ಬೆಳಗಾವಿ, (ಏಪ್ರಿಲ್ 12): ಅವರಿಬ್ರು ಪ್ರೀತಿಸಿ ಮದುವೆ ಆಗಿದ್ರು. 14 ವರ್ಷದ ಅವರ ಸುಖ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ್ಲೇ ಆ ಸಂಸಾರಕ್ಕೆ ಅದೊಬ್ಬ ಎಂಟ್ರಿ ಆಗಿದ್ದ. ನೋಡ ನೋಡ್ತಿದ್ದಂತೆ ಆ ಸಂಸಾರವನ್ನೇ ಆ ಪಾಪಿ ಛಿದ್ರ ಮಾಡಿದ್ದಾನೆ. ಪ್ರಿಯಕರನಿಗಾಗಿ ಗಂಡನನ್ನೇ ಕೊಲ್ಲಿಸಿದ ಪಾಪಿ ಪತ್ನಿ ಅರೆಸ್ಟ್ ಆಗಿದ್ದೇ ರೋಚಕವಾಗಿದೆ. ಹೌದು… ಬೆಳಗಾವಿಯಲ್ಲಿ (Belagavi) ಪತ್ನಿಯಿಂದಲೇ ಪತಿ ಕೊಲೆ ಆಗಿದ್ದು, ನೌಟಂಕಿ ಆಟ ಆಡ್ತಿದ್ದ ಈ ಡೌವ್ರಾಣಿ ಪ್ರಿಯಕರನ ಜತೆ ಹಿಂಡಲಗಾ ಜೈಲುಪಾಲಾಗಿದ್ದಾಳೆ.
ಅವಿನಾಶ್- ಲಕ್ಷ್ಮೀ ಅನ್ನೋ ಈ ಜೋಡಿ 14 ವರ್ಷಗಳ ಹಿಂದೆಯೇ ಪ್ರೀತಿಸಿ ಮದುವೆ ಆಗಿದ್ರು. ಇಬ್ಬರ ಜಾತಿ ಬೇರೆಯಾದ್ರೂ ಇವರ ಪ್ರೀತಿಗೆ ಅದು ಅಡ್ಡಿ ಆಗಿರಲಿಲ್ಲ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬೆಳಗಾವಿಯ ಅನಗೋಳದಲ್ಲಿ ಆಯುರ್ವೇದಿಕ್ ಕ್ಲಿನಿಕ್ ಇಟ್ಟುಕೊಂಡು ಅವಿನಾಶ್ ಬದುಕು ಕಟ್ಟಿಕೊಂಡಿದ್ರು. ಆದ್ರೆ ಏಪ್ರಿಲ್ 6 ರಂದು ಇದೇ ಕ್ಲಿನಿಕ್ನಲ್ಲೇ ಅವಿನಾಶ್ ಶವವಾಗಿದ್ರು. ನನ್ನ ಗಂಡನಿಗೆ ಶುಗರ್ ಹೆಚ್ಚಾಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ತಲೆಗೆ ಪೆಟ್ಟಾಗಿ ಗಂಡ ಮೃತಪಟ್ಟಿದ್ದಾನೆ ಅಂತಾ ಕತೆ ಹೇಳಿದ ಲಕ್ಷ್ಮೀ, ಗಂಡನ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ಳು. ಆದ್ರೆ ಪೋಸ್ಟ್ ಮಾರ್ಟಂ ರಿಪೋರ್ಟ್ ಬರ್ತಿದ್ದಂತೆ ಈ ಸಾವಿನ ಅಸಲಿಯತ್ತು ಬಯಲಾಗಿದೆ.
ನವದೆಹಲಿ, ಏಪ್ರಿಲ್ 12: ಆಫ್ರಿಕಾದ ಉಗಾಂಡ ಮಿಲಿಟರಿ ಮುಖ್ಯಸ್ಥ ಮುಹೂಝಿ ಕೈನೇರುಗಬ (Muhoozi Kainerugaba) ಅವರು ಟರ್ಕಿ ದೇಶದಿಂದ 1 ಬಿಲಿಯನ್ ಡಾಲರ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂದರೆ, 9,300 ಕೋಟಿ ರೂ ಅನ್ನು ಉಗಾಂಡಕ್ಕೆ ಟರ್ಕಿ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಮದುವೆಯಾಗಲು ಒಪ್ಪಿಸಬೇಕು ಎಂದೂ ಕೇಳಿದ್ದಾರೆ.
ಟರ್ಕಿಯಿಂದ ಮುಹೂಝಿ ಹಣ ಕೇಳುತ್ತಿರುವುದು ಯಾಕೆ?
ಟರ್ಕಿ ದೇಶವು ಸೊಮಾಲಿಯಾದಲ್ಲಿ ಸಮುದ್ರ ಬಂದರುಗಳು, ವಿಮಾನ ನಿಲ್ದಾಣಗಳು, ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಇತ್ಯಾದಿ ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದೆ. ಆದರೆ, ಸೊಮಾಲಿಯಾದಲ್ಲಿ ಎರಡು ದಶಕಗಳಿಂದ ಉಗಾಂಡದಿಂದ ಭದ್ರತೆ ಒದಗಿಸಲಾಗುತ್ತಿದೆ. ಅಲ್ ಖೈದಾ ಸಂಬಂಧ ಇರುವ ಅಲ್ ಶಬಾದ್ ಉಗ್ರ ಸಂಘಟನೆಯ ಉಪಟಳವನ್ನು ನಿಯಂತ್ರಿಸಲು ಉಗಾಂಡ ನೆರವಾಗಿದೆ. ಪ್ರಾದೇಶಿಕ ಭದ್ರತೆಗೆ ಉಗಾಂಡ ಮಾಡಿರುವ ಪ್ರಯತ್ನಕ್ಕೆ ಟರ್ಕಿ ಋಣಿಯಾಗಿರಬೇಕು. ಉಗಾಂಡಕ್ಕೆ 1 ಬಿಲಿಯನ್ ಡಾಲರ್ ಕೊಡಬೇಕು ಎಂದು ಟರ್ಕಿಯನ್ನು ಕೈನೇರುಗಬ ಒತ್ತಾಯಿಸಿದ್ದಾರೆ.
