ಭಯಾನಕ ವಿಡಿಯೋ: ಮನೆಯ ತಾರಸಿಯಲ್ಲಿ ಬಾಂಬ್ ಸ್ಫೋಟ, ಮಹಿಳೆಯರು ಸೇರಿ ಎಲ್ಲರ ಬಟ್ಟೆಗೂ ತಗುಲಿದ ಬೆಂಕಿ – Kannada News | Crude Bomb Explodes on Rooftop in Bhubaneswar, Four Injured

ಭುವನೇಶ್ವರ, ಫೆಬ್ರವರಿ 16: ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಸುಂದರಪಾದ ಪ್ರದೇಶದಲ್ಲಿ ಮನೆಯೊಂದರ ತಾರಸಿಯಲ್ಲಿ ನಡೆದ ಭಾರಿ ಬಾಂಬ್ ಸ್ಫೋಟ ಎಲ್ಲರನ್ನು ಬೆಚ್ಚಿಬೀಳಿಸಿದೆ. ಜನವರಿ 27ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯ ಈಗ ಹೊರಬಿದ್ದಿದೆ. ರೌಡಿ ಶೀಟರ್ ಶಾನವಾಜ್ ನವಾಬ್ ಮನೆಯ ತಾರಸಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ವೀಡಿಯೊವನ್ನು ಒಂದೊಂದಾಗಿ ಪರಿಶೀಲಿಸುತ್ತಿದೆ.

ಸ್ಫೋಟದಲ್ಲಿ ರೌಡಿ ಶೀಟರ್ ಕೂಡ ಗಾಯಗೊಂಡಿದ್ದಾನೆ. ಮೂವರು ಹೆಂಗಸರು ಕೂಡ ಇದ್ದರು. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಕಚ್ಚಾ ಬಾಂಬ್ ತಯಾರಿಸಲು ಕಾರಣವೇನು ಅದನ್ನು ಎಲ್ಲಿಗೆ ಸರಬರಾಜು ಮಾಡುತ್ತಿದ್ದ ಎಂದು ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.ಸಾಕ್ಷ್ಯಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ಘಟನಾ ಸ್ಥಳಕ್ಕೆ ವೈಜ್ಞಾನಿಕ ತಂಡವನ್ನು ಕಳುಹಿಸಲಾಗಿದೆ. ಅಕ್ರಮ ಬಾಂಬ್ ತಯಾರಿಕೆಯಲ್ಲಿ ಇತರರು ಭಾಗಿಯಾಗಿದ್ದರೆ, ಅವರ ಬಗ್ಗೆ ಮಾಹಿತಿ ಪಡೆಯಲು ಗಾಯಾಳುಗಳು ಚೇತರಿಸಿಕೊಂಡ ನಂತರ ಅವರನ್ನು ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದರ್ಶನ್ ಪ್ರಾಣಿ ಪ್ರಿಯನಾಗಲು ಕಾರಣವಾದ ಅಂಶವೇನು ಗೊತ್ತೇ? – Kannada News | Darshan’s Birthday and Deep Animal Love: From Arjun Elephant Memorial to Mysore Farm

ನಟ ದರ್ಶನ್ (Darshan) ಅವರಿಗೆ ಇಂದು ಬರ್ತ್​​ಡೇ. ಫೆಬ್ರವರಿ 16ರನ್ನು ಫ್ಯಾನ್ಸ್ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅವರು ಇಲ್ಲ ಎಂಬ ಕೊರಗಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವುದನ್ನು ಕಾಣಬಹುದು. ನಟ ದರ್ಶನ್ ಪ್ರಾಣಿ ಪ್ರಿಯರು. ಕಾಡಾನೆ ರಕ್ಷಣೆ ವೇಳೆ ಅರ್ಜುನ ಆನೆ ನಿಧನ ಹೊಂದಿದ್ದ ವಿಚಾರ ಗೊತ್ತೇ ಇದೆ. ಇದಕ್ಕೆ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದರು. ಆನೆ ಸತ್ತ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು ಎನ್ನಬಹುದು.ದರ್ಶನ್​​ಗೆ ಘಟನೆ ಬೇಸರ ಮೂಡಿಸಿತ್ತು.ದರ್ಶನ್​​ಗೆ ಪ್ರಾಣಿಗಳ ಬಗ್ಗೆ ಪ್ರೀತಿ ಮೂಡಲು ವಿಶೇಷ ಕಾರಣವೂ ಇದೆ.

