ಮಗು ಹುಟ್ಟಿ ಏಳೇ ದಿನಕ್ಕೆ ಮಾರಾಟಕ್ಕೆ ಮುಂದಾದ ಹೆತ್ತವರು: ದಂಪತಿ ಸೇರಿ ಐವರ ಬಂಧನ – Kannada News | Kolar: Parents Arrested for Selling 7 days Newborn Baby Due to Poverty

ಕೋಲಾರ, ಫೆಬ್ರವರಿ 07: ಮಗು ಆಗಿಲ್ಲ ಅಂತ ಈಗಲೂ ಅದೆಷ್ಟೋ ದಂಪತಿ ಪರದಾಡುತ್ತಾರೆ. ದೇವಸ್ಥಾನ, ಆಸ್ಪತ್ರೆ, ಹರಕೆ ಅಂತ ಪ್ರತಿದಿನ ಸುತ್ತಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಮಗು ಮಾರಾಟ (Sale) ಜಾಲದಲ್ಲಿ ತೊಡಗಿದ್ದು, ಇದೀಗ ಮಗುವನ್ನು (Newborn Baby) ಮಾರಾಟ ಮಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?

ಅವರಿಬ್ಬರು ಗಂಡ-ಹೆಂಡತಿ ಅಲ್ಲ, ಆದರೆ ಲಿಂವಿಗ್ ಟುಗೆದರ್ ರೀತಿ ಸಂಸಾರ ಮಾಡಿಕೊಂಡಿದ್ದವರು. ಆಕೆಗೆ ಈಗಾಗಲೇ ಎರಡು ಮಕ್ಕಳಿದ್ದರು. ಮೊದಲ ಗಂಡನಿಗೆ ಒಂದು ಗಂಡು ಮಗುವಿತ್ತು. ಇನ್ನು ಎರಡನೇ ಗಂಡನಿಗೆ ಒಂದು ಮಗುವಿತ್ತು. ಈ ನಡುವೆ ಮೂರನೇ ಮಗುವನ್ನು ಹಣದ ಆಸೆಗಾಗಿ ಮಾರಾಟ ಮಾಡಲು ಯತ್ನಿಸಿದ ವೇಳೆ ಸಿಕ್ಕಬಿದ್ದಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.

ಇದನ್ನೂ ಓದಿ: ನವಜಾತ ಶಿಶು ರಸ್ತೆಯಲ್ಲಿ ಬಿಟ್ಟುಹೋಗಿದ್ದ ಮಹಿಳೆಗೆ ಜೈಲು ಶಿಕ್ಷೆ: 10 ಸಾವಿರ ರೂ ದಂಡ

ಶ್ರೀನಿವಾಸಪುರ ಪಟ್ಟಣದ ನಿವಾಸಿ ನೀತಾ ಎಂಬಾಕೆಗೆ ಮೊದಲು ಸಂತೋಷ್ ಎಂಬುವನ ಜೊತೆಗೆ ಮದುವೆಯಾಗಿತ್ತು. ಅವನಿಗೆ ಒಂದು ಗಂಡು ಮಗುವಾಗಿತ್ತು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆ ಸಂತೋಷ್​​ನನ್ನು ತೊರೆದಿದ್ದ ನೀತಾ, ರಾಘವೇಂದ್ರ ಜೊತೆಗೆ ಎರಡನೇ ಮದುವೆ ಆಗಿದ್ದಾರೆ. ಈ ವೇಳೆ ರಾಘವೇಂದ್ರನಿಗೆ ಈಗಾಗಲೇ ಒಂದು ಹೆಣ್ಣು ಮಗುವಿತ್ತು. ಈ ವೇಳೆ ನೀತಾ ಗರ್ಭಣಿಯಾಗಿದ್ದಳು. ಬಡತನ ಇದ್ದರೂ ಕೂಡ ಮತ್ತೊಮ್ಮೆ ಗರ್ಭಿಣಿಯಾಗಿದ್ದ ನೀತಾ ಮತ್ತು ರಾಘವೇಂದ್ರಗೆ ಈ ಮಗು ಬೇಡ ಎನ್ನಿಸಿತ್ತು.

ಐವರ ಬಂಧನ

ಈ ವೇಳೆ ನಾರಾಯಣಸ್ವಾಮಿ ಎಂಬಾತ ನನಗೆ ಪರಿಚಯಸ್ಥರೊಬ್ಬರಿಗೆ ಮಕ್ಕಳಿಲ್ಲ, ನಿಮ್ಮ ಮಗು ಕೊಟ್ಟರೆ ಐದು ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದ. ಅದಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಹಾಗೂ ಮಂಜುಳ ದಂಪತಿಗಳಿಗೆ ಕೊಡಿಸಲು ಮಧ್ಯಸ್ಥಿಕೆ ವಹಿಸಿಕೊಂಡಿದ್ದ. ಅದರಂತೆ ಕಳೆದ ಏಳು ದಿನದ ಹಿಂದೆ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವನ್ನು ಒಪ್ಪಂದದಂತೆ ನೀಡಿದ್ದಾರೆ. ಈ ವೇಳೆ ಪೊಲೀಸರಿಗೆ ಮಾಹಿತಿ ತಿಳಿದ ಹಿನ್ನೆಲೆ ಕಳೆದ ರಾತ್ರಿ ಪೊಲೀಸರು ಮಗುವಿನ ಸಹಿತ ಒಟ್ಟು ಐದು ಜನರನ್ನು ಬಂಧಿಸಿದ್ದಾರೆ.

ಇನ್ನು ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯ ನಿವಾಸಿಗಳಾದ ನೀತಾ ಅಲಿಯಾಸ್ ಅನಿತಾ ಮತ್ತು ರಾಘವೇಂದ್ರ ಕಳೆದ ಐದಾರು ವರ್ಷಗಳಿಂದ ಒಟ್ಟಿಗೆ ಸಂಸಾರ ಮಾಡಿಕೊಂಡಿದ್ದರು. ಮೊದಲ ಗಂಡನಿಗೆ ಒಂದು 8 ವರ್ಷದ ಗಂಡು ಮಗನಿದ್ದಾನೆ. ಇನ್ನು ರಾಘವೇಂದ್ರನಿಗೆ ಒಂದು ಐದು ವರ್ಷದ ಹೆಣ್ಣು ಮಗುವಿತ್ತು. ಸದ್ಯ ಅವರಿಗೆ ಬಡತನವಿತ್ತು. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ರಾಘವೆಂದ್ರನಿಗೆ ಮೂರನೇ ಮಗುವನ್ನು ಸಾಕುವಷ್ಟು ಶಕ್ತಿ ಇರಲಿಲ್ಲ, ಹಾಗಾಗಿ ಗಂಡ-ಹೆಂಡತಿ ಇಬ್ಬರು ಮಾತನಾಡಿಕೊಂಡು ಇಬ್ಬರ ಒಪ್ಪಿಗೆ ಮೇರೆಗೆ ಮಗು ಮಾರಾಟಕ್ಕೆ ಮುಂದಾಗಿದ್ದಾರೆ.

