ದಕ್ಷಿಣದ ಈ ನಟನ ಜೊತೆ ನಟಿಸಲು ರೆಡಿ ಆದ ಕತ್ರಿನಾ ಕೈಫ್? – Kannada News | Katrina Kaif in Talks for Prabhas Starrer Spirit After Deepika Padukone Exit

ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್‌ನ ‘ಸ್ಪಿರಿಟ್’ ಸಿನಿಮಾ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ. ಈ ಚಿತ್ರದ ತಾರಾಗಣದ ಬಗ್ಗೆ ಈಗ ಹೊಸದೊಂದು ಬಿಸಿಬಿಸಿ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಈ ಬಿಗ್ ಬಜೆಟ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ ಕತ್ರಿನಾ ಕೈಫ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಅವಧಿ ತುಂಬಾ ಕಡಿಮೆ ಇರಲಿದೆ. ಆದರೆ ಕಥೆಗೆ ಈ ಪಾತ್ರ ಅತ್ಯಂತ ಪ್ರಮುಖವಾಗಿರಲಿದೆ. ಸಿನಿಮಾದ ಪ್ರಮುಖ ತಿರುವಿಗೆ ಈ ಪಾತ್ರವೇ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡವಾಗಲಿ ಅಥವಾ ನಟಿಯಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಹಿಂದೆ ಈ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಪ್ರಭಾಸ್ ಮತ್ತು ದೀಪಿಕಾ ಈಗಾಗಲೇ ‘ಕಲ್ಕಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆದರೆ ದೀಪಿಕಾ ಈ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದಾರೆ. ಅವರ ಜಾಗಕ್ಕೆ ತೃಪ್ತಿ ಡಿಮ್ರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಒಂದು ವೇಳೆ ಕತ್ರಿನಾ ಈ ಚಿತ್ರಕ್ಕೆ ಒಪ್ಪಿಕೊಂಡರೆ ಅವರು ಸುಮಾರು ಎರಡು ದಶಕಗಳ ಬಳಿಕ ತೆಲುಗು ಚಿತ್ರರಂಗಕ್ಕೆ ಮರಳಿದಂತಾಗುತ್ತದೆ. ಈ ಹಿಂದೆ ಅವರು ವೆಂಕಟೇಶ್ ಜೊತೆ ‘ಮಲ್ಲೀಶ್ವರಿ’ ಮತ್ತು ಬಾಲಕೃಷ್ಣ ಜೊತೆ ‘ಅಲ್ಲರಿ ಪಿಡುಗು’ ಸಿನಿಮಾಗಳಲ್ಲಿ ನಟಿಸಿದ್ದರು. ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ಬಳಿಕ ಕತ್ರಿನಾ ಸಿನಿಮಾಗಳಿಂದ ಕೊಂಚ ಬ್ರೇಕ್ ತಗೆದುಕೊಂಡಿದ್ದರು.

ಇದನ್ನೂ ಓದಿ:  ಬಾಲಿವುಡ್​​ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?

ಕತ್ರಿನಾ ಕೈಫ್ ಅವರು 2024ರ ‘ಹ್ಯಾಪಿ ನ್ಯೂಯರ್’ ಸಿನಿಮಾ ಬಳಿಕ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ವಿಕ್ಕಿ ಜೊತೆ ಮದುವೆ ಆಗಿರೋ ಅವರು ಇತ್ತೀಚೆಗೆ ತಾಯಿ ಆಗಿದ್ದಾರೆ. ಈ ಕಾರಣಕ್ಕೆ ಅವರು ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರಿಗೆ ಗುಡ್​​ ನ್ಯೂಸ್ : ಒಸಿ ಸಿಕ್ಕ ಮೇಲೆ ಬಿಲ್ಡರ್‌ಗಳ ಇಷ್ಟದಂತೆ ನಕ್ಷೆ ಬದಲಾಯಿಸುವಂತಿಲ್ಲ – Kannada News | Bengaluru Apartment Owners Empowered: BDA Curbs Builder’s Revised Plan Changes

ಬೆಂಗಳೂರು, ಜು.25: ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರಿಗೆ ಬಿಡಿಎ (BDA) ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಅಪಾರ್ಟ್‌ಮೆಂಟ್ ನಿರ್ಮಾಣ ಪೂರ್ಣಗೊಂಡು ಸ್ವಾಧೀನ ಪತ್ರ (Occupancy Certificate – OC) ದೊರೆತ ಬಳಿಕ, ಬಿಲ್ಡರ್‌ಗಳು ತಮಗೆ ಬೇಕಾದಂತೆ ಕಟ್ಟಡ ನಕ್ಷೆ ಪರಿಷ್ಕರಣೆ (Revised Plan) ಮಾಡುವುದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಠಿಣ ಕಟ್ಟುಪಾಡುಗಳನ್ನು ವಿಧಿಸಿದೆ. ಇನ್ಮುಂದೆ ಫ್ಲ್ಯಾಟ್ ಮಾಲೀಕರ ಅನುಮತಿ ಇಲ್ಲದೆ ಡೆವಲಪರ್‌ಗಳು ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ.

ಜುಲೈ 15 ರಂದು ಬಿಡಿಎ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಈಗಾಗಲೇ ಹಕ್ಕುಗಳನ್ನು ವರ್ಗಾಯಿಸಲಾದ ಯೋಜನೆಗಳಲ್ಲಿ ಯಾವುದೇ ಮಾರ್ಪಾಡು ಮಾಡಲು ಕನಿಷ್ಠ ಶೇ. 66 (2/3 ಭಾಗ) ಅಪಾರ್ಟ್‌ಮೆಂಟ್ ಮಾಲೀಕರ ಸಮ್ಮತಿ ಕಡ್ಡಾಯ. ಅನುಮತಿಸಲಾದ ಕಟ್ಟಡ ನಿರ್ಮಾಣ ಪ್ರದೇಶ ಸಾಮರ್ಥ್ಯ ಪೂರ್ಣ ಬಳಕೆ ಆಗಿದ್ದರೆ, ಅಂತಹ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಪರಿಷ್ಕೃತ ನಕ್ಷೆಗೆ ಅನುಮತಿ ನೀಡಲಾಗುವುದಿಲ್ಲ.

