ವಿಟಮಿನ್ ಕೊರತೆಯಲ್ಲ, ಮೂಳೆಗೆ ಸಂಬಂಧ ಪಟ್ಟ ಕಾಯಿಲೆಯೂ ಅಲ್ಲ; ಹಾಗಿದ್ರೆ ಯಾಕೆ ಬರುತ್ತೆ ಸ್ನಾಯು ನೋವು? – Kannada News | Muscle Pain Relief: Home Remedies and Medical Treatments

ಇತ್ತೀಚಿನ ದಿನಗಳಲ್ಲಿ ಸ್ನಾಯು ನೋವು (Muscle Pain) ಹೆಚ್ಚಾಗಿ ಎಲ್ಲರಲ್ಲಿಯೂ ಕಂಡುಬರುತ್ತಿರುವುದನ್ನು ಗಮನಿಸಿರಬಹುದು. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚಾಗಿರುತ್ತಾರೆ. ಕೆಲವರು ಈ ರೀತಿ ಕಂಡು ಬರುವ ನೋವು ವಿಟಮಿನ್ ಕೊರತೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಕಂಡು ಬರುವ ಸ್ನಾಯು ನೋವು ಯಾವುದೇ ವಿಟಮಿನ್ ಕೊರತೆ ಅಥವಾ ಮೂಳೆಗೆ ಸಂಬಂಧ ಪಟ್ಟ ಕಾಯಿಲೆ ಆಗಿರುವುದಿಲ್ಲ. ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರವೂ ಕೂಡ ಈ ರೀತಿ ಸಮಸ್ಯೆ ಮುಂದುವರಿದರೆ ಅದಕ್ಕೆ ಕಾರಣಗಳು ಮತ್ತು ತಡೆಗಟ್ಟುವ ವಿಧಾನಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಾ. ಅಖಿಲೇಶ್ ಅವರು ಹೇಳುವ ಪ್ರಕಾರ, ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ. ಅವುಗಳಲ್ಲಿ ಒಂದು ಪ್ರಮುಖ ಕಾರಣವೆಂದರೆ ಒಂದೇ ಜಾಗದಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಈ ರೀತಿ ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದಿರುವುದು ಸ್ನಾಯು ನೋವಿಗೆ ಕಾರಣವಾಗುತ್ತದೆ. ಲ್ಯಾಪ್‌ಟಾಪ್‌ ಅಥವಾ ಫೋನ್‌ಗಳಲ್ಲಿ ಕೆಲಸ ಮಾಡುವಾಗ ನಿರಂತರವಾಗಿ ಕುತ್ತಿಗೆ ಬಾಗಿರುವುದು ಬೆನ್ನಿನ ಮೇಲೆ ಒತ್ತಡ ಬೀಳುತ್ತದೆ. ಇದು ಸಹ ನೋವಿಗೆ ಕಾರಣವಾಗುತ್ತದೆ. ಜೊತೆಗೆ ವಿಟಮಿನ್‌ಗಳು ಡಿ ಮತ್ತು ಕ್ಯಾಲ್ಸಿಯಂ ಸಾಮಾನ್ಯ ಮಟ್ಟದಲ್ಲಿದ್ದರೂ ಸಹ, ಈ ನೋವು ಕಡಿಮೆಯಾಗದೆಯೇ ಉಳಿಯುತ್ತದೆ.

ಮಾನಸಿಕ ಒತ್ತಡವೂ ಒಂದು ಕಾರಣವಾಗಿರಬಹುದು:

ಕೆಲವೊಮ್ಮೆ ಮಾನಸಿಕ ಒತ್ತಡ ನೇರವಾಗಿ ಅಲ್ಲದಿದ್ದರೂ ಸ್ನಾಯು ನೋವಿಗೆ ಕಾರಣವಾಗಬಹುದು. ಮಾನಸಿಕ ಒತ್ತಡವು ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಇದು ಸ್ನಾಯುಗಳನ್ನು ನಿರಂತರವಾಗಿ ಬಿಗಿಯಾಗಿರಿಸುವುದರಿಂದ ನೋವು ಉಂಟಾಗುತ್ತದೆ. ಇನ್ನು, ಮಾನಸಿಕ ಒತ್ತಡದ ಜೊತೆಗೆ, ನಿದ್ರೆ ಸರಿಯಾಗಿ ಆಗದಿದ್ದರೆ ಅದು ಕೂಡ ನೋವನ್ನು ಉಂಟುಮಾಡಬಹುದು.

