IND vs PAK: ಕೊಲಂಬೊದಲ್ಲಿ ಕಕ್ಕಾಬಿಕ್ಕಿಯಾದ ಪಾಕಿಸ್ತಾನ; ಭಾರತಕ್ಕೆ 61 ರನ್ ಜಯ – Kannada News | T20 World Cup 2026: India Crushes Pakistan in Colombo; Ishan Kishan Shines with 175 Runs

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026) ಭಾರತ ಹಾಗೂ ಪಾಕಿಸ್ತಾನ (India vs Pakistan) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 175 ರನ್ ಕಲೆಹಾಕಿ, ಪಾಕಿಸ್ತಾನಕ್ಕೆ 176 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಭಾರತದ ಕರಾರುವಕ್ಕಾದ ದಾಳಿಗೆ ಕಕ್ಕಾಬಿಕ್ಕಿಯಾಗಿ ಪೂರ್ಣ 20 ಓವರ್​ಗಳನ್ನು ಆಡಲಾಗದೆ 114 ರನ್​ಗಳಿಗೆ ಆಲೌಟ್ ಆಯಿತು.

Source link

ನಮಾಜ್ ವೇಳೆ ಶಾಂತಿ ಇರಬೇಕಾದ ಮಸೀದಿಯೊಳಗೇ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ – Kannada News | Assault On Boy In Mosque at Mysuru, captured on CCTV

ಮೈಸೂರು, (ಫೆಬ್ರವರಿ 15): ನಮಾಜ್ ಸಮಯದಲ್ಲಿ ಮಸೀದಿಯಲ್ಲಿ (Mosque) ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಮೈಸೂರಿನ (Mysuru) ಎನ್ ಆರ್ ಮೊಹಲ್ಲಾದ ಮಸೀದಿಯಲ್ಲಿ ನಡೆದಿದೆ. ಫೆಬ್ರವರಿ 13 ಶುಕ್ರವಾರ ನಮಾಜ್ ವೇಳೆ ಮೊದಲು ಮಾತಿನ ಜಗಳ ನಡೆದಿದ್ದು, ಬಳಿಕ ಬಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಇದಕ್ಕಿಂತಲೂ ಕ್ರೂರವಾಗಿ ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋದಲ್ಲಿ ಬಾಲಕನನ್ನು ಅಟ್ಟಾಡಿಸಿ ಹಲ್ಲೆ ಮಾಡುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತಿವೆ.

ಘಟನೆ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಹಲ್ಲೆ ಮಾಡಿದವರು ಅವೇಜ್, ಪರವೇಜ್, ಜಹೀದ್ ಹಾಗೂ ಉಮ್ಮರ್ ಅನ್ನೋ ಆರೋಪ ಕೇಳಿ ಬಂದಿದೆ. ಈ ತಂಡದಲ್ಲಿ ರೌಡಿಶೀಟರ್ ಒಬ್ಬ ಇದ್ದಾನೆ ಅನ್ನೋದು ಬಾಲಕನ ತಂದೆಯ ಗಂಭೀರ ಆರೋಪ. ಈ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರು ಎಸ್ಕೇಪ್ ಆಗಿದ್ದಾರೆ. ನಶೆಯಲ್ಲಿ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪದ ಮೇಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಂಗೋಲಿ ಹಾಕ್ತಿದ್ದ ಮಹಿಳೆಯರ ಸರ ಎಗರಿಸಿದ ಖದೀಮರು: ಕದ್ದ ಬೈಕ್​​ನಲ್ಲೇ ಬಂದು ಕೃತ್ಯ

ಪವಿತ್ರ ಸ್ಥಳದಲ್ಲಿ ಇಂಥ ಕೃತ್ಯ ನಡೆದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ ಅಷ್ಟೇ ಅಲ್ಲ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲಿ ಆತಂಕ ಮೂಡಿಸಿದೆ. ಬಾಲಕನ ಮೇಲೆ ಹಲ್ಲೆ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.

ಮಸೀದಿಯೊಳಗೆ ಬಾಲಕನ ಮೇಲೆ ಹಲ್ಲೆ ನಡೆದಿರುವ ಪ್ರಕರಣ ಮೈಸೂರಿನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಆಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಣೇಶ್ ಸಿನಿಮಾ ಜರ್ನಿಗೆ 20 ವರ್ಷ, ಸಿನಿಮಾ ಮೂಲಕ ವಿಶಿಷ್ಟ ಗೌರವ – Kannada News | Golden star Ganesh new movie Sukagamana Bayasuva starts shooting

