‘ಜನ ನಾಯಗನ್’ ಲೀಕ್: ಸೆನ್ಸಾರ್ ಮಂಡಳಿ ಸ್ಪಷ್ಟನೆ, ನಿರ್ಮಾಪಕರ ಅಂಗಳಕ್ಕೆ ಚೆಂಡು

‘ಜನ ನಾಯಗನ್’ ಲೀಕ್: ಸೆನ್ಸಾರ್ ಮಂಡಳಿ ಸ್ಪಷ್ಟನೆ, ನಿರ್ಮಾಪಕರ ಅಂಗಳಕ್ಕೆ ಚೆಂಡು

ತಮಿಳು ನಟ ವಿಜಯ್ (Thalapathy Vijay) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಸಾಕಷ್ಟು ಅಡ್ಡಿಗಳು ಎದುರಾಗಿದ್ದವು. ರೀಮೇಕ್ ಸಿನಿಮಾ ಆಗಿದ್ದರೂ ಸಹ ಸಿಬಿಎಫ್​​ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಿರಲಿಲ್ಲ. ನ್ಯಾಯಾಲಯದಲ್ಲಿ ಸಹ ನಿರ್ಮಾಪಕರಿಗೆ ನ್ಯಾಯ ಧಕ್ಕಿರಲಿಲ್ಲ. ಇದು ಹೀಗಿರುವಾಗ ಇತ್ತೀಚೆಗಷ್ಟೆ ‘ಜನ ನಾಯಗನ್’ ಸಿನಿಮಾ ಎಚ್​​ಡಿ ಪ್ರಿಂಟ್ ಸೋರಿಕೆ ಆಗಿದೆ. ಇದು ಚಿತ್ರತಂಡಕ್ಕೆ ಭಾರಿ ನಷ್ಟವನ್ನು ಉಂಟು ಮಾಡಿದೆ. ಆದರೆ ಈ ಸೋರಿಕೆ ಸಿಬಿಎಫ್​​ಸಿ ಕಡೆಯಿಂದಲೇ ಆಗಿದೆ ಎಂಬ ಆರೋಪಗಳು ಕಳೆದ ಒಂದೆರಡು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದೀಗ ಪಿಐಬಿ (ಕೇಂದ್ರ ವಾರ್ತಾ ಇಲಾಖೆ) ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಸಿನಿಮಾ ಲೀಕ್ ಹಿಂದೆ ಸಿಬಿಎಫ್​​ಸಿ ಇದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ, ‘ಜನ ನಾಯಗನ್’ ತಮಿಳು ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇಂದ ಸೋರಿಕೆಯಾಗಿದೆ ಎಂಬ ವರದಿಗಳು ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿವೆ. ಪ್ರಮಾಣ ಪತ್ರಕ್ಕಾಗಿ ಸಲ್ಲಿಸಲಾಗುವ ಎಲ್ಲಾ ಚಲನಚಿತ್ರಗಳಿಗಾಗಿ ಸಿಬಿಎಫ್ಸಿ (CBFC) ಸುರಕ್ಷಿತವಾದ KDM (Key Delivery Message) ವ್ಯವಸ್ಥೆಯನ್ನು ಅನುಸರಿಸುತ್ತದೆ. ಸಿನಿಮಾವನ್ನು ಪಾಸ್‌ವರ್ಡ್ ಮೂಲಕ ಸುರಕ್ಷಿತವಾಗಿರಿಸಲಾಗಿರುತ್ತದೆ ಮತ್ತು ಈ KDM ಕೇವಲ ನಿರ್ಮಾಪಕರು ಅಥವಾ ಚಲನಚಿತ್ರ ತಯಾರಕರ ಬಳಿ ಮಾತ್ರ ಇರುತ್ತದೆ. ಸೂಕ್ತವಾದ ಕೆಡಿಎಂ (KDM) ಇಲ್ಲದೆ, ಚಿತ್ರವನ್ನು ವೀಕ್ಷಿಸಲು ಸಾಧ್ಯವಿಲ್ಲ. ‘ಜನ ನಾಯಕನ್’ ಚಿತ್ರದ ‘ಡಿಸಿಪಿ’ (Digital Cinema Package) ಅನ್ನು ಮಾರ್ಚ್ 17 ರಂದು ಮುಂಬೈನಲ್ಲಿ ಅರ್ಜಿದಾರರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದ್ದು, ಅಂದಿನಿಂದ ಅದು ಅವರ ಬಳಿಯೇ ಇದೆ’ ಎಂದಿದೆ.

