ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಆರೋಗ್ಯ ಇಲಾಖೆ: ಸಿಟಿ ಜನರಲ್ಲಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ – Kannada News | Bangalore Mental Health Crisis: Tele Manas Offers Lifeline Amidst Rising Depression

ಬೆಂಗಳೂರು, ಫೆಬ್ರವರಿ 07: ಸಿಲಿಕಾನ್ ಸಿಟಿ ಬೆಂಗಳೂರು (bangaluru) ಒಂಥರಾ ಬ್ಯುಸಿ ಸಿಟಿ. ಇಲ್ಲಿ ಇರುವ ಜನರು ಕೂಡ ಅಷ್ಟೇ ಬ್ಯುಸಿ ಹಾಗೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಇದೀಗ ಸಿಟಿ ಮಂದಿ ಹೆಚ್ಚು ಮಾನಸಿಕ ಅನಾರೋಗ್ಯಕ್ಕೆ (Mental Health) ತುತ್ತಾಗುತ್ತಿದ್ದಾರೆ. ಹೀಗಾಗಿ ಟೆಲಿ ಮಾನಸ್​​ಗೆ ಮನೋ ರೋಗಿಗಳಿಂದ ಲಕ್ಷಾಂತರ ಕರೆಗಳು ಬರುತ್ತಿವೆ. ಸಿ. ಜೆ ರಾಯ್​ ಹಾಗೂ ಮಕ್ಕಳ ಸೂಸೈಡ್ ಬಳಿಕ ಆರೋಗ್ಯ ಇಲಾಖೆ ಶಾಕಿಂಗ್ ಮಾಹಿತಿಯೊಂದನ್ನು ಬಯಲು ಮಾಡಿದೆ.

ಹೌದು.. ಇತ್ತೀಚೆಗೆ ಜನರ ಜೀವನ ಶೈಲಿಯೇ ಬದಲಾಗಿಬಿಟ್ಟಿದೆ. ಇದರಿಂದ ಜನರು ಅನೇಕ ಖಾಯಿಲೆಗಳಿಗೂ ತುತ್ತಾಗುತ್ತಿದ್ದಾರೆ. ಅದರಲ್ಲೂ ಆತಂಕ ಹುಟ್ಟಿಸುವ ವಿಚಾರವೆಂದರೆ ಅನೇಕ ಜನರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಅಂತೆ. ಅನೇಕರಿಗೆ ತಮ್ಮ ಒತ್ತಡ ಹಾಗೂ ಸಮಸ್ಯೆಗಳನ್ನ ಹೇಳಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ

ಸಿಜೆ ರಾಯ್ ಹಾಗೂ ಮಕ್ಕಳ ಸೂಸೈಡ್ ಘಟನೆ ಬಳಿಕ ಆರೋಗ್ಯ ಇಲಾಖೆ ಅಚ್ಚರಿಯ ಮಾಹಿತಿ ನೀಡಿದೆ. ಒಂದೇ ವರ್ಷದಲ್ಲಿ 101,898 ಜನರಿಗೆ ಆತ್ಮಹತ್ಯೆ ಯೋಚನೆಗಳು ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಗುಪ್ತ ಖಿನ್ನತೆ ಕೇಸ್ ಹೆಚ್ಚಳ ಕಂಡಿದೆ. ಹಗಲು-ರಾತ್ರಿ ಎನ್ನದೇ ಟೆಲಿ ಮಾನಸ್​​ಗೆ ಮನೋ ರೋಗಿಗಳು ಕರೆ ಮಾಡುತ್ತಿದ್ದಾರೆ.

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಸ್ಫೋಟಕ ಅಂಕಿ-ಅಂಶ ಬಯಲಾಗಿದೆ. ಟೆಲಿ ಮಾನಸ್​ಗೆ ಸರಾಸರಿ ಎರಡುವರೆ ಲಕ್ಷ ಜನ ಕರೆ ಮಾಡಿ ತಮ್ಮ ಖಿನ್ನತೆ ಬಗ್ಗೆ ದೂರು ಹೇಳಿಕೊಂಡಿದ್ದಾರೆ. ಈ ಪೈಕಿ ಪುರಷರಲ್ಲಿ 49.86%, ಮಹಿಳೆಯರಲ್ಲಿ 45.45% ಮಾನಸಿಕ ಒತ್ತಡ ಕಂಡು ಬಂದಿದೆ.

ರಾಯ್ ಅವರಂತೆ ನಗದರ ಅನೇಕ ಜನರಿಲ್ಲಿ ಗುಪ್ತ ಖಿನ್ನತೆ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಒತ್ತಡ, ಕೌಟುಂಬಿಕ ಮತ್ತು ಕೆಲಸದ ಒತ್ತಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ತಮಗೆ ಗೊತ್ತಿಲ್ಲದೆ ಜನರು ಖಿನ್ನತೆಗೆ ಒಳಪಡುತ್ತಿದ್ದು, ಗುಪ್ತ ಖಿನ್ನತೆಗೆ ಒಳಪಟ್ಟು ಸಾಕಷ್ಟು ಸಮಯದ ನಂತರ ಮನೋಶಾಸ್ತ್ರಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಟಿ ಜನರ ಮಾನಸಿಕ ಆರೋಗ್ಯಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯಿಂದ ಟೆಲಿ ಮಾನಸ್ ಯೋಜನೆ ಶುರು ಮಾಡಿದೆ. ನಿಮ್ಹಾನ್ಸ್ ಆಸ್ಪತ್ರೆ ಸಹಯೋಗದಲ್ಲಿ ಟೆಲಿ ಮಾನಸ್ ಸೇವೆ ಆರಂಭವಾಗಿದ್ದು, ಈಗಾಗಲೇ ಸರಾಸರಿ 2 ಲಕ್ಷ 3 ಸಾವಿರ ಜನರಿಗೆ ಚಿಕಿತ್ಸೆ ಸಲಹೆ ನೀಡಲಾಗಿದೆ.

2025 ಜನವರಿಯಿಂದ ಡಿಸೆಂಬರ್ 25ರ ವರೆಗೆ ಟೆಲಿ ಮಾನಸ್​ಗೆ ಬಂದ ಕರೆಗಳೆಷ್ಟು?