‘ಟರ್ಕಿಗೆ ಇದು ಸಿಂಪಲ್ ಡೀಲ್. ನೀವು ನಮಗೆ ಹಣ ಕೊಡಿ. ಇಲ್ಲದಿದ್ದರೆ ಅವರ ರಾಯಭಾರ ಕಚೇರಿಯನ್ನು ಮುಚ್ಚುತ್ತೇನೆ. ಅವರು ಬೇಕಾದಲ್ಲಿ ಟರ್ಕಿಯಲ್ಲಿರುವ ನಮ್ಮ ರಾಯಭಾರ ಕಚೇರಿಯನ್ನು ಮುಚ್ಚಲಿ, ಪರವಾಗಿಲ್ಲ’ ಎಂದು ಇವರು ಎಕ್ಸ್ನಲ್ಲಿ ಹಾಕಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಮುಹೂಝಿ ಕೈನೇರುಗಬ ಅವರು ಉಗಾಂಡದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದಾರೆ. ಉಗಾಂಡ ಅಧ್ಯಕ್ಷ ಯೊವೇರಿ ಮುಸೆವೇನಿ ಅವರ ಮಗನೂ ಆಗಿರುವ ಅವರು ಉಗಾಂಡದ ಭವಿಷ್ಯದ ಅಧ್ಯಕ್ಷ ಎಂದೂ ಗುರುತಾಗಿದ್ದಾರೆ.
This guy, Muhoozi Kainerubaga is the chief of the Ugandan Army, son of the dictator Museveni an possible future leader of the country
Here, he is threatening Turkiye , asking for 1 billion $ and the most beautiful turkish woman as a wife or he stops diplomatic relations. pic.twitter.com/xPORjQTVHm
ಟರ್ಕಿ ದೇಶದ ಅತ್ಯಂತ ಸುಂದರ ಮಹಿಳೆಯನ್ನು ತನಗೆ ಒಪ್ಪಿಸಬೇಕು. ತಾನು ಆಕೆಯನ್ನು ಮದುವೆಯಾಗುತ್ತೇನೆ ಎಂದೂ ಉಗಾಂಡದ ಮಿಲಿಟರಿ ಮುಖ್ಯಸ್ಥ ಆಗ್ರಹಿಸಿದ್ದಾರೆ. ಇದೇ ವ್ಯಕ್ತಿ ಹಿಂದೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು.
ಇರಾನ್ ಜೊತೆ ಯುದ್ಧದಲ್ಲಿರುವ ಇಸ್ರೇಲ್ಗೆ ನೆರವು ಕೊಡಲು ಒಂದು ಲಕ್ಷ ಸೈನಿಕರನ್ನು ಉಗಾಂಡದಿಂದ ಕಳುಹಿಸಿಕೊಡುವುದಾಗಿ ಮುಹೂಜಿ ಕೈನೆರುಗಬ ಹೇಳಿದ್ದಾರೆ. ನಮ್ಮ ದೇವರಾದ ಯೇಸು ಕ್ರಿಸ್ತನ ಪವಿತ್ರ ಜಾಗವನ್ನು ರಕ್ಷಿಸಲು ನನ್ನ ಅಣತಿ ಮೇರೆಗೆ ಉಗಾಂಡ ಸೈನಿಕರು ಇಸ್ರೇಲ್ಗೆ ಹೋಗಲು ಸಿದ್ಧ ಎಂದಿದ್ದಾರೆ.
ಉಗಾಂಡದ ಮೇಲೆ ಟರ್ಕಿ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿರುವ ಮುಹೂಝಿ, ‘ನಿಮ್ಮ ಬೆನ್ನಿಗೆ ಸದಾ ಚೂರಿ ಹಾಕುತ್ತಲೇ ಇರುವ ಸ್ನೇಹಿತ ಯಾವನಿಗೆ ಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ, (ಏಪ್ರಿಲ್ 12): ಕಾಂಗ್ರೆಸ್ ಶಾಸಕರಾಗಿದ್ದ ಹೆಚ್ ವೈ ಮೇಟಿ ಅಕಾಲಿಕ ನಿಧನದಿಂದ ನಡೆದ ಬಾಗಲಕೋಟೆ ಉಪಚುನಾವಣೆ (Bagalkot By Election) ಅಂತ್ಯವಾಗಿದ್ದು. ಇದೀಗ ಎಲ್ಲರ ಚಿತ್ತ ಮೇ 4ರ ಫಲಿತಾಂಶದತ್ತ ನೆಟ್ಟಿದೆ. ಉಪಚುನಾವಣೆಯಲ್ಲಿ ಶೇ.68.74ರಷ್ಟು ಮತದಾನವಾಗಿದೆ. ಆದ್ರೆ, ಕಳೆದ ಬಾರಿ ಅಂದರೆ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಶೇ. 69.40ರಷ್ಟು ವೋಟಿಂಗ್ ಆಗಿದ್ದು, ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಮತದಾನದ ಪ್ರತಿಶತ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಮತದಾನದ ಆಧಾರದಲ್ಲಿ ಲೆಕ್ಕಾಚಾರ
ನಗರ ಪ್ರದೇಶದಲ್ಲಿ ಶೇ 61.24ರಷ್ಟು ಮತದಾನ ಆಗಿದ್ದರೆ, ಗ್ರಾಮೀಣ ಭಾಗದಲ್ಲಿ 74ರಷ್ಟು ಮತದಾನವಾಗಿದೆ. ನಗರದಲ್ಲಿ 70% ದಾಟಿದರೆ ಬಿಜೆಪಿಗೆ ಪ್ಲಸ್ ಎಂಬ ಲೆಕ್ಕಾಚಾರವಿದೆ. ಆದರೆ ನಗರದ ಪ್ರದೇಶದಲ್ಲಿ ಶೇ.61.24ರಷ್ಟು ಮತದಾನವಾಗಿದೆ. ಹೀಗಾಗಿ ಬಿಜೆಪಿಗರಿಗೆ ಫಲಿತಾಂಶ ಏನಾಗಲಿದೆ ಎನ್ನುವ ಟೆನ್ಷನ್ ಶುರುವಾಗಿದೆ. ಇನ್ನೊಂದೆಡೆ ಮಹಿಳೆಯರ ಮತದಾನವೂ ಸಹ ಕಡಿಮೆಯಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಮತ ಸೆಳೆಯಬಹುದು ಎನ್ನುವ ಕಾಂಗ್ರೆಸ್ ನ ಲೆಕ್ಕಾಚಾರ ಹುಸಿಯಾಗಿದೆ. ಹೀಗಾಗಿ ಬಾಗಲಕೋಟೆ ಉಪಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.