ಇದನ್ನೂ ಓದಿ: ನೀವು ಕೆಲಸ ಮಾಡುವಾಗ ಕುಳಿತುಕೊಳ್ಳುವಂತಹ ಭಂಗಿಯಿಂದಲೂ ಬರಬಹುದು ಬೆನ್ನು ನೋವು ಎಚ್ಚರಿಕೆ ನೀಡಿದ ಡಾ ಅಜಯ್‌ ಹೆಗ್ಡೆ

ನಿರ್ಜಲೀಕರಣ:

ವಿಟಮಿನ್ ಕೊರತೆ ಇಲ್ಲದಿದ್ದರೂ, ದೇಹದಲ್ಲಿ ನೀರಿನ ಕೊರತೆಯಿಂದಾಗಿ ಸ್ನಾಯು ನೋವು ಉಂಟಾಗಬಹುದು. ನೀರಿನ ಕೊರತೆಯು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಅತಿಯಾಗಿ ಬೆವರುವವರು, ಕ್ರೀಡಾಪಟುಗಳು ಸ್ನಾಯು ನೋವಿನ ಸಮಸ್ಯೆಗಳನ್ನು ಹೆಚ್ಚಾಗಿ ಎದುರಿಸುತ್ತಾರೆ. ಅಂತವರು ಕ್ಯಾಲ್ಸಿಯಂ, ವಿಟಮಿನ್‌ ಅಥವಾ ಪ್ರೋಟೀನ್‌ನ ಸೇವನೆಯನ್ನು ಸರಿಯಾಗಿ ಮಾಡುತ್ತಿದ್ದರೂ ಕೂಡ ನಿರ್ಜಲೀಕರಣದಿಂದ ಸ್ನಾಯು ನೋವು ಉಂಟಾಗುತ್ತದೆ.

ಸ್ನಾಯು ನೋವನ್ನು ತಡೆಗಟ್ಟಲು ಸಲಹೆಗಳು:

  • ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಒಂದು ಗಂಟೆಗಿಂತ ಹೆಚ್ಚು ಕಾಲ ಒಂದೇ ಕಡೆಯಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ.
  • ಪ್ರತಿನಿತ್ಯ ಲಘು ವ್ಯಾಯಾಮ ಮಾಡುವುದನ್ನು ಮರೆಯಬೇಡಿ.
  • ಹಗಲಿನಲ್ಲಿ ಕನಿಷ್ಠ 7 ರಿಂದ 8 ಗ್ಲಾಸ್ ನೀರು ಕುಡಿಯಿರಿ.
  • 7 ರಿಂದ 8 ಗಂಟೆ ಸರಿಯಾಗಿ ನಿದ್ದೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬಕಾರಿ ಹಗರಣದ ಆರೋಪದ ನಡುವೆಯು ಆರ್.ಬಿ. ತಿಮ್ಮಾಪುರಗೆ ಸಿಎಂ ಭಾಗ್ಯ?: ‘ಕೊರವಂಜಿ’ ಭವಿಷ್ಯಕ್ಕೆ ಸಚಿವ ಫುಲ್​​​ ಖುಷ್ – Kannada News | Viral Video: Student Predicts CM Post for Thimmapur, A Boost Amid Excise Probe?

 ಬಾಗಲಕೋಟೆ , ಫೆ.7: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಚರ್ಚೆಯ ನಡುವೆಯೂ ಒಂದು ತಮಾಷೆಯ ಮತ್ತು ಕುತೂಹಲದ ಸುದ್ದಿಯೊಂದು ಸೋಶಿಯಲ್​​​​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಒಂದೆಡೆ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಬಿ. ತಿಮ್ಮಾಪುರ (R.B. Thimmapur) ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ‘ಕೊರವಂಜಿ’ ವಿದ್ಯಾರ್ಥಿನಿಯ ಭವಿಷ್ಯವಾಣಿ ಸಚಿವರಿಗೆ ಹೊಸ ಹುರುಪು ನೀಡಿದಂತಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಖಾಸಗಿ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ‘ಕೊರವಂಜಿ’ ವೇಷ ಧರಿಸಿ ವೇದಿಕೆಯ ಮೇಲಿದ್ದ ಸಚಿವ ತಿಮ್ಮಾಪುರ ಅವರನ್ನು ಕಂಡ ವಿದ್ಯಾರ್ಥಿನಿ ನಿಮಗೆ ಮುಖ್ಯಮಂತ್ರಿ ಆಗುವ ಭಾಗ್ಯ ಇದೆ ಎಂದು  ತನ್ನ ಪಾತ್ರದ ಶೈಲಿಯಲ್ಲೇ ಮಾತನಾಡಿದ್ದಾಳೆ.

“ಬರ್ರಿ ಸಾಹೇಬ್ರ ಮುಂದಕ್ಕೆ ಬರ್ರಿ… ನೀವು ಮಂತ್ರಿ ಆಗ್ತೀರಿ ಅಂತ ನಮ್ಮ ಚಿಕ್ಕಮ್ಮ ಹೇಳಿದ ಖಣಿ ನಿಜ ಆಗೈತಿ.” “ಈಗ ನಾನು ಹೇಳ್ತೀನಿ ಕೇಳ್ರಿ, ಮುಂದೆ ನೀವು ರಾಜ್ಯದ ಮುಖ್ಯಮಂತ್ರಿ ಆಗುವ ಸುಯೋಗ ಐತಿ!” “ಇದನ್ನು ನಾನು ಹೇಳ್ತಿಲ್ಲ, ಗುಡ್ಡದ ಯಲ್ಲವ್ವ ನನ್ನ ಬಾಯಿಂದ ನುಡಿಸ್ತಾ ಇದ್ದಾಳೆ” ಎಂದು ಹೇಳಿ ಸಚಿವರಿಂದ ದಕ್ಷಿಣೆಯನ್ನೂ ಪಡೆದಳು. ವಿದ್ಯಾರ್ಥಿನಿಯ ಈ ಮಾತಿನಿಂದ ಸಚಿವರು ಫುಲ್ ಖುಷಿಯಾಗಿದ್ದು, ಆ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. “ಬಡವರ ಬಂಧು, ಶಿಕ್ಷಣ ಪ್ರೇಮಿ” ಎಂದು ವಿದ್ಯಾರ್ಥಿನಿ ಹೊಗಳಿದ್ದಕ್ಕೆ ಸಚಿವರು ನಗುನಗುತ್ತಲೇ ದಕ್ಷಿಣೆ ನೀಡಿ ಹರಸಿದ್ದಾರೆ.

ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ 2500 ಕೋಟಿ ರೂ. ಹಗರಣ, ಅಕ್ರಮದ ಹಣ ಅಸ್ಸಾಂ ಚುನಾವಣೆಗೆ ಬಳಕೆ: ಆರ್ ಅಶೋಕ್ ಗಂಭೀರ ಆರೋಪ

ವಿಡಿಯೋ ಇಲ್ಲಿದೆ ನೋಡಿ:

ಪ್ರಸ್ತುತ ಸಚಿವರು ಅಬಕಾರಿ ಇಲಾಖೆಯ 6,000 ಕೋಟಿ ರೂ. ಹಗರಣದ ಆರೋಪ ಎದುರಿಸುತ್ತಿದ್ದಾರೆ. ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಪಟ್ಟು ಹಿಡಿದು ಸದನದಲ್ಲಿ ಹಾಸಿಗೆ ಹಾಸಿ ಮಲಗಿ ಪ್ರತಿಭಟನೆ ಮಾಡುತ್ತಿರುವ ಈ ಹೊತ್ತಿನಲ್ಲಿ, ಈ ವಿಡಿಯೋ ವೈರಲ್ ಆಗಿರುವುದು ಚರ್ಚೆಗೆ ಕಾರಣವಾಗಿದೆ. ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗಾಗಿ ಸುಮಾರು 600 ಕೋಟಿ ರೂ. ಗೂ ಅಧಿಕ ಹಣ ಸಂಗ್ರಹಿಸಲಾಗಿದೆ ಮತ್ತು ಮದ್ಯದ ಲೈಸೆನ್ಸ್ ನೀಡಲು ಭಾರಿ ಲಂಚ ಪಡೆಯಲಾಗಿದೆ ಎಂದು ಮದ್ಯ ವ್ಯಾಪಾರಿಗಳು ರಾಜ್ಯಪಾಲರಿಗೂ ದೂರು ನೀಡಿದ್ದರು.”ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಇದು ಪ್ರತಿಪಕ್ಷಗಳ ರಾಜಕೀಯ ಪಿತೂರಿ” ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಕೆಲವು ಅಧಿಕಾರಿಗಳ ವಿರುದ್ಧ ಆಂತರಿಕ ವಿಚಾರಣೆ ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:13 pm, Sat, 7 February 26

Source link

Propose Day Gift Ideas: ನಿಮ್ಮ ಸಂಗಾತಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಪ್ರಪೋಸ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಿ – Kannada News | Propose Day Gift Ideas: Make Propose Day special by giving these gifts to your partner

ಪ್ರಪೋಸ್ ಡೇಯನ್ನು (Propose Day) ಫೆಬ್ರವರಿ 8 ರಂದು ಆಚರಿಸಲಾಗುತ್ತದೆ, ಇದು ಪ್ರೇಮಿಗಳ ವಾರದ ಎರಡನೇ ದಿನ. ಈ ದಿನವನ್ನು ಪ್ರೀತಿಯನ್ನು ವ್ಯಕ್ತಪಡಿಸಲು ಅತ್ಯಂತ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ವಿಶೇಷ ದಿನದಂದು ಜನ ತಮ್ಮ ಜೀವನ ಸಂಗಾತಿಗೆ ಉಂಗುರ ತೊಡಿಸುವ ಮೂಲಕ ರೋಸ್‌ ನೀಡುವ ಮೂಲಕ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ತಾವು ಇಷ್ಟಪಟ್ಟ ಹುಡುಗಿಗೆ ಇದೇ ದಿನ ಧೈರ್ಯದಿಂದ ಪ್ರಪೋಸ್‌ ಮಾಡುತ್ತಾರೆ. ಇಂತಹ ಸುಂದರ ದಿನವನ್ನು ಲೈಫ್‌ಲಾಂಗ್‌ ಸ್ಮರಣೀಯವಾಗಿಸಲು ನೀವು ಇಷ್ಟಪಡುವವರಿಗೆ ಅರ್ಥಪೂರ್ಣ ಗಿಫ್ಟ್‌ಗಳನ್ನು ಸಹ ನೀಡಬಹುದು. ಪ್ರಪೋಸ್‌ ಡೇ ದಿನ ನಿಮ್ಮ ಸಂಗಾತಿಗೆ ಯಾವ ವಿಶೇಷ ಗಿಫ್ಟ್‌ ನೀಡಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಪೋಸ್‌ ಡೇಯಂದು ನಿಮ್ಮ ಸಂಗಾತಿಗಾಗಿ ಈ ಉಡುಗೊರೆಗಳನ್ನು ನೀಡಿ:

