ಜೂನ್ 17ರಂದು ಫ್ರಾನ್ಸ್​ನಲ್ಲಿ ಟ್ರಂಪ್-ಮೋದಿ ನಡುವೆ ಮಹತ್ವದ ಮಾತುಕತೆ – Kannada News | PM Modi and Donald Trump To Hold Bilateral Meeting in France G7 Summit On June 17

ನವದೆಹಲಿ, ಜೂನ್ 13: ಫ್ರಾನ್ಸ್‌ನಲ್ಲಿ ಮುಂದಿನ ವಾರ ನಡೆಯಲಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್ 17ರಂದು ಮುಖಾಮುಖಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ವೈಟ್‌ಹೌಸ್ ಅಧಿಕೃತವಾಗಿ ಖಚಿತಪಡಿಸಿದೆ. 2024ರ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದ ನಂತರ, 2025ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಾಗೆ ಭೇಟಿ ನೀಡಿದ್ದರು. ಅದಾದ ಬಳಿಕ ಉಭಯ ನಾಯಕರ ನಡುವೆ ನಡೆಯುತ್ತಿರುವ ಮೊದಲ ಮುಖಾಮುಖಿ ಭೇಟಿ ಇದಾಗಿದೆ.

ಟ್ರಂಪ್ ಮತ್ತು ಮೋದಿಯವರ ಸಭೆಯು ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕವಾಗಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಇರುವ ಸಮಯದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಒಮಾನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರಿದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಪಡೆಗಳು ನಡೆಸಿದ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಂಬಂಧದ ಮೇಲೆ ಒತ್ತಡ ಉಂಟಾಗಿದೆ.

ಇದನ್ನೂ ಓದಿ: ಭಾರತದ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ದಾಳಿ; ಅಮೆರಿಕದ ರಾಯಭಾರಿಗೆ ಭಾರತ 2ನೇ ಬಾರಿ ಸಮನ್ಸ್

‘ಎಂಟಿ ಸೆಟ್ಟೆಬೆಲ್ಲೊ’ ಎಂಬ ಪಲಾವ್ ಧ್ವಜದ ತೈಲ ಟ್ಯಾಂಕರ್ ಮೇಲಿನ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು ಮತ್ತು ಇತರ 2 ಭಾರತೀಯ ಸಿಬ್ಬಂದಿಯಿದ್ದ ಹಡಗುಗಳನ್ನೂ ಗುರಿಯಾಗಿಸಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಕೇವಲ ಒಂದು ವಾರದಲ್ಲಿ ನವದೆಹಲಿಯ ಅಮೆರಿಕದ ಉಪ ರಾಯಭಾರಿಗೆ ಎರಡು ಬಾರಿ ಸಮನ್ಸ್ ಜಾರಿ ಮಾಡಿ ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿತ್ತು. ನಾಗರಿಕ ಹಡಗುಗಳ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿತ್ತು.

ಅಮೆರಿಕ ಆಡಳಿತದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಜೂನ್ 17ರ ಸಭೆಯಲ್ಲಿ ಉಭಯ ನಾಯಕರು ವ್ಯಾಪಾರ ಒಪ್ಪಂದಗಳು, ಎಚ್-1ಬಿ ವೀಸಾ ನೀತಿ, ಇಂಧನ ಸಹಕಾರ, ಪಶ್ಚಿಮ ಏಷ್ಯಾ ಸಂಘರ್ಷ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಒಂದು ವಾರದ ಸುದೀರ್ಘ ವಿದೇಶಿ ಪ್ರವಾಸವನ್ನು ಆರಂಭಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಜೂನ್ 15ರಿಂದ 17ರವರೆಗೆ ಫ್ರಾನ್ಸ್‌ನ ‘ಎವಿಯನ್-ಲೆಸ್-ಬೈನ್ಸ್’ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಇದು ಜಿ7 ಶೃಂಗಸಭೆಯಲ್ಲಿ ಅವರ ಸತತ 7ನೇ ಪಾಲ್ಗೊಳ್ಳುವಿಕೆಯಾಗಿದ್ದು, ಜಾಗತಿಕವಾಗಿ ಭಾರತವು ‘ಗ್ಲೋಬಲ್ ಸೌತ್’ನ ಪ್ರಬಲ ಧ್ವನಿಯಾಗಿ ಹೊರಹೊಮ್ಮುತ್ತಿದೆ.

ಇದಾದ ನಂತರ ಪ್ರಧಾನಿ ಮೋದಿ ಅವರು ಸ್ಲೋವಾಕಿಯಾಗೆ ಭೇಟಿ ನೀಡಲಿದ್ದಾರೆ. 1993ರಲ್ಲಿ ಸ್ಲೋವಾಕಿಯಾ ಸ್ವತಂತ್ರ ರಾಷ್ಟ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಅಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಹೀಗಾಗಿ, ಈ ಭೇಟಿ ಬಹಳ ಮಹತ್ವ ಪಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:11 pm, Sat, 13 June 26

Source link

IND vs AFG: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಹರ್ಷ್ ದುಬೆ, ಗುರ್ನೂರ್ ಬ್ರಾರ್ – Kannada News | Gurnoor Brar and Harsh Dubey Shine: India vs Afghanistan ODI Debutants Take 3 Wickets Each

ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೊದಲ ಏಕದಿನ ಪಂದ್ಯವನ್ನು ಮಳೆಯಿಂದಾಗಿ ತಲಾ 25 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 195 ರನ್​ಗಳ ಗುರಿ ನೀಡಿತು. ಅದಾಗ್ಯೂ ಅಫ್ಘನ್ ತಂಡವನ್ನು ಆರಂಭದಲ್ಲಿ ಮತ್ತು ಡೆತ್ ಓವರ್​ಗಳಲ್ಲಿ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಇದರಲ್ಲಿ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಗುರ್ನೂರ್ ಬ್ರಾರ್ (Gurnoor Brar) ಮತ್ತು ಹರ್ಷ್​ ದುಬೆ (Harsh Dubey) ಅವರ ಕೊಡುಗೆ ಅಪಾರವಾಗಿತ್ತು. ಈ ಇಬ್ಬರು ಬೌಲರ್​ಗಳು ತಲಾ 3 ವಿಕೆಟ್ ಪಡೆಯುವ ಮೂಲಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಸ್ಮರಣೀಯ ಆರಂಭ ನೀಡಿದರು.