‘ಗೋಲ್ಡನ್ ಸ್ಟಾರ್’ ಎನಿಸಿಕೊಂಡಿರುವ ಗಣೇಶ್ (Ganesh), ಕನ್ನಡ ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಹೊಡಿ-ಬಡಿ ಹೀರೋಗಳ ನಡುವೆ ಅಪ್ಪಟ ಕೌಟುಂಬಿಕ ನಾಯಕನಾಗಿ ಮಿಂಚುತ್ತಿರುವ ಗಣೇಶ್ ಅವರಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಅದರಲ್ಲೂ ಗಣೇಶ್​​ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ದೊಡ್ಡದಾಗಿದೆ. ಟಿವಿ ಆಂಕರ್ ಆಗಿದ್ದ ಗಣೇಶ್ ಅವರು ಅವರು ಬೆಳ್ಳಿತೆರೆಯಲ್ಲಿ ಮಿಂಚಲು ಆರಂಭಿಸಿ ಈಗ ಯಶಸ್ವಿ 20 ವರ್ಷಗಳು ಸಂದಿವೆ. ಗಣೇಶ್ ಅವರ ಜರ್ನಿ ಅದ್ಭುತವಾದುದು, ಹಲವು ಏರಿಳಿತಗಳಿಂದ ಕೂಡಿದ್ದು ಮತ್ತು ಹಲವಾರು ಮಂದಿಗೆ ಸ್ಪೂರ್ತಿ ಆಗಬಹುದಾದಂಥಹ ಪಯಣ ಅವರದ್ದು. ಗಣೇಶ್ ಅವರ ಈ ಸಿನಿ ಜರ್ನಿಗೆ ಟ್ರಿಬ್ಯೂಟ್ (ವಿಶೇಷ ಗೌರವ) ಅನ್ನು ಸಿನಿಮಾ ಮೂಲಕ ನೀಡಲಾಗುತ್ತಿದೆ. ಆ ಸಿನಿಮಾ ‘ತಮ್ಮ ಸುಖಾಗಮನ ಬಯಸುವ’.

ಗಣೇಶ್ ಅವರು ‘ತಮ್ಮ ಸುಖಾಗಮನ ಬಯಸುವ’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾದ ಮುಹೂರ್ತವನ್ನು ಶಿವರಾತ್ರಿ ಪ್ರಯುಕ್ತ ಇಂದು (ಫೆಬ್ರವರಿ 15) ಮಾಡಲಾಯ್ತು. ಗಣೇಶ್ ಅವರ ಪತ್ನಿ ಶಿಲ್ಪಾ ಅವರು ಕ್ಲಾಪ್ ಮಾಡಿ ಸಿನಿಮಾಕ್ಕೆ ಚಾಲನೆ ನೀಡಿದ್ದು ವಿಶೇಷ. ಈ ಚಿತ್ರವನ್ನು ಪ್ರತಿಭಾವಂತ ನಿರ್ದೇಶಕ ದೀಪಕ್ ಗಂಗಾಧರ್ ನಿರ್ದೇಶಿಸುತ್ತಿದ್ದಾರೆ. ಗಣೇಶ್ ಅವರ ವೃತ್ತಿಜೀವನದ ಮೈಲಿಗಲ್ಲನ್ನು ಸಂಭ್ರಮಿಸುವ ಉದ್ದೇಶದಿಂದಲೇ ಈ ಚಿತ್ರವನ್ನು ಬಹಳ ಕಾಳಜಿಯಿಂದ ರೂಪಿಸಲಾಗಿದೆ ಎಂದಿದ್ದಾರೆ ನಿರ್ದೇಶಕ. ಚಿತ್ರದ ಶೀರ್ಷಿಕೆಯೇ ಬಹಳ ವಿಭಿನ್ನವಾಗಿದ್ದು, ಗಣೇಶ್ ಅವರ ಎಂದಿನ ಲವಲವಿಕೆಯ ಮತ್ತು ಎಮೋಷನಲ್ ಶೈಲಿಯ ಅಭಿನಯವನ್ನು ಈ ಚಿತ್ರದಲ್ಲಿ ನಿರೀಕ್ಷಿಸಬಹುದಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಗಣೇಶ್ ಮರ್ಡರ್​​ ಕೇಸ್​​ನಲ್ಲಿ ಬಜರಂಗದಳ ಕಾರ್ಯಕರ್ತ ಅರೆಸ್ಟ್​​

ನಟ ಗಣೇಶ್ ಮಾತನಾಡಿ, ‘ನನಗೆ ಗೊತ್ತಿರಲಿಲ್ಲ 20ವರ್ಷ ಆಯಿತು ಇಂಡಸ್ಟ್ರಿ ಗೆ ಬಂದು ಅಂತ, ನಾನು ಬೆಂಗಳೂರಿಗೆ ಬಂದಾಗ 19 ವರ್ಷ ವಯಸ್ಸು ಅಷ್ಟೆ, ನಟ ಆಗಬೇಕು ಅಂತ ಬಂದಿದ್ದೆ, 2006ರಲ್ಲಿ ‘ಮುಂಗಾರು ಮಳೆ’ ಸಿನಿಮಾ ಆಗಿದ್ದು, ಗೆಲುವನ್ನ ತಲೆ ಮೇಲೆ ಹೊತ್ತುಕೊಂಡು ಹೋಗಲ್ಲ, ಹಿಟ್, ಫ್ಲಾಪ್ ಎಲ್ಲಾ ಬ್ಯಾಲೆನ್ಸ್ ಮಾಡ್ತೀನಿ. ಈ ವರೆಗೆ ನಾನು 45 ಸಿನಿಮಾಗಳಲ್ಲಿ ನಟಿಸಿದ್ದೀನಿ, ಎಲ್ಲ ಸಿನಿಮಾಗಳನ್ನೂ ಸಹ ಇಷ್ಟಪಟ್ಟೇ ನಟಿಸಿದ್ದೀನಿ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ರಾಮೇನಹಳ್ಳಿ ಜಗನ್ನಾಥ್ ಸಿನಿಮಾ ಟೈಟಲ್ ಗಳನ್ನ ಚೆನ್ನಾಗಿ ಇಡುತ್ತಾರೆ. ಹ್ಯೂಮನ್ ಎಮೋಷನ್ಸ್​​ಗಳನ್ನು ಹೊಂದಿರುವ ಸಿನಿಮಾ ಇದಾಗಿದೆ. ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿದ್ದು, ನನ್ನ ಅರ್ಜುನ್ ಜನ್ಯ ಕಾಂಬಿನೇಶನ್ ನಲ್ಲಿ ಒಳ್ಳೆಯ ಹಾಡುಗಳು ಬಂದಿವೆ, ಈ ಸಿನಿಮಾನಲ್ಲೂ ಅದೇ ರಿಪೀಟ್ ಆಗುವ ವಿಶ್ವಾಸ ಇದೆ’ ಎಂದಿದ್ದಾರೆ ಗಣೇಶ್.

