MI ಮೀಟಿಂಗ್: ಹಾರ್ದಿಕ್ ಪಾಂಡ್ಯ ಭವಿಷ್ಯ ನಿರ್ಧಾರ! – Kannada News

ಐಪಿಎಲ್ 2026ರ ಸೀಸನ್ ಮುಕ್ತಾಯಗೊಂಡ ಬೆನ್ನಲ್ಲೇ, ಮುಂಬೈ ಇಂಡಿಯನ್ಸ್ (MI) ತಂಡದಲ್ಲಿ ಭಾರಿ ಬದಲಾವಣೆಯಾಗುವ ಸೂಚನೆ ಸಿಗುತ್ತಿದೆ. ಬ್ಯಾಕ್ ಟು ಬ್ಯಾಕ್ ಮೂರು ಸೀಸನ್​ಗಳಲ್ಲಿ ತೀವ್ರ ನಿರಾಶಾದಾಯಕ ಪ್ರದರ್ಶನದ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಕುರಿತು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಶೀಘ್ರದಲ್ಲೇ ಒಂದು ಪ್ರಮುಖ ಸಭೆ ನಡೆಸಲಿದೆ ಎಂದು ವರದಿಯಾಗಿದೆ.

ಈ ಸಭೆಯಲ್ಲಿ ಆಟಗಾರ ಮತ್ತು ಫ್ರಾಂಚೈಸಿ ಇಬ್ಬರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಅಂದರೆ ಈ ಸಭೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯ ನಿರ್ಧಾರವಾಗಲಿದೆ. ಏಕೆಂದರೆ ಪಾಂಡ್ಯ ನಾಯಕನಾದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.

ಇದನ್ನೇ ಗಂಭೀರವಾಗಿ ಪರಿಗಣಿಸಿರುವ ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್ಮೆಂಟ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಚಿಂತಿಸಿದ್ದಾರೆ. ಈ ಮೇಜರ್ ಸರ್ಜರಿಯೊಂದಿಗೆ ಹಾರ್ದಿಕ್ ಪಾಂಡ್ಯ ಹೊರಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಏಕೆಂದರೆ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡ ಕೇವಲ ಮೂರು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತಳಮಟ್ಟಕ್ಕೆ ಕುಸಿದಿದೆ. 2024ರಲ್ಲಿ 10ನೇ ಸ್ಥಾನ, 2025ರಲ್ಲಿ ಪ್ಲೇಆಫ್ ಹಂತಕ್ಕೇರಿದ್ದರೂ, ಇತ್ತೀಚಿನ 2026ರ ಸೀಸನ್‌ನಲ್ಲಿ ತಂಡ ಮತ್ತೊಮ್ಮೆ ಕೇವಲ 4 ಪಂದ್ಯಗಳನ್ನು ಗೆದ್ದು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇದರೊಂದಿಗೆ ನಾಯಕನಾಗಿ ಮತ್ತು ಆಟಗಾರನಾಗಿ ಹಾರ್ದಿಕ್ ಪಾಂಡ್ಯ (206 ರನ್ ಮತ್ತು 4 ವಿಕೆಟ್) ಈ ಬಾರಿ ಕೂಡ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಮುಂಬರುವ ಸೀಸನ್​ಗೂ ಮುನ್ನ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್​ ಕೈ ಬಿಟ್ಟರೂ ಅಚ್ಚರಿಪಡಬೇಕಿಲ್ಲ.

ಡ್ರೆಸ್ಸಿಂಗ್ ರೂಮ್ ಭಿನ್ನಾಭಿಪ್ರಾಯ!

ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರು ಕೇವಲ ಮೈದಾನದಲ್ಲಿ ಮಾತ್ರವಲ್ಲದೆ, ಡ್ರೆಸ್ಸಿಂಗ್ ರೂಮ್​ನಲ್ಲಿಯೂ ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸತತ ಸೋಲುಗಳು, ಅಭಿಮಾನಿಗಳಿಂದ ಎದುರಾದ ಟೀಕೆಗಳು ಮತ್ತು ತಂಡದ ಕೆಲವು ಹಿರಿಯ ಆಟಗಾರರಿಂದ ಸರಿಯಾದ ಸಹಕಾರ ಸಿಗದೇ ಇರುವುದು ಹಾರ್ದಿಕ್ ಅವರನ್ನು ತೀವ್ರ ಮಾನಸಿಕ ಒತ್ತಡಕ್ಕೆ ದೂಡಿದೆ.

ಹೀಗಾಗಿಯೇ ಐಪಿಎಲ್​ ಸೀಸನ್‌ನ ಮಧ್ಯಭಾಗದಲ್ಲೇ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಹೋಗುವ ಇಚ್ಛೆಯನ್ನು ಮ್ಯಾನೇಜ್‌ಮೆಂಟ್‌ಗೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ಜಸ್​ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರೊಂದಿಗೆ ಹಾರ್ದಿಕ್ ಅವರ ಸಂಬಂಧ ಸೌಹಾರ್ದಯುತವಾಗಿಲ್ಲ ಎಂಬ ಚರ್ಚೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿವೆ.

ಈ ಎಲ್ಲಾ ವಿಷಯಗಳನ್ನು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಶೀಘ್ರದಲ್ಲೇ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯ ಬಳಿಕ ಎಂಐ ಫ್ರಾಂಚೈಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಈ ಸಭೆಯು ಕೇವಲ ಒಂದು ಫ್ರಾಂಚೈಸಿಯ ಆಂತರಿಕ ವಿಷಯವಾಗಿ ಉಳಿದಿಲ್ಲ. ಇದು ಮುಂಬರುವ ಐಪಿಎಲ್ 2027ರ ಮೆಗಾ ಹರಾಜಿನ ಚಿತ್ರಣವನ್ನೇ ಬದಲಿಸುವ ಶಕ್ತಿ ಹೊಂದಿದೆ.

ಇದನ್ನೂ ಓದಿ: ರಿಚಾ ಘೋಷ್ ಸಿಡಿಲಬ್ಬರ: ಸ್ಟಂಪ್ ಔಟ್​ನಿಂದ ಕೈತಪ್ಪಿದ ಗೆಲುವು!

ಹಾರ್ದಿಕ್ ಪಾಂಡ್ಯ ಮುಂಬೈ ತಂಡದಲ್ಲೇ ಮುಂದುವರಿಯುತ್ತಾರಾ ಅಥವಾ ಹೊಸ ಹಾದಿ ಹಿಡಿಯುತ್ತಾರಾ ಎಂಬ ಕುತೂಹಲಕ್ಕೆ ಜೂನ್ ತಿಂಗಳ ಅಂತ್ಯದೊಳಗೆ ತೆರೆ ಬೀಳಲಿದೆ. ಏನೇ ಆದರೂ, ಈ ನಿರ್ಧಾರವು ಮುಂಬೈ ಇಂಡಿಯನ್ಸ್‌ನ ಭವಿಷ್ಯದ ಯಶಸ್ಸು ಮತ್ತು ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ವೃತ್ತಿಜೀವನ—ಇಬ್ಬರಿಗೂ ಅತ್ಯಂತ ನಿರ್ಣಾಯಕವಾಗಲಿದೆ.

Source link

ಸಲ್ಮಾನ್ ಖಾನ್- ಸಂದೀಪ್ ರೆಡ್ಡಿ ವಂಗಾ ಸಿನಿಮಾ ಸೆಟ್ಟೇರೋದು ಯಾವಾಗ? – Kannada News

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ (Salman Khan) ಮತ್ತು ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿರುವ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾವೊಂದು ಬರಲಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ‘ಅನಿಮಲ್’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಸಂದೀಪ್ ವಂಗಾ ಅವರ ಡಾರ್ಕ್ ಮತ್ತು ಇಂಟೆನ್ಸ್ ಸಿನಿಮ್ಯಾಟಿಕ್ ಜಗತ್ತಿನಲ್ಲಿ ಸಲ್ಮಾನ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಕ್ಯೂರಿಯಾಸಿಟಿಯಿಂದ ಕಾಯುತ್ತಿದ್ದಾರೆ. ಆದರೆ, ಈ ಪ್ರಾಜೆಕ್ಟ್ ಸದ್ಯಕ್ಕೆ ಸೆಟ್ಟೇರುವುದು ಅಸಾಧ್ಯ ಎನ್ನಲಾಗುತ್ತಿದೆ.

