ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ – Kannada News | Raichur Homemaker Buys Refrigerator Using Gruha Lakshmi Scheme Savings, Thanks Karnataka Government

ರಾಯಚೂರು, ಜನವರಿ 3: ಗೃಹಲಕ್ಷ್ಮಿ ಯೋಜನೆಯ ನೆರವಿನಿಂದ ರಾಯಚೂರಿನಲ್ಲಿ ಗೃಹಿಣಿಯೊಬ್ಬರು ಫ್ರಿಡ್ಜ್ ಖರೀದಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ನಡುಲಮನಿ ಅವರು, ಸರ್ಕಾರದಿಂದ ಪ್ರತಿ ತಿಂಗಳು ದೊರೆಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣವನ್ನು ಸಂಗ್ರಹಿಸಿ ಫ್ರಿಡ್ಜ್ ಖರೀದಿಸಿದ್ದಾರೆ. ಹನುಮಮ್ಮ ಅವರು ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ಒಟ್ಟು 23 ಕಂತುಗಳ ಹಣವನ್ನು ಪಡೆದಿದ್ದು, ಆ ಹಣವನ್ನು ಖರ್ಚು ಮಾಡದೇ ಕೂಡಿಟ್ಟಿದ್ದರು. ಈ ಮೂಲಕ ಒಟ್ಟು 17 ಸಾವಿರ ರೂಪಾಯಿ ವೆಚ್ಚದಲ್ಲಿ ಫ್ರಿಡ್ಜ್ ಖರೀದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇದರಿಂದ ತಮ್ಮ ಕುಟುಂಬದ ದಿನನಿತ್ಯದ ಜೀವನ ಸುಲಭವಾಗಿದ್ದು, ಆಹಾರ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅನುಕೂಲವಾಗಿದೆ ಎಂದು ಹನುಮಮ್ಮ ತಿಳಿಸಿದ್ದಾರೆ.

ಫ್ರಿಡ್ಜ್ ಖರೀದಿಸಿದ ನಂತರ ಮಾತನಾಡಿದ ಹನುಮಮ್ಮ ನಡುಲಮನಿ, ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದು ಹೇಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RRB Recruitment 2025: ರೈಲ್ವೆಯಲ್ಲಿ 22 ಸಾವಿರ ಲೆವೆಲ್-1 ಹುದ್ದೆಗಳಿಗೆ ನೇಮಕಾತಿ; ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ – Kannada News | RRB Level 1 Recruitment 2025: 22,000 Railway Posts Coming Soon!

ಹೊಸ ವರ್ಷದ ಆರಂಭದಲ್ಲಿ, ರೈಲ್ವೆ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಜನರಿಗೆ ಗುಡ್​ ನ್ಯೂಸ್​ ಒಂದು ಇಲ್ಲಿದೆ . ರೈಲ್ವೆ ನೇಮಕಾತಿ ಮಂಡಳಿ (RRB) ಲೆವೆಲ್ -1 ಹುದ್ದೆಗಳಿಗೆ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ. ವರದಿಗಳ ಪ್ರಕಾರ, ಜನವರಿ ಮೂರನೇ ವಾರದಲ್ಲಿ ಅಧಿಕೃತ ಜಾಹೀರಾತು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ನೇಮಕಾತಿ ಪ್ರಕ್ರಿಯೆಗೆ ಸುಮಾರು 22,000 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿಗಳು ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ನಡೆಯಲಿವೆ. ಈ ಹಿಂದೆ, ರೈಲ್ವೆ ದೊಡ್ಡ ಪ್ರಮಾಣದ ನೇಮಕಾತಿಯನ್ನು ಘೋಷಿಸಿತ್ತು, ಮತ್ತು ಈಗ ಮತ್ತೊಮ್ಮೆ, ನಿರುದ್ಯೋಗಿ ಯುವಕರಿಗೆ ಮಹತ್ವದ ಅವಕಾಶ ಹೊರಹೊಮ್ಮುತ್ತಿದೆ.

22,000 ಲೆವೆಲ್-1 ಹುದ್ದೆಗಳ ನೇಮಕಾತಿಗೆ ಸಿದ್ಧತೆ:

ರೈಲ್ವೆ ನೇಮಕಾತಿ ಮಂಡಳಿಯು ಶೀಘ್ರದಲ್ಲೇ ಲೆವೆಲ್-1 ಹುದ್ದೆಗಳಿಗೆ ಹೊಸ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ. ಈ ನೇಮಕಾತಿಯಲ್ಲಿ ಟ್ರ್ಯಾಕ್ ನಿರ್ವಹಣೆದಾರರು, ಸಹಾಯಕರು ಮತ್ತು ಇತರ ಗ್ರೂಪ್ ಡಿ ಹುದ್ದೆಗಳು ಸೇರಿರಬಹುದು. ಒಟ್ಟು ಸುಮಾರು 22,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅಂದಾಜಿಸಲಾಗಿದೆ. ರೈಲ್ವೆ ಮಂಡಳಿಯು ಸಿದ್ಧತೆಗಳನ್ನು ಪ್ರಾರಂಭಿಸಿದೆ ಮತ್ತು ಎಲ್ಲಾ ವಲಯಗಳಿಂದ ಹುದ್ದೆಯ ವಿವರಗಳನ್ನು ಕೋರಿದೆ. ಅಜ್ಮೀರ್ ಸೇರಿದಂತೆ ಎಲ್ಲಾ ರೈಲ್ವೆ ನೇಮಕಾತಿ ಮಂಡಳಿಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ.

ಭೋಪಾಲ್ ಆರ್‌ಆರ್‌ಬಿ ನೋಡಲ್ ಏಜೆನ್ಸಿ:

ಈ ಬಾರಿ, ರೈಲ್ವೆ ನೇಮಕಾತಿ ಮಂಡಳಿ, ಭೋಪಾಲ್ ಅನ್ನು ಲೆವೆಲ್-1 ನೇಮಕಾತಿಗಾಗಿ ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಇದರರ್ಥ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಭೋಪಾಲ್ ಮಂಡಳಿಯು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಂಯೋಜಿಸುತ್ತದೆ. ಈ ಹಿಂದೆ, 2025 ರಲ್ಲಿ, NTPC ಸೇರಿದಂತೆ ಹಲವಾರು ಕೇಡರ್‌ಗಳಿಗೆ ನೇಮಕಾತಿ ಜಾಹೀರಾತುಗಳನ್ನು ನೀಡಲಾಗುತ್ತಿತ್ತು. ಇದೇ ಅವಧಿಯಲ್ಲಿ 32,438 ಲೆವೆಲ್-1 ಹುದ್ದೆಗಳಿಗೆ ಜಾಹೀರಾತುಗಳನ್ನು ನೀಡಲಾಗಿತ್ತು, ಇದಕ್ಕಾಗಿ ಪ್ರಸ್ತುತ ಪರೀಕ್ಷಾ ಪ್ರಕ್ರಿಯೆ ನಡೆಯುತ್ತಿದೆ. ಈಗ, ರೈಲ್ವೆ ಮತ್ತೊಂದು ಹೊಸ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪೈಲಟ್‌ ಸಂಬಳ ಎಷ್ಟು? ಆಯ್ಕೆ ಪ್ರಕ್ರಿಯೆ ಮತ್ತು ಜವಾಬ್ದಾರಿ ತಿಳಿಯಿರಿ