“ಗಣೇಶ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ‘ಮುಂಗಾರು ಮಳೆ’ಯಿಂದ ಆರಂಭವಾದ ಅವರ ಮೋಡಿ ಇಂದಿಗೂ ಮುಂದುವರಿದಿದೆ. ಅವರ 20 ವರ್ಷಗಳ ಈ ಸುದೀರ್ಘ ಜರ್ನಿಯನ್ನು ಸಂಭ್ರಮಿಸಲು ‘ತಮ್ಮ ಸುಖಾಗಮನ ಬಯಸುವ’ ಚಿತ್ರವು ಸೂಕ್ತ ವೇದಿಕೆಯಾಗಲಿದೆ. ಈ ಸಿನಿಮಾ ಗಣೇಶ್ ಅವರ ಅಭಿಮಾನಿಗಳಿಗೆ ಹಬ್ಬದಂತಿರಲಿದೆ, ಸಿನಿಮಾದ ಹೆಸರು ಆಹ್ವಾನ ನೀಡುವಂತಿರಬೇಕು ಎಂದು ಈ ಹೆಸರಿಟ್ಟಿದ್ದೇವೆ’ ಎಂದು ನಿರ್ದೇಶಕ ದೀಪಕ್ ಗಂಗಾಧರ್ ಹೇಳಿದ್ದಾರೆ. ಈ ಚಿತ್ರವನ್ನು ಖ್ಯಾತ ವಿತರಕ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಅವರ ‘ಕೆಆರ್‌ಜಿ ಸ್ಟುಡಿಯೋಸ್’ (KRG Studios) ಪ್ರಸ್ತುತಪಡಿಸುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್ ಸೋರಿಕೆ: ಬೆಂಕಿಯ ಫೋರ್ಸ್‌ಗೆ ಇಡೀ ಮನೆಯೇ ಛಿದ್ರ ಛಿದ್ರ

ಬೆಂಗಳೂರು, (ಫೆಬ್ರವರಿ 15): ಗ್ಯಾಸ್​ ಸಿಲಿಂಡರ್​ ಸೋರಿಕೆಯಾಗಿ ಸ್ಫೋಟವಾಗಿರುವ ಘಟನೆ ಬೆಂಗಳೂರಿನ ಯಲಹಂಕದ ಚೌಡೇಶ್ವರಿ ಲೇಔಟ್​​ನ ಮನೆಯೊಂದರಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆ ಗೋಡೆ ಛಿದ್ರವಾಗಿದ್ದು, ಘಟನೆಯಲ್ಲಿ ಬಾಗೇಪಲ್ಲಿ ಮೂಲದ ದಂಪತಿ ರಾಜು, ಕೃಷ್ಣಮ್ಮಗೆ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಈ ವಿಚಾರ ತಿಳಿದು ಸ್ಥಳಕ್ಕೆ ಯಲಹಂಕ ಠಾಣೆಯ ಪೊಲೀಸರ ಭೇಟಿ ನೀಡಿದ ಪರಿಶೀಲಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ – Kannada News | Raichur Fights Illegal Sand Mining: District Administration Alerts After MLA Complaint

ರಾಯಚೂರು, ಫೆಬ್ರವರಿ 15: ಗಡಿ ಜಿಲ್ಲೆ ರಾಯಚೂರಿನಲ್ಲಿ ಅಕ್ರಮ ಮರಳು ದಂಧೆಗೆ (Illegal Sand Mining) ಜನ ರೋಸಿ ಹೋಗಿದ್ದು, ಸರಣಿ ಅಕ್ರಮಗಳು ಬಿಚ್ಚಿಕೊಳ್ಳುತ್ತಿವೆ. ಈ ಬಗ್ಗೆ ಇತ್ತೀಚೆಗೆ ಖುದ್ದು ಶಾಸಕಿ ಕರೆಮ್ಮಾ ಜಿ ನಾಯಕ್ ಜಿಲ್ಲಾಧಿಕಾರಿ ಮತ್ತು ಎಸ್​​ಪಿಗೆ ದೂರು ನೀಡಿದ್ದರು. ಇದೇ ಕಾರಣಕ್ಕೆ ಇದೀಗ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಅಲರ್ಟ್ ಆಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೇ ಶಿಸ್ತುಕ್ರಮಕ್ಕೆ ಸಜ್ಜಾಗಿದೆ.

ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿ ಹರಿಯುತ್ತವೆ. ಎರಡು ನದಿಗಳ ಒಡಲನ್ನ ಬಗೆದು ಅಕ್ರಮ ಮರಳುಗಾರಿಕೆ ನಡೆಸೋದು ಜಿಲ್ಲೆಯಲ್ಲಿ ಮಾಮೂಲಾಗಿದೆ. ಅಕ್ರಮ ಮರಳು ದಂಧೆ ಮಿತಿಮೀರಿ ಹೋಗಿರುವ ಹಿನ್ನೆಲೆ ಸಾರ್ವಜನಿಕರು ಕೂಡ ಈ ಅಕ್ರಮದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ

ನದಿ ಒಡಲನ್ನ ಮನಸೋ ಇಚ್ಛೆ ಬಗೆದು ಮರಳುಗಾರಿಕೆ ನಡೆಸೋದರ ವಿರುದ್ಧ ಸರಣಿ ಆರೋಪಗಳು ಕೇಳಿಬರುತ್ತಲೇ ಇವೆ. ಇತ್ತೀಚೆಗೆ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್, ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ರು. ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಸಲ್ಲಿಸಿದ್ದರು. ಇದಾದ ಬಳಿಕವೂ ಅಕ್ರಮ ಮರಳು ದಂಧೆ ಸೈಲೆಂಟ್​​ ಆಗಿ ಚಾಲ್ತಿಯಲ್ಲಿದೆ. ಹೀಗಾಗಿ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಮುಂದಾಗಿದೆ.

60ಕ್ಕೂ ಹೆಚ್ಚು ಕೇಸ್​ ದಾಖಲು

ಸದ್ಯ ಜಿಲ್ಲೆಯಲ್ಲಿ 2026ರಲ್ಲಿ ಈವರೆಗೆ ಸುಮಾರು 60ಕ್ಕೂ ಹೆಚ್ಚು ಅಕ್ರಮ ಮರಳು ದಂಧೆ ಸಂಬಂಧ ದೇವದುರ್ಗ, ಮಾನ್ವಿ ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇಷ್ಟಿದ್ದರೂ ಭಯ ಇಲ್ಲದೇ ದಂಧೆಕೋರರು ಅಕ್ರಮ ಮರಳು ಸಾಗಿಸುತ್ತಿರೋ ಆರೋಪಗಳು ಕೇಳಿಬರ್ತಿರೋದ್ರಿಂದ ಈಗ ಇಡೀ ಅಕ್ರಮದ ವಿರುದ್ಧ ಹದ್ದಿನ ಕಣ್ಣಿಡಲು ಜಿಲ್ಲಾಡಳಿತ ಮುಂದಾಗಿದೆ.

ಈ ದಂಧೆ ಮಟ್ಟಹಾಕಲು ಕಮಿಟಿ ರಚಿಸಲಾಗಿದ್ದು, ಇದರಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರ್​ಟಿಓ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮರಳುಗಾರಿಕೆಗೆ ಕಾನೂನಿನ್ವಯ ಅನುಮತಿ ಕೊಡೋದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಆದರೆ ರಾಯಚೂರಿನಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ದಂಧೆ ನಡಯುತ್ತಿದ್ರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತ್ತಿರುವ ಗಂಭೀರ ಆರೋಪವಿದೆ.

ಅಧಿಕಾರಿಗಳ ವಿರುದ್ಧವೇ ಕ್ರಮ

ಎಲ್ಲಾ ಜವಾಬ್ದಾರಿಯನ್ನ ಪೊಲೀಸ್ ಇಲಾಖೆ ಹೆಗಲಿಗೆ ಹಾಕಿ ಕೈಕಟ್ಟಿ ಫಿಲ್ಡ್ ವರ್ಕ್ ಅಂತ ಸಾರ್ವಜನಿಕರಿಗೆ ಹೇಳುತ್ತಾ ಓಡಾಡ್ತಿದ್ದಾರಂತೆ. ಅಸಲಿಗೆ ಅಕ್ರಮ ಮರಳು ದಂಧೆಯನ್ನ ಗುರುತು ಮಾಡಬೇಕಿರುವ ಗಣಿ ಮತ್ತು ಭೂ ವಿಜ್ಣಾನ ಇಲಾಖೆ. ಆದರೆ ಈ ಕೆಲಸವನ್ನ ಪೊಲೀಸ್ ಇಲಾಖೆ ಮಾಡ್ತಿದೆ. ಈ ಬಗ್ಗೆಯೂ ಪ್ರಸ್ತಾಪಿಸಿರೋ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್, ಸಮನ್ವಯದಿಂದ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗತ್ತೆ. ಅಂಥ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ತಾರೆ ಅಂತ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್​ ಶಾಸಕಿ ಮನೆಗೆ ನುಗ್ಗಿ ಧಮ್ಕಿ

ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸಜ್ಜಾಗಿದ್ದು ಇದಕ್ಕೆ ಅಧಿಕಾರಿಗಳ ಹಂತದಲ್ಲಿ ಹೇಗೆ ಸ್ಪಂದನೆ ಸಿಗತ್ತೆ ಅನ್ನೋದು ಪ್ರಶ್ನೆ. ಏಕೆಂದರೆ ದಂಧೆಕೋರರಿಗೆ ಕೆಳ ಹಂತದ ಕೆಲ ಅಧಿಕಾರಿಗಳೇ ಸಾಥ್​ ಕೊಡ್ತಿರೋ ಆರೋಪಿಗಳು ಇರೋದ್ರಿಂದ ಇದನ್ನ ಜಿಲ್ಲಾಡಳಿತ ಹೇಗೆ ಎದುರಿಸತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs PAK: W,W,W,W.. ಪವರ್‌ಪ್ಲೇನಲ್ಲಿಯೇ ಪವರ್ ಕಳೆದುಕೊಂಡ ಪಾಕಿಸ್ತಾನ – Kannada News | India vs Pakistan T20 World Cup 2026: Pakistan Loses 4 Wickets in Powerplay

