ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ – Kannada News | Even Rajamouli Varanasi Cannot Stop Prithviraj Sukumaran Non Stop Movie Releases

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ (Prithviraj) ತಮ್ಮ ಬಹುಮುಖ ಪ್ರತಿಭೆಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ಮತ್ತೊಂದು ಅಪರೂಪದ ಸಾಧನೆಗೆ ಕಾರಣವಾಗಿದ್ದಾರೆ. ಎಸ್‌ಎಸ್‌ ರಾಜಮೌಳಿ ಅವರ ಬಿಗ್ ಬಜೆಟ್ ಸಿನಿಮಾ ‘ವಾರಣಾಸಿ’ ಚಿತ್ರದಲ್ಲಿ ನಟಿಸುತ್ತಿದ್ದರೂ ಪೃಥ್ವಿರಾಜ್ ಸಾಲು ಸಾಲು ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದಾರೆ. ರಾಜಮೌಳಿ ಜೊತೆ ಕೆಲಸ ಮಾಡುತ್ತಾ ಬೇರೆ ಚಿತ್ರಗಳಲ್ಲಿ ಸಕ್ರಿಯರಾಗಿರುವ ಏಕೈಕ ನಟ ಇವರಾಗಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡಿತ್ತು ‘ಐ, ನೋಬಡಿ’ ಸಿನಿಮಾ

ಇತ್ತೀಚೆಗಷ್ಟೇ ಅಂದರೆ ಜುಲೈ 9 ರಂದು ಪೃಥ್ವಿರಾಜ್ ನಟನೆಯ ‘ಐ, ನೋಬಡಿ’ ಚಿತ್ರ ಬಿಡುಗಡೆಯಾಗಿತ್ತು. ಈ ಹಿಸ್ಟ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರದ ತಾಂತ್ರಿಕ ಶ್ರೀಮಂತಿಕೆ ಮತ್ತು ಮೊದಲ ಭಾಗ ಸಖತ್ ಗ್ರಿಪ್ಪಿಂಗ್ ಆಗಿದೆ ಎಂದು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದರೆ ಚಿತ್ರದ ದ್ವಿತೀಯಾರ್ಧ ಕೊಂಚ ಗೊಂದಲದಿಂದ ಕೂಡಿದೆ ಎಂಬ ಟಾಕ್ ಕೇಳಿಬಂದಿದೆ. ಈ ಸಿನಿಮಾ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿತ್ತು.

ಓಣಂ ಹಬ್ಬಕ್ಕೆ ಬರ್ತಿದೆ ‘ಖಲೀಫಾ’ ಧಮಾಕಾ

‘ಐ, ನೋಬಡಿ’ ಬೆನ್ನಲ್ಲೇ ಪೃಥ್ವಿರಾಜ್ ಅವರ ಮುಂದಿನ ಸಿನಿಮಾ ‘ಖಲೀಫಾ’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ಆಗಸ್ಟ್ 20 ರಂದು ಓಣಂ ಹಬ್ಬದ ವಿಶೇಷವಾಗಿ ಈ ಸಿನಿಮಾ ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ ಎಂದು ಪೃಥ್ವಿರಾಜ್ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಈ ಚಿತ್ರ ಕೂಡ ಮಲಯಾಳಂ ಜೊತೆಗೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.

ಇದನ್ನೂ ಓದಿ: ಪರಭಾಷೆಯಲ್ಲಿ ಮಿಂಚಿ ತಾಯ್ನಾಡಿನಲ್ಲಿ ಸೋಲುತ್ತಿದ್ದಾರಾ ಸ್ಟಾರ್ ನಟ ಪೃಥ್ವಿರಾಜ್?

ನಿರ್ಮಾಪಕರಾಗಿಯೂ ಪೃಥ್ವಿರಾಜ್ ಸಖತ್ ಬ್ಯುಸಿ

ಕೇವಲ ನಟನೆ ಅಷ್ಟೇ ಅಲ್ಲದೆ ಪೃಥ್ವಿರಾಜ್ ಚಿತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಕ್ರಿಶಾಂತ್ ಅವರ ಮುಂದಿನ ಸಿನಿಮಾವನ್ನು ಪೃಥ್ವಿರಾಜ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜು ಶಿವ್ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಸಂಜು ಅವರು ಪೃಥ್ವಿರಾಜ್ ಅವರ ‘ಐ, ನೋಬಡಿ’ ಮತ್ತು ‘ಖಲೀಫಾ’ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಜಮೌಳಿ ಅವರ ‘ವಾರಣಾಸಿ’ ಸಿನಿಮಾದ ಶೂಟಿಂಗ್ ಮಧ್ಯೆಯೂ ಪೃಥ್ವಿರಾಜ್ ಅವರ ಈ ವೇಗ ನೋಡಿ ಚಿತ್ರರಂಗವೇ ಆಶ್ಚರ್ಯಪಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:03 am, Wed, 29 July 26

Source link

ಗೌತಮ್ ಗಂಭೀರ್ ‘ಬಲಗೈ ಬಂಟ’ ರಾಜೀನಾಮೆ! – Kannada News | Ryan Ten Doechate steps down as India’s assistant coach

ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆಗಿನ ತಮ್ಮ ಎರಡು ವರ್ಷಗಳ ಒಪ್ಪಂದವನ್ನು ನವೀಕರಿಸದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕಡೆಯಿಂದ ಸಿಕ್ಕ ಭರ್ಜರಿ ಆಫರ್ ಎನ್ನಲಾಗಿದೆ.

ಟೀಮ್ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿರುವ ರಯಾನ್ ಟೆನ್ ಡೊಶ್ಚೆಟ್ ಮುಂಬರುವ IPL 2027 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಪ್ರಮುಖ ಕೋಚಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಗಂಭೀರ್ ಬಲಗೈ ಬಂಟ:

ರಯಾನ್ ಟೆನ್ ಡೊಶ್ಚೆಟ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ‘ಬಲಗೈ ಬಂಟ’ (Right-ಆಗಿದ್ದರು.

2011–2017ರ ನಡುವೆ ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದಾಗ, ರಯಾನ್ ಟೆನ್ ಡೊಶ್ಚೆಟ್ ಆ ತಂಡದ ಪ್ರಮುಖ ಆಟಗಾರರಾಗಿದ್ದರು. ಗಂಭೀರ್ ನಾಯಕತ್ವದಲ್ಲಿ ತಂಡ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಾಗ ಇಬ್ಬರ ನಡುವೆ ಬಲವಾದ ಸ್ನೇಹ ಬೆಳೆಯಿತು.

2024 ರಲ್ಲಿ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆಗಿ ಮರಳಿದಾಗ, ಟೆನ್ ಡೊಶ್ಚೆಟ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಿದ್ದರು. ಇದೇ ಅವಧಿಯಲ್ಲಿ ಕೆಕೆಆರ್ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಇನ್ನು ಗೌತಮ್ ಗಂಭೀರ್ ಅವರು ಭಾರತ ತಂಡದ ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡಾಗ, ಬಿಸಿಸಿಐ  ಮುಂದೆ ತಮಗೆ ಸಹಾಯಕ ತರಬೇತುದಾರರಾಗಿ ರಯಾನ್ ಟೆನ್ ಡೊಶ್ಚೆಟ್ ಮತ್ತು ಅಭಿಷೇಕ್ ನಾಯರ್ ಅವರೇ ಬೇಕು ಎಂದು ಪಟ್ಟುಹಿಡಿದು ಕರೆತಂದಿದ್ದರು.

ಗಂಭೀರ್ ಅವರ ಯೋಜನೆಗಳನ್ನು ಮೈದಾನದಲ್ಲಿ ಜಾರಿಗೆ ತರುತ್ತಿದ್ದ ಅತ್ಯಂತ ಆಪ್ತರು ಇವರೇ ಆಗಿದ್ದರು. ಇದೀಗ ರಯಾನ್ ಟೆನ್ ಡೊಶ್ಚೆಟ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿ ಐಪಿಎಲ್​ನತ್ತ ಮುಖ ಮಾಡಿದ್ದಾರೆ.