ಹಿಂದಿನ ನೇಮಕಾತಿ ಮತ್ತು ವಯಸ್ಸಿನ ಮಿತಿಯ ಬಗ್ಗೆ ಮಾಹಿತಿ:

ಲೆವೆಲ್-1 ಹುದ್ದೆಗಳಿಗೆ ಕೊನೆಯ ನೇಮಕಾತಿ 2024 ರಲ್ಲಿ ಆಗಿದ್ದು, ಜನವರಿ 2025 ರಲ್ಲಿ ಜಾಹೀರಾತು ಬಿಡುಗಡೆಯಾಯಿತು. ಆ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಜನವರಿ 23 ರಿಂದ ಫೆಬ್ರವರಿ 22, 2025 ರವರೆಗೆ ಸ್ವೀಕರಿಸಲಾಯಿತು. ಆ ಸಮಯದಲ್ಲಿ, ವಯಸ್ಸಿನ ಮಿತಿಯನ್ನು 18 ರಿಂದ 36 ವರ್ಷಗಳಿಗೆ ನಿಗದಿಪಡಿಸಲಾಗಿತ್ತು. ಈ ಬಾರಿ ವಯಸ್ಸಿನ ಮಿತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ ಎಂದು ನಂಬಲಾಗಿದೆ. ಆದಾಗ್ಯೂ, ಅಧಿಕೃತ ಅಧಿಸೂಚನೆ ಹೊರಡಿಸಿದ ನಂತರವೇ ಇದರ ಅಂತಿಮ ದೃಢೀಕರಣವನ್ನು ಮಾಡಲಾಗುತ್ತದೆ.

ಯುವಕರಿಗೆ ಸುವರ್ಣ ಅವಕಾಶ:

ಈ ಪ್ರಸ್ತಾವಿತ ರೈಲ್ವೆ ನೇಮಕಾತಿಯು ಲಕ್ಷಾಂತರ ಯುವಕರಿಗೆ ಉತ್ತಮ ಉದ್ಯೋಗಾವಕಾಶವಾಗಬಹುದು. ರೈಲ್ವೆಗೆ ಈಗಾಗಲೇ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿಯನ್ನು ಈಗಲೇ ಪರಿಶೀಲಿಸಲು ಪ್ರಾರಂಭಿಸಬೇಕು. ಜನವರಿ ಮೂರನೇ ವಾರದಲ್ಲಿ ಜಾಹೀರಾತು ಬಿಡುಗಡೆಯಾದ ತಕ್ಷಣ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗುವ ನಿರೀಕ್ಷೆಯಿದೆ, ಆದ್ದರಿಂದ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗಮನವಿರಲಿ ಎಂದು ಸೂಚಿಸಲಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಹಾನ್ಸ್–ಕಿದ್ವಾಯಿ ಆಸ್ಪತ್ರೆಗಳಲ್ಲಿ 55 ರೋಗಿಗಳು ನಾಪತ್ತೆ; ಮೂವರ ಸುಳಿವೇ ಇಲ್ಲ! – Kannada News | Bengaluru: 55 Patients Vanish from NIMHANS and Kidwai, 3 Untraced

ನಿಮ್ಹಾನ್ಸ್–ಕಿದ್ವಾಯಿ ಆಸ್ಪತ್ರೆಗಳಲ್ಲಿ 55 ರೋಗಿಗಳು ನಾಪತ್ತೆ

ಬೆಂಗಳೂರು, ಜನವರಿ 03: ಬೆಂಗಳೂರಿನ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಾದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS ) ಹಾಗೂ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಗಳಿಂದ ಸಮಾಲೋಚನೆ ಮತ್ತು ಚಿಕಿತ್ಸೆಗೆ ಬಂದಿದ್ದ ಒಟ್ಟು 55 ರೋಗಿಗಳು ನಾಪತ್ತೆಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಸುಮಾರು 20 ತಿಂಗಳ ಅವಧಿಯಲ್ಲಿ ಈ ಎಲ್ಲಾ ರೋಗಿಗಳು ನಾಪತ್ತೆಯಾಗಿದ್ದು, ಈ ಪೈಕಿ ಇದುವರೆಗೂ ಮೂವರು ರೋಗಿಗಳ ಸುಳಿವೇ ಸಿಕ್ಕಿಲ್ಲವೆಂಬ ಮಾಹಿತಿ ಬಹಿರಂಗವಾಗಿದೆ.

ಅನಿರೀಕ್ಷಿತ ಸಂದರ್ಭಗಳಲ್ಲಿ ನಾಪತ್ತೆ

2024ರ ಜನವರಿ 1ರಿಂದ 2025ರ ಆಗಸ್ಟ್ 14ರವರೆಗೆ ನಾಪತ್ತೆಯಾದ ಹೆಚ್ಚಿನ ರೋಗಿಗಳು ಅತ್ಯಂತ ಅನಿರೀಕ್ಷಿತ ಸಂದರ್ಭಗಳಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ರೋಗಿಗಳ ಪೋಷಕರು ಬಿಲ್‌ಗಳನ್ನು ಪಾವತಿಸಲು, ಔಷಧಿ ಖರೀದಿಸಲು, ಫೋನ್ ಕರೆಗಳಲ್ಲಿ ನಿರತರಾಗಿದ್ದಾಗ ಅಥವಾ ಹೊರರೋಗಿ ವಿಭಾಗದಲ್ಲಿ (OPD) ಇತರರೊಂದಿಗೆ ಅನುಭವ ಹಂಚಿಕೊಳ್ಳುವ ವೇಳೆ ಈ ಘಟನೆಗಳು ನಡೆದಿವೆ ಎಂದು ದಾಖಲೆಗಳು ತಿಳಿಸುತ್ತವೆ.