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026 ರ ಟಿ20 ವಿಶ್ವಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 175 ರನ್ ಕಲೆಹಾಕಿ, ಪಾಕಿಸ್ತಾನಕ್ಕೆ 176 ರನ್​ಗಳ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಪವರ್‌ಪ್ಲೇನಲ್ಲಿಯೇ ತನ್ನ ಪವರ್ ಕಳೆದುಕೊಂಡಿದೆ. ಭಾರತದ ಬೌಲರ್​ಗಳ ದಾಳಿಗೆ ನಲುಗಿರುವ ಪಾಕಿಸ್ತಾನ ಮೊದಲ 6 ಓವರ್​ಗಳಲ್ಲಿ ತನ್ನ 4 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 38 ರನ್ ಕಲೆಹಾಕಿದೆ.

Source link

IND vs PAK: ಚೊಚ್ಚಲ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಬಾರಿಸಿದ ಇಶಾನ್ ಕಿಶನ್ – Kannada News | Ishan Kishan’s T20 WC Heroics vs Pakistan: Smashes Records with 77 Runs Knock

ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕಿಶನ್, ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು.

ವಾಸ್ತವವಾಗಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನದ ವಿರುದ್ಧ ಇಶಾನ್ ಕಿಶನ್ ಇಂದು ಮೊದಲ ಪಂದ್ಯವನ್ನಾಡಿದರು. ಆಡಿದ ಮೊದಲ ಪಂದ್ಯದಲ್ಲೇ ಪಾಕ್ ಬೌಲರ್​ಗಳ ಬೆವರಿಳಿಸಿದ ಕಿಶನ್ ಸ್ಫೋಟಕ ಅರ್ಧಶತಕ ಬಾರಿಸಿದರು. ಮಾತ್ರವಲ್ಲದೆ ಪಾಕಿಸ್ತಾನ ವಿರುದ್ಧದ ಪವರ್‌ಪ್ಲೇನಲ್ಲಿ 42 ರನ್ ಬಾರಿಸುವ ಮೂಲಕ ಪಾಕಿಸ್ತಾನ ವಿರುದ್ಧದ ಟಿ20ಪಂದ್ಯದ ಪವರ್‌ಪ್ಲೇನಲ್ಲಿಯೇ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಈ ಟೂರ್ನಿಯಲ್ಲಿ ಎರಡನೇ ಅರ್ಧಶತಕ ಬಾರಿಸಿದ ಇಶಾನ್ ಕಿಶನ್, ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 192.50 ಸ್ಟ್ರೈಕ್ ರೇಟ್‌ನಲ್ಲಿ 77 ರನ್ ಕಲೆಹಾಕಿದರು. ಈ ಮೂಲಕ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್​ನಲ್ಲಿ ಅರ್ಧಶತಕ ಬಾರಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಕಿಶನ್​ಗೂ ಮೊದಲು ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಈ ಸಾಧನೆ ಮಾಡಿದ್ದರು.

ರಾಬಿನ್ ಉತ್ತಪ್ಪ 2007 ರ ಟಿ20 ವಿಶ್ವಕಪ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. ಆ ನಂತರ ಗೌತಮ್ ಗಂಭೀರ್ ಕೂಡ 2007 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಟಿ20 ಅರ್ಧಶತಕ ಸಿಡಿಸಿದ್ದರು. ಅದಾದ ಬಳಿಕ ವಿರಾಟ್ ಕೊಹ್ಲಿ 2012, 2016, 2021 ಮತ್ತು 2022 ರ ಟಿ20 ವಿಶ್ವಕಪ್‌ಗಳಲ್ಲಿ ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದ್ದರು. ಈಗ, ಇಶಾನ್ ಕಿಶನ್ ಈ ಸಾಧನೆ ಮಾಡಿದ್ದಾರೆ.

ಇದು ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇಶಾನ್ ಕಿಶನ್ ಗಳಿಸಿದ ಮೂರನೇ ವೇಗದ ಅರ್ಧಶತಕವಾಗಿದೆ. ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2012 ರಲ್ಲಿ ಭಾರತದ ವಿರುದ್ಧ ಅವರು 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಅದಾದ ನಂತರ, ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ಧ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರೆ, ಈಗ ಇಶಾನ್ ಕಿಶನ್ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಇಶಾನ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಜೇಯ 82 ರನ್ ಬಾರಿಸುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನಾ 79 ರನ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ, ವಿರಾಟ್ ಕೊಹ್ಲಿ ಅಜೇಯ 78 ರನ್​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಇದೀಗ ಇಶಾನ್ ಕಿಶನ್ 77 ರನ್‌ಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Published On – 9:28 pm, Sun, 15 February 26

Source link

‘ಬಿಗ್​​ಬಾಸ್ ಬಳಿಕ ಹೇಗಿದೆ ಜೀವನ?’ ಕಾರ್ತಿಕ್ ಮಹೇಶ್ ಮಾತು: ವಿಡಿಯೋ ನೋಡಿ – Kannada News | Karthik Mahesh talks about what changes happen after winning Bigg Boss