3 ವಿಕೆಟ್ ಉರುಳಿಸಿದ ಗುರ್ನೂರ್ ಬ್ರಾರ್

ಮೊದಲನೆಯದಾಗಿ ಅರ್ಷದೀಪ್ ಸಿಂಗ್ ಜೊತೆಗೆ ಭಾರತದ ಬೌಲಿಂಗ್ ಆರಂಭಿಸುವ ಜವಾಬ್ದಾರಿ ಹೊತ್ತಿದ್ದ ಪಂಜಾಬ್‌ ವೇಗಿ ಗುರ್ನೂರ್ ಬ್ರಾರ್ ಅಫ್ಘಾನಿಸ್ತಾನ ವಿರುದ್ಧ 4.5 ಓವರ್‌ಗಳನ್ನು ಬೌಲಿಂಗ್ ಮಾಡಿ ಕೇವಲ 27 ರನ್‌ ನೀಡಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದರು. ಈ ಅದ್ಭುತ ಪ್ರದರ್ಶನದ ಮೂಲಕ ಚೊಚ್ಚಲ ಏಕದಿನ ಪಂದ್ಯದಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು.

ಭಾರತದ ಪರ ಚೊಚ್ಚಲ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹೆಸರಿನಲ್ಲಿದೆ. ಪ್ರಸಿದ್ಧ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ 54 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ ಗುರ್ನೂರ್ ಬ್ರಾರ್ 27 ರನ್​ಗಳಿಗೆ 3 ವಿಕೆಟ್ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಅತ್ಯುತ್ತಮ ಬೌಲಿಂಗ್ ಪ್ರದರ್ಶನ

  • ಪ್ರಸಿದ್ಧ್ ಕೃಷ್ಣ: 4/54 vs ಇಂಗ್ಲೆಂಡ್ (ಪುಣೆ, 2021)
  • ನೋಯೆಲ್ ಡೇವಿಡ್: 3/21 vs ವೆಸ್ಟ್ ಇಂಡೀಸ್ (ಪೋರ್ಟ್ ಆಫ್ ಸ್ಪೇನ್, 1997)
  • ವರುಣ್ ಆರನ್: 3/24 vs ಇಂಗ್ಲೆಂಡ್ (ಮುಂಬೈ, 2011)
  • ಗುರ್ನೂರ್ ಬ್ರಾರ್: 3/27 vs ಅಫ್ಘಾನಿಸ್ತಾನ (ಧರ್ಮಶಾಲಾ, 2026)
  • ಸುಬ್ರೊಟೊ ಬ್ಯಾನರ್ಜಿ: 3/30 vs ವೆಸ್ಟ್ ಇಂಡೀಸ್ (ಪರ್ತ್, 1991)

ಸ್ಪಿನ್ನರ್ ಹರ್ಷ್ ದುಬೆಗೂ 3 ವಿಕೆಟ್

ಗುರ್ನೂರ್ ಬ್ರಾರ್ ಜೊತೆಗೆ, ಚೊಚ್ಚಲ ಪಂದ್ಯವನ್ನಾಡಿದ ಹರ್ಷ್ ದುಬೆ ಕೂಡ ಉತ್ತಮ ಪ್ರದರ್ಶನ ನೀಡಿದರು. ಈ ಎಡಗೈ ಸ್ಪಿನ್ನರ್ ಮಧ್ಯಮ ಓವರ್‌ಗಳಲ್ಲಿ ಭಾರತಕ್ಕೆ ನಿರ್ಣಾಯಕ ವಿಕೆಟ್​ಗಳನ್ನು ತಂದುಕೊಟ್ಟರು. ಹರ್ಷ್ ದುಬೆ ತಾವು ಬೌಲ್ ಮಾಡಿದ ಐದು ಓವರ್‌ಗಳಲ್ಲಿ 47 ರನ್‌ ನೀಡಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಈ ಇಬ್ಬರು ಯುವ ಬೌಲರ್‌ಗಳು ಒಟ್ಟಾಗಿ ಆರು ಆಫ್ಘನ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಪರಿಣಾಮವಾಗಿ, ಭಾರತ ತಂಡವು ಅಫ್ಘಾನಿಸ್ತಾನವನ್ನು 24.5 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಬಂಧದಲ್ಲಿ ಅತಿಯಾಗಿ ಅನುಮಾನಿಸುವುದು ರಿಲೇಷನ್‌ಶಿಪ್ ಒಸಿಡಿಯ ಲಕ್ಷಣವೇ? ಹೇಗಿರುತ್ತದೆ ಈ ಡಿಸಾರ್ಡರ್ ಲಕ್ಷಣ? – Kannada News | ROCD Explained: Why Constant Doubts Can Destroy Healthy Relationships

ದಾಂಪತ್ಯ ಅಥವಾ ಪ್ರೀತಿಯಲ್ಲಿರುವವರಿಗೆ ಒಬ್ಬರ ಮೇಲೆ ಒಬ್ಬರಿಗೆ ಸಣ್ಣಪುಟ್ಟ ಅನುಮಾನಗಳು ಬರುವುದು ಸಾಮಾನ್ಯ. ಆದರೆ ಅದೇ ಅನುಮಾನ ದಿನೇದಿನೇ ಹೆಚ್ಚಾಗಿ, ಮನಸ್ಸಿನಲ್ಲಿ ನಿರಂತರ ಆತಂಕ ಹಾಗೂ ಗೊಂದಲ ಉಂಟುಮಾಡಿದರೆ ಅದನ್ನು ‘ರಿಲೇಷನ್‌ಶಿಪ್ ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್’ (Relationship OCD ಅಥವಾ ROCD) ಎಂದು ಕರೆಯಲಾಗುತ್ತದೆ. ಇದು ಮಾನಸಿಕ ಆರೋಗ್ಯಕ್ಕೆ (Mental Health) ಸಂಬಂಧಿಸಿದ ಒಂದು ಸಮಸ್ಯೆಯಾಗಿದ್ದು, ಸಂಬಂಧಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾದರೆ ಏನಿದು ರಿಲೇಷನ್‌ಶಿಪ್ ಒಸಿಡಿ, ಈ ರೀತಿ ಸಮಸ್ಯೆಯನ್ನು ನಿಯಂತ್ರಿಸಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಿಲೇಷನ್‌ಶಿಪ್ ಒಸಿಡಿ ಎಂದರೇನು?