ಸದ್ಯ ಸಲ್ಮಾನ್ ಖಾನ್ ಅವರು ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಲು ಸೌತ್‌ನ ಮೋಸ್ಟ್ ವಾಂಟೆಡ್ ಮತ್ತು ಟ್ರೆಂಡಿಂಗ್‌ನಲ್ಲಿರುವ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ. ಈಗಾಗಲೇ ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಜೊತೆ ‘ಸಿಕಂದರ್’ ಸಿನಿಮಾ ಮಾಡಿರೋ ಅವರು ಈಗ ಸಂದೀಪ್ ರೆಡ್ಡಿ ವಂಗಾ ಅವರ ಮೇಲೂ ಕಣ್ಣಿಟ್ಟಿದ್ದಾರೆ. ಆದರೆ ಚಿತ್ರರಂಗದ ಒಳಗಿನ ಮಾಹಿತಿ ಪ್ರಕಾರ, ಈ ಕಾಂಬಿನೇಷನ್ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯರೂಪಕ್ಕೆ ಬರುವುದು ಅನುಮಾನ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಸಿನಿಮಾಗಳ ಲೈನಪ್ ನೋಡಿದರೆ, ಮುಂದಿನ ಕೆಲವು ವರ್ಷಗಳ ಕಾಲ ಅವರು ಬೇರೆ ಯಾವುದೇ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ಸದ್ಯ ಅವರು ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದ ಕೆಲಸಗಳಲ್ಲಿ ಸಂಪೂರ್ಣವಾಗಿ ಮುಳುಗಿದ್ದಾರೆ. ಇದು ಅವರ ಮೊದಲ ಆದ್ಯತೆಯಾಗಿದ್ದು, ಭಾರಿ ನಿರೀಕ್ಷೆ ಮೂಡಿಸಿರುವ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಗಿದೆ.

ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳು:

‘ಸ್ಪಿರಿಟ್’ ಚಿತ್ರ ಮುಗಿಯುತ್ತಿದ್ದಂತೆಯೇ ಸಂದೀಪ್ ವಂಗಾ ಅವರು ರಣಬೀರ್ ಕಪೂರ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ‘ಅನಿಮಲ್’ನ ಸೀಕ್ವೆಲ್ ಆದ ‘ಅನಿಮಲ್ ಪಾರ್ಕ್’ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದರ ಜೊತೆಗೆ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೂ ಸಂದೀಪ್ ಒಂದು ಬಿಗ್ ಪ್ರಾಜೆಕ್ಟ್‌ಗೆ ಕಮಿಟ್ ಆಗಿದ್ದಾರೆ. ಈ ಎಲ್ಲಾ ಸಿನಿಮಾಗಳ ಕಮಿಟ್‌ಮೆಂಟ್‌ಗಳು ಈಗಾಗಲೇ ಲಾಕ್ ಆಗಿರುವುದರಿಂದ, ಇವೆಲ್ಲವನ್ನೂ ಮುಗಿಸಲು ಅವರಿಗೆ ಕನಿಷ್ಠ 3 ರಿಂದ 4 ವರ್ಷಗಳು ಬೇಕಾಗಬಹುದು.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಮತ್ತು ಸಂದೀಪ್ ರೆಡ್ಡಿ ವಂಗಾ ಒಂದಾದರೆ ಬಾಕ್ಸ್ ಆಫೀಸ್ ಧೂಳೀಪಟವಾಗುವುದು ಗ್ಯಾರಂಟಿ. ಆದರೆ, ಸಂದೀಪ್ ಅವರ ಬಿಡುವಿಲ್ಲದ ಶೆಡ್ಯೂಲ್ ಹಾಗೂ ಸಲ್ಮಾನ್ ಖಾನ್ ಅವರ ಇತರೆ ಸಿನಿಮಾಗಳ ದಿನಾಂಕಗಳ ಕಾರಣದಿಂದಾಗಿ ಈ ಕ್ರೇಜಿ ಕಾಂಬಿನೇಷನ್ ಸದ್ಯದ ಮಟ್ಟಿಗಂತೂ ಕೇವಲ ಪೇಪರ್ ಮೇಲಿನ ಸುದ್ದಿಯಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಆಫೀಷಿಯಲ್ ಅನೌನ್ಸ್‌ಮೆಂಟ್ ಬರುವವರೆಗೂ ಅಭಿಮಾನಿಗಳು ಕಾಯಲೇಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಲಿಸುತ್ತಿರುವ ರೈಲಿನಿಂದ ಪ್ಯಾಕ್ ಮಾಡಿದ ಆಹಾರ ಪೊಟ್ಟಣಗಳನ್ನು ಎಸೆದ ರೈಲ್ವೆ ಸಿಬ್ಬಂದಿ – Kannada News

ನವದೆಹಲಿ, ಜೂನ್ 11: ಚಲಿಸುತ್ತಿರುವ ರೈಲಿನಿಂದ ರೈಲ್ವೆ ಸಿಬ್ಬಂದಿ ಪ್ಯಾಕ್ ಮಾಡಿದ ಆಹಾರ(Food) ಪೊಟ್ಟಣಗಳನ್ನು ಎಸೆದಿರುವ ವಿಡಿಯೋ ವೈರಲ್ ಆಗಿದೆ. ರೈಲಿನಲ್ಲಿ ಮಾರಾಟಕ್ಕೆ ಇಡಲಾಗಿದ್ದ ಆಹಾರ ಹಳಸಿತ್ತು ಅದರಿಂದ ದುರ್ವಾಸನೆ ಬರುತ್ತಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಆಹಾರದ ಗುಣಮಟ್ಟ ಕಳಪೆಯಾಗಿದ್ದ ಕಾರಣ ಅನೇಕರು ಊಟ ಖರೀದಿಸಲು ನಿರಾಕರಿಸಿದ್ದದ್ದರಿಂದ, ತಯಾರಿಸಿದ ಆಹಾರ ಹಾಗೆಯೇ ಉಳಿದಿತ್ತು.

ಎಕ್ಸ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ರೈಲು ಅತಿ ವೇಗದಲ್ಲಿ ಚಲಿಸುತ್ತಿರುವುದು ಕಾಣಿಸುತ್ತದೆ. ಆದರೆ, ಅದರ ಬಾಗಿಲ ಬಳಿ ನಿಂತಿರುವ ಪ್ಯಾಂಟ್ರಿ ಕಾರ್‌ನ ಸಿಬ್ಬಂದಿ, ದೊಡ್ಡ ದೊಡ್ಡ ತಟ್ಟೆಗಳಲ್ಲಿದ್ದ ನೂರಾರು ಜನರ ಹೊಟ್ಟೆ ತುಂಬಿಸಬಹುದಾಗಿದ್ದ ಉಳಿದ ಆಹಾರವನ್ನು ಯಾವುದೇ ಹಿಂಜರಿಕೆಯಿಲ್ಲದೆ ಹೊರಗೆ ಎಸೆಯುತ್ತಿದ್ದಾರೆ.