ಬಿಗ್​​ಬಾಸ್ ಕನ್ನಡಕ್ಕೆ (Bigg Boss Kannada) ಹೋಗಿ ಬಂದರೆ ಜೀವನ ಬದಲಾಗುತ್ತದೆ ಎಂಬ ನಂಬಿಕೆ ಹಲವರಿಗಿದೆ. ಅದರಂತೆ ಬಿಗ್​​ಬಾಸ್​​ನಿಂದಾಗಿ ಕೆಲವರ ಜೀವನ ಬದಲಾಗಿದ್ದೂ ಸಹ ಇದೆ. ಈ ಸೀಸನ್​​ನಲ್ಲಿ ವಿನ್ನರ್ ಆಗಿರುವ ಗಿಲ್ಲಿಯನ್ನೇ ನೋಡಿ, ಬಿಗ್​​ಬಾಸ್ ಬಳಿಕ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ ಗಿಲ್ಲಿ. ಈ ಹಿಂದಿನ ಸೀಸನ್​​​ನಲ್ಲಿ ಹನುಮಂತು ವಿನ್ನರ್ ಆಗಿದ್ದರು. ಅದಕ್ಕೂ ಹಿಂದಿನ ಅಂದರೆ 10ನೇ ಸೀಸನ್​​ನಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರು. ಬಿಗ್​​ಬಾಸ್ ಸೀಸನ್ 10 ಹಲವು ಕೋನಗಳಿಂದ ಅತ್ಯುತ್ತಮ ಬಿಗ್​​ಬಾಸ್ ಸೀಸನ್​​ಗಳಲ್ಲಿ ಒಂದಾಗಿತ್ತು. ಇದೀಗ ಕಾರ್ತಿಕ್ ಅವರು ‘ಅಲ್ಫಾ’ ಸಿನಿಮಾನಲ್ಲಿ ನಟಿಸಿದ್ದು, ಟಿವಿ9ಗೆ ನೀಡಿರುವ ವಿಶೇಷ ಸಂದರ್ಭದಲ್ಲಿ ಬಿಗ್​​ಬಾಸ್​​ ಇಂದಾಗಿ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ? – Kannada News | Once Rajpal Yadav use to feed 20 25 struggling actors in his house

ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜಪಾಲ್ ಯಾದವ್ (Rajpal Yadav) ಕೆಲವು ದಶಕಗಳಿಂದಲೂ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ರಾಜ್​ಪಾಲ್ ಅವರು ಸ್ಟಾರ್ ನಟರುಗಳಿಗಿಂತಲೂ ಬ್ಯುಸಿ ಆಗಿದ್ದ ಬೇಡಿಕೆ ಹೊಂದಿದ್ದ ಸಮಯ ಒಂದಿತ್ತು. ಆದರೆ, ಈಗ ಅವರು ಜೈಲಿನಲ್ಲಿದ್ದಾರೆ. ದಶಕದ ಹಿಂದೆ ಸಿನಿಮಾ ನಿರ್ಮಿಸಲು ಹೋಗಿ ಕೈ ಸುಟ್ಟುಕೊಂಡು ಮಾಡಿದ ಸಾಲಗಳಿಂದಾಗಿ ಈಗ ಅವರು ಜೈಲು ಸೇರಿದ್ದಾರೆ. 9 ಕೋಟಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ನ್ಯಾಯಾಲಯ ಹೇಳಿದೆ. ಅಲ್ಲಲ್ಲಿ ಕೆಲವರು ರಾಜ್​​ಪಾಲ್ ನೆರವಿಗೆ ಧಾವಿಸಿದ್ದಾರಾದರೂ ಅವರಿಂದ ನಿಜಕ್ಕೂ ನೆರವು ಪಡೆದ ಹಲವರು ಮೌನವಾಗಿಯೇ ಉಳಿದಿದ್ದಾರೆ ಎನ್ನಲಾಗುತ್ತಿದೆ.

ಹೌದು, ರಾಜ್​​ಪಾಲ್ ಯಾದವ್ ಹಾಸ್ಯ ನಟರಾದರೂ ಸಹ ವಿಶಾಲ ಹೃದಯವುಳ್ಳವರಾಗಿದ್ದರು, ಒಂದು ಕಾಲದಲ್ಲಿ ತಮ್ಮ ಮನೆಯಲ್ಲಿ ಸುಮಾರು 20-25 ಜನ ನಟರಿಗೆ ಪ್ರತಿದಿನ ಊಟ ಹಾಕುತ್ತಿದ್ದರು. ಅವರೇ ಕಷ್ಟದಲ್ಲಿದ್ದರೂ ಸಹ ಕೆಲಸಕ್ಕಾಗಿ ಹುಡುಕುತ್ತಿದ್ದ ಪ್ರತಿಭಾವಂತರಿಗೆ ಆಸರೆ ಆಗಿದ್ದರು. ಸಿನಿಮಾ ಮಾಡಲು ಬಂದು ಅವಕಾಶ ಸಿಗದೆ ಅಲೆದಾಡುತ್ತಿದ್ದ ಹಲವರು ರಾಜ್​ಪಾಲ್ ಯಾದವ್ ಮನೆಯಲ್ಲಿ ಉಚಿತವಾಗಿ ತಂಗಿ ಅಲ್ಲಿಯೇ ಉಚಿತವಾಗಿ ಊಟ ಮಾಡುತ್ತಿದ್ದರು. ಹಾಗೆ ರಾಜ್​ಪಾಲ್ ಮನೆಯಲ್ಲಿ ಊಟ ಮಾಡಿದ ಹಲವರು ಇಂದು ಸ್ಟಾರ್ ನಟರಾಗಿದ್ದಾರೆ.