ಪತ್ತೆಯಾಗದ ಮೂವರು

ಜಯನಗರದ ಸಿದ್ದಾಪುರ ಪೊಲೀಸ್ ಠಾಣೆಯ ನಾಪತ್ತೆ ಪ್ರಕರಣಗಳ ದಾಖಲೆ ಪ್ರಕಾರ,

  • ಕಾಡಪ್ಪ ರೋಡನ್ನವರ್ (81) – 23 ಮೇ 2024ರಂದು ನಿಮ್ಹಾನ್ಸ್‌ನಿಂದ ನಾಪತ್ತೆ
  • ಮುನಿಕೃಷ್ಣಪ್ಪ (70) – 6 ನವೆಂಬರ್ 2025ರಂದು ನಾಪತ್ತೆ
  • ಶಾಂತಸ್ವಾಮಿ (52) – 30 ಏಪ್ರಿಲ್ 2025ರಂದು ಕಿದ್ವಾಯಿ ಆಸ್ಪತ್ರೆ ಆವರಣದಿಂದ ನಾಪತ್ತೆ

ಈ ಮೂವರ ಸುಳಿವು ಇನ್ನೂ ಪತ್ತೆಯಾಗಿಲ್ಲ.

ಮಾನಸಿಕ ಅಸ್ವಸ್ಥರಿಗೆ ಓಡಿಹೋಗುವ ಪ್ರವೃತ್ತಿ

ನಿಮ್ಹಾನ್ಸ್‌ನ ಉಪ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಚ್.ಆರ್ ಮಾತನಾಡಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೆಲವರಿಗೆ ಓಡಿಹೋಗುವ ಪ್ರವೃತ್ತಿ ಇರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ನಾವು ಅವರನ್ನು ಪತ್ತೆಹಚ್ಚಿ ಕುಟುಂಬಗಳಿಗೆ ಹಿಂತಿರುಗಿಸುತ್ತೇವೆ. ಆಸ್ಪತ್ರೆಯಲ್ಲಿ ನಾಪತ್ತೆಯಾದವರ ಪ್ರಕರಣಗಳನ್ನು ಪರಿಶೀಲಿಸಲು ವಿಶೇಷ ಘಟನೆ ವರದಿ ಸಮಿತಿಯಿದೆ ಎಂದರು. ನಾಪತ್ತೆಯಾಗುವವರಲ್ಲಿ ಹೆಚ್ಚಿನವರು ಸ್ಕಿಜೋಫ್ರೇನಿಯಾ, ಬೈಪೋಲಾರ್ ಅಸ್ವಸ್ಥತೆಗಳಿಂದ ಬಳಲುತ್ತಿದ್ದು, ಕೆಲವರಿಗೆ ಬುದ್ಧಿಮಾಂದ್ಯತೆ ಇರುವುದೂ ಕಂಡುಬಂದಿದೆ ಎಂದು ತಿಳಿಸಿದರು.

ಸಮವಸ್ತ್ರ ನೀಡಲು ಅವಕಾಶವಿಲ್ಲ

ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ–2017ರ ಪ್ರಕಾರ, ಮಾನಸಿಕ ಅಸ್ವಸ್ಥ ರೋಗಿಗಳನ್ನು ಗುರುತಿಸಲು ಯಾವುದೇ ಸಮವಸ್ತ್ರ ನೀಡುವಂತಿಲ್ಲ ಎಂದು ಡಾ. ಅರವಿಂದ್ ಸ್ಪಷ್ಟಪಡಿಸಿದ್ದಾರೆ. ಈ ಕಾಯ್ದೆಯಂತೆ ಆಸ್ಪತ್ರೆಗಳು ಇನ್ನು ಅಸೈಲಮ್​ಗಳಲ್ಲ. ರೋಗಿಗಳ ಗೌರವ ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು. ರೋಗಿಗಳನ್ನು OPDಗೆ ಕರೆತರುವಾಗ ಆರೈಕೆದಾರರು ಹೆಚ್ಚು ಜಾಗರೂಕರಾಗಿರಬೇಕು. ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆವರಣದೊಳಗಿನ ಚಲನವಲನಗಳ ಮೇಲೂ ನಿಗಾ ಇಡುತ್ತಾರೆ ಎಂದರು.

ಕಿದ್ವಾಯಿ ನಿರ್ದೇಶಕರ ಪ್ರತಿಕ್ರಿಯೆ

ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ನವೀನ್ ಟಿ ಮಾತನಾಡಿ, ನಮ್ಮ ಬಳಿ ಬರುವ ಹೆಚ್ಚಿನ ರೋಗಿಗಳು ಮೂರನೇ ಅಥವಾ ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಭರವಸೆ ಕಳೆದುಕೊಳ್ಳದಂತೆ ಚಿಕಿತ್ಸೆ ಜೊತೆಗೆ ಮಾನಸಿಕ ಬೆಂಬಲ ನೀಡಲಾಗುತ್ತದೆ. ರೋಗಿಗಳು ಕಾಣೆಯಾಗದಂತೆ ಮತ್ತು ಚಿಕಿತ್ಸೆ ತಪ್ಪಿಸಿಕೊಳ್ಳದಂತೆ ರಾಜ್ಯ ಸರ್ಕಾರ 16 ಜಿಲ್ಲೆಗಳಲ್ಲಿ ಜಿಲ್ಲಾ ಡೇಕೇರ್ ಕಿಮೊಥೆರಪಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು.

ಅಪಾಯದಲ್ಲಿರುವ ರೋಗಿಗಳು

ಬೆಂಗಳೂರಿನ ಇಎಸ್‌ಐಸಿ ವೈದ್ಯಕೀಯ ಕಾಲೇಜಿನ ಸೈಕಿಯಾಟ್ರಿಸ್ಟ್ ಡಾ. ಎಚ್. ಚಂದ್ರಶೇಖರ್ ಮಾತನಾಡಿ, ಒಮ್ಮೆ ರೋಗಿಗಳು ಮನೆ ಅಥವಾ ಆಸ್ಪತ್ರೆಯಿಂದ ಕಾಣೆಯಾದರೆ, ಅವರು ದೈಹಿಕ ಮತ್ತು ಮಾನಸಿಕ ಅಪಾಯಕ್ಕೆ ಒಳಗಾಗುತ್ತಾರೆ. ಪುರುಷರು ಹಲ್ಲೆಗೆ ಒಳಗಾಗುವ ಸಾಧ್ಯತೆ ಇದ್ದರೆ, ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಅಪಾಯವೂ ಇದೆ. ಅಪರೂಪದ ಸಂದರ್ಭಗಳಲ್ಲಿ ಆರೈಕೆದಾರರೇ ಅವರನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವ ಘಟನೆಗಳೂ ಕಂಡುಬಂದಿವೆ ಎಂದು ಎಚ್ಚರಿಸಿದರು. ಮಾನಸಿಕ ಅಸ್ವಸ್ಥತೆಯ ರೋಗಿಗಳು ಕಾಣೆಯಾಗಲು ಅರಿವಿನ ಕೊರತೆ, ಚಿಕಿತ್ಸೆ ಸೌಲಭ್ಯಗಳ ಅಭಾವ, ಸಾಮಾಜಿಕ ಕಳಂಕ, ಕುಟುಂಬ ಸಮಸ್ಯೆಗಳು ಮತ್ತು ಬಡತನ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದರು.