ರಾಜೀನಾಮೆಗೆ ಪ್ರಮುಖ ಕಾರಣಗಳೇನು?

ಸ್ಥಾನದ ಗೊಂದಲ: ಜುಲೈ 2024 ರಲ್ಲಿ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದ ಜವಾಬ್ದಾರಿ ವಹಿಸಿಕೊಂಡಾಗ ರಯಾನ್ ಅವರನ್ನು ಪ್ರಮುಖವಾಗಿ ‘ಫೀಲ್ಡಿಂಗ್ ಕೋಚ್’ ಹುದ್ದೆಗಾಗಿ ಆಯ್ಕೆ ಮಾಡಿದ್ದರು. ಆದರೆ, ಹಿರಿಯ ಆಟಗಾರರ ಶಿಫಾರಸಿನ ಮೇರೆಗೆ ಟಿ. ದಿಲೀಪ್ ಅವರನ್ನೇ ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಸಲಾಯಿತು.

ಇದರಿಂದಾಗಿ ರಯಾನ್ ಟೆನ್ ಡೊಶ್ಚೆಟ್ ಅವರು ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎರಡೂ ವಿಭಾಗಗಳನ್ನು ನಿಭಾಯಿಸುವ ಸಾಮಾನ್ಯ ಸಹಾಯಕ ಕೋಚ್ ಪಾತ್ರಕ್ಕೆ ಸೀಮಿತವಾಗಬೇಕಾಯಿತು. ಹೀಗಾಗಿ ಅವರು ಈ ಹಿಂದೆಯೇ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ನಿರಂತರ ಪ್ರಯಾಣದ ಒತ್ತಡ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವರ್ಷಪೂರ್ತಿ ಇರುವ ನಿರಂತರ ಪ್ರಯಾಣದ ವೇಳಾಪಟ್ಟಿಯಿಂದ ಬಿಡುಗಡೆ ಪಡೆದು, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ರಯಾನ್ ಬಯಸಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ (IPL) ಕೇವಲ ಎರಡು ತಿಂಗಳ ಅವಧಿಯದ್ದಾಗಿರುವುದರಿಂದ ಇದು ಅವರಿಗೆ ಹೆಚ್ಚು ಅನುಕೂಲಕರವಾಗಿದೆ.

ರಯಾನ್ ಅವಧಿಯಲ್ಲಿ ಭಾರತದ ಪ್ರದರ್ಶನ:

2024 ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಸಪೋರ್ಟ್ ಸ್ಟಾಫ್ ಆಗಿ ಸೇರಿದ್ದ ರಯಾನ್ ಟೆನ್ ಡೊಶ್ಚೆಟ್ ಅವರ ಅವಧಿಯಲ್ಲಿ ಭಾರತ ಮಿಶ್ರ ಫಲಿತಾಂಶಗಳನ್ನು ಕಂಡಿದೆ.

ಇವರ ಮಾರ್ಗದರ್ಶನದಲ್ಲಿ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿ, 2025ರ ಏಷ್ಯಾ ಕಪ್ ಗೆದ್ದುಕೊಂಡಿದ್ದಲ್ಲದೆ, 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಮತ್ತೊಂದೆಡೆ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೈಟ್-ಬಾಲ್ ಸರಣಿಯಲ್ಲಿ ಭಾರತ ಸೋಲನುಭವಿಸಿತು. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತಿದ್ದು ಮತ್ತು ತಾಯ್ನಾಡಿನಲ್ಲಿ ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧ ವೈಟ್‌ವಾಶ್ ಮುಖಭಂಗ ಅನುಭವಿಸಿದ್ದು ಕೋಚಿಂಗ್ ಬಳಗದ ಮೇಲೆ ಒತ್ತಡ ತಂದಿತ್ತು.

ಮರಳಿ ಗೂಡಿಗೆ ರಯಾನ್:

ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ರಯಾನ್ ಟೆನ್ ಡೊಶ್ಚೆಟ್ ಅವರಿಗೆ ದಶಕಕ್ಕೂ ಮೀರಿದ ಸುದೀರ್ಘ ಸಂಬಂಧವಿದೆ. ಅದು ಆಟಗಾರನಾಗಿ ಹಾಗೂ ಕೋಚ್ ಆಗಿ ಎಂಬುದು ವಿಶೇಷ.

  • ಆಟಗಾರನಾಗಿ ಕೆಕೆಆರ್ ಪರ ಅವರು 2012 ಮತ್ತು 2014 ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದರು.
  • 2022 ರಿಂದ 2024 ರವರೆಗೆ ಅವರು ಅದೇ ತಂಡದ ಫೀಲ್ಡಿಂಗ್ ಕೋಚ್ ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: CWG 2026: ಐದನೇ ದಿನ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕ!

ಇದೀಗ ಐಪಿಎಲ್ 2027 ಕ್ಕೂ ಮುನ್ನ ರಯಾನ್ ಟೆನ್ ಡೊಶ್ಚೆಟ್ ಕೆಕೆಆರ್ ತಂಡದಲ್ಲಿ ತಮ್ಮ ಹಳೆಯ ಕೋಚಿಂಗ್ ಜೊತೆಗಾರರಾದ ಅಭಿಷೇಕ್ ನಾಯರ್ ಅವರೊಂದಿಗೆ ಮತ್ತೆ ಕೈಜೋಡಿಸಲಿರುವುದು ವಿಶೇಷ.

Source link

Karnataka Weather Forecast: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಶಿವಮೊಗ್ಗ-ಚಿಕ್ಕಮಗಳೂರಲ್ಲೂ ಭಾರೀ ಮಳೆ ಮುನ್ಸೂಚನೆ – Kannada News | Karnataka Weather Forecast July 29: Orange Alert for Coastal Districts, Heavy Rain Forecast for Shivamogga and Chikkamagaluru

ಮಂಗಳೂರಿನಲ್ಲಿ ಬುಧವಾರ ಮುಂಜಾನೆಯೇ ಭಾರಿ ಮಳೆಯಾಗಿದ್ದು, ಯೆಯ್ಯಾಡಿ ಬಳಿ ದಟ್ಟ ಮೋಡ ಕವಿದ ವಾತಾವರಣImage Credit source: tv9

ಬೆಂಗಳೂರು, ಜುಲೈ 29: ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಕರಾವಳಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ (Weather Forecast) ಪ್ರಕಾರ, ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದೇ ವೇಳೆ, ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರಾವಳಿ ಕರ್ನಾಟಕದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 29 ಮತ್ತು 30ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯೂ ಇದೆ.

ಉತ್ತರ ಒಳನಾಡಿನಲ್ಲೂ ಭಾರಿ ಮಳೆ ಸಾಧ್ಯತೆ

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯೊಂದಿಗೆ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ

ದಕ್ಷಿಣ ಒಳನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ 30ರಂದು ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜುಲೈ 29 ಮತ್ತು 30ರಂದು ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಕೊಡಗು, ರಾಮನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ವಿಜಯನಗರ, ಬಳ್ಳಾರಿ ಹಾಗೂ ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ?

ಮಂಗಳವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿನಲ್ಲಿ ಮುಂಗಾರು ಸಾಮಾನ್ಯವಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಭಾಗದ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ.