ಹಳೆಯ ಸಂದರ್ಶನದಲ್ಲಿ ಮಾತನಾಡಿದ್ದ ರಾಜ್​ಪಾಲ್ ಯಾದವ್ ತಮ್ಮ , ‘ನಾನು ಮುಂಬೈಗೆ ಬಂದ ಹೊಸತರಲ್ಲಿ ಒಂದು ಸಣ್ಣ ಕೋಣೆಯಲ್ಲಿ ವಾಸವಾಗಿದ್ದೆ. ನನ್ನ ಜೊತೆಗೆ ನನ್ನ ಹಳ್ಳಿಯಿಂದ ಬಂದವರು ಹಾಗೂ ಎನ್‌ಎಸ್‌ಡಿ (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ಗೆಳೆಯರು ಸೇರಿದಂತೆ ಸುಮಾರು 20 ರಿಂದ 22 ಹುಡುಗರು ಇರುತ್ತಿದ್ದರು. ನಾವೆಲ್ಲರೂ ಸೇರಿ ಅಡುಗೆ ಮಾಡುತ್ತಿದ್ದೆವು. ಅಂದು ನನ್ನ ಬಳಿ ಹಣ ಇರಲಿ, ಇಲ್ಲದಿರಲಿ, ಬಂದವರೆಲ್ಲರಿಗೂ ಹೊಟ್ಟೆತುಂಬಾ ಊಟ ಸಿಗುವಂತೆ ನೋಡಿಕೊಳ್ಳುತ್ತಿದ್ದೆ, ಇಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನವಾಜುದ್ದೀನ್ ಸಿದ್ದಿಕಿ ಕೂಡ ಆಗಾಗ ನನ್ನ ಮನೆಗೆ ಬರುತ್ತಿದ್ದರು. ನಾವೆಲ್ಲರೂ ಸೇರಿ ಊಟ ಮಾಡುತ್ತಾ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅವರೆಲ್ಲರಿಗೂ ತಿನ್ನಲು ಅನ್ನ ನೀಡುವ ಶಕ್ತಿಯನ್ನು ದೇವರು ನನಗೆ ನೀಡಿದ್ದಕ್ಕೆ ನಾನು ಸದಾ ಚಿರಋಣಿ’ ಎಂದು ಭಾವುಕರಾಗಿ ನುಡಿದರು.

ಇದನ್ನೂ ಓದಿ:ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಅಸಲಿಗೆ ನಟ ನವಾಜುದ್ದೀನ್ ಸಿದ್ಧಿಕಿ ಸಹ ಕಪಿಲ್ ಶರ್ಮಾ ಶೋನಲ್ಲಿ ಈ ವಿಷಯ ಹೇಳಿಕೊಂಡಿದ್ದರು. ತಾವು ಮಾತ್ರವೇ ಅಲ್ಲದೆ ಇಂದು ಒಳ್ಳೆಯ ಸ್ಥಾನದಲ್ಲಿರುವ ಹಲವಾರು ಮಂದಿ ಅಂದು ರಾಜ್​​ಪಾಲ್ ಯಾದವ್ ಮನೆಯಲ್ಲಿ ಊಟ ಮಾಡಿದ್ದಾರೆ ಎಂದು ಅವರು ಹೇಳಿದ್ದರು. ಬಾಲಿವುಡ್​​ನಲ್ಲಿ ಅವಕಾಶ ಸಿಗದೆ ರಾಜ್​ಪಾಲ್ ಯಾದವ್ ಮುಂಬೈ ಬಿಟ್ಟು ಹೋಗುವ ಮನಸ್ಸು ಮಾಡಿ ರೈಲ್ವೆ ನಿಲ್ದಾಣಕ್ಕೆ ಹೋದಾಗ ಅವರೊಟ್ಟಿಗೆ ನವಾಜುದ್ದೀನ್ ಸಿದ್ಧಿಖಿ ಸಹ ಇದ್ದರಂತೆ. ಆದರೆ ರಾಜ್​ಪಾಲ್ ಯಾದವ್ ಮುಂಬೈ ಬಿಡುತ್ತಿರುವ ವಿಷಯ ತಿಳಿದು ನಿರ್ದೇಶಕ ಅನುರಾಗ್ ಕಶ್ಯಪ್ ರೈಲ್ವೆ ನಿಲ್ದಾಣಕ್ಕೆ ಹೋಗಿ ಅವರನ್ನು ತಡೆದಿದ್ದಲ್ಲದೆ, ತಾವು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಿನಿಮಾನಲ್ಲಿ ಪಾತ್ರವನ್ನೂ ಸಹ ಕೊಡಿಸಿದ್ದರು. ಅದೇ ಸಿನಿಮಾನಲ್ಲಿ ನವಾಜುದ್ದೀನ್​​ಗೆ ಹೋಟೆಲ್ ವೇಟರ್ ಪಾತ್ರ ಸಹ ಕೊಡಿಸಿದ್ದರು.