ಇನ್ನು ಕಾಂಗ್ರೆಸ್ಗೆ ಮೊದಲಿನಿಂದಲೂ ಗ್ರಾಮೀಣ ಮತಗಳು ಆಸರೆಯಾಗಿವೆ. ಹೀಗಾಗಿ ಕಾಂಗ್ರೆಸ್ ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಮತಗಳನ್ನೇ ನಂಬಿಕೊಂಡು ಬಂದಿದೆ. ಅದರಂತೆ ಈ ಬಾರಿ ಉಪಚುನಾವಣೆಯಲ್ಲೂ ಸಹಗ್ರಾಮೀಣ ಭಾಗದಲ್ಲಿ ಈ ಬಾರಿ ಶೇ.74.61ರಷ್ಟು ಮತದಾನವಾಗಿದ್ದು, ಕಾಂಗ್ರೆಸ್ ನಾಯಕರಲ್ಲಿ ಗೆಲುವಿನ ವಿಶ್ವಾಸ ಹೆಚ್ಚಾಗಿದೆ. ಆದ್ರೆ, ಮಹಿಳೆಯರ ಮತಗಳನ್ನ ಸೆಳೆಯಲು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪ್ರಮುಖ ಅಸ್ತ್ರವಾಗಿ ಬಳಿಸಿಕೊಂಡಿತ್ತು. ಆದ್ರೆ, ಬೈ ಎಲೆಕ್ಷನ್ನಲ್ಲಿ ಮಹಿಳೆ ಮತದಾನದಿಂದ ದೂರು ಉಳಿದುಕೊಂಡಿದ್ದಾರೆ.
ಹೌದು.. ಮಹಿಳೆಯರು ಮತಗಳು ಅಷ್ಟಾಗಿ ಚಲಾವಣೆಯಾಗಿಲ್ಲ.ಕ್ಷೇತ್ರದಲ್ಲಿರೋ ಒಟ್ಟು 2,59,797 ಮತದಾರರ ಪೈಕಿ ಮಹಿಳೆಯರು ಮತದಾನದಲ್ಲಿ ಶೇ.67.80 ರಷ್ಟು ಮತದಾನ ಮಾಡಿದ್ದರೆ, ಪುರುಷರು ಶೇ.69.48ರಷ್ಟು ಮತದಾನ ಮಾಡಿದ್ದಾರೆ. ಪ್ರತಿಶತ ಮತದಾನದಲ್ಲಿ ಪುರುಷರ ಮತದಾನವೇ ಹೆಚ್ಚಾಗಿದೆ. ಗ್ಯಾರಂಟಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಮತ ಹಾಕಬಹುದೆಂಬ ಕಾಂಗ್ರೆಸ್ನ ಲೆಕ್ಕಾಚಾರ ಹುಸಿಯಾಗಿದೆ. ಹೀಗಾಗಿ ಸಹಜವಾಗಿ ಫಲಿತಾಂಶ ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ.
ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಸಚಿವರಾದಿಯಾಗಿ ಎಲ್ಲರೂ ಅಕ್ಕ, ಅವ್ಚ, ತಂಗಿ ಅಂತ ಎಲ್ಲರಿಗೂ ಪ್ರತಿ ತಿಂಗಳು 2 ಸಾವಿರ ಗೃಹಲಕ್ಷ್ಮೀ ಹಣ, ಬಸ್ ಫ್ರೀ, ಕರೆಂಟ್ ಫ್ರೀ ಅಂತ ಪ್ರಚಾರ ಮಾಡಿದ್ರು.ಆದ್ರೆ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬಹುದಿತ್ತು. ಆದ್ರೆ ಹಾಗೆ ಆಗಿಲ್ಲ. ಗ್ಯಾರಂಟಿ ಯೋಜನೆಗಳು, ಅನುಕಂಪ, ಸರ್ಕಾರದ ಅಭಿವೃದ್ಧಿ ಕಾರ್ಯಗಳೊಂದಿಗೆ ಬೈ ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್ ನಾಯಕರಿಗೆ ಮಹಿಳೆಯರ ಮತ ಕಡಿಮೆ ಆಗಿದ್ದು ತಲೆನೋವಾಗಿದೆ.
ಒಟ್ಟಿನಲ್ಲಿ ಮತದಾನದ ನಂತರ ಬಿಜೆಪಿ ಕಾಂಗ್ರೆಸ್ ತಮ್ಮದೇ ಆದ ಲೆಕ್ಕಾಚಾರ ಹೇಳುತ್ತಾ ತಮ್ಮ ತಮ್ಮ ಗೆಲುವು ನಿಶ್ಚಿತ ಅಂತಿದ್ದಾರೆ. ಆದರೆ ಮೇ 4ರ ಫಲಿತಾಂಶ ಇದೆಲ್ಲದಕ್ಕೂ ಉತ್ತರ ನೀಡಲಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದಾಗ್ಯೂ ಕೊಹ್ಲಿ ಅವರ ಇನ್ನಿಂಗ್ಸ್ನಲ್ಲಿ ಪವರ್ ಇರಲಿಲ್ಲ. ಅಂದರೆ ಈ ಅರ್ಧಶತಕ ಪೂರೈಸಲು ಕೊಹ್ಲಿ 38 ಎಸೆತಗಳಲ್ಲಿ 50 ರನ್ ಬಾರಿಸಿದರು.