ಅಪಾರ್ಟ್‌ಮೆಂಟ್ ಮಾಲೀಕರಿಗೆ ಈಗಾಗಲೇ ಹಸ್ತಾಂತರಿಸಲಾದ ಜಮೀನಿನಲ್ಲಿ ಬಿಲ್ಡರ್‌ಗಳು ಮತ್ತೆ ಹೆಚ್ಚುವರಿ ನಿರ್ಮಾಣ ಮಾಡಲು ಅನುಮತಿ ಕೋರುವುದಕ್ಕೆ ಈ ಆದೇಶ ಸಂಪೂರ್ಣ ತಡೆ ನೀಡಲಿದೆ. ದಕ್ಷಿಣ ಬೆಂಗಳೂರಿನ ಕೆನರಾ ಬ್ಯಾಂಕ್ ಲೇಔಟ್‌ನಲ್ಲಿರುವ ೨೪೧ ಫ್ಲ್ಯಾಟ್‌ಗಳ ‘ಹೆಚ್‌ಎಂ ಟ್ಯಾಂಬರಿನ್’ ಅಪಾರ್ಟ್‌ಮೆಂಟ್ ನಿವಾಸಿಗಳ ಸುದೀರ್ಘ ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಬಿಡಿಎ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

2003 ರಲ್ಲಿ ನಿರ್ಮಾಣಗೊಂಡು, 2006 ರಲ್ಲಿ ಒಸಿ (OC) ಪಡೆದಿದ್ದ ಈ ಯೋಜನೆಯ 3 ಎಕರೆ 18 ಗುಂಟೆ ಜಮೀನಿನ ಅವಿಭಜಿತ ಹಕ್ಕು ಮಾಲೀಕರ ಹೆಸರಲ್ಲೇ ಇತ್ತು. ಆದರೆ, 10 ವರ್ಷಗಳ ಬಳಿಕ (2016 ರಲ್ಲಿ) ಬಿಲ್ಡರ್ ಅದೇ ಜಮೀನಿನಲ್ಲಿ ಮತ್ತೊಂದು ಹೊಸ ಕಟ್ಟಡ ಕಟ್ಟಲು ಬಿಡಿಎಯಿಂದ ಪರಿಷ್ಕೃತ ನಕ್ಷೆ ಅನುಮೋದನೆ ಪಡೆದುಕೊಂಡಿದ್ದರು. ‘ಕರ್ನಾಟಕ ಓನರ್‌ಶಿಪ್ ಫ್ಲ್ಯಾಟ್ಸ್ ಆಕ್ಟ್ , 1972’ ಹಾಗೂ ‘ರೆರಾ , 2016’ ಪ್ರಕಾರ ಮಾಲೀಕರ ಒಪ್ಪಿಗೆಯಿಲ್ಲದೆ ಈ ಅನುಮೋದನೆ ನೀಡಲಾಗಿದೆ ಮತ್ತು ಮಾಲೀಕರ ಎಫ್‌ಎಆರ್‌ (ಹಕ್ಕನ್ನು ಬಿಲ್ಡರ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಿವಾಸಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಕರಾವಳಿಯಲ್ಲಿ ರಣಮಳೆಯ ಹಾವಳಿ; ಉಡುಪಿ, ದಕ್ಷಿಣ ಕನ್ನಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬಿಡಿಎ ಹೊರಡಿಸಿರುವ ಈ ನೂತನ ಸುತ್ತೋಲೆಯನ್ನು ಅಪಾರ್ಟ್‌ಮೆಂಟ್ ಮಾಲೀಕರ ಸಂಘಟನೆಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾರ್ದಿಕವಾಗಿ ಸ್ವಾಗತಿಸಿವೆ. ಬಿಲ್ಡರ್‌ಗಳು ಕಾನೂನಿನಲ್ಲಿದ್ದ ಲೋಪದೋಷಗಳನ್ನು ಬಳಸಿಕೊಂಡು ಮಾಲೀಕರಿಗೆ ಮಾಡುತ್ತಿದ್ದ ವಂಚನೆಗೆ ಇದು ಶಾಶ್ವತ ಮುಕ್ತಿ ನೀಡಲಿದೆ ಎಂದು ಹೆಚ್‌ಎಂ ಟ್ಯಾಂಬರಿನ್ ನಿವಾಸಿ ಹಾಗೂ ‘ಚೇಂಜ್-ಮೇಕರ್ಸ್ ಆಫ್ ಕನಕಪುರ’ ಸದಸ್ಯ ಅಬ್ದುಲ್ ಅಲೀಮ್ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆರು ತಿಂಗಳ ಬಳಿಕ ಸಿನಿಮಾ ಹಿಟ್ ಆಗುತ್ತೆ’; ‘ಜನ ನಾಯಗನ್’ ಬಗ್ಗೆ ನಿರ್ದೇಶಕನ ಮಾತು – Kannada News | Initial Reviews Are Always Divided: Director H Vinoth on Vijay Jana Nayagan Box Office Future

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಚಿತ್ರದ ನಿರ್ದೇಶಕ ಎಚ್. ವಿನೋದ್ ಅವರು ಸಿನಿಮಾದ ವಿಮರ್ಶೆಗಳ ಬಗ್ಗೆ ಆಸಕ್ತಿಕರ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ವಿಜಯ್ ಸಿನಿಮಾಗಳಿಗೆ ನೆಗೆಟಿವ್ ಪ್ರತಿಕ್ರಿಯೆ ಬರುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ. ಇದು ಈಗ ಕಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಎಚ್. ವಿನೋದ್ ಮಾತನಾಡಿದ್ದಾರೆ. ತಮಿಳು ಚಿತ್ರರಂಗದ ಇತಿಹಾಸದಲ್ಲೇ ‘ಜನ ನಾಯಗನ್’ ಅತ್ಯಂತ ಪ್ರಮುಖ ಸಿನಿಮಾ ಎಂದು ಅವರು ಬಣ್ಣಿಸಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ತಮಗೊಂದು ಅದ್ಭುತ ಕನಸಿನಂತೆ ಭಾಸವಾಗುತ್ತಿದೆ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗುವವರೆಗೂ ಮಾತ್ರ ನಿರ್ದೇಶಕನ ನಿಯಂತ್ರಣದಲ್ಲಿ ಇರುತ್ತದೆ. ಚಿತ್ರಮಂದಿರಕ್ಕೆ ಬಂದ ಮೇಲೆ ಅದರ ಹಣೆಬರಹವನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ವಿನೋದ್ ಹೇಳಿದ್ದಾರೆ. ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಚಿತ್ರತಂಡದ ಮೇಲೆ ಭಾರೀ ಒತ್ತಡ ಇತ್ತು. ಆದರೆ ಈ ಜವಾಬ್ದಾರಿಯ ದೊಡ್ಡ ಹೊರೆ ನಾಯಕ ನಟ ಮತ್ತು ನಿರ್ಮಾಪಕರ ಮೇಲಿತ್ತು ಎಂದು ಅವರು ತಿಳಿಸಿದ್ದಾರೆ.