ಆನೆ ಮೃತಪಟ್ಟ ಬಳಿಕ ಯಾರೂ ಆ ಬಗ್ಗೆ ಯೋಚಿಸೋದಿಲ್ಲ. ಆದರೆ, ದರ್ಶನ್ ಹಾಗಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಅರ್ಜುನ ಆನೆಗೆ ತಾತ್ಕಾಲಿಕವಾಗಿ ಸ್ಮಾರಕ ನಿರ್ಮಾಣ ಮಾಡಲು ಕಲ್ಲುಗಳನ್ನು ದರ್ಶನ್ ಕಳುಹಿಸಿದ್ದರು. ಇದು ಅವರ ವಿಶಾಲ ಹೃದಯತೆಯನ್ನು ತೋರಿಸುತ್ತದೆ.

ದರ್ಶನ್​ಗೆ ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ ಮತ್ತು ಇದು ಅನೇಕ ಬಾರಿ ಸಾಬೀತಾಗಿದೆ ಎನ್ನಬಹುದು. ಅವರು ನಟನಾ ತರಬೇತಿ ಪಡೆದು ಬಂದ ನಂತರ ಕೆಲ ವರ್ಷ ಅವರು ಮೈಸೂರಿನಲ್ಲೇ ವಾಸ ಇದ್ದರು. ಆಗ ಅವರು ಸಾಕಷ್ಟು ದನಗಳನ್ನು ಸಾಕಿದ್ದರು. ಆಗ ಅವರು ಹಾಲು ಕರೆದು ಮಾರುತ್ತಿದ್ದರು. ಇದರಿಂದ ಅವರ ಬದಕು ಬದಲಾಯಿತು. ನಿತ್ಯದ ಕೂಳಿಗೆ ವ್ಯವಸ್ಥೆ ಆಯಿತು. ಹೀಗಾಗಿ, ಫಾರ್ಮ್​​ಹೌಸ್​​ನಲ್ಲಿ ದನಗಳನ್ನು ಸಾಕಿದ್ದಾರೆ.

ದರ್ಶನ್ ಅವರಿಗೆ ಇತರ ಪ್ರಾಣಿಗಳ ಬಗ್ಗೆಯೂ ಪ್ರೀತಿ ಇದೆ. ಅವರು ಮೈಸೂರು ಮೃಗಾಲಯದಲ್ಲಿ ಹುಲಿ ಹಾಗೂ ಇತರ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಕೊವಿಡ್ ಸಮಯದಲ್ಲಿ ಅವರು ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆ ನೀಡಿದ್ದರು. ಅವರ ಅಭಿಮಾನಿಗಳು ಮುಂದೆ ಬಂದು ಪ್ರಾಣಿಗಳನ್ನು ದತ್ತು ಪಡೆದಿದ್ದರು.

ಇದನ್ನೂ ಓದಿ: ‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯ’; ದರ್ಶನ್​​ಗೆ ವಿಜಯಲಕ್ಷ್ಮೀ ವಿಶ್

ಮೈಸೂರಿನಲ್ಲಿ ದರ್ಶನ್ ಅವರು ಫಾರ್ಮ್ಹೌಸ್ ಇಟ್ಟುಕೊಂಡಿದ್ದಾರೆ. ಅಲ್ಲಿ ಅವರು ದನ, ಕುದುರೆಗಳನ್ನು ಸಾಕಿದ್ದಾರೆ. ದರ್ಶನ್ ಅವರು ಒಂದು ಕುದುರೆ ಸಾಕಿದ್ದು, ದರ್ಶನ್ ಮೇಲೆ ಆ ಕುದುರೆ ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದೆಯಂತೆ. ಈ ಮೊದಲು ಆ ಬಗ್ಗೆ ಅವರು ಹೇಳಿಕೊಂಡಿದ್ದರು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ವಿಶಾಖಪಟ್ಟಣ ವಿಶೇಷ ರೈಲು ಅವಧಿ ವಿಸ್ತರಣೆ: ಇನ್ಮುಂದೆ ನಾಯಂಡಹಳ್ಳಿಯಲ್ಲಿ ಈ 4 ರೈಲುಗಳಿಗೆ ಇರುತ್ತೆ ನಿಲುಗಡೆ – Kannada News | Bengaluru–Visakhapatnam Special Train Extended Till March 30; Four Trains Get Halt at Nayandahalli