  • ಗೇರುಸೊಪ್ಪ (ಉತ್ತರ ಕನ್ನಡ) – 10 ಸೆಂ.ಮೀ.
  • ಕುಮಟಾ (ಉತ್ತರ ಕನ್ನಡ) – 7 ಸೆಂ.ಮೀ.
  • ಮಂಕಿ (ಉತ್ತರ ಕನ್ನಡ) – 7 ಸೆಂ.ಮೀ.
  • ಹೊನ್ನಾವರ ವೀಕ್ಷಣಾಲಯ (ಉತ್ತರ ಕನ್ನಡ) – 7 ಸೆಂ.ಮೀ.
  • ಅಗುಂಬೆ (ಶಿವಮೊಗ್ಗ) – 7 ಸೆಂ.ಮೀ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಕರಾವಳಿ ಹಾಗೂ ಮಲೆನಾಡು ಭಾಗದ ಜನರು ಭಾರೀ ಮಳೆ, ಬಲವಾದ ಗಾಳಿ ಹಾಗೂ ಮಳೆ ಸಂಬಂಧಿತ ಅವಘಡಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುರು ಪೂರ್ಣಿಮಾ ವಿಶೇಷ: ಅಜ್ಞಾನದಿಂದ ಜ್ಞಾನದತ್ತ, ಪ್ರತಿಯೊಬ್ಬರ ಜೀವನದಲ್ಲಿ ಗುರು ಏಕೆ ಮುಖ್ಯ? – Kannada News | Guru Purnima: From Ignorance to Knowledge Why a Guru is Essential for Life’s Journey

ಕತ್ತಲೆ ಎಂಬುದು ಕೇವಲ ಬೆಳಕಿನ ಗೈರುಹಾಜರಿಯಲ್ಲ, ಅದು ದಿಕ್ಕು ತೋಚದ ಸ್ಥಿತಿ. ಆದರೆ ಒಂದು ಸಣ್ಣ ಹಣತೆಯು ಎಂಥಾ ಭೀಕರ ಕತ್ತಲೆಯನ್ನು ಓಡಿಸುವಂತೆ ಗುರುವಿನ ಕೃಪೆಯು ಮಾನವನ ಜೀವನದಲ್ಲಿದ್ದ ಅಜ್ಞಾನವೆಂಬ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡುತ್ತದೆ. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವವನು ಎಂದರ್ಥ.
ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನಲ್ಲಿ ಕೇಳಿದನಂತೆ ‘ಗುರುದೇವ, ಈ ಸಂಸಾರ ಸಾಗರದಲ್ಲಿ ನಾನು ಮುಕ್ತಿ, ಶಾಂತಿಯನ್ನು ಪಡೆಯುವುದು ಹೇಗೆ ಎಂದು’ ಅದನ್ನು ಕೇಳಿದ ಗುರುಗಳು ಮುಗುಳ್ನಕ್ಕು, ಆತನ ಕೈಗೆ ಒಂದು ಸಣ್ಣ ದೀಪ ನೀಡಿ, ಈ ದೀಪದ ಬೆಳಕಿನಲ್ಲಿ ಹೆಜ್ಜೆ ಇಡುತ್ತಾ ಸಾಗು ಎಂದು ಹೇಳಿದ್ದರಂತೆ. ಶಿಷ್ಟಯ ಕತ್ತಲೆಯಲ್ಲಿ ನಡೆಯ ತೊಡಗಿದ.

ದೀಪವು ಕೈಗೆ ಕೇವಲ ಕಾಲ ಬುಡದಲ್ಲಿನ ಜಾಗವನ್ನು ಮಾತ್ರ ಬೆಳಗುತ್ತಿತ್ತು. ಆತ ಭಯದಿಂದ ಗುರುಗಳೇ ಈ ಸಣ್ಣ ದೀಪ ಇಡೀ ಹಾದಿಯನ್ನು ಬೆಳಗುತ್ತಿಲ್ಲವಲ್ಲ ಎಂದು ಕೂಗಿದ. ಆಗ ಗುರುಗಳು ಮಗನೇ ನೀನು ಇಡುವ ಪ್ರತಿಯೊಂದು ಹೆಜ್ಜೆಗೂ ಈ ದೀಪ ಬೆಳಕು ನೀಡುತ್ತದೆ,ಮುನ್ನಡೆಯುತ್ತಾ ಹೋಗು, ಪೂರ್ತಿ ಹಾದಿ ತಾನಾಗಿಯೇ ಕಾಣಿಸುತ್ತದೆ ಎಂದು ಹೇಳಿದ್ದರಂತೆ.

ಈ ಕಥೆಯ ಸಾರಾಂಶವೇನೆಂದರೆ, ಜೀವನವೆಂಬ ಪಯಣದಲ್ಲಿ ನಮಗೆ ಇಡೀ ಭವಿಷ್ಯ ಒಮ್ಮೆಲೇ ತಿಳಿಯುವುದಿಲ್ಲ, ಆದರೆ ಧರ್ಮ ಮತ್ತು ಸತ್ಯದ ಹಾದಿಯಲ್ಲಿ ನಡೆಯಲು ಗುರು ನೀಡುವ ಮಾರ್ಗದರ್ಶನ ಹಾಗೂ ಆಶೀರ್ವಾದವೇ ಆ ದಿವ್ಯ ದೀಪ. ಗುರು ಎಂದರೆ ಕೇವಲ ಅಕ್ಷರ ಕಲಿಸುವ ಶಿಕ್ಷಕನಷ್ಟೇ ಅಲ್ಲ; ಮನಸ್ಸಿನ ಅಹಂಕಾರವನ್ನು ಅಳಿಸಿ, ಜೀವನದ ನಿಜವಾದ ಅರ್ಥವನ್ನು ಸಾಕ್ಷಾತ್ಕರಿಸುವ ದಿವ್ಯ ಚೇತನ. ಅಜ್ಞಾನ, ಕಾಮ, ಕ್ರೋಧ, ಮೋಹಗಳೆಂಬ ಸುಂಟರಗಾಳಿಯಲ್ಲಿ ಸಿಲುಕಿದ ಜೀವಕ್ಕೆ ಗುರುವಿನ ಬೋಧನೆಗಳೇ ದಿಕ್ಸೂಚಿ. ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಉಪಸ್ಥಿತಿ ಅತ್ಯಗತ್ಯ. ಏಕೆಂದರೆ ಗುರುವಿಲ್ಲದ ಜೀವನವು ನಾವಿಕನಿಲ್ಲದ ದೋಣಿಯಂತೆ.

ಮತ್ತಷ್ಟು ಓದಿ: Guru Purnima 2026: ಇಂದು ಗುರು ಪೂರ್ಣಿಮೆಯ ವಿಶೇಷ ದಿನ, ಏನಿದರ ವಿಶೇಷತೆ?

ಗುರು ಎಂಬುದು ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಜಾಗೃತ ಶಕ್ತಿ. ಸೂರ್ಯನು ಕಮಲವನ್ನು ಅರಳಿಸುವಂತೆ, ಗುರುವಿನ ದಿವ್ಯ ಸಾನ್ನಿಧ್ಯವು ಮನುಷ್ಯನಲ್ಲಿ ಅಡಗಿರುವ ಸುಪ್ತ ಚೇತನ ಮತ್ತು ಸತ್ಗುಣಗಳನ್ನು ಹೊರತರುತ್ತದೆ. ನಾವು ಪ್ರಪಂಚದ ಎಲ್ಲಾ ವಿದ್ಯೆಗಳನ್ನು ಕಲಿತರೂ, ನಮ್ಮೊಳಗಿನ ಅಹಂಕಾರ ಮತ್ತು ಮಮಕಾರಗಳನ್ನು ಕಳೆದುಕೊಳ್ಳದಿದ್ದರೆ ಆ ವಿದ್ಯೆಗೆ ಬೆಲೆಯಿರುವುದಿಲ್ಲ. ಸದ್ಗುರುವು ನಮ್ಮ ಅಹಂ ಅನ್ನು ಕಳೆದು, ತಾಳ್ಮೆ, ಕರುಣೆ ಹಾಗೂ ಪ್ರೀತಿಯನ್ನು ಬಿತ್ತುತ್ತಾರೆ. ಬದುಕಿನ ಕಷ್ಟ-ಸುಖಗಳೆಂಬ ಬಿರುಗಾಳಿಯಲ್ಲಿ ಮನಸ್ಸು ತೂಗಾಡಿದಾಗ, ಅಚಲವಾದ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕರುಣಿಸುವುದೇ ಗುರುವಿನ ನುಡಿಮುತ್ತುಗಳು.