ವಿಜಯ್ ಅವರ ಸಿನಿಮಾಗಳ ಆರಂಭಿಕ ವಿಮರ್ಶೆಗಳ ಬಗ್ಗೆ ವಿನೋದ್ ಸ್ಪಷ್ಟನೆ ನೀಡಿದ್ದಾರೆ. ವಿಜಯ್ ಸರ್ ಸಿನಿಮಾ ರಿಲೀಸ್ ಆದ ಮೊದಲ ವಾರ ಎಲ್ಲರೂ ನೆಗೆಟಿವ್ ಆಗಿ ಮಾತನಾಡುತ್ತಾರೆ. ಚಿತ್ರದಲ್ಲಿ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ವಿಮರ್ಶಕರು ಚರ್ಚೆ ಮಾಡುತ್ತಾರೆ. ಆದರೆ ಆರು ತಿಂಗಳ ನಂತರ ಅದೇ ಸಿನಿಮಾ ಸಮಾಜದಲ್ಲಿ ದೊಡ್ಡ ಹಿಟ್ ಆಗಿ ಹೊರಹೊಮ್ಮುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಬಾಕ್ಸ್ ಆಫೀಸ್‌ ಕಲೆಕ್ಷನ್; ಎರಡನೇ ದಿನ ದೊಡ್ಡ ಕುಸಿತ ಕಂಡ ವಿಜಯ್ ಸಿನಿಮಾ

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಬಿಗ್ ಬಜೆಟ್ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸದ್ಯ ಈ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿಗರಿಗೆ ಶುಭ ಸುದ್ದಿ: ಇಂದಿನ ವಾಯು ಗುಣಮಟ್ಟ ಸೂಪರ್, ನಿಮ್ಮ ಏರಿಯಾದ AQI ಎಷ್ಟಿದೆ? – Kannada News | Bengaluru AQI Today: Air Quality Improves Across Karnataka Cities

ಬೆಂಗಳೂರು, ಜುಲೈ 25: ಇಂದು ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಆಶಾದಾಯಕವಾಗಿದೆ. ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಮಳೆ ಹಾಗೂ ಗಾಳಿಯ ವೇಗ ಹೆಚ್ಚಾಗಿರುವ ಪರಿಣಾಮವಾಗಿ ಧೂಳಿನ ಕಣಗಳ ಪ್ರಮಾಣ ಕಡಿಮೆಯಾಗಿದ್ದು, ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ (AQI) ವಿವರ

ಇಂದಿನ ವಾಯು ಗುಣಮಟ್ಟದ ದಾಖಲೆಯ ಪ್ರಕಾರ, ಬೆಂಗಳೂರಿನ ಸರಾಸರಿ AQI ಮಟ್ಟವು 45 ರಿಂದ 53ರ ಆಜುಬಾಜಿನಲ್ಲಿದೆ. ವಾಯು ಮಾಲಿನ್ಯದ ವರ್ಗೀಕರಣದ ಪ್ರಕಾರ ಇದನ್ನು ‘ಉತ್ತಮ’ (Good) ಹಾಗೂ ‘ಸಾಧಾರಣ’ (Moderate) ಮಟ್ಟ ಎಂದು ಪರಿಗಣಿಸಲಾಗುತ್ತದೆ.

ನಗರದ ಬಿಟಿಎಂ ಲೇಔಟ್, ಬಸವನಗುಡಿ, ಬನಶಂಕರಿ ಹಾಗೂ ವೈಟ್‌ಫೀಲ್ಡ್ ಭಾಗಗಳಲ್ಲಿ ಪಿಎಂ 2.5 (PM 2.5) ಮತ್ತು ಪಿಎಂ 10 (PM 10) ಕಣಗಳ ಪ್ರಮಾಣ ತೀರಾ ಕಡಿಮೆಯಿದೆ. ಯಾವುದೇ ಹಾನಿಕಾರಕ ಅನಿಲಗಳ ಸಾಂದ್ರತೆ ಹೆಚ್ಚಿಲ್ಲದಿರುವುದರಿಂದ ಹಿರಿಯ ನಾಗರಿಕರು, ಮಕ್ಕಳು ಹಾಗೂ ಉಸಿರಾಟದ ತೊಂದರೆ ಇರುವವರು ಯಾವುದೇ ಭೀತಿಯಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದ ಇತರ ಜಿಲ್ಲೆ ಹಾಗೂ ಪ್ರಮುಖ ನಗರಗಳಲ್ಲೂ ಗಾಳಿಯ ಶುದ್ಧತೆ ಉತ್ತಮ ಸ್ಥಿತಿಯಲ್ಲಿದೆ. ಬೆಳಗಾವಿಯ ಇಂದಿನ AQI ಮಟ್ಟವು ಸುಮಾರು 66ರಷ್ಟಿದ್ದು, ಸಾಧಾರಣ ವಲಯದಲ್ಲಿದೆ.

ಬಾಗಲಕೋಟೆಯ ವಾಯು ಗುಣಮಟ್ಟ ಸೂಚ್ಯಂಕ 86ರಷ್ಟಿದ್ದು, ಮಾಲಿನ್ಯ ನಿಯಂತ್ರಣದಲ್ಲಿದೆ. ಬಳ್ಳಾರಿಯಲ್ಲಿ AQI 48 ರಿಂದ 50ರಷ್ಟಿದ್ದು ‘ಉತ್ತಮ’ ವಿಭಾಗದಲ್ಲಿದ್ದರೆ, ಮೈಸೂರಿನಲ್ಲೂ ವಾಯು ಶುದ್ಧತೆ ಉತ್ತಮ ಮಟ್ಟದಲ್ಲಿದೆ.