ನಾಪತ್ತೆಯಾದವರ ಸಂಖ್ಯೆ (ಡೇಟಾ)

2024

  • ನಿಮ್ಹಾನ್ಸ್: 27 ರೋಗಿಗಳು
  • ಕಿದ್ವಾಯಿ: 3 ರೋಗಿಗಳು

2025

  • ನಿಮ್ಹಾನ್ಸ್: 22 ರೋಗಿಗಳು
  • ಕಿದ್ವಾಯಿ: 3 ರೋಗಿಗಳು

ಪ್ರತಿಷ್ಠಿತ ಆಸ್ಪತ್ರೆಗಳಿಂದಲೇ ರೋಗಿಗಳು ನಾಪತ್ತೆಯಾಗುತ್ತಿರುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಮುಜುಗರ ತಂದಿದೆ. ರೋಗಿಗಳ ಸುರಕ್ಷತೆ, ಆರೈಕೆದಾರರ ಜವಾಬ್ದಾರಿ ಮತ್ತು ಸಂಸ್ಥಾತ್ಮಕ ಮೇಲ್ವಿಚಾರಣೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..! – Kannada News | BBL 2026: Brisbane Heat have won another thriller at The Gabba

ದಿ ಗಬ್ಬಾ ಮೈದಾನದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನ 20ನೇ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 195 ರನ್ ಕಲೆಹಾಕಿತು.

196 ರನ್​ಗಳ ಗುರಿ ಬೆನ್ನತ್ತಿದ ಬ್ರಿಸ್ಬೇನ್ ಹೀಟ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್ ಬ್ರ್ಯಾಂಟ್ ಪಂದ್ಯದ ಗತಿಯನ್ನೇ ಬದಲಿಸಿದರು. 

ಕೊನೆಯ 3 ಓವರ್​ಗಳಲ್ಲಿ 44 ರನ್​ಗಳ ಗುರಿ ಪಡೆದಿದ್ದ ಬ್ರಿಸ್ಬೇನ್ ಹೀಟ್ ತಂಡದ ಬ್ಯಾಟರ್​ಗಳು ಪೀಟರ್ ಸಿಡ್ಲ್ ಎಸೆದ 18ನೇ ಓವರ್​ನಲ್ಲಿ ಕಲೆಹಾಕಿದ್ದು ಬರೋಬ್ಬರಿ 17 ರನ್​ಗಳು. ಇನ್ನು ಟಾಮ್ ಕರನ್ ಎಸೆದ 19ನೇ ಓವರ್​ನಲ್ಲೂ 17 ರನ್​ಗಳಿಸಿದರು.

ಅದರಂತೆ ಕೊನೆಯ ಓವರ್​ನಲ್ಲಿ 10 ರನ್​ಗಳ ಗುರಿ ಪಡೆದ ಬ್ರಿಸ್ಬೇನ್ ಹೀಟ್ ತಂಡಕ್ಕೆ ಮ್ಯಾಕ್ಸ್ ಬ್ರ್ಯಾಂಟ್ ಆಸರೆಯಾಗಿ ನಿಂತರು. ಅಲ್ಲದೆ ಹಾರಿಸ್ ರೌಫ್ ಎಸೆದ ಕೊನೆಯ ಓವರ್​ನ 4 ಎಸೆತಗಳಲ್ಲೇ 10 ರನ್​ಗಳಿಸುವ ಮೂಲಕ ಬ್ರ್ಯಾಂಟ್ ಬ್ರಿಸ್ಬೇನ್ ಹೀಟ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಅಂತಿಮ ಹಂತದಲ್ಲಿ ಕೇವಲ 26 ಎಸೆತಗಳನ್ನು ಎದುರಿಸಿದ್ದ ಮ್ಯಾಕ್ಸ್ ಬ್ರ್ಯಾಂಟ್ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 48 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

 

Source link

ಕೋಗಿಲು ಲೇಔಟ್:​ ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ – Kannada News | Kogilu Layout Encroachment Report Submitted: Final Findings Handed Over to GBA, Triggers Political Debate

ಬೆಂಗಳೂರು, ಜನವರಿ 3: ಕೋಗಿಲು ಲೇಔಟ್​​ನಲ್ಲಿ (Kogilu Layout) ಒತ್ತುವರಿ ತೆರವು ಸಂಬಂಧ ಮನೆ ಕಳೆದುಕೊಂಡವರಿಗೆ ಸರ್ಕಾರ ಫ್ಲಾಟ್ ನೀಡಲು ಮುಂದಾಗಿದೆ. ಈಗಾಗಲೇ ಲೇಔಟ್​​ಗೆ ತೆರಳಿ ಮನೆ ಕಳೆದುಕೊಂಡವರ ಮಾಹಿತಿ ಸಂಗ್ರಹಿಸಲಾಗಿದ್ದು, ಕಂದಾಯ ಇಲಾಖೆ ಮತ್ತು ಉತ್ತರ ಪಾಲಿಕೆ ಇಲಾಖೆ ಅಧಿಕಾರಿಗಳೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಅಂತಿಮ ವರದಿ ಸಲ್ಲಿಸಿದ್ದಾರೆ. ಕೋಗಿಲು ಲೇಔಟ್​ನ ಒಟ್ಟು ಮೂರು ಕಾಲೋನಿಗಳಲ್ಲಿ ಮನೆ ತೆರವಿಯಿಂದ ಎಷ್ಟು ಜನ ನಿರಾಶ್ರಿತರಾಗಿದ್ದಾರೆ ಅನ್ನೋ ಕುರಿತು ವರದಿ ನೀಡಲಾಗಿದೆ.