ಇದನ್ನೂ ಓದಿ:‘ಜನ ನಾಯಗನ್’ ಲೀಕ್​​ಗೆ ಅವರಿಬ್ಬರೇ ಕಾರಣ: ವಿಜಯ್ ಫ್ಯಾನ್ಸ್ ಆರೋಪ

ಆ ಮೂಲಕ ಸಿಬಿಎಫ್​​ಸಿ ಬಳಿ ಇರುವ ಸಿನಿಮಾ ಪಾಸ್​​ವರ್ಡ್ ಪ್ರೊಟೆಕ್ಟೆಡ್ ರೀತಿಯದ್ದಾಗಿದ್ದು, ಇದೇ ಪಾಸ್​​ವರ್ಡ್ ಸಿನಿಮಾ ನಿರ್ಮಾಪಕರ ಅಥವಾ ಸಿನಿಮಾಕ್ಕೆ ಸಂಬಂಧಿಸಿದ ತಂಡದ ಬಳಿಯೂ ಇದೆ ಎಂದಿದೆ. ಅಲ್ಲಿಗೆ ಸಿನಿಮಾ ಲೀಕ್ ಮಾಡುವ ಅವಕಾಶ ಸಿಬಿಎಫ್​​ಸಿ ಮಾತ್ರವೇ ಅಲ್ಲದೆ ಸ್ವತಃ ಸಿನಿಮಾ ತಂಡದವರು ವಿಶೇಷವಾಗಿ ನಿರ್ಮಾಪಕರು ಹಾಗೂ ನಿರ್ದೇಶಕರಿಗೂ ಇದ್ದು, ಅವರಿಂದಲೂ ಲೀಕ್ ಆಗಿರುವ ಸಾಧ್ಯತೆ ಇದೆ ಎಂಬುದನ್ನು ಪರೋಕ್ಷವಾಗಿ ಪಿಐಬಿ ಟ್ವೀಟ್​ ಸೂಚಿಸುತ್ತಿದೆ.

‘ಜನ ನಾಯಗನ್’ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳು ಮೊದಲು ಸಣ್ಣ ಕ್ಲಿಪ್‌ಗಳ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬೆನ್ನಲ್ಲೇ ಪೂರ್ಣ ಪ್ರಮಾಣದ ಹೈ-ಡೆಫಿನಿಷನ್ (HD) ಆವೃತ್ತಿಯು ಪೈರಸಿ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿದ್ದು ಚಿತ್ರತಂಡಕ್ಕೆ ದೊಡ್ಡ ಆಘಾತ ನೀಡಿದೆ. ಇಂದು ಮೆಗಾಸ್ಟಾರ್ ಚಿರಂಜೀವಿ, ಕಮಲ್ ಹಾಸನ್, ರಜನೀಕಾಂತ್, ವಿಜಯ್ ದೇವರಕೊಂಡ, ಪೂಜಾ ಹೆಗ್ಡೆ ಸೇರಿದಂತೆ ಹಲವರು ಈ ಸಿನಿಮಾ ಲೀಕ್ ಅನ್ನು ಕಟುವಾಗಿ ಖಂಡಿಸಿದ್ದಾರೆ. ಅದರ ಬೆನ್ನಲ್ಲೆ ಸಿಬಿಎಫ್​​ಸಿ ಪರವಾಗಿ ಕೇಂದ್ರ ವಾರ್ತಾ ಇಲಾಖೆ ಸ್ಪಷ್ಟನೆ ನೀಡಿದೆ.