ಬೆಂಗಳೂರು, ಫೆಬ್ರವರಿ 16: ಹೋಳಿ ಹಬ್ಬದ (Holi Festival) ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಭಾರತೀಯ ರೈಲ್ವೆ (Indian Railways) ಮಹತ್ವದ ಕ್ರಮ ಕೈಗೊಂಡಿದೆ. ವಿಶಾಖಪಟ್ಟಣ ಮತ್ತು ಎಸ್​ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ರೈಲು ಸೇವೆಯ ಅವಧಿಯನ್ನು ವಿಸ್ತರಿಸಿದೆ. ರೈಲು ಸಂಖ್ಯೆ 08581 ಬೆಂಗಳೂರು ಕಡೆಗೆ ಬರುವ ವಿಶಾಖಪಟ್ಟಣಂ–ಎಸ್‌ಎಂವಿಟಿ ಬೆಂಗಳೂರು ವಾರಾಂತ್ಯ ಎಕ್ಸ್‌ಪ್ರೆಸ್‌ (ಭಾನುವಾರ ಸಂಚಾರ) ಅನ್ನು ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ರೈಲು ಸಂಖ್ಯೆ 08582 ಎಸ್‌ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ವಾರಾಂತ್ಯ ಎಕ್ಸ್‌ಪ್ರೆಸ್‌ (ಸೋಮವಾರ ಸಂಚಾರ) ಮಾರ್ಚ್ 30ರವರೆಗೆ ಓಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ನಾಲ್ಕು ರೈಲುಗಳಿಗೆ ಇನ್ಮುಂದೆ ನಾಯಂಡಹಳ್ಳಿಯಲ್ಲಿ ನಿಲುಗಡೆ

ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ರೈಲುಗಳಿಗೆ ಪ್ರಯೋಗಾತ್ಮಕವಾಗಿ ಒಂದು ನಿಮಿಷದ ನಿಲುಗಡೆ ನೀಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ನಾಯಂಡಹಳ್ಳಿಯಲ್ಲಿ ನಿಲುಗಡೆ ಇರುವ ರೈಲುಗಳು

  • ರೈಲು ಸಂಖ್ಯೆ 16215 ಮೈಸೂರು-ಕೆಎಸ್‌ಆರ್ ಬೆಂಗಳೂರು ಚಾಮುಂಡಿ ಎಕ್ಸ್‌ಪ್ರೆಸ್ ಬೆಳಿಗ್ಗೆ 8.45ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16216 ಕೆಎಸ್‌ಆರ್ ಬೆಂಗಳೂರು–ಮೈಸೂರು ಚಾಮುಂಡಿ ಎಕ್ಸ್‌ಪ್ರೆಸ್ ಸಂಜೆ 6.39ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ಮಧ್ಯಾಹ್ನ 3.16ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ ಬೆಳಿಗ್ಗೆ 8.19ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16235 ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ ಬೆಳಿಗ್ಗೆ 6.49ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16236 ಮೈಸೂರು-ಟುಟಿಕೋರಿನ್ ಎಕ್ಸ್‌ಪ್ರೆಸ್ ರಾತ್ರಿ 8.14ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16535 ಮೈಸೂರು-ಫಂಡರಾಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಸಂಜೆ 5.40ಕ್ಕೆ ಆಗಮಿಸುತ್ತದೆ.
  • ರೈಲು ಸಂಖ್ಯೆ 16536 ಫಂಡರಾಪುರ–ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಬೆಳಿಗ್ಗೆ 7.44ಕ್ಕೆ ಆಗಮಿಸುತ್ತದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿಲುಗಡೆಗಳನ್ನು ಪ್ರಾಯೋಗಿಲಕವಾಗಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೂಟಿಂಗ್ ವೇಳೆ ಪ್ರಭಾಸ್​​ಗೆ ಗಾಯ; ಇದರಿಂದಲೂ ಲಾಭ ಪಡೆದ ಫ್ಯಾನ್ಸ್ – Kannada News | Prabhas Injured During Fauji Shoot: Fans Leverage Setback to Silence Trolls

ಸಿನಿಮಾ ಶೂಟಿಂಗ್ ವೇಳೆ ಎಷ್ಟೇ ಎಚ್ಚರಿಕೆ ಪಡೆದುಕೊಂಡರೂ ಗಾಯುಗಳು ಸಾಮಾನ್ಯ. ಈಗ ಪ್ರಭಾಸ್ (Prabhas) ವಿಷಯದಲ್ಲೂ ಹಾಗೆಯೇ ಆಗಿದೆ. ಅವರು ಮುಂದಿನ ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಗಾಯ ಉಂಟಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನೂ ಕೆಲವರು ಈ ಘಟನೆಯನ್ನು ಇಟ್ಟುಕೊಂಡು ಟ್ರೋಲಿಗರಿಗೆ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಈ ಘಟನೆಯಿಂದ ಪ್ರಭಾಸ್​​ಗೆ ಲಾಭ ಸಿಗೋ ತರ ಮಾಡಿದ್ದಾರೆ.