ಮಳೆಗಾಲದ ವಾತಾವರಣ ಮುಂದುವರಿದಿರುವುದರಿಂದ ಮುಂಬರುವ ದಿನಗಳಲ್ಲೂ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಹೀಗೆಯೇ ಹಸಿರು ಮತ್ತು ಸಾಧಾರಣ ವಲಯದಲ್ಲೇ ಮುಂದುವರಿಯುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

18 ತಂಡಗಳು… ಹೀಗಿರಲಿದೆ ಏಷ್ಯನ್ ಗೇಮ್ಸ್​ ಟಿ20 ಟೂರ್ನಿ – Kannada News | Asian Games 2026: 18 Teams Ready for Cricket Showdown

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯ ಅಧಿಕೃತ ವೇಳಾಪಟ್ಟಿ ಮತ್ತು ಸ್ವರೂಪ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 18 ತಂಡಗಳು (10 ಪುರುಷರ ಮತ್ತು 8 ಮಹಿಳಾ ತಂಡಗಳು) ಪದಕದ ಬೇಟೆಗಾಗಿ ಅಖಾಡಕ್ಕಿಳಿಯುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಟೂರ್ನಿ ಕುರಿತಾದ ಸಂಪೂರ್ಣ ಮಾಹಿತಿ ಈ ಕಳಗಿನಂತಿದೆ…

10 ತಂಡಗಳ ಪುರುಷರ ಟೂರ್ನಿ:

ಪುರುಷರ ವಿಭಾಗದಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಬಲಿಷ್ಠ ತಂಡಗಳನ್ನು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಸಲಾಗುತ್ತಿದೆ.

  •  ನೇರ ಕ್ವಾರ್ಟರ್ ಫೈನಲ್ ಪ್ರವೇಶ:ಏಷ್ಯಾದ ನಾಲ್ಕು ಪ್ರಮುಖ ಟಿ20 ತಂಡಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ.
  • ಪ್ರಾಥಮಿಕ ಸುತ್ತಿನ ಲೀಗ್: ಉಳಿದ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಲಿವೆ.

ಇದನ್ನೂ ಓದಿ: ವಿಂಬಲ್ಡನ್ ಕೋರ್ಟ್‌ನಲ್ಲಿ ರಾರಾಜಿಸುವ ‘ಮೇಡ್ ಇನ್ ಇಂಡಿಯಾ’!

  • ಗ್ರೂಪ್ A:
  • ಅಫ್ಘಾನಿಸ್ತಾನ್
  • ನೇಪಾಳ
  • ಜಪಾನ್
  • ಗ್ರೂಪ್ B:
  • ಒಮಾನ್
  • ಹಾಂಗ್ ಕಾಂಗ್
  • ಮಲೇಷ್ಯಾ

ಟೂರ್ನಿಯ ಸ್ವರೂಪವೇನು?

ಪ್ರಾಥಮಿಕ ಸುತ್ತಿನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಅಂದರೆ ಗ್ರೂಪ್ ಎ ಮತ್ತು ಗ್ರೂಪ್ ಬಿ ನಲ್ಲಿ ಕಾಣಿಸಿಕೊಂಡಿರುವ ತಂಡಗಳು ಮೊದಲ ಸುತ್ತು ಆಡಲಿದೆ. ಈ ಸುತ್ತಿನ ಪಂದ್ಯಗಳ ಬಳಿಕ ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಮೊದಲ ಎರಡು ತಂಡಗಳು (ಒಟ್ಟು 4 ತಂಡಗಳು) ಮುಂದಿನ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆಯಲಿವೆ.

ಪ್ರಾಥಮಿಕ ಹಂತ ಮುಗಿದ ಬಳಿಕ ಅಸಲಿ ಜಿದ್ದಾಜಿದ್ದಿ ಆರಂಭವಾಗಲಿದ್ದು, ಇಲ್ಲಿ ಒಟ್ಟು 8 ತಂಡಗಳು ಮುಖಾಮುಖಿಯಾಗಲಿವೆ. ಅಂದರೆ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳ ವಿರುದ್ಧ 4 ತಂಡಗಳು ಸೆಣಸಲಿದೆ.

ಇಂಡೋ-ಪಾಕ್ ಪಂದ್ಯ ಯಾವಾಗ?:

ಅಧಿಕೃತ ಡ್ರಾ ಪ್ರಕಾರ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ವೇಳಾಪಟ್ಟಿಯ ವಿರುದ್ಧ ಬದಿಗಳಲ್ಲಿ ಇರಿಸಲಾಗಿದೆ. ಹೀಗಾಗಿ, ಉಭಯ ತಂಡಗಳು ಮುಖಾಮುಖಿಯಾಗಬೇಕಾದರೆ ಕನಿಷ್ಠ ಸೆಮಿಫೈನಲ್ ಅಥವಾ ಫೈನಲ್ ಹಂತದವರೆಗೆ ಸಾಗಬೇಕಾಗುತ್ತದೆ.

ಪುರುಷರ ಟೂರ್ನಿ ಯಾವಾಗ ಶುರು?

2026ರ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಟೂರ್ನಿಯು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1, 2026 ರವರೆಗೆ ಜಪಾನ್‌ನಲ್ಲಿ ಜರುಗಲಿದೆ.

  • ಪ್ರಾಥಮಿಕ ಲೀಗ್ ಹಂತ (ಗ್ರೂಪ್ ಪಂದ್ಯಗಳು): ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 27, 2026
  • ಕ್ವಾರ್ಟರ್ ಫೈನಲ್ ಪಂದ್ಯಗಳು: ಸೆಪ್ಟೆಂಬರ್ 28 ಮತ್ತು 29, 2026
  • ಸೆಮಿಫೈನಲ್ ಪಂದ್ಯಗಳು: ಅಕ್ಟೋಬರ್ 1, 2026
  • ಪದಕದ ಪಂದ್ಯಗಳು (ಫೈನಲ್ ಮತ್ತು ಕಂಚಿನ ಪದಕದ ಪಂದ್ಯ): ಅಕ್ಟೋಬರ್ 1, 2026

ಎಲ್ಲಾ 10 ತಂಡಗಳ ಪಂದ್ಯಗಳು ಜಪಾನ್‌ನ ಐಚಿ ಪ್ರಾಂತ್ಯದ ಕೋಗಿ ಅಥ್ಲೆಟಿಕ್ ಪಾರ್ಕ್ ಮೈದಾನದಲ್ಲಿ ಟಿ20 ಮಾದರಿಯಲ್ಲಿ ನಡೆಯಲಿವೆ.

