World Refugee Day 2026: ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ – Kannada News | World Refugee Day 2026: Know the history and significance of World Refugee Day

ವಿಶ್ವ ನಿರಾಶ್ರಿತರ ದಿನImage Credit source: Pinterest

ಯುದ್ಧ, ಆರ್ಥಿಕ ಬಿಕ್ಕಟ್ಟು, ರಾಜಕೀಯ ಗಲಭೆ, ಪ್ರಾಕೃತಿಕ ವಿಕೋಪ ಹಾಗೂ ಹಿಂಸಾಚಾರ ಹೀಗೆ ನಾನಾ ಕಾರಣಗಳಿಂದ ಊರು, ದೇಶ ಬಿಟ್ಟು ಹೋಗುವವರೇ ಹೆಚ್ಚು. ಹೀಗೆ ಊರು ಬಿಟ್ಟು ಬೇರೆ ಕಡೆಗೆ ಹೋದವರು ಬದುಕು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದಾರೆ. ಅವರ ಬದುಕು ದಿನನಿತ್ಯ ಹೋರಾಟವಾಗಿದೆ. ಹೀಗಾಗಿ ಅಂತಹವರಿಗೆ ಮೂಲಸೌಕರ್ಯ ಹಾಗೂ ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಲು, ಪುನರ್‌ವಸತಿಯ ಬಗ್ಗೆ ಜಾಗೃತಿ ಮೂಡಿಸಲು ಜೂನ್ 20 ರಂದು ವಿಶ್ವ ನಿರಾಶ್ರಿತರ ದಿನವನ್ನು (World Refugee Day) ಆಚರಿಸಲಾಗುತ್ತಿದೆ.

ವಿಶ್ವ ನಿರಾಶ್ರಿತರ ದಿನದ ಇತಿಹಾಸವೇನು?

ವಿಶ್ವಸಂಸ್ಥೆಯು ಡಿಸೆಂಬರ್ ತಿಂಗಳ ಜೂನ್ 20, 2000 ದಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ಜೂನ್‌ 20 ರಂದು ವಿಶ್ವ ನಿರಾಶ್ರಿತರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಪ್ರತ್ಯೇಕ ಸಂಘಟನೆಯನ್ನು ರಚಿಸಲಾಗಿದೆ. ಈ ಸಂಘಟನೆಯನ್ನು ದಿ ಯುನೈಟೆಡ್‌ ನೇಷನ್ಸ್‌ ಹೈ ಕಮಿಷನರ್ ಎಂದು ಹೆಸರಿಡಲಾಗಿದೆ. ಈ ಸಂಸ್ಥೆಯು ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಸಹಾಯ ಮಾಡಲು, ಅವರಿಗೆ ಬದುಕು ಕಟ್ಟಿಕೊಡಲು ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: International Picnic Day 2026: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ

ವಿಶ್ವ ನಿರಾಶ್ರಿತರ ದಿನದ ಮಹತ್ವವೇನು?

ವಿಶ್ವ ನಿರಾಶ್ರಿತರ ದಿನದಂದು ಈಗಾಗಲೇ ಲಕ್ಷಾಂತರ ನಿರ್ಗತಿಕರು ಆಹಾರ, ಬಟ್ಟೆ, ವಸತಿ, ಕುಟುಂಬ, ಶಿಕ್ಷಣ, ಮತ್ತು ಬದುಕುವ ಹಕ್ಕನ್ನೇ ಕಳೆದುಕೊಂಡವರ ಮೇಲೆ ಬೆಳಕು ಚೆಲ್ಲುವುದು. ನಿರಾಶ್ರಿತರ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವುದು ಈ ದಿನ ಮೂಲ ಉದ್ದೇಶವಾಗಿದೆ. ಈ ದಿನದಂದು ಜಾಗೃತಿ ಕಾರ್ಯಾಗಾರಗಳು, ಶಿಬಿರಗಳು ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ಮೃಗಾಲಯಕ್ಕೆ ಕಳಿಸಿದ್ದೇವೆ ಎಂದಿದ್ದ ನರಭಕ್ಷಕ ಚಿರತೆ ಹನೂರು ಕಾಡಿನಲ್ಲಿ ಪತ್ತೆ; ಅಧಿಕಾರಿಗಳ ವಿರುದ್ಧ ಸೋಲಿಗರು ಗರಂ – Kannada News | Chamarajanagar: Forest Dept’s Man Eater Leopard Release Angers Soliga Tribals