‘ರಾಜಾ ಸಾಬ್’ ಸಿನಿಮಾ ಸಾಕಷ್ಟು ನೆಗೆಟಿವಿಟಿ ಪಡೆಯಿತು. ಸಿನಿಮಾ ಉದ್ದಕ್ಕೂ ಡ್ಯೂಪ್ ಬಳಸಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂತು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸಾಬೀತು ಕೂಡ ಮಾಡಿದರು. ‘ಪ್ರಭಾಸ್ ಶ್ರಮ ಹಾಕಲ್ಲ, ಅವರಿಗೆ ಆಲಸ್ಯ ಮೈಗೂಡಿದೆ’ ಎಂದೆಲ್ಲ ಟ್ರೋಲ್ ಮಾಡಲಾಗಿತ್ತು. ಈಗ ಆದ ಘಟನೆಯನ್ನು ಇಟ್ಟುಕೊಂಡು ಪ್ರಭಾಸ್ ಫ್ಯಾನ್ಸ್ ಟ್ರೋಲಿಗರಿಗೆ ಉತ್ತರ ನೀಡಿದ್ದಾರೆ.

‘ಪ್ರಭಾಸ್ ಸಿನಿಮಾ ಮಾಡುವಾಗ ಶ್ರಮ ಹಾಕಲ್ಲ ಎಂಬುವವರಿಗೆ ಇದು ಒಳ್ಳೆಯ ಉತ್ತರ. ಪ್ರಭಾಸ್ ಅವರು ಕುದುರೆ ರೈಡ್ ಮಾಡುವಾಗ ಗಾಯಗೊಂಡಿದ್ದಾರೆ. ಶ್ರಮ ಹಾಕೋದಿಲ್ಲ ಎಂದು ಹೇಳುವವರಿಗೆ ಇದಕ್ಕಿಂತ ಹೆಚ್ಚಿನ ಪ್ರೂಫ್ ಬೇಡ ಎಂದು ನಾವು ಭಾವಿಸುತ್ತೇವೆ’ ಎಂದು ಪ್ರಭಾಸ್ ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಇನ್ನು, ಪ್ರಭಾಸ್ ಅವರಿಗೆ ಹೆಚ್ಚಿನ ತೊಂದರೆ ಏನು ಆಗಿಲ್ಲ. ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.ಕೆಲ ದಿನ ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಅವರು ಶೂಟಿಂಗ್​​ಗೆ ಮರಳೋ ಸಾಧ್ಯತೆ ಇದೆ.

ಇದನ್ನೂ ಓದಿ: ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಟಿಯಲ್ಲಿ ಸೂಪರ್ ಹಿಟ್

ಪ್ರಭಾಸ್ ಶೂಟ್ ಮಾಡುತ್ತಿದ್ದ ಸಿನಿಮಾ ‘ಫೌಜಿ’. ಹನು ರಾಘವಪುಡಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ರಾಜಾ ಸಾಬ್’ ಸಿನಿಮಾ ಸಾಕಷ್ಟು ಟ್ರೋಲ್ ಎದುರಿಸಬೇಕಾಯಿತು. ಹೀಗಾಗಿ, ಅವರಿಗೆ ಒಂದು ದೊಡ್ಡ ಕಂಬ್ಯಾಕ್ ಅವಶ್ಯಕತೆ ಇದೆ. ಅವರು ಸಂದೀಪ್ ರೆಡ್ಡಿ ವಂಗ ಅವರ ‘ಸ್ಪಿರಿಟ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೋತು ಸೋತು ಭಾರತದ ಪಾಲಿಗೆ ವಿಶ್ವ ದಾಖಲೆಯಾದ ಪಾಕಿಸ್ತಾನ್