ಸಾಮಾನ್ಯವಾಗಿ ರಿಲೇಷನ್‌ಶಿಪ್ ಒಸಿಡಿ ಇರುವ ವ್ಯಕ್ತಿಗೆ ತನ್ನ ಸಂಗಾತಿಯ ಬಗ್ಗೆ ನಿರಂತರ ಅನುಮಾನಗಳು ಕಾಡುತ್ತವೆ. “ನನ್ನ ಸಂಗಾತಿ ನನಗೆ ಸರಿಯಾದ ವ್ಯಕ್ತಿಯೇ?”, “ಅವರು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾರೆಯೇ?”, “ಅವರು ನನಗೆ ಮೋಸ ಮಾಡುತ್ತಿದ್ದಾರೆಯೇ?” ಎಂಬ ಪ್ರಶ್ನೆಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿರುತ್ತವೆ. ಈ ರೀತಿಯ ಆಲೋಚನೆಗಳು ವ್ಯಕ್ತಿಯ ಮಾನಸಿಕ ಶಾಂತಿಯನ್ನು ಹಾಳು ಮಾಡಬಹುದು ಇದನ್ನೇ ರಿಲೇಷನ್‌ಶಿಪ್ ಒಸಿಡಿ ಎಂದು ಕರೆಯಲಾಗುತ್ತದೆ.

ರಿಲೇಷನ್‌ಶಿಪ್ ಒಸಿಡಿಯ ಲಕ್ಷಣಗಳು ಹೇಗಿರುತ್ತದೆ?

  • ಸಂಗಾತಿಯ ಫೋನ್ ಅಥವಾ ವೈಯಕ್ತಿಕ ವಿಚಾರಗಳನ್ನು ಪದೇ ಪದೇ ಪರಿಶೀಲಿಸುವುದು
  • ಸಂಗಾತಿಯ ಸಣ್ಣ ತಪ್ಪುಗಳೇ ದೊಡ್ಡದಾಗಿ ಕಾಣುವುದು
  • ಸಂಬಂಧದಲ್ಲಿ ಪರಿಪೂರ್ಣತೆ ಹುಡುಕುವುದು
  • ಸಂಗಾತಿಯಿಂದ ನಿರಂತರ ಭರವಸೆಯನ್ನು ಆಶಿಸುವುದು
  • ಇತರರ ಸಂಬಂಧಗಳೊಂದಿಗೆ ತಮ್ಮ ಸಂಬಂಧವನ್ನು ಹೋಲಿಕೆ ಮಾಡುವುದು
  • “ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾರೆಯೇ?” ಎಂಬ ಅನುಮಾನದಲ್ಲಿ ಬದುಕುವುದು
    ಈ ರೀತಿಯ ವರ್ತನೆಗಳು ಸಂಬಂಧದಲ್ಲಿ ಒತ್ತಡ ಮತ್ತು ಅಂತರ ಹೆಚ್ಚಿಸಬಹುದು.

ಯಾವಾಗ ಅನುಮಾನ ನಿಜವಾಗಿರಬಹುದು?

ಕೆಲವೊಮ್ಮೆ ಸಂಗಾತಿಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ಅನುಮಾನಗಳು ಸಹಜವಾಗಿರಬಹುದು. ಉದಾಹರಣೆಗೆ, ಸಂಗಾತಿ ಹೆಚ್ಚು ರಹಸ್ಯವಾಗಿ ಮಾತನಾಡಲು ಆರಂಭಿಸಿದರೆ, ಮಾತುಕತೆ ಕಡಿಮೆ ಮಾಡಿದರೆ ಅಥವಾ ವರ್ತನೆ ಬದಲಾಗಿದೆಯೆಂದು ಕಂಡುಬಂದರೆ ಸಂಬಂಧದಲ್ಲಿ ಸಮಸ್ಯೆ ಇರಬಹುದೆಂಬ ಸೂಚನೆಯಾಗಿರಬಹುದು.

ರಿಲೇಷನ್‌ಶಿಪ್ ಒಸಿಡಿಯನ್ನು ಹೇಗೆ ನಿಯಂತ್ರಿಸಬಹುದು?

ತಮ್ಮ ಭಾವನೆಗಳನ್ನು ಮನಸ್ಸಿನೊಳಗೆ ಇಟ್ಟುಕೊಳ್ಳುವುದಕ್ಕಿಂತ ಸಂಗಾತಿಯೊಂದಿಗೆ ನೇರವಾಗಿ ಮಾತನಾಡುವುದು ಮುಖ್ಯ. ಅನುಮಾನಗಳು ಹೆಚ್ಚಾದರೆ ವಿಶ್ವಾಸಾರ್ಹ ವ್ಯಕ್ತಿ ಅಥವಾ ಮನೋವೈದ್ಯರ ಸಲಹೆ ಪಡೆಯಬಹುದು. ಧ್ಯಾನ, ಯೋಗ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುವ ಚಟುವಟಿಕೆಗಳು ಸಹ ಸಹಾಯಕರಾಗುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಲಗಾನ್’ ಸಿನಿಮಾಕ್ಕೆ 25ರ ಸಂಭ್ರಮ, ಮತ್ತೆ ಜೊತೆಯಾದ ಹಳೆಯ ‘ತಂಡ’ – Kannada News | 25 years for Lagaan, movie re release in many cities

ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾ ‘ಲಗಾನ್’ (Lagaan). ಆಸ್ಕರ್​​ಗೆ ನಾಮಿನೇಟ್ ಆಗಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ. ಇದೇ ಖುಷಿಯಲ್ಲಿ ‘ಲಗಾನ್’ ಸಿನಿಮಾ ಮರು ಬಿಡುಗಡೆ ಆಗಿದೆ. ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಅಭಿಮಾನಿಗಳು ತಂಡೋಪತಂಡವಾಗಿ ಸಿನಿಮಾಕ್ಕೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಮರು ಬಿಡುಗಡೆ ಖುಷಿಯಲ್ಲಿ ‘ಲಗಾನ್’ ಚಿತ್ರತಂಡವೂ ಸಹ ಮತ್ತೆ ಒಂದಾಗಿ ಸಂವಾದ ನಡೆಸಿದೆ.