ಅನ್ನ, ಸಾರು ಹಳಿಗಳ ಮೇಲೆಲ್ಲಾ ಸಿಡಿದು ಬೀಳುವ ಈ ದೃಶ್ಯವನ್ನು ಕಂಡ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೇಶದಲ್ಲಿ ಹಸಿವು ಮತ್ತು ಬಡತನವನ್ನು ಹೋಗಲಾಡಿಸಲು ರೈಲ್ವೆ ಇಲಾಖೆ ಹೊಸ ವಿಲೇವಾರಿ ಕಾರ್ಯಾಚರಣೆ ಆರಂಭಿಸಿದಂತಿದೆ” ಎಂದು ಕೆಲವರು ವ್ಯವಸ್ಥೆಯ ವಿರುದ್ಧ ವ್ಯಂಗ್ಯವಾಗಿ ಹೇಳಿದ್ದಾರೆ. ಅರವಿಂದ್ ಶರ್ಮಾ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದಿ: World Food Safety Day 2026: ಉತ್ತಮ ಆರೋಗ್ಯಕ್ಕಾಗಿ ಸೇವಿಸಿ ಶುದ್ಧ, ಸುರಕ್ಷಿತ ಆಹಾರ

ಸಾಮಾನ್ಯವಾಗಿ ರೈಲು ಪ್ರಯಾಣಿಕರಿಗೆ ರೈಲು ಮತ್ತು ನಿಲ್ದಾಣಗಳನ್ನು ಸ್ವಚ್ಛವಾಗಿಡಿ, ಕಸವನ್ನು ಕಸದ ಬುಟ್ಟಿಗೇ ಹಾಕಿ ಎಂದು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತದೆ. ಆದರೆ, ಸ್ವತಃ ನಿಯಮ ಪಾಲಿಸಬೇಕಾದ ರೈಲ್ವೆ ನೌಕರರೇ ಈ ರೀತಿ ವರ್ತಿಸಿದರೆ ಸಾಮಾನ್ಯ ಜನರಿಗೆ ಯಾವ ಸಂದೇಶ ಹೋಗುತ್ತದೆ? ಎಂಬುದು ಸಾರ್ವಜನಿಕರ ನೇರ ಪ್ರಶ್ನೆಯಾಗಿದೆ.

ವಿಡಿಯೋ

ನಾವು ಕಸದ ಬುಟ್ಟಿ ಹುಡುಕಿ ಕಸ ಹಾಕುತ್ತೇವೆ. ಆದರೆ ಇವರು ಇಡೀ ಪ್ಯಾಂಟ್ರಿಯ ಕಸವನ್ನು ಹಳಿಗಳ ಮೇಲೆ ಸುರಿಯುತ್ತಿದ್ದಾರೆ. ಇವರನ್ನು ನೋಡಿ ಸಾಮಾನ್ಯ ಪ್ರಯಾಣಿಕರೂ ಕಸ ಹೊರಗೆ ಎಸೆಯಲು ಪ್ರೇರೇಪಿತರಾಗುವುದಿಲ್ಲವೇ? ಎಂದು ಪ್ರಯಾಣಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಹಳಿಗಳ ಮೇಲೆ ಆಹಾರವನ್ನು ಎಸೆಯುವುದು ಕೇವಲ ಸ್ವಚ್ಛತೆಯ ಸಮಸ್ಯೆಯಲ್ಲ, ಇದು ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ತರುವ ಕೃತ್ಯ. ಆಹಾರದ ವಾಸನೆಗೆ ಆಕರ್ಷಿತವಾಗಿ ಹಸುಗಳು, ನಾಯಿಗಳು ಮತ್ತು ಇತರ ಪ್ರಾಣಿಗಳು ಹಳಿಗಳ ಬಳಿ ಬರುತ್ತವೆ. ವೇಗವಾಗಿ ಬರುವ ರೈಲುಗಳಿಗೆ ಸಿಲುಕಿ ಅವು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ತ್ಯಾಜ್ಯವನ್ನು ನಿಗದಿತ ನಿಲ್ದಾಣಗಳಲ್ಲಿ ಸೂಕ್ತವಾಗಿ ವಿಲೇವಾರಿ ಮಾಡುವ ಬದಲು, ಈ ರೀತಿ ಕಾಡು-ಮೇಡುಗಳ ಮಧ್ಯೆ ಎಸೆಯುವುದರಿಂದ ಪರಿಸರವೂ ಸಂಪೂರ್ಣವಾಗಿ ಕಲುಷಿತಗೊಳ್ಳುತ್ತದೆ ಎಂಬ ಕಳಕಳಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ವಿಡಿಯೋ ಗಮನಕ್ಕೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿ ನಿಯಮ ಉಲ್ಲಂಘಿಸಿದ ನಿರ್ದಿಷ್ಟ ಅಡುಗೆ ಸಿಬ್ಬಂದಿಯನ್ನು (Catering Staff) ಗುರುತಿಸಬೇಕು, ರೈಲ್ವೆ ಆಸ್ತಿ ಮತ್ತು ಪರಿಸರವನ್ನು ಕಲುಷಿತಗೊಳಿಸಿದ್ದಕ್ಕಾಗಿ ಇಲಾಖೆಯು ಸಂಬಂಧಪಟ್ಟ ಕಂಟ್ರ್ಯಾಕ್ಟರ್ ಹಾಗೂ ಸಿಬ್ಬಂದಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಘಟನೆಯನ್ನು ಒಂದು ಪಾಠವಾಗಿ ತೆಗೆದುಕೊಂಡಿರುವ ರೈಲ್ವೆ ಇಲಾಖೆ, ತನ್ನ ಎಲ್ಲಾ ವಲಯಗಳ ಪ್ಯಾಂಟ್ರಿ ಉದ್ಯೋಗಿಗಳಲ್ಲಿ ಆಹಾರದ ಅಪವ್ಯಯ ತಡೆಗಟ್ಟುವಿಕೆ ಮತ್ತು ಪ್ರಾಣಿಗಳ ಸುರಕ್ಷತೆಯ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕು. ನೌಕರರೇ ಪ್ರಯಾಣಿಕರಿಗೆ ಮಾದರಿಯಾಗಬೇಕೆಂಬ ಸಂದೇಶವನ್ನು ರವಾನಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಮಗೆ ಸಹಾಯ ಬೇಕಿದ್ದರೆ ಕೇಳಿ; ಬಾಲಿವುಡ್​​ ನಟನಿಗೆ ನೇರ ಆಫರ್ ಕೊಟ್ಟಿದ್ದ ದಾವೂದ್ – Kannada News

ಬಾಲಿವುಡ್ ಚಿತ್ರರಂಗ ಹಾಗೂ ಭೂಗತ ಲೋಕದ ಲಿಂಕ್ ಬಗ್ಗೆ ಆಗಾಗ ಒಂದಿಲ್ಲೊಂದು ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಈ ಹಿಂದೆ ಹಿರಿಯ ನಟ ದಿವಂಗತ ರಿಷಿ ಕಪೂರ್ ಕೂಡ ತಾವು ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದ ವಿಷಯವನ್ನು ಬಹಿರಂಗಪಡಿಸಿದ್ದರು. ತಮ್ಮ ಆತ್ಮಕಥೆ ‘ಖುಲ್ಲಂ ಖುಲ್ಲಾ’ ಪುಸ್ತಕದಲ್ಲಿ ದುಬೈನಲ್ಲಿ ತಾವು ದಾವೂದ್‌ನನ್ನು ಎರಡು ಬಾರಿ ಮುಖಾಮುಖಿಯಾಗಿದ್ದ ಸಂಗತಿಯನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದರು. 1993 ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೂ ಮುನ್ನ ಈ ಭೇಟಿಗಳು ನಡೆದಿದ್ದರಿಂದ, ತಾವು ಇದನ್ನು ಮುಚ್ಚಿಡುವ ಪ್ರಯತ್ನ ಮಾಡಲಿಲ್ಲ ಎಂದು ರಿಷಿ ಕಪೂರ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಆ ಸಮಯದಲ್ಲಿ ದಾವೂದ್‌ನನ್ನು ದೇಶದ ಶತ್ರು ಎಂದು ಯಾರೂ ಬಿಂಬಿಸಿರಲಿಲ್ಲ, ಹಾಗಾಗಿ ಆತನ ಆಹ್ವಾನವನ್ನು ಒಪ್ಪಿಕೊಳ್ಳುವುದರಲ್ಲಿ ತಮಗೆ ಯಾವುದೇ ತಪ್ಪು ಕಾಣಿಸಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಭೇಟಿ ನಡೆದಿದ್ದು 1988ರಲ್ಲಿ. ರಿಷಿ ಕಪೂರ್ ತಮ್ಮ ಸ್ನೇಹಿತ ಬಿಟ್ಟು ಆನಂದ್ ಅವರೊಂದಿಗೆ ಆಶಾ ಭೋಸ್ಲೆ ಮತ್ತು ಆರ್. ಡಿ. ಬರ್ಮನ್ ಅವರ ಸಂಗೀತ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಿದ್ದರು. ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಅಪರಿಚಿತ ವ್ಯಕ್ತಿಯೊಬ್ಬರು ಬಂದು ರಿಷಿ ಕಪೂರ್ ಕೈಗೆ ಫೋನ್ ನೀಡಿದ್ದರು. ‘ದಾವೂದ್ ಸಾಹೇಬರು ನಿಮ್ಮ ಜೊತೆ ಮಾತನಾಡುತ್ತಾರೆ’ ಎಂದು ಆ ವ್ಯಕ್ತಿ ಹೇಳಿದ್ದನು. ಫೋನ್‌ನಲ್ಲಿ ಮಾತನಾಡಿದ ದಾವೂದ್, ರಿಷಿ ಕಪೂರ್ ಅವರನ್ನು ಖುದ್ದಾಗಿ ಚಹಾ ಕೂಟಕ್ಕೆ ಆಹ್ವಾನಿಸಿದ್ದನು. ಗ್ಯಾಂಗ್‌ಸ್ಟರ್‌ನಿಂದ ಬಂದ ಈ ದಿಢೀರ್ ಆಹ್ವಾನ ಕಂಡು ನಟನಿಗೆ ಆಶ್ಚರ್ಯವಾದರೂ, ಕೊನೆಗೆ ಭೇಟಿಯಾಗಲು ಒಪ್ಪಿಕೊಂಡಿದ್ದರು.