Source link

Daily Devotional: ಅಳಿಲು ಮನೆಯೊಳೆಗೆ ಬಂದರೆ ಅದರ ವಿಶೇಷತೆ ಏನು ಗೊತ್ತಾ? – Kannada News | Daily Devotional: What It Means When a Squirrel Enters Your Home

ಬೆಂಗಳೂರು, ಫೆಬ್ರವರಿ​ 16: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅಳಿಲು ಮನೆಯೊಳೆಗೆ ಬಂದರೆ ಅದರ ವಿಶೇಷತೆ ಏನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ನಂಬಿಕೆಗಳ ಪ್ರಕಾರ, ಅಳಿಲು ಶ್ರೀರಾಮಚಂದ್ರನಿಗೆ ಸಹಾಯ ಮಾಡಿದ ಪವಿತ್ರ ಪ್ರಾಣಿ ಮತ್ತು ಲಕ್ಷ್ಮಿಯ ಸಂಕೇತ ಕೂಡ ಹೌದು. ಅಳಿಲನ್ನು ನೋಡುವುದೇ ಶುಭ. ಆದರೆ ಅದನ್ನು ಸ್ಪರ್ಶಿಸಲು ಹೋಗಬಾರದು. ಅಳಿಲು ಮನೆ ಒಳಕ್ಕೆ ಬಂದರೆ ಶುಭ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ, ದುಷ್ಟ ಜನರ ಸಹವಾಸದಿಂದ ದೂರಾಗಬಹುದು, ಆರ್ಥಿಕವಾಗಿ ಸುಧಾರಣೆಯಾಗುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಅಧಿಕಾರ ಯೋಗವೂ ದೊರೆಯುವ ಸಾಧ್ಯತೆ ಇರುತ್ತದೆ. ಬೆಳಗಿನ ಜಾವ ಅಳಿಲ ದರ್ಶನವಾದರೆ ಆ ದಿನದ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಅಚಾತುರ್ಯದಿಂದ ವಾಹನದಿಂದ ಅಳಿಲಿಗೆ ಹಾನಿಯಾದರೆ, ಶ್ರೀರಾಮಚಂದ್ರನ ಮೆರವಣಿಗೆಯಲ್ಲಿ ಭಾಗವಹಿಸುವುದು ಅಥವಾ ಅನ್ನದಾನ ಮಾಡುವುದು ಸೂಕ್ತ ಪ್ರಾಯಶ್ಚಿತ್ತವಾಗಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today 15 February​: ಇಂದು ಈ ರಾಶಿಯವರಿಗೆ ಹಣಕಾಸು ತೊಂದರೆ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 16, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಚತುರ್ದಶಿ ತಿಥಿಯ ಶ್ರವಣಾ ನಕ್ಷತ್ರದಲ್ಲಿ, ಪ್ರಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ದೈನಂದಿನ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಶನೇಶ್ವರ ಜಯಂತಿ ಮತ್ತು ವಿವಿಧ ಶಿವ ದೇವಾಲಯಗಳಲ್ಲಿ ರಥೋತ್ಸವಗಳು ನಡೆಯುವ ಶುಭ ದಿನವಾಗಿದೆ.

ಗ್ರಹಗಳ ಸ್ಥಾನವನ್ನು ಗಮನಿಸಿದರೆ, ರವಿಯು ಕುಂಭ ರಾಶಿಯಲ್ಲಿದ್ದು, ಚಂದ್ರನು ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ಗ್ರಹಗಳ ಸಂಚಾರವು ಪ್ರತಿ ರಾಶಿಯವರ ಮೇಲೂ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರ ವೃತ್ತಿಜೀವನ, ಆರ್ಥಿಕ ಸ್ಥಿತಿ, ಆರೋಗ್ಯ, ಕುಟುಂಬ ಸಂಬಂಧಗಳು ಮತ್ತು ವೈಯಕ್ತಿಕ ಜೀವನದ ಮೇಲೆ ಈ ದಿನದ ಜ್ಯೋತಿಷ್ಯ ಪರಿಣಾಮಗಳನ್ನು ವಿವರಿಸಿದ್ದಾರೆ.

 

Source link

ಪ್ರಯಾಣಿಕರಿಗೆ ಶಾಕ್ ಕೊಟ್ಟ ಕೆಎಸ್​ಆರ್​ಟಿಸಿ: ಇಂದಿನಿಂದಲೇ ಈ ದರ ಹೆಚ್ಚಳ – Kannada News | KSRTC Luggage Charges Hike from Feb 16: New Rates Rs 6 to 145 Per Kg Beyond 30 Kg Free Limit, Details here

ಕೆಎಸ್​ಆರ್​ಟಿಸಿ ಬಸ್ (ಸಂಗ್ರಹ ಚಿತ್ರ)Image Credit source: tv9

ಬೆಂಗಳೂರು, ಫೆಬ್ರವರಿ 16: ಪ್ರಯಾಣಿಕರ ಮೇಲಿನ ದರ ಏರಿಕೆ ಭಾರ ಹೆಚ್ಚುತ್ತಿರುವ ನಡುವೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮತ್ತೊಂದು ದರ ಏರಿಕೆ ನಿರ್ಧಾರಕ್ಕೆ ಮುಂದಾಗಿದೆ. ಬಸ್‌ಗಳಲ್ಲಿ ಸಾಗಿಸುವ ಲಗೇಜ್‌ ಶುಲ್ಕವನ್ನು ಹೆಚ್ಚಿಸಲಾಗಿದ್ದು, ನೂತನ ದರ ಇಂದಿನಿಂದಲೇ (ಫೆಬ್ರವರಿ 16) ಜಾರಿಗೆ ಬರುತ್ತಿದೆ. ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ ಸಂಸ್ಥೆ, ಪ್ರತಿಯೊಂದು ದರ ಪರಿಷ್ಕರಣೆಯ ನಂತರ ಲಗೇಜ್ ಶುಲ್ಕವನ್ನೂ ಮರುಪರಿಶೀಲನೆ ಮಾಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ ಎಂದು ತಿಳಿಸಿದೆ.

2025ರ ಜನವರಿಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದರೆ, ಲಗೇಜ್ ಶುಲ್ಕವನ್ನು ಆಗ ಪರಿಷ್ಕರಿಸಲಾಗಿರಲಿಲ್ಲ. ಈ ಹಿನ್ನೆಲೆ ಇದೀಗ ಲಗೇಜ್ ದರಗಳನ್ನು ಹೆಚ್ಚಿಸಲಾಗಿದೆ ಎಂದು ಕೆಎಸ್​ಆರ್​ಟಿಸಿ ಸ್ಪಷ್ಟಪಡಿಸಿದೆ.

ಪರಿಷ್ಕೃತ ಲಗೇಜ್ ದರ ಎಷ್ಟು? ಕೆಎಸ್​ಆರ್​ಟಿಸಿ ಕೊಟ್ಟ ಮಾಹಿತಿ ಇಲ್ಲಿದೆ

30 ಕೆಜಿ ವರೆಗೆ ಉಚಿತವಾಗಿ ಲಗೇಜ್ ಸಾಗಿಸಲು ಅವಕಾಶ ಇದೆ. ಹೊಸ ನಿಯಮದ ಪ್ರಕಾರ, ಈ ಮಿತಿಗಿಂತ ಹೆಚ್ಚಿನ ಲಗೇಜ್‌ಗೆ ಪ್ರತಿ ಕೆಜಿಗೆ 6 ರೂಪಾಯಿಯಿಂದ 145 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ. ಪ್ರಯಾಣದ ದೂರ ಮತ್ತು ಸ್ಟೇಜ್​ಗಳ ಆಧಾರದ ಮೇಲೆ ದರ ಬದಲಾಗುತ್ತದೆ. ಕೆಎಸ್‌ಆರ್‌ಟಿಸಿಯಲ್ಲಿ ಒಂದು ಸ್ಟೇಜ್ ಎಂದರೆ ಸುಮಾರು ಆರು ಕಿಲೋಮೀಟರ್ ಎಂದು ಪರಿಗಣಿಸಲಾಗುತ್ತದೆ. ಹಿಂದಿನ ದರಗಳಿಗೆ ಹೋಲಿಸಿದರೆ ಈ ಬಾರಿ ಸುಮಾರು ಶೇ 15 ರಷ್ಟು ದರ ಏರಿಕೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕೊನೆಯದಾಗಿ ಲಗೇಜ್ ಶುಲ್ಕವನ್ನು 2021ರ ಡಿಸೆಂಬರ್‌ನಲ್ಲಿ ಪರಿಷ್ಕರಿಸಲಾಗಿತ್ತು. ಪ್ರಯಾಣಿಕರಿಗೆ ಹಿಂದಿನಂತೆ 30 ಕೆಜಿ ವರೆಗೆ ಉಚಿತ ಲಗೇಜ್ ಸಾಗಿಸಲು ಅವಕಾಶ ಮುಂದುವರಿಯಲಿದೆ.