ತನ್ನ ಪರಿಚಯಸ್ಥ ಕೊಟ್ರಗೊಳಿ ಗ್ರಾಮದ ನಾರಾಯಣಸ್ವಾಮಿ ಎಂಬುವರ ಮೂಲಕ ಮಗುವನ್ನು ಐದು ಲಕ್ಷ ರೂಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಒಪ್ಪಂದದ ಪ್ರಕಾರವಾಗಿ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಮತ್ತು ಮಂಜುಳ ದಂಪತಿಗೆ ಮಗುವನ್ನು ಹಸ್ತಾಂತರಕ್ಕೆ ಮುಂದಾಗಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಪುರ ಪೊಲೀಸರಿಗೆ ಸಿಕ್ಕ ಮಾಹಿತಿ ಮೇಲೆ ದಾಳಿ ಮಾಡಿದಾಗ ರಾತ್ರಿ 1.30 ರಲ್ಲಿ ಮಾರಾಟ ಮಾಡುತ್ತಿದ್ದ ದಂಪತಿ ಮತ್ತು ಖರೀದಿ ಮಾಡುತ್ತಿದ್ದ ದಂಪತಿ ಹಾಗೂ ಮಧ್ಯವರ್ತಿ ಸೇರಿ ಎಲ್ಲರೂ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಆನೇಕಲ್ ಗೊಲ್ಲಹಳ್ಳಿಯಲ್ಲಿ ದಾರುಣ ಘಟನೆ: ಪೋಷಕರ ನಿರ್ಲಕ್ಷ್ಯದಿಂದ ಜನಿಸಿದ ಕೂಡಲೇ ತ್ರಿವಳಿ ಶಿಶುಗಳು ಸಾವು

ಸದ್ಯ ಪೊಲೀಸರು ಐವರನ್ನು ಬಂಧಿಸುವ ಮೂಲಕ ಮಗುವನ್ನು ರಕ್ಷಣೆ ಮಾಡಿದ್ದು, ಜೊತೆಗೆ 80 ಸಾವಿರ ರೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಲಾಗಿದ್ದು, ಮಗುವನ್ನು ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ವರ್ಷದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾಗರತ್ನ ಹೇಳಿದ್ದಾರೆ.

ಒಟ್ಟಿನಲ್ಲಿ ಬಡತನದ ಹೆಸರಲ್ಲಿ ಹೀಗೆ ಹೆತ್ತವರೇ ಮಕ್ಕಳನ್ನ ಮಾರಾಟ ಮಾಡಲು ಮುಂದಾಗಿರುವುದು ಮಾತ್ರ ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs USA T20 WC Live Score: ಉದ್ಘಾಟನಾ ಸಮಾರಂಭ ಆರಂಭ – Kannada News | India vs USA T20 World Cup 2026 Live Cricket Score IND vs USA Group a Today Match, highlights latest news in Kannada

LIVE NEWS & UPDATES

  • 07 Feb 2026 06:28 PM (IST)

    IND vs USA Live Score: ಸ್ವಲ್ಪ ಹೊತ್ತಿನಲ್ಲಿ ಟಾಸ್

    ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ, ಮತ್ತು ಇಬ್ಬರೂ ನಾಯಕರು ಶೀಘ್ರದಲ್ಲೇ ಟಾಸ್ ಮಾಡಲು ಮೈದಾನಕ್ಕೆ ಇಳಿಯಲಿದ್ದಾರೆ. ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕವಾಗಿರುತ್ತದೆ.

2026 ರ ಟಿ20 ವಿಶ್ವಕಪ್ ಆರಂಭವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡವು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಟೂರ್ನಮೆಂಟ್‌ನ ಮೊದಲ ಪಂದ್ಯವನ್ನು ಆಡುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಭಾರತದ ಎರಡನೇ ಪಂದ್ಯವಾಗಿದೆ.

Published On – Feb 07,2026 6:26 PM

Source link

6 ವರ್ಷದಿಂದ ಒಂದೇ ರೂಮಿನಲ್ಲಿದ್ದು ಈಗ ನಾನು ಬೇಡ ಅಂತಿದ್ದಾಳೆ: ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಿಯಕರ – Kannada News | Love Fraud: Ex Girlfriend Marries Other, Ravi Fights for Justice in Family Court

ಬೆಂಗಳೂರು, ಫೆ.7: ರಾಜ್ಯದಲ್ಲಿ ಹುಡುಗರು ಹುಡುಗಿಯರಿಂದ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇದೀಗ 2009ರಿಂದ ಪ್ರೀತಿಸಿ, ಆರು ವರ್ಷಗಳ ಕಾಲ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದ ಯುವತಿಯೊಬ್ಬಳು ಈಗ ಬೇರೊಬ್ಬರನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಳೆ ಎಂದು ಆರೋಪಿಸಿ ಸಿವಿಲ್ ಇಂಜಿನಿಯರ್ ರವಿ (relationship betrayal case) ಎಂಬುವವರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಯುವತಿ ಮದುವೆಗೆ ಸಿದ್ಧತೆ ನಡೆಸಿದ್ದಾಳೆ, ನನಗೆ ಅನ್ಯಾಯವಾಗಿದೆ ಎಂದು ರವಿ ದೂರಿದ್ದಾರೆ. ರವಿ ಅವರು ಈ ಯುವತಿಯನ್ನು 2009 ರಿಂದ ಪ್ರೀತಿಸುತ್ತಿದ್ದರು. ಇಬ್ಬರೂ 2014ರವರೆಗೆ ಒಂದೇ ಕಾಲೇಜಿನಲ್ಲಿ ಓದಿ, ಎಂ.ಟೆಕ್ ಕೂಡಾ ಒಂದೇ ಕಾಲೇಜಿನಲ್ಲಿ ಪೂರ್ಣಗೊಳಿಸಿ, ನಂತರ ಒಟ್ಟಿಗೆ ಕೆಲಸ ಮಾಡಿದ್ದಾರೆ. 2022ರವರೆಗೂ ಬೆಂಗಳೂರಿನ ದೇವಿ ನಗರದಲ್ಲಿ ಆರು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದರು. 2022ರಲ್ಲಿ ಯುವತಿ ತಮ್ಮ ಮನೆಯಲ್ಲಿ ಮದುವೆಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದಾಳೆ. ರವಿ ಅವರ ಕುಟುಂಬದವರು ಕೂಡ ಮದುವೆ ಮಾತುಕತೆ ನಡೆಸಿದ್ದಾರೆ. ಆದರೆ, ಯುವತಿಯ ತಾಯಿ ಅನಾರೋಗ್ಯದ ಕಾರಣವನ್ನು ನೀಡಿ, ಮದುವೆಯನ್ನು ಮುಂದೂಡಿದ್ದರು. ಆಕೆಗಾಗಿ ಒಂದು ವರ್ಷಗಳಿಂದ ಕಾಯುತ್ತಿದ್ದೇನೆ ಎಂದು ರವಿ ಅವರು ಹೇಳಿದ್ದಾರೆ.