ಈ ನಿಧಾನಗತಿಯ ಅರ್ಧಶತಕದ ಹೊರತಾಗಿಯೂ ಕೊಹ್ಲಿ, ಸಾಲ್ಟ್ ಹಾಗೂ ಪಾಟಿದರ್ ಅವರೊಂದಿಗೆ ಶತಕ ಮತ್ತು ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡಕ್ಕೆ ನೆರವಾದರು. ಮಾತ್ರವಲ್ಲದೆ ತಮ್ಮ ಅರ್ಧಶತಕದ ಇನ್ನಿಂಗ್ಸ್ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ವಿಶೇಷ ದಾಖಲೆಯನ್ನು ಸೃಷ್ಟಿಸಿದರು.
ಈ ಪಂದ್ಯದಲ್ಲಿ 50 ರನ್ಗಳ ಇನ್ನಿಂಗ್ಸ್ ಆಡಿದ ಕೊಹ್ಲಿ, ಈ ಇನ್ನಿಂಗ್ಸ್ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ 1000 ರನ್ಗಳ ಗಡಿ ದಾಟಿದ ಸಾಧನೆಯನ್ನು ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದರಲ್ಲಿ ಐಪಿಎಲ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಗಳಿಸಿದ ರನ್ಗಳು ಸೇರಿವೆ.
ಈ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದರು ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಅವರು 50 ರನ್ ಗಳಿಸುವ ಮೂಲಕ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಅವರ ಒಟ್ಟು ಮೊತ್ತವನ್ನು 972 ಕ್ಕೆ ಏರಿಸಿದರು. ಈ ವಿಚಾರದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಮುಂಬೈ ವಿರುದ್ಧ ಇದುವರೆಗೆ 977 ರನ್ ಬಾರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಉತ್ತಮ ಆರಂಭವನ್ನು ನೀಡಿತು. ಅವರು ಮೊದಲ ವಿಕೆಟ್ಗೆ 65 ಎಸೆತಗಳಲ್ಲಿ 120 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಸಾಲ್ಟ್ ಮತ್ತು ಕೊಹ್ಲಿ ನಡುವಿನ 120 ರನ್ಗಳ ಪಾಲುದಾರಿಕೆ ಐಪಿಎಲ್ನಲ್ಲಿ ಮುಂಬೈ ವಿರುದ್ಧ ಆರ್ಸಿಬಿ ಪರ ಎರಡನೇ ಅತ್ಯಧಿಕ ಆರಂಭಿಕ ಪಾಲುದಾರಿಕೆಯಾಗಿದೆ.
ನಟಿ ಮೃಣಾಲ್ ಠಾಕೂರ್ (Mrunal Thakur) ಬಹು ಬೇಡಿಕೆಯ ಪ್ಯಾನ್ ಇಂಡಿಯಾ ನಟಿ. ಮೂಲ ಮರಾಠಿ ಆದರೂ ಸಹ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಮರಾಠಿ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸುವ ಮೃಣಾಲ್ ಠಾಕೂರ್, ತೆಲುಗು ಪ್ರೇಕ್ಷಕರೊಟ್ಟಿಗೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ತೆಲುಗಿನಲ್ಲಿ ಕೆಲ ಅದ್ಭುತವಾದ ಪಾತ್ರಗಳು ಅವರಿಗೆ ಸಿಕ್ಕಿದ್ದು, ಹಾಗೆಯೇ ಅದ್ಭುತ ಪ್ರೀತಿ ಸಹ ತೆಲುಗು ಪ್ರೇಕ್ಷಕರಿಂದ ಸಿಕ್ಕಿದೆ. ಇದೀಗ ಮೃಣಾಲ್ ಠಾಕೂರ್ ನಟಿಸಿರುವ ‘ಡಕೈತ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಆಡಿರುವ ಮಾತಿಗೆ ನಾಚಿ ನೀರಾಗಿದ್ದಾರೆ ನಟಿ.
ಮೃಣಾಲ್ ಠಾಕೂರ್ ನಾಯಕಿಯಾಗಿ, ಅಡಿವಿ ಶೇಷ್ ನಾಯಕನಾಗಿ ನಟಿಸಿರುವ ‘ಡಕೈತ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಇದೇ ಕಾರಣಕ್ಕೆ ಸಿನಿಮಾದ ಸಕ್ಸಸ್ ಮೀಟ್ ಅನ್ನು ಚಿತ್ರತಂಡ ಇತ್ತೀಚೆಗೆ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಅಲ್ಲು ಅರವಿಂದ್, ಮೃಣಾಲ್ ಠಾಕೂರ್ ಅವರಿಗೆ ಆಶೀರ್ವಾದ ಮಾಡಿದರು. ಅಲ್ಲು ಅರವಿಂದ್ ಅವರ ಆಶೀರ್ವಾದ ಕೇಳಿ ನಾಚಿ ನೀರಾದರು ಮೃಣಾಲ್.
ವೇದಿಕೆ ಮೇಲೆ ಮಾತನಾಡಿದ ಅಲ್ಲು ಅರವಿಂದ್, ಮೃಣಾಲ್ ಠಾಕೂರ್ ಅವರನ್ನುದ್ದೇಶಿಸಿ, ‘ನೀವು ಇಲ್ಲೇ (ಆಂಧ್ರ-ತೆಲಂಗಾಣ) ಒಬ್ಬ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಆಗಿ ಇಲ್ಲಿಯೇ ಸೆಟಲ್ ಆಗಬೇಕು, ಇದು ನನ್ನ ಹಾರೈಕೆ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಹಿಂದೆ ಒಬ್ಬ ನಟಿಗೆ ಹೀಗೆಯೇ ಆಶೀರ್ವಾದ ಮಾಡಿದ್ದೆ. ಆ ನಟಿ ಈಗ ತೆಲುಗು ಸೊಸೆ ಆಗಿದ್ದಾರೆ’ ಎಂದರು.