ಆಮಿರ್ ಖಾನ್, ನಿರ್ದೇಶಕ ಅಶುತೋಷ್ ಗೋವಾರಿಕರ್, ಹಿರಿಯ ನಟಿ ಸುಹಾಸಿನಿ ಮುಳೆ, ನಟರಾದ ಅಖಿಲೇಂದ್ರ ಮಿಶ್ರಾ, ಯಶ್‌ಪಾಲ್ ಶರ್ಮಾ, ರಾಜ್ ಝುತ್ಶಿ, ಹಾಗೂ ಆಮಿರ್ ಅವರ ಮಾಜಿ ಪತ್ನಿ ಮತ್ತು ಸಿನಿಮಾದ ಕಾರ್ಯಕಾರಿ ನಿರ್ಮಾಪಕಿ ಆಗಿದ್ದ ರೀನಾ ದತ್ತಾ. ಚಿತ್ರತಂಡದ ಸದಸ್ಯರು ಫೋಟೋಗ್ರಾಫರ್‌ಗಳೊಂದಿಗೆ ಸಂವಾದ ನಡೆಸುತ್ತಾ, ಚಿತ್ರೀಕರಣದ ದಿನಗಳ ಸಿಹಿ ನೆನಪುಗಳನ್ನು ಹಂಚಿಕೊಂಡರು. ವಿಶೇಷವೆಂದರೆ ಸಿನಿಮಾನಲ್ಲಿ ನಟಿಸಿರುವ ಕೆಲ ಬ್ರಿಟಿಷ್ ನಟರು ಸಹ ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಇದನ್ನೂ ಓದಿ:‘ಲಗಾನ್’ ಸಿನಿಮಾಗೆ 25 ವರ್ಷಗಳ ಸಂಭ್ರಮ; ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ

2001ರಲ್ಲಿ ಬಿಡುಗಡೆಯಾದ ‘ಲಗಾನ್’, 1893ರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಹಿನ್ನೆಲೆಯನ್ನು ಹೊಂದಿದೆ. ಬರಗಾಲದಿಂದ ನಲುಗಿದ ಹಳ್ಳಿಯ ಜನರು ಬ್ರಿಟಿಷ್ ಅಧಿಕಾರಿ ವಿಧಿಸಿದ ಅತಿಯಾದ ತೆರಿಗೆಯ ವಿರುದ್ಧ ಹೋರಾಡಲು ಕ್ರಿಕೆಟ್ ಪಂದ್ಯವನ್ನೇ ಆಯುಧವನ್ನಾಗಿ ಮಾಡಿಕೊಳ್ಳುವ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಧೈರ್ಯ, ಏಕತೆ ಮತ್ತು ಹೋರಾಟದ ಕಥೆಯನ್ನು ಒಳಗೊಂಡಿರುವ ಈ ಚಿತ್ರವು ಹಿಂದಿ ಚಿತ್ರರಂಗದ ಅತ್ಯಂತ ಪ್ರೀತಿಯ ಸಿನಿಮಾಗಳಲ್ಲಿ ಒಂದಾಗಿದೆ.

ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದು, 2002ರಲ್ಲಿ ಅಕಾಡೆಮಿ ಪ್ರಶಸ್ತಿಯ (ಆಸ್ಕರ್) ‘ಅತ್ಯುತ್ತಮ ವಿದೇಶಿ ಭಾಷಾ ಚಿತ್ರ’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತು. 1957ರ ‘ಮದರ್ ಇಂಡಿಯಾ’ ಮತ್ತು 1988ರ ‘ಸಲಾಮ್ ಬಾಂಬೆ!’ ನಂತರ ಈ ಗೌರವ ಪಡೆದ ಮೂರನೇ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ‘ಲಗಾನ್’ ಪಾತ್ರವಾಗಿತ್ತು. ಸಿನಿಮಾಕ್ಕೆ ಆಸ್ಕರ್ ಸಿಗಲಿಲ್ಲವಾದರೂ ಭಾರಿ ಜನಪ್ರೀತಿ ಈ ಸಿನಿಮಾಕ್ಕೆ ಧಕ್ಕಿತ್ತು.

‘ಲಗಾನ್’ ಸಿನಿಮಾಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದು, ಸಿನಿಮಾದ ವಿಡಿಯೋ ತುಣುಕುಗಳು, ಹಾಡುಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾದ ಎಲ್ಲ ಹಾಡುಗಳು ಸಹ ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

W,W,W..ಆಂಗ್ಲರ ನೆಲದಲ್ಲೂ ಮಿಂಚಿದ ಮಾನವ್ ಸುತಾರ್

Source link

ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್​​​ ಖಡಕ್​ ಸೂಚನೆ

ಬೆಂಗಳೂರು, ಜೂನ್​ 13: ಸಿಎಂ ಡಿಕೆ ಶಿವಕುಮಾರ್​​ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಡಿಸಿ, ಎಸ್​​ಪಿ ಮತ್ತು ಸಿಇಒಗಳ ಜೊತೆ ಮಹತ್ವದ ಸಭೆ ಮಾಡಿದರು. ಸುಮಾರು ಏಳು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸುವ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್​, ರಾಜ್ಯದ ಜನರು ನಮ್ಮ ಮೇಲೆ ಬಹಳ ನಿರೀಕ್ಷೆಗಳನ್ನಿಟ್ಟಿದ್ದಾರೆ. ಕಚೇರಿಗಳಿಗೆ ಬಂದ ಜನರಿಗೆ ಅಧಿಕಾರಿಗಳು ಸ್ಪಂದಿಸಬೇಕು. ಹಾಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ನಮ್ಮದು ಒಂದೇ ತಂಡ. ಕರ್ನಾಟಕಕ್ಕಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ

ನವದೆಹಲಿ, ಜೂನ್ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು (ಶನಿವಾರ) ಫ್ರಾನ್ಸ್ ಮತ್ತು ಸ್ಲೋವಾಕಿಯಾ ದೇಶಗಳಿಗೆ ಒಂದು ವಾರದ ಸುದೀರ್ಘ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಅವಧಿಯಲ್ಲಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ವಿಶ್ವ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ತಮ್ಮ ವಿದೇಶಿ ಪ್ರವಾಸಕ್ಕೂ ಮುನ್ನ ನೀಡಿದ ಹೇಳಿಕೆಯಲ್ಲಿ ಪ್ರಧಾನಿ ಮೋದಿ (PM Modi) ಭಾರತದ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ಫ್ರಾನ್ಸ್ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಹೇಳಿದ್ದಾರೆ. ಹಾಗೆಯೇ, 1993ರಲ್ಲಿ ಸ್ಲೋವಾಕಿಯಾ ಸ್ವತಂತ್ರ ರಾಷ್ಟ್ರವಾದ ನಂತರ ಭಾರತದ ಪ್ರಧಾನಮಂತ್ರಿಯೊಬ್ಬರು ಆ ದೇಶಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಇದು ಉಭಯ ದೇಶಗಳ ಬೆಳೆಯುತ್ತಿರುವ ದ್ವಿಪಕ್ಷೀಯ ಬಾಂಧವ್ಯದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ಅವರು ತಿಳಿಸಿದ್ದಾರೆ.

(Video Source: BJP)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುವ ಅಭ್ಯಾಸ ಎಷ್ಟು ಡೇಂಜರಸ್‌ ಗೊತ್ತಾ? – Kannada News | What happens if you sleep on an empty stomach at night?

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿದಾಯಕ ಆಹಾರವನ್ನು ಸೇವಿಸುವಂತೆ ರಾತ್ರಿ ಹಗುರವಾದ ಆಹಾರವನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಕೆಲಸದ ಒತ್ತಡ, ಆಯಾಸ ಮತ್ತು ಕೆಲವೊಮ್ಮೆ ಕೋಪದಿಂದಾಗಿ ಅನೇಕ ಜನರು ರಾತ್ರಿ (night) ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ಇನ್ನೂ ಕೆಲವರು ತೂಕ ಇಳಿಸಿಕೊಳ್ಳುವ ಸಲುವಾಗಿ ರಾತ್ರಿ ಊಟವನ್ನು ಸ್ಕಿಪ್‌ ಮಾಡುತ್ತಾರೆ. ರಾತ್ರಿ ಊಟ ಮಾಡದೆ  ಖಾಲಿ ಹೊಟ್ಟೆಯಲ್ಲಿ ಮಲಗುವ ಈ ಅಭ್ಯಾಸವು ದೇಹಕ್ಕೆ ತುಂಬಾ ಹಾನಿಕಾರಕವಂತೆ. ಹಾಗಿದ್ದರೆ ಊಟ ಮಾಡದೆ ಮಲಗುವುದರಿಂದ ಏನೆಲ್ಲಾ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.

ರಾತ್ರಿ ಊಟ ಮಾಡದೆ ಮಲಗುವುದರಿಂದ ಏನಾಗುತ್ತದೆ?

ಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆ ಅಪಾಯ ಹೆಚ್ಚಾಗುತ್ತದೆ: ದೀರ್ಘಕಾಲ ಖಾಲಿ ಹೊಟ್ಟೆಯಲ್ಲಿ ಇದ್ದರೆ ಇದು ಜಠರದುರಿತ, ಆಮ್ಲೀಯತೆ, ಎದೆಯುರಿ ಮತ್ತು ಹೊಟ್ಟೆಯ ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ ರಾತ್ರಿ ಊಟ ಮಾಡದೆ ಮಲಗಿದೆ ವಿಶೇಷವಾಗಿ ಬೆಳಿಗ್ಗೆ ಎದ್ದ ನಂತರ ತಲೆನೋವು, ವಾಕರಿಕೆ ಮತ್ತು ಆಯಾಸದಂತಹ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು.

ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು: ಹಸಿವಿನಿಂದ ಕೆಲವರಿಗೆ ಗಾಢ ನಿದ್ರೆ ಬರದಿರಬಹುದು. ಇದರಿಂದಾಗಿ ರಾತ್ರಿಯಲ್ಲಿ ಪದೇ ಪದೇ ಎಚ್ಚರಗೊಳ್ಳುವುದು, ಮಧ್ಯರಾತ್ರಿ ಹಸಿವಾಗುವುದು, ಬೆಳಿಗ್ಗೆ ಉತ್ಸಾಹವಿಲ್ಲದೆ ಎಚ್ಚರಗೊಳ್ಳುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಲಘು ಭೋಜನವು ಉತ್ತಮ ನಿದ್ರೆ ಮತ್ತು ದೈಹಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಪೌಷ್ಟಿಕಾಂಶದ ಕೊರತೆಯ ಸಾಧ್ಯತೆ: ರಾತ್ರಿ ಊಟ ಮಾಡದೆ ಮಲಗುವ ಅಬ್ಯಾಸದಿಂದ   ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ಕೊರತೆ ಉಂಟಾಗಬಹುದು, ಇದು ಸ್ನಾಯು ದೌರ್ಬಲ್ಯ, ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಮತ್ತು ತೀವ್ರ ಆಯಾಸಕ್ಕೆ ಕಾರಣವಾಗಬಹುದು.

ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಆಗಾಗ್ಗೆ ಭೋಜನವನ್ನು ಬಿಟ್ಟುಬಿಡುವುದು ಅಥವಾ ಸರಿಯಾಗಿ ತಿನ್ನದಿದ್ದರೆ ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಅಡ್ಡಿಪಡಿಸಬಹುದು. ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ಸೇವಿಸದಿರುವುದು ನಿಮ್ಮ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ, ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ:  ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್‌ರೂಮ್‌ನಲ್ಲಿ ಗಿಡಗಳನ್ನಿಡಿ

ರಾತ್ರಿಯಲ್ಲಿ  ಏನು ತಿನ್ನಬೇಕು?

ಖಾಲಿ ಹೊಟ್ಟೆಯಲ್ಲಿ ಮಲಗುವ ಬದಲು, ಹಗುರವಾದ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ. ತರಕಾರಿ ಸೂಪ್, ಓಟ್ ಮೀಲ್, ಹಣ್ಣುಗಳು, ಮೊಸರು, ಸಣ್ಣ ಪ್ರಮಾಣದಲ್ಲಿ ಚಪಾತಿ ಮತ್ತು ಹೆಸರುಕಾಳಿನ ಗಂಜಿ ಮುಂತಾದ ಆಹಾರಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಇವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಹೇರುವುದಿಲ್ಲ.

ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದಕ್ಕಿಂತ ಮಲಗುವ  ಎರಡು ಅಥವಾ ಮೂರು ಗಂಟೆಗಳ ಮೊದಲು ಮಧ್ಯಮ ಮತ್ತು ಆರೋಗ್ಯಕರ ಊಟವನ್ನು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ಊಟವನ್ನು ಬಿಟ್ಟುಬಿಡುವ ಬದಲು, ಸಮತೋಲಿತ ಆಹಾರ, ವ್ಯಾಯಾಮ ಮತ್ತು ನಿಯಮಿತ ಜೀವನಶೈಲಿಯನ್ನು ಅನುಸರಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಷಮೆ ಕೇಳಿದ ಕಮಿಡಿಯನ್ ಪ್ರಣಿತ್, ಝಾಡಿಸಿದ ‘ಕಿರಿಕ್’ ಹುಡುಗಿ ಸಂಯುಕ್ತ – Kannada News | Samyuktha Hegde slams Pranit More’s apology over 370 biryani row, calling it shameful

ಕಮಿಡಿಯನ್​ಗಳು ಕೆಲವರು ಪದೇ ಪದೇ ಋಣಾತ್ಮಕ ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಕೆಲ ಕಮಿಡಿಯನ್​​ಗಳು ಹಾಸ್ಯದ ಹೆಸರಲ್ಲಿ ತೀರ ಅಶ್ಲೀಲ, ನೈತಿಕವಲ್ಲದ ವಿಷಯಗಳನ್ನು ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಮತ್ತು ಕಾನೂನಿನಂದ ಹಾಗೂ ಸಮಾಜದಿಂದ ತೀವ್ರ ಟೀಕೆ ಮತ್ತು ವಿಮರ್ಶೆಗೆ ಒಳಗಾಗುತ್ತಿದ್ದಾರೆ. ಕಮಿಡಿಯನ್ ಪ್ರಣಿತ್ ಮೋರೆ (Pranit More) ಇದೀಗ ಇಂಥಹದ್ದೇ ಒಂದು ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಗ್​​ಬಾಸ್​​ಗೆ ಸಹ ಹೋಗಿ ಬಂದಿರುವ ಪ್ರಣಿತ್ ಮೋರೆ, ನಡೆಸಿಕೊಡುವ ಶೋ ಒಂದರಲ್ಲಿ ವ್ಯಕ್ತಿಯೊಬ್ಬ 370 ರೂಪಾಯಿ ಬಿರಿಯಾನಿ ಕೊಡಿಸಿ, ಯುವತಿಯನ್ನು ಹೇಗೆಲ್ಲ ತಾನು ‘ಬಳಸಿಕೊಂಡೆ’ ಎಂದು ವಿವರಿಸಿದ್ದ, ಪ್ರಣಿತ್ ಮೋರೆ ಸಹ ಅದನ್ನು ಎಂಜಾಯ್ ಮಾಡಿ ನಕ್ಕಿದ್ದರು, ಆ ಘಟನೆ ವಿವಾದವಾಗಿ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೋರೆ ಹಾಗೂ ಇನ್ನೂ ಇಬ್ಬರ ವಿರುದ್ಧ ದೂರು ಸಹ ದಾಖಲಾಗಿದೆ.

ಇದೀಗ ಪ್ರಣಿತ್ ಮೋರೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಕ್ಷಮೆ ಕೇಳಿದ್ದಾನೆ. ನಾನು ಆ ಕ್ಷಣದೊಂದಿಗೆ ಸನ್ನಿವೇಶದೊಂದಿಗೆ ಬೆರೆತು ಹೋಗಿ ನನ್ನತನ ಮರೆತೆ ಎಂದೆಲ್ಲ ಹೇಳಿದ್ದಾರೆ. ಆದರೆ ಈ ಕ್ಷಮೆಯನ್ನು ಹಲವರು ತಿರಸ್ಕರಿಸಿದ್ದಾರೆ. ಕನ್ನಡದ ನಟಿ, ‘ಕಿರಿಕ್ ಪಾರ್ಟಿ’ ಮೂಲಕ ಕಿರಿಕ್ ಹುಡುಗಿ ಎಂದೇ ಖ್ಯಾತವಾಗಿರುವ ಸಂಯುಕ್ತ ಹೆಗ್ಡೆ ಸಹ ಪ್ರಣಿತ್ ಮೋರೆ ಪೋಸ್ಟ್​​ಗೆ ಕಮೆಂಟ್ ಹಾಕಿದ್ದು, ಸರಿಯಾಗಿ ಝಾಡಿಸಿದ್ದಾರೆ.

