ರಾಕಾ’ ಸಿನಿಮಾ: ದೀಪಿಕಾ ಪಡುಕೋಣೆಗೆ ಹೀರೋಗೆ ಸರಿಸಮಾನವಾಗಿ ಸಂಭಾವನೆ ಸಿಕ್ಕಿತೇ?

ಇಂತಹ ಹಲವು ಕಾರಣಗಳಿಂದಾಗಿ ‘ರಾಕಾ’ ಸಿನಿಮಾ ಸದ್ದು ಮಾಡುತ್ತಿದೆ. ‘ಸನ್ ಪಿಕ್ಚರ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಬೃಹತ್ ಬಜೆಟ್​ನಲ್ಲಿ ಚಿತ್ರ ಸಿದ್ಧವಾಗುತ್ತಿದೆ. ದೀಪಿಕಾ ಪಡುಕೋಣೆ ಅವರು ಈ ಸಿನಿಮಾಗೆ ನಾಯಕಿ ಆಗಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಡಿಯೂರಪ್ಪ ಮಗನನ್ನು ಗೆಲ್ಲಿಸಿ ಅಂದಿದ್ದ ಶಾಮನೂರು ವಿರುದ್ಧ ಯಾಕೆ ಕ್ರಮ ಆಗಿಲ್ಲ: ಸಿಡಿದೆದ್ದ ಮುಸ್ಲಿಂ ನಾಯಕ – Kannada News | Mlc abdul jabbar First Reaction about Suspended And Hits out at Congress High command

ಬೆಂಗಳೂರು/ದಾವಣಗೆರೆ, (ಏಪ್ರಿಲ್ 15): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ, ಟಿಕೆಟ್ ವಿಚಾರಕ್ಕೆ ಆರಂಭವಾಗಿ ಇದೀಗ ನಾಯಕರ ತಲೆದಂಡ ತನಕ ಬಂದು ನಿಂತಿದೆ. ಹೌದು…ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್​​ನಿಂದ ಅಮಾನತು ಮಾಡಲಾಗಿದ್ದು, ಇದೀಗ ಸಚಿವ ಜಮಿರ್ ಅಹ್ಮದ್ ಖಾನ್​​ಗೂ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಕೆಲ ಮುಸ್ಲಿಂ ನಾಯಕರು ಸಹ ಕಾಂಗ್ರೆಸ್ ಹೈಕಮಾಂಡ್​ ನಡೆಗೆ ಆಕ್ರೋಶಗೊಂಡಿದ್ದು, ಈ ಹಿಂದೆ ಶಾಮನೂರು ಶಿವಶಂಕರಪ್ಪನವರು ಬಹಿರಂಗವಾಗಿಯೇ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಅವರನ್ನ ಗೆಲ್ಲಿಸಿ ಎಂದು ಹೇಳಿದಕ್ಕೆ ಯಾವ ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು ಅಮಾನತುಗೊಂಡಿರುವ ಅಬ್ದುಲ್ ಜಬ್ಬಾರ್ ಸಹ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಶಾಮನೂರು ಶಿವಶಂಕರಪ್ಪನವರು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಹೈಕಮಾಂಡ್ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಪಕ್ಷದಲ್ಲಿ ಒಬ್ಬರಿಗೊಂದು ರೀತಿ, ಇನ್ನೊಬ್ಬರಿಗೊಂದು ರೀತಿ ಆಗುತ್ತಿದೆ. ಶಾಮನೂರು ಓಪನ್ ಸ್ಟೇಜ್​ನಲ್ಲಿ ಯಡಿಯೂರಪ್ಪನವರ ಮಗನನ್ನು ಗೆಲ್ಲಿಸಿ ಅಂದಿದ್ರು. ಆಗ ಶಾಮನೂರು ಶಿವಶಂಕರಪ್ಪ ವಿರುದ್ಧ ಯಾಕೆ ಕ್ರಮ ಆಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಟಿಕೆಟ್​ ಪಡೆದವರು ನಮ್ಮೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಲ್ವಾ? ಯಾವ ಆಡಿಯೋ ವೈರಲ್ ಆಗಿದೆ ಎಂಬ ಮಾಹಿತಿ ನೀಡಬೇಕಲ್ವಾ? ತಪ್ಪೇ ಮಾಡಿಲ್ಲ ಅಂದಮೇಲೆ ನಾವು ಯಾರಿಗೆ ಹೆದರಬೇಕು? ದಾವಣೆಗೆರೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಸೋಲುತ್ತೆ ಅಂತಾ ಅನ್ನಿಸುತ್ತಿಲ್ಲ. ಅದಕ್ಕೂ ಮೊದಲೇ ಹೀಗೆ ಯಾಕೆ ಮಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಒದಿ: ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು

Source link

ನಿದ್ರೆ ಸರಿಯಾಗಿ ಮಾಡದವರಲ್ಲಿ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಾ? ಇಲ್ಲಿದೆ ತಜ್ಞರು ನೀಡಿರುವ ಸ್ಪಷ್ಟನೆ – Kannada News | Don’t Let Sleep Deprivation Blur Your Vision