ಉತ್ತರ ಭಾರತದ ನಟಿ ಲಾವಣ್ಯಾ ತ್ರಿಪಾಠಿ ಅವರಿಗೂ ಸಹ ಅಲ್ಲು ಅರವಿಂದ್ ಅವರು ಹೀಗೆಯೇ ಆಶೀರ್ವಾದ ಮಾಡಿದ್ದರು. ಬಳಿಕ ಲಾವಣ್ಯಾ ತ್ರಿಪಾಠಿ ಮೆಗಾ ಫ್ಯಾಮಿಲಿ ನಟ ವರುಣ್ ತೇಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದು, ಈಗ ಮೆಗಾಸ್ಟಾರ್ ಫ್ಯಾಮಿಲಿಯ ಸೊಸೆ ಆಗಿದ್ದಾರೆ. ಈಗ ಮೃಣಾಲ್ ಠಾಕೂರ್ ಅವರಿಗೂ ಅದೇ ಆಶೀರ್ವಾದ ಮಾಡಿದ್ದಾರೆ ಅಲ್ಲು ಅರವಿಂದ್. ‘ನಿಮ್ಮ ನಟನೆ, ನಿಮ್ಮ ಅಂದ ಎಲ್ಲವೂ ತೆಲುಗು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ನಮ್ಮ ಚಿತ್ರರಂಗಕ್ಕೆ ನೀವು ಬೇಕಿದೆ. ನೀವು ಇಲ್ಲಿಯೇ ಯಾರಾದರೂ ಒಳ್ಳೆಯ ವರನನ್ನು ನೋಡಿ ಮದುವೆ ಆದರೆ, ನಿಮ್ಮನ್ನು ಇಲ್ಲಿಯೇ ಕಟ್ಟಿ ಹಾಕಬಹುದು’ ಎಂದಿದ್ದಾರೆ ಅಲ್ಲು ಅರವಿಂದ್.
ನಿರ್ಮಾಪಕ ಅಲ್ಲು ಅರವಿಂದ್ ಅವರ ಮಾತು ಕೇಳಿ ನಟಿ ಮೃಣಾಲ್ ಠಾಕೂರ್ ನಾಚಿ ನೀರಾಗಿದ್ದಾರೆ. ಅಂದಹಾಗೆ ಕೆಲ ತಿಂಗಳುಗಳ ಹಿಂದಷ್ಟೆ ಧನುಶ್ ಹಾಗೂ ಮೃಣಾಲ್ ಠಾಕೂರ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳೆಂದು ಬಳಿಕ ಸ್ಪಷ್ಟನೆ ನೀಡಲಾಯ್ತು. ಸದ್ಯಕ್ಕೆ ಮೃಣಾಲ್ ಠಾಕೂರ್ ಹೆಸರು ಯಾರೊಟ್ಟಿಗೂ ಥಳುಕು ಹಾಕಿಕೊಂಡಿಲ್ಲ.
ಕೊಪ್ಪಳ, ಏಪ್ರಿಲ್ 12: ನಗರದಲ್ಲಿ ಲವ್ ಜಿಹಾದ್ ಪ್ರಕರಣ (Love Jihad Case) ಸಾಕಷ್ಟು ಸದ್ದು ಮಾಡುತ್ತಿದೆ. ನರ್ಸಿಂಗ್ ಓದುತ್ತಿದ್ದ ಹಿಂದೂ ವಿದ್ಯಾರ್ಥಿನಿಯನ್ನ ಪುಸಲಾಯಿಸಿದ ಹಿನ್ನೆಲೆ ಮುಸ್ತಫಾ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಆತನ ಮೂಬೈಲ್ನಲ್ಲಿ ಹಿಂದೂ ಹುಡುಗಿಯರ ಅನೇಕ ಅಶ್ಲೀಲ ಫೋಟೋ, ವಿಡಿಯೋಗಳು ಪತ್ತೆಯಾಗಿದ್ದವು. ಆತನ ವಿರುದ್ಧ ಹಿಂದೂ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 8-10 ಅಪರಿಚಿತ ಹುಡುಗರ ವಿರುದ್ಧ ಮುಸ್ತಫಾ ಪ್ರೀತಿಸುತ್ತಿದ್ದ ಯುವತಿ ಕೊಪ್ಪಳ ನಗರ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾಳೆ.
ದೂರಿನಲ್ಲಿ ಏನಿದೆ?
ಕೊಪ್ಪಳ ಲವ್ ಜಿಹಾದ್ ಪ್ರಕರಣ ಸದ್ಯ ದೊಡ್ಡ ತಿರುವು ಪಡೆದುಕೊಂಡಿದೆ. ಮುಸ್ತಫಾ ಪ್ರೀತಿಸುತ್ತಿದ್ದ ಯುವತಿಯಿಂದ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, 8-10 ಅಪರಿಚಿತ ಹುಡುಗರು ಎಂದು ಉಲ್ಲೇಖಿಸಿದ್ದಾಳೆ. ಏಪ್ರಿಲ್ 9ರಂದು ನಾನು, ಮುಸ್ತಫಾ ನಮ್ಮ ಕಿಮ್ಸ್ ಮೆಡಿಕಲ್ ಕಾಲೇಜಿನ ಹಿಂದುಗಡೆ ಇರುವ ನೀರಿದ ಟ್ಯಾಂಕ್ ಬಳಿ ಊಟ ಮಾಡುತ್ತಾ ಕುಳಿತಿದ್ದೆವು. ಆಗ ಅಲ್ಲಿಗೆ ಸುಮಾರು 8-10 ಸ್ಥಳೀಯ ಹುಡುಗರು ಬಂದು ನಮ್ಮನ್ನು ವಿಚಾರಿಸಿದರು. ನಮ್ಮ ಹೆಸರು ಹಾಗೂ ವಿಳಾಸ ತಿಳಿದುಕೊಂಡು, ನೀವಿಬ್ಬರೂ ಬೇರೆ ಧರ್ಮದವರೆಂದು ಮುಸ್ತಫಾಗೆ ಬೈಯ್ದರು. ಎದ್ದು ಹೋಗುವಾಗ ನಮ್ಮನ್ನು ತಡೆದು ಹಲ್ಲೆ ನಡೆಸಿದರು.
ಮುಸ್ತಫಾಗೆ ಜೀವ ಬೆದರಿಕೆ ಹಾಕಿ 2 ಮೊಬೈಲ್ ಪಡೆದಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಯುವತಿ ದೂರು ನೀಡಿದ್ದಾಳೆ. ಯುವತಿ ದೂರಿನನ್ವಯ ಬಿಎನ್ಎಸ್ ಸೆಕ್ಷನ್ 115(2), 126(2), 352, 351, 190ರಡಿ ಮೊಕದ್ದಮೆ ದಾಖಲು ಮಾಡಲಾಗಿದೆ.