ಜಿಬಿಎಗೆ ಸಲ್ಲಿಕೆಯಾಗಿರುವ ವರದಿಯಂತೆ, ಫಕೀರ್ ಕಾಲೋನಿಯ 40 ಮನೆ ತೆರವು ಮಾಡಲಾಗಿದ್ದು, 56 ಮಂದಿ ಮನೆಯ ಮುಖ್ಯಸ್ಥರಿದ್ದು, 96 ವಯಸ್ಕರಿದ್ದಾರೆ. 140 ಮಕ್ಕಳಿದ್ದು, ಒಟ್ಟು 292 ಜನರಿದ್ದಾರೆ. ಇನ್ನು ನ್ಯೂ ಫಕೀರ್ ಲೇಔಟ್​ನಲ್ಲಿ ಒಟ್ಟು 45 ಮನೆ ತೆರವು ಮಾಡಲಾಗಿದ್ದು, 50 ಮಂದಿ ಮನೆಯ ಮುಖ್ಯಸ್ಥರಿದ್ದು, ವಯಸ್ಕರು 128, 116 ಮಕ್ಕಳಿದ್ದು, ಒಟ್ಟು 294 ಮಂದಿ ಇದ್ದಾರೆ. ಇನ್ನು ವಸೀಂ ಲೇಔಟ್​ನಲ್ಲಿ, 82 ಮನೆ ತೆರವು ಮಾಡಲಾಗಿದ್ದು, ಮನೆ ಮುಖ್ಯಸ್ಥರು 82 ಜನರಿದ್ದಾರೆ. 201 ವಯಸ್ಕರು, 394 ಮಕ್ಕಳಿದ್ದು, ಒಟ್ಟು 394 ಜನರಿದ್ದಾರೆ. ಹೀಗೆ ಮೂರು ಕಾಲೋನಿಯ ಒಟ್ಟು ಒಂದು ಸಾವಿರ ಏಳು ಮಂದಿ ನಿರಾಶ್ರಿತರಾಗಿದ್ದಾರೆ. ಈ ಮೂರು ಲೇಔಟ್​ಗಳಲ್ಲಿ 156 ಮುಸ್ಲಿಂ ಸಮುದಾಯದ ಕುಟುಂಬದವರಿದ್ದಾರೆ. 31 ಹಿಂದೂ ಕುಟುಂಬಗಳಿವೆ. ಒಂದು ಕುಟುಂಬ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದೆ.

ಸದ್ಯ ಈ ಕುರಿತು ಮತ್ತೊಂದು ಸುತ್ತಿನ ಪರಿಶೀಲನೆ ನಡೆಯಲಿದ್ದು, ಬಳಿಕ ಜಿಬಿಎ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಈ ಮಧ್ಯೆ ಇಂದು ಕೋಗಿಲು ಲೇಔಟ್​ಗೆ ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ ನೀಡುತ್ತಿದೆ.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಅರ್ಜಿ ಸಲ್ಲಿಸಿ, ಮನೆ ಸಿಗದೇ ರೋಸಿ ಹೋಗಿದ್ದವರು ಈಗಾಗಲೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅವರು ಶನಿವಾರ ಕೂಡಾ ರಾಜೀವ್ ಗಾಂಧಿ ವಸತಿ ಕಚೇರಿಗೆ ಬಂದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ, ಕನ್ನಡ ಸಂಘಟನೆಗಳು ಒತ್ತುವರಿದಾರರಿಗೆ ಮನೆ ಹಂಚಿಕೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿವೆ. ಸರ್ಕಾರ ನಿರ್ಧಾರ ಬದಲಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿವೆ. ಈ ಮಧ್ಯೆ ಶಾಸಕ ಎಸ್​.ಟಿ.ಸೋಮಶೇಖರ್ ಸಹ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದ ನ್ಯಾಯ ಕೊಡಬೇಡಿ ಎಂದಿದ್ದಾರೆ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ ಜಿಲ್ಲಾಡಳಿತ, ಪೊಲೀಸ್

ಇನ್ನು ಕೋಗಿಲು ಲೇಔಟ್ ಕಂದಾಯ ಸಚಿವ ಕೃಷ್ಣ ಭೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಅಕ್ರಮ ಮನೆಗಳ ತೆರವು ಪ್ರಕರಣ ಇಷ್ಟೊಂದು ಗಂಭೀರ ಸ್ವರೂಪ ಪಡೆದಿದ್ದರೂ, ಕಂದಾಯ ಸಚಿವರು ಮಾತ್ರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಹೀಗೆಂದು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ‘ಸಚಿವ ಕೃಷ್ಣ ಭೈರೇಗೌಡ ಕಾಣೆಯಾಗಿದ್ದಾರೆ’ ಎಂದು ಪೋಸ್ಟರ್ ಅಭಿಯಾನ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ಬುದ್ಧನ ಉದಾತ್ತ ಚಿಂತನೆಗೆ ಸಾಕ್ಷಿ: ಪವಿತ್ರ ಪಿಪ್ರಹ್ವಾ ಅವಶೇಷಗಳ ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | Buddha Piprahwa Relics Display: PM Modi Inaugurates Historic Exhibition in Delhi

ದೆಹಲಿ, ಜ.3: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ‘ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್’ ಎಂಬ ಪಿಪ್ರಹ್ವಾ ರೆಲಿಕ್ಸ್‌ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ. 127 ವರ್ಷಗಳ ನಂತರ ಭಾರತಕ್ಕೆ ತರಲಾದ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳ ಬಗ್ಗೆ ದೇಶಕ್ಕೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಪ್ರದರ್ಶನದಲ್ಲಿ 1898 ರ ಉತ್ಖನನ ಮತ್ತು 1971-1975 ರ ಪಿಪ್ರಹ್ವಾ ಸ್ಥಳದಲ್ಲಿ ಉತ್ಖನನದ ಸಮಯದಲ್ಲಿ ಪತ್ತೆಯಾದ ಅವಶೇಷಗಳು, ರತ್ನದ ಅವಶೇಷಗಳನ್ನು ಇಡಲಾಗಿದೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ತಮ್ಮ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಪ್ರದರ್ಶನ ದೇಶದ ಐತಿಹಾಸಿಕ ಸಾಂಸ್ಕೃತಿಯ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರ ಪಿಪ್ರಾಹ್ವಾ ಅವಶೇಷಗಳನ್ನು ಮರಳಿ ತರಲಾಗಿದೆ. ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಸಂಗ್ರಹ ಮಾಡಲಾಗಿದೆ. ಈ ಪ್ರದರ್ಶನವು ಭಗವಾನ್ ಬುದ್ಧನ ಉದಾತ್ತ ಚಿಂತನೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ನಮ್ಮ ಯುವಜನರು ಮತ್ತು ನಮ್ಮ ಶ್ರೀಮಂತ ಸಂಸ್ಕೃತಿಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸುವ ಪ್ರಯತ್ನದಲ್ಲಿ ಒಂದಾಗಿದೆ. ಈ ಅವಶೇಷಗಳ ವಾಪಸಾತಿಗೆ ಶ್ರಮಿಸಿದ ಪ್ರತಿಯೊಬ್ಬರನ್ನು ನಾನು ಕೃತಜ್ಞತೆಯಿಂದ ಶ್ಲಾಘಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭದ್ರತಾ ಪಡೆ ನಡೆಸಿದ ಬಹುದೊಡ್ಡ ಕಾರ್ಯಚರಣೆ: ಗುಂಡಿನ ಚಕಮಕಿಯಲ್ಲಿ 14 ಮಾವೋವಾದಿಗಳು ಸಾವು