ಉಂಗುರ ಮತ್ತು ಟೆಡ್ಡಿ ಬೇರ್: ಪ್ರಪೋಸ್‌ ಡೇ ದಿನ ನೀವು  ನಿಮ್ಮ ಗೆಳತಿಗೆ ಮದುವೆ ಪ್ರಸ್ತಾಪ ಮಾಡಲು ಯೋಜಿಸುತ್ತಿದ್ದರೆ, ಅವಳಿಗೆ ಉಂಗುರ ಮಾತ್ರವಲ್ಲದೆ ಟೆಡ್ಡಿ ಬೇರ್ ಕೂಡನೀಡಬಹುದು. ಹೆಚ್ಚಿನ ಹುಡುಗಿಯರು ಟೆಡ್ಡಿ ಬೇರ್‌ಗಳನ್ನು ಇಷ್ಟಪಡುತ್ತಾರೆ, ಅವರು ಅವುಗಳನ್ನು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಹೀಗಿರುವಾಗ ಮುದ್ದಾದ ಟೆಡ್ಡಿಬೇರ್‌ ಅನ್ನು ಗಿಫ್ಟ್‌ ಆಗಿ ನೀಡಿದ್ರೆ, ಆ ಮುದ್ದು ಗೊಂಬೆಯನ್ನು ನೋಡಿ ನಿಮ್ಮನ್ನೇ ನೆನಪಿಸಿಕೊಳ್ಳುತ್ತಾರೆ.

ಪುಷ್ಪಗುಚ್ಛ: ನೀವು ಹೂಗುಚ್ಛ ನೀಡುವ ಮೂಲಕ ಪ್ರಪೋಸ್ ಡೇ ಅನ್ನು ಇನ್ನಷ್ಟು ವಿಶೇಷವಾಗಿ ಆಚರಿಸಬಹುದು. ಅನೇಕ ಹುಡುಗರು ಮತ್ತು ಹುಡುಗಿಯರು ಉಡುಗೊರೆಗಳಿಗಿಂತ ಹೂಗುಚ್ಛಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ, ಅವರನ್ನು ಸಂತೋಷಪಡಿಸಲು ನೀವು ಹೂಗುಚ್ಛದ ಜೊತೆಗೆ ಒಂದು ಕಾರ್ಡ್ ಅನ್ನು ಸಹ ನೀಡಬಹುದು.

ರಿಂಗ್: ಪ್ರಪೋಸ್ ಮಾಡುವಾಗ ನೀವು ನಿಮ್ಮ ಸಂಗಾತಿಗೆ ಉಂಗುರವನ್ನೂ ತೊಡಿಸಬಹುದು. ಹೆಚ್ಚಿನ ಹುಡುಗಿಯರು ಇದನ್ನು ಇಷ್ಟಪಡುತ್ತಾರೆ. ಅಲ್ಲದೆ ಮದುವೆ ಪ್ರಪೋಸ್ ಮಾಡಲು ಸಹ ಉಂಗುರ ಅತ್ಯಂತ ರೋಮ್ಯಾಂಟಿಕ್ ಉಡುಗೊರೆಯಾಗಿದೆ. ಸುಂದರವಾದ ಉಂಗುರವು ನಿಮ್ಮ ಪ್ರೀತಿ ಮತ್ತು ಬದ್ಧತೆಯನ್ನು ತೋರಿಸುತ್ತದೆ.

ಚಾಕೊಲೇಟ್: ಪ್ರಪೋಸ್ ದಿನದಂದು, ನಿಮ್ಮ ಸಂಗಾತಿಗೆ ಚಾಕೊಲೇಟ್‌ಗಳನ್ನು ನೀಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಹೆಚ್ಚಿನ ಹುಡುಗಿಯರು ದುಬಾರಿ ಉಡುಗೊರೆಗಳಿಗಿಂದ ಇಂತಹ ಸಣ್ಣಪುಟ್ಟ ಗಿಫ್ಟ್‌ಗಳನ್ನು ತುಂಬಾನೇ ಇಷ್ಟಪಡುತ್ತಾರೆ. ಹಾಗಿರುವಾಗ ನೀವು ನಿಮ್ಮ ಹುಡುಗಿಗೆ ಚಾಕೊಲೇಟ್‌ ಗಿಫ್ಟ್‌ ನೀಡಬಹುದು.

ಇದನ್ನೂ ಓದಿ: ಪ್ರಪೋಸ್‌ ಡೇ ಯಾವಾಗ? ಪ್ರೇಮಿಗಳ ಈ ಮಹತ್ವದ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಬ್ರೇಸ್ಲೆಟ್: ಪ್ರಪೋಸ್‌ ಡೇ ದಿನ ನೀವು ನಿಮ್ಮ ಸಂಗಾತಿಗೆ ಬ್ರೇಸ್ಲೆಟ್‌ ಕೂಡ ಉಡುಗೊರೆಯಾಗಿ ನೀಡಬಹುದು. ಬ್ರೇಸ್ಲೆಟ್‌ ಯಾವಾಗಲೂ ಅವರ ಜೊತೆಯಲ್ಲಿಯೇ ಇರುತ್ತದೆ. ಇದು ಅವರಿಗೆ ನೀವು ಅವರ ಜೊತೆ ಸದಾ ಇರುತ್ತೀರಿ ಎಂಬ ಭಾವನೆಯನ್ನು ಮೂಡಿಸುತ್ತದೆ.