ಮುಸ್ತಫಾ ಖಾದ್ರಿ ವಿರುದ್ಧವೂ ದೂರು
ಅತ್ತ ಅಪರಿಚಿತ ಹುಡುಗರ ವಿರುದ್ಧ ಯುವತಿ ದೂರು ನೀಡಿದರೆ, ಇತ್ತ ಮುಸ್ತಫಾ ಖಾದ್ರಿ ವಿರುದ್ಧವೂ ದೂರು ದಾಖಲಾಗಿದೆ. ವಿಹೆಚ್ಪಿ ಮುಖಂಡ ಸಂಗಮೇಶ ಹಿರೇಮಠ ದೂರಿನನ್ವಯ ಐಟಿ ಕಾಯ್ದೆ 66(E)67(a) ಅಡಿಯಲ್ಲಿ ಮುಸ್ತಫಾ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಅಸಭ್ಯವರ್ತನೆಯ ಸಾವಿರಾರು ಫೋಟೋ, ವಿಡಿಯೋಗಳು ಪತ್ತೆ
ಏ.9ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಯುವತಿ ಜೊತೆ ಅಸಭ್ಯವರ್ತನೆ ಮಾಡುತ್ತಿರುವ ಮಾಹಿತಿ ಬಂದಿತ್ತು. ಹೋಗಿ ಪರಿಶೀಲಿಸಿದಾಗ ಮುಸ್ತಫಾ ಯುವತಿಯನ್ನು ಪ್ರೀತಿಸುತ್ತೇನೆ ಅಂದಿದ್ದ. ಬಳಿಕ ಆತನ ಎರಡು ಮೊಬೈಲ್ಫೋನ್ ತೆಗೆದುಕೊಂಡು ನೋಡಿದ್ದೆವು. ಒಂದು ಮೊಬೈಲ್ನಲ್ಲಿ 3000 ಫೋಟೋ, 6000 ವಿಡಿಯೋಗಳಿದ್ದವು. ಮತ್ತೊಂದರಲ್ಲಿ 4000 ಸಾವಿರ ಫೋಟೋ, 3700 ವಿಡಿಯೋಗಳಿದ್ದವು.
16 ಹೆಣ್ಣುಮಕ್ಕಳ ಅಶ್ಲೀಲ, ಮಾನಸಿಕ ಹಿಂಸೆ ನೀಡಿರುವ ವಿಡಿಯೋಗಳಿವೆ. ಮುಸ್ತಫಾ ವಿಡಿಯೋಗಳನ್ನ ಇನ್ನೊಬ್ಬರಿಗೆ ರವಾನಿಸುವ ಸಾಧ್ಯತೆ ಇದೆ. ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು, (ಏಪ್ರಿಲ್ 12): ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಗೊಮ್ಮೆ ಇನ್ವೆನ್ಸಿಯಾ (Bengaluru Presidency University Invincia 2026) ಅನ್ನೋ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಂಡು ಬರ್ತಿದ್ದು, ಈ ಬಾರಿಯು ಸಹ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೀತು. ಬಾಲಿವುಡ್ ನಟಿ ಶ್ರೀಲೀಲಾ ಸಹ ಭಾಗಿಯಾಗಿ, ವಿವಿಯ 50 ನೇ ವರ್ಷದ ಲೋಗೋ ಲಾಂಚ್ ಮಾಡಿದ್ರು. ಹೌದು.. ಬೆಂಗಳೂರಿನ ಯಲಹಂಕದ ರಾಜಾನುಕುಂಟೆ ಬಳಿಯಿರುವ ಪ್ರೆಸಿಡೆನ್ಸಿ ವಿವಿಯಲ್ಲಿ ಎರಡು ವರ್ಷಗಳಿಗೊಮ್ಮೆ ಇನ್ವೆನ್ಸಿಯಾ ಅನ್ನೋ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತೆ. ಕಳೆದ ಎರಡು ದಿನಗಳಿಂದ ವಿವಿಯ ಕ್ಯಾಂಪಸ್ನಲ್ಲಿ ಕಲ್ಚರಲ್ ಫೆಸ್ಟ್ ಆಯೋಜಿಸಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಫೆಸ್ಟ್ನಲ್ಲಿ ಭಾಗವಹಿಸಿದ್ರು.
ಬಹುಬಾಷಾ ನಟಿ, ಕನ್ನಡದವರೇ ಆದ ನಟಿ ಶ್ರೀಲೀಲಾ ಸಹ ವಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮತ್ತಷ್ಟು ರಂಗು ತಂದಿರು. ಇನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ 50 ವರ್ಷ ಪೂರೈಸಿದೆ. ಹೀಗಾಗಿ ನಟಿ ಶ್ರೀಲೀಲಾ 50ನೇ ವರ್ಷದ ಲೋಗೋ ಲಾಂಚ್ ಮಾಡಿದ್ದು, ವಿವಿಯಲ್ಲಿ ಎರಡು ದಿನಗಳಿಂದ ವಿದ್ಯಾರ್ಥಿಗಳು ಸಂಗೀತ ನೃತ್ಯ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಎಂಜಾಯ್ ಮಾಡಿದರು.
ಕುಂಭಮೇಳ ಮೊನಲಿಸಾ (Monalisa) ಮದುವೆ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಲೇ ಸಾಗುತ್ತಿದೆ. ಇತ್ತೀಚೆಗಷ್ಟೆ ಮೊನಲಿಸಾ ಕೇರಳದಲ್ಲಿ ಫರ್ಮನ್ ಖಾನ್ ಜೊತೆ ಮದುವೆ ಆಗಿದ್ದರು. ಕೇರಳದ ಕೆಲ ರಾಜಕೀಯ ಮುಖಂಡರ ನೇತೃತ್ವದಲ್ಲಿ ಈ ಮದುವೆ ನಡೆದಿತ್ತು. ಇದು ಲವ್ ಜಿಹಾದ್ ಎಂದು ಅವರ ತಂದೆ ಹಾಗೂ ಕೆಲ ಸಂಬಂಧಿಗಳು ಆರೋಪಿಸಿದ್ದರು. ಆದರೆ ತಮ್ಮದು ಲವ್ ಜಿಹಾದ್ ಅಲ್ಲವೆಂದು ಮೊನಲಿಸಾ ಮತ್ತು ಅವರ ಪತಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಬಳಿಕ ಮೊನಲಿಸಾರ ಅಧಿಕೃತ ಜನ್ಮ ದಿನಾಂಕದ ಪ್ರಕಾರ ಅವರು ಅಪ್ರಾಪ್ತೆಯೆಂದು ಫರ್ಮನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಯ್ತು. ಅದರ ಬೆನ್ನಲ್ಲೆ ಇದೀಗ ಮೊನಲಿಸಾ ನಾಪತ್ತೆ ಆಗಿದ್ದಾಳೆ!