ಇಲ್ಲಿದೆ ನೋಡಿ ವಿಡಿಯೋ

ಈ ಕಾರ್ಯಕ್ರಮದಲ್ಲಿ ಇಡಲಾಗಿದ್ದ ಪ್ರದರ್ಶನಗಳು ದೇಶ ಮತ್ತು ವಿದೇಶಿದಿಂದ ಇತಿಹಾಸಕಾರರು, ಸಾಂಸ್ಕೃತಿಕ ಉತ್ಸಾಹಿಗಳು ಮತ್ತು ಬೌದ್ಧ ಅನುಯಾಯಿಗಳ ಗಮನ ಸೆಳೆದಿದ್ದು, ಭಾರತದ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸುವ ಮತ್ತು ಆಚರಿಸುವ ಪ್ರಯತ್ನಗಳನ್ನು ಪ್ರದರ್ಶಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಪ್ರಧಾನಿ ಮೋದಿ ಅವರು ಇದಕ್ಕೂ ಮೊದಲು ಸಾವಿತ್ರಿಬಾಯಿ ಫುಲೆ ಮತ್ತು ರಾಣಿ ವೇಲು ನಾಚಿಯಾರ್ ಅವರ ಜನ್ಮ ವಾರ್ಷಿಕೋತ್ಸವ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸಿದ್ದಾರೆ. ಸೇವೆ ಮತ್ತು ಶಿಕ್ಷಣದ ಮೂಲಕ ಭಾರತೀಯ ಸಮಾಜವನ್ನು ಪರಿವರ್ತಿಸುವಲ್ಲಿ ಸಾವಿತ್ರಿಬಾಯಿ ಫುಲೆ ಪಾತ್ರ ದೊಡ್ಡದ್ದು ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Zodiac Career Predictions: ನಿಮ್ಮ ರಾಶಿಗನುಗುಣವಾಗಿ ಜನವರಿ 4ರಿಂದ 10ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Zodiac Career Predictions: Jan 4 10 Job Prospects for All 12 Signs

ಹೊಸ ವರ್ಷ ಆರಂಭವಾಗಿದೆ. ಜನವರಿ 4ರಿಂದ 10ರ ವರೆಗೆ 12 ರಾಶಿಗನುಗುಣವಾಗಿ ನಿಮ್ಮ ಉದ್ಯೋಗ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಅಸ್ಥಿರತೆಯ ಉದ್ಯೋಗದಿಂದ ಭಯ, ಭ್ರಮ ನಿರಸನ, ಎಲ್ಲವೂ ಆಗಲಿದೆ. ನಿಮಗೆ ನೀವೇ ಪ್ರೇರಣೆ ಕೊಟ್ಟುಕೊಂಡು ಎಲ್ಲವನ್ನೂ ಎದುರಿಸಬೇಕಾಗುವುದು. ಈ ವಾರ ಶುಭವಾಗಲಿ.

ಮೇಷ ರಾಶಿ:

ಈ ವಾರದ ಕೆಲವು ದಿನದಲ್ಲಿ ಉದ್ಯೋಗ ಬದಲಾವಣೆ ಯೋಚನೆ ಗಟ್ಟಿಯಾಗುತ್ತದೆ. ಸಂದರ್ಶನದ ಮೂಲಕ ಅವಕಾಶ ಬರುತ್ತದೆ. ಹೊಸ ಕೆಲಸ ಆರಂಭದಲ್ಲಿ ಒತ್ತಡದಾಯಕವಾದರೂ ಮುಂದೆ ಸ್ಥಾನಮಾನ ಹೆಚ್ಚುತ್ತದೆ. ಆತುರದ ನಿರ್ಧಾರದಿಂದ ತಪ್ಪು ಆಯ್ಕೆ ಸಂಭವ. ಸ್ವಂತ ಸಾಮರ್ಥ್ಯವನ್ನು ತೋರಿಸಿದರೆ ಹಿರಿಯರ ಗಮನ ಸೆಳೆಯುತ್ತೀರಿ. ಖಾಸಗಿ ಕ್ಷೇತ್ರ ಲಾಭದಾಯಕ. ಕೋಪದ ನಿಯಂತ್ರಣ ಅವಶ್ಯಕ.

ವೃಷಭ ರಾಶಿ:

ಮೊದಲ ವಾರದಲ್ಲಿ ಉದ್ಯೋಗದಲ್ಲಿ ಸ್ಥಿರತೆ ಹುಡುಕುವ ಮನಸ್ಸು ಹೆಚ್ಚಾಗುತ್ತದೆ. ಹೊಸ ಕೆಲಸ ಸಿಗುವ ಸಾಧ್ಯತೆ ನಿಧಾನವಾದರೂ ಭದ್ರತೆ ಇರಲಿದೆ. ವೇತನ ಹೆಚ್ಚಳ ಅಥವಾ ಜವಾಬ್ದಾರಿ ಬದಲಾವಣೆ ಯೋಗ. ಹಣಕಾಸಿನ ಲಾಭ ಮಧ್ಯಮ. ಕೌಶಲ್ಯ ವೃದ್ಧಿಗೆ ಸಮಯ ಕೊಟ್ಟರೆ ಮುಂದಿನ ಉದ್ಯೋಗ ಉತ್ತಮವಾಗುತ್ತದೆ. ಸಹನೆ ಇಲ್ಲದಿದ್ದರೆ ಅವಕಾಶ ಕೈ ತಪ್ಪಬಹುದು.

ಮಿಥುನ ರಾಶಿ:

ಚಟುವಟಿಕೆಯಿಂದ ಇರುವ ನಿಮಗೆ ಈ ವಾರ ಒಂದಕ್ಕಿಂತ ಹೆಚ್ಚು ಉದ್ಯೋಗ ಅವಕಾಶಗಳು ಎದುರಾಗುತ್ತವೆ. ಸಂವಹನ, ಬರವಣಿಗೆ, ಮಾರಾಟ, ಐಟಿ ಕ್ಷೇತ್ರದಲ್ಲಿ ಯಶಸ್ಸು. ಸರಿಯಾದ ಆಯ್ಕೆ ಮಾಡದಿದ್ದರೆ ಗೊಂದಲ ಹೆಚ್ಚಾಗುತ್ತದೆ. ಕೆಲಸದಲ್ಲಿ ಪ್ರಯಾಣ ಅಥವಾ ಸ್ಥಳಾಂತರ ಯೋಗ. ಒಪ್ಪಂದ ಮತ್ತು ಷರತ್ತುಗಳನ್ನು ಗಮನವಿಟ್ಟು ನೋಡಿಕೊಳ್ಳಿ. ಸ್ನೇಹಿತರ ಸಲಹೆ ಸಹಾಯಕ.