ಅಜ್ಞಾನದ ಬಂಧನದಿಂದ ಬಿಡುಗಡೆಗೊಳಿಸಿ, ನಮ್ಮ ನಿಜವಾದ ‘ಆತ್ಮ ಸ್ವರೂಪ’ವನ್ನು ದರ್ಶನ ಮಾಡಿಸುವುದೇ ಗುರುವಿನ ಪರಮೋಚ್ಛ ಗುರಿ. ಆದ್ದರಿಂದಲೇ, ಭಗವಂತನಿಗಿಂತಲೂ ಮುಂಚಿತವಾಗಿ ಗುರುವಿಗೆ ಮೊದಲ ನಮನ ಸಲ್ಲಿಸಬೇಕೆಂದು ನಮ್ಮ ಸಂಸ್ಕೃತಿ ಬೋಧಿಸುತ್ತದೆ. ಈ ಶುಭ ಗುರು ಪೂರ್ಣಿಮೆಯಂದು ನಮ್ಮ ಜೀವನಕ್ಕೆ ಜ್ಞಾನದ ಬೆಳಕು ನೀಡಿ, ಸರಿ-ತಪ್ಪುಗಳ ದಾರಿ ತೋರಿದ ಸಕಲ ಗುರುಪರಂಪರೆಗೆ ಕೋಟಿ ಕೋಟಿ ಪ್ರಣಾಮಗಳು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಟಿ ಶಿಲ್ಪಾ ಶೆಟ್ಟಿ ಏಕಾಏಕಿ ಸಿಟ್ಟಾಗಿದ್ದೇಕೆ? ಇಲ್ಲಿದೆ ವಿವರ – Kannada News | Fake Statement on Reservation Goes Viral: Actress Shilpa Shetty Furious Over Fake Posts

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನಲ್ಲಿ ಹರಡಲಾಗುತ್ತಿರುವ ಜಾತಿ ಮೀಸಲಾತಿ ಕುರಿತಾದ ವಿವಾದಾತ್ಮಕ ಪೋಸ್ಟ್‌ಗಳ ವಿರುದ್ಧ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿರುವ ಮಾತುಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಕಟ್ಟುಕಥೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಾರಿತಪ್ಪಿಸುವ ಇಂತಹ ವದಂತಿಗಳನ್ನು ಯಾರೂ ನಂಬಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವೈದ್ಯರ ಚಿಕಿತ್ಸೆ ಹೆಸರಲ್ಲಿ ಹರಡಲಾಗಿತ್ತು ಸುಳ್ಳು ಸುದ್ದಿ

ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ಪೋಸ್ಟ್ ಒಂದರಲ್ಲಿ ಶಿಲ್ಪಾ ಶೆಟ್ಟಿ ಅವರ ಫೋಟೋ ಬಳಸಿ ವಿವಾದಾತ್ಮಕ ಬರಹವೊಂದನ್ನು ಹಂಚಿಕೊಳ್ಳಲಾಗಿತ್ತು. ‘ಸಾಮಾನ್ಯ ವರ್ಗದ ವೈದ್ಯರು ಸಾಮಾನ್ಯ ವರ್ಗದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಮೀಸಲಾತಿ ವರ್ಗದ ವೈದ್ಯರು ತಮ್ಮದೇ ಸಮುದಾಯದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಆಗ ಜನರೇ ಮೀಸಲಾತಿ ರದ್ದು ಮಾಡಲು ಒತ್ತಾಯಿಸುತ್ತಾರೆ’ ಎಂಬ ಆಘಾತಕಾರಿ ಹೇಳಿಕೆಯನ್ನು ಶಿಲ್ಪಾ ಶೆಟ್ಟಿ ಹೇಳಿದ್ದಾರೆ ಎಂದು ಬಿಂಬಿಸಲು ಕಿಡಿಗೇಡಿಗಳು ಯತ್ನಿಸಿದ್ದರು. ಸೂಕ್ಷ್ಮ ವಿಷಯವಾಗಿದ್ದರಿಂದ ಈ ಪೋಸ್ಟ್ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಶಿಲ್ಪಾ ಶೆಟ್ಟಿ ಸ್ಪಷ್ಟನೆ

ಈ ಸುಳ್ಳು ಸುದ್ದಿ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ನಟಿ ಶಿಲ್ಪಾ ಶೆಟ್ಟಿ, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಸುಳ್ಳು ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ. ‘ನನ್ನ ಹೆಸರನ್ನು ಬಳಸಿ ಮೀಸಲಾತಿ ವ್ಯವಸ್ಥೆಯ ಬಗ್ಗೆ ತಪ್ಪು ಹೇಳಿಕೆಗಳನ್ನು ಹರಡಲಾಗುತ್ತಿದೆ. ಇದನ್ನು ನೋಡಿ ನನಗೆ ಆಘಾತವಾಗಿದೆ. ಇದು ಸಂಪೂರ್ಣವಾಗಿ ನಕಲಿ ಮತ್ತು ದ್ವೇಷಪೂರಿತ ಸುಳ್ಳು ಪ್ರಚಾರವಾಗಿದೆ. ದಯವಿಟ್ಟು ಇಂತಹ ವದಂತಿಗಳಿಗೆ ಕಿವಿಗೊಡಬೇಡಿ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮೀಸಲಾತಿ ಕುರಿತು ಶಿಲ್ಪಾ ಶೆಟ್ಟಿ ನಕಲಿ ಹೇಳಿಕೆ ವೈರಲ್: ‘ಸಂಪೂರ್ಣ ಸುಳ್ಳು’ ಎಂದು ಖಂಡಿಸಿದ ನಟಿ

ಸೆಲೆಬ್ರಿಟಿಗಳ ಹೆಸರ ದುರ್ಬಳಕೆ ಬಗ್ಗೆ ಆತಂಕ

ಶಿಲ್ಪಾ ಶೆಟ್ಟಿ ಅವರ ಈ ತಕ್ಷಣದ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸಿದೆ. ಯಾವುದೇ ಒಂದು ಸೂಕ್ಷ್ಮ ವಿಷಯದ ಪೋಸ್ಟ್ ಅನ್ನು ಲೈಕ್ ಮಾಡುವ ಮುನ್ನ ಅಥವಾ ಶೇರ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಣಂತಿಯರ ಸರಣಿ ಸಾವಿನ ಘಟನೆಯಿಂದಲೂ ಕಲಿಯದ ಪಾಠ: ಆರೋಗ್ಯ ಇಲಾಖೆ ಮತ್ತೆ ಎಡವಟ್ಟು! – Kannada News | KSMSCL MD Appointment Sparks Row as Government Appoints Non IAS Officer

ಸಾಂದರ್ಭಿಕ ಚಿತ್ರImage Credit source: Karnataka Health Department

ಬೆಂಗಳೂರು, ಜುಲೈ 29: ಬಳ್ಳಾರಿಯಲ್ಲಿ (Ballari) ಬಾಣಂತಿಯರ ಸರಣಿ ಸಾವಿನ ಘಟನೆ ಬಳಿಕ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಕಾರ್ಯವೈಖರಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದ ಸರ್ಕಾರ, ಇದೀಗ ಅದೇ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಐಎಎಸ್ (IAS) ಅಥವಾ ಕೆಎಎಸ್ ತತ್ಸಮಾನವಲ್ಲದ ಅಧಿಕಾರಿಯನ್ನು ನೇಮಕ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ವಿವಿಧ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ನೇಮಕಾತಿಯ ಸೂಕ್ತತೆ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಎಂದರೇನು?

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಆರೋಗ್ಯ ಸಾಮಗ್ರಿಗಳ ಖರೀದಿ ಮತ್ತು ವಿತರಣೆಯ ಹೊಣೆ ಹೊತ್ತಿರುವ ಪ್ರಮುಖ ಸಂಸ್ಥೆಯಾಗಿದೆ. ಇಂತಹ ನಿಗಮದ ಮುಖ್ಯಸ್ಥರ ಹುದ್ದೆಗೆ ಐಎಎಸ್ ಅಥವಾ ಕೆಎಎಸ್ ತತ್ಸಮಾನವಲ್ಲದ ಅಧಿಕಾರಿಯನ್ನು ನೇಮಕ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪ್ರಮುಖ ಹುದ್ದೆಗೆ ಕೆಳ ಹಂತದ ಅಧಿಕಾರಿ!

ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರ ಸ್ಥಾನಕ್ಕೆ ಜಂಟಿ ನಿರ್ದೇಶಕರ ಹುದ್ದೆಯ ಎ.ಆರ್. ರವಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ನೇಮಕಾತಿ ಕುರಿತು ಹಲವು ವಲಯಗಳಲ್ಲಿ ಚರ್ಚೆ ಆರಂಭವಾಗಿದ್ದು, ಇಂತಹ ಪ್ರಮುಖ ಹುದ್ದೆಗೆ ಕೆಳ ಹಂತದ ಅಧಿಕಾರಿಯನ್ನು ನೇಮಕ ಮಾಡಿರುವುದು ಸೂಕ್ತವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಬೇರೆ ರಾಜ್ಯಗಳಲ್ಲಿ ವೈದ್ಯಕೀಯ ಸರಬರಾಜು ನಿಗಮ ಮುಖ್ಯಸ್ಥರು ಯಾರು?

ದೇಶದ ಸುಮಾರು 20 ರಾಜ್ಯಗಳಲ್ಲಿ ವೈದ್ಯಕೀಯ ಸರಬರಾಜು ನಿಗಮಗಳ ಮುಖ್ಯಸ್ಥರಾಗಿ ಐಎಎಸ್ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ವಿಭಿನ್ನ ರೀತಿಯ ನೇಮಕಾತಿ ಮಾಡಿರುವುದು ಟೀಕೆಗೆ ಕಾರಣವಾಗಿದೆ. ಔಷಧ, ವೈದ್ಯಕೀಯ ಉಪಕರಣಗಳು ಹಾಗೂ ಆರೋಗ್ಯ ಸಾಮಗ್ರಿಗಳ ಖರೀದಿ ಮತ್ತು ವಿತರಣೆಯ ಜವಾಬ್ದಾರಿ ಹೊಂದಿರುವ ಸಂಸ್ಥೆಯ ಆಡಳಿತದಲ್ಲಿ ಅನುಭವ ಹಾಗೂ ಆಡಳಿತಾತ್ಮಕ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ಇರಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಲೂಟಿ ಮಾಡಲು ಈ ನೇಮಕಾತಿ: ಪ್ರತಿಪಕ್ಷ ಬಿಜೆಪಿ ಆಕ್ರೋಶ

ಈ ಬೆಳವಣಿಗೆ ಕುರಿತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಲೂಟಿ ಮಾಡಲು ಹಾಗೂ ಬೊಕ್ಕಸ ತುಂಬಿಸಿಕೊಳ್ಳಲು ಇಂತಹ ನೇಮಕಾತಿ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಬಳ್ಳಾರಿ ಬಾಣಂತಿಯರ ಸರಣಿ ಸಾವಿನ ಘಟನೆ ಬಳಿಕ 2025ರಲ್ಲಿ ರಚನೆಯಾಗಿದ್ದ ತಜ್ಞರ ಸಮಿತಿಯು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮುಖ್ಯಸ್ಥರಾಗಿ ಐಎಎಸ್ ಶ್ರೇಣಿಯ ಅಧಿಕಾರಿಯೇ ಇರಬೇಕು ಎಂದು ಶಿಫಾರಸು ಮಾಡಿತ್ತು. ಆದರೆ ಇದೀಗ ಆ ಶಿಫಾರಸಿಗೆ ವಿರುದ್ಧವಾಗಿ ಐಎಎಸ್ ಅಥವಾ ಕೆಎಎಸ್ ಶ್ರೇಣಿಗಿಂತ ಕೆಳ ಹಂತದ ಅಧಿಕಾರಿಯನ್ನು ನೇಮಕ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಳ್ಳಾರಿ ಪ್ರಕರಣ ಮಾಸುವ ಮುನ್ನವೇ ಪಕ್ಕದ ವಿಜಯನಗರದಲ್ಲೂ ಬಾಣಂತಿ ಸಾವು

ಒಟ್ಟಿನಲ್ಲಿ, ಬಳ್ಳಾರಿ ದುರಂತದ ನಂತರ ಸುಧಾರಣೆಯ ಭರವಸೆ ನೀಡಿದ್ದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಆಡಳಿತದಲ್ಲಿ ನಡೆದಿರುವ ಈ ಹೊಸ ನೇಮಕಾತಿ ಮತ್ತೆ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದ್ದು, ಸರ್ಕಾರದ ನಿರ್ಧಾರದ ಬಗ್ಗೆ ವಿವಿಧ ವಲಯಗಳ ಗಮನ ಸೆಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಐದನೇ ದಿನ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕ! – Kannada News | CWG 2026: India Bags Two More Silver Medals on Day 5

ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರೆದಿದೆ. ಟ್ರ್ಯಾಕ್ ಅ್ಯಂಡ್ ಫೀಲ್ಡ್ ಹಾಗೂ ವೇಟ್‌ಲಿಫ್ಟಿಂಗ್ ಅಖಾಡದಲ್ಲಿ ಭಾರತಕ್ಕೆ ನಿನ್ನೆ ಎರಡು ಐತಿಹಾಸಿಕ ಬೆಳ್ಳಿ ಪದಕಗಳು ಲಭಿಸಿವೆ. ತಡರಾತ್ರಿ ನಡೆದ ರೋಚಕ ಸ್ಪರ್ಧೆಗಳಲ್ಲಿ ಭಾರತದ ಗುಲ್ವೀರ್ ಸಿಂಗ್ ಮತ್ತು ಹರ್ಜಿಂದರ್ ಕೌರ್ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಈ ಇಬ್ಬರ ಅಮೋಘ ಸಾಧನೆಯಿಂದಾಗಿ ಭಾರತದ ಒಟ್ಟು ಪದಕಗಳ ಸಂಖ್ಯೆ ಇದೀಗ 12ಕ್ಕೆ ತಲುಪಿದೆ.

ಟ್ರ್ಯಾಕ್‌ನಲ್ಲಿ ಇತಿಹಾಸ ಬರೆದ ಗುಲ್ವೀರ್ ಸಿಂಗ್

ಮಂಗಳವಾರ ನಡೆದ ಕ್ರೀಡಾಕೂಟದ ಅತ್ಯಂತ ರೋಚಕ ಮತ್ತು ಪ್ರಮುಖ ಆಕರ್ಷಣೆಯೆಂದರೆ ಪುರುಷರ 10,000 ಮೀಟರ್ ಓಟದ ಸ್ಪರ್ಧೆ. ಭಾರತದ ಪ್ರಮುಖ ದೀರ್ಘಾವಧಿ ಓಟಗಾರ ಹಾಗೂ ರಾಷ್ಟ್ರೀಯ ದಾಖಲೆ ಸರದಾರ ಗುಲ್ವೀರ್ ಸಿಂಗ್, ಈ ಕಠಿಣ ಸ್ಪರ್ಧೆಯನ್ನು ಕೇವಲ 27 ನಿಮಿಷ 49.78 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡರು. ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಚಿನ್ನ ಗೆದ್ದರೆ, ಗುಲ್ವೀರ್ ಕೇವಲ ಸೆಕೆಂಡ್‌ಗಳ ಅಂತರದಲ್ಲಿ ಚಿನ್ನದ ಅವಕಾಶ ಮಿಸ್ ಮಾಡಿಕೊಂಡರು.