ಆ ಮೊದಲ ಭೇಟಿಯ ದಿನದ ನೆನಪನ್ನು ಹಂಚಿಕೊಂಡಿದ್ದ ರಿಷಿ ಕಪೂರ್, ತಮಗೆ ದಾವೂದ್ ಇದ್ದ ಜಾಗದ ದಾರಿ ತಿಳಿಯಬಾರದು ಎಂಬ ಕಾರಣಕ್ಕೆ ಒಂದು ಹೊಳೆಯುವ ರೋಲ್ಸ್ ರಾಯ್ಸ್ ಕಾರಿನಲ್ಲಿ ಕೂರಿಸಿಕೊಂಡು ಸುತ್ತಿ ಬಳಸಿ ಕರೆದುಕೊಂಡು ಹೋಗಲಾಗಿತ್ತು ಎಂದು ಬರೆದಿದ್ದಾರೆ. ಅಲ್ಲಿ ದಾವೂದ್ ಇಬ್ರಾಹಿಂ ಇವರನ್ನು ನಗುತ್ತಾ ಬರಮಾಡಿಕೊಂಡಿದ್ದನು. ಅವರೆಲ್ಲರೂ ಒಟ್ಟಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸಮಯ ಕಳೆದಿದ್ದರು. ಅಲ್ಲಿ ಅವರಿಗೆ ಚಹಾ ಮತ್ತು ಬಿಸ್ಕತ್‌ಗಳನ್ನು ನೀಡಲಾಗಿತ್ತು. ದಾವೂದ್ ಸ್ವತಃ ಮದ್ಯಪಾನ ಮಾಡುವುದಿಲ್ಲ ಮತ್ತು ಬೇರೆಯವರಿಗೂ ಅಲ್ಲಿ ಮದ್ಯವನ್ನು ನೀಡುವುದಿಲ್ಲ ಎಂದು ರಿಷಿ ಕಪೂರ್ ನೆನಪಿಸಿಕೊಂಡಿದ್ದಾರೆ. ಮಾತುಕತೆಯ ನಡುವೆ ದಾವೂದ್ ಅತ್ಯಂತ ಆತ್ಮೀಯವಾಗಿ ನಡೆದುಕೊಂಡು, ‘ನಿಮಗೆ ಏನೇ ಸಹಾಯ ಬೇಕಿದ್ದರೂ, ಹಣಕಾಸಿನ ನೆರವು ಬೇಕಿದ್ದರೂ ಯಾವುದೇ ಮುಜುಗರವಿಲ್ಲದೆ ನನ್ನನ್ನು ಕೇಳಿ’ ಎಂದು ಆಫರ್ ಕೊಟ್ಟಿದ್ದನು. ಆ ವಾತಾವರಣ ಹೆದರಿಸುವಂತಿರದೆ, ಮರ್ಯಾದೆ ಕೊಡುವಂತಿತ್ತು ಎಂದು ನಟ ಹೇಳಿದ್ದಾರೆ.

ಇದಾದ ನಂತರ 1989 ರಲ್ಲಿ ಇವರಿಬ್ಬರ ಎರಡನೇ ಭೇಟಿ ಅನಿರೀಕ್ಷಿತವಾಗಿ ನಡೆದಿತ್ತು. ರಿಷಿ ಕಪೂರ್ ತಮ್ಮ ಪತ್ನಿ ನೀತು ಕಪೂರ್ ಅವರೊಂದಿಗೆ ದುಬೈನ ಶೂ ಅಂಗಡಿಯೊಂದರಲ್ಲಿ ಶಾಪಿಂಗ್ ಮಾಡುತ್ತಿದ್ದಾಗ, ದಾವೂದ್ ತನ್ನ 8 ರಿಂದ 10 ಮಂದಿ ಬಾಡಿಗಾರ್ಡ್‌ಗಳ ಜೊತೆ ಅದೇ ಅಂಗಡಿಗೆ ಬಂದಿದ್ದನು. ನಟನನ್ನು ಗುರುತಿಸಿದ ದಾವೂದ್, ತಾನೇ ಮುಂದೆ ಬಂದು ಪ್ರೀತಿಯಿಂದ ಮಾತನಾಡಿಸಿದ್ದನು. ಅಷ್ಟೇ ಅಲ್ಲದೆ, ಆ ಅಂಗಡಿಯಲ್ಲಿ ರಿಷಿ ಕಪೂರ್ ದಂಪತಿ ಏನನ್ನು ಖರೀದಿಸಲು ಬಯಸುತ್ತಾರೋ, ಅದನ್ನೆಲ್ಲಾ ತಾನೇ ಕೊಡಿಸುವುದಾಗಿ ಹೇಳಿದ್ದನು. ಆದರೆ ರಿಷಿ ಕಪೂರ್ ನಯವಾಗಿಯೇ ಆ ಆಫರ್ ಅನ್ನು ತಿರಸ್ಕರಿಸಿದ್ದರು. ಅದೇ ಸಮಯದಲ್ಲಿ ದಾವೂದ್, ತನಗೆ ಭಾರತದಲ್ಲಿ ನ್ಯಾಯ ಸಿಗುವುದಿಲ್ಲ ಎಂದಿದ್ದಲ್ಲದೆ, ತನಗೆ ಹಲವು ರಾಜಕಾರಣಿಗಳ ಬೆಂಬಲವಿದೆ ಎಂದು ಹೇಳಿಕೊಂಡಿದ್ದನು. ಆದರೆ ರಿಷಿ ಕಪೂರ್, ‘ನನ್ನನ್ನು ಈ ರಾಜಕೀಯದ ವಿಷಯಗಳಿಂದ ದೂರವಿಡು ಗೆಳೆಯಾ, ನಾನು ಕೇವಲ ಒಬ್ಬ ನಟ’ ಎಂದು ಹೇಳಿ ಅಲ್ಲಿಂದ ಹೊರಟಿದ್ದರು.