ಸಮಸ್ಯೆ ಹೇಳಿಕೊಂಡು ಬಂದ ಕರೆಗಳು ಒಟ್ಟು ಕರೆಗಳು; 101,898, ನೇರ ಕರೆ; 82,027, ಸರ್ವಿಸ್ ಕರೆ; 19,871, ರೋಟಿನ್ ಕಾಲ್; 61,888, ಮಾಹಿತಿಗೋಸ್ಕರ ಕರೆ; 10,510, ಫ್ರಾಂಕ್ ಕಾಲ್​; 817, ಒಟ್ಟು ವಿಡಿಯೋ ಕಾಲ್; 77. ನಿರಾಸಕ್ತಿ ಮತ್ತು ಇತರೆ ಸಿಂಟಮ್ಸ್: 28.18%, ಒತ್ತಡ: 13.0%, ಪ್ಯಾನಿಕ್, ಫೋಬಿಯಾ ಸಿಂಪ್ಟಮ್ಸ್: 12.26%, ನಿದ್ದೆ ಸಮಸ್ಯೆ; 12.3%, ಆತ್ಮಹತ್ಯೆ ಆಲೋಚನೆ: 3.88%.

ಪುರುಷರಲ್ಲೇ ಹೆಚ್ಚು ಮಾನಸಿಕ ಸಮಸ್ಯೆ

ಪುರುಷರು: 49.86%, ಮಹಿಳೆಯರು: 45.45%, ಲೈಂಗಿಕ ಅಲ್ಪಸಂಖ್ಯಾತರು: 0.02%.

ವಯೋಮಿತಿ ಡಾಟಾ

  • 18-45 ವಯೋಮಿತಿ ; 69.7%
  • 46-64 ವಯೋಮಿತಿ ; 15.7%
  • 65 + ವಯೋಮಿತಿ ; 4.5%
  • 13-17 ವಯೋಮಿತಿ ; 7.2%
  • 0-12 ವಯೋಮಿತಿ; 2.9%

ಖಿನ್ನತೆ ಬಗ್ಗೆ ಹೆಚ್ಚಿರುವ ಹಿನ್ನಲೆ ಆರೋಗ್ಯ ಇಲಾಖೆ ಮೂರು ಹಂತದಲ್ಲಿ ವೈದ್ಯರ ನೇಮಕ ಮಾಡಿಕೊಂಡಿದೆ. ಸಿಂಪಲ್ ಸಮಸ್ಯೆಗೆ ಜ್ಯೂನಿಯರ್ ಸೈಕಾಲಜಿಸ್ಟ್ಗಳಿಂದ ಚಿಕಿತ್ಸೆ ನೀಡಿದರೆ, ಕಷ್ಟಕರ ಕೇಸ್​​ಗಳಿಗೆ ಸೀನಿಯರ್ ಸೈಕಾಲಜಿಸ್ಟ್ ಸಹಾಯ ಮಾಡುತ್ತಾರೆ. ಗೊಂದಲಮಯ ಸೇರಿದಂತೆ ದೊಡ್ಡ ಸಮಸ್ಯೆಗಳಿದ್ದಾಗ ವೃತ್ತಿಪರ ವೈದ್ಯರು ಸಹಾಯ ಮಾಡುತ್ತಾರೆ. ಇದಕ್ಕಾಗಿಯೇ 14416 ಸಹಾಯವಾಣಿ ಶುರು ಮಾಡಿದ್ದು, ಯಾವುದೇ ಮುಜುಗರ ಇಲ್ಲದೇ ಸೇವೆ ಪಡೆಯಲು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ! ಮೂವರು ಆರೋಪಿಗಳು ವಶಕ್ಕೆ

14416 ಸಹಾಯವಾಣಿ ವಾರದ ಎಲ್ಲಾ ದಿನಗಳಲ್ಲಿ 24 ಗಂಟೆಯೂ ದೂರವಾಣಿ ಕರೆಗಳನ್ನು 20 ಭಾಷೆಗಳಲ್ಲಿ ಸ್ವೀಕರಿಸಲಾಗುತ್ತಿದೆ. ಒಟ್ಟಿನಲ್ಲಿ ಸಿಟಿ ಜನರು ತಮ್ಮ ಕೆಲಸದ ಒತ್ತಡ, ಮಕ್ಕಳು ಓದಿನ ಒತ್ತಡ ಹೀಗೆ ಅನೇಕ ಸಮಸ್ಯೆಗಳಿಂದ ಮಾನಸಿಕ ಆರೋಗ್ಯ ಹಾಳಾಗುತ್ತಿದ್ದು, ಅನೇಕರು ಒತ್ತಡ ನಿವಾರಣೆಯನ್ನ ಮಾಡಿಕೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup: ಏಕಾಂಗಿ ಹೋರಾಟ ನೀಡಿ ತಂಡದ ಮಾನ ಉಳಿಸಿದ ಸೂರ್ಯಕುಮಾರ್

Source link

ಊರಿಗೆಲ್ಲ ಊಟ ಹಾಕಿಸಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ – Kannada News | Chikkalawala’s Sanjay Satale Throws Grand 1st Birthday for Pet Buffalo Shyam

ಬೆಳಗಾವಿ, ಫೆ.7: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕಲವಾಳ ಗ್ರಾಮದಲ್ಲಿ ಒಂದು ಅಪರೂಪದ ಘಟನೆಯೊಂದು ನಡೆದಿದೆ. ಮನೆಯ ಮುಂದೆ ಹಾಕಿರುವ ಪೆಂಡಾಲ್ , ಸಂಭ್ರಮ ನೋಡಿ ಮದುವೆ ಇರಬೇಕು ಎಂದುಕೊಳ್ಳಬೇಕು. ಅಷ್ಟೊಂದು ಸಡಗರ ಇತ್ತು ಈ ಮನೆಯಲ್ಲಿ. ಇಷ್ಟಕ್ಕೂ ಈ ಸಂಭ್ರಮಕ್ಕೆ ಕಾರಣವೇನು? ಎಂದು ಒಮ್ಮೆ ಯೋಚನೆ ಮಾಡಬಹುದು. ಇದಕ್ಕೆ ಅಸಲಿ ಕಾರಣ ಚಿಕ್ಕಲವಾಳ ಗ್ರಾಮದ ಸಂಜಯ್ ಸತಾಳೆ ಎಂಬುವವರ ಮನೆಯ ಕೋಣ. ಹೌದು ಅವರ ತನ್ನ ಕೋಣ ವರ್ಷ ಪೂರೈಸಿದಕ್ಕೆ ಈ ಸಂಭ್ರಮವನ್ನು ಮಾಡಿದ್ದಾರೆ. ಊರಿಗೆಲ್ಲಾ ಊಟ ಹಾಕಿ, ಕೋಣದ (buffalo birthday celebration) ಮುಂದೆ ಕೇಕ್ ಇಟ್ಟು ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. 39ವರ್ಷದ ಸಂಜಯ್ ತಮ್ಮದೇ ಜಮೀನಿನಲ್ಲಿ ಉಳುಮೆ ಮಾಡ್ತಾ, ಜಾನುವಾರುಗಳನ್ನ ಸಾಕುತ್ತಾ ಜೀವನ ನಡೆಸುತ್ತಿದ್ದಾರೆ.