ಮೊನಾಲಿಸಾ ಅವರ ಪತಿ ಫರ್ಮನ್ ಖಾನ್, ಮೊನಾಲಿಸಾ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದು, ಆಕೆಯನ್ನು ಆಕೆಯ ಕುಟುಂಬದವರು ಬಲವಂತವಾಗಿ ಕರೆದೊಯ್ದಿದ್ದಾರೆ ಅಥವಾ ಬಚ್ಚಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಆರೋಪವನ್ನು ಅಲ್ಲಗಳೆದಿರುವ ಮೊನಾಲಿಸಾರ ತಾಯಿ ಈ ಆರೋಪಗಳನ್ನು ಕೇವಲ ‘ಡ್ರಾಮಾ’ ಎಂದು ಕರೆದಿದ್ದಾರೆ. ‘ಫರ್ಮನ್ ಸುಳ್ಳು ಹೇಳುತ್ತಿದ್ದಾನೆ, ಆತ ನನ್ನ ಮಗಳನ್ನು ದಾರಿ ತಪ್ಪಿಸಿದ್ದಾನೆ’ ಎಂದು ಅವರು ದೂರಿದ್ದಾರೆ.
ದಾಖಲೆಗಳ ಪ್ರಕಾರ, ಮದುವೆಯ ಸಮಯದಲ್ಲಿ ಮೊನಾಲಿಸಾ ಅವರಿಗೆ ಕೇವಲ 16 ವರ್ಷ 2 ತಿಂಗಳು ವಯಸ್ಸಾಗಿತ್ತು (ಹುಟ್ಟಿದ ದಿನಾಂಕ: 30 ಡಿಸೆಂಬರ್ 2009). ಆಕೆ ಮದುವೆಯಾಗುವಾಗ ಇನ್ನೂ ಅಪ್ರಾಪ್ತೆಯಾಗಿದ್ದರು. ಮೊನಾಲಿಸಾ ಅಪ್ರಾಪ್ತೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಮಧ್ಯಪ್ರದೇಶದ ಖಾರ್ಗೋನ್ ಪೊಲೀಸರು ಫರ್ಮನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ನಕಲಿ ದಾಖಲೆಗಳನ್ನು ನೀಡಿ ಮದುವೆಯಾಗಿದ್ದಾರೆ ಎಂಬ ಆರೋಪವೂ ಆತನ ಮೇಲಿದೆ.
ಸಾಮಾಜಿಕ ಜಾಲತಾಣದ ಖ್ಯಾತಿಯಿಂದ ಶುರುವಾದ ಈ ಪ್ರೇಮಕಥೆ ಈಗ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಒಂದು ಕಡೆ ಪತಿ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಗೋಳಾಡುತ್ತಿದ್ದರೆ, ಕಾನೂನಿನ ಪ್ರಕಾರ ಆತ ಅಪ್ರಾಪ್ತೆಯನ್ನು ಮದುವೆಯಾದ ಅಪರಾಧಕ್ಕಾಗಿ ಜೈಲು ಶಿಕ್ಷೆ ಎದುರಿಸುವಂತಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಈ ಪ್ರಕರಣದ ಮೇಲೆ ಕಣ್ಣಿಟ್ಟಿದ್ದು, ತನಿಖೆ ತೀವ್ರಗೊಂಡಿದೆ.
ನವದೆಹಲಿ, ಏಪ್ರಿಲ್ 12: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಧಾನ ಮಾತುಕತೆಗಳು ಮುರಿದುಬಿದ್ದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ (Hormuz Strait) ಮೇಲೆ ಕಣ್ಣು ಇರಿಸಿದ್ದಾರೆ. ಈ ಜಲಸಂಧಿಯನ್ನು ಪೂರ್ಣವಾಗಿ ತಡೆಯುವಂತೆ ಅಮೆರಿಕದ ನೌಕಾಪಡೆಗೆ ತಿಳಿಸಿದ್ದೇನೆ. ಈ ಕ್ಷಣದಿಂದಲೇ ಹಾರ್ಮುಜ್ ಜಲಸಂಧಿಯಿಂದ ಯಾವುದೇ ಹಡಗು ಹೊರಹೋಗದಂತೆ, ಹಾಗೂ ಹೊರಗಿನಿಂದ ಯಾವ ಹಡಗೂ ಒಳಗೆ ಹೋಗದಂತೆ ತಡೆಯುವ ಪ್ರಕ್ರಿಯೆ ನಡೆಯಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನಡೆದ ಸಂಧಾನ ಮುರಿದುಬೀಳಲು ಹಲವು ಕಾರಣಗಳನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಎರಡು ಪ್ರಮುಖವಾದುವೆಂದರೆ, ಪರಮಾಣ ಶಸ್ತ್ರಾಸ್ತ್ರ ತಯಾರಿಕೆಯನ್ನು ನಿಲ್ಲಿಸಲು ಇರಾನ್ ಒಪ್ಪದೇ ಇದ್ದದ್ದು ಒಂದು. ಹಾಗೆಯೇ, ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿ ಬಿಡಲೂ ಇರಾನ್ ಒಪ್ಪದಿದ್ದುದು ಇನ್ನೊಂದು ಕಾರಣ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಎಲ್ಲಾ ಹಡಗುಗಳಿಂದಲೂ ಸುಂಕ ವಸೂಲಿ ಮಾಡುವ ವ್ಯವಸ್ಥೆ ನಿರ್ಮಿಸಿದೆ. ಹಾರ್ಮುಜ್ ಜಲಸಂಧಿಯನ್ನು ದಾಟಬೇಕಾದರೆ ಇರಾನ್ಗೆ ಟೋಲ್ ಕಟ್ಟಬೇಕು. ನಂತರ, ಇರಾನ್ನ ನೌಕಾಸೇನೆಯ ಬೆಂಗಾವಲಿನಲ್ಲಿ ಆ ಹಡಗು ಹಾರ್ಮುಜ್ ಜಲಸಂಧಿ ದಾಟಲು ಅವಕಾಶ ಕೊಡಲಾಗುತ್ತದೆ. ಇಂಥದ್ದೊಂದು ವ್ಯವಸ್ಥೆಯನ್ನು ಇರಾನ್ ಮಾಡಿದೆ. ಈಗ ಅಮೆರಿಕದ ಸೇನೆಯಿಂದ ಹಾರ್ಮುಜ್ ಜಲಸಂಧಿಯನ್ನು ಹಿಡಿತಕ್ಕೆ ತರಲು ಹೊರಟಿದೆ. ಇದು ಇನ್ನಷ್ಟು ಭೀಕರ ಯುದ್ಧಕ್ಕೆ ಎಡೆ ಮಾಡಿಕೊಡಬಹುದು.