ಈಗಾಗಲೇ ‘ಜನ ನಾಯಗನ್’ ಸಿನಿಮಾವನ್ನು ಪೈರಸಿ ಲಿಂಕುಗಳ ಮೂಲಕ ಹಲವರು ಡೌನ್​​ಲೋಡ್ ಮಾಡಿದ್ದಾರೆ. ಆದರೆ ಸೈಬರ್ ಪೊಲೀಸರು ಈ ಡೌನ್​​ಲೋಡ್ ಮಾಡುವವರ ಮೇಲೂ ಕಣ್ಣಿಡಲಿದೆ ಎನ್ನಲಾಗುತ್ತಿದೆ. ‘ಜನ ನಾಯಗನ್’ ಲಿಂಕ್ ಹೆಸರಿನಲ್ಲಿ ಕೆಲವು ನಕಲಿ ಲಿಂಕ್ ಸೃಷ್ಟಿಸಿ, ಮಾಲ್​​ವೇರ್ ದಾಳಿಯ ಅಥವಾ ವೈರಸ್ ದಾಳಿಯ ಎಚ್ಚರಿಕೆಯನ್ನೂ ಸಹ ತಜ್ಞರು ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕದನವಿರಾಮದ ಬಳಿಕ ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎಲ್‌ಪಿಜಿ ಟ್ಯಾಂಕರ್ ಜಗವಿಕ್ರಮ್

ನವದೆಹಲಿ, ಏಪ್ರಿಲ್ 11: ಭಾರತದ ಧ್ವಜ ಹೊತ್ತ ಎಲ್‌ಪಿಜಿ ಹಡಗು ಜಗವಿಕ್ರಮ್ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಈ ಹಡಗು ಸುಮಾರು 20,400 ಮೆಟ್ರಿಕ್ ಟನ್ ಎಲ್‌ಪಿಜಿ ಸರಕುಗಳನ್ನು 24 ನಾವಿಕರೊಂದಿಗೆ ಸಾಗಿಸುತ್ತಿದೆ. ಇದು ಏಪ್ರಿಲ್ 15ರಂದು ಮುಂಬೈಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕದನ ವಿರಾಮಕ್ಕೆ ಕೆಲವು ವಾರ ಮೊದಲು ಭಾರತ ಧ್ವಜ ಹೊತ್ತ 8 ಹಡಗುಗಳು ಜಲಸಂಧಿಯನ್ನು ದಾಟಿದ್ದವು. ಆದರೆ, 15 ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ. ಜಗವಿಕ್ರಮ್ 20,400 ಟನ್ ಎಲ್‌ಪಿಜಿಯನ್ನು ಹೊತ್ತೊಯ್ಯುತ್ತಿದ್ದು, 24 ನಾವಿಕರು ಅದರಲ್ಲಿ ಸಿಲುಕಿಕೊಂಡಿದ್ದರು. ಇದು ಏಪ್ರಿಲ್ 15ರಂದು ಮುಂಬೈಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಹಡಗು ಟ್ರ್ಯಾಕಿಂಗ್ ದತ್ತಾಂಶವು ಶುಕ್ರವಾರ ರಾತ್ರಿಯಿಂದ ಇಂದು ಬೆಳಿಗ್ಗೆಯವರೆಗೆ ಟ್ಯಾಂಕರ್ ಹಾರ್ಮುಜ್ ಜಲಮಾರ್ಗದ ಮೂಲಕ ಚಲಿಸಿದೆ. ಮಾರ್ಚ್ ಆರಂಭದಿಂದಲೂ ಪರ್ಷಿಯನ್ ಕೊಲ್ಲಿಯಿಂದ ನಿರ್ಗಮಿಸುವ 9ನೇ ಭಾರತೀಯ ಹಡಗು ಜಗವಿಕ್ರಮ್ ಆಗಿದೆ. ಆದರೆ ಸುಮಾರು 15 ಭಾರತ-ಧ್ವಜ ಹೊಂದಿರುವ ಹಡಗುಗಳು ಈ ಪ್ರದೇಶದಲ್ಲಿ ಬಾಕಿ ಉಳಿದಿದ್ದು, ಮಾರ್ಗಕ್ಕಾಗಿ ಕಾಯುತ್ತಿವೆ.