ಹೇಗಿರಲಿದೆ ಮಹಿಳಾ ಟಿ20 ಟೂರ್ನಿ?

2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಟೂರ್ನಿಯು ನೇರ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಲೀಗ್ ಹಂತದ ಪಂದ್ಯಗಳು ಇರುವುದಿಲ್ಲ. ಟೂರ್ನಿಯಲ್ಲಿ ಒಟ್ಟು 8 ದೇಶಗಳ ಮಹಿಳಾ ತಂಡಗಳು ಭಾಗವಹಿಸುತ್ತಿದ್ದು, ಎಲ್ಲಾ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದಲೇ ತಮ್ಮ ಅಭಿಯಾನವನ್ನು ಆರಂಭಿಸಲಿವೆ.

ಮಹಿಳಾ ಟಿ20 ಟೂರ್ನಿಯ ವೇಳಾಪಟ್ಟಿ:

ಮಹಿಳಾ ಕ್ರಿಕೆಟ್ ಪಂದ್ಯಗಳು ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 22, 2026 ರವರೆಗೆ ನಡೆಯಲಿವೆ. ಟಿ20 ಮಾದರಿಯಲ್ಲಿ ಜರುಗಲಿರುವ ಈ ಟೂರ್ನಿಯು ನಾಕೌಟ್ ಹಂತದಿಂದಲೇ ಶುರುವಾಗಲಿದೆ. ಈ ಟೂರ್ನಿಯ ವೇಳಾಪಟ್ಟಿ ಈ ಕೆಳಗಿನಂತಿದೆ:

ದಿನಾಂಕ  ಪಂದ್ಯದ ಹಂತ ತಂಡಗಳು ಸ್ಥಳ
ಸೆಪ್ಟೆಂಬರ್ 17 ಕ್ವಾರ್ಟರ್ ಫೈನಲ್ 1 ಭಾರತ vs ಜಪಾನ್ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 18 ಕ್ವಾರ್ಟರ್ ಫೈನಲ್ 2 ಬಾಂಗ್ಲಾದೇಶ್ vs ಚೀನಾ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 19 ಕ್ವಾರ್ಟರ್ ಫೈನಲ್ 3 ಶ್ರೀಲಂಕಾ vs ಮಲೇಷ್ಯಾ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 19 ಕ್ವಾರ್ಟರ್ ಫೈನಲ್ 4 ಪಾಕಿಸ್ತಾನ್ vs ಥೈಲ್ಯಾಂಡ್ ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 20 ಸೆಮಿಫೈನಲ್ 1 QF 1 ವಿಜೇತರು vs QF 2 ವಿಜೇತರು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 20 ಸೆಮಿಫೈನಲ್ 2 QF 3 ವಿಜೇತರು vs QF 4 ವಿಜೇತರು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 22 ಕಂಚಿನ ಪದಕದ ಪಂದ್ಯ ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ಕೋಗಿ ಅಥ್ಲೆಟಿಕ್ ಪಾರ್ಕ್
ಸೆಪ್ಟೆಂಬರ್ 22 ಚಿನ್ನದ ಪದಕದ ಪಂದ್ಯ (ಫೈನಲ್) ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಕೋಗಿ ಅಥ್ಲೆಟಿಕ್ ಪಾರ್ಕ್

ಚೀನಾ ದೇಶದ ಹ್ಯಾಂಗ್‌ಝೌನಲ್ಲಿ ನಡೆದ ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು. ಈ ಬಾರಿಯೂ ಭಾರತ ತಂಡವು ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಮತ್ತು ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ಭಾರತದ ಮುಡಿಗೆ ಏರಿಸುವ ಬಲವಾದ ವಿಶ್ವಾಸದಲ್ಲಿದೆ.

Source link

‘ಕರಾವಳಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಓಪನಿಂಗ್ – Kannada News | Karavali Box Office Day 1: Prajwal Devaraj, Raj B Shetty Starrer Earns 7 Lakh on Opening Day

ಭಾರೀ ಕುತೂಹಲ ಮೂಡಿಸಿದ್ದ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಸಾಕಷ್ಟು ವಿವಾದಗಳ ಬೆನ್ನಲ್ಲೇ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದೆ. ಚಿತ್ರತಂಡಕ್ಕೆ ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಆಸೆ ಇರಲಿಲ್ಲ. ಆದರೆ, ನಟ ಪ್ರಜ್ವಲ್ ಅವರ ಸಂಭಾವನೆ ವಿಷಯಕ್ಕೆ ಸಂಬಂಧಿಸಿದಂತೆ ಈ ಚಿತ್ರ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಸಮಸ್ಯೆಯನ್ನೇ ಎದುರಿಸಬೇಕಾಗಿ ಬಂತು. ಸದ್ಯ ಈ ಎಲ್ಲಾ ಅಡೆತಡೆಗಳನ್ನು ಮೀರಿ ರಿಲೀಸ್ ಆಗಿರುವ ಸಿನಿಮಾದ ಮೊದಲ ದಿನದ ಗಳಿಕೆಯ ವಿವರ ಹೊರಬಿದ್ದಿದೆ. ಪ್ರೇಕ್ಷಕರಿಂದ ಪಾಸಿಟಿವ್ ವಿಮರ್ಶೆಗಳು ಸಿಗುತ್ತಿರುವುದರಿಂದ ಮೊದಲ ದಿನದ ಕಲೆಕ್ಷನ್ ಉತ್ತಮವಾಗಿಯೇ ಇದೆ ಎನ್ನಬಹುದು.