ವರ್ಷದ ಹಿಂದೆ ತಂದಿದ್ದ ಕೋಣಕ್ಕೆ ಇಂದಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಅದ್ದೂರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಈ ಕೋಣಕ್ಕೆ ಶಾಮ್ ಎಂಬ ಹೆಸರು ಕೂಡ ಇಟ್ಟಿದ್ದಾರೆ. ಇದನ್ನು ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಸಂಜಯ್ ಗೆ ಇನ್ನೂ ಮದುವೆಯಾಗಿಲ್ಲ ಆ ಕಾರಣಕ್ಕೆ ಕೋಣವನ್ನೇ ಮಗನ ರೀತಿಯಲ್ಲಿ ಸಾಕುತ್ತಿದ್ದಾರೆ. ಒಂದು ವೇಳೆ ಮದುವೆಯಾಗಿ ಮಗ ಇದ್ದಿದ್ರೆ ಹೇಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಸೆಲೆಬ್ರೇಷನ್​ ಮಾಡುತ್ತಿದ್ದರೂ, ಅದೇ ರೀತಿಯಲ್ಲಿ ಮಾಡಿದ್ದಾರೆ. ಇದೀಗ ಕೋಣದ ಹುಟ್ಟು ಹಬ್ಬ ಮಾಡಿ ಇಡೀ ಗ್ರಾಮದ ಗಮನ ಸೆಳೆದಿದ್ದಾರೆ.

ಇನ್ನೂ ಕೋಣಕ್ಕೆ ಒಂದು ವರ್ಷ ಪೂರೈಕೆ ಆಗ್ತಿದ್ದಂತೆ ಗ್ರಾಮದ ಎಲ್ಲರನ್ನೂ ಕರೆದು ಹುಟ್ಟು ಹಬ್ಬ ಆಚರಣೆಗೆ ಪ್ಲ್ಯಾನ್ ಮಾಡಿದ್ದ ಸಂಜಯ್ ಗೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ. ಶಾಮ್​​ನ ಹುಟ್ಟು ಹಬ್ಬವನ್ನ ಮಗನ ಮದುವೆ ಮಾದರಿಯಲ್ಲಿ ಮಾಡಿದ್ದಾರೆ. ಮನೆ ಮುಂದೆ ಪೆಂಡಾಲ್ ಹಾಕಿಸಿ ಅಲಂಕರಿಸಿ, ಇಡೀ ಊರ ಜನರನ್ನ ಕರೆದಿದ್ದಾರೆ, ಹತ್ತು ಕೆಜಿ ಕೇಕ್ ತಂದು ಕೋಣದ ಕಡೆಯಿಂದ ಕಟ್ ಮಾಡಿಸಿದ್ದಾರೆ. ಹುಗ್ಗಿ, ಪಲ್ಯ, ಅನ್ನ ಸಾಂಬಾರ್ ಅಡುಗೆ ಮಾಡಿಸಿ ಮುನ್ನೂರಕ್ಕೂ ಅಧಿಕ ಜನರಿಗೆ ಊಟ ಹಾಕಿಸಿದ್ದಾರೆ. ಎಲ್ಲಿಯೂ ಹೆಣ್ಣು ಸಿಗದಿದ್ದಾಗ ನೊಂದುಕೊಳ್ಳದೇ ತನ್ನೊಟ್ಟಿಗೆ ನಿತ್ಯವೂ ಇರುವ ಪ್ರಾಣಿಗಳನ್ನ ತಮ್ಮ ಮಕ್ಕಳಂತೆ ನೋಡಿಕೊಂಡು ಸಂಜಯ್ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ

ಸದ್ಯ ಸಂಜಯ್ ಮಾಡಿರುವ ಹುಟ್ಟು ಹಬ್ಬ ಗ್ರಾಮೀಣ ಭಾಗದ ರೈತರು, ಯುವಕರಿಗೆ ಮಾದರಿಯಾಗಿದೆ. ಪ್ರಾಣಿಗಳನ್ನ ಪ್ರಾಣಿಗಳಂತೆ ನೋಡದೇ ಮಕ್ಕಳಂತೆ ನೋಡುವುದಷ್ಟೇ ಅಲ್ಲದೇ ಮಕ್ಕಳಿದಿದ್ರೇ ಎನೂ ಮಾಡ್ತಿದ್ರೂ ಅದನ್ನ ಮೂಕ ಪ್ರಾಣಿಗಳ ಮೇಲೆ ಮಾಡಿ ಸಂತಸ ಪಡ್ತಿರುವುದು ರೈತರ ಮುಗ್ದತೆ ಎತ್ತಿ ಹಿಡಿಯುತ್ತೆ. ಅದೇನೆ ಮೋಜು ಮಸ್ತಿ ಮಾಡಲು ಎನೆಲ್ಲಾ ಮಾಡೋರ ಮಧ್ಯೆ ಇಲ್ಲೊಬ್ಬ ಮೂಕ ಪ್ರಾಣಿಯದ್ದು ಹುಟ್ಟು ಹಬ್ಬ ಮಾಡಿ ಎಲ್ಲರಿಗೂ ಮಾದಿರಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು, 13 ಜನರಿಗೆ ಗಾಯ – Kannada News | Surajkund Fair tragedy Police dead 13 injured after swing collapses in Faridabad