ಇದನ್ನೂ ಓದಿ: ಇರಾನ್ ದಿಗ್ಬಂಧನದ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ದಾಟಿದ 8 ಭಾರತೀಯ ಹಡಗು

ಭಾರತವು ತನ್ನ ಕಚ್ಚಾ ತೈಲದ ಸುಮಾರು ಶೇ. 88ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ಮತ್ತು ನಾಲ್ಕನೇ ಅತಿದೊಡ್ಡ ಅನಿಲ ಬಳಕೆದಾರ ರಾಷ್ಟ್ರವಾದ ಭಾರತವು ತನ್ನ ಕಚ್ಚಾ ತೈಲದ ಸುಮಾರು ಶೇ. 88ರಷ್ಟನ್ನು, ಅದರ ನೈಸರ್ಗಿಕ ಅನಿಲ ಅಗತ್ಯಗಳಲ್ಲಿ ಅರ್ಧದಷ್ಟು ಮತ್ತು ಅದರ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಅವಶ್ಯಕತೆಯ ಸುಮಾರು ಶೇ. 60ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲ ಆಮದುಗಳಲ್ಲಿ ಅರ್ಧಕ್ಕಿಂತ ಹೆಚ್ಚು, ಅನಿಲದ ಸುಮಾರು ಶೇ. 40ರಷ್ಟು ಮತ್ತು ಎಲ್‌ಪಿಜಿ ಸಾಗಣೆಯ ಶೇ. 85-90ರಷ್ಟು ಗಲ್ಫ್ ದೇಶಗಳಿಂದ ಬರುತ್ತವೆ. ಇವು ಪಶ್ಚಿಮ ಏಷ್ಯಾ ಸಂಘರ್ಷದ ಸಮಯದಲ್ಲಿ ಮುಚ್ಚಲ್ಪಟ್ಟ ಪ್ರಮುಖ ಜಾಗತಿಕ ಇಂಧನ ಕಾರಿಡಾರ್ ಆಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ, ಏಪ್ರಿಲ್​ 11: ಒಂದು ಚಹಾ ಕುಡಿದರೆ ಋಣ ಇಟ್ಟುಕೊಳ್ಳಬೇಕು. ಎಂಎಲ್​ಸಿ ಮಾಡಿದ್ದು ನಾವು. ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್​​ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕರೆದಿಲ್ಲ ಎಂಬ ಕಾಂಗ್ರೆಸ್​ ಮುಖಂಡ ಅಬ್ದುಲ್​​ ಜಬ್ಬಾರ್​ ಆರೋಪಕ್ಕೆ ಟಾಂಗ್​ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಪಕ್ಷದ ಕಾರ್ಯಕರ್ತರಾಗಿ ನಾವು ನಮ್ಮ ಪಾಡಿಗೆ, ಕರೆಗಾಗಿ ಕಾಯದೆ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ನಡೆದ ಚರ್ಚೆಗಳು ಅನಗತ್ಯವಾಗಿದ್ದು, ಎಲ್ಲಾ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ದಾವಣಗೆರೆ ರಾಜಕೀಯದಲ್ಲಿ ‘ಕೋಟಿ’ ಸಮರ: 50 ಲಕ್ಷ, 1 ಕೋಟಿ ಹಣ ಹಂಚಿಕೆಯ ಆರೋಪದ ಬಗ್ಗೆ ಚಮನ್ ಸಾಬ್ ಸ್ಫೋಟಕ ಮಾತು!