ಸಂಧಾನಕ್ಕೆ ಮಧ್ಯಸ್ತಿಕೆ ವಹಿಸಲು ರಷ್ಯಾ ಸಿದ್ಧ
ಇದೇ ವೇಳೆ, ಅಮೆರಿಕ ಮತ್ತು ಇರಾನ್ ಮಧ್ಯೆ ಒಂದು ರಾಜಿ ಏರ್ಪಡಿಸಲು ಮಧ್ಯಸ್ತಿಕೆ ವಹಿಸಲು ತಾನು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರಿಗೆ ತಿಳಿಸಿದ್ದಾರೆ.
ಈ ಇಬ್ಬರು ನಾಯಕರು ಫೋನ್ ಮೂಲಕ ಮಾತನಾಡಿ, ಪ್ರಸಕ್ತ ವಿದ್ಯಮಾನಗಳನ್ನು ಚರ್ಚಿಸಿದ್ದಾರೆ. ಈ ಸಂಘರ್ಷ ಅಥವಾ ಬಿಕ್ಕಟ್ಟಿಗೆ ರಾಜಕೀಯವಾದ ಮತ್ತು ರಾಜತಾಂತ್ರಿಕವಾದ ಪರಿಹಾರಕ್ಕೆ ಪ್ರಯತ್ನಿಸಲು ತಾನು ಸಿದ್ಧ ಎಂದು ಈ ವೇಳೆ ಪುಟಿನ್ ಅವರು ಆಫರ್ ಮಾಡಿದರೆನ್ನಲಾಗಿದೆ.
ಇರಾನ್ ಮತ್ತು ಅಮೆರಿಕದ ನಡುವಿನ ಕದನವಿರಾಮ 15 ದಿನಗಳದ್ದಾಗಿದೆ. ಇನ್ನು 9-10 ದಿನಗಳು ಬಾಕಿ ಇವೆ. ಅಷ್ಟರೊಳಗೆ ರಾಜಿ ಏರ್ಪಟ್ಟರೆ ಯುದ್ಧ ನಿಲ್ಲಬಹುದು. ಇಲ್ಲದಿದ್ದರೆ ಇನ್ನೂ ಹೆಚ್ಚು ತೀವ್ರತೆಯಲ್ಲಿ ಸಮರ ಮುಂದುವರಿಯುವ ಸಾಧ್ಯತೆ ಇದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದರ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕ ಫಿಲ್ ಸಾಲ್ಟ್ ಔಟಾದ ಬಳಿಕ ಬ್ಯಾಟಿಂಗ್ಗೆ ಬಂದ ರಜತ್, ಬಂದ ಕೂಡಲೇ ಪ್ರತಿಯೊಬ್ಬ ಮುಂಬೈ ಬೌಲರ್ಗಳ ವಿರುದ್ಧ ಬೌಂಡರಿಗಳ ಮಳೆಗರೆದರು. ಇದರ ಪರಿಣಾಮವಾಗಿ ರಜತ್ ಕೇವಲ 11 ಎಸೆತಗಳಲ್ಲಿ 44 ರನ್ ಕಲೆಹಾಕಿದರು. ರಜತ್ ತಮ್ಮ ಮುಂದಿನ ಎಸೆತದಲ್ಲಿ ಸಿಕ್ಸರ್ ಸಿಡಿಸಿ 50 ರನ್ಗಳ ಗಡಿ ದಾಟುತ್ತಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು. ಆದರೆ ಅದಕ್ಕೆ ಟ್ರೆಂಟ್ ಬೌಲ್ಟ್ ಅವಕಾಶ ಮಾಡಿಕೊಡಲಿಲ್ಲ.
ಆದಾಗ್ಯೂ ರಜತ್ ಎದುರಿಸಿದ 11 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಬಾರಿಸಿದರು. ಅಂದರೆ ಎದುರಿಸಿದ 11 ಎಸೆತಗಳಲ್ಲಿ ಬರೋಬ್ಬರಿ 8 ಬೌಂಡರಿಗಳನ್ನು ರಜತ್ ಬಾರಿಸಿದರು. ಒಟ್ಟಾರೆ ಈ 8 ಎಸೆತಗಳಲ್ಲಿ ರಜತ್ 42 ರನ್ಗಳನ್ನು ಕಲೆಹಾಕಿದರು. ಅಂತಿಮವಾಗಿ ರಜತ್ 17 ಎಸೆತಗಳಲ್ಲಿ ತಮ್ಮ ಸತತ ಎರಡನೇ ಅರ್ಧಶತಕ ಬಾರಿಸಿದರು. ಸ್ಯಾಂಟ್ನರ್ ಅವರ ಎಸೆತವನ್ನು ಬೌಂಡರಿಗಟ್ಟುವ ಮೂಲಕ ರಜತ್ ತಮ್ಮ ಅರ್ಧಶತಕ ಪೂರೈಸಿದರು.