ಫರಿದಾಬಾದ್, ಫೆಬ್ರವರಿ 7: ಹರಿಯಾಣದ ಫರೀದಾಬಾದ್​ನಲ್ಲಿ ನಡೆಯುತ್ತಿದ್ದ ಸೂರಜ್‌ಕುಂಡ್ ಜಾತ್ರೆಯಲ್ಲಿ ದುರಂತ ಸಂಭವಿಸಿದೆ. ಎಲ್ಲ ಜಾತ್ರೆಗಳಲ್ಲೂ ಇರುವಂತೆ ಆ ಜಾತ್ರೆಯಲ್ಲೂ ಜಾಯಿಂಟ್ ವೀಲ್, ಜೋಕಾಲಿ ಮತ್ತಿತರ ಸ್ವಿಂಗ್​ಗಳನ್ನು ಹಾಕಲಾಗಿತ್ತು. ಈ ವೇಳೆ ಸುನಾಮಿ ಸ್ವಿಂಗ್ ತುಂಡಾಗಿ ಬಿದ್ದಿದೆ. ಅದರಲ್ಲಿ ಕುಳಿತಿದ್ದವರು ಕೆಳಗೆ ಬೀಳಲಾರಂಭಿಸಿದರು. ಜಾತ್ರೆಯಲ್ಲಿ ವಿಪರೀತ ಜನ ಸೇರಿದ್ದರಿಂದ ಏನಾಯಿತು ಎಂದು ಅಲ್ಲಿದ್ದವರಿಗೆ ಗೊತ್ತಾಗುವಷ್ಟರಲ್ಲಿ ಮೇಲಿನಿಂದ ಬಿದ್ದು ಪೊಲೀಸ್ ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ಸಮಯದಲ್ಲಿ ಉಯ್ಯಾಲೆಯಲ್ಲಿ 18 ಜನರಿದ್ದರು. ಈ ದುರಂತಕ್ಕೆ ಹರಿಯಾಣ ಸಿಎಂ ದುಃಖ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ: ವಿಡಿಯೋ – Kannada News | Bigg Boss Kannada winner Gilli reply to people who shouted Kavya’s name

ದಿನಸಿ ಮಾರ್ಟ್ ಮುಂದೆ ರೌಡಿಸಂ: ಡೆಲಿವರಿ ಬಾಯ್ಸ್​ಗೆ ಹೆಲ್ಮೆಟ್​ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು!

Source link

T20 World Cup: ಬಂದ ಪುಟ್ಟ ಹೋದ ಪುಟ್ಟ; ಭಾರತದ ಬ್ಯಾಟಿಂಗ್ ಬಂಡವಾಳ ಬಯಲು – Kannada News | T20 World Cup 2026: India Batting Falters vs USA; Suryakumar Shines with 84

2026 ರ ಟಿ20 ವಿಶ್ವಕಪ್​​ನ (T20 World Cup 2026) ಮೊದಲ ದಿನವೇ ಪಂದ್ಯವನ್ನಾಡಿದ ಆತಿಥೇಯ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು (India vs USA) ಎದುರಿಸಿತು. ಈ ಪಂದ್ಯಕ್ಕೂ ಮುನ್ನ ಅನುಭವಿಗಳು ಹಾಗೂ ಪರಿಣಿತರ ಹೇಳಿಕೆಯ ಪ್ರಕಾರ, ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಟೀಂ ಇಂಡಿಯಾ, ಯುಎಸ್​ಎ ಬೌಲಿಂಗ್ ವಿಭಾಗವನ್ನು ಪುಡಿಪುಡಿ ಮಾಡಲಿದೆ ಎನ್ನಲಾಗುತ್ತಿತ್ತು. ಆದರೆ ಪಂದ್ಯ ಆರಂಭವಾದ ಮೊದಲ 6 ಓವರ್​ಗಳಲ್ಲೇ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದ ನ್ಯೂನತೆ ಜಗಜ್ಜಾಹೀರಾಯಿತು.

ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಆವೃತ್ತಿಯನ್ನು ಆಡುತ್ತಿರುವ ಅಮೆರಿಕ ತಂಡ ತನ್ನ ಮೊದಲ ಆವೃತ್ತಿಯಲ್ಲಿ ಅಂದರೆ 2024 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದೀಗ ಈ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾದ ಅಹಂ ಮುರಿಯಿತು. ಅನಾನುಭವಿ ಯುಎಸ್​ಎ ತಂಡದ ಎದುರು ಭಾರತದ ಬ್ಯಾಟರ್​ಗಳ ಗರ್ವಭಂಗವಾಯಿತು. ಅಮೆರಿಕ ತಂಡದ ಕಾರ್ಯತಂತ್ರದ ಮುಂದೆ ಮಂಡಿಯೂರಿದ ಟೀಂ ಇಂಡಿಯಾ ಬ್ಯಾಟರ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರ ಫಲವಾಗಿ ತಂಡದ ಪ್ರಮುಖ 4 ವಿಕೆಟ್​ಗಳು ಪವರ್ ಪ್ಲೇ ಒಳಗೆ ಪತನಗೊಂಡವು.

ಅಭಿಷೇಕ್ ಗೋಲ್ಡನ್ ಡಕ್

ಭಾರತದ ಪರ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕಿಶನ್ ತಂಡದ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮುಂದಿನ ಓವರ್​ನಲ್ಲಿ ಸ್ಟ್ರೈಕ್​ಗೆ ಬಂದ ಅಭಿಷೇಕ್ ಶರ್ಮಾ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದ ಅಭಿಷೇಕ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಪವರ್ ಪ್ಲೇನಲ್ಲೇ 4 ವಿಕೆಟ್