ದಾವಣಗೆರೆ, ಏ.11: ಉಪಚುನಾವಣೆ ಕುರಿತು ಮಾಜಿ ಮೇಯರ್ ಚಮನ್ ಸಾಬ್ ಮಹತ್ವದ ಹೇಳಿಕೆ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಕೆಲವು ವ್ಯಕ್ತಿಗಳ ಅಸಮರ್ಥ ಕ್ರಿಯೆಯ ಕುರಿತು ಅವರು ಮಾತನಾಡಿದ್ದಾರೆ. ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರೂ, ಲೋಕಸಭೆ ಚುನಾವಣೆ ಹಾಗೂ ಪ್ರಸ್ತುತ ಉಪಚುನಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗದಿರುವುದನ್ನು ಚಮನ್ ಸಾಬ್ ಷಡ್ಯಂತ್ರ ಎಂದು ಬಣ್ಣಿಸಿದ್ದಾರೆ. ಪಕ್ಷದ ನಿರ್ಧಾರವು ಉತ್ತಮವಾಗಿದೆ ಮತ್ತು ಸಮರ್ಥ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ನಾಯಕರು ಮನೆಗೆ ಭೇಟಿ ನೀಡದಿರುವುದನ್ನು ಮನವೊಲಿಸುವ ಪ್ರಯತ್ನವಾಗಿ ನೋಡಲಾಗದು ಎಂದು ಚಮನ್ ಸಾಬ್ ಸ್ಪಷ್ಟಪಡಿಸಿದ್ದಾರೆ. ಇನ್ನು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿ ಮತ್ತು ಕೆಲ ಮುಸ್ಲಿಂ ಸಮುದಾಯದವರಿಗೆ ಹಣ ನೀಡಿ ಸೋಲಿಸಲು ಪ್ರಯತ್ನಿಸಲಾಯಿತು ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ. ಇವೆಲ್ಲವೂ ಕೇವಲ ಗಾಳಿ ಸುದ್ದಿಗಳಾಗಿದ್ದು, ಅವುಗಳಿಗೆ ಯಾವುದೇ ಅಧಿಕೃತ ಆಧಾರವಿಲ್ಲ ಎಂದು ಚಮನ್ ಸಾಬ್ ತಿಳಿಸಿದ್ದಾರೆ. ಕಾರ್ಯಕರ್ತರು ಕಾಣದ ಸಂಗತಿಗಳನ್ನು ಪತ್ರಕರ್ತರು ಕಂಡರೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.