ಮೇಕಪ್ ಕಿಟ್: ನೀವು ನಿಮ್ಮ ಹುಡುಗಿಗೆ ಮೇಕಪ್‌ ಕಿಟ್‌ ಉಡುಗೊರೆಯಾಗಿ ನೀಡಬಹುದು. ಹುಡುಗಿಯರು ಸಾಮಾನ್ಯವಾಗಿ ಮೇಕಪ್ ಅನ್ನು ತುಂಬಾ ಇಷ್ಟಪಡುತ್ತಾರೆ. ಆದ್ದರಿಂದ, ಹೊಸ ಮೇಕಪ್ ಕಿಟ್ ಮತ್ತು ಗ್ರೂಮಿಂಗ್ ಕಿಟ್ ಕೊಟ್ಟರೆ ಖಂಡಿತವಾಗಿಯೂ ಅವರು ಅದನ್ನು ಇಷ್ಟಪಡುತ್ತಾರೆ.

ಕಸ್ಟಮೈಸ್ ಮಾಡಿದ ಉಡುಗೊರೆ: ಇತ್ತೀಚಿನ ದಿನಗಳಲ್ಲಿ ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ನೀಡುವ ಪ್ರವೃತ್ತಿ ಗಮನಾರ್ಹವಾಗಿ ಹೆಚ್ಚಿದೆ. ನೀವು ಈ ಉಡುಗೊರೆಗಳನ್ನು ಪರಸ್ಪರರ ಫೋಟೋಗಳು ಮತ್ತು ಹೆಸರುಗಳೊಂದಿಗೆ ಕಸ್ಟಮೈಸ್ ಮಾಡಬಹುದು. ಅಲ್ಲದೆ ನಿಮ್ಮ ಕೈಯಾರೆ ಬರೆದ ಲವ್‌ ಲೆಟರ್‌ಗಳನ್ನು ಸಹ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಕಾರು ಖರೀದಿಸಿದ ವಸಿಷ್ಠ-ಹರಿಪ್ರಿಯಾ: ಬೆಲೆ ಎಷ್ಟು ಲಕ್ಷ? – Kannada News | Haripriya And Vasishta Simha purchased a new Luxury car here is the details

ವಸಿಷ್ಠ ಸಿಂಹ ಮತ್ತು ಹರಿಪ್ರಿಯ (Haripriya) ಅವರು ಸ್ಯಾಂಡಲ್​​ವುಡ್​​ನ ಕ್ಯೂಟ್ ಜೋಡಿಗಳಲ್ಲಿ ಒಂದು. ಪ್ರೀತಿಸಿ ಮದುವೆ ಆದ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಇದೀಗ ಒಂದು ಮುದ್ದಾದ ಮುಗುವಿನ ಪೋಷಕರು ಸಹ ಆಗಿದ್ದಾರೆ. ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ಈ ಜೋಡಿ ಇದೀಗ ತಮ್ಮ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಈ ಜೋಡಿ ಹೊಸ ಐಶಾರಾಮಿ ಕಾರೊಂದನ್ನು ಈ ಜೋಡಿ ಖರೀದಿ ಮಾಡಿದೆ. ದುಬಾರಿ ಬೆಲೆಯ ಈ ಕಾರು ಸಾಕಷ್ಟು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ಟೊಯೊಟಾ ಇನ್ನೊವಾ ಹೈಕ್ರಾಸ್ ಕಾರನ್ನು ಖರೀದಿ ಮಾಡಿದ್ದಾರೆ. ಹೊಸ ಕಾರಿನ ಡೆಲಿವರಿ ಪಡೆಯುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಶೋರೂಮ್‌ನಲ್ಲಿ ದಂಪತಿಗಳು ಕೇಕ್ ಕತ್ತರಿಸಿ, ಹೊಸ ವಾಹನವನ್ನು ಬರಮಾಡಿಕೊಂಡಿದ್ದಾರೆ. ಬಿಳಿ ಬಣ್ಣದ ಈ ಹೊಸ ಕಾರಿನೊಂದಿಗೆ ಈ ಜೋಡಿ ಫೋಸ್ ನೀಡಿದ್ದು, ಮಗುವನ್ನು ಸಹ ಕಾರಿನ ಮೇಲೆ ಕೂರಿಸಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಅಭಿಮಾನಿಗಳು “ಹೊಸ ಅತಿಥಿಯ ಆಗಮನಕ್ಕೆ ಅಭಿನಂದನೆಗಳು” ಎಂದು ಶುಭ ಹಾರೈಸುತ್ತಿದ್ದಾರೆ. ಕಾರಿನ ಡೆಲಿವರಿ ವೇಳೆ ವಿವಾ ಟೊಯೊಟಾದ ಸಿಬ್ಬಂದಿಯ ಸಹಾಯಕ್ಕೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಧನ್ಯವಾದ ಹೇಳಿದ್ದಾರೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಖರೀದಿ ಮಾಡಿರುವ ಟೊಯೋಟಾ ಇನ್ನೋವಾ ಹೈಕ್ರಾಸ್ ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಎಂಪಿವಿ (MPV) ಮಾದರಿಯಾಗಿದೆ. ಈ ಜೋಡಿಯು ಹೈಕ್ರಾಸ್​ನ ಜೆಡ್​​ಎಕ್ಸ್ ಮಾದರಿಯನ್ನು ಖರೀದಿ ಮಾಡಿದ್ದು, ಈ ಕಾರು ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯುತ್ತಮ ಮೈಲೇಜ್ ಮತ್ತು ಪರಿಸರ ಸ್ನೇಹಿ ಚಾಲನೆಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಸುಮಾರು ₹24 ಲಕ್ಷದಿಂದ ₹40 ಲಕ್ಷದವರೆಗೆ (ವೇರಿಯೆಂಟ್ ಆಧಾರದ ಮೇಲೆ) ಇರಲಿದೆ. ಈಗ ಹರಿಪ್ರಿಯ-ವಸಿಷ್ಠ ಖರೀದಿ ಅವರು ಟಾಪೆಂಡ್ ಮಾದರಿ ಕಾರನ್ನೇ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ

ಹೈಬ್ರೀಡ್ ಎಂಜಿನ್, ಅತ್ಯುತ್ತಮ ಮೈಲೇಜ್, ಅತ್ಯುತ್ತಮ ಪವರ್, ಪನೋರಮಿಕ್ ಸನ್‌ರೂಫ್, ಜೆಬಿಎಲ್ ಸ್ಪೀಕರ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರು ಹೊಂದಿದೆ. ಕುಟುಂಬ ಟ್ರಾವೆಲ್ ಮಾಡಲು ಅತ್ಯುತ್ತಮ ಕಾರು ಎಂಬ ಖ್ಯಾತಿ ಹೈಕ್ರಾಸ್​​ನದ್ದು. ಈ ಹಿಂದೆ ಸುಮಾರು ₹1.4 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಜಿಎಲ್‌ಇ ಕಾರನ್ನು ಖರೀದಿಸಿದ್ದ ಈ ಜೋಡಿ, ಈಗ ಲಾಂಗ್ ಡ್ರೈವ್ ಮತ್ತು ಕುಟುಂಬದ ಹಿರಿಯರೊಂದಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಈ ಏಳು ಆಸನಗಳ ಸುಸಜ್ಜಿತ ಇನ್ನೋವಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ – Kannada News | PM Modi receives warm welcome by Malaysian PM Anwar Ibrahim after arriving in Kuala Lumpur

ಕೌಲಾಲಂಪುರ, ಫೆಬ್ರವರಿ 7: 2 ದಿನಗಳ ಭೇಟಿಗಾಗಿ ಮಲೇಷ್ಯಾಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಆತ್ಮೀಯ ಸ್ವಾಗತ ದೊರಕಿದೆ. ಪ್ರಧಾನಿ ಮೋದಿಗೆ (PM Modi) ಅಪ್ಪುಗೆಯ ಮೂಲಕ ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಆತ್ಮೀಯವಾಗಿ ಸ್ವಾಗತಿಸಿದರು. ಭಾರತ-ಮಲೇಷ್ಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಈ ಭೇಟಿಯು ಮಹತ್ವದ ಹೆಜ್ಜೆಯಾಗಿದೆ. ಈ ಭೇಟಿಯ ವೇಳೆ ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸುವುದು, ತಂತ್ರಜ್ಞಾನ ಸಹಕಾರವನ್ನು ಆಳಗೊಳಿಸುವುದು, ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಸಮನ್ವಯದ ಕುರಿತು ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಿಲ್ಲರ್ ಬಿಎಂಟಿಸಿಗೆ ಇನ್ನೆಷ್ಟು ಬಲಿ ಬೇಕು?: ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್ – Kannada News | Bengaluru K.R. Puram Tragedy: BMTC Bus Negligence Kills Hanna on Bike

ಬೆಂಗಳೂರು, ಫೆ.7: ಬೆಂಗಳೂರಿನ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಬೆಳಿಗ್ಗೆ 9:30 ರಿಂದ 10 ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದೆ. ಹನ್ನಾ ಅವರು ತಮ್ಮ ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಕೆ.ಆರ್. ಪುರಂ ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣದ ಸಮೀಪದ ರಸ್ತೆಯಲ್ಲಿ BMTC ಎಲೆಕ್ಟ್ರಿಕ್ ಬಸ್ (ಮಾರ್ಗ ಸಂಖ್ಯೆ 500/D) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಿಯಂತ್ರಣ ಕಳೆದುಕೊಂಡು ಹಿಂಬದಿ ಕುಳಿತಿದ್ದ ಹನ್ನಾ ನೇರವಾಗಿ ಬಸ್ಸಿನ ಮುಂಭಾಗದ ಚಕ್ರದ ಅಡಿ ಸಿಲುಕಿದ್ದಾರೆ. ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯೇ ಈ ಸಾವಿಗೆ ನೇರ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಪಘಾತದ ನಂತರ ಹನ್ನಾ ಅವರನ್ನು ತಕ್ಷಣವೇ ಕೆ.ಆರ್. ಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಆದ ತೀವ್ರ ಪೆಟ್ಟು ಮತ್ತು ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ವಿಡಿಯೋ ಸುದ್ದಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ

ವರದಿ: ನಟರಾಜ್ ಮೆಟ್ರೋ

Source link

ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್ ಕೊಟ್ಟ ತೇಜಸ್ವಿ ಸೂರ್ಯ: ಸೋಮವಾರದಿಂದ ದರ ಏರಿಕೆ ಆಗುವುದಿಲ್ಲ – Kannada News | Namma Metro Fare Hike temporary Halted: Good News for Bengaluru Commuters as Tejasvi Surya Intervenes

ಬೆಂಗಳೂರು, ಫೆಬ್ರವರಿ 07: ಸೋಮವಾರದಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಸದ್ಯ ಕೇಂದ್ರದಿಂದ ತಾತ್ಕಾಲಿಕ ಬ್ರೇಕ್ ಹಾಕಿದೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​​ಡೇಟ್​ ಆಗಲಿದೆ.

Source link

ಚಾಂಪಿಯನ್ ಯುವ ಭಾರತಕ್ಕೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ – Kannada News | India U19 Lifts Record 6th World Cup: BCCI Announces ₹7.5 Cr Cash Prize for Champions

ಇದಕ್ಕೂ ಮುನ್ನ ಬಿಸಿಸಿಐ ಅಂಡರ್ 19 ವಿಶ್ವಕಪ್ ಗೆದ್ದ ತಂಡಗಳಿಗೆ ನಗದು ಬಹುಮಾನ ಘೋಷಿಸಿತ್ತು. 2024 ರ ಅಂಡರ್ 19 ವಿಶ್ವಕಪ್‌ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 30 ಲಕ್ಷ ರೂ. ಬಹುಮಾನ ನೀಡಿತ್ತು. ಅದೇ ರೀತಿ, 2025 ರ ಮಹಿಳಾ ಅಂಡರ್-19 ಟಿ20 ವಿಶ್ವಕಪ್‌ ಗೆದ್ದಿದ್ದ ವನಿತಾ ಪಡೆಗೆ ಬಿಸಿಸಿಐ 5 ಕೋಟಿ ರೂ. ಬಹುಮಾನ ನೀಡಿತ್ತು. ಅದರಂತೆ ಈ ಬಾರಿಯೂ ಸಹ ಬಿಸಿಸಿಐ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ತರಬೇತಿ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಿದೆ.

Source link

ನಾಲಗೆ ಹರಿಬಿಟ್ಟ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ ಪ್ರೇಮ್ – Kannada News | Director Prem gave complaint against Kanakapura Srinivas

ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakpura Srinivas) ಕೆಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ವೀರಾವೇಷದಿಂದ ಮಾತನಾಡಿದ್ದರು. ಚಿತ್ರರಂಗದಲ್ಲಿ ಇರುವವರೆಲ್ಲರೂ ತಮಗೆ ಮೋಸ ಮಾಡಿದ್ದಾರೆ, ತಮ್ಮನ್ನು ಹೊರತಾಗಿ ಚಿತ್ರರಂಗದಲ್ಲಿರುವವರೆಲ್ಲ ದುರುಳರು ಎಂಬ ರೀತಿ ಮಾತನಾಡಿದ್ದರು. ಪ್ರೇಮ್, ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಇದೀಗ ನಿರ್ದೇಶಕ ಪ್ರೇಮ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.

ಖುದ್ದಾಗಿ ಫಿಲಂ ಚೇಂಬರ್​​ಗೆ ಆಗಮಿಸಿದ ನಿರ್ದೇಶಕ ಪ್ರೇಮ್, ನೂತನ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿ ಆಗಿ ಕನಕಪುರ ಶ್ರೀನಿವಾಸ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಪ್ರೇಮ್ ನೀಡಿರುವ ದೂರಿನ ವಿವರ ಇಲ್ಲಿದೆ; ‘ನಿರ್ದೇಶಕ, ನಟ, ನಿರ್ಮಾಪಕನಾದ ನಾನು ಪ್ರೇಮ್, ಆರ್. 25 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿಯವರೆಗೂ ಹಲವಾರು ನಿರ್ಮಾಪಕರ ಜೊತೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಹಲವಾರು ಸದಾಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿದ್ದೇನೆ, ಇಲ್ಲಿಯವರೆಗೂ ನನ್ನ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ. ನಿರ್ಮಾಪಕ ಆರ್. ಎಸ್ ಶ್ರೀನಿವಾಸ್ ರವರು ನನ್ನ ಬಳಿ ಬಂದು ನಿರ್ದೇಶನ ಮಾಡಿ ಕೊಡಲು ಕೇಳಿಕೊಂಡು ನನ್ನ ಬಳಿ ಬಂದು 2004 ರಲ್ಲಿ ಕೆ. ಪಿ. ಶ್ರೀಕಾಂತ್ ಎನ್ನುವವರ ಮೂಲಕ ಆರ್. ಎಸ್ ಶ್ರೀನಿವಾಸ್ ರವರು ಬಂದು ಮುಂಗಡವಾಗಿ 9 ಲಕ್ಷಗಳನ್ನು ನೀಡಿದ್ದರು ಅದರಲ್ಲಿ ಚೆಕ್ ಮೂಲಕ 5 ಲಕ್ಷ ಹಾಗೂ ನಗದು ರೂಪದಲ್ಲಿ 4 ಲಕ್ಷಗಳನ್ನು ನೀಡಿದ್ದರು. ಇದಾದನಂತರ ಅವರಿಗಾಗಿ ಸಿನಿಮಾ ಮಾಡಲು ಒಂದು ಆಫೀಸ್ ಮಾಡಿ ಒಂದು ತಂಡವನ್ನು ಕಟ್ಟಿಕೊಂಡು ಚಿತ್ರಕಥೆ ಬರೆಯಲು ಪ್ರಾರಂಭಿಸಿದೆ, ಕಥೆ ಹಾಗೂ ಚಿತ್ರ ಕಥೆ ತಯಾರಾದ ನಂತರ ಹಲವು ಬಾರಿ ಸಂಪರ್ಕಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದೇ ಇದ್ದಾಗ ಒಂದು ವರ್ಷಗಳ ಕಾಲ ನನ್ನ ಹಾಗೂ ನನ್ನ ತಂಡದ ಸಮಯವನ್ನು ವ್ಯರ್ಥ ಮಾಡಿದ್ದಲ್ಲದೆ ಯಾವುದೇ ರೀತಿಯ ಹಣ ಕಾಸನ್ನು ನನ್ನ ಆಫೀಸ್ ನ ವೆಚ್ಚಕ್ಕಾಗಲಿ, ನನ್ನ ಸಹ ನಿರ್ದೇಶಕರಿಗೆ ಹಾಗೂ ತಂಡಕ್ಕಾಗಲಿ ನೀಡಲಿಲ್ಲ. ಒಂದು ವರ್ಷಗಳ ಕಾಲ ಆಫೀಸ್ ನ ಹಾಗೂ ತಂಡದ ಖರ್ಚು-ವೆಚ್ಚಗಳನ್ನು ನಾನೇ ಬರಿಸಿರುತ್ತೇನೆ, ಇದರಿಂದ ನನಗೆ ವೈಯಕ್ತಿಕವಾಗಿ 15 ರಿಂದ 20 ಲಕ್ಷ ಖರ್ಚು ಮಾಡಿದ್ದೇನೆ ಹಾಗೂ ನನಗೆ ಈ ಸಮಯದಲ್ಲಿ ಹಲವಾರು ನಿರ್ಮಾಪಕರು ನನಗೆ ನಿರ್ದೇಶಿಸಲು ಹಾಗೂ ನನಗೆ ಅವಕಾಶಗಳು ಬಂದಿದ್ದವು ನಾನು ಇವರ ಚಿತ್ರ ನಿರ್ದೇಶನ ಮಾಡಲು ಬಂದಂತಹ ಈ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಲ್ಲದೆ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್

ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿರ್ಮಾಪಕ ಶ್ರೀನಿವಾಸ್, ಪ್ರೇಮ್ ಹಣ ಪಡೆದು ಸಿನಿಮಾ ಮಾಡಿಕೊಡದೆ ವಂಚಿಸಿದ್ದಾರೆ ಎಂಬರ್ಥದ ಮಾತುಗಳನ್ನಾಡಿದ್ದರು. ಪ್ರೇಮ್ ಜೊತೆಗೆ ಸಿನಿಮಾ ಮಾಡಿದವರೆಲ್ಲ ಹಣ ಕಳೆದುಕೊಂಡಿದ್ದಾರೆ ಆದರೆ ಪ್ರೇಮ್ ಮಾತ್ರ ಚೆನ್ನಾಗಿದ್ದಾರೆ ಎಂದಿದ್ದರು. ಇದೇ ಕಾರಣಕ್ಕೆ ಇದೀಗ ಪ್ರೇಮ್ ಅವರು ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:12 pm, Sat, 7 February 26

Source link

ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆ ಶಿವಕುಮಾರ್​​

ಬೆಂಗಳೂರು, ಫೆಬ್ರವರಿ 07: ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಮೆಟ್ರೋ ದರ ಏರಿಕೆ ಮಾಡಲು ಹೇಗೆ ಸಾಧ್ಯ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ ಡಿಸಿಎಂ ಡಿಕೆ ಶಿವಕುಮಾರ್​, ತೇಜಸ್ವಿ ಸೂರ್ಯನದ್ದು ಬರೀ ಟ್ವೀಟ್, ಸ್ಟೇಟ್​ಮೆಂಟ್ ಅಷ್ಟೇ.  ಪಾಪ. ಅವನಿಗೆ ಇನ್ನೂ ಅನುಭವವಿಲ್ಲ. ರಾಜ್ಯಕ್ಕೆ ಹಣ ತಂದಿದ್ದು ಏನಾದರೂ ಇದ್ದರೆ ಅದರ ಬಗ್ಗೆ ಮಾತಾಡಲಿ, ಬರೀ ಖಾಲಿ ಟ್ರಂಕ್ ಮಾತನಾಡುವುದು ಬೇಡವೆಂದು ವಾಗ್ದಾಳಿ ಮಾಡಿದ್ದಾರೆ.

ಈರಣ್ಣ ಬಸವ ಟಿವಿ9

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version