ಕರ್ಕಾಟಕ ರಾಶಿ:

ನಾಲ್ಕ‌ನೇ ರಾಶಿಯವರಿಗೆ ಕುಟುಂಬದ ಅಭಿಪ್ರಾಯವು ಉದ್ಯೋಗ ನಿರ್ಧಾರಕ್ಕೆ ಪ್ರಭಾವ ಬೀರುತ್ತದೆ. ಹೊಸ ಕೆಲಸ ಸಿಕ್ಕರೂ ಮನಸ್ಸಿಗೆ ಸಂಪೂರ್ಣ ತೃಪ್ತಿ ಸಿಗದೆ ಇರಬಹುದು. ಸರ್ಕಾರಿ, ಶಿಕ್ಷಣ ಅಥವಾ ಸಂಸ್ಥಾತ್ಮಕ ಕ್ಷೇತ್ರದಲ್ಲಿ ಅವಕಾಶ. ಈ ವಾರ ಕೆಲಸದ ಸ್ಥಳದಲ್ಲಿ ಭಾವನಾತ್ಮಕತೆ ಕಡಿಮೆ ಮಾಡಿದರೆ ಪ್ರಗತಿ ವೇಗವಾಗುತ್ತದೆ. ಸ್ಥಳ ಬದಲಾವಣೆ ಸಾಧ್ಯತೆ ದೃಢವಾಗಲಿದೆ.

ಸಿಂಹ ರಾಶಿ:

ಈ ವಾರ ನಿಮ್ಮ ಉದ್ಯೋಗದಲ್ಲಿ ಅಧಿಕಾರ ಮತ್ತು ಗೌರವ ಹೆಚ್ಚಾಗುತ್ತದೆ. ನಾಯಕತ್ವ ಗುಣದಿಂದ ಹೊಸ ಹುದ್ದೆ ಸಿಗುವ ಸೂಚನೆ. ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಆದರೆ ಅಹಂಕಾರದಿಂದ ಸಹೋದ್ಯೋಗಿಗಳ ವಿರೋಧ ಉಂಟಾಗಬಹುದು. ಈ ವಾರ ಖಾಸಗಿ ಸಂಸ್ಥೆ, ಉದ್ಯೋಗದಲ್ಲಿ ವೇಗವಾಗಿ ಬೆಳವಣಿಗೆ ಕಾಣಿಸುವುದು. ಹಣಕಾಸು ಲಾಭ ಉತ್ತಮ.

ಕನ್ಯಾ ರಾಶಿ:

ಆರನೇ ರಾಶಿಯವರಿಗೆ ಈ ವಾರ ಶ್ರಮ, ಶಿಸ್ತು ಮತ್ತು ಕೌಶಲ್ಯಕ್ಕೆ ತಕ್ಕ ಉದ್ಯೋಗ ಸಿಗುತ್ತದೆ. ತಾಂತ್ರಿಕ, ಲೆಕ್ಕಪತ್ರ, ವಿಶ್ಲೇಷಣಾ ಕೆಲಸದಲ್ಲಿ ಯಶಸ್ಸು. ಸಣ್ಣ ಸಂಸ್ಥೆಯಿಂದ ದೊಡ್ಡ ಸಂಸ್ಥೆಗೆ ಹೋಗುವ ಯೋಗ. ಕೆಲಸದ ಒತ್ತಡದಿಂದ ಆರೋಗ್ಯ ಕಡೆ ನಿರ್ಲಕ್ಷ್ಯ ಬೇಡ. ಈ ವಾರ ಉದ್ಯೋಗ ಸ್ಥಿರತೆಯ ಜೊತೆಗೆ ಕಲಿಕೆಗೂ ಅವಕಾಶ ನೀಡುತ್ತದೆ. ಆತ್ಮವಿಶ್ವಾಸದಿಂದ ಮುಂದುವರಿಯಿರಿ.

ತುಲಾ ರಾಶಿ:

ಈ ವಾರ ನೀವು ಪಾಲುದಾರಿಕೆ, ಒಪ್ಪಂದ ಉದ್ಯೋಗಕ್ಕೆ ಸೇರಿಕೊಳ್ಳುವ ಸಾಧ್ಯತೆ. ಕಾನೂನು, ಕಲೆ, ವಿನ್ಯಾಸ ಕ್ಷೇತ್ರ ಅನುಕೂಲ. ನಿರ್ಧಾರ ತೆಗೆದುಕೊಳ್ಳುವಲ್ಲಿ ತಡವಾದರೆ ಅವಕಾಶ ತಪ್ಪಬಹುದು. ಕೆಲಸದ ಸ್ಥಳದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹಣಕಾಸು ಲಾಭ ಮಧ್ಯಮ. ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಸಾಧಿಸಿದರೆ ವೃತ್ತಿ ಜೀವನ ಸುಗಮ.

ವೃಶ್ಚಿಕ ರಾಶಿ:

ಎಂಟನೇ ರಾಶಿಯವರಿಗೆ ಮೊದಲ ವಾರ ರಹಸ್ಯವಾಗಿ ಬಂದ ಉದ್ಯೋಗ ಅವಕಾಶ ನಿಮ್ಮ ಜೀವನದ ದಿಕ್ಕು ಬದಲಾಯಿಸುತ್ತದೆ. ಸ್ಪರ್ಧೆ, ರಾಜಕೀಯ ಹಚ್ಚಿದ್ದರೂ ಗೆಲುವು ನಿಮ್ಮದೇ. ಸಂಶೋಧನೆ, ಭದ್ರತೆ, ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ಸು. ಕೆಲಸದ ಒತ್ತಡ ಹೆಚ್ಚಾಗಬಹುದು. ಧೈರ್ಯ ಮತ್ತು ಸಹನೆ ಅಗತ್ಯ. ಹಣಕಾಸು ಲಾಭ ಕ್ರಮೇಣ ಹೆಚ್ಚುತ್ತದೆ.

ಧನು ರಾಶಿ:

ದೂರದ ಊರು ಅಥವಾ ವಿದೇಶ ಸಂಪರ್ಕಿತ ಉದ್ಯೋಗ ಯೋಗ. ಶಿಕ್ಷಣ, ತರಬೇತಿ, ಸಲಹೆ ನೀಡುವ ಕ್ಷೇತ್ರದಲ್ಲಿ ಹೊಸ ಅವಕಾಶ. ಉನ್ನತ ವಿದ್ಯಾಭ್ಯಾಸದ ನಂತರ ಉತ್ತಮ ಕೆಲಸ ಸಿಗುತ್ತದೆ. ಅತಿಯಾದ ನಿರೀಕ್ಷೆ ನಿರಾಶೆ ತರಬಹುದು. ವೆಚ್ಚ ಹೆಚ್ಚಾಗುವ ಸಾಧ್ಯತೆ. ಈ ವಾರ ಉದ್ಯೋಗದಲ್ಲಿ ಗೌರವವಿದ್ದರೂ ಶ್ರಮ ಹೆಚ್ಚು. ಕಾಲು ಸಂಬಂಧಿತ ಆರೋಗ್ಯ ಗಮನಿಸಿ.