“ಬರೀ ಟಿಕೆಟ್, ಟಿಕೆಟ್ ಎಂದು ತಲೆಗೆ ತುಂಬಿಕೊಂಡು, ವಿನಾಕಾರಣ ಗೊಂದಲ ಸೃಷ್ಟಿ ಮಾಡಿ, ಬೇಜಾರಾಗುವಂತೆ ಮಾಡಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು, ಜಮೀರ್ ಅಹ್ಮದ್ ಅವರು ಕೆಲ ಮುಸ್ಲಿಂ ಸಮುದಾಯದವರಿಗೆ ಹಣ ನೀಡಿ, ಸೋಲಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪಗಳ ಕುರಿತು ಪತ್ರಕರ್ತರು ಕೇಳಿದಾಗ, “ಕವಿ ಕಾಣದ್ದನ್ನು ರವಿ ಕಂಡ” ಎಂಬ ಗಾದೆಯನ್ನು ಉಲ್ಲೇಖಿಸಿ, ಇವೆಲ್ಲವೂ ಗಾಳಿ ಸುದ್ದಿ ಎಂದು ತಳ್ಳಿಹಾಕಿದ್ದಾರೆ. “ನಮಗೆ ಕಣ್ಣಿಗೆ ಕಂಡಿಲ್ಲ. ನಮಗೂ ಸುದ್ದಿ ಹಂಗೆ ಹಂಗೆ ಮಾಡಿದ್ರಂತೆ, ಇಷ್ಟು ಕೋಟಿ ಕೊಟ್ಟರಂತೆ ಅಂತ ಹೇಳ್ತಾರೆ. ಇವೆಲ್ಲ ಗಾಳಿ ಸುದ್ದಿ. ಇದಕ್ಕೆ ನಮ್ಮಹತ್ತಿರ ಏನು ಅಧಿಕೃತ ದಾಖಲೆ ಇಲ್ಲ” ಎಂದು ಚಮನ್ ಸಾಬ್ ಹೇಳಿದ್ದಾರೆ. ಕ್ಷೇತ್ರದಲ್ಲಿ 50 ಲಕ್ಷ ಅಥವಾ 1 ಕೋಟಿ ನೀಡಿದ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಕೇವಲ ಅಂತೆ ಕಂತೆಗಳಾಗಿವೆ, ಅವುಗಳಿಗೆ ಯಾವುದೇ ನೈಜತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಗಳು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ರಾಜಕೀಯ ಪರಿಸ್ಥಿತಿಯನ್ನು ಮತ್ತಷ್ಟು ಬಿಸಿ ಮಾಡಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲ್ಚರ್ ಫೆಸ್ಟ್‌ನಲ್ಲಿ ಮಿಂದೆದ್ದ ಪ್ರೆಸಿಡೆನ್ಸಿ ವಿವಿಯ ವಿದ್ಯಾರ್ಥಿಗಳು: ಇಲ್ಲಿವೆ ಫೋಟೋಸ್​

Source link

BREAKING: ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ತೀವ್ರ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಭಾರತೀಯ ಸಿನಿಮಾ ರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಶಾ ಭೋಸ್ಲೆ ಅವರನ್ನು ಮುಂಬೈನ ಪ್ರತಿಷ್ಠಿತ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಶಾ ಬೋಸ್ಲೆ ಅವರಿಗೆ 92 ವರ್ಷ ವಯಸ್ಸಾಗಿದೆ. ಭೋಸ್ಲೆ ಅವರ ಕುಟುಂಬ ವರ್ಗದವರು, ಆಪ್ತರು ಆಸ್ಪತ್ರೆಗೆ ಧಾವಿಸಿದ್ದು, ಅವರ ಆರೋಗ್ಯದ ಬಗ್ಗೆ ಇನ್ನಷ್ಟೆ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕಿದೆ.

 

 

Source link

CSK vs DC: ಐಪಿಎಲ್​ನಲ್ಲಿ ನಾಲ್ಕನೇ ಶತಕ ಬಾರಿಸಿದ ಸಂಜು ಸ್ಯಾಮ್ಸನ್

ಚೆಪಾಕ್​ನ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೊನೆಗೂ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಐಪಿಎಲ್‌ನಲ್ಲಿ ಮೊದಲ ಬಾರಿಗೆ ಸಿಎಸ್​ಕೆ ತಂಡದ ಪರ ಆಡುತ್ತಿರುವ ಸಂಜುಗೆ ಮೊದಲ ಮೂರು ಪಂದ್ಯಗಳು ಉತ್ತಮವಾಗಿ ನಡೆದಿರಲಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಕಟ್ಟಿದ ಸಂಜು ಮೊದಲಿಗೆ ಸಿಎಸ್​ಕೆ ಪರ ಮೊದಲ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಇದು ಸಂಜು ಅವರ ಐಪಿಎಲ್ ವೃತ್ತಿಜೀವನದಲ್ಲಿ ನಾಲ್ಕನೇ ಶತಕವಾಗಿದ್ದರೆ, ಸಿಎಸ್​ಕೆ ಪರ ಮೊದಲ ಶತಕವಾಗಿದೆ.

Source link

ಅತಿ ಹೆಚ್ಚು ಬಜೆಟ್ ಮಂಡಿಸಿದ್ದಕ್ಕೆ ಸಿದ್ದುಗೆ ‘ಗೋಲ್ಡನ್’ ಗಿಫ್ಟ್: ನಗುನಗುತ್ತಲೇ ಉಂಗುರ ಸ್ವೀಕರಿಸಿದ ಮುಖ್ಯಮಂತ್ರಿ

ಕಲಬುರಗಿ, ಏ.11 : ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಲಬುರಗಿ ಜಿಲ್ಲೆಯ ನಾಲವಾರ ಮಠದ ಶ್ರೀಗಳು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವ ಮೂಲಕ ವಿಶೇಷವಾಗಿ ಅಭಿನಂದಿಸಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಜಿಲ್ಲೆಯ ಸೂಗೂರು ಕಾರ್ಯಕ್ರಮ ಮುಗಿಸಿ ಮಠಕ್ಕೆ ಆಗಮಿಸಿದ ಸಿಎಂ ಅವರನ್ನು ಮಠದ ಪೀಠಾಧಿಪತಿಗಳಾದ ಶ್ರೀ ತೋಟೇಂದ್ರ ಸ್ವಾಮೀಜಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಶ್ರೀಗಳು ಮುಖ್ಯಮಂತ್ರಿಯವರಿಗೆ ಚಿನ್ನದ ಉಂಗುರವನ್ನು ತೊಡಿಸಿದರು. ಸಿದ್ದರಾಮಯ್ಯ ಅವರು ಇದುವರೆಗೆ ಅತಿ ಹೆಚ್ಚು ಬಾರಿ ರಾಜ್ಯ ಬಜೆಟ್ ಮಂಡಿಸಿರುವ ಐತಿಹಾಸಿಕ ಸಾಧನೆಯನ್ನು ಗುರುತಿಸಿ ಮಠದ ವತಿಯಿಂದ ಈ ವಿಶೇಷ ಉಡುಗೊರೆ ನೀಡಲಾಯಿತು. ಶ್ರೀಗಳು ಪ್ರೀತಿಯಿಂದ ನೀಡಿದ ಈ ‘ಗೋಲ್ಡನ್’ ಉಡುಗೊರೆಯನ್ನು ಮುಖ್ಯಮಂತ್ರಿಗಳು ನಗುನಗುತ್ತಲೇ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK vs DC: ಸಿಎಸ್​ಕೆ ಪರ ಮೊದಲ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್

ಈ ಆವೃತ್ತಿಯಿಂದ ಐಪಿಎಲ್​ನಿಂದ ಸಿಎಸ್​ಕೆ ತಂಡದ ಪರ ಆಡುತ್ತಿರುವ ಸಂಜು ಸ್ಯಾಮನ್ಸ್​ ಕೊನೆಗೂ ತಮ್ಮ ಲಯ ಕಂಡುಕೊಂಡಿದ್ದಾರೆ. ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ನಿರಾಶೆ ಮೂಡಿಸಿದ ಸಂಜು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಆರಂಭದಿಂದಲೂ ತಾಳ್ಮೆಯ ಆಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್, ಮುಖೇಶ್ ಕುಮಾರ್ ಎಸೆದ ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ಸಿಂಗಲ್ ಪಡೆಯುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.