ರಾಜಪಾಲ್ ಯಾದವ್ ಅವರು 1999ರಲ್ಲಿ ‘ದಿಲ್ ಕ್ಯಾ ಕರೇ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ‘ಹಂಗಾಮಾ’, ‘ವಕ್ತ್’, ‘ಭೂಲ್ ಭುಲೈಯಾ’ ಮತ್ತು ‘ಚುಪ್ ಚುಪ್ ಕೆ’ ನಂತಹ ಚಿತ್ರಗಳ ಮೂಲಕ ಭಾರತದ ಶ್ರೇಷ್ಠ ಹಾಸ್ಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಇತ್ತೀಚೆಗೆ ಬಿಡುಗಡೆಯಾದ ‘ಭೂಲ್ ಭುಲೈಯಾ 3’ ಮತ್ತು ‘ಧುರಂಧರ್’ ಚಿತ್ರಗಳಲ್ಲಿಯೂ ಅವರ ನಟನೆಗೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:38 pm, Sun, 15 February 26

Source link

ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಈಶಾ ಫೌಂಡೇಷನ್ ಬಳಿ ಬೆಂಕಿ – Kannada News | Chikkaballapur: Fire broke out near Isha Foundation amid Mahashivratri celebrations

ಈಶಾ ಫೌಂಡೇಷನ್, ಬೆಟ್ಟದಲ್ಲಿ ಬೆಂಕಿImage Credit source: tv9 kannada

ಚಿಕ್ಕಬಳ್ಳಾಪುರ, ಫೆಬ್ರವರಿ 15: ಕರ್ನಾಟದಲ್ಲಿ ಮಹಾಶಿವರಾತ್ರಿಯ (Maha Shivratri) ಸಡಗರ ಸಂಭ್ರಮ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಇತ್ತ ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಫೌಂಡೇಷನ್​​ನಲ್ಲೂ ಸಡಗರ ಜೋರಾಗಿದೆ. ಲಕ್ಷಾಂತರ ಭಕ್ತರು 112 ಅಡಿಯ​​ ಆದಿಯೋಗಿ ದರ್ಶನಕ್ಕೆ ಮುಗಿಬಿದ್ದರು. ಇದೇ ವೇಳೆ ನಾಗಮಂಟಪದ ಎದುರುಗಡೆ ಇರುವ ಅರಣ್ಯ ಪ್ರದೇಶದಲ್ಲಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.

ಮಹಾಶಿವರಾತ್ರಿ ಸಂಭ್ರಮ ಮಧ್ಯೆ ಇಶಾ ಫೌಂಡೇಷನ್ ಬಳಿಯ ನಾಗಮಂಟಪದ ಎದುರುಗಡೆ ಇರುವ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಮೊದಲೇ ಜನ ಹಾಗೂ ವಾಹನ ಸಂದಣಿಯಿಂದ ತುಂಬಿ ತುಳುಕುತ್ತಿರುವ ಈಶಾ ಫೌಂಡೇಷನ್​​ನಲ್ಲಿ ಸ್ಥಳಕ್ಕೆ ಬರುವಂತೆ ಅರಣ್ಯ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

ಈಶಾ ಫೌಂಡೇಷನ್​ಗೆ ಹೋಗಲು ಜನರು ಪರದಾಟ

ಈಶಾ ಫೌಂಡೇಷನ್​ಗೆ ಹೋಗಲು ಜನರು ಪರದಾಡಿದ ಘಟನೆ ನಡೆದಿದೆ. ನೂರಕ್ಕೂ ಹೆಚ್ಚು ಬಸ್​ಗಳನ್ನು ಬಿಟ್ಟರೂ ಚಿಕ್ಕಬಳ್ಳಾಪುರ ksrtc ಬಸ್​ ನಿಲ್ದಾಣದಲ್ಲಿ ಬಸ್​ಗಳು ಸಿಗದೆ ಪರದಾಡಿದ್ದಾರೆ. ಬಸ್ ಹತ್ತಲು‌ ಕಿಲೋ ಮೀಟರ್​​ಗಟ್ಟಲೇ ಕ್ಯೂ ಇತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ ಹಿನ್ನಲೆ ಎಷ್ಟು ಬಸ್​​ಗಳನ್ನು ಬಿಟ್ಟರೂ ಸಾಲದಂತಾಗಿದೆ.

ಎಲ್ಲೆಡೆ ಟ್ರಾಫಿಕ್ ಜಾಮ್

ಈಶಾದ ಆದಿಯೋಗಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಈಶಾ ಫೌಂಡೇಷನ್ ಸುತ್ತಮುತ್ತ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಈಶಾ ಫೌಂಡೇಷನ್ ಕಡೆಗೆ ಬಾರದಂತೆ ಸೂಚನೆ ನೀಡಿದ್ದರೂ, ಜನರು ಲೆಕ್ಕಿಸದೆ ಅಲ್ಲಿಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವರು ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಬಲವಂತವಾಗಿ ಒಳನುಗ್ಗಲು ಯತ್ನಿಸಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ

ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿರುವ ವಾಹನ ಪಾರ್ಕಿಂಗ್​​ ಪುಲ್ ಆಗಿದೆ. ಪೊಲೀಸರೊಂದಿಗೆ ಕೆಲವರು ವಾಗ್ವಾದಕ್ಕೂ ಇಳಿದಿದ್ದಾರೆ. ಜನಸಂದಣಿ ನಿಯಂತ್ರಣಕ್ಕೆ ಪೊಲೀಸರು ಹಾಗೂ ಈಶಾ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:44 pm, Sun, 15 February 26

Source link

Exit mobile version