‘ಪ್ರಣೀತ್, ಟೆಲಿಪ್ರಾಂಪ್ಟರ್ ಓದುವುದನ್ನು ನಿಲ್ಲಿಸು. ನೀನು ಆಕಸ್ಮಿಕವಾಗಿ ಏನನ್ನೂ ಹೇಳಿಲ್ಲ ಅಥವಾ ಯಾರೂ ನಿಮ್ಮನ್ನು ಪ್ರಚೋದಿಸಿಲ್ಲ, ನಿಮ್ಮ ವ್ಯಕ್ತಿತ್ವ ಹೇಗಿದೆಯೋ ಹಾಗೆಯೇ ವರ್ತಿಸಿದ್ದೀರಿ. ಆ ವ್ಯಕ್ತಿ 370 ರೂ ಬಿರಿಯಾನಿ ಕತೆ ಹೇಳಿದಾಗ ನೀವು ವೇದಿಕೆ ಮೇಲೆ ಎಂಜಾಯ್ ಮಾಡಿ ನಕ್ಕ ರೀತಿ ನೋಡಿದ್ದೇವೆ. ನೀವು ಕೇಳಿದ ಅತ್ಯುತ್ತಮ ವಿಷಯ ಎಂಬಂತೆ ನೀವು ಅಂದು ವರ್ತಿಸಿದ್ದಿರಿ. ಇದು ನಾಚಿಕೆಗೇಡು, ಇದು ಅತ್ಯಾಚಾರ ಸಂಸ್ಕೃತಿ. ನಮ್ಮ ದೇಶದ ಹೆಚ್ಚಿನ ಮನಸ್ಸುಗಳು ಇದು ಸರಿ ಎಂದು ನಂಬುವಂತೆ ಕಂಡೀಷನಿಂಗ್ ಆಗಿವೆ, ಆದರೆ ಇದು ಸರಿಯಲ್ಲ. ನಿಮ್ಮ ಕ್ಷಮೆಯಾಚನೆಗೆ ಯಾವುದೇ ಅರ್ಥವಿಲ್ಲ. ನೀವು ಎಷ್ಟು ಅಸಹ್ಯಕರ ವ್ಯಕ್ತಿ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಕೇವಲ ನೀವು ಮತ್ತು ಆ ವ್ಯಕ್ತಿ ಮಾತ್ರವಲ್ಲ, ಆ ಕೋಣೆಯಲ್ಲಿದ್ದ ಪ್ರತಿಯೊಬ್ಬರೂ ಈ ಸಮಸ್ಯೆಗೆ ಕಾರಣರು. ಅತ್ಯಾಚಾರವನ್ನು ಸಾಮಾನ್ಯೀಕರಿಸದಿದ್ದಾಗ ಮಾತ್ರ ಹಾಸ್ಯವು ಹಾಸ್ಯವಾಗಿರುತ್ತದೆ. ಯಾವುದನ್ನಾದರೂ ಹಾಸ್ಯ ಎಂದು ಮಾರಾಟ ಮಾಡಿ, ಜನರು ಅದಕ್ಕೆ ಚೆನ್ನಾಗಿ ಪ್ರತಿಕ್ರಿಯಿಸಬೇಕೆಂದು ನಿರೀಕ್ಷಿಸಬೇಡಿ. ಪ್ರತಿ ಗಂಟೆಗೆ 4 ಅತ್ಯಾಚಾರಗಳು ವರದಿಯಾಗುವ ದೇಶದಲ್ಲಿ, ಇದು ಹಾಸ್ಯವಲ್ಲ’ ಎಂದು ಸಂಯುಕ್ತಾ ಹೆಗ್ಡೆ ಹೇಳಿದ್ದಾರೆ.

ಇದನ್ನೂ ಓದಿ:ಗಂಭೀರ ಲೋಪ ಎಸಗಿದ ಮಲಯಾಳಂ ಸಿನಿಮಾ, ತನಿಖೆ ಆರಂಭಿಸಿದ ಸಿಎಬಿಎಫ್​​ಸಿ

ಪ್ರಣಿತ್ ಮೋರೆ ಶೋಗೆ ಹೋಗಿದ್ದ ಹಿಮಾಂಶು ಹೆಸರಿನ ವ್ಯಕ್ತಿ, ತಾವು ಯುವತಿಯೊಬ್ಬಾಕೆಗೆ 370 ರೂಪಾಯಿಯ ಬಿರಿಯಾನಿ ಕೊಡಿಸಿ ಆ ಬಳಿಕ ಆಕೆಯನ್ನು ರೂಂಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡೆ ಎಂದಿದ್ದ. ಅವನ ಮಾತಿಗೆ ಪ್ರಣಿತ್ ಸೇರಿದಂತೆ ಅಲ್ಲಿದ್ದವರೆಲ್ಲ ನಕ್ಕಿದ್ದರು. ಆ ಬಳಿಕ ಅದೇ ಶೋನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು, ‘ತಾವು ಮತ್ತು ತಮ್ಮ ಸಹಪಾಠಿಗಳು ಆಸ್ಪತ್ರೆಗೆ ಬರುವ ಶವಗಳನ್ನ ಜನನಾಂಗವನ್ನು ನೋಡಿ ಅವುಗಳ ಆಕಾರವನ್ನು ನೋಡಿ ತಮಾಷೆ ಮಾಡಿಕೊಂಡು ನಗುವುದಾಗಿ ಹೇಳಿದ್ದರು. ಈ ಮೂವರ ಮೇಲೂ ಇದೀಗ ಎಫ್​​ಐಆರ್ ಆಗಿದೆ. ಮಹಾರಾಷ್ಟ್ರ ಸಿಎಂ ಸೇರಿದಂತೆ ಹಲವರು ಪ್ರಣಿತ್ ಮೋರೆ ಶೋನಲ್ಲಿ ನಡೆದಿರುವ ಈ ಅಶ್ಲೀಲ ಹಾಸ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟ್ರಾವೆಲ್ ಮಾಡುವಾಗ ವಾಂತಿಯಾಗುತ್ತಾ? ಹಾಗಿದ್ರೆ ಈ ಸಮಸ್ಯೆ ತಡೆಗಟ್ಟಲು ಈ ರೀತಿ ಮಾಡಿ – Kannada News | Motion Sickness Symptoms And Prevention Tips By Health Expert