ಸಂಜು ಕೇವಲ 26 ಎಸೆತಗಳಲ್ಲಿ ಒಟ್ಟು 9 ಬೌಂಡರಿಗಳ ಸಹಿತ ಸಿಎಸ್​ಕೆ ಪರ ತಮ್ಮ ಮೊದಲ ಅರ್ಧಶತಕ ಬಾರಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಸಂಜು ಸ್ಯಾಮ್ಸನ್ ಈ ಅರ್ಧಶತಕ ಬಾರಿಸುವ ಮೂಲಕ ಉಳಿಸಿಕೊಂಡಿದ್ದಾರೆ. ರುತುರಾಜ್ ಔಟಾದ ನಂತರ ಒತ್ತಡಕ್ಕೆ ಮಣಿಯದೆ ಜವಾಬ್ದಾರಿಯುತ ಇನ್ನಿಂಗ್ಸ್ ಆಡುತ್ತಿರುವ ಸಂಜು ಶತಕದತ್ತ ಸಾಗುತ್ತಿದ್ದಾರೆ.

Source link

ಮೋದಿಯಿಂದ ಹೊಸ ಪ್ರಯೋಗ; ಬಂಗಾಳ ರ‍್ಯಾಲಿ ವೇಳೆ ವ್ಲಾಗರ್ ಆದ ಪ್ರಧಾನಿ

ನವದೆಹಲಿ, ಏಪ್ರಿಲ್ 11: ಪಶ್ಚಿಮ ಬಂಗಾಳದ ಪುರ್ಬಾ ವರ್ಧಮಾನ್‌ನಲ್ಲಿ ತಮ್ಮ ರ‍್ಯಾಲಿಗೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನರನ್ನು ಉದ್ದೇಶಿಸಿ ಒಂದು ವಿಡಿಯೋ ಮಾಡಿ ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಮೂಲಕ ಪ್ರಧಾನಿ ಮೋದಿ (PM Modi) ವ್ಲಾಗರ್ ಆಗಿ ಬದಲಾಗಿದ್ದಾರೆ. ಪಶ್ಚಿಮ ಬಂಗಾಳದ ಹೆಲಿಪ್ಯಾಡ್‌ನಲ್ಲಿ ನೆರೆದಿದ್ದ ದೊಡ್ಡ ಜನಸಮೂಹವನ್ನು ಅದ್ಭುತ ದೃಶ್ಯ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಬಿಸಿಲಿನ ಬೇಗೆಯ ಹೊರತಾಗಿಯೂ ಜನರ ಉತ್ಸಾಹ ಕಡಿಮೆಯಾಗದೆ ಹಾಗೆಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.

ಬಿಸಿಲಿನ ಬೇಗೆಯ ಹೊರತಾಗಿಯೂ ಮಧ್ಯಾಹ್ನಕ್ಕೂ ಮೊದಲೇ ಹೆಲಿಪ್ಯಾಡ್‌ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಇದು ಈ ದಿನದ ಮೋದಿಯವರ ಮೊದಲ ಸಭೆಯಾಗಿದ್ದು, ಅವರು ಸ್ಥಳಕ್ಕೆ ಬರುವ ಮೊದಲೇ ಹೆಚ್ಚಿನ ಸಂಖ್ಯೆಯ ಜನರು ಅವರಿಗಾಗಿ ಕಾಯುತ್ತಿದ್ದರು ಎಂಬುದನ್ನು ಮೋದಿ ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ರೀತಿ ಮೋದಿ ತಮ್ಮ ಚುನಾವಣಾ ರ‍್ಯಾಲಿಯ ನೇರಪ್ರಸಾರ ಮಾಡುತ್ತಾ, ಲೈವ್ ಕಮೆಂಟರಿ ನೀಡಿದ್ದು ಇದೇ ಮೊದಲು. ಈ ಮೂಲಕ ಪ್ರಧಾನಿ ಮೋದಿ ಹೊಸ ಪ್ರಯೋಗ ಮಾಡಿದ್ದಾರೆ.


ಇದನ್ನೂ ಓದಿ: ಬಂಗಾಳಿಗಳನ್ನು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ; ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭರವಸೆ

ಪುರ್ಬಾ ಬರ್ಧಮಾನ್‌ನಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಗೆ ಮುನ್ನ ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಈ ಸಣ್ಣ ವೀಡಿಯೊ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದು ಭಾರೀ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version