ಇಂದಿನ ವೇಗದ ಜೀವನಶೈಲಿಯಲ್ಲಿ ನಿದ್ರೆಯ (Sleep) ಕೊರತೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ರಾತ್ರಿಯಾದರೂ ಮೊಬೈಲ್ ಬಳಕೆ ಮಾಡುತ್ತಾ ಸಮಯ ಕಳೆಯುವವರು ಒಂದು ಕಡೆಯಾದರೆ, ಮತ್ತೊಂದು ಕಡೆ ಕೆಲಸದ ಒತ್ತಡ ಮತ್ತು ಅಸ್ಥಿರ ದಿನಚರಿಯಿಂದ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದರ ಪರಿಣಾಮ ಕೇವಲ ದೇಹದ ಮೇಲಷ್ಟೇ ಅಲ್ಲ, ಕಣ್ಣಿನ ಆರೋಗ್ಯದ (Eye Health) ಮೇಲೂ ಬೀಳುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಇದರಿಂದ ಕಣ್ಣಿನ ದೃಷ್ಟಿ ದುರ್ಬಲವಾಗುತ್ತಾ, ಈ ರೀತಿಯ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿದ್ರೆಯ ಕೊರತೆ ಮತ್ತು ಕಣ್ಣಿನ ಆರೋಗ್ಯ:

ಆರೋಗ್ಯ ತಜ್ಞರು ಹೇಳುವ ಪ್ರಕಾರ, ನಿದ್ರೆಯ ಕೊರತೆಯಿಂದ ಕಣ್ಣಿನ ಮೇಲೆ ನೇರ ಪರಿಣಾಮ ಬೀಳುತ್ತದೆ. ಇದರಿಂದ ಶಾಶ್ವತವಾಗಿ ದೃಷ್ಟಿ ಕುಂದುತ್ತದೆ ಎನ್ನುವುದು ತಪ್ಪು ಕಲ್ಪನೆ. ಸಾಕಷ್ಟು ನಿದ್ರೆ ಸಿಗದಿದ್ದರೆ ಕಣ್ಣುಗಳಿಗೆ ಅಗತ್ಯ ವಿಶ್ರಾಂತಿ ಸಿಗುವುದಿಲ್ಲ, ಇದರಿಂದ ತಾತ್ಕಾಲಿಕವಾಗಿ ಮಂಕು ದೃಷ್ಟಿ, ಫೋಕಸ್ ಸಮಸ್ಯೆ ಮತ್ತು ಕಣ್ಣು ಭಾರವಾಗುವಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಎಷ್ಟು ದಿನ ಬದುಕಬಹುದು? ಒಂದು ದಿನ ನಿದ್ರೆ ಬಿಟ್ಟರೆ ಏನೆಲ್ಲಾ ಆಗುತ್ತೆ ನೋಡಿ

ಲಕ್ಷಣಗಳು ಹೇಗಿರುತ್ತವೆ?

ನಿದ್ರೆ ಕೊರತೆಯಿಂದ ಕಣ್ಣಿನಲ್ಲಿ ಉರಿ, ಒಣಗುವಿಕೆ ಮತ್ತು ಕೆಂಪಾಗುವುದು ಕಂಡುಬರುತ್ತದೆ. ಜೊತೆಗೆ ಬೆಳಕಿಗೆ ಹೆಚ್ಚು ಸಂವೇದನೆ, ತಲೆನೋವು ಮತ್ತು ಕಣ್ಣಿನ ನೋವು ಉಂಟಾಗಬಹುದು. ಕೆಲವರಿಗೆ ಕಣ್ಣುಗಳ ಕೆಳಗೆ ಕಪ್ಪಾಗುವುದು ಮತ್ತು ಊತ ಕೂಡ ಕಾಣಿಸಬಹುದು. ಈ ಲಕ್ಷಣಗಳು ಕಣ್ಣುಗಳಿಗೆ ಸರಿಯಾದ ವಿಶ್ರಾಂತಿ ಸಿಗದಿರುವುದನ್ನು ಸೂಚಿಸುತ್ತವೆ. ಹೆಚ್ಚು ಸಮಯ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ನಿರಂತರವಾಗಿ ಕಣ್ಣಿಗೆ ಒತ್ತಡ ನೀಡುವುದರಿಂದ ಒಣಗುವಿಕೆ ಮತ್ತು ದೃಷ್ಟಿ ಮಂಕಾಗುವುದು ಹೆಚ್ಚಾಗುತ್ತದೆ.

ತಡೆಗಟ್ಟುವ ಕ್ರಮಗಳು

ಪ್ರತಿದಿನ 7 ರಿಂದ 8 ಗಂಟೆ ಸರಿಯಾಗಿ ನಿದ್ರೆ ಪಡೆಯುವುದು ಅತ್ಯಂತ ಮುಖ್ಯ. ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ಮಧ್ಯಂತರದಲ್ಲಿ ವಿರಾಮ ತೆಗೆದುಕೊಳ್ಳಬೇಕು. ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲಿತ ಆಹಾರ ಸೇವಿಸುವುದು ಕಣ್ಣಿನ ಆರೋಗ್ಯಕ್ಕೆ ಸಹಕಾರಿ. ನಿದ್ರೆಯ ಕೊರತೆ ಕಣ್ಣಿನ ದೃಷ್ಟಿಯನ್ನು ತಾತ್ಕಾಲಿಕವಾಗಿ ಹಾನಿಗೊಳಿಸಬಹುದು, ಆದರೆ ದೀರ್ಘಕಾಲ ಗಮನಿಸದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಸಮರ್ಪಕ ನಿದ್ರೆ ಮತ್ತು ಕಣ್ಣಿನ ಆರೈಕೆ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version