ವೇಟ್‌ಲಿಫ್ಟಿಂಗ್‌ನಲ್ಲಿ ಹರ್ಜಿಂದರ್ ಕೌರ್ ಸಾಹಸ

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಭರ್ಜರಿ ಪದಕದ ಬೇಟೆ ನಿನ್ನೆಯೂ ಮುಂದುವರಿಯಿತು. ಮಹಿಳೆಯರ 69 ಕೆಜಿ ವಿಭಾಗದ ಫೈನಲ್‌ನಲ್ಲಿ ಕಣಕ್ಕಿಳಿದಿದ್ದ ಬರ್ಮಿಂಗ್‌ಹ್ಯಾಮ್ 2022ರ ಕಂಚಿನ ಪದಕ ವಿಜೇತೆ ಹರ್ಜಿಂದರ್ ಕೌರ್, ಈ ಬಾರಿ ತಮ್ಮ ಪದಕದ ಬಣ್ಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾದರು. ಮಹಿಳೆಯರ 69 ಕೆಜಿ ವಿಭಾಗದಲ್ಲಿ ಅದ್ಭುತ ಕೌಶಲ್ಯ ಪ್ರದರ್ಶಿಸಿದ ಹರ್ಜಿಂದರ್ ಒಟ್ಟು  227 ಕೆಜಿ. ತೂಕವನ್ನು ಎತ್ತುವ ಮೂಲಕ ಭಾರತದ ಖಾತೆಗೆ ಮತ್ತೊಂದು ಬೆಳ್ಳಿ ಪದಕವನ್ನು ತಂದು ಕೊಟ್ಟರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 12 ಕ್ಕೇರಿತು.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಕ್ಲೀನ್ ಸ್ವೀಪ್ ಗೆಲುವು ಅನಿವಾರ್ಯ!

ಜುಲೈ 28 ರವರೆಗಿನ ಪಂದ್ಯಗಳ ಮುಕ್ತಾಯಕ್ಕೆ ಭಾರತದ ಪರ ಯಾವ ಯಾವ ಕ್ರೀಡಾಪಟುಗಳು ಯಾವ ಪದಕ ಗೆದ್ದಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಕ್ರ.ಸಂ. ಕ್ರೀಡಾಪಟು  ಕ್ರೀಡಾ ವಿಭಾಗ ಮತ್ತು ಸ್ಪರ್ಧೆ ಗೆದ್ದ ಪದಕ
1 ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್ (ಮಹಿಳೆಯರ 48 ಕೆಜಿ) 🥇 ಚಿನ್ನ
2 ಶರ್ಮಿಳಾ ಧಂಕರ್ ಪ್ಯಾರಾ ಅಥ್ಲೆಟಿಕ್ಸ್ (ಮಹಿಳೆಯರ ಶಾಟ್‌ಪುಟ್ F57) 🥇 ಚಿನ್ನ
3 ರಿಷಿಕಾಂತ ಸಿಂಗ್ ವೇಟ್‌ಲಿಫ್ಟಿಂಗ್ (ಪುರುಷರ 60 ಕೆಜಿ) 🥈 ಬೆಳ್ಳಿ
4 ಮುತ್ತುಪಾಂಡಿ ರಾಜಾ ವೇಟ್‌ಲಿಫ್ಟಿಂಗ್ (ಪುರುಷರ 65 ಕೆಜಿ) 🥈 ಬೆಳ್ಳಿ
5 ಜ್ಞಾನೇಶ್ವರಿ ಯಾದವ್ ವೇಟ್‌ಲಿಫ್ಟಿಂಗ್ (ಮಹಿಳೆಯರ 53 ಕೆಜಿ) 🥈 ಬೆಳ್ಳಿ
6 ವಲ್ಲೂರಿ ಅಜಯ್ ಬಾಬು ವೇಟ್‌ಲಿಫ್ಟಿಂಗ್ (ಪುರುಷರ 79 ಕೆಜಿ) 🥈 ಬೆಳ್ಳಿ
7 ಸರ್ವೇಶ್ ಕುಶಾರೆ ಅಥ್ಲೆಟಿಕ್ಸ್ (ಪುರುಷರ ಹೈಜಂಪ್) 🥈 ಬೆಳ್ಳಿ
8 ಗುಲ್ವೀರ್ ಸಿಂಗ್  ಅಥ್ಲೆಟಿಕ್ಸ್ (ಪುರುಷರ 10,000 ಮೀಟರ್ ಓಟ) 🥈 ಬೆಳ್ಳಿ
9 ಹರ್ಜಿಂದರ್ ಕೌರ್ ವೇಟ್‌ಲಿಫ್ಟಿಂಗ್ (ಮಹಿಳೆಯರ 69 ಕೆಜಿ) 🥈 ಬೆಳ್ಳಿ
10 ಝಂಡು ಕುಮಾರ್ ಪ್ಯಾರಾ ಪವರ್‌ಲಿಫ್ಟಿಂಗ್ (ಪುರುಷರ ವಿಭಾಗ) 🥉 ಕಂಚು
11 ಬಿಂದ್ಯಾರಾಣಿ ದೇವಿ ವೇಟ್‌ಲಿಫ್ಟಿಂಗ್ (ಮಹಿಳೆಯರ 58 ಕೆಜಿ) 🥉 ಕಂಚು
12 ಶಿಲ್ಪಾ ಕೆ. ಶೈಲಾ ಪ್ಯಾರಾ ಅಥ್ಲೆಟಿಕ್ಸ್ (ಮಹಿಳೆಯರ ಶಾಟ್‌ಪುಟ್ F57) 🥉 ಕಂಚು

Published On – 7:29 am, Wed, 29 July 26

Source link

Vastu Remedies: ಮನೆಯಲ್ಲಿ ಪದೇ ಪದೇ ಜಗಳ, ಅಶಾಂತಿಯೇ? ಇಲ್ಲಿದೆ ಸರಳ ವಾಸ್ತು ಪರಿಹಾರಗಳು! – Kannada News | Simple Vastu Remedies to Attract Positive Energy and Love in Your Family

ಒತ್ತಡದ ಮತ್ತು ದಣಿದ ದಿನದ ನಂತರ ಪ್ರತಿಯೊಬ್ಬರೂ ಮನೆಗೆ ಮರಳಿ ಪ್ರಶಾಂತತೆಯನ್ನು ಅನುಭವಿಸಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲವೂ ಸರಿಯಾಗಿದ್ದರೂ ಸಹ, ಮನೆಯಲ್ಲಿ ಉದ್ವಿಗ್ನತೆ, ಅನಗತ್ಯ ಜಗಳಗಳು ಮತ್ತು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಮನೆಯಲ್ಲಿರುವ ವಾಸ್ತು ದೋಷಗಳೂ ಇದಕ್ಕೆ ಕಾರಣವಾಗಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಂತೋಷ ಮತ್ತು ಪ್ರೀತಿಯನ್ನು ಮರಳಿ ತರಲು ಸಹಾಯ ಮಾಡುವ ಕೆಲವು ಸರಳ ಮತ್ತು ಪರಿಣಾಮಕಾರಿ ವಾಸ್ತು ಪರಿಹಾರಗಳು ಇಲ್ಲಿವೆ.

ಮನೆಯ ಮುಖ್ಯ ದ್ವಾರದ ಸ್ವಚ್ಛತೆ:

ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ದ್ವಾರವನ್ನು ಅತ್ಯಂತ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದರ ಮೂಲಕವೇ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಆದ್ದರಿಂದ ಮುಖ್ಯ ದ್ವಾರದ ಸುತ್ತಲೂ ಕೊಳಕು, ಕಸ ಅಥವಾ ಬಳಸದ ಹಳೆಯ ವಸ್ತುಗಳನ್ನು ಸಂಗ್ರಹಿಸಲು ಎಂದಿಗೂ ಬಿಡಬಾರದು. ಪ್ರತಿದಿನ ಮುಖ್ಯ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಸುಲಭವಾಗಿ ಹರಿಯುತ್ತದೆ.

ಮುರಿದ ಮತ್ತು ಹಾಳಾದ ವಸ್ತುಗಳ ತೆರವು:

ವಾಸ್ತು ಪ್ರಕಾರ, ಮುರಿದ ಗಡಿಯಾರಗಳು, ಒಡೆದ ಕನ್ನಡಿಗಳು, ಹಾಳಾದ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಬಳಸಲಾಗದ ಪೀಠೋಪಕರಣಗಳನ್ನು ಮನೆಯಲ್ಲಿ ದೀರ್ಘಕಾಲ ಇಡುವುದು ಒಳಿತಲ್ಲ. ಇಂತಹ ವಸ್ತುಗಳು ಮನೆಯಲ್ಲಿ ಅಸ್ತವ್ಯಸ್ತತೆಯನ್ನು ಹೆಚ್ಚಿಸಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ವೇಳೆ ಯಾವುದೇ ವಸ್ತುವು ಬಳಕೆಗೆ ಯೋಗ್ಯವಾಗಿಲ್ಲದಿದ್ದರೆ, ಅದನ್ನು ತಕ್ಷಣ ದುರಸ್ತಿ ಮಾಡಿಸಬೇಕು ಅಥವಾ ಮನೆಯಿಂದ ಹೊರಗೆ ತೆಗೆದುಹಾಕಬೇಕು.