ಯುವತಿಗೆ ಸೆಪ್ಟೆಂಬರ್ 25ರಂದು ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆದಿದೆ. ಕನಕರಾಜು ಎಂಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆದಿದ್ದು, ರವಿ ಅವರು ಯುವತಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಮತ್ತು ಆತನ ತಂದೆಯ ಬಳಿ ನಮ್ಮ ಸಂಬಂಧದ ಬಗ್ಗೆ ತಿಳಿಸಿದ್ದೇನೆ. ಆದರೆ, ಅವರು ರಿಜಿಸ್ಟರ್ ಮ್ಯಾರೇಜ್ ಆಗುವುದಾಗಿ ತಿಳಿಸಿದ್ದಾರೆ ಎಂದು ರವಿ ಹೇಳಿದ್ದಾರೆ. ರವಿ ಅವರು ತಮ್ಮ ಪ್ರೇಯಸಿಯ ವಿರುದ್ಧ ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಸೆಪ್ಟೆಂಬರ್ 28ರಂದು ಅದರ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್​ ಹೇಳಿದೆ. ಇನ್ನು ಯುವತಿ ಹಾಗೂ ಹೊಸ ಹುಡುಗನಿಗೂ ಸಮನ್ಸ್ ಜಾರಿಯಾಗಿದೆ. ಆದರೆ, ಕೋರ್ಟ್ ತೀರ್ಪು ಹೊರಬೀಳುವ ಮುನ್ನವೇ ಯುವತಿ ಸೆಪ್ಟೆಂಬರ್ 20ರಂದು ತಿರುಮಲ ಚೌಟ್ರಿಯಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಕೋರ್ಟ್​ ವಿಚಾರಣೆಗೂ ಮುನ್ನ ಮದುವೆಯಾದರೆ ನಾನು ಸಾಯಬೇಕಾಗುತ್ತದೆ ಎಂದು ರವಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಿಲ್ಲರ್ ಬಿಎಂಟಿಸಿಗೆ ಇನ್ನೆಷ್ಟು ಬಲಿ ಬೇಕು?: ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್

ವಿಡಿಯೋ ಇಲ್ಲಿದೆ ನೋಡಿ:


ಯುವತಿಯ ತಾಯಿಗೆ 1.30 ಲಕ್ಷ ರೂಪಾಯಿ ನೀಡಿದ್ದಲ್ಲದೆ, ಸುದರ್ಶನ್ ಜ್ಯುವೆಲರ್ಸ್‌ನಲ್ಲಿ ಯುವತಿಗೆ ನೆಕ್ಲೇಸ್ ಕೂಡಾ ಕೊಡಿಸಿದ್ದೇನೆ ಎಂದು ರವಿ ಆರೋಪಿಸಿದ್ದಾರೆ. ಈ ಎಲ್ಲಾ ಖರ್ಚುಗಳ ಬಗ್ಗೆ ಸಾಕ್ಷಿಯನ್ನು ನೀಡುತ್ತೇನೆ. “ಒಂದು ಹುಡುಗಿಗೆ ಅನ್ಯಾಯವಾದರೆ ಮಹಿಳಾ ಸಂಘಟನೆಗಳು ಬೆಂಬಲಕ್ಕೆ ನಿಲ್ಲುತ್ತವೆ. ಆದರೆ, ನನಗೆ ಯಾಕಿಲ್ಲ?” ಎಂದು ರವಿ ಪ್ರಶ್ನಿಸಿದ್ದಾರೆ. ನ್ಯಾಯಕ್ಕಾಗಿ ಕರ್ನಾಟಕದ ಯುವಕರಲ್ಲಿ ಮತ್ತು ಸಂಘಟನೆಗಳಲ್ಲಿ ಮನವಿ ಮಾಡಿರುವ ರವಿ, “ನನಗಾದ ಅನ್ಯಾಯಕ್ಕೆ ದಯವಿಟ್ಟು ನ್ಯಾಯ ಕೊಡಿಸಿ” ಎಂದು ಕೇಳಿಕೊಂಡಿದ್ದಾರೆ. ಯುವತಿಯು ಹಿಂದೆ ತಮ್ಮ ಮನೆಯಲ್ಲಿ ನಡೆದ ನಿಶ್ಚಿತಾರ್ಥವನ್ನು ತಾವೇ ಇಷ್ಟಪಡುವುದಾಗಿ ಹೇಳಿ ರದ್ದುಪಡಿಸಿದ್ದರು. ಆದರೆ, ಈಗ ಯಾವುದೇ ಕಾರಣ ನೀಡದೆ ಸಂಬಂಧವನ್ನು ಮುರಿದಿರುವುದು ತುಂಬಾ ನೋವುಂಟು ಮಾಡಿದೆ ಎಂದು ರವಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:10 pm, Sat, 7 February 26

Source link

T20 World Cup 2026: ಬಾಬರ್ ಆಝಂ ಟೆಸ್ಟ್ ಬ್ಯಾಟಿಂಗ್​ಗೆ ಪಾಕ್ ನಾಯಕ ಗರಂ – Kannada News | T20 World Cup 2026: Pakistan Edges Netherlands; Babar Azam’s Slow Batting Under Fire

2026 ರ ಟಿ20 ವಿಶ್ವಕಪ್‌ನ (T20 World Cup 2026) ಮೊದಲ ಪಂದ್ಯ ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ( Pakistan vs Netherlands) ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ, ನೆದರ್‌ಲ್ಯಾಂಡ್ಸ್ ತಂಡವನ್ನು ಕೊನೆಯ ಓವರ್​ನಲ್ಲಿ ಸೋಲಿಸಿತು. ವಾಸ್ತವವಾಗಿ, ಈ ಪಂದ್ಯದ ಮೇಲೆ 18ನೇ ಓವರ್​​ವರೆಗೂ ನೆದರ್ಲ್ಯಾಂಡ್ಸ್ ಹಿಡಿತ ಸಾಧಿಸಿತ್ತು. ಆದರೆ 19ನೇ ಓವರ್​ನಲ್ಲಿ ನೆದರ್ಲ್ಯಾಂಡ್ಸ್ ತಂಡ ಮಾಡಿದ ಎಡವಟ್ಟು, ಪಾಕಿಸ್ತಾನಕ್ಕೆ ವರದಾನವಾಯಿತು. 19 ನೇ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಾಹಿಮ್ ಒಂದೇ ಓವರ್​ನಲ್ಲಿ 24 ರನ್ ಕಲೆಹಾಕಿ ಪಾಕ್ ತಂಡಕ್ಕೆ ಗೆಲುವು ತಂದುಕೊಟ್ಟರು. ಆದಾಗ್ಯೂ ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಸಲ್ಮಾನ್ ಅಘಾ ಮಧ್ಯಮ ಓವರ್​ಗಳಲ್ಲಿ ಬ್ಯಾಟರ್​ಗಳ ನಿಧಾನಗತಿಯ ಬ್ಯಾಟಿಂಗ್‌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು ಎಂದಿದ್ದಾರೆ.

ಪಾಕ್ ತಂಡಕ್ಕೆ ಉತ್ತಮ ಆರಂಭ

ವಾಸ್ತವವಾಗಿ, ಈ ಪಂದ್ಯವು ಆರಂಭದಿಂದಲೂ ಪಾಕಿಸ್ತಾನದ ಕೈಯಲ್ಲಿತ್ತು. ಆದ್ದರಿಂದ ಪಾಕಿಸ್ತಾನ ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ 10 ನೇ ಓವರ್ ನಂತರ ಎಲ್ಲವೂ ಬದಲಾಯಿತು. 12 ನೇ ಓವರ್‌ನ ಮೊದಲ ಎಸೆತದಲ್ಲಿ, ಪಾಕಿಸ್ತಾನ 98 ರನ್‌ಗಳಾಗಿದ್ದಾಗ ಮೂರನೇ ವಿಕೆಟ್ ಪತನವಾಯಿತು. ಈ ವಿಕೆಟ್ ನಂತರ, ಪಂದ್ಯದ ಚಿತ್ರಣ ಬದಲಾಯಿತು. ಏಕೆಂದರೆ ಆ ಓವರ್​ನ ಎರಡನೇ ಎಸೆತದಲ್ಲಿಯೇ ಉಸ್ಮಾನ್ ಖಾನ್ ವಿಕೆಟ್ ಒಪ್ಪಿಸಿದರು. ಹೀಗಾಗಿ ಪಾಕಿಸ್ತಾನ 98 ರನ್‌ಗಳಿಗೆ 4 ನೇ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ಗುರಿ ಕಡಿಮೆ ಇದ್ದುದ್ದರಿಂದ ಪಾಕ್ ತಂಡ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಬಾಬರ್ ಆಝಂ ಅವರ ಆಮೆಗತಿಯ ಬ್ಯಾಟಿಂಗ್‌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.