ಚಾಮರಾಜನಗರ, ಜೂ.20: ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಯ ನಡೆಗೆ ಆದಿವಾಸಿ ಸೋಲಿಗರು ಹಾಗೂ ಸ್ಥಳೀಯ ಗ್ರಾಮೀಣ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬೇರೆಡೆ ಸೆರೆ ಹಿಡಿದಿದ್ದ ನರಭಕ್ಷಕ ಚಿರತೆಯೊಂದನ್ನು ತಂದು ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿರುವುದು ಈಗ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೊನ್ನಾಚಿ ಬಳಿಯ ಕಕ್ಕೆಹೊಲ ಗ್ರಾಮದಲ್ಲಿ ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಇಟ್ಟಿತ್ತು. ತಡರಾತ್ರಿ ಈ ಚಿರತೆ ಬೋನಿನಲ್ಲಿ ಲಾಕ್ ಆಗಿದೆ. ಆದರೆ, ಬೋನಿಗೆ ಬಿದ್ದ ಚಿರತೆಯ ಕತ್ತನ್ನು ಪರಿಶೀಲಿಸಿದಾಗ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಅದರ ಕತ್ತಿನಲ್ಲಿ ಕಾಲರ್ ಐಡಿ ಪತ್ತೆಯಾಗಿದೆ.

ಈ ಹಿಂದೆ ತಾಳಬೆಟ್ಟದ ಬಳಿ ಮಂಡ್ಯ ಮೂಲದ ಪಾದಯಾತ್ರಿ ಪ್ರವೀಣ್ ಎಂಬುವವರನ್ನು ಕೊಂದು ತಿಂದಿದ್ದ ನರಭಕ್ಷಕ ಚಿರತೆ ಇದೇ ಆಗಿದೆ. ಈ ಚಿರತೆಯನ್ನು ಈ ಹಿಂದೆ ರಂಗಸ್ವಾಮಿವೊಡ್ಡು ಬಳಿ ಸೆರೆ ಹಿಡಿದು, ಅದರ ಕತ್ತಿಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಅರಣ್ಯಾಧಿಕಾರಿಗಳು ಈ ನರಭಕ್ಷಕ ಚಿರತೆಯನ್ನು ಮೈಸೂರಿನ ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ಸಾರ್ವಜನಿಕರಿಗೆ ಸುಳ್ಳು ಹೇಳಿ, ಅದೇ ನರಭಕ್ಷಕ ಚಿರತೆಯನ್ನು ಗುಟ್ಟಾಗಿ ತಂದು ಪಾಲಾರ್ ಮತ್ತು ಪೊನ್ನಾಚಿ ಕಾಡಿನ ಮಧ್ಯೆ, ಅಂದರೆ ಆದಿವಾಸಿಗಳ ಹಾಡಿಗಳು ಇರುವ ಸೂಕ್ಷ್ಮ ಪ್ರದೇಶದಲ್ಲಿ ಬಿಟ್ಟಿದ್ದಾರೆ ಎಂಬ ಅಸಲಿ ಸತ್ಯ ಈಗ ಬಯಲಾಗಿದೆ.

ಇದನ್ನೂ ಓದಿ: ಹಳಿಗಳ ಮೇಲೆ ಓಡೋ ಲಕ್ಸುರಿ ಹೋಟೆಲ್!: ವೈರಲ್ ಆಯ್ತು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ‘ಫಸ್ಟ್ ಎಸಿ’ ಲುಕ್

ಅರಣ್ಯ ಇಲಾಖೆಯ ಈ ಅಪಾಯಕಾರಿ ನಡೆಗೆ ಕಕ್ಕೆಹೊಲ ಗ್ರಾಮದ ಹಾಗೂ ಸುತ್ತಮುತ್ತಲಿನ ಹಾಡಿಗಳ ಆದಿವಾಸಿ ಸೋಲಿಗರು ಕೆಂಡಾಮಂಡಲವಾಗಿದ್ದಾರೆ. “ನರಭಕ್ಷಕ ಚಿರತೆಯನ್ನು ತಂದು ನಮ್ಮ ಜಾಗದಲ್ಲಿ ಬಿಡುವ ಮೂಲಕ ಅರಣ್ಯ ಸಿಬ್ಬಂದಿ ನಮ್ಮ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾರೆ. ಇವರ ಬೇಜವಾಬ್ದಾರಿತನದಿಂದಾಗಿ ನಮ್ಮ ಜಾನುವಾರುಗಳು ಬಲಿಯಾಗಿವೆ, ನಮಗೂ ಪ್ರಾಣಭಯ ಎದುರಾಗಿತ್ತು” ಎಂದು ಆದಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಅರಣ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾದ ಹೆಲ್ಮೆಟ್ ಧರಿಸಿ ಕಣಕ್ಕಿಳಿದ ಕುಮಾರ್ ಸಂಗಕ್ಕಾರ – Kannada News | Kumar Sangakkara wore Team India’s helmet

ಕ್ರಿಕೆಟ್​ನಲ್ಲಿ ‘ಕ್ಲಾಸ್ ಈಸ್ ಪರ್ಮನೆಂಟ್’ ