ಶೌಚಾಲಕ್ಕೆಂದು ಬಸ್ಸಿನಿಂದ ಇಳಿದ ಪ್ರಯಾಣಿಕರ ಮೇಲೆ ಹರಿದ ಕಂಟೇನರ್; 6 ಜನ ಸ್ಥಳದಲ್ಲೇ ಸಾವು – Kannada News | Tragic Accident on Yamuna Expressway: 6 Killed, 2 Injured in Mathura

ಮಥುರಾ(ಫೆ.07): ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗದ ಚಾಲನೆ ಮತ್ತು ನಿಯಮ ಉಲ್ಲಂಘನೆಯ ಪರಿಣಾಮವಾಗಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆರು ಮಂದಿ ದುರ್ಮರಣಕ್ಕೀಡಾದ ಘಟನೆ ಶನಿವಾರ ಬೆಳಗಿನ ಜಾವ 2:45 ರ ಸುಮಾರಿಗೆ ನಡೆದಿದೆ. ಸುರಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲ್‌ಸ್ಟೋನ್ 88 ಬಳಿ ಈ ದುರಂತ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಬೆಳಗಿನ ಜಾವ ಸುಮಾರು 2:45 ರ ಸುಮಾರಿಗೆ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸುತ್ತಿತ್ತು. ಪ್ರಯಾಣದ ಮಧ್ಯೆ ಪ್ರಯಾಣಿಕರು ಶೌಚಾಲಯ ಬಳಸಲು ಬಸ್ ನಿಲ್ಲಿಸಲಾಗಿದೆ. ಇನ್ನು ಚಾಲಕ ಹಸಿರು ವಲಯದಲ್ಲಿ ಬಸ್ ನಿಲ್ಲಿಸುವ ಬದಲು ರಸ್ತೆಯಲ್ಲೇ ನಿಲ್ಲಿಸಿದ್ದ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ಬಸ್‌ಗೆ ಡಿಕ್ಕಿ ಹೊಡೆದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ತಿರುಪತಿ ಲಡ್ಡುವಿನ ಕಲಬೆರಕೆ ಆಗಿದೆ ಎಂಬುದಕ್ಕೆ ಸಾಕ್ಷಿ ನೀಡಿದ ಎಸ್‌ಐಟಿ! ನಾಲ್ವರ ಬಂಧನ

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಮೃತರಲ್ಲಿ ಬಸ್ತಿ ನಿವಾಸಿ ದೇವೇಶ್, ಔರೈಯಾದ ಸೋನು, ಕನ್ನೌಜ್ನ ಅಸ್ಲಾಂ ಹಾಗೂ ದೆಹಲಿಯ ಸಂತೋಷ್ ಎಂದು ನಾಲ್ವರನ್ನು ಗುರುತಿಸಲಾಗಿದೆ. ಉಳಿದ ಇಬ್ಬರ ಗುರುತು ಪತ್ತೆಹಚ್ಚುವ ಕೆಲಸ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಅಪಘಾತಕ್ಕೆ ಮುಖ್ಯ ಕಾರಣ ನಿಯಮ ಉಲ್ಲಂಘಿಸಿ ಬಸ್ ಹೈವೇಯಲ್ಲೇ ನಿಲ್ಲಿಸಿರುವುದು ಮತ್ತು ಕಂಟೇನರ್‌ ಅತಿವೇಗದ ಚಲನೆ ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:23 am, Sat, 7 February 26

Source link

ಭಾರತ-ಅಮೆರಿಕಕ್ಕೆ ಗ್ರೇಟ್ ನ್ಯೂಸ್: ಟ್ರೇಡ್ ಡೀಲ್ ಬಗ್ಗೆ ಪ್ರಧಾನಿ ಮೋದಿ ಹರ್ಷ, ಟ್ರಂಪ್ ಬಗ್ಗೆ ಮೆಚ್ಚುಗೆ ಮಾತು – Kannada News | India–US Interim Trade Deal: PM Modi Hails Agreement, Praises Trump; Boost for Make in India, Jobs, Investment

ಪ್ರಧಾನಿ ಮೋದಿ ಹರ್ಷ, ಟ್ರಂಪ್Image Credit source: TV9 Network

ನವದೆಹಲಿ, ಫೆಬ್ರವರಿ 7: ಭಾರತ ಹಾಗೂ ಅಮೆರಿಕ ನಡುವೆ ನಡೆದಿರುವ ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ (Interim Trade Agreement) ಪ್ರಧಾನಿ ನರೇಂದ್ರ ಮೋದಿ (Narendra Modi) ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಅಮೆರಿಕದ ಪಾಲಿಗೆ ಈ ಒಪ್ಪಂದ ‘ಗ್ರೇಟ್ ನ್ಯೂಸ್’ ಎಂದು ಅವರು ಬಣ್ಣಿಸಿದ್ದಾರೆ. ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ತಾಣದಲ್ಲಿ ವಿವರಗಳನ್ನು ನೀಡಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪೀಯೂಷ್ ಗೋಯಲ್ ಹಂಚಿಕೊಂಡಿರುವ ಮಾಹಿತಿಯನ್ನು ಶೇರ್ ಮಾಡಿರುವ ಪ್ರಧಾನಿ, ಇದೊಂದು ಮಹತ್ವದ ಒಪ್ಪಂದವಾಗಿದೆ. ಇದರಿಂದ ಭಾರತ ಹಾಗೂ ಅಮೆರಿಕಕ್ಕೆ ಒಳಿತಾಗಲಿದೆ ಎಂದಿದ್ದಾರೆ.

ಎರಡು ದೇಶಗಳ ನಡುವಣ ಸಂಬಂಧಗಳ ಸುಧಾರಣೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೋರಿದ ವೈಯಕ್ತಿಕ ಬದ್ಧತೆಗೆ ಪ್ರಧಾನಿ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಒಪ್ಪಂದವು ಎರಡೂ ದೇಶಗಳ ನಡುವಣ ಗಾಢವಾದ ಬಾಂಧವ್ಯ, ಪರಸ್ಪರ ನಂಬಿಕೆ ಮತ್ತು ಸಹಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ವ್ಯಾಪಾರ ಒಪ್ಪಂದ ‘ಮೇಕ್ ಇನ್ ಇಂಡಿಯಾ’ಗೆ ಮತ್ತಷ್ಟು ಬಲ ನೀಡಲಿದೆ. ಭಾರತೀಯ ರೈತರು, ಉದ್ಯಮಿಗಳು, ಎಂಎಸ್‌ಎಂಇಗಳು, ಸ್ಟಾರ್ಟ್‌ಅಪ್ ಉದ್ಯಮಿಗಳು ಮತ್ತು ಮೀನುಗಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೋದಿ ಎಕ್ಸ್ ಸಂದೇಶ

ಈ ಒಪ್ಪಂದದಿಂದ ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಮೋದಿ ತಿಳಿಸಿದ್ದಾರೆ. ಎರಡೂ ದೇಶಗಳು ಹೊಸ ಆವಿಷ್ಕಾರವನ್ನು ಉತ್ತೇಜಿಸುವ ಗುರಿ ಹೊಂದಿದ್ದು, ಈ ಒಪ್ಪಂದದ ಮೂಲಕ ಹೂಡಿಕೆ ಹಾಗೂ ತಂತ್ರಜ್ಞಾನ ಸಹಭಾಗಿತ್ವ ಇನ್ನಷ್ಟು ವಿಸ್ತರಿಸಲಿದೆ ಎಂದು ಮೋದಿ ಹೇಳಿದರು.

ಜಾಗತಿಕ ಮಟ್ಟದಲ್ಲಿ ನಂಬಿಕಸ್ಥ ಮತ್ತು ಬಲಿಷ್ಠ ಪೂರೈಕೆ ಸರಪಳಿಗಳನ್ನು (supply chains) ನಿರ್ಮಿಸಲು ಈ ಒಪ್ಪಂದ ನೆರವಾಗಲಿದೆ. ಇದು ವಿಶ್ವ ಆರ್ಥಿಕ ವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಜಾಗತಿಕ ಶಾಂತಿಗೆ ಟ್ರಂಪ್ ನಾಯಕತ್ವ ಅತ್ಯಗತ್ಯ; ಸುಂಕ ಕಡಿತದ ಬಳಿಕ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ

‘ವಿಕಸಿತ ಭಾರತ’ದ ಹಾದಿಯಲ್ಲಿ ಭಾರತ ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಜನರನ್ನು ಸಶಕ್ತಗೊಳಿಸುವ ಮತ್ತು ದೂರದೃಷ್ಟಿಯ ಜಾಗತಿಕ ಸಹಭಾಗಿತ್ವಗಳನ್ನು ಹೊಂದಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ. ಮಧ್ಯಂತರ ವ್ಯಾಪಾರ ಒಪ್ಪಂದದ ಪ್ರಕಾರ, ಅಮೆರಿಕಾವು ಭಾರತದ ಜತೆಗಿನ ಆಮದು ಸುಂಕವನ್ನು ಶೇ 25ರಿಂದ ಶೇ 18ಕ್ಕೆ ಇಳಿಸಲಿದೆ. ಅಲ್ಲದೆ, ಒಪ್ಪಂದದಿಂದ ಭಾರತದ ಅನೇಕ ಉತ್ಪನ್ನಗಳ ರಫ್ತು ಹೆಚ್ಚಿಸಲು ಅನುಕೂಲವಾಗಲಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿರತೆ ಭಯಕ್ಕೆ ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ ಬೆಂಗಳೂರಿನ ಈ ಭಾಗದ ಜನರು! – Kannada News | Bengaluru Leopard Alert: Anjanapura Residents Live in Fear Amidst Frequent Sightings

ಚಿರತೆ ಭಯಕ್ಕೆ ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ ಬೆಂಗಳೂರಿನ ಈ ಭಾಗದ ಜನರು!

ಬೆಂಗಳೂರು, ಫೆಬ್ರವರಿ 07: ಇತ್ತೀಚೆಗೆ ಚಾಮರಾಜನಗರ, ಮೈಸೂರು ಸೇರಿದಂತೆ ಕನಾರ್ಟಕದ ಹಲವು ಭಾಗಗಳಲ್ಲಿ ಹುಲಿ, ಚಿರತೆಯ ಹಾವಳಿ ಕಂಡುಬಂದಿತ್ತು. ಆದರೆ ಇದೀಗ ಸಿಲಿಕಾನ್ ಸಿಟಿಯಲ್ಲಿ(Cheetah in Bengaluru) ಚಿರತೆ ಪ್ರತ್ಯಕ್ಷವಾಗಿರುವುದು ಆತಂಕ ಮೂಡಿಸಿದೆ. ಜೆಪಿ ನಗರದ ಸಮೀಪದ ಅಂಜನಾಪುರದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆ ಕಳೆದ ಒಂದು ವಾರದಿಂದ ನಿವಾಸಿಗಳು ಭಯಭೀತರಾಗಿದ್ದು, ಮನೆಯಿಂದ ಹೊರಬರಲೂ ಹೆದರುತ್ತಿದ್ದಾರೆ.

ಚಿರತೆಯ ಓಡಾಟ ಸಿಸಿಟಿವಿಲಿ ಸೆರೆ

ಜೆಪಿ ನಗರದ 9ನೇ ಫೇಸ್‌ನ ಅಂಜನಾಪುರ ಬಿಡಿಎ ಲೇಔಟ್‌ನಲ್ಲಿ ಕಳೆದ ಒಂದು ವಾರದಲ್ಲಿ ನಾಲ್ಕೈದು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಅಲ್ಲಿನ ನಿವಾಸಿಗಳು ಮನೆಯ ಹೊರಗೆ ಹೆಜ್ಜೆ ಇಡುವುದಕ್ಕೂ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ–ಹಗಲು ಎನ್ನದೆ ಚಿರತೆ ಓಡಾಡುತ್ತಿರುವ ದೃಶ್ಯಗಳು ಮನೆಗಳ ಮುಂದೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ವೀಡಿಯೋ ಇಲ್ಲಿದೆ ನೋಡಿ

ಕೆಲ ನಿವಾಸಿಗಳು ಕಾರಿನಲ್ಲಿ ಹೊರಡುವ ವೇಳೆ ಚಿರತೆ ಅಡ್ಡ ಬಂದ ದೃಶ್ಯವನ್ನೂ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅಂಜನಾಪುರದ ಪಕ್ಕದಲ್ಲೇ ತುರಹಳ್ಳಿ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶಗಳಿದ್ದು, ಅಲ್ಲಿನ ಚಿರತೆಗಳು ನಾಡಿನತ್ತ ಬರುತ್ತಿರುವ ಶಂಕೆ ವ್ಯಕ್ತವಾಗಿದೆ. ಅದಲ್ಲದೆ ನಗರಕ್ಕೆ ಲಗ್ಗೆಯಿಟ್ಟಿರುವ ಚಿರತೆ ಈಗಾಗಲೇ ಒಂದು ನಾಯಿಯನ್ನು ಹೊತ್ತೊಯ್ದಿದೆ ಎಂಬ ಆರೋಪವೂ ಕೇಳಿಬಂದಿದೆ.ಇದರಿಂದ ಬೇಸತ್ತ ಸ್ಥಳೀಯರು ಚಿರತೆ ಓಡಾಟದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಿವಾಸಿಗಳಿಗೆ ಯಾವುದೇ ಅಪಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ನಟರಾಜ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:04 am, Sat, 7 February 26

Source link

‘ಅನುಶ್ರೀ ಜೊತೆ ವೇದಿಕೆ ಹಂಚಿಕೊಂಡವರು ಎಲ್ಲೋ ಹೋಗ್ತಾರೆ’; ಹೀಗೆ ಹೇಳಿದ್ಯಾರು? – Kannada News | Anushree Explains Gilli Support at Alpha Trailer Launch: revealed her Bond Revealed

ಆ್ಯಂಕರ್ ಅನುಶ್ರೀ (Anushree) ಅವರು ವೇದಿಕೆ ಮೇಲಿದ್ದರೆ ಅಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರೋದಿಲ್ಲ. ಇದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಈಗ ಅವರು ‘ಆಲ್ಫಾ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್​ನ ನಡೆಸಿಕೊಟ್ಟಿದ್ದಾರೆ. ಈ ಈವೆಂಟ್ ಸಾಕಷ್ಟು ಗಮನ ಸೆಳೆದಿದೆ. ಅನುಶ್ರೀ ಅವರು ಈ ವೇದಿಕೆ ಮೇಲೆ ಗಿಲ್ಲಿ ಬಗ್ಗೆ ಮಾತನಾಡಿದರು. ತಮ್ಮ ಬಾಂಧವ್ಯ ಎಂಥದ್ದು, ಗಿಲ್ಲಿಗೆ ಬೆಂಬಲ ನೀಡಿದ್ದು ಏಕೆ ಎಂಬ ವಿಷಯ ಪ್ರಸ್ತಾಪ ಆಗಿದ್ದಕ್ಕೆ ಅವರು ಉತ್ತರ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್​ 12’ರ ವಿನ್ನರ್ ಗಿಲ್ಲಿಗೂ ಅನುಶ್ರೀ ಅವರಿಗೂ ಮೊದಲೇ ಪರಿಚಯ ಇತ್ತು. ಇಬ್ಬರೂ ಹಲವು ರಿಯಾಲಿಟಿ ಶೋಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಆಗ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಗಿಲ್ಲಿ ಅವರು ಹಲವು ಕಾರ್ಯಕ್ರಮದಲ್ಲಿ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ‘ಆಲ್ಫಾ’ ಟ್ರೇಲರ್ ಲಾಂಚ್ ಈವೆಂಟ್​ನಲ್ಲೂ ಗಿಲ್ಲಿ ಬಗ್ಗೆ ಅವರು ಮಾತನಾಡುವಂತಹ ಪರಿಸ್ಥಿತಿ ನಿರ್ಮಾಣ ಆಯಿತು.

ಇದನ್ನೂ ಓದಿ: ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ

‘ಕಾಂತಾರ’ ಸಿನಿಮಾದಲ್ಲಿ ರಾಜನ ಪಾತ್ರ ಮಾಡಿದ್ದ ವಿನಯ್ ಬಿದ್ದಪ್ಪ ಅವರು ‘ಆಲ್ಫಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ವೇದಿಕೆ ಏರಿದರು. ವೇದಿಕೆ ಏರುತ್ತಿದ್ದಂತೆಯೇ ಅನುಶ್ರೀ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಅನುಶ್ರೀ ಜೊತೆ ವೇದಿಕೆ ಶೇರ್ ಮಾಡಿಕೊಂಡಿರೋದು ನನ್ನ ಅದೃಷ್ಟ ಅನಿಸುತ್ತದೆ. ಏಕೆಂದರೆ ಅವರ ಜೊತೆ ವೇದಿಕೆ ಹಂಚಿಕೊಂಡವರು ಎಲ್ಲೋ ಹೋಗಿ ಬಿಟ್ಟಿದ್ದಾರೆ. ಗಿಲ್ಲಿನೇ ಉತ್ತಮ ಉದಾಹರಣೆ. ಅಕ್ಕ ಮುಂದೆ ಹೋಗು, ಅಕ್ಕ ಮುಂದೆ ಹೋಗು ಅಂತ ಅವರು ಎಲ್ಲೋ ಹೋದರು’ ಎಂದು ವಿನಯ್ ಬಿದ್ದಪ್ಪ ಕಾಲೆಳೆದರು.

ಇದಕ್ಕೆ ಅನುಶ್ರೀ ಅವರು ಕೂಲ್ ಆಗಿ ಉತ್ತರಿಸಿದರು. ‘ಅವರ ಗೆಲ್ತಾ ಇದ್ರಲ್ಲ, ಅದಕ್ಕೆ ಸಪೋರ್ಟ್ ಆಗಿ ನಿಂತಿದ್ದೇ ಅಷ್ಟೇ’ ಎಂದು ಅನುಶ್ರೀ ಅವರು ಹೇಳಿಕೊಂಡಿದ್ದಾರೆ. ಇದು ಗಿಲ್ಲಿ ಮೇಲೆ ಅನುಶ್ರೀಗೆ ಎಷ್ಟು ಪ್ರೀತಿ ಹಾಗೂ ಗೌರವ ಇದೆ ಎಂಬುದನ್ನು ತೋರಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:07 am, Sat, 7 February 26

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿಂದು 14 ಡಿಗ್ರಿಗಿಳಿದ ತಾಪಮಾನ! ರಾಜ್ಯದೆಲ್ಲೆಡೆ ಒಣ ಹವೆ – Kannada News | Bengaluru temperature: cold and clear sky in Bengaluru, Dry weather all over Karnataka

ಬೆಂಗಳೂರಿನಲ್ಲಿಂದು 14 ಡಿಗ್ರಿಗಿಳಿದ ತಾಪಮಾನ!

ಬೆಂಗಳೂರು, ಫೆಬ್ರುವರಿ 07: ರಾಜ್ಯದಲ್ಲಿ ಹಲವು ದಿನಗಳಿಂದ ಒಣ ಹವೆಯ (Weather Forecast) ವಾತಾವರಣವೇ ಕಂಡುಬರುತ್ತಿದ್ದು, ಇಂದೂ ಸಹ ಅದೇ ಹವಾಮಾನವಿರಲಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಚಳಿಯ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 14°C ಇದ್ದು, ಗರಿಷ್ಠ 27°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಲು ಹಿಡಿದರೂ ಆ ಮಹಿಳೆಯನ್ನು ಕ್ಷಮಿಸಲೇ ಇಲ್ಲ ಅಂಬರೀಷ್ – Kannada News | Ambareesh’s Never Accept That Women Here is why

ಅಂಬರೀಷ್ (Ambareesh) ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಮಂಡ್ಯದ ಗಂಡು ಎಂದೇ ಫೇಮಸ್ ಆಗಿದ್ದರು. ಅವರು ಮಾಡಿದ ಹಲವು ಸೂಪರ್ ಹಿಟ್ ಚಿತ್ರಗಳು ಗಮನ ಸೆಳೆದಿವೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ. ಅವರ ಊಟದ ಶೈಲಿಯೇ ಭಿನ್ನವಾಗಿರುತ್ತಿತ್ತು. ಈ ಬಗ್ಗೆ ಮೈಕೋ ನಾಗರಾಜ್ ಅವರು ‘ಕಲಾ ಮಾಧ್ಯಮಕ್ಕೆ’ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. ಅಂಬರೀಷ್ ಅವರ ಆಹಾರ ಕ್ರಮದ ಬಗ್ಗೆ ಅಚ್ಚರಿ ಹೊರಹಾಕಿದ್ದರು. ಅಲ್ಲದೆ ಒಂದು ಮಹಿಳೆಯ ಬಗ್ಗೆ ಅವರು ಮಾತನಾಡಿದ್ದರು.

ಅಂಬರೀಷ್ ಅವರು ಆಹಾರದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಆ ಪ್ರೀತಿಯನ್ನು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದರು. ಅದರಲ್ಲೂ ಬಾಡೂಟ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸಹ ಕಲಾವಿದರನ್ನು ಜೊತೆಗೆ ಇಟ್ಟುಕೊಂಡು ಅವರು ಊಟ ಮಾಡಲು ಇಷ್ಟಪಡುತ್ತಿದ್ದರು. ಮೈ ನಾಗರಾಜ್ ಅವರಿಗೆ ಅಂಬರೀಷ್ ತುಂಬಾನೇ ಹತ್ತಿರವಾಗಿದ್ದರು. ಆ ಬಗ್ಗೆ ನಾಗರಾಜ್ ಮಾತನಾಡಿದ್ದರು.

ಮೈಕೋ ನಾಗರಾಜ್ ಅವರು ವಿಲನ್ ಹಾಗೂ ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಅಂಬಿ ಬಗ್ಗೆ ಮಾತನಾಡಿದ್ದರು. ‘ಒಂದು ದಿನ ಸಿನಿಮಾ ಸೆಟ್ ಅಲ್ಲಿ ಸಿಕ್ಕರು. ಆಗಲೇ ಅವರ ಜೊತೆ ಆತ್ಮೀಯತೆ ಬೆಳೆದಿತ್ತು. ಎಲ್ಲಿ ಊಟ ಮಾಡಿದೆ ಎಂದು ಕೇಳಿದರು. ಸೆಟ್​​ ಅಲ್ಲಿ ಎಂದೆ. ನಾಳೆ ನನ್ನ ಜೊತೆ ಊಟ ಮಾಡಬೇಕು ಎಂದು ಆದೇಶ ಹೊರಡಿಸಿದರು’ ಎಂದು ಹಳೆಯ ಘಟನೆ ಹೇಳಿಕೊಂಡಿದ್ದಾರೆ ಅವರು.

ನಾಗರಾಜ್ ಅವರು ಮರುದಿನ ಅಂಬಿ ಜೊತೆ ಊಟಕ್ಕೆ ಹೋದರಂತೆ. ಅಲ್ಲಿರುವ ಊಟ ನೋಡಿ ಅವರೇ ಕಂಗಾಲಾಗಿದ್ದರು. ಏಕೆಂದರೆ 25 ಬಗೆಯ ಊಟಗಳು ಅಲ್ಲಿ ಇದ್ದವು ಮತ್ತು ಎಲ್ಲವೂ ನಾಗರಾಜ್ ಅವರ ಬಟ್ಟಲು ಸೇರಿತ್ತು. ಇದನ್ನು ತಿನ್ನಬೇಕು ಎಂದು ಅವರು ಆದೇಶ ಹೊರಡಿಸಿದರು.

ನನ್ನ ತೊಡೆ ಸವರಿ ಊಟ ಮಾಡಿಸಿದರು. ‘ಇದಕ್ಕಿಂತ ದೊಡ್ಡ ಊಟ ಮಾಡಲು ಸಾಧ್ಯವೇ’ ಎಂದು ಕೇಳಿದರು ನಾಗರಾಜ್. ‘ಫೈಡ್ ಅಂತ ಹೊಡೆದರು ಅಂಬರೀಷ್. ಎಲ್ಲರೂ ಒಂದೇ’ ಎಂದು ಅಂಬಿ ಹೇಳಿದರಂತೆ. ಏನೇ ಮಾಡಿದರೂ ಓಪನ್ ಆಗಿ ಮಾಡಬೇಕು ಎಂಬುದು ಅಂಬಿ ಸೂಚನೆ ಆಗಿತ್ತಂತೆ.

ಇದನ್ನೂ ಓದಿ: ಅಂಬರೀಷ್ ಕಾರಣದಿಂದ ಕಾರು ಖರೀದಿಸಿದ ಚರಣ್ ರಾಜ್; 40 ವರ್ಷವಾದರೂ ಇನ್ನೂ ಇದೆ

ಅಂಬರೀಷ್ ಇದ್ದಲ್ಲಿ ಒಂದು ಹೆಂಗಸು ಬರುತ್ತಿದ್ದರಂತೆ. ಅವರು ಕಾಲು ಹಿಡಿದರೂ ಅಂಬಿ ಅವರನ್ನು ಕ್ಷಮಿಸಲಿಲ್ಲ. ಕ್ಷಮೆ ಕೊಡಲೇ ಇಲ್ಲ. ಎಲೆಕ್ಷನ್​​ಗೆ ನಿಂತಾಗ ಡಬಲ್​​ಗೇಮ್ ಆಡಿದ್ದರಂತೆ. ಈ ಕಾರಣಕ್ಕೆ ಅಂಬಿ ಅವರ ಕಡೆ ತಿರುಗಿ ನೋಡಿಲ್ಲವಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:01 am, Sat, 7 February 26

Source link

Bengaluru Air Quality: ಅಂತೂ ಇಂತೂ ಎಚ್ಚೆತ್ತುಕೊಳ್ತು ಬೆಂಗಳೂರಿನ ವಾಯು ಗುಣಮಟ್ಟ! – Kannada News | Bangalore Air Pollution Crisis: Bengaluru Air quality is slightly better, Mangaluru and Udupi’s AQI is unhealthy

ಅಂತೂ ಇಂತೂ ಎಚ್ಚೆತ್ತುಕೊಳ್ತು ಬೆಂಗಳೂರಿನ ವಾಯು ಗುಣಮಟ್ಟ!

ಬೆಂಗಳೂರು, ಫೆಬ್ರುವರಿ 07: ಸಧ್ಯಕ್ಕೆ ನಗರದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಏಕಾಏಕಿ ಸುಧಾರಣೆ ಕಂದುಬಂದಿದೆ. ನಿನ್ನೆಯೂ ತಕ್ಕಮಟ್ಟಿಗೆ ಸುಧಾರಿಸಿದ್ದ ಬೆಂಗಳೂರಿನ ವಾಯು ಗುಣಮಟ್ಟ ಇಂದೂ ಎಚ್ಚೆತ್ತುಕೊಂಡಿದೆ. ಆದರೆ ಮಂಗಳೂರು ಮತ್ತು ಉಡುಪಿಯ ಏರ್ ಕ್ವಾಲಿಟಿ ಬೆಂಗಳೂರಿಗಿಂತಲೂ ಕಡೆಯಾಗಿದೆ. ದಿನದಿಂದ ದಿನಕ್ಕೆ ಈ ನಗರಗಳ AQI ಕುಸಿಯುತ್ತಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 127ಕ್ಕೆ ತಲುಪಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಮೂರು ನಾಲ್ಕು ದಿನಗಳ ಹಿಂದೆ 100ರ ಆಸು ಪಾಸಿದ್ದ ಮಂಗಳೂರಿನ AQI, ಇಂದು 172ಕ್ಕೆ ತಲುಪಿದ್ದು ಆಶ್ಚರ್ಯ ಉಂಟು ಮಾಡಿದೆ. ಈ ಹದಗೆಟ್ಟ ವಾತಾವರಣ ಹೀಗೆ ಮುಂದುವರೆದರೆ ದೆಹಲಿಯಂತೆಯೇ ಆಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –127
  • ಮಂಗಳೂರು-173
  • ಮೈಸೂರು –154
  • ಬೆಳಗಾವಿ – 166
  • ಕಲಬುರ್ಗಿ-153
  • ಶಿವಮೊಗ್ಗ – 156
  • ಬಳ್ಳಾರಿ – 155
  • ಹುಬ್ಬಳ್ಳಿ- 151
  • ಉಡುಪಿ –172
  • ವಿಜಯಪುರ –150

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪತಿಯನ್ನು ‘ಬೇಬಿ ಪಾಪಾ’ ಎಂದು ಕರೆದ ಐಶ್ವರ್ಯಾ ರೈ – Kannada News | Baby Papa Abhishek Bachchan Turns 50: Aishwarya Rai’s Viral Birthday Wish

ಬಾಲಿವುಡ್ ನಟಿ ಐಶ್ವರ್ಯ ರೈ ಹೆಸರು ಸದಾ ಸುದ್ದಿಯಲ್ಲಿರುವ ಹೆಸರು. ಐಶ್ವರ್ಯ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಐಶ್ವರ್ಯ ರೈ ಕೆಲವು ದಿನಗಳ ಕಾಲ ಡೇಟಿಂಗ್ ಮಾಡಿದ ನಂತರ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಇತ್ತೀಚೆಗೆ ಅಭಿಷೇಕ್ ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಒಂದು ಅಚ್ಚರಿಯ ವಿಷಯ ಹೊರಹಾಕಿದರು.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈಗೆ ಓರ್ವ ಮಗಳಿದ್ದಾಳೆ. ಕೆಲವು ದಿನಗಳ ಹಿಂದೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ವಿಚ್ಛೇದನದ ಬಗ್ಗೆ ಬಲವಾದ ಮಾತುಕತೆಗಳು ನಡೆದವು. ಆದರೆ ಅದು ಸುಳ್ಳಾಗಿದೆ. ಐಶ್ವರ್ಯ ರೈ ಯಾವಾಗಲೂ ತಮ್ಮ ಮಗಳು ಆರಾಧ್ಯ ಬಚ್ಚನ್ ಜೊತೆ ವಿದೇಶಕ್ಕೆ ಹೋಗುವುದನ್ನು ಕಾಣಬಹುದು.

ಇತ್ತೀಚೆಗೆ, ಐಶ್ವರ್ಯಾ ರೈ ವಿಶೇಷ ಪೋಸ್ಟ್‌ನಲ್ಲಿ ಅಭಿಷೇಕ್ ಬಗೆಗಿನ ವಿಶೇಷ ವಿಷಯವನ್ನು ಬಹಿರಂಗಪಡಿಸಿದರು. ಅಭಿಷೇಕ್ ಬಚ್ಚನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಐಶ್ವರ್ಯಾ ರೈ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡರು. ಅವರು ಅಭಿಷೇಕ್ ಬಚ್ಚನ್ ಅವರ ವಯಸ್ಸಿನ ಬಗ್ಗೆಯೂ ನೇರವಾಗಿ ಮಾತನಾಡಿದ್ದಾರೆ. ಐಶ್ವರ್ಯಾ ರೈ ಹಂಚಿಕೊಂಡ ಪೋಸ್ಟ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಅಬಿಷೇಕ್ ಅವರನ್ನು ‘ಬೇಬಿ ಪಾಪಾ’ ಎಂದು ಕರೆಯುವ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್‌ಗೆ 50 ವರ್ಷ ವಯಸ್ಸಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ನಿಮ್ರತ್ ಕೌರ್ ಜೊತೆಗಿನ ವಿವಾಹೇತರ ಸಂಬಂಧದ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್

ಅಭಿಷೇಕ್ ಬಚ್ಚನ್ ಅವರ ವಯಸ್ಸಿನ ಬಗ್ಗೆ ಐಶ್ವರ್ಯಾ ರೈ ಬಹಿರಂಗಪಡಿಸಿದ್ದಾರೆ. ಈಗ ಅಭಿಷೇಕ್ ಬಚ್ಚನ್ 50 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಕೆಲವು ದಿನಗಳ ಹಿಂದೆ ಒಂದು ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ, ಅಭಿಷೇಕ್ ಬಚ್ಚನ್ ತಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ. ತಮ್ಮ ಮಗಳು ಆರಾಧ್ಯ ಇನ್ನೂ ಸಾಮಾಜಿಕ ಮಾಧ್ಯಮದಲ್ಲಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮನೆ ಒಳಗೇ ಲಗ್ಗೆ ಇಟ್ಟು ಜಗುಲಿಯಲ್ಲಿದ್ದ ನಾಯಿಯ ಹೊತ್ತೊಯ್ದ ಚಿರತೆ: ಸಿಸಿಟಿವಿ ವಿಡಿಯೋ ವೈರಲ್ – Kannada News | Leopard Attacks Pet Dog in Didupe Belthangady, CCTV Footage Shocks Villagers in Dakshina Kannada

ಮಂಗಳೂರು, ಫೆಬ್ರವರಿ 7: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮದ ಕೊಂಡಾಳು ಪ್ರದೇಶದಲ್ಲಿ ಚಿರತೆ ದಾಳಿ ನಡೆಸಿ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿದೆ. ನಾರಾಯಣ ಗೌಡ ಎಂಬವರ ಮನೆಯ ಹೊರ ಜಗುಲಿಯಲ್ಲಿ ಮಲಗಿದ್ದ ನಾಯಿಯನ್ನು ರಾತ್ರಿ ವೇಳೆ ಚಿರತೆ ಹೊಂಚು ಹಾಕಿ ಕಚ್ಚಿ ಎಳೆದೊಯ್ದಿದೆ. ಚಿರತೆ ಮನೆಯಂಗಳಕ್ಕೆ ನುಗ್ಗಿದ ವೇಳೆ ಅಲ್ಲೇ ಮಲಗಿದ್ದ ಬೆಕ್ಕು ಅದೃಷ್ಟವಶಾತ್ ಚಿರತೆಯ ಬಾಯಿಂದ ತಪ್ಪಿಸಿಕೊಂಡಿದೆ. ನಾಯಿಯನ್ನು ಹೊತ್ತೊಯ್ದ ದೃಶ್ಯ ಮನೆಯ ಮುಂಭಾಗ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಈ ಘಟನೆ ಬಳಿಕ ದಿಡುಪೆ ಗ್ರಾಮಸ್ಥರಲ್ಲಿ ಭೀತಿ ಮನೆ ಮಾಡಿದ್ದು, ರಾತ್ರಿ ವೇಳೆ ಮನೆ ಹೊರಗೆ ಹೋಗಲು ಜನರು ಹೆದರುತ್ತಿದ್ದಾರೆ. ಈ ಹಿಂದೆ ಸಹ ದಿಡುಪೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳನ್ನು ಚಿರತೆ ಹೊತ್ತೊಯ್ದ ಘಟನೆಗಳು ನಡೆದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆಯ ಸಂಚರಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ಪ್ರಾಣಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಿಗ್ ಬಾಸ್’ ಸ್ಪರ್ಧಿಗಳಿಂದ ದೊಡ್ಮನೆ ಹಬ್ಬ; ಅಶ್ವಿನಿ-ಗಿಲ್ಲಿ ಮುಖಾಮುಖಿ

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿಗಳು ಮತ್ತೆ ಸೇರಿದ್ದಾರೆ. ಇದು ಸಾಮಾನ್ಯ ಗೆಟ್​ ಟುಗೆದರ್ ಅಲ್ಲ! ಬಿಗ್ ಬಾಸ್ ರೀತಿಯೇ ಈ ಕಾರ್ಯಕ್ರಮದಲ್ಲೂ ಸಖತ್ ಮನರಂಜನೆ ಇದೆ. ಕಾರ್ಯಕ್ರಮದ ಹೆಸರು ‘ದೊಡ್ಮನೆ ಹಬ್ಬ’. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮುಗಿದು ಒಂದು ತಿಂಗಳು ಆಗುತ್ತಾ ಬಂದಿದೆ. ಆದಾಗ್ಯೂ ಶೋ ಬಗ್ಗೆ ಹಾಗೂ ಸ್ಪರ್ಧಿಗಳ ಬಗ್ಗೆ ಇರೋ ಕ್ರೇಜ್ ಕಡಿಮೆ ಆಗಿಲ್ಲ. ಹೀಗಾಗಿ ಕಲರ್ಸ್ ವಾಹಿನಿ ಹೊಸ ಶೋ ಒಂದನ್ನು ಮಾಡಿದೆ. ಈ ಶೋಗೆ ‘ದೊಡ್ಮನೆ ಹಬ್ಬ’ ಎಂದು ಇಡಲಾಗಿದೆ. ಈ ಹಬ್ಬದಲ್ಲಿ ಭರ್ಜರಿ ಮನರಂಜನೆ ಸಿಗಲಿದೆ.

ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಬಿಗ್ ಬಾಸ್ ರೀ ಯೂನಿಯನ್; ಯಾರೆಲ್ಲ ಬಂದ್ರು?

ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕಲರ್ಸ್ ವಾಹಿನಿ ಒಂದು ಒಪ್ಪಂದ ಮಾಡಿಕೊಂಡಿರುತ್ತದೆ. ಹೀಗಾಗಿ, ಬಿಗ್ ಬಾಸ್ ಮುಗಿದು ಆರು ತಿಂಗಳವರೆಗೆ ಕಲರ್ಸ್ ವಾಹಿನಿ ಆಯೋಜನೆ ಮಾಡೋ ಶೋಗಳಿಗೆ ಸ್ಪರ್ಧಿಗಳನ್ನು ಆಹ್ವಾನಿಸಿದಗ ಬರಬೇಕು. ಈಗ ಬಿಗ್ ಬಾಸ್ ಮುಗಿದ ತಿಂಗಳ ಬಳಿಕ ಶೋ ಆಯೋಜನೆ ಮಾಡಲಾಗಿದ್ದು, ಬಹುತೇಕ ಎಲ್ಲಾ ಸ್ಪರ್ಧಿಗಳು ಹಾಜರಿ ಹಾಕಿದ್ದಾರೆ ಎನ್ನಲಾಗಿದೆ. ಈ ಶೋ ಫೆಬ್ರವರಿ 14ರ ಸಂಜೆ 6ಕ್ಕೆ ಪ್ರಸಾರ ಕಾಣಲಿದೆ.

ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಅಶ್ವಿನಿ ಹಾಗೂ ಗಿಲ್ಲಿ ನಟ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೊದಲು ಗಿಲ್ಲಿ ನಟ ಕಪ್ ಎತ್ತಿದ ಬಳಿಕ ಅಶ್ವಿನಿ ಗೌಡ ಸಾಕಷ್ಟು ಮಾತನಾಡಿದ್ದರು. ಗಿಲ್ಲಿಗೆ ಕಪ್ ಸಿಕ್ಕಿದ್ದು ಸರಿ ಅಲ್ಲ ಎಂದಿದ್ದರು. ಇದು ಚರ್ಚೆಗೆ ಕಾರಣ ಆಗಿತ್ತು. ಅದಾದ ಬಳಿಕ ಇಬ್ಬರೂ ಮೊದಲ ಬಾರಿಗೆ ಒಂದೇ ವೇದಿಕೆ ಹಂಚಿಕೊಂಡಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version