ಬಾಬರ್ ಆಮೆಗತಿಯ ಬ್ಯಾಟಿಂಗ್

ಟಿ20 ಕ್ರಿಕೆಟ್​ನಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಹೆಸರುವಾಸಿಯಾಗಿರುವ ಬಾಬರ್ ಆಝಂ ಡಚ್ ಬೌಲರ್‌ಗಳ ವಿರುದ್ಧವೂ ರನ್​ಗಾಗಿ ಪರದಾಡಬೇಕಾಯಿತು. ತಮ್ಮ ಇನ್ನಿಂಗ್ಸ್​ನಲ್ಲಿ 18 ಎಸೆತಗಳಲ್ಲಿ ಆಡಿದ ಬಾಬರ್ ಕೇವಲ 15 ರನ್ ಮಾತ್ರ ಕಲೆಹಾಕಿದರು. ಅಂದರೆ ಮೂರು ಓವರ್‌ ಬ್ಯಾಟಿಂಗ್‌ ಮಾಡಿದ ಬಾಬರ್ ಕೇವಲ ಒಂದು ಬೌಂಡರಿ ಬಾರಿಸಿದರು. ಬಾಬರ್ ಅವರ ನಿಧಾನಗತಿಯ ಬ್ಯಾಟಿಂಗ್ ಪಾಕಿಸ್ತಾನವನ್ನು ಒತ್ತಡಕ್ಕೊಳಗಾಗುವಂತೆ ಮಾಡಿತು. ಏಕೆಂದರೆ ಬಾಬರ್ ಅವರ ಈ ಆಮೆಗತಿಯ ಬ್ಯಾಟಿಂಗ್​ನಿಂದ ರನ್‌ಗಳು ಮತ್ತು ಎಸೆತಗಳ ನಡುವಿನ ಅಂತರ ಹೆಚ್ಚಾಯಿತು. ಇದರ ನಡುವೆ ತಂಡದ ಸ್ಕೋರ್ 100 ರ ಗಡಿ ದಾಟಿದ ಕೂಡಲೇ ಬಾಬರ್ ಔಟಾದರು. ಇದರಿಂದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಯಿತು. ಅಂತಿಮವಾಗಿ ಪಾಕ್ ತಂಡ ಗೆದ್ದಿತ್ತಾದರೂ ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಕೂಡ ಬಾಬರ್ ಆಝಂ ಅವರ ಇನ್ನಿಂಗ್ಸ್‌ ಬಗ್ಗೆ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.

ಬಲಿಷ್ಠ ತಂಡಗಳನ್ನು ಮಣಿಸಿ ಟಿ20 ವಿಶ್ವಕಪ್​ನಿಂದ ಹೊರಹಾಕಿದ ದುರ್ಬಲ ತಂಡಗಳಿವು

ಪಾಕ್ ನಾಯಕ ಹೇಳಿದ್ದೇನು?

ಈ ಬಗ್ಗೆ ಪಂದ್ಯ ಪ್ರಸ್ತುತಿಯಲ್ಲಿ ಮಾತನಾಡಿದ ಅಘಾ, ‘ನಾವು ಮೊದಲ 10 ಓವರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೇವು. ಆದರೆ ಮಧ್ಯಮ ಓವರ್​ಗಳಲ್ಲಿ ಓವರ್​ಗೆ ಐದು, ಆರು, ಎರಡು, ಮೂರು ರನ್ ಕಲೆಹಾಕಿದರೆ ಇತರರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದರೆ ಕ್ರೆಡಿಟ್ ಫಹೀಮ್‌ಗೆ ಸಲ್ಲುತ್ತದೆ. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು’ ಎಂದಿದ್ದಾರೆ. ಮಧ್ಯಮ ಓವರ್​ಗಳಲ್ಲಿ ಬಾಬರ್ ಆಝಂ ನಿದಾನಗತಿಯ ಬ್ಯಾಟಿಂಗ್ ಮಾಡಿದ್ದಕ್ಕೆ ಪಾಕ್ ನಾಯಕ ಪರೋಕ್ಷವಾಗಿ ಅಸಮಾಧಾನಗೊಂಡಿದ್ದಾರೆ ಎಂಬುದು ಸ್ಪಷ್ಟವಾದಂತ್ತಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:28 pm, Sat, 7 February 26

Source link

ಎಲೆಕ್ಟ್ರಾನಿಕ್ಸ್ ಘಟಕಗಳ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ರೂ. ಅನುದಾನ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ – Kannada News | Karnataka got 10,000 crore rupees investment in electronics component manufacturing in Budget Ashwini Vaishnaw says

ಬೆಂಗಳೂರು, ಫೆಬ್ರವರಿ 7: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw), ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಕ್ಷೇತ್ರದಲ್ಲಿ ನಾವು ಕಳೆದ ದಶಕದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ನಮ್ಮ ಎಲೆಕ್ಟ್ರಾನಿಕ್ಸ್ ಉತ್ಪಾದನೆ 6 ಪಟ್ಟು ಬೆಳೆದಿದೆ. ಎಲೆಕ್ಟ್ರಾನಿಕ್ಸ್ ರಫ್ತು 8 ಪಟ್ಟು ಹೆಚ್ಚಾಗಿದೆ. ಇಂದು ನಾವು ವಿಶ್ವದ ಎಲೆಕ್ಟ್ರಾನಿಕ್ಸ್‌ನ ಅಗ್ರ 3 ತಯಾರಕರಲ್ಲಿ ಒಬ್ಬರಾಗಿದ್ದೇವೆ. 46 ಘಟಕಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಕರ್ನಾಟಕವು ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕೆಯಲ್ಲಿ ಸುಮಾರು 10,000 ಕೋಟಿ ರೂ.ಗಳ ಹೂಡಿಕೆಯನ್ನು ಪಡೆದುಕೊಂಡಿದೆ. ಈ ಬಾರಿಯ ಬಜೆಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕೆಗೆ 22,000 ಕೋಟಿ ರೂಪಾಯಿಗಳಿಂದ 40,000 ಕೋಟಿ ರೂಪಾಯಿಗಳಿಗೆ ಅನುದಾನ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ವರ್ಷದ ಬಜೆಟ್ ಅನ್ನು 2047ರ ಮಾರ್ಗಸೂಚಿಯಾಗಿ ಮಂಡಿಸಲಾಗಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ನಾವು ಸ್ಪಷ್ಟ ಗುರಿಯನ್ನು ಹೊಂದಿದ್ದೇವೆ. ಹೀಗಾಗಿ, ಈ ವರ್ಷದ ಬಜೆಟ್ 2047ರ ಮಾರ್ಗಸೂಚಿಯಾಗಿದೆ. ಬಹಳ ಸಮಗ್ರ ರೀತಿಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2047ರ ಮಾರ್ಗಸೂಚಿಯನ್ನು ರೂಪಿಸಿದ್ದಾರೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾ ನಮ್ಮ ದೇಶದಲ್ಲಿ ಉತ್ಪಾದನೆಗೆ ಬಹಳ ಮುಖ್ಯವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈಗ ಈ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾನ್ ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರಮುಖ ಮಾರ್ಗವನ್ನು ಘೋಷಿಸಿದ್ದಾರೆ. ಮುಂದಿನ ಸುತ್ತಿನ ಸೆಮಿಕಂಡಕ್ಟರ್ ಮಿಷನ್ ಸೆಮಿಕಾನ್ 2.0 ಅನ್ನು ಶೀಘ್ರದಲ್ಲೇ ರೂಪಿಸಲಾಗುವುದು, ಅದನ್ನು ಕ್ಯಾಬಿನೆಟ್ ಅನುಮೋದಿಸಲಿದೆ ಎಂದು ಅವರು ಘೋಷಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಟಮಿನ್ ಕೊರತೆಯಲ್ಲ, ಮೂಳೆಗೆ ಸಂಬಂಧ ಪಟ್ಟ ಕಾಯಿಲೆಯೂ ಅಲ್ಲ; ಹಾಗಿದ್ರೆ ಯಾಕೆ ಬರುತ್ತೆ ಸ್ನಾಯು ನೋವು? – Kannada News | Muscle Pain Relief: Home Remedies and Medical Treatments

ಇತ್ತೀಚಿನ ದಿನಗಳಲ್ಲಿ ಸ್ನಾಯು ನೋವು (Muscle Pain) ಹೆಚ್ಚಾಗಿ ಎಲ್ಲರಲ್ಲಿಯೂ ಕಂಡುಬರುತ್ತಿರುವುದನ್ನು ಗಮನಿಸಿರಬಹುದು. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚಾಗಿರುತ್ತಾರೆ. ಕೆಲವರು ಈ ರೀತಿ ಕಂಡು ಬರುವ ನೋವು ವಿಟಮಿನ್ ಕೊರತೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಕಂಡು ಬರುವ ಸ್ನಾಯು ನೋವು ಯಾವುದೇ ವಿಟಮಿನ್ ಕೊರತೆ ಅಥವಾ ಮೂಳೆಗೆ ಸಂಬಂಧ ಪಟ್ಟ ಕಾಯಿಲೆ ಆಗಿರುವುದಿಲ್ಲ. ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರವೂ ಕೂಡ ಈ ರೀತಿ ಸಮಸ್ಯೆ ಮುಂದುವರಿದರೆ ಅದಕ್ಕೆ ಕಾರಣಗಳು ಮತ್ತು ತಡೆಗಟ್ಟುವ ವಿಧಾನಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಾ. ಅಖಿಲೇಶ್ ಅವರು ಹೇಳುವ ಪ್ರಕಾರ, ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ. ಅವುಗಳಲ್ಲಿ ಒಂದು ಪ್ರಮುಖ ಕಾರಣವೆಂದರೆ ಒಂದೇ ಜಾಗದಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಈ ರೀತಿ ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದಿರುವುದು ಸ್ನಾಯು ನೋವಿಗೆ ಕಾರಣವಾಗುತ್ತದೆ. ಲ್ಯಾಪ್‌ಟಾಪ್‌ ಅಥವಾ ಫೋನ್‌ಗಳಲ್ಲಿ ಕೆಲಸ ಮಾಡುವಾಗ ನಿರಂತರವಾಗಿ ಕುತ್ತಿಗೆ ಬಾಗಿರುವುದು ಬೆನ್ನಿನ ಮೇಲೆ ಒತ್ತಡ ಬೀಳುತ್ತದೆ. ಇದು ಸಹ ನೋವಿಗೆ ಕಾರಣವಾಗುತ್ತದೆ. ಜೊತೆಗೆ ವಿಟಮಿನ್‌ಗಳು ಡಿ ಮತ್ತು ಕ್ಯಾಲ್ಸಿಯಂ ಸಾಮಾನ್ಯ ಮಟ್ಟದಲ್ಲಿದ್ದರೂ ಸಹ, ಈ ನೋವು ಕಡಿಮೆಯಾಗದೆಯೇ ಉಳಿಯುತ್ತದೆ.

ಮಾನಸಿಕ ಒತ್ತಡವೂ ಒಂದು ಕಾರಣವಾಗಿರಬಹುದು:

ಕೆಲವೊಮ್ಮೆ ಮಾನಸಿಕ ಒತ್ತಡ ನೇರವಾಗಿ ಅಲ್ಲದಿದ್ದರೂ ಸ್ನಾಯು ನೋವಿಗೆ ಕಾರಣವಾಗಬಹುದು. ಮಾನಸಿಕ ಒತ್ತಡವು ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಇದು ಸ್ನಾಯುಗಳನ್ನು ನಿರಂತರವಾಗಿ ಬಿಗಿಯಾಗಿರಿಸುವುದರಿಂದ ನೋವು ಉಂಟಾಗುತ್ತದೆ. ಇನ್ನು, ಮಾನಸಿಕ ಒತ್ತಡದ ಜೊತೆಗೆ, ನಿದ್ರೆ ಸರಿಯಾಗಿ ಆಗದಿದ್ದರೆ ಅದು ಕೂಡ ನೋವನ್ನು ಉಂಟುಮಾಡಬಹುದು.

ಇದನ್ನೂ ಓದಿ: ನೀವು ಕೆಲಸ ಮಾಡುವಾಗ ಕುಳಿತುಕೊಳ್ಳುವಂತಹ ಭಂಗಿಯಿಂದಲೂ ಬರಬಹುದು ಬೆನ್ನು ನೋವು ಎಚ್ಚರಿಕೆ ನೀಡಿದ ಡಾ ಅಜಯ್‌ ಹೆಗ್ಡೆ

ನಿರ್ಜಲೀಕರಣ:

ವಿಟಮಿನ್ ಕೊರತೆ ಇಲ್ಲದಿದ್ದರೂ, ದೇಹದಲ್ಲಿ ನೀರಿನ ಕೊರತೆಯಿಂದಾಗಿ ಸ್ನಾಯು ನೋವು ಉಂಟಾಗಬಹುದು. ನೀರಿನ ಕೊರತೆಯು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಅತಿಯಾಗಿ ಬೆವರುವವರು, ಕ್ರೀಡಾಪಟುಗಳು ಸ್ನಾಯು ನೋವಿನ ಸಮಸ್ಯೆಗಳನ್ನು ಹೆಚ್ಚಾಗಿ ಎದುರಿಸುತ್ತಾರೆ. ಅಂತವರು ಕ್ಯಾಲ್ಸಿಯಂ, ವಿಟಮಿನ್‌ ಅಥವಾ ಪ್ರೋಟೀನ್‌ನ ಸೇವನೆಯನ್ನು ಸರಿಯಾಗಿ ಮಾಡುತ್ತಿದ್ದರೂ ಕೂಡ ನಿರ್ಜಲೀಕರಣದಿಂದ ಸ್ನಾಯು ನೋವು ಉಂಟಾಗುತ್ತದೆ.

ಸ್ನಾಯು ನೋವನ್ನು ತಡೆಗಟ್ಟಲು ಸಲಹೆಗಳು:

  • ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಒಂದು ಗಂಟೆಗಿಂತ ಹೆಚ್ಚು ಕಾಲ ಒಂದೇ ಕಡೆಯಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ.
  • ಪ್ರತಿನಿತ್ಯ ಲಘು ವ್ಯಾಯಾಮ ಮಾಡುವುದನ್ನು ಮರೆಯಬೇಡಿ.
  • ಹಗಲಿನಲ್ಲಿ ಕನಿಷ್ಠ 7 ರಿಂದ 8 ಗ್ಲಾಸ್ ನೀರು ಕುಡಿಯಿರಿ.
  • 7 ರಿಂದ 8 ಗಂಟೆ ಸರಿಯಾಗಿ ನಿದ್ದೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬಕಾರಿ ಹಗರಣದ ಆರೋಪದ ನಡುವೆಯು ಆರ್.ಬಿ. ತಿಮ್ಮಾಪುರಗೆ ಸಿಎಂ ಭಾಗ್ಯ?: ‘ಕೊರವಂಜಿ’ ಭವಿಷ್ಯಕ್ಕೆ ಸಚಿವ ಫುಲ್​​​ ಖುಷ್ – Kannada News | Viral Video: Student Predicts CM Post for Thimmapur, A Boost Amid Excise Probe?

 ಬಾಗಲಕೋಟೆ , ಫೆ.7: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಚರ್ಚೆಯ ನಡುವೆಯೂ ಒಂದು ತಮಾಷೆಯ ಮತ್ತು ಕುತೂಹಲದ ಸುದ್ದಿಯೊಂದು ಸೋಶಿಯಲ್​​​​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಒಂದೆಡೆ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಬಿ. ತಿಮ್ಮಾಪುರ (R.B. Thimmapur) ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ‘ಕೊರವಂಜಿ’ ವಿದ್ಯಾರ್ಥಿನಿಯ ಭವಿಷ್ಯವಾಣಿ ಸಚಿವರಿಗೆ ಹೊಸ ಹುರುಪು ನೀಡಿದಂತಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಖಾಸಗಿ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ‘ಕೊರವಂಜಿ’ ವೇಷ ಧರಿಸಿ ವೇದಿಕೆಯ ಮೇಲಿದ್ದ ಸಚಿವ ತಿಮ್ಮಾಪುರ ಅವರನ್ನು ಕಂಡ ವಿದ್ಯಾರ್ಥಿನಿ ನಿಮಗೆ ಮುಖ್ಯಮಂತ್ರಿ ಆಗುವ ಭಾಗ್ಯ ಇದೆ ಎಂದು  ತನ್ನ ಪಾತ್ರದ ಶೈಲಿಯಲ್ಲೇ ಮಾತನಾಡಿದ್ದಾಳೆ.

“ಬರ್ರಿ ಸಾಹೇಬ್ರ ಮುಂದಕ್ಕೆ ಬರ್ರಿ… ನೀವು ಮಂತ್ರಿ ಆಗ್ತೀರಿ ಅಂತ ನಮ್ಮ ಚಿಕ್ಕಮ್ಮ ಹೇಳಿದ ಖಣಿ ನಿಜ ಆಗೈತಿ.” “ಈಗ ನಾನು ಹೇಳ್ತೀನಿ ಕೇಳ್ರಿ, ಮುಂದೆ ನೀವು ರಾಜ್ಯದ ಮುಖ್ಯಮಂತ್ರಿ ಆಗುವ ಸುಯೋಗ ಐತಿ!” “ಇದನ್ನು ನಾನು ಹೇಳ್ತಿಲ್ಲ, ಗುಡ್ಡದ ಯಲ್ಲವ್ವ ನನ್ನ ಬಾಯಿಂದ ನುಡಿಸ್ತಾ ಇದ್ದಾಳೆ” ಎಂದು ಹೇಳಿ ಸಚಿವರಿಂದ ದಕ್ಷಿಣೆಯನ್ನೂ ಪಡೆದಳು. ವಿದ್ಯಾರ್ಥಿನಿಯ ಈ ಮಾತಿನಿಂದ ಸಚಿವರು ಫುಲ್ ಖುಷಿಯಾಗಿದ್ದು, ಆ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. “ಬಡವರ ಬಂಧು, ಶಿಕ್ಷಣ ಪ್ರೇಮಿ” ಎಂದು ವಿದ್ಯಾರ್ಥಿನಿ ಹೊಗಳಿದ್ದಕ್ಕೆ ಸಚಿವರು ನಗುನಗುತ್ತಲೇ ದಕ್ಷಿಣೆ ನೀಡಿ ಹರಸಿದ್ದಾರೆ.

ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ 2500 ಕೋಟಿ ರೂ. ಹಗರಣ, ಅಕ್ರಮದ ಹಣ ಅಸ್ಸಾಂ ಚುನಾವಣೆಗೆ ಬಳಕೆ: ಆರ್ ಅಶೋಕ್ ಗಂಭೀರ ಆರೋಪ

ವಿಡಿಯೋ ಇಲ್ಲಿದೆ ನೋಡಿ:

ಪ್ರಸ್ತುತ ಸಚಿವರು ಅಬಕಾರಿ ಇಲಾಖೆಯ 6,000 ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿದ್ದಾರೆ. ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಪಟ್ಟು ಹಿಡಿದು ಸದನದಲ್ಲಿ ಹಾಸಿಗೆ ಹಾಸಿ ಮಲಗಿ ಪ್ರತಿಭಟನೆ ಮಾಡುತ್ತಿರುವ ಈ ಹೊತ್ತಿನಲ್ಲಿ, ಈ ವಿಡಿಯೋ ವೈರಲ್ ಆಗಿರುವುದು ಚರ್ಚೆಗೆ ಕಾರಣವಾಗಿದೆ. ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗಾಗಿ ಸುಮಾರು 600 ಕೋಟಿ ರೂ. ಗೂ ಅಧಿಕ ಹಣ ಸಂಗ್ರಹಿಸಲಾಗಿದೆ ಮತ್ತು ಮದ್ಯದ ಲೈಸೆನ್ಸ್ ನೀಡಲು ಭಾರಿ ಲಂಚ ಪಡೆಯಲಾಗಿದೆ ಎಂದು ಮದ್ಯ ವ್ಯಾಪಾರಿಗಳು ರಾಜ್ಯಪಾಲರಿಗೂ ದೂರು ನೀಡಿದ್ದರು.”ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಇದು ಪ್ರತಿಪಕ್ಷಗಳ ರಾಜಕೀಯ ಪಿತೂರಿ” ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಕೆಲವು ಅಧಿಕಾರಿಗಳ ವಿರುದ್ಧ ಆಂತರಿಕ ವಿಚಾರಣೆ ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:13 pm, Sat, 7 February 26

Source link

Propose Day Gift Ideas: ನಿಮ್ಮ ಸಂಗಾತಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಪ್ರಪೋಸ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಿ – Kannada News | Propose Day Gift Ideas: Make Propose Day special by giving these gifts to your partner

ಪ್ರಪೋಸ್ ಡೇಯನ್ನು (Propose Day) ಫೆಬ್ರವರಿ 8 ರಂದು ಆಚರಿಸಲಾಗುತ್ತದೆ, ಇದು ಪ್ರೇಮಿಗಳ ವಾರದ ಎರಡನೇ ದಿನ. ಈ ದಿನವನ್ನು ಪ್ರೀತಿಯನ್ನು ವ್ಯಕ್ತಪಡಿಸಲು ಅತ್ಯಂತ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ವಿಶೇಷ ದಿನದಂದು ಜನ ತಮ್ಮ ಜೀವನ ಸಂಗಾತಿಗೆ ಉಂಗುರ ತೊಡಿಸುವ ಮೂಲಕ ರೋಸ್‌ ನೀಡುವ ಮೂಲಕ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ತಾವು ಇಷ್ಟಪಟ್ಟ ಹುಡುಗಿಗೆ ಇದೇ ದಿನ ಧೈರ್ಯದಿಂದ ಪ್ರಪೋಸ್‌ ಮಾಡುತ್ತಾರೆ. ಇಂತಹ ಸುಂದರ ದಿನವನ್ನು ಲೈಫ್‌ಲಾಂಗ್‌ ಸ್ಮರಣೀಯವಾಗಿಸಲು ನೀವು ಇಷ್ಟಪಡುವವರಿಗೆ ಅರ್ಥಪೂರ್ಣ ಗಿಫ್ಟ್‌ಗಳನ್ನು ಸಹ ನೀಡಬಹುದು. ಪ್ರಪೋಸ್‌ ಡೇ ದಿನ ನಿಮ್ಮ ಸಂಗಾತಿಗೆ ಯಾವ ವಿಶೇಷ ಗಿಫ್ಟ್‌ ನೀಡಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಪೋಸ್‌ ಡೇಯಂದು ನಿಮ್ಮ ಸಂಗಾತಿಗಾಗಿ ಈ ಉಡುಗೊರೆಗಳನ್ನು ನೀಡಿ:

ಉಂಗುರ ಮತ್ತು ಟೆಡ್ಡಿ ಬೇರ್: ಪ್ರಪೋಸ್‌ ಡೇ ದಿನ ನೀವು  ನಿಮ್ಮ ಗೆಳತಿಗೆ ಮದುವೆ ಪ್ರಸ್ತಾಪ ಮಾಡಲು ಯೋಜಿಸುತ್ತಿದ್ದರೆ, ಅವಳಿಗೆ ಉಂಗುರ ಮಾತ್ರವಲ್ಲದೆ ಟೆಡ್ಡಿ ಬೇರ್ ಕೂಡನೀಡಬಹುದು. ಹೆಚ್ಚಿನ ಹುಡುಗಿಯರು ಟೆಡ್ಡಿ ಬೇರ್‌ಗಳನ್ನು ಇಷ್ಟಪಡುತ್ತಾರೆ, ಅವರು ಅವುಗಳನ್ನು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಹೀಗಿರುವಾಗ ಮುದ್ದಾದ ಟೆಡ್ಡಿಬೇರ್‌ ಅನ್ನು ಗಿಫ್ಟ್‌ ಆಗಿ ನೀಡಿದ್ರೆ, ಆ ಮುದ್ದು ಗೊಂಬೆಯನ್ನು ನೋಡಿ ನಿಮ್ಮನ್ನೇ ನೆನಪಿಸಿಕೊಳ್ಳುತ್ತಾರೆ.

ಪುಷ್ಪಗುಚ್ಛ: ನೀವು ಹೂಗುಚ್ಛ ನೀಡುವ ಮೂಲಕ ಪ್ರಪೋಸ್ ಡೇ ಅನ್ನು ಇನ್ನಷ್ಟು ವಿಶೇಷವಾಗಿ ಆಚರಿಸಬಹುದು. ಅನೇಕ ಹುಡುಗರು ಮತ್ತು ಹುಡುಗಿಯರು ಉಡುಗೊರೆಗಳಿಗಿಂತ ಹೂಗುಚ್ಛಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ, ಅವರನ್ನು ಸಂತೋಷಪಡಿಸಲು ನೀವು ಹೂಗುಚ್ಛದ ಜೊತೆಗೆ ಒಂದು ಕಾರ್ಡ್ ಅನ್ನು ಸಹ ನೀಡಬಹುದು.

ರಿಂಗ್: ಪ್ರಪೋಸ್ ಮಾಡುವಾಗ ನೀವು ನಿಮ್ಮ ಸಂಗಾತಿಗೆ ಉಂಗುರವನ್ನೂ ತೊಡಿಸಬಹುದು. ಹೆಚ್ಚಿನ ಹುಡುಗಿಯರು ಇದನ್ನು ಇಷ್ಟಪಡುತ್ತಾರೆ. ಅಲ್ಲದೆ ಮದುವೆ ಪ್ರಪೋಸ್ ಮಾಡಲು ಸಹ ಉಂಗುರ ಅತ್ಯಂತ ರೋಮ್ಯಾಂಟಿಕ್ ಉಡುಗೊರೆಯಾಗಿದೆ. ಸುಂದರವಾದ ಉಂಗುರವು ನಿಮ್ಮ ಪ್ರೀತಿ ಮತ್ತು ಬದ್ಧತೆಯನ್ನು ತೋರಿಸುತ್ತದೆ.

ಚಾಕೊಲೇಟ್: ಪ್ರಪೋಸ್ ದಿನದಂದು, ನಿಮ್ಮ ಸಂಗಾತಿಗೆ ಚಾಕೊಲೇಟ್‌ಗಳನ್ನು ನೀಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಹೆಚ್ಚಿನ ಹುಡುಗಿಯರು ದುಬಾರಿ ಉಡುಗೊರೆಗಳಿಗಿಂದ ಇಂತಹ ಸಣ್ಣಪುಟ್ಟ ಗಿಫ್ಟ್‌ಗಳನ್ನು ತುಂಬಾನೇ ಇಷ್ಟಪಡುತ್ತಾರೆ. ಹಾಗಿರುವಾಗ ನೀವು ನಿಮ್ಮ ಹುಡುಗಿಗೆ ಚಾಕೊಲೇಟ್‌ ಗಿಫ್ಟ್‌ ನೀಡಬಹುದು.

ಇದನ್ನೂ ಓದಿ: ಪ್ರಪೋಸ್‌ ಡೇ ಯಾವಾಗ? ಪ್ರೇಮಿಗಳ ಈ ಮಹತ್ವದ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಬ್ರೇಸ್ಲೆಟ್: ಪ್ರಪೋಸ್‌ ಡೇ ದಿನ ನೀವು ನಿಮ್ಮ ಸಂಗಾತಿಗೆ ಬ್ರೇಸ್ಲೆಟ್‌ ಕೂಡ ಉಡುಗೊರೆಯಾಗಿ ನೀಡಬಹುದು. ಬ್ರೇಸ್ಲೆಟ್‌ ಯಾವಾಗಲೂ ಅವರ ಜೊತೆಯಲ್ಲಿಯೇ ಇರುತ್ತದೆ. ಇದು ಅವರಿಗೆ ನೀವು ಅವರ ಜೊತೆ ಸದಾ ಇರುತ್ತೀರಿ ಎಂಬ ಭಾವನೆಯನ್ನು ಮೂಡಿಸುತ್ತದೆ.

ಮೇಕಪ್ ಕಿಟ್: ನೀವು ನಿಮ್ಮ ಹುಡುಗಿಗೆ ಮೇಕಪ್‌ ಕಿಟ್‌ ಉಡುಗೊರೆಯಾಗಿ ನೀಡಬಹುದು. ಹುಡುಗಿಯರು ಸಾಮಾನ್ಯವಾಗಿ ಮೇಕಪ್ ಅನ್ನು ತುಂಬಾ ಇಷ್ಟಪಡುತ್ತಾರೆ. ಆದ್ದರಿಂದ, ಹೊಸ ಮೇಕಪ್ ಕಿಟ್ ಮತ್ತು ಗ್ರೂಮಿಂಗ್ ಕಿಟ್ ಕೊಟ್ಟರೆ ಖಂಡಿತವಾಗಿಯೂ ಅವರು ಅದನ್ನು ಇಷ್ಟಪಡುತ್ತಾರೆ.