ಮಕರ ರಾಶಿ:

ಶನಿಯು ಅಧಿಪತಿಯಾದ ಈ ರಾಶಿಯವರಿಗೆ ನಿಧಾನವಾದರೂ ಖಚಿತ ಉದ್ಯೋಗ ಬದಲಾವಣೆ ಸಂಭವಿಸುತ್ತದೆ. ಆಡಳಿತ, ಸರ್ಕಾರಿ, ನಿರ್ವಹಣಾ ಕ್ಷೇತ್ರದಲ್ಲಿ ಅವಕಾಶ. ಹಿರಿಯರ ಶಿಫಾರಸು ಕೆಲಸಕ್ಕೆ ದಾರಿ ಮಾಡಿಕೊಡುತ್ತದೆ. ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಹಣಕಾಸು ಸ್ಥಿರತೆ ಹೆಚ್ಚಾಗುತ್ತದೆ. ಕೆಲಸದ ಹೊಣೆಗಾರಿಕೆ ಜಾಸ್ತಿ.

ಕುಂಭ ರಾಶಿ:

ಹೊಸ ವರ್ಷದ ಮೊದಲನೇ ವಾರ ನವೀನ ಆಲೋಚನೆ ಮತ್ತು ತಂತ್ರಜ್ಞಾನ ಆಧಾರಿತ ಉದ್ಯೋಗ ಸಿಗುತ್ತದೆ. ಸ್ಟಾರ್ಟ್‌ಅಪ್ ಅಥವಾ ಹೊಸ ಪ್ರಾಜೆಕ್ಟ್ ಮೂಲಕ ಕೆಲಸಕ್ಕೆ ಪ್ರವೇಶ ಪಡೆಯುವಿರಿ. ಸ್ಥಿರತೆ ಕಡಿಮೆ ಆದರೆ ಅನುಭವ ಹೆಚ್ಚು. ಸ್ವಾತಂತ್ರ್ಯ ಇದ್ದರೂ ಜವಾಬ್ದಾರಿ ಹೆಚ್ಚಾಗುತ್ತದೆ. ಸ್ನೇಹಿತರ ಸಂಪರ್ಕ ಲಾಭದಾಯಕ. ಹಣಕಾಸು ಏರಿಳಿತ. ನರ ಮತ್ತು ಕಣ್ಣುಗಳ ಆರೋಗ್ಯ ಗಮನಿಸಿ.

ಮೀನ ರಾಶಿ:

ಗುರುವಿನ ಆಧಿಪತ್ಯದ ಕೊನೆಯ ರಾಶಿಗೆ ಈ ವಾರ ಸೇವಾ, ಆರೋಗ್ಯ, ಸೃಜನಶೀಲ ಕ್ಷೇತ್ರದಲ್ಲಿ ಮುಂದಿನ ಉದ್ಯೋಗ ಅವಕಾಶ. ಭರವಸೆ ಮಾತುಗಳಿಗೆ ಮೋಸ ಹೋಗದಂತೆ ಎಚ್ಚರ. ದಾಖಲೆ ಮತ್ತು ನೇಮಕ ಪತ್ರ ಪರಿಶೀಲನೆ ಮಾಡಿಸಿಕೊಳ್ಳಿ. ಕೆಲಸದಲ್ಲಿ ತೃಪ್ತಿ ಇದ್ದರೂ ಹಣಕಾಸು ಮಧ್ಯಮ. ಧ್ಯಾನ ಮತ್ತು ಆತ್ಮವಿಶ್ವಾಸದಿಂದ ಮುಂದುವರಿದರೆ ಯಶಸ್ಸು. ನೀರಿನ ಸಂಪರ್ಕದ ಕೆಲಸ ಅಥವಾ ಪ್ರಯಾಣ ಸಾಧ್ಯ.

– ಲೋಹಿತ ಹೆಬ್ಬಾರ್ – 8762924271 (what’s app only)

Published On – 12:11 pm, Sat, 3 January 26

Source link

‘ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​’ ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು! – Kannada News | Bagalkots Heartfelt Goodbye: Students Cry for Beloved Transferring Teachers

ಬಾಗಲಕೋಟೆ, ಜನವರಿ 03: ಬಾಗಲಕೋಟೆ ಜಿಲ್ಲೆಯ ಬುದ್ನಿ ಪಿಎಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರ ವರ್ಗಾವಣೆಯನ್ನು ಸಹಿಸಲಾಗದೆ ಶಾಲಾ ಮಕ್ಕಳು ಗೊಳೋ ಎಂದು ಕಣ್ಣೀರಿಟ್ಟಿದ್ದಾರೆ. ಶಿಕ್ಷಕರಾದ ವೆಂಕಟೇಶ್ ಪಾಟೀಲ್ ಹಾಗೂ ಬಿಜಿ ರಾಮನಗೌಡ ಪಾಟೀಲ್ ಅವರು ಬೇರೆಡೆಗೆ ವರ್ಗಾವಣೆಯಾಗಿದ್ದು, ಇದರ ಹಿನ್ನೆಲೆಯಲ್ಲಿ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಆಳವಾದ ಬಾಂಧವ್ಯವನ್ನು ಇದು ಎತ್ತಿ ತೋರಿಸುತ್ತದೆ. ಮಕ್ಕಳಷ್ಟೇ ಅಲ್ಲದೆ, ಗ್ರಾಮಸ್ಥರು ಕೂಡ ವರ್ಗಾವಣೆಗೊಂಡ ಶಿಕ್ಷಕರನ್ನು ಗೌರವದಿಂದ ಬೀಳ್ಕೊಟ್ಟಿದ್ದು, ಶಿಕ್ಷಕರಿಗೆ ಪುಷ್ಪವೃಷ್ಟಿಗೈದು ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿಕೆ ಶಿವಕುಮಾರ್ ನಿವಾಸಕ್ಕೆ ದಿಢೀರ್ ದೌಡಾಯಿಸಿದ ರೇಣುಕಾಚಾರ್ಯ: 20 ನಿಮಿಷ ಮಾತುತೆ ಬಳಿಕ ಹೇಳಿದ್ದೇನು ನೋಡಿ – Kannada News | BJP Leader MP Renukacharya Makes Sudden Visit to DK Shivakumar’s Residence, Sparks Political Buzz in Karnataka

ಬೆಂಗಳೂರು, ಜನವರಿ 3: ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಬೆಂಗಳೂರಿನಲ್ಲಿ ಶನಿವಾರ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಅವರು, ಭೇಟಿ ವೇಳೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ನಿಂದ ಬಾಂಗ್ಲಾದೇಶ್ ಆಟಗಾರನಿಗೆ ಗೇಟ್ ಪಾಸ್..!

Source link

Exit mobile version