ಇದನ್ನೂ ಓದಿ: ಆಲಿಯಾ, ದೀಪಿಕಾ, ಕತ್ರಿನಾ​ ಅಲ್ಲ, ರಣಬೀರ್​ ಕಪೂರ್ ಮದುವೆಯನ್ನು​ ಬೇರೆಯವರ ಜತೆ ನಿಶ್ಚಯಿಸಿದ್ದ ರಿಷಿ ಕಪೂರ್​

ಡಿ-ಕಂಪನಿ ಎಂಬ ಕ್ರಿಮಿನಲ್ ನೆಟ್‌ವರ್ಕ್ ಹುಟ್ಟುಹಾಕಿರುವ ದಾವೂದ್ ಇಬ್ರಾಹಿಂ, ಪ್ರಸ್ತುತ ಭಾರತಕ್ಕೆ ಬೇಕಾಗಿರುವ ಅತ್ಯಂತ ಅಪಾಯಕಾರಿ ತಲೆಮರೆಸಿಕೊಂಡಿರುವ ಅಪರಾಧಿಯಾಗಿದ್ದಾನೆ. ವಿಶ್ವಸಂಸ್ಥೆ (UN) ಕೂಡ ಇವನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. 250 ಕ್ಕೂ ಹೆಚ್ಚು ಜನರ ಪ್ರಾಣ ಬಲಿಪಡೆದ ಮತ್ತು ನೂರಾರು ಜನರನ್ನು ಗಾಯಗೊಳಿಸಿದ 1993 ರ ಮುಂಬೈ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಇದೇ ದಾವೂದ್ ಆಗಿದ್ದಾನೆ. ಇದರ ಜೊತೆಗೆ ಸಂಘಟಿತ ಅಪರಾಧಗಳು, ಹಣ ವಸೂಲಿ, ಕಳ್ಳಸಾಗಣೆ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಹತ್ತಾರು ಕೃತ್ಯಗಳಲ್ಲಿ ಈ ಭೂಗತ ದೊರೆ ಭಾಗಿಯಾಗಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಿಚಾ ಘೋಷ್ ಸಿಡಿಲಬ್ಬರ: ಸ್ಟಂಪ್ ಔಟ್​ನಿಂದ ಕೈತಪ್ಪಿದ ಗೆಲುವು!

172 ರನ್​​ಗಳ ಕಠಿಣ ಗುರಿ… ಟೀಮ್ ಇಂಡಿಯಾ ಮೊದಲ 10 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 64 ರನ್​ಗಳು. ಪರಿಣಾಮ ಭಾರತ ತಂಡಕ್ಕೆ ಗೆಲ್ಲಲು 60 ಎಸೆತಗಳಲ್ಲಿ 108 ರನ್​ಗಳ ಅವಶ್ಯಕತೆಯಿತ್ತು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್​ಗಳಾದ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ ಹಾಗೂ ಹರ್ಮನ್​ಪ್ರೀತ್ ಕೌರ್ ಪೆವಿಲಿಯನ್ ಸೇರಿದ್ದರು. ಹೀಗಾಗಿಯೇ ಇಂಗ್ಲೆಂಡ್​ ಈ ಅಭ್ಯಾಸ ಪಂದ್ಯದಲ್ಲಿ ಸುಲಭವಾಗಿ ಗೆಲ್ಲಲಿದೆ ಎಂದು ಎಲ್ಲರೂ ಷರಾ ಬರೆದಿದ್ದರು.

ಆದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅಕ್ಷರಶಃ ಅಬ್ಬರಿಸಿದರು. ಇಂಗ್ಲೆಂಡ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್​ಗಳ ಸುರಿಮಳೆಯಾಯಿತು.

ಈ ಸಿಡಿಲಬ್ಬರದೊಂದಿಗೆ ಟೀಮ್ ಇಂಡಿಯಾ 19 ಓವರ್ ಮುಕ್ತಾಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 155 ರನ್​ ಕಲೆಹಾಕಿತು. ಅದರಂತೆ ಅಂತಿಮ ಓವರ್​ನಲ್ಲಿ 17 ರನ್​ ಬೇಕಿದ್ದವು. ಲಿನ್ಸೆ ಸ್ಮಿತ್ ಎಸೆದ 20ನೇ ಓವರ್​ನ ಮೊದಲ ಎಸೆತ ಎದುರಿಸಿದ ಶ್ರೀ ಚರಣಿ ಸಿಂಗಲ್ ತೆಗೆದರು.

ಸ್ಟ್ರೈಕ್​ಗೆ ಬಂದ ರಿಚಾ ಘೋಷ್ 2ನೇ ಎಸೆತದಲ್ಲಿ ಫೋರ್ ಬಾರಿಸಿದರು. ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ ಕೇವಲ 6 ರನ್​ ಮಾತ್ರ ಬೇಕಿತ್ತು. ಈ ಹಂತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಲು ಮುನ್ನುಗ್ಗಿ ಬಂದ ರಿಚಾ ಘೋಷ್ ಸ್ಟಂಪ್ ಔಟ್ ಆದರು.

ಅಲ್ಲಿಗೆ 36 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 68 ರನ್ ಬಾರಿಸಿದ ರಿಚಾ ಘೋಷ್ ಇನಿಂಗ್ಸ್ ಅಂತ್ಯವಾಯಿತು. ಇದಾಗ್ಯೂ ಕೊನೆಯ 2 ಎಸೆತಗಳಲ್ಲಿ ಟೀಮ್ ಇಂಡಿಯಾ 6 ರನ್​ಗಳಿಸಿದ್ದರೆ ಈ ಪಂದ್ಯದಲ್ಲಿ ಜಯ ಸಾಧಿಸಬಹುದಿತ್ತು. ಆದರೆ ಲಿನ್ಸೆ ಸ್ಮಿತ್ ಎಸೆದ ಕೊನೆಯ ಓವರ್​ನ 5ನೇ ಎಸೆತದಲ್ಲಿ ರೇಣುಕಾ ಸಿಂಗ್ ಕ್ಯಾಚ್ ನೀಡಿದರು.

ಈ ಮೂಲಕ ಟೀಮ್ ಇಂಡಿಯಾ 19.5 ಓವರ್​ಗಳಲ್ಲಿ 166 ರನ್​ಗಳಿಸಿ ಆಲೌಟ್ ಆಗಿ 5 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ. ಇಲ್ಲಿ ಇದು ವಿರೋಚಿತ ಸೋಲು ಎನ್ನಲು ಮುಖ್ಯ ಕಾರಣ ರಿಚಾ ಘೋಷ್ ಅವರ ಏಕಾಂಗಿ ಹೋರಾಟ. ಅದರಲ್ಲೂ ಮೊದಲ 10 ಓವರ್​ಗಳಲ್ಲಿ ಕೇವಲ 64 ರನ್​ಗಳಿಸಿ, ಆ ಬಳಿಕ 59 ಎಸೆತಗಳಲ್ಲಿ 102 ರನ್​ ಚಚ್ಚಿರುವುದು ಕೆಳ ಕ್ರಮಾಂಕದ ಬ್ಯಾಟರ್​ಗಳ ದಿಟ್ಟ ಹೋರಾಟ.

ಅಭ್ಯಾಸ ಪಂದ್ಯದಲ್ಲೇ ಇಂತಹದೊಂದು ಹೋರಾಟ ಮೂಡಿಬಂದಿರುವುದು ಟೀಮ್ ಇಂಡಿಯಾಗೆ ಶುಭ ಸೂಚನೆ. ಹೀಗಾಗಿ ಈ ಬಾರಿ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ಮಹಿಳಾ ತಂಡದಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.

 

 

 

Source link

IPL ‘ತಿಂಗಳ’ ಬದಲಾವಣೆಗೆ ಭರ್ಜರಿ ಪ್ಲ್ಯಾನ್

Source link

ಲಾಲ್‌ಬಾಗ್‌ನಲ್ಲಿ ಸಜ್ಜಾಯ್ತು ನೂತನ ಬೋನ್ಸಾಯ್ ಪಾರ್ಕ್: ತೋಟಗಾರಿಕೆಗೆ ಸಚಿವರೇ ಇಲ್ಲದೆ ಫಲಪುಷ್ಪ ಪ್ರದರ್ಶನ ಸಿದ್ಧತೆ ವಿಳಂಬ! – Kannada News