ಕಸ್ಟಮೈಸ್ ಮಾಡಿದ ಉಡುಗೊರೆ: ಇತ್ತೀಚಿನ ದಿನಗಳಲ್ಲಿ ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ನೀಡುವ ಪ್ರವೃತ್ತಿ ಗಮನಾರ್ಹವಾಗಿ ಹೆಚ್ಚಿದೆ. ನೀವು ಈ ಉಡುಗೊರೆಗಳನ್ನು ಪರಸ್ಪರರ ಫೋಟೋಗಳು ಮತ್ತು ಹೆಸರುಗಳೊಂದಿಗೆ ಕಸ್ಟಮೈಸ್ ಮಾಡಬಹುದು. ಅಲ್ಲದೆ ನಿಮ್ಮ ಕೈಯಾರೆ ಬರೆದ ಲವ್‌ ಲೆಟರ್‌ಗಳನ್ನು ಸಹ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಕಾರು ಖರೀದಿಸಿದ ವಸಿಷ್ಠ-ಹರಿಪ್ರಿಯಾ: ಬೆಲೆ ಎಷ್ಟು ಲಕ್ಷ? – Kannada News | Haripriya And Vasishta Simha purchased a new Luxury car here is the details

ವಸಿಷ್ಠ ಸಿಂಹ ಮತ್ತು ಹರಿಪ್ರಿಯ (Haripriya) ಅವರು ಸ್ಯಾಂಡಲ್​​ವುಡ್​​ನ ಕ್ಯೂಟ್ ಜೋಡಿಗಳಲ್ಲಿ ಒಂದು. ಪ್ರೀತಿಸಿ ಮದುವೆ ಆದ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಇದೀಗ ಒಂದು ಮುದ್ದಾದ ಮುಗುವಿನ ಪೋಷಕರು ಸಹ ಆಗಿದ್ದಾರೆ. ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ಈ ಜೋಡಿ ಇದೀಗ ತಮ್ಮ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಈ ಜೋಡಿ ಹೊಸ ಐಶಾರಾಮಿ ಕಾರೊಂದನ್ನು ಈ ಜೋಡಿ ಖರೀದಿ ಮಾಡಿದೆ. ದುಬಾರಿ ಬೆಲೆಯ ಈ ಕಾರು ಸಾಕಷ್ಟು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ಟೊಯೊಟಾ ಇನ್ನೊವಾ ಹೈಕ್ರಾಸ್ ಕಾರನ್ನು ಖರೀದಿ ಮಾಡಿದ್ದಾರೆ. ಹೊಸ ಕಾರಿನ ಡೆಲಿವರಿ ಪಡೆಯುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಶೋರೂಮ್‌ನಲ್ಲಿ ದಂಪತಿಗಳು ಕೇಕ್ ಕತ್ತರಿಸಿ, ಹೊಸ ವಾಹನವನ್ನು ಬರಮಾಡಿಕೊಂಡಿದ್ದಾರೆ. ಬಿಳಿ ಬಣ್ಣದ ಈ ಹೊಸ ಕಾರಿನೊಂದಿಗೆ ಈ ಜೋಡಿ ಫೋಸ್ ನೀಡಿದ್ದು, ಮಗುವನ್ನು ಸಹ ಕಾರಿನ ಮೇಲೆ ಕೂರಿಸಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಅಭಿಮಾನಿಗಳು “ಹೊಸ ಅತಿಥಿಯ ಆಗಮನಕ್ಕೆ ಅಭಿನಂದನೆಗಳು” ಎಂದು ಶುಭ ಹಾರೈಸುತ್ತಿದ್ದಾರೆ. ಕಾರಿನ ಡೆಲಿವರಿ ವೇಳೆ ವಿವಾ ಟೊಯೊಟಾದ ಸಿಬ್ಬಂದಿಯ ಸಹಾಯಕ್ಕೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಧನ್ಯವಾದ ಹೇಳಿದ್ದಾರೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಖರೀದಿ ಮಾಡಿರುವ ಟೊಯೋಟಾ ಇನ್ನೋವಾ ಹೈಕ್ರಾಸ್ ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಎಂಪಿವಿ (MPV) ಮಾದರಿಯಾಗಿದೆ. ಈ ಜೋಡಿಯು ಹೈಕ್ರಾಸ್​ನ ಜೆಡ್​​ಎಕ್ಸ್ ಮಾದರಿಯನ್ನು ಖರೀದಿ ಮಾಡಿದ್ದು, ಈ ಕಾರು ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯುತ್ತಮ ಮೈಲೇಜ್ ಮತ್ತು ಪರಿಸರ ಸ್ನೇಹಿ ಚಾಲನೆಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಸುಮಾರು ₹24 ಲಕ್ಷದಿಂದ ₹40 ಲಕ್ಷದವರೆಗೆ (ವೇರಿಯೆಂಟ್ ಆಧಾರದ ಮೇಲೆ) ಇರಲಿದೆ. ಈಗ ಹರಿಪ್ರಿಯ-ವಸಿಷ್ಠ ಖರೀದಿ ಅವರು ಟಾಪೆಂಡ್ ಮಾದರಿ ಕಾರನ್ನೇ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ

ಹೈಬ್ರೀಡ್ ಎಂಜಿನ್, ಅತ್ಯುತ್ತಮ ಮೈಲೇಜ್, ಅತ್ಯುತ್ತಮ ಪವರ್, ಪನೋರಮಿಕ್ ಸನ್‌ರೂಫ್, ಜೆಬಿಎಲ್ ಸ್ಪೀಕರ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರು ಹೊಂದಿದೆ. ಕುಟುಂಬ ಟ್ರಾವೆಲ್ ಮಾಡಲು ಅತ್ಯುತ್ತಮ ಕಾರು ಎಂಬ ಖ್ಯಾತಿ ಹೈಕ್ರಾಸ್​​ನದ್ದು. ಈ ಹಿಂದೆ ಸುಮಾರು ₹1.4 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಜಿಎಲ್‌ಇ ಕಾರನ್ನು ಖರೀದಿಸಿದ್ದ ಈ ಜೋಡಿ, ಈಗ ಲಾಂಗ್ ಡ್ರೈವ್ ಮತ್ತು ಕುಟುಂಬದ ಹಿರಿಯರೊಂದಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಈ ಏಳು ಆಸನಗಳ ಸುಸಜ್ಜಿತ ಇನ್ನೋವಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ – Kannada News | PM Modi receives warm welcome by Malaysian PM Anwar Ibrahim after arriving in Kuala Lumpur

ಕೌಲಾಲಂಪುರ, ಫೆಬ್ರವರಿ 7: 2 ದಿನಗಳ ಭೇಟಿಗಾಗಿ ಮಲೇಷ್ಯಾಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಆತ್ಮೀಯ ಸ್ವಾಗತ ದೊರಕಿದೆ. ಪ್ರಧಾನಿ ಮೋದಿಗೆ (PM Modi) ಅಪ್ಪುಗೆಯ ಮೂಲಕ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಆತ್ಮೀಯವಾಗಿ ಸ್ವಾಗತಿಸಿದರು. ಭಾರತ-ಮಲೇಷ್ಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಈ ಭೇಟಿಯು ಮಹತ್ವದ ಹೆಜ್ಜೆಯಾಗಿದೆ. ಈ ಭೇಟಿಯ ವೇಳೆ ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸುವುದು, ತಂತ್ರಜ್ಞಾನ ಸಹಕಾರವನ್ನು ಆಳಗೊಳಿಸುವುದು, ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಸಮನ್ವಯದ ಕುರಿತು ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version