ಸಾಸ್ನಿಲ್ಕ್​ ವರದಿ ಪ್ರಕಾರ ‘ಕರಾವಳಿ’ ಸಿನಿಮಾ ಮೊದಲ ದಿನ ದೇಶಾದ್ಯಂತ 77 ಲಕ್ಷ ರೂಪಾಯಿ ಗಳಿಕೆ ಮಾಡುವ ಮೂಲಕ ಭರವಸೆ ಮೂಡಿಸಿದೆ. ಪ್ರಮುಖ ಟಿಕೆಟ್ ಬುಕಿಂಗ್ ಆ್ಯಪ್ ಆದ ‘ಬುಕ್ ಮೈ ಶೋ’ನಲ್ಲಿ ಈ ಚಿತ್ರಕ್ಕೆ ಗರಿಷ್ಠ ಮಟ್ಟದ ರೆಸ್ಪಾನ್ಸ್ ಸಿಗುತ್ತಿರುವುದು ಕಲೆಕ್ಷನ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 14.9 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಬುಕ್ ಆಗಿರುವುದು ಚಿತ್ರಕ್ಕೆ ಸಿಗುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಸಿನಿಮಾ ನೋಡಿದ ಪ್ರೇಕ್ಷಕರು ಮತ್ತು ವಿಮರ್ಶಕರು ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಎಲ್ಲೆಡೆ ಉತ್ತಮವಾದ ಮೌತ್ ಟಾಕ್ ಕೇಳಿಬರುತ್ತಿದೆ. ಹೀಗಾಗಿ, ವೀಕೆಂಡ್ ದಿನಗಳಾದ ಶನಿವಾರ ಮತ್ತು ಭಾನುವಾರ ಈ ಸಿನಿಮಾದ ಕಲೆಕ್ಷನ್ ಗ್ರಾಫ್ ಇನ್ನು ದೊಡ್ಡ ಮಟ್ಟದಲ್ಲಿ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಮುಂಬರುವ ದಿನಗಳಲ್ಲಿ ಚಿತ್ರ ಮತ್ತಷ್ಟು ಭರ್ಜರಿ ಗಳಿಕೆ ಕಾಣುವ ವಿಶ್ವಾಸದಲ್ಲಿದೆ ಚಿತ್ರತಂಡ.

ಇದನ್ನೂ ಓದಿ: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ; ಹೀಗಿದೆ ‘ಕರಾವಳಿ’

ಇನ್ನು ಸಿನಿಮಾದ ವಿವಾದದ ವಿಷಯಕ್ಕೆ ಬರುವುದಾದರೆ, ಈ ಹಿಂದೆ ನಡೆದ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದ ಸಮಯದಲ್ಲೇ ದೊಡ್ಡ ಗದ್ದಲ ಸೃಷ್ಟಿಯಾಗಿತ್ತು. ಪ್ರಜ್ವಲ್ ದೇವರಾಜ್ ಸಂಭಾವನೆ ಬಾಕಿ ಉಳಿಸಿಕೊಂಡಿದ್ದಕ್ಕೆ ಡಬ್ಬಿಂಗ್ ಮಾಡಲ್ಲ ಎಂದಿದ್ದರು. ಹೀಗಾಗಿ, ಅವರಿಗೆ ಬೇರೆಯವರಿಂದ ಡಬ್ ಮಾಡಿಸಿ, ಸಿನಿಮಾ ರಿಲೀಸ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vastu Tips: ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಡಬಹುದೇ? ಶಾಸ್ತ್ರಗಳು ಹೇಳುವುದೇನು? – Kannada News | Tulsi Plant Vastu Tips: Placement and Benefits for Prosperity at Home

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರ ಹಾಗೂ ಪೂಜನೀಯ ಎಂದು ಪರಿಗಣಿಸಲಾಗಿದೆ. ಬಹುತೇಕ ಪ್ರತಿಯೊಬ್ಬರ ಮನೆಯ ಅಂಗಳದಲ್ಲಿಯೂ ತುಳಸಿ ಕಟ್ಟೆಯಿದ್ದು, ಪ್ರತಿದಿನ ನಿಗದಿತ ಆಚರಣೆಗಳೊಂದಿಗೆ ಅದನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತುಳಸಿ ಗಿಡದಲ್ಲಿ ಶ್ರೀ ಮಹಾಲಕ್ಷ್ಮಿಯು ವಾಸಿಸುತ್ತಾಳೆ. ಅಲ್ಲದೆ, ತುಳಸಿಯು ಶ್ರೀಹರಿ ವಿಷ್ಣುವಿಗೆ ಅತ್ಯಂತ ಪ್ರಿಯವಾದುದು. ಶಾಸ್ತ್ರೋಕ್ತವಾಗಿ ತುಳಸಿಯನ್ನು ಪೂಜಿಸುವ ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ ಹಾಗೂ ವಿಷ್ಣುವಿನ ವಿಶೇಷ ಅನುಗ್ರಹ ನೆಲೆಸಿರುತ್ತದೆ.

ವಾಸ್ತು ಶಾಸ್ತ್ರದಲ್ಲಿ ತುಳಸಿಯ ಮಹತ್ವ:

ವಾಸ್ತು ಶಾಸ್ತ್ರದಲ್ಲೂ ತುಳಸಿ ಗಿಡಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಪ್ರಾಚೀನ ಕಾಲದಿಂದಲೂ ಹಿಂದೂ ಸಂಪ್ರದಾಯದ ಅಮೂಲ್ಯ ಭಾಗವಾಗಿರುವ ಈ ಗಿಡವು, ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸುವುದಲ್ಲದೆ, ನಿರಂತರವಾಗಿ ಧನಾತ್ಮಕ (ಸಕಾರಾತ್ಮಕ) ಶಕ್ತಿಯನ್ನು ಆಕರ್ಷಿಸುತ್ತದೆ. ಆದರೆ ಹಲವರಲ್ಲಿ “ಒಂದಕ್ಕಿಂತ ಹೆಚ್ಚು ತುಳಸಿ ಗಿಡಗಳನ್ನು ಮನೆಯಲ್ಲಿ ನೆಡಬಹುದೇ?” ಎಂಬ ಗೊಂದಲವಿರುತ್ತದೆ.

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಡಬಹುದೇ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡಗಳನ್ನು ನೆಡುವುದು ಖಂಡಿತವಾಗಿಯೂ ಶುಭ. ಆದರೆ ಹೀಗೆ ನೆಡುವಾಗ ಗಿಡಗಳ ಸಂಖ್ಯೆಯು 3, 5 ಅಥವಾ 7 ರಂತಹ ಬೆಸ ಸಂಖ್ಯೆಗಳಲ್ಲಿ (Odd Numbers) ಇರಬೇಕು. ನೆನಪಿಡಿ, ಅಗತ್ಯಕ್ಕಿಂತ ಹೆಚ್ಚು ಗಿಡಗಳನ್ನು ನೆಡಬಾರದು. ಹೆಚ್ಚು ಗಿಡಗಳಿದ್ದರೆ ಅವುಗಳ ಸರಿಯಾದ ಆರೈಕೆ ಮಾಡಲು ಸಾಧ್ಯವಾಗದೆ, ಪೂಜೆಯ ಪೂರ್ಣ ಫಲವನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ತುಳಸಿ ಗಿಡ ನೆಡಲು ಸೂಕ್ತವಾದ ದಿಕ್ಕು ಯಾವುದು?