ಮಲಗುವ ಕೋಣೆಯ ಸರಿಯಾದ ವ್ಯವಸ್ಥೆ:

ಗಂಡ ಮತ್ತು ಹೆಂಡತಿಯ ನಡುವೆ ಆಗಾಗ್ಗೆ ಉದ್ವಿಗ್ನತೆ ಹಾಗೂ ಸಂಘರ್ಷಗಳು ಉಂಟಾಗುತ್ತಿದ್ದರೆ, ಮಲಗುವ ಕೋಣೆಯ ವ್ಯವಸ್ಥೆಗೆ ಹೆಚ್ಚಿನ ಗಮನ ನೀಡಬೇಕು. ಕೋಣೆಯಲ್ಲಿ ಅತಿಯಾದ ಅಸ್ತವ್ಯಸ್ತತೆಯನ್ನು ತಪ್ಪಿಸಿ ಹಾಸಿಗೆಯ ಸುತ್ತಲಿನ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಇದಲ್ಲದೆ, ಮಲಗುವಾಗ ಹಾಸಿಗೆಯ ಪ್ರತಿಬಿಂಬವು ಕನ್ನಡಿಯಲ್ಲಿ ಗೋಚರಿಸಬಾರದು; ಒಂದು ವೇಳೆ ಕನ್ನಡಿ ಹಾಸಿಗೆಯ ಎದುರಿಗಿದ್ದರೆ, ರಾತ್ರಿ ಮಲಗುವ ಮುನ್ನ ಅದನ್ನು ಬಟ್ಟೆಯಿಂದ ಮುಚ್ಚಿಡುವುದು ಸೂಕ್ತ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಪೂಜಾ ಸ್ಥಳದ ಶುಚಿತ್ವ ಮತ್ತು ಪವಿತ್ರತೆ:

ಮನೆಯಲ್ಲಿ ಪೂಜಾ ಸ್ಥಳವನ್ನು ಯಾವಾಗಲೂ ಅತ್ಯಂತ ಸ್ವಚ್ಛವಾಗಿ ಮತ್ತು ಸುವ್ಯವಸ್ಥಿತವಾಗಿಡಬೇಕು. ಪ್ರಾರ್ಥನಾ ಕೋಣೆಯಲ್ಲಿ ಅತಿಯಾದ ವಸ್ತುಗಳನ್ನು ಸಂಗ್ರಹಿಸುವುದು ಅಥವಾ ಚದುರಿದಂತೆ ಬಿಡುವುದರಿಂದ ಮನೆಯಲ್ಲಿರುವ ಸಕಾರಾತ್ಮಕ ವಾತಾವರಣ ಹಾಳಾಗಬಹುದು. ಹೀಗಾಗಿ ಪೂಜಾ ಸ್ಥಳವನ್ನು ಸದಾ ಸರಳವಾಗಿ ಮತ್ತು ಧನಾತ್ಮಕ ಶಕ್ತಿ ಸೂಸುವಂತೆ ಕಾಯ್ದುಕೊಳ್ಳುವುದು ಅಗತ್ಯ.

ನಕಾರಾತ್ಮಕ ಶಕ್ತಿ ನಿವಾರಣೆಗೆ ಕಲ್ಲು ಉಪ್ಪಿನ ಬಳಕೆ:

ವಾಸ್ತು ಶಾಸ್ತ್ರದಲ್ಲಿ ಉಪ್ಪನ್ನು ಅತ್ಯುತ್ತಮ ನಕಾರಾತ್ಮಕ ಶಕ್ತಿ ಶುದ್ಧೀಕರಣಕಾರಕವೆಂದು ಪರಿಗಣಿಸಲಾಗಿದೆ. ಮನೆಯ ಮೂಲೆಗಳಲ್ಲಿ ಸಣ್ಣ ಪಾತ್ರೆಯಲ್ಲಿ ಕಲ್ಲು ಉಪ್ಪನ್ನು ಇಡುವುದರಿಂದ ಅಥವಾ ಕಲ್ಲು ಉಪ್ಪು ಬೆರೆಸಿದ ನೀರಿನಿಂದ ನೆಲವನ್ನು ಒರೆಸುವುದರಿಂದ ಮನೆಯಲ್ಲೇ ಅಡಗಿರುವ ಕೆಟ್ಟ ಶಕ್ತಿಗಳು ದೂರವಾಗಿ, ಸಕಾರಾತ್ಮಕ ಹಾಗೂ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 am, Wed, 29 July 26

Source link

Bengaluru Air Quality: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಗಾಳಿಯ ವಾಯುಗುಣಮಟ್ಟದಲ್ಲಿ ಸುಧಾರಣೆ – Kannada News | Karnataka and Bengaluru AQI Today : Live Air Quality Index Report

ರಾಜ್ಯದ ವಾಯು ಮಾಲಿನ್ಯದಲ್ಲಿ ಭಾರಿ ಸುಧಾರಣೆ!

ಬೆಂಗಳೂರು, ಜುಲೈ 29: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಆಶಾದಾಯಕವಾಗಿದೆ. ಮಳೆಗಾಲದ ಪರಿಣಾಮವಾಗಿ ಗಾಳಿಯಲ್ಲಿನ ಧೂಳು ಮತ್ತು ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ಸಿಲಿಕಾನ್ ಸಿಟಿಯ ಜನತೆಗೆ ಸ್ವಚ್ಛ ಗಾಳಿ ಲಭ್ಯವಾಗಿದೆ. ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 40 ರಿಂದ 55ರ ಆಜುಪಾಜಿನಲ್ಲಿದ್ದು,‘ಸಾಧಾರಣ’ (Moderate)ಮಟ್ಟದಲ್ಲಿದೆ. ನಗರದ ಪ್ರಮುಖ ಭಾಗಗಳಾದ ಬನಶಂಕರಿ, ಬನಸವಾಡಿ, ಜಯನಗರ ಹಾಗೂ ಹೆಬ್ಬಾಳ ಪ್ರದೇಶಗಳಲ್ಲಿ ಎಕ್ಯೂಐ 50ಕ್ಕಿಂತ ಕಡಿಮೆಯಿದ್ದು, ಅತ್ಯುತ್ತಮ ವಾತಾವರಣ ದಾಖಲಾಗಿದೆ.