ಲಾಲ್‌ಬಾಗ್ ಬೋನ್ಸಾಯ್ ಪಾರ್ಕ್Image Credit source: tv9

ಬೆಂಗಳೂರು, ಜೂನ್ 11: ಬೆಂಗಳೂರಿನ (Bengaluru) ಹಸಿರು ಹೃದಯ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಲಾಲ್‌ಬಾಗ್ (Lalbagh) ಸಸ್ಯಕಾಶಿಯಲ್ಲಿ ವೀಕ್ಷಕರಿಗಾಗಿ ಮತ್ತೊಂದು ವಿಶೇಷ ಆಕರ್ಷಣೆ ಸಜ್ಜಾಗಿದೆ. ಪರಿಸರ ಪ್ರಿಯರು ಹಾಗೂ ಸಾರ್ವಜನಿಕರ ದೀರ್ಘಕಾಲದ ನಿರೀಕ್ಷೆಯಾಗಿದ್ದ ಅತ್ಯಾಧುನಿಕ ‘ಬೋನ್ಸಾಯ್ ಪಾರ್ಕ್ (Bonsai Park)’ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದ್ದು, ಪ್ರವಾಸಿಗರನ್ನು ಸೆಳೆಯಲು ಸಿದ್ಧಗೊಂಡಿದೆ. ಆದರೆ, ಮತ್ತೊಂದೆಡೆ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್ 15) ಅಂಗವಾಗಿ ಜಾಗತಿಕ ಗಮನ ಸೆಳೆಯುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ (Flower Show) ಸಿದ್ಧತೆಗಳಿಗೆ ಈ ಬಾರಿ ಆರಂಭದಲ್ಲೇ ಭಾರಿ ಹಿನ್ನಡೆಯಾಗಿದೆ. ತೋಟಗಾರಿಕೆ ಇಲಾಖೆಗೆ ಇನ್ನೂ ಸಚಿವರ ನೇಮಕವಾಗದ ಕಾರಣ ಪ್ರದರ್ಶನದ ಪ್ರಮುಖ ಆಕರ್ಷಣೆಯಾದ ‘ವಿಶೇಷ ಥೀಮ್’ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.

ಮುಖ್ಯಾಂಶಗಳು

  • ಸಾರ್ವಜನಿಕರ ವೀಕ್ಷಣೆಗೆ ಸಜ್ಜಾದ ಬೋನ್ಸಾಯ್ ಪಾರ್ಕ್.
  • ಸಚಿವರ ನೇಮಕವಾಗದೆ ಇಲಾಖೆ ಸಭೆಗಳು ಸ್ಥಗಿತ.
  • ಫಲಪುಷ್ಪ ಪ್ರದರ್ಶನದ ವೈಭವಕ್ಕೆ ಹಿನ್ನಡೆ ಭೀತಿ.

ಪ್ರಕೃತಿ ಪ್ರಿಯರ ಸ್ವರ್ಗವಾಗಲಿರುವ ನೂತನ ಬೋನ್ಸಾಯ್ ಪಾರ್ಕ್

ಬೋನ್ಸಾಯ್ ಪಾರ್ಕ್

ಲಾಲ್‌ಬಾಗ್‌ಗೆ ಆಗಮಿಸುವ ವಾಯುವಿಹಾರಿಗಳು ಹಾಗೂ ದೇಶ-ವಿದೇಶಗಳ ಪ್ರವಾಸಿಗರಿಗೆ ಹೊಸ ಅನುಭವ ನೀಡಲು ತೋಟಗಾರಿಕೆ ಇಲಾಖೆ ಸರ್ವಸನ್ನದ್ಧವಾಗಿದೆ. ಇಲ್ಲಿ ನಿರ್ಮಾಣಗೊಂಡಿರುವ ನೂತನ ಬೋನ್ಸಾಯ್ ಪಾರ್ಕ್‌ನಲ್ಲಿ ಅತ್ಯಂತ ಅಪರೂಪದ ಹಾಗೂ ವಿವಿಧ ತಳಿಗಳ ಕುಬ್ಜ ಗಿಡಗಳನ್ನು (Bonsai Plants) ಅತ್ಯಂತ ಆಕರ್ಷಕವಾಗಿ ಪೋಷಿಸಿ ಪ್ರದರ್ಶನಕ್ಕಿಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಲಾಲ್‌ಬಾಗ್ ಅಪರ ನಿರ್ದೇಶಕರಾದ ಡಾ. ಎಂ. ಜಗದೀಶ್, ‘ವಿಶಿಷ್ಟ ತಳಿಗಳನ್ನೊಳಗೊಂಡ ಈ ಪಾರ್ಕ್ ಪ್ರಕೃತಿ ಪ್ರಿಯರು ಮತ್ತು ಸಸ್ಯ ಸಂಶೋಧಕರ ಜ್ಞಾನಾರ್ಜನೆಗೆ ಹಾಗೂ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಕೇಂದ್ರ ಬಿಂದುವಾಗಲಿದೆ’ ಎಂದು ತಿಳಿಸಿದ್ದಾರೆ.

ಸಚಿವರೇ ಇಲ್ಲ! ಆತಂಕದಲ್ಲಿ ಇಲಾಖೆ ಅಧಿಕಾರಿಗಳು

ಒಂದೆಡೆ ಹೊಸ ಪಾರ್ಕ್ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಆಗಸ್ಟ್‌ನಲ್ಲಿ ನಡೆಯಬೇಕಿರುವ ಪ್ರತಿಷ್ಠಿತ ಫಲಪುಷ್ಪ ಪ್ರದರ್ಶನದ ಯೋಜನೆಗೆ ತಾಂತ್ರಿಕ ಅಡ್ಡಿ ಎದುರಾಗಿದೆ. ಸಾಮಾನ್ಯವಾಗಿ ಪ್ರದರ್ಶನಕ್ಕೆ ಮೂರ್ನಾಲ್ಕು ತಿಂಗಳುಗಳ ಮುಂಚೆಯೇ ಅಧಿಕಾರಿಗಳು, ತಜ್ಞರು ಮತ್ತು ಸಚಿವರ ಮಟ್ಟದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಒಂದು ನಿರ್ದಿಷ್ಟ ಥೀಮ್ ಅನ್ನು (Theme) ಅಂತಿಮಗೊಳಿಸಲಾಗುತ್ತದೆ. ಆ ಥೀಮ್ ಆಧಾರದ ಮೇಲೆಯೇ ಹೂವುಗಳ ಮಾದರಿ ವಿನ್ಯಾಸ, ಬೃಹತ್ ಕಲಾಕೃತಿಗಳ ನಿರ್ಮಾಣ, ವಿಶೇಷ ಸಸ್ಯಗಳ ಆಮದು ಹಾಗೂ ಅಲಂಕಾರಿಕ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಪ್ರಸ್ತುತ ಹೊಸ ಸಂಪುಟದಲ್ಲಿ ತೋಟಗಾರಿಕೆ ಇಲಾಖೆಗೆ ಇನ್ನೂ ಸಚಿವರನ್ನು ನೇಮಕ ಮಾಡದ ಕಾರಣ, ಹೈ ಪ್ರೊಫೈಲ್ ಸಭೆಗಳೇ ನಡೆದಿಲ್ಲ. ಪರಿಣಾಮವಾಗಿ, ಈ ವರ್ಷದ ಪ್ರದರ್ಶನ ಯಾವುದರ ಆಧಾರದ ಮೇಲೆ ನಡೆಯಬೇಕು ಎಂಬ ಮೂಲ ಯೋಜನೆಯೇ ಇನ್ನೂ ನಿರ್ಧಾರವಾಗಿಲ್ಲ.

ಫಲಪುಷ್ಪ ಪ್ರದರ್ಶನದ ವೈಭವಕ್ಕೆ ಧಕ್ಕೆ ಸಾಧ್ಯತೆ?

ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರನ್ನು ಆಕರ್ಷಿಸುವ ಈ ಪ್ರದರ್ಶನದಲ್ಲಿ ಥೀಮ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಥೀಮ್ ಘೋಷಣೆಯಾಗದ ಕಾರಣ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಂಗಾಲಾಗಿದ್ದಾರೆ. ಡಾ. ಎಂ. ಜಗದೀಶ್ ಅವರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದು, ಥೀಮ್ ಘೋಷಣೆ ಮತ್ತಷ್ಟು ವಿಳಂಬವಾದರೆ ಹೂವುಗಳನ್ನು ಬೆಳೆಸಲು ಮತ್ತು ಕಲಾಕೃತಿಗಳನ್ನು ವಿನ್ಯಾಸಗೊಳಿಸಲು ಕನಿಷ್ಠ ಅವಧಿಯೂ ಸಿಗುವುದಿಲ್ಲ. ಇದು ನೇರವಾಗಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನದ ಭವ್ಯತೆ ಹಾಗೂ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಇಲಾಖೆಗೆ ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

Source link

ಬಾಲಯ್ಯ ಜನ್ಮದಿನಕ್ಕೆ ‘NBK 111’ ಧಮಾಕಾ: ‘ನ್ಯೂ ಏಜ್’ ಲುಕ್​ನಲ್ಲಿ ಬಂದ ನಂದಮೂರಿ – Kannada News

ನಟ ನಂದಮೂರಿ ಬಾಲಕೃಷ್ಣ ಅವರ 65ನೇ ಜನ್ಮದಿನದ (ಜೂನ್ 10) ಅಂಗವಾಗಿ, ಅವರ ನಟನೆಯ 111ನೇ ಚಿತ್ರದ (NBK111) ಮೊದಲ ಝಲಕ್ ಬಿಡುಗಡೆಯಾಗಿದೆ. ‘ಎಂಟ್ರಿ ಆಫ್ ಆನ್ ಎರಾ’ ಹೆಸರಿನ ಈ ಗ್ಲಿಂಪ್ಸ್ ವೀಡಿಯೋ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಬಾಲಯ್ಯ ಎನರ್ಜಿ ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.

‘ನೋ ಮೋರ್ ವಿಂಟೇಜ್, ಓನ್ಲಿ ನ್ಯೂ ಏಜ್’ ಹೆಸರಿನ ಟ್ಯಾಗ್‌ಲೈನ್‌ನೊಂದಿಗೆ ಈ ವೀಡಿಯೋ ಹೊರಬಂದಿದೆ. ಬಾಲಕೃಷ್ಣ ಅವರ ಎಂದಿನ ಸಾಂಪ್ರದಾಯಿಕ ಮಾಸ್ ಶೈಲಿಗಿಂತ ಇದು ಸಂಪೂರ್ಣ ಭಿನ್ನವಾಗಿದೆ. ಹೈ-ಬಜೆಟ್ ಮೇಕಿಂಗ್ ಹಾಗೂ ಹೊಚ್ಚಹೊಸ ಮಾಡರ್ನ್ ಲುಕ್‌ನಲ್ಲಿ ಬಾಲಯ್ಯ ಅಬ್ಬರಿಸಿದ್ದಾರೆ.
ಈ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡುತ್ತಿದ್ದಾರೆ ಎಂಬುದು ವಿಶೇಷ. ಹೀಗಾಗಿ ದೃಶ್ಯಗಳು ಹೊಸ ಶೈಲಿಯಲ್ಲಿ ಮೂಡಿ ಬಂದಿವೆ. ಇವರ ಅದ್ಭುತ ವಿಶುವಲ್ಸ್‌ಗೆ ಎಸ್‌ ತಮನ್ ತಮ್ಮ ಬಿಜಿಎಂ ಮೂಲಕ ಜೀವ ತುಂಬಿದ್ದಾರೆ. ಇದು ಹಳೆಯ ಕಾಲ ಹಾಗೂ ಇಂದಿನ ಕಾಲಘಟ್ಟದಲ್ಲಿ ನಡೆಯುವ ಐತಿಹಾಸಿಕ ಆಕ್ಷನ್ ಡ್ರಾಮಾ ಸಿನಿಮಾವಾಗಿದೆ.

ಬಾಲಯ್ಯ  ಸಿನಿಮಾ ಪೋಸ್ಟರ್

ಭಾರಿ ತಾರಾಗಣ, ಬಿಗ್ ಬಜೆಟ್:

ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಾಯಕಿಯಾಗಿದ್ದಾರೆ. ಮನೋಜ್ ಮಂಚು ಮತ್ತು ಸಮುದ್ರಖನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಸತೀಶ್ ಕಿಲ್ಲಾರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಸಿನಿಮಾದಲ್ಲಿ ಭಾರಿ ವಿಎಫ್‌ಎಕ್ಸ್ ಇರಲಿದೆ.

ಇದನ್ನೂ ಓದಿ: ‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್

ಹೈದರಾಬಾದ್‌ನಲ್ಲಿ ಸದ್ಯ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ಡೇಟ್​ ಅನ್ನು ಚಿತ್ರತಂಡ ಘೋಷಿಸಿಲ್ಲ. ಆದರೆ, ಸಿನಿಮಾ ನವೆಂಬರ್ 20 ರಂದು ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ‘ಅಖಂಡ 2’ ಬಳಿಕ ಮತ್ತೆ ಅಬ್ಬರಿಸಲು ಬಾಲಯ್ಯ ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:36 am, Thu, 11 June 26

Source link

Birthday Celebrations: ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕು ಗೊತ್ತಾ? – Kannada News

ಹುಟ್ಟುಹಬ್ಬದ ಸಾರ್ಥಕ ಆಚರಣೆImage Credit source: Pinterest

ನಮ್ಮ ಸಂಸ್ಕೃತಿಯಲ್ಲಿ ವಿವಾಹ ಅಥವಾ ಜನ್ಮದಿನದಂತಹ ಆಚರಣೆಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನ್ಮದಿನಾಚರಣೆಯ ವಿಧಾನಗಳು ಆಧುನೀಕರಣಗೊಂಡಿವೆ. ಕೇಕ್ ಕತ್ತರಿಸುವುದು, ಮೇಣದಬತ್ತಿ ಆರಿಸುವುದು, ಬಲೂನ್‌ಗಳನ್ನು ಸಿಡಿಸುವುದು ಮುಂತಾದ ಪದ್ಧತಿಗಳು ನಮ್ಮ ಮೂಲ ಸಂಪ್ರದಾಯಗಳಿಂದ ಭಿನ್ನವಾಗಿವೆ. ಇಂತಹ ಆಚರಣೆಗಳು ಶುಭಕರವೇ ಅಥವಾ ಅಶುಭಕರವೇ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಉತ್ತರ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಜನ್ಮದಿನವು ಆತ್ಮಾವಲೋಕನ ಮಾಡಿಕೊಳ್ಳುವ ದಿನ. ನಾನು ಹುಟ್ಟಿದ ಮೇಲೆ ನನ್ನ ಜೀವನದಲ್ಲಿ ಏನು ಸಾಧಿಸಿದ್ದೇನೆ? ಮುಂದಿನ ವರ್ಷದೊಳಗೆ ನಾನು ಯಾವ ಶುಭ ಕಾರ್ಯಗಳನ್ನು ಮಾಡಬೇಕು? ನನ್ನ ಕುಟುಂಬವನ್ನು ಹೇಗೆ ರಕ್ಷಿಸಬೇಕು? ಸಮಾಜಕ್ಕೆ ನನ್ನ ಕೊಡುಗೆ ಏನು? ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಮಯ ಇದು. ಕ್ಯಾಲೆಂಡರ್ ದಿನಾಂಕದ ಪ್ರಕಾರ ಜನ್ಮದಿನ ಆಚರಿಸುವ ಪದ್ಧತಿ ಹಿಂದೂ ಸನಾತನ ಸಂಸ್ಕೃತಿಯಲ್ಲಿಲ್ಲ. ಬದಲಿಗೆ, ತಿಥಿಯ ಆಧಾರದ ಮೇಲೆ ಜನ್ಮದಿನವನ್ನು ಆಚರಿಸುವುದು ಮಹಾ ಶುಭಕರವೆಂದು ನಂಬಲಾಗಿದೆ.