ಪ್ರಯಾಣ (Travel) ಎಂದರೆ ಬಹುತೇಕರಿಗೆ ಸಂತೋಷ. ಆದರೆ ಕೆಲವರಿಗೆ ಬಸ್‌, ಕಾರು ಅಥವಾ ಘಾಟ್‌ ರಸ್ತೆ ಪ್ರಯಾಣ ಎಂದರೆ ವಾಂತಿ, ತಲೆಸುತ್ತು, ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟ ಆರಂಭವಾಗುತ್ತದೆ. ಈ ಸ್ಥಿತಿಯನ್ನು ‘ಮೋಶನ್ ಸಿಕ್ನೆಸ್’ (Motion Sickness) ಎಂದು ಕರೆಯಲಾಗುತ್ತದೆ. ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಪ್ರಯಾಣದ ಉತ್ಸಾಹವೇ ಕಡಿಮೆಯಾಗಬಹುದು. ಜೊತೆಗೆ ಸುಸ್ತು ಸೇರಿದಂತೆ ಮತ್ತಿತರ ಸಮಸ್ಯೆ ಕಂಡುಬರಬಹುದು. ಹಾಗಾಗಿ ಈ ರೀತಿ ಸಮಸ್ಯೆಗೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಮತ್ತು ವಾಂತಿಯಾಗದಂತೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೋಶನ್ ಸಿಕ್ನೆಸ್ ಗೆ ಕಾರಣವೇನು?

ನಮ್ಮ ದೇಹದಲ್ಲಿ ಕಣ್ಣು, ಒಳಕಿವಿ ಮತ್ತು ಮೆದುಳು ಪರಸ್ಪರ ಸಂಪರ್ಕ ಹೊಂದಿದ್ದು ದೇಹದ ಸಮತೋಲನವನ್ನು ಕಾಪಾಡುತ್ತವೆ. ಪ್ರಯಾಣದ ವೇಳೆ ಒಳಕಿವಿ ವಾಹನದ ಚಲನೆಯನ್ನು ಗುರುತಿಸುತ್ತದೆ. ಆದರೆ ಕಣ್ಣುಗಳು ಫೋನ್‌, ಪುಸ್ತಕ ಅಥವಾ ವಾಹನದ ಒಳಭಾಗದ ಸ್ಥಿರ ವಸ್ತುಗಳನ್ನು ನೋಡುತ್ತಿರುವಾಗ ಮೆದುಳಿಗೆ ಗೊಂದಲ ಉಂಟಾಗುತ್ತದೆ. ಇದರಿಂದ ವಾಂತಿ, ತಲೆಸುತ್ತು, ಬೆವರುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸಾಮಾನ್ಯ ಲಕ್ಷಣಗಳು:

  • ವಾಂತಿ
  • ತಲೆಸುತ್ತು
  • ಬೆವರುವುದು
  • ಮುಖ ಬಿಳಿಯಾಗಿ ಕಾಣುವುದು
  • ದೌರ್ಬಲ್ಯ
  • ಹೊಟ್ಟೆಯಲ್ಲಿ ಸಂಕಟ
    ಮೈಗ್ರೇನ್ ಸಮಸ್ಯೆ ಇರುವವರು ಹಾಗೂ ಮಕ್ಕಳಲ್ಲಿ ಈ ತೊಂದರೆ ಹೆಚ್ಚು ಕಾಣಿಸಬಹುದು.

ಇದನ್ನೂ ಓದಿ: ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗೆ ಆಹಾರ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಕಾರಣವಾಗಿರಬಹುದು!

ವಾಂತಿಯಾಗದಂತೆ ತಡೆಯಲು ಏನು ಮಾಡಬೇಕು?

ಪ್ರಯಾಣಕ್ಕೂ ಮೊದಲು ತುಂಬಾ ಎಣ್ಣೆ ಅಥವಾ ಹೊಟ್ಟೆ ಬಿರಿಯುವಷ್ಟು ಆಹಾರ ಸೇವನೆ ಮಾಡಬಾರದು. ಹಗುರವಾದ ಆಹಾರ ಸೇವಿಸಬೇಕು. ಪ್ರಯಾಣದ ವೇಳೆ ಸಾಕಷ್ಟು ನೀರು ಕುಡಿಯಬೇಕು. ವಾಹನದಲ್ಲಿ ಸಾಧ್ಯವಾದರೆ ಕಿಟಕಿಯ ಪಕ್ಕ ಕುಳಿತು ಹೊರಗಿನ ದೂರದ ದೃಶ್ಯಗಳನ್ನು ನೋಡುತ್ತಿರಬೇಕು. ಜೊತೆಗೆ ಪ್ರಯಾಣದ ವೇಳೆ ಮೊಬೈಲ್ ಬಳಸುವುದು ಅಥವಾ ಪುಸ್ತಕ ಓದುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಹಾಗಾಗಿ ಕಣ್ಣು ಮತ್ತು ಒಳಕಿವಿ ನೀಡುವ ಸಂದೇಶಗಳಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಪುದೀನಾ ಮತ್ತು ನಿಂಬೆಹಣ್ಣು ಪ್ರಯಾಣ ಮಾಡುವಾಗ ಆಗುವ ವಾಂತಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಪ್ರಯಾಣಕ್ಕೂ ಮೊದಲು ಸ್ವಲ್ಪ ನಿಂಬೆ ರಸ ಸೇವಿಸುವುದು ಒಳ್ಳೆಯದು. ಪುದೀನಾ ಚಹಾ ಕೂಡ ಸಮಸ್ಯೆ ತಡೆಗಟ್ಟಲು ಸಹಾಯ ಮಾಡಬಹುದು.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಪ್ರತಿ ಪ್ರಯಾಣದಲ್ಲೂ ತೀವ್ರ ವಾಂತಿ, ತಲೆಸುತ್ತು ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಬೇಕು. ಕೆಲ ಸಂದರ್ಭಗಳಲ್ಲಿ ವೈದ್ಯರು ಆಂಟಿ- ಮೋಶನ್ ಸಿಕ್ನೆಸ್ ಮಾತ್ರೆಗಳನ್ನು ಸೂಚಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version