ಬೆಂಗಳೂರಿನ ಇಂದಿನ ಎಕ್ಯೂಐ

ಗಾಳಿಯಲ್ಲಿ ಸೂಕ್ಷ್ಮ ಕಣಗಳಾದ PM 2.5 (15 µg/m³) ಹಾಗೂ PM 10 (40 µg/m³) ಪ್ರಮಾಣ ನಿಗದಿತ ಮಿತಿಯೊಳಗಿದೆ. ಸದ್ಯದ ವಾಯು ಗುಣಮಟ್ಟದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯವಿಲ್ಲ. ಬೆಳಗಿನ ವಾಯುವಿಹಾರ ಹಾಗೂ ಹೊರಾಂಗಣ ಚಟುವಟಿಕೆಗಳಿಗೆ ಇದು ಅತ್ಯಂತ ಸೂಕ್ತವಾಗಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಕರಾವಳಿ ಮತ್ತು ಉತ್ತರ ಕರ್ನಾಟಕದ ವಿವಿಧ ನಗರಗಳಲ್ಲೂ ಇಂದಿನ ವಾಯು ಗುಣಮಟ್ಟ ಸ್ಥಿರವಾಗಿದೆ. ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ವಾಯು ಗುಣಮಟ್ಟ ಸೂಚ್ಯಂಕ 35 ರಿಂದ 50 ರಷ್ಟಿದ್ದು, ಸಂಪೂರ್ಣ ‘ಉತ್ತಮ’ ವಿಭಾಗದಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಕ್ಯೂಐ 45 ದಾಖಲಾಗಿದ್ದರೆ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 52 ರಷ್ಟು ಸರಾಸರಿ ಎಕ್ಯೂಐ ದಾಖಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಪರಿಸರ ಮಾಲಿನ್ಯ ಕನಿಷ್ಠ ಮಟ್ಟದಲ್ಲಿದ್ದು, ಗಾಳಿಯ ಶುದ್ಧತೆ ಕಾಯ್ದುಕೊಂಡಿದೆ. ರಾಜ್ಯಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ ಧೂಳಿನ ಪ್ರಮಾಣ ಕಡಿಮೆಯಾಗಿದ್ದು, ಇಂದಿನ ದಿನ ಪರಿಸರ ಸ್ನೇಹಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಲಾನಿಯಾರನ್ನು ಎಲ್ಲಿ ಕೊಲ್ಲಬೇಕು?: ಟ್ರಂಪ್ ಪತ್ನಿ, ಮಗನಿಗೆ ಕೊಲೆ ಬೆದರಿಕೆ ಹಾಕಿದ ಇರಾನ್, ಭದ್ರತೆ ತೀವ್ರ ಹೆಚ್ಚಳ – Kannada News | Iran Threatens Melania, Barron Trump with Death Video, Security Heightened

ವಾಷಿಂಗ್ಟನ್, ಜುಲೈ 29: ಅಮೆರಿಕ ಮತ್ತು ಇರಾನ್(Iran) ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಟೆಹ್ರಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಹಾಗೂ ಪುತ್ರ ಬ್ಯಾರನ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಆಘಾತಕಾರಿ ಬೆದರಿಕೆ ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ. “ವೇರ್ ಟು ಕಿಲ್ ಮೆಲಾನಿಯಾ” ಮತ್ತು “ಹೌ ಟು ಕಿಲ್ ಮೆಲಾನಿಯಾ ಟ್ರಂಪ್” ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಈ ವಿಡಿಯೋದಲ್ಲಿ, ಟ್ರಂಪ್ ಕುಟುಂಬದ ವಿರುದ್ಧ ಇರಾನ್ ನಡೆಸುತ್ತಿರುವ ಮಾನಸಿಕ ಹಾಗೂ ಡಿಜಿಟಲ್ ದಾಳಿಯ ತೀವ್ರತೆಯನ್ನು ಎತ್ತಿಹಿಡಿದಿದೆ.

ಬೆದರಿಕೆ ವೀಡಿಯೊದಲ್ಲಿ ಏನಿದೆ?

ವಿಡಿಯೋದಲ್ಲಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿರುವ ಹಾಗೂ ನ್ಯೂಯಾರ್ಕ್ ನಗರದ ವಿವಿಧ ಐಷಾರಾಮಿ ಅಂಗಡಿಗಳಿಗೆ ಭೇಟಿ ನೀಡುವ ದೃಶ್ಯಗಳನ್ನು ತೋರಿಸಲಾಗಿದೆ. ಅವರು ಶಾಪಿಂಗ್​ ತೆರಳಿರುವಾಗಲೇ ಅವರನ್ನು ಕೊಲ್ಲುವುದು ಸೂಕ್ತ ಎಂದು ಬರೆದಿದ್ದಾರೆ. ವಿಡಿಯೋದ ಕೊನೆಯಲ್ಲಿ ಟ್ರಂಪ್ ಅವರ ಕಿರಿಯ ಮಗ ಬ್ಯಾರನ್‌ಗೆ, ಇದು ಕೇವಲ ಆರಂಭ. ಬ್ಯಾರನ್ ಟ್ರಂಪ್, ನಮಗಾಗಿ ಕಾಯಿರಿ ಎಂದು ನೇರ ಕೊಲೆ ಬೆದರಿಕೆ ಒಡ್ಡಲಾಗಿದೆ.

ಟೆಹ್ರಾನ್‌ನಲ್ಲಿ ‘ರಕ್ತಕ್ಕೆ ರಕ್ತ’ ಅಭಿಯಾನ

ಈ ವಿಡಿಯೋ ಹೊರಬೀಳುವ ಮೊದಲು ಇರಾನ್ ರಾಜಧಾನಿ ಟೆಹ್ರಾನ್‌ನಾದ್ಯಂತ ಅಮೆರಿಕ ವಿರೋಧಿ ಬ್ಯಾನರ್‌ಗಳು ಹಾಗೂ ಜಾಹೀರಾತು ಫಲಕಗಳು ಪ್ರತ್ಯಕ್ಷವಾಗಿದ್ದವು. ರಕ್ತಕ್ಕಾಗಿ ರಕ್ತ ಎಂಬ ಘೋಷಣೆಯೊಂದಿಗೆ ಪ್ರಕಟವಾದ ಈ ಬ್ಯಾನರ್‌ಗಳಲ್ಲಿ ಡೊನಾಲ್ಡ್ ಟ್ರಂಪ್, ಮೆಲಾನಿಯಾ ಸೇರಿದಂತೆ ಡೊನಾಲ್ಡ್ ಟ್ರಂಪ್ ಜೂನಿಯರ್, ಇವಾಂಕಾ, ಎರಿಕ್, ಟಿಫಾನಿ ಹಾಗೂ ಬ್ಯಾರನ್ ಅವರನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಲಾಗಿತ್ತು.

ಮತ್ತಷ್ಟು ಓದಿ: ಅಮೆರಿಕ-ಇರಾನ್ ಸಂಘರ್ಷ ಶಮನ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರ ಕುಸಿತ, ಹಣದುಬ್ಬರ ಮತ್ತು ಜಾಗತಿಕ ಆರ್ಥಿಕತೆಯ ಮೇಲಾಗುವ ಪರಿಣಾಮವೇನು?

ಅಮೆರಿಕದಲ್ಲಿ ಬಿಗಿ ಭದ್ರತೆ

ಬೆದರಿಕೆ ಬೆನ್ನಲ್ಲೇ ಯುಎಸ್ ಸೀಕ್ರೆಟ್ ಸರ್ವಿಸ್ ಟ್ರಂಪ್ ಕುಟುಂಬಕ್ಕೆ ನೀಡಲಾಗುವ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಶ್ವೇತಭವನ, ನ್ಯೂಯಾರ್ಕ್‌ನ ಟ್ರಂಪ್ ಟವರ್, ನ್ಯೂಜೆರ್ಸಿಯ ಬೆಡ್‌ಮಿನಿಸ್ಟರ್ ಗಾಲ್ಫ್ ಕ್ಲಬ್ ಹಾಗೂ ಫ್ಲೋರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ಗಳಲ್ಲಿ ಭದ್ರತಾ ಸಿಬ್ಬಂದಿಯ ನಿಯೋಜನೆಯನ್ನು ಹೆಚ್ಚಿಸಲಾಗಿದೆ.

2026 ರ ಆರಂಭದಿಂದಲೂ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿ ಹಾಗೂ ಇರಾನ್ ಬೆಂಬಲಿತ ಗುಂಪುಗಳ ನಡುವಿನ ದಾಳಿ-ಪ್ರತಿದಾಳಿಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. ತಂತ್ರಜ್ಞಾನ ಮತ್ತು ‘ಸೈಬರ್ ವಾರ್‌ಫೇರ್’: ಇರಾನ್ ಇತ್ತೀಚಿನ ದಿನಗಳಲ್ಲಿ ಕೇವಲ ಮಿಲಿಟರಿ ಬಲ ಮಾತ್ರವಲ್ಲದೆ ಜಾಗತಿಕ ನಾಯಕರ ಕುಟುಂಬಗಳನ್ನು ಗುರಿಯಾಗಿಸಿ ಸೈಬರ್ ಬೆದರಿಕೆ ಹಾಗೂ ಪ್ರಚಾರ ವೀಡಿಯೊಗಳನ್ನು ಹರಿಬಿಡುವ ಮಾನಸಿಕ ಯುದ್ಧತಂತ್ರವನ್ನು ಬಳಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version