ಜನ್ಮದಿನವನ್ನು ಸಾರ್ಥಕಗೊಳಿಸುವ ಮಾರ್ಗಗಳು ಅನೇಕ. ಅಶಕ್ತರಿಗೆ ಸಹಾಯ ಮಾಡುವುದು ಅತ್ಯಂತ ಪುಣ್ಯದ ಕೆಲಸ. ಅನ್ನದಾನ, ಪುಸ್ತಕ ದಾನ, ವಸ್ತ್ರದಾನ, ಔಷಧ ದಾನ ಇವುಗಳೆಲ್ಲವೂ ಅತ್ಯುತ್ತಮ ದಾನಗಳು. ಅನಾಥಾಲಯಗಳಲ್ಲಿ ಒಂದು ಹೊತ್ತಿನ ಊಟ ನೀಡುವುದು, ವೃದ್ಧಾಶ್ರಮಗಳಲ್ಲಿ ವೃದ್ಧರಿಗೆ ಔಷಧಿ, ಊರುಗೋಲು, ಛತ್ರಿ ಅಥವಾ ಬೆಡ್‌ಶೀಟ್ ನೀಡುವುದು ಜನ್ಮದಿನಕ್ಕೆ ವಿಶೇಷ ಅರ್ಥ ನೀಡುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ದೀರ್ಘಾಯುಷ್ಯಕ್ಕಾಗಿ ಮಾರ್ಕಂಡೇಯ ಋಷಿಯನ್ನು ಸ್ಮರಿಸಬೇಕು. ದೀಪ ಹಚ್ಚಬೇಕೇ ಹೊರತು ಅದನ್ನು ಆರಿಸಬಾರದು. ಜನ್ಮದಿನಾಂಕದ ದಿನ ಸುಂದರಕಾಂಡ ಪಾರಾಯಣ ಮಾಡುವುದು ಅತೀವ ಶಕ್ತಿಯನ್ನು ತರುತ್ತದೆ. ಕೆಲವು ಆಚರಣೆಗಳನ್ನು ತಪ್ಪಿಸುವುದು ಕೂಡ ಮುಖ್ಯ. ಜನ್ಮದಿನದಂದು ಉಗುರು ಕತ್ತರಿಸಬಾರದು, ಯಾವುದೇ ಪ್ರಾಣಿಗೆ ಹಾನಿ ಮಾಡಬಾರದು ಮತ್ತು ಯಾವುದೇ ಮನಸ್ಸಿಗೆ ನೋವುಂಟು ಮಾಡಬಾರದು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಈ ನಿಯಮಗಳನ್ನು ಪಾಲಿಸುವುದು ಜನ್ಮದಿನಕ್ಕೆ ಸಾರ್ಥಕತೆಯನ್ನು ನೀಡುತ್ತದೆ.

ಬೆಳಗ್ಗೆ ಸ್ನಾನ ಮಾಡಿ, ಹಿರಿಯರ ಆಶೀರ್ವಾದ ಪಡೆದು, ಅವರ ಪಾದಗಳಿಗೆ ನಮಸ್ಕರಿಸಿ, ಇಷ್ಟ ದೇವತಾ ಮತ್ತು ಕುಲ ದೇವತಾ ದರ್ಶನ ಮಾಡುವುದು, ಒಳ್ಳೆಯ ಮಾತುಗಳನ್ನು ಆಡುವುದು, ಚಿಕ್ಕ ಮಕ್ಕಳಿಗೆ ಆರೈಕೆ ಮಾಡುವುದು ಇವೆಲ್ಲವೂ ಜನ್ಮದಿನದ ಶುಭ ಆಚರಣೆಗಳು. ಪ್ರಾರ್ಥನೆಯು ವಿಧಿಯನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಜನ್ಮದಿನವನ್ನು ಸರಿಯಾದ ರೀತಿಯಲ್ಲಿ ಪ್ರಾರ್ಥನಾ ದಿನವಾಗಿ ಆಚರಿಸಿದರೆ ನಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಬರುತ್ತವೆ. ನಾವು ಮಾಡಿದ ದಾನ ಪ್ರಯೋಜನಕಾರಿಯಾಗಿರಬೇಕು, ಅಪ್ರಾಪ್ತ ದಾನವಾಗಬಾರದು. ಹೀಗೆ ಸರಿಯಾದ ಮಾರ್ಗದಲ್ಲಿ ಹುಟ್ಟುಹಬ್ಬವನ್ನು ಆಚರಿಸುವುದರಿಂದ ನಮಗೆ ಮತ್ತು ಸಮಾಜಕ್ಕೆ ಒಳಿತಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಮುನ್ನೆಲೆಗೆ ಬಂದ ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ: ಪರ, ವಿರೋಧ ಚರ್ಚೆ ಶುರು – Kannada News

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆImage Credit source: Tv9 Kannada

ತುಮಕೂರು, ಜೂನ್​​ 11: ಹೇಮಾವತಿ ನೀರನ್ನು ಲಿಂಕಿಂಗ್ ಕೆನಾಲ್ ಮೂಲಕ ಕುಣಿಗಲ್​​ಗೆ ಹರಿಸುವ ನಿರ್ಧಾರ ತುಮಕೂರು ಜಿಲ್ಲೆಯಲ್ಲಿ ವಿವಾದ ಸೃಷ್ಟಿಸಿತ್ತು. ಕಾಮಗಾರಿ ಸ್ಥಳದಲ್ಲಿ ನಡೆದ ಭಾರಿ ಹೈಡ್ರಾಮಾ ಬಳಿಕ ಯೋಜನೆಗೆ ಬ್ರೇಕ್ ಬಿದಿತ್ತು. ಆದರೆ ಹತ್ತು ತಿಂಗಳ ಬಳಿಕ ಈ ಯೋಜನೆಗೆ ಸರ್ಕಾರ ಮರು ಜೀವ ನೀಡಲು ಮುಂದಾಗಿರೋದು ಜಿಲ್ಲೆಯ ಶಾಸಕರ ನಡುವೆಯೇ ಪರ-ವಿರೋಧಕ್ಕೆ ನಾಂದಿ ಹಾಡಿದೆ. ಹೀಗಾಗಿ ಮತ್ತೆ ವಿರೋಧ ಕಿಡಿ ಹೊತ್ತಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

ಮುಖ್ಯಾಂಶಗಳು

  • ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಮರುಜೀವ
  • ಕಾಮಗಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರದ ಸಿದ್ಧತೆ
  • ಜಿಲ್ಲೆಯ ಶಾಸಕರ ನಡುವೆಯೇ ಪರ-ವಿರೋಧ ಚರ್ಚೆ ಆರಂಭ

ಕಳೆದ 10 ತಿಂಗಳಿಂದ ರೈತರ ವಿರೋಧದ ಹಿನ್ನೆಲೆ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಮುಂದುವರಿಸಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಮತ್ತೊಂದೆಡೆ ಕುಣಿಗಲ್ ಶಾಸಕ ಡಾ.ರಂಗನಾಥ್, ನಮಗೆ ಬರಬೇಕಾದ ಹೇಮಾವತಿ ನೀರಿನ ಪಾಲನ್ನು ಪಡೆಯಲೇಬೇಕು. ಕುಣಿಗಲ್ ಭಾಗಕ್ಕೆ ನ್ಯಾಯ ಸಿಗಬೇಕಿದ್ದು, ಯಾವುದೇ ಕಾರಣಕ್ಕೂ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲು ಮಾರ್ಗದ ಬಗ್ಗೆ ಸಚಿವ ಸೋಮಣ್ಣ ಬಿಗ್ ಅಪ್​ಡೇಟ್

ಆದರೆ ಯೋಜನೆಗೆ ವಿರೋಧದ ಧ್ವನಿಯೂ ಅಷ್ಟೇ ಬಲವಾಗಿ ಕೇಳಿಬರುತ್ತಿದೆ. ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್, ಯಾವುದೇ ಕಾರಣಕ್ಕೂ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಗುಬ್ಬಿಯಿಂದ ಕುಣಿಗಲ್ ಮಾರ್ಗವಾಗಿ ಮಾಗಡಿವರೆಗೆ ಹೇಮಾವತಿ ನೀರನ್ನು ಸಾಗಿಸುವ ಉದ್ದೇಶದ ಈ ಯೋಜನೆ ಆರಂಭದಿಂದಲೇ ವಿವಾದಕ್ಕೆ ಕಾರಣವಾಗಿತ್ತು. ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಇದೀಗ ಸರ್ಕಾರ ಮತ್ತೆ ಕಾಮಗಾರಿ ಆರಂಭಿಸಲು ಮುಂದಾಗಿರುವುದರಿಂದ, ಜಿಲ್ಲೆಯಲ್ಲಿ ಹೇಮಾವತಿ ಹೋರಾಟದ ಕಾವು ಮತ್ತೊಮ್ಮೆ ಜೋರಾಗುವ ಲಕ್ಷಣಗಳು ಕಾಣಿಸುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:23 am, Thu, 11 June 26

Source link

Exit mobile version