ತುಳಸಿ ಗಿಡದಿಂದ ಪೂರ್ಣ ಶುಭ ಫಲಗಳು ದೊರೆಯಬೇಕಾದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಅತ್ಯಗತ್ಯ. ಮನೆಯ ಪೂರ್ವ ಭಾಗದಲ್ಲಿ ತುಳಸಿ ನೆಡುವುದು ಅತ್ಯಂತ ಶ್ರೇಷ್ಠ. ಈಶಾನ್ಯ ದಿಕ್ಕಿನಲ್ಲಿ ಇಡುವುದು ಮನೆಗೆ ಲಕ್ಷ್ಮಿಯ ಅನುಗ್ರಹ ಮತ್ತು ಶಾಂತಿಯನ್ನು ತರುತ್ತದೆ. ಆದರೆ ತುಳಸಿ ಗಿಡವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಏಕೆಂದರೆ ದಕ್ಷಿಣವು ಪಿತೃಗಳ ಮತ್ತು ಯಮನ ದಿಕ್ಕಾಗಿದ್ದು, ಇಲ್ಲಿ ಇಡುವುದರಿಂದ ಹಾನಿಯಾಗಬಹುದು.

ಪಾಲಿಸಬೇಕಾದ ಮುಖ್ಯ ನಿಯಮಗಳು:

ತುಳಸಿ ಗಿಡವನ್ನು ಯಾವಾಗಲೂ ಮನೆಯ ಅಂಗಳ ಅಥವಾ ಬಾಲ್ಕನಿಯಂತಹ ಸ್ವಚ್ಛ ಮತ್ತು ಗಾಳಿ-ಬೆಳಕು ಬರುವ ಸ್ಥಳದಲ್ಲೇ ಇಡಬೇಕು. ಮನೆಯಲ್ಲಿರುವ ತುಳಸಿ ಗಿಡ ಎಂದಿಗೂ ಒಣಗಿಹೋಗಬಾರದು. ಭಾನುವಾರ ಮತ್ತು ಏಕಾದಶಿ ದಿನಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ದಿನಗಳಲ್ಲಿ ತುಳಸಿ ಗಿಡಕ್ಕೆ ತಪ್ಪದೇ ನಿಯಮಿತವಾಗಿ ನೀರನ್ನು ಸಮರ್ಪಿಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಯಲ್ಲಿ ರಣಮಳೆಯ ಹಾವಳಿ; ಉಡುಪಿ, ದಕ್ಷಿಣ ಕನ್ನಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ – Kannada News | Karnataka Weather Forecast: Heavy rainfall in Coastal Karnataka; School College Holiday Declared in Dakshina Kannada, Udupi

ಬೆಂಗಳೂರು, ಜುಲೈ 25: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ  ಜೊತೆಗೆ ಗಂಟೆಗೆ 30 ರಿಂದ 50 kmph ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ಮಲೆನಾಡಿನ ಪ್ರಮುಖ ಜಿಲ್ಲೆಗಳಿಗೆ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ.

ಕರಾವಳಿ ಕರ್ನಾಟಕ

ಕರಾವಳಿ ಪ್ರದೇಶದಲ್ಲಿ ಹಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇಂದೂ ಸಹ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 30 ರಿಂದ 40 kmph ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ಉಡುಪಿಯಲ್ಲಿ ಆರೆಂಜ್ ಅಲರ್ಟ್​ ನೀಡಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಅಂಗನವಾಡಿಯಿಂದ ಪಿಯುಸಿವರೆಗಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಟಿ. ಕೆ. ಸ್ವರೂಪ್ ಈ ರಜೆ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿರಲು ಸೂಚಿಸಲಾಗಿದೆ.

ಉತ್ತರ ಒಳನಾಡು

ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ರಾಯಚೂರು, ಹಾವೇರಿ, ಯಾದಗಿರಿ ಮತ್ತು ಕಲ್ಬುರ್ಗಿ ಹಲವು ಭಾಗಗಳಲ್ಲಿ ಗಂಟೆಗೆ 40 ರಿಂದ 50 kmph ವೇಗದ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 kmph ವೇಗದ ಗಾಳಿ ಸಹಿತ ಲಘು ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡು

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗಂಟೆಗೆ 40 ರಿಂದ 50 kmph ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು,ಯೆಲ್ಲೋ ಅಲರ್ಟ್​ ಜಾರಿಯಲ್ಲಿದೆ. ಚಿತ್ರದುರ್ಗ ಮತ್ತು ಮೈಸೂರಿನ ಹಲವೆಡೆ ಗಂಟೆಗೆ 40 ರಿಂದ 50 kmph ವೇಗದ ಬಿರುಗಾಳಿ ಸಹಿತ ಸಾಧಾರಣ ಮಳೆ ಬೀಳಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಗಂಟೆಗೆ 30 ರಿಂದ 40 kmph ವೇಗದ ಬಿರುಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಹಾಗೂ ಗಾಳಿಯ ರಭಸ ಹೆಚ್ಚಿರಲಿದ್ದು, ಸಾರ್ವಜನಿಕರು ಅಗತ್ಯ ಜಾಗರೂಕತೆ ವಹಿಸಲು ಸೂಚಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಥ್ಯಾಂಕ್ಯೂ ಫ್ರೆಂಡ್ಸ್”: ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ – Kannada News | Midnight Address: PM Modi Thanks Youth Following NEET Controversy