ಸಾಕು ಪ್ರಾಣಿಗಳ ಸಾಗಾಟಕ್ಕೂ ಅವಕಾಶ!

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಭ್ಯವಿರುವ ಸ್ಥಳದ ಆಧಾರದ ಮೇಲೆ ವಾಶಿಂಗ್ ಮಷೀನ್, ಫ್ರಿಜ್, ಟ್ರಕ್ ಟೈರ್, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಪೈಪ್‌ಗಳು, ಗೃಹೋಪಯೋಗಿ ಪಾತ್ರೆಗಳು ಹಾಗೂ ಬೆಕ್ಕು, ನಾಯಿ, ಮೊಲ ಮುಂತಾದ ಪ್ರಾಣಿಗಳನ್ನು ಸಹ ಸಾಗಿಸಲು ಅವಕಾಶ ಇದೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ಕೆಎಸ್​ಆರ್​ಟಿಸಿ ಬಸ್ ಜಪ್ತಿ! ಪ್ರಯಾಣಿಕರು ಕಂಗಾಲು

ಲಗೇಜ್ ಸಾಗಣೆ ವ್ಯವಸ್ಥೆ 1999ರ ನವೆಂಬರ್ 5ರಿಂದಲೇ ಕೆಎಸ್‌ಆರ್‌ಟಿಸಿಯಲ್ಲಿ ಜಾರಿಯಲ್ಲಿದ್ದು, ಕಾಲಾನುಗುಣವಾಗಿ ಶುಲ್ಕ ಹಾಗೂ ನಿಯಮಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯ’; ದರ್ಶನ್​​ಗೆ ವಿಜಯಲಕ್ಷ್ಮೀ ವಿಶ್ – Kannada News | Darshan Thoogudeepa’s Jail Birthday: Vijayalakshmi’s Emotional Wish Amidst Renukaswamy Case

ದರ್ಶನ್, ವಿಜಯಲಕ್ಷ್ಮೀ ಹಾಗೂ ವಿನೀಶ್

ನಟ ದರ್ಶನ್ (Darshan) ಅವರಿಗೆ ಇಂದು (ಫೆಬ್ರವರಿ 16) ಜನ್ಮದಿನ. ಅವರು ಜೈಲಿನಲ್ಲಿ ಇರುವುದರಿಂದ ಸಂಭ್ರಮಕ್ಕೆ ಅವಕಾಶ ಇಲ್ಲ. ನೆಚ್ಚಿನ ನಟ ಇಲ್ಲ ಎಂಬ ಕೊರಗು ಅಭಿಮಾನಿಗಳಲ್ಲಿ ಎದ್ದು ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ದರ್ಶನ್​​ಗೆ ಅಭಿಮಾನಿಗಳು ಹಾಗೂ ಅವರನ್ನು ಇಷ್ಟಪಡೋ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಅಲ್ಲದೆ, ಕೆಲವರು ಸಾಮಾಜಿಕ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪ್ರೀತಿಯಿಂದ ಪತಿಗೆ ವಿಶ್ ಮಾಡಿದ್ದಾರೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್ ಆದರು. ಅವರು ಆರಂಭದಲ್ಲಿ ಕೆಲ ತಿಂಗಳು ಜೈಲಿನಲ್ಲಿ ಇದ್ದರು. ಆ ಬಳಿಕ ಜಾಮೀನು ಪಡೆದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದರ್ಶನ್ ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿ ಅವರು ತುಂಬಾನೇ ಕಷ್ಟಪಡುತ್ತಿದ್ದಾರೆ.ಈ ಕಷ್ಟ ನೋಡಲು ಅವರ ಅಭಿಮಾನಿಗಳ ಬಳಿ ಸಾಧ್ಯವಾಗುತ್ತಿಲ್ಲ. ಈಗ ಅವರು ಜೈಲಿನಲ್ಲೇ ಜನ್ಮದಿನ ಆಚರಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಸಿಗಲಿಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ

ದರ್ಶನ್ ಅವರು ಜೀವನದಲ್ಲಿ ಮೊದಲ ಬಾರಿಗೆ ಜೈಲಿನಲ್ಲೇ ಬರ್ತ್​​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಹೆಚ್ಚಿನ ಸಂಭ್ರಮಕ್ಕೆ ಅವಕಾಶವಿಲ್ಲ. ವಿಜಯಲಕ್ಷ್ಮೀ ಅವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಆ ಬಳಿಕ ವಿಶೇಷ ಒಪ್ಪಿಗೆ ಪಡೆದು ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಬರುವ ಸಾಧ್ಯತೆ ಇದೆ. ಈ ಮಧ್ಯೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ಇನ್​​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್, ವಿನೀಶ್ ಹಾಗೂ ವಿಜಯಲಕ್ಷ್ಮೀ ಅವರು ಕೇಕ್ ಎದುರು ನಿಂತಿದ್ದಾರೆ. ಈ ಪೋಸ್ಟ್ ಗಮನ ಸೆಳೆದಿದೆ. ದರ್ಶನ್ ಅವರಿಗೆ ಆನೆ ಎಂದರೆ ಇಷ್ಟ. ಹೀಗಾಗಿ, ಕೇಕ್​​ನಲ್ಲಿ ಆನೆಯನ್ನು ಇಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 6:59 am, Mon, 16 February 26

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 16ರ ದಿನಭವಿಷ್ಯ

ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಿ. ತೆಂಗಿನಕಾಯಿ, ಬಾಳೇಹಣ್ಣು, ಊದಿನಕಡ್ಡಿ, ಕರ್ಪೂರ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ ಅರ್ಪಣೆ ಮಾಡಿ. ಅಥವಾ ಮನೆಯಲ್ಲಿಯೇ ಚಂದ್ರಮೌಳೀಶ್ವರ ಸ್ವರೂಪದಲ್ಲಿ ನೆನಪಿಸಿಕೊಂಡು ಇವೆಲ್ಲವನ್ನೂ ಅರ್ಪಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಪರ್ಸನಾಲಿಟಿ ಡೆವಲಪ್ ಮೆಂಟ್ ಸೆಷನ್ ಗಳಲ್ಲಿ ಭಾಗವಹಿಸುವ ನಿರ್ಧಾರ ಮಾಡುತ್ತೀರಿ. ನಿಮ್ಮ ಉದ್ಯೋಗ- ವೃತ್ತಿ ಜೀವನದಲ್ಲಿನ ಬದಲಾವಣೆಗಳು ನಿಧಾನವಾದರೂ ಸ್ಥಿರವಾಗಿ ಆಗಲಿದೆ. ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿನ ತಾಕಲಾಟಗಳಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗಲಿದೆ. ಹಳೆಯ ವಿಚಾರಗಳು ಮತ್ತೆ ನೆನಪಾಗಲಿವೆ, ಆದರೆ ಅವುಗಳಿಂದ ಪಾಠ ಕಲಿಯುವ ಸಮಯ ಇದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೆಲಸದ ವಿಷಯದಲ್ಲಿ ಅತಿಯಾದ ಆತುರ ಬೇಡ; ತಾಳ್ಮೆ ಮತ್ತು ಕ್ರಮಬದ್ಧ ಪ್ರಯತ್ನದಿಂದ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ. ಕುಟುಂಬದ ಒಳಗೆ ಖರ್ಚಿನ ವಿಚಾರದಲ್ಲಿ ಸಣ್ಣ- ಪುಟ್ಟ ಮಾತುಕತೆಗಳು ಆದರೂ ಸಂಯಮದಿಂದ ವರ್ತಿಸಿದರೆ ಸಮಸ್ಯೆಗಳು ಪರಿಹಾರ ಆಗುತ್ತವೆ. ಆರ್ಥಿಕವಾಗಿ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೇ ಈ ದಿನ ನಿಮ್ಮ ಶಕ್ತಿಯಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕುಟುಂಬದೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ಇದೆ. ನಿಮ್ಮ ಆಲೋಚನೆಗಳು ಹೆಚ್ಚು ಗಹನವಾಗಿ ಇರುತ್ತವೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎರಡು ಬಾರಿ ಯೋಚಿಸುವ ನಿಮ್ಮ ಗುಣ ನಿಮಗೆ ಲಾಭ ತರುತ್ತದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಗಮನಿಸಿ, ಪ್ರಮುಖ ಜವಾಬ್ದಾರಿ ವಹಿಸುವಂಥ ಸೂಚನೆ ಸಿಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Exit mobile version