ಆ ನಂತರ ಕಿಶನ್ ಹಾಗೂ ತಿಲಕ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಶುರು ಮಾಡಿದರು. ಇದೇ ಹಂತದಲ್ಲಿ ಕಿಶನ್​ಗೆ ಜೀವದಾನವೂ ಸಿಕ್ಕಿತು. ಆದರೆ ಇದನ್ನು ಸದುಪಯೋಗಪಡಿಸಿಕೊಳ್ಳದ ಕಿಶನ್ 6ನೇ ಓವರ್​ನ 2ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಅದೇ ಓವರ್​ನಲ್ಲಿ ತಿಲಕ್ ವರ್ಮಾ ಕೂಡ ಪೆವಿಲಿಯನ್ ಸೇರಿಕೊಂಡರು. ಆ ನಂತರ ಬಂದ ಶಿವಂ ದುಬೆ ಕೂಡ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದರು. ಹೀಗಾಗಿ ಟೀಂ ಇಂಡಿಯಾದ ಪ್ರಮುಖ 3 ವಿಕೆಟ್​ಗಳು ಒಂದೇ ಓವರ್​ನಲ್ಲಿ ಅಂದರೆ 6ನೇ ಓವರ್​ನಲ್ಲೇ ಪತನಗೊಂಡವು. ಆರಂಭಿಕ ವಿಕೆಟ್ ಪತನದ ಒತ್ತಡಕ್ಕೊಳಗಾದ ರಿಂಕು ಸಿಂಗ್ ಕೂಡ ರನ್ ಗಳಿಸಲು ತಿಣುಕಾಡಿ 6 ರನ್​ಗಳಿಗೆ ಸುಸ್ತಾದರು. ಹಾರ್ದಿಕ್ ಪಾಂಡ್ಯ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡುವುದನ್ನು ಬಿಟ್ಟು ಎಂದಿನಂತೆ ಹೊಡಿಬಡಿ ಆಟಕ್ಕೆ ಮುಂದಾಗಿ 5 ರನ್​ಗಳಿಗೆ ಸುಸ್ತಾದರು. ಅಕ್ಷರ್ ಇನ್ನಿಂಗ್ಸ್ ಕೂಡ 14 ರನ್​ಗಳಿಗೆ ಅಂತ್ಯವಾಯಿತು.

ಸೂರ್ಯ ಏಕಾಂಗಿ ಹೋರಾಟ

ಒಂದೆಡೆ ತಂಡದ ವಿಕೆಟ್​ಗಳು ತರಗೆಲೆಗಳಂತೆ ಉದುರುತ್ತಿದ್ದರೆ, ಇನ್ನೊಂದು ತುದಿಯಲ್ಲಿ ನಾಯಕನ ಜವಾಬ್ದಾರಿ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಸೂರ್ಯ 49 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಸೂರ್ಯ ಅವರ ಈ ಅರ್ಧಶತಕದಿಂದಾಗಿ ಭಾರತ 161 ರನ್ ಕಲೆಹಾಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:11 pm, Sat, 7 February 26

Source link

ಭಾರತೀಯರ ಇಂಧನ ಭದ್ರತೆಗೆ ಮೊದಲ ಆದ್ಯತೆ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ – Kannada News | Energy security is supreme priority MEA says amid Donald Trumps Russian oil import curb claims

ನವದೆಹಲಿ, ಫೆಬ್ರವರಿ 7: ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತದ ಜನರಿಗೆ ಇಂಧನ ಭದ್ರತೆಯು ಸರ್ಕಾರದ ಪ್ರಮುಖ ಆದ್ಯತೆಯಾಗಿ ಉಳಿದಿದೆ. ಭಾರತದ ಇಂಧನ ಮೂಲದ ವಿಷಯದಲ್ಲಿ 1.4 ಬಿಲಿಯನ್ ಭಾರತೀಯರ ಇಂಧನ ಭದ್ರತೆ ಸರ್ಕಾರದ ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಎಂದು ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಹೇಳಿದೆ” ಎಂದು ಪುನರುಚ್ಛರಿಸಿದ್ದಾರೆ.

ಭಾರತ ರಷ್ಯಾದಿಂದ ತೈಲ ಆಮದನ್ನು ಸ್ಥಗಿತಗೊಳಿಸಲಿದೆ ಎಂಬ ಅಮೆರಿಕದ ಹೇಳಿಕೆಯ ಮಧ್ಯೆ ಈ ಹೇಳಿಕೆಯು ಭಾರತದ ದೀರ್ಘಕಾಲದ ನಿಲುವನ್ನು ಪ್ರತಿಬಿಂಬಿಸುತ್ತದೆ. ರಷ್ಯಾದ ಇಂಧನ ರಫ್ತಿನಿಂದ ಬರುವ ಆದಾಯವನ್ನು ಉಕ್ರೇನ್‌ನಲ್ಲಿನ ಯುದ್ಧಕ್ಕೆ ಹಣಕಾಸು ಒದಗಿಸಲು ಬಳಸಲಾಗುತ್ತಿದೆ ಎಂದು ಅಮೆರಿಕ ವಾದಿಸಿದೆ. ಆದರೆ, ರಷ್ಯಾ ಈ ಆರೋಪವನ್ನು ನಿರಾಕರಿಸಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ಬಸ್ ಮೇಲೆ ರಷ್ಯಾ ಡ್ರೋನ್ ದಾಳಿ, 15 ಮಂದಿ ಸಾವು, 7 ಜನರಿಗೆ ಗಾಯ

ರಷ್ಯಾದ ತೈಲದ ನೇರ ಅಥವಾ ಪರೋಕ್ಷ ಆಮದುಗಳನ್ನು ನಿಲ್ಲಿಸಲು ಭಾರತ ಬದ್ಧವಾಗಿದೆ. ಭಾರತ ಅಮೆರಿಕ ಹಾಗೂ ವೆನೆಜುವೆಲಾದಿಂದ ಇಂಧನ ಖರೀದಿಯನ್ನು ಹೆಚ್ಚಿಸುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ. ರಷ್ಯಾದ ಇಂಧನ ಖರೀದಿ ಮಾಡುತ್ತಿದೆ ಎಂಬ ಕಾರಣಕ್ಕೆ ಭಾರತದ ಮೇಲೆ ವಿಧಿಸಲಾದ ಹೆಚ್ಚುವರಿ ಸುಂಕಗಳನ್ನು ಅಮೆರಿಕ ಹಿಂತೆಗೆದುಕೊಂಡಿತ್ತು.