ದೆಹಲಿ, ಜು.25: ದೇಶದಲ್ಲಿ ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಮಧ್ಯರಾತ್ರಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಈ ಹಿಂದೆಯೂ ಒಂದು ವಿಡಿಯೋ ಮೂಲಕ ಸಂದೇಶ ನೀಡಿದ್ದ ಪ್ರಧಾನಿ, ಈಗ “ಥ್ಯಾಂಕ್ಯೂ ಫ್ರೆಂಡ್ಸ್” ಎಂದು ಹೇಳುವ ಮೂಲಕ ಯುವಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ಹೊಸ ಸಂದೇಶದಲ್ಲಿ, ಪ್ರಧಾನಿ ಮೋದಿ ಅವರು ಹಿಂದಿನ ವಿಡಿಯೋಗೆ ದೊರೆತ ಪ್ರತಿಕ್ರಿಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. “ನಿನ್ನೆ ನಿಮ್ಮನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ವಿಡಿಯೋಗೆ ನೀವು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ. ಅಲ್ಲದೆ, “ಸಕಾರಾತ್ಮಕ ಸಲಹೆಗಳನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ನಿಮ್ಮ ಪ್ರೀತಿಯಿಂದ ನಮ್ಮ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುತ್ತದೆ. ಯುವಕರೇ, ಎಲ್ಲರಿಗೂ ಧನ್ಯವಾದ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಸಂದೇಶವು ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆಗಳ ಸಮಯದಲ್ಲಿ ಬಂದಿರುವುದು ಗಮನಾರ್ಹವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಬಾಕ್ಸ್ ಆಫೀಸ್‌ ಕಲೆಕ್ಷನ್; ಎರಡನೇ ದಿನ ದೊಡ್ಡ ಕುಸಿತ ಕಂಡ ವಿಜಯ್ ಸಿನಿಮಾ – Kannada News | Jana Nayagan Box Office Day 2 Vijay Starrer Faces Massive 50 Drop Despite Crossing 100 Cr Globally

ಭಾರೀ ನಿರೀಕ್ಷೆ ಮೂಡಿಸಿ ತೆರೆಕಂಡಿದ್ದ ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ದಿನವೇ ಅತಿ ದೊಡ್ಡ ಹಿನ್ನಡೆ ಅನುಭವಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ ದೊಡ್ಡ ಕುಸಿತ ಕಂಡಿದ್ದು, ಚಿತ್ರತಂಡಕ್ಕೆ ಭಾರೀ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಮೊದಲ ದಿನವಾದ ಗುರುವಾರ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಂಡು 42.70 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದ ‘ಜನ ನಾಯಗನ್’ ಸಿನಿಮಾ, ಎರಡನೇ ದಿನವಾದ ಶುಕ್ರವಾರ ಕೇವಲ 21.15 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ತವಾಗಿದೆ. ಅಂದರೆ ಕೇವಲ ಒಂದೇ ದಿನದಲ್ಲಿ ಚಿತ್ರದ ಗಳಿಕೆ ಶೇಕಡಾ 50 ಕ್ಕಿಂತಲೂ ಹೆಚ್ಚು ಕುಸಿದಂತಾಗಿದೆ. ಇದರೊಂದಿಗೆ ಚಿತ್ರದ ಶೋಗಳ ಸಂಖ್ಯೆಯೂ 13,067 ರಿಂದ 12,190 ಕ್ಕೆ ಇಳಿಕೆಯಾಗಿದೆ. ಥಿಯೇಟರ್‌ ಆಕ್ಯುಪೆನ್ಸಿ ಕೂಡ ಶೇ. 41.6 ರಿಂದ ಶೇ. 29.5 ಕ್ಕೆ ಪಲ್ಟಿಯಾಗಿದೆ.

ಸದ್ಯಕ್ಕೆ ಎರಡು ದಿನಗಳ ಪ್ರದರ್ಶನದಿಂದ ಭಾರತದಲ್ಲಿ ಒಟ್ಟು 63.85 ಕೋಟಿ ರೂಪಾಯಿ ನೆಟ್ ಹಾಗೂ 75.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ ಎರಡನೇ ದಿನ 10.00 ಕೋಟಿ ರೂಪಾಯಿ ಗಳಿಸಿರುವ ಸಿನಿಮಾ, ಅಲ್ಲಿನ ಒಟ್ಟು ಗಳಿಕೆಯನ್ನು 37.50 ಕೋಟಿಗೆ ಕೊಂಡೊಯ್ದಿದೆ. ಈ ಮೂಲಕ ಜಾಗತಿಕವಾಗಿ ಚಿತ್ರದ ಗ್ರಾಸ್ ಕಲೆಕ್ಷನ್ 112.50 ಕೋಟಿ ರೂಪಾಯಿ ತಲುಪಿದಂತಾಗಿದೆ.

ಎರಡು ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರೋದು ಎಂದರೆ ಅದು ತಮಾಷೆಯ ವಿಷಯ ಅಲ್ಲ. ಆದರೆ, ಸಿನಿಮಾದ ಒಟ್ಟಾರೆ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತೀರಾ ಕಮ್ಮಿ ಎನಿಸುತ್ತಿದೆ. ಎರಡನೇ ದಿನವೂ ತಮಿಳು ಭಾಷೆಯಲ್ಲೇ ಹೆಚ್ಚಿನ ಗಳಿಕೆ ಆಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು

ಮೂಲಗಳ ಪ್ರಕಾರ ‘ಜನ ನಾಯಗನ್’ ಚಿತ್ರದ ಬಜೆಟ್ ಬರೋಬ್ಬರಿ 300 ರಿಂದ 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟು ಬೃಹತ್ ಮೊತ್ತವನ್ನು ಹೂಡಿಕೆ ಮಾಡಿರುವ ಕಾರಣ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅತಿ ದೊಡ್ಡ ಮಟ್ಟದ ಗಳಿಕೆ ಮಾಡುವುದು ಅನಿವಾರ್ಯವಾಗಿದೆ. ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ ಸಿನಿಮಾ ಭರ್ಜರಿ ಪಿಕ್‌ಅಪ್ ಕಾಣದೇ ಹೋದರೆ ನಿರ್ಮಾಪಕರಿಗೆ ತೊಂದರೆ ಆಗಬಹುದು.

ಪ್ರಶ್ನೆ:  ಜನ ನಾಯಗನ್ ಸಿನಿಮಾ ಯಾವಾಗ ಬಿಡುಗಡೆ ಆಗಿದೆ
ಉತ್ತರ:
ಜುಲೈ 23

ಪ್ರಶ್ನೆ: ಇದು ವಿಜಯ್ ಕೊನೆ ಚಿತ್ರವೇ? 
ಉತ್ತರ:
ಹೌದು

ಪ್ರಶ್ನೆ: ಎರಡು ದಿನಕ್ಕೆ ಜನ ನಾಯಗನ್ ಗಳಿಸಿದ್ದೆಷ್ಟು?
ಉತ್ತರ: 
112.50 ಕೋಟಿ ರೂಪಾಯಿ

Source link

Exit mobile version