ರಷ್ಯಾದ ಪ್ರತಿಕ್ರಿಯೆ ಏನು?:

ರಷ್ಯಾದ ತೈಲ ಖರೀದಿಯನ್ನು ಸ್ಥಗಿತಗೊಳಿಸುವ ಬಗ್ಗೆ ಭಾರತ ಯಾವುದೇ ಹೇಳಿಕೆ ನೀಡಿರಲಿಲ್ಲ. ಈ ವೇಳೆ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಷ್ಯಾ ಭಾರತವು ಯಾವುದೇ ಮೂಲದಿಂದ ಇಂಧನವನ್ನು ಖರೀದಿಸಲು ಮುಕ್ತವಾಗಿದೆ ಎಂದು ಹೇಳಿತ್ತು. ಭಾರತವು ಯಾವಾಗಲೂ ಬಹು ಪೂರೈಕೆದಾರರಿಂದ ಇಂಧನವನ್ನು ಪಡೆಯುತ್ತಿದೆ. ರಷ್ಯಾ ಭಾರತಕ್ಕೆ ಮೊದಲಿನಿಂದಲೂ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಏಕೈಕ ಪೂರೈಕೆದಾರನಲ್ಲ ರಷ್ಯಾ ಹೇಳಿಕೆ ನೀಡಿತ್ತು.

ಇದನ್ನೂ ಓದಿ: ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು

ರಷ್ಯಾದ ಇಂಧನವನ್ನು ಖರೀದಿಸಿದ್ದಕ್ಕಾಗಿ ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತದ ಮೇಲೆ ವಿಧಿಸಲಾದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ತೆಗೆದುಹಾಕುವ ಆದೇಶಕ್ಕೆ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದರು. ಇಂದಿನಿಂದ ಈ ಕ್ರಮ ಜಾರಿಗೆ ಬರಲಿದೆ. ಈ ಆದೇಶದಲ್ಲಿ ಕೂಡ ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸುತ್ತದೆ ಮತ್ತು ಅಮೆರಿಕದಿಂದ ಇಂಧನ ಖರೀದಿಯನ್ನು ಹೆಚ್ಚಿಸುತ್ತದೆ ಎಂಬ ತನ್ನ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೋಟದ ಮನೆ ಟಾರ್ಗೆಟ್: ಕಳ್ಳರನ್ನು ಕರೆಸಿ ಕಳ್ಳತನ ಮಾಡಿಸಿದ ಕಾನ್ಸ್‌ಟೇಬಲ್‌; ಆರು ಜನರ ಬಂಧನ – Kannada News | Haveri: Six people, including a constable arrested for theft

ಹಾವೇರಿ, ಫೆಬ್ರವರಿ 07: ಮದುವೆಯಾಗಿದ್ದ ಊರಿನಲ್ಲಿ ಕಳ್ಳತನ (Theft) ಮಾಡಿಸಿದ್ದ ಕಾನ್ಸ್‌ಟೇಬಲ್​ ಸೇರಿದಂತೆ ಆರು ಜನ ಕಳ್ಳರನ್ನು ಜಿಲ್ಲೆಯ ಹಿರೇಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹಿರೇಕೇರೂರು ತಾಲೂಕಿನ ಹಳೆ ನಿಡು ನೇಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ರಾಘವೇಂದ್ರ, ವಿಜಯ, ಮಲ್ಲೇಶ, ಕಾಂತೇಶ್, ನಾಗೇಶ್ ಮತ್ತು ಹಿರೇಕೆರೂರು ಪೊಲೀಸ್ ಠಾಣೆಯ ಕಾರು ಚಾಲಕ ಪ್ರದೀಪ್ ನಾಯಕ್ ಬಂಧಿತರು.

ನಡೆದಿದ್ದೇನು? 

ಜನವರಿ 19ರಂದು ರಾತ್ರಿ ಹಿರೇಕೆರೂರು ತಾಲೂಕಿನ ಹಳೇ ನಿಡುನೇಗಿಲು ಗ್ರಾಮದ ಮಲ್ಲನಗೌಡ ಈಶ್ವರಗೌಡ ಪಾಟೀಲ್ ಅವರ ತೋಟದ ಮನೆಯಲ್ಲಿ ಕಳ್ಳತನ ನಡೆದಿತ್ತು. ಮಲ್ಲನಗೌಡ ಇತ್ತೀಚೆಗೆ ಹೊಸ ಮನೆ ನಿರ್ಮಾಣಕ್ಕೆಂದು ದುಡ್ಡು ತಂದಿಟ್ಟಿದ್ದರು. ಕಾನ್ಸ್‌ಟೇಬಲ್‌ ಪ್ರದೀಪ್ ನಾಯಕ್​​ ಹಾಕಿ ಕೊಟ್ಟಿದ್ದ ಸ್ಕೆಚ್​​ನಂತೆ  ರಾತ್ರಿ ಸುಮಾರು 11.30ರ ವೇಳೆಗೆ ತೋಟದ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು, ಸುಮಾರು 90 ಗ್ರಾಂ ಚಿನ್ನಾಭರಣ, ಅರ್ಧ ಕೆ.ಜಿ ಬೆಳ್ಳಿ ಮತ್ತು ಸುಮಾರು 5 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು.

ಇದನ್ನೂ ಓದಿ: ಮಗು ಹುಟ್ಟಿ ಏಳೇ ದಿನಕ್ಕೆ ಮಾರಾಟಕ್ಕೆ ಮುಂದಾದ ಹೆತ್ತವರು: ದಂಪತಿ ಸೇರಿ ಐವರ ಬಂಧನ

ಹಳೇ ನಿಡುನೇಗಿಲು ಗ್ರಾಮದ ಅಳಿಯ ಕಾನ್ಸ್‌ಟೇಬಲ್ ಪ್ರದೀಪ್ ನಾಯಕ್, ನೈಟ್‌ ಬೀಟ್‌ಗೆ ತೆರಳುವ ನೆಪದಲ್ಲಿ ಸ್ಥಳದ ಮಾಹಿತಿ ಸಂಗ್ರಹಿಸಿ, ಕಳ್ಳರನ್ನು ಕರೆಸಿ ಕೃತ್ಯ ನಡೆಸಿಸಿರುವುದು ಪೊಲೀಸ್​ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾನ್ಸ್‌ಟೇಬಲ್ ಪ್ರದೀಪ್ ನಾಯಕ್ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿರುವ ಹಿರೇಕೆರೂರು ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ತಿರುಪತಿಗೆ ತೆರಳಿದ್ದ ವೇಳೆ ಕೈಚಳಕ ತೋರಿಸಿದ ಕಳ್ಳರು

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಮನೆ ಬೀಗ ಒಡೆದು 30 ಗ್ರಾಂ ಚಿನ್ನ , 450 ಗ್ರಾಂ ಬೆಳ್ಳಿ ಸೇರಿದಂತೆ 46 ಸಾವಿರ ರೂ ಹಣವನ್ನು ಕಳ್ಳರು ಕಳತನ ಮಾಡಿರುವಂತಹ ಘಟನೆ ನಡೆದಿದೆ. ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಹುಷಾರ್: ಸಹಾಯ ಮಾಡುವ ನೆಪದಲ್ಲಿ ಹೀಗಾ ಮಾಡೋದು?

ಡಿಆರ್​ಎಂ ಬಡಾವಣೆಯಲ್ಲಿ ಹರೀಶ್​ ಮನೆಯಲ್ಲಿ ಕಳ್ಳತನ ನಡೆದಿದೆ. ಕುಟುಂಬದವರೆಲ್ಲಾ ತಿರುಪತಿಗೆ ಹೋಗಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೊತೆಗಿದ್ದವರೇ ಮೋಸ ಮಾಡಿದರು, ಆ ನಟನ ಮಾತು ಕೇಳಲಿಲ್ಲ: ಅರ್ಜುನ್ ಸರ್ಜಾ – Kannada News | Arjun Sarja emotional about financial loss and Sobhan Babu advice

ಈಗ ಎಲ್ಲರೂ ಆಕ್ಷನ್ ಕಿಂಗ್​​ಗಳೇ ಆದರೆ ಕೆಲ ದಶಕದ ಮುಂಚೆ ನಿಜವಾದ ‘ಆಕ್ಷನ್ ಕಿಂಗ್’ ಎಂದರೆ ಅರ್ಜುನ್ ಸರ್ಜಾ (Arjun Sarja) ಮಾತ್ರವೇ. ಚಿತ್ರರಂಗಕ್ಕೆ ಆಕ್ಷನ್​​ನಲ್ಲಿ ಭಿನ್ನತೆ ತಂದವರೇ ಅರ್ಜುನ್ ಸರ್ಜಾ. ತಮ್ಮ ಅದ್ಭುತ ಮೈಕಟ್ಟು, ಕರಾಟೆ ಪಟ್ಟುಗಳು ಜೊತೆಗೆ ಅದ್ಭುತ ನಟನೆಯ ಮೂಲಕ ಅರ್ಜುನ್ ಸರ್ಜಾ ಲಕ್ಷಾಂತರ ಪ್ರೇಕ್ಷಕರನ್ನು ಸೆಳೆದಿದ್ದರು. ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರ್ಜುನ್ ಸರ್ಜಾ ತಮ್ಮ 46 ವರ್ಷಗಳ ವೃತ್ತಿ ಪಯಣದಲ್ಲಿ ಹಲವಾರು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅರ್ಜುನ್ ಸರ್ಜಾ, ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ, ಸುಮಾರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ತಮ್ಮ 46 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅನೇಕರು ತಮಗೆ ಹಲವು ರೀತಿಯಾಗಿ ವಂಚಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ನನ್ನ ಸುತ್ತಮುತ್ತಲಿದ್ದವರೇ ನನ್ನನ್ನು ಮೋಸಗೊಳಿಸಿದರು. ಆ ಸಮಯದಲ್ಲಿ ನನಗೆ ಯಾವುದರ ಬಗ್ಗೆಯೂ ಅರಿವಿಲ್ಲದ ವಯಸ್ಸಾಗಿತ್ತು. ಬಹಳಷ್ಟು ಜನರು ನನ್ನನ್ನು ತಪ್ಪು ದಾರಿಗೆ ಎಳೆದರು’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್: ವಿಡಿಯೋ

‘ಒಂದು ಸಮಯದಲ್ಲಿ ಬಹಳ ಸಂಪಾದನೆ ಮಾಡುತ್ತಿದ್ದೆ, ಸಂಪಾದನೆಯ ಸಮಯದಲ್ಲಿ ಸರಿಯಾದ ಕಡೆ ಹೂಡಿಕೆ ಮಾಡುವ ಬಗ್ಗೆ ಹಿರಿಯ ನಟ ಶೋಭನ್ ಬಾಬು ಅವರು ಹಲವಾರು ಬಾರಿ ಕಿವಿಮಾತು ಹೇಳಿದ್ದರು’ ಎಂಬುದನ್ನು ಅರ್ಜುನ್ ಸರ್ಜಾ ನೆನಪಿಸಿಕೊಂಡಿದ್ದಾರೆ. ‘ಹಣವನ್ನು ವ್ಯರ್ಥ ಮಾಡಬೇಡ, ಜಾಗರೂಕತೆಯಿಂದ ಹೂಡಿಕೆ ಮಾಡು ಎಂದು ಶೋಭನ್ ಬಾಬು ಅವರು ಆಗಾಗ್ಗೆ ಎಚ್ಚರಿಸುತ್ತಿದ್ದರು. ಆದರೆ ಅಂದು ಅವರ ಮಾತುಗಳು ನನಗೆ ಅರ್ಥವಾಗಿರಲಿಲ್ಲ. ಅವರ ಮಾತನ್ನು ಕೇಳಿದ್ದಿದ್ದರೆ ಇಂದು ನನ್ನ ಪರಿಸ್ಥಿತಿ ಇನ್ನೂ ಉತ್ತಮವಾಗಿರುತ್ತಿತ್ತು ಮತ್ತು ನನ್ನ ಮಕ್ಕಳಿಗಾಗಿ ದೊಡ್ಡ ಆಸ್ತಿಯನ್ನು ಉಳಿಸಬಹುದಿತ್ತು’ ಎಂದು ಅವರು ಪಶ್ಚಾತ್ತಾಪ ಪಟ್ಟಿದ್ದಾರೆ.

ಮಧುಗಿರಿಯಲ್ಲಿ ಜನಿಸಿದ ಅರ್ಜುನ್ ಸರ್ಜಾ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿರುವ ಇವರು, ಪ್ರಸ್ತುತ ‘ಸೀತಾ ಪಯಣ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರ ಪುತ್ರಿ ಐಶ್ವರ್ಯ ಸರ್ಜಾ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಸಿನಿಮಾ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಿರ್ಮಾಣವನ್ನು ಸಹ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಶ್ರವಣದೋಷ ಉಂಟಾಗುತ್ತದೆಯೇ? ವೈದ್ಯರು ಹೇಳುವುದೇನು? – Kannada News | Diabetes, High BP & Hearing Loss: The Link

ಮಧುಮೇಹ (Diabetes) ಅಥವಾ ಅಧಿಕ ರಕ್ತದೊತ್ತಡ (High BP) ಇದ್ದರೆ, ಹೃದಯ, ಮೂತ್ರಪಿಂಡ ಮತ್ತು ಕಣ್ಣಿಗೆ ಸಂಬಂಧ ಪಟ್ಟ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದು ಹಿಯರಿಂಗ್ ಲಾಸ್ ಗೆ ಕಾರಣವಾಗುತ್ತದೆಯೇ ಅಥವಾ ಶ್ರವಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವರಿಗಿರುವ ಗೊಂದಲ. ಅದರಲ್ಲಿಯೂ ಈ ರೀತಿಯ ಸಮಸ್ಯೆ ವಯಸ್ಸಾದ ನಂತರ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದು ನಿಜವೇ ಎಂಬ ಅನುಮಾನ ಮೂಡುತ್ತದೆ. ಅದಕ್ಕಾಗಿಯೇ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ರವಿ ಮೆಹರ್ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಈ ಕಾಯಿಲೆಗಳು ಶ್ರವಣ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆಯೇ?

ಈ ಎರಡು ಕಾಯಿಲೆಗಳು ಅಂದರೆ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಕೆಲವು ಸಂದರ್ಭಗಳಲ್ಲಿ ಶ್ರವಣ ಸಾಮರ್ಥ್ಯಕ್ಕೆ ಹಾನಿ ಮಾಡುತ್ತದೆ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಶಬ್ದಗಳನ್ನು ಸ್ಪಷ್ಟವಾಗಿ ಕೇಳಲು ಸಾಧ್ಯವಾಗುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದೀರ್ಘಕಾಲದ ವರೆಗೆ ಸಕ್ಕರೆ ಮಟ್ಟ ಹೆಚ್ಚಿರುವ ಮಧುಮೇಹ ರೋಗಿಗಳ ದೇಹದಲ್ಲಿ ನರಗಳಿಗೆ ಹಾನಿಯಾಗುತ್ತದೆ. ಜೊತೆಗೆ ಕಿವಿಯೊಳಗಿನ ಶ್ರವಣೇಂದ್ರಿಯ ನರಗಳ ಮೇಲೂ ಪರಿಣಾಮ ಬೀರಬಹುದು. ಹೆಚ್ಚಿನ ಸಕ್ಕರೆ ಮಟ್ಟವು ಕೂಡ ಕಿವಿಯಲ್ಲಿರುವ ನರಗಳಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಆದರೆ ಈ ಸಮಸ್ಯೆ ಪ್ರತಿಯೊಬ್ಬ ಮಧುಮೇಹ ರೋಗಿಯಲ್ಲೂ ಕಂಡುಬರುವುದಿಲ್ಲ. ಇದು ಮುಖ್ಯವಾಗಿ ವಯಸ್ಸಾದವರಲ್ಲಿ ಮತ್ತು ದೀರ್ಘಕಾಲದವರೆಗೆ ಹೆಚ್ಚಿನ ಸಕ್ಕರೆ ಮಟ್ಟ ಹೊಂದಿರುವವರಲ್ಲಿ ಕಂಡುಬರುತ್ತದೆ.

ಅಧಿಕ ರಕ್ತದೊತ್ತಡವು ಕಿವಿಗಳಿಗೆ ಹಾನಿಯನ್ನುಂಟುಮಾಡುತ್ತದೆಯೇ?

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡದಲ್ಲಿ ಅಪಾಯ ಕಡಿಮೆ ಇರುತ್ತದೆ, ಆದರೆ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅಥವಾ ಇದ್ದಕ್ಕಿದ್ದಂತೆ ಏರಿದರೆ, ಅದು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಇದನ್ನು ಹಠಾತ್ ಶ್ರವಣ ನಷ್ಟ ಎಂದು ಕರೆಯಲಾಗುತ್ತದೆ, ಆದರೂ ಅಂತಹ ಪ್ರಕರಣಗಳು ಕಂಡುಬರುವುದು ಬಹಳ ಅಪರೂಪ. ಆದರೆ ಒಬ್ಬ ವ್ಯಕ್ತಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಎರಡು ಕೂಡ ಇದ್ದಲ್ಲಿ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

  • ಸಂಭಾಷಣೆಯ ಸಮಯದಲ್ಲಿ ತೊಂದರೆ
  • ಫೋನ್‌ನಲ್ಲಿ ಸ್ಪಷ್ಟವಾಗಿ ಕೇಳಲು ಸಾಧ್ಯವಾಗುವುದಿಲ್ಲ
  • ಟಿನ್ನಿಟಸ್ (ಕಿವಿಗಳಲ್ಲಿ ರಿಂಗಣಿಸುವುದು)
  • ಸ್ಪಷ್ಟವಾಗಿ ಕೇಳಲು ಫೋನ್ ವಾಲ್ಯೂಮ್ ಹೆಚ್ಚಿಸುವ ಅಗತ್ಯವಿದ್ದರೆ

ಈ ಎಲ್ಲಾ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ, ಇಎನ್‌ಟಿ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ. ನಿಮ್ಮ ಶ್ರವಣ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇ ಎಂದು ಕಂಡುಹಿಡಿಯಲು ವೈದ್ಯರು ನಿಮ್ಮ ಕಿವಿಗಳನ್ನು ಪರೀಕ್ಷಿಸಬಹುದು. ಈ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಗಮನ ನೀಡಿದರೆ, ಹಾನಿಯನ್ನು ತಡೆಯಬಹುದು. ಆರಂಭಿಕ ಹಂತಗಳಲ್ಲಿ, ಔಷಧಿ ಮತ್ತು ಚಿಕಿತ್ಸೆಯಿಂದ ಸುಧಾರಣೆ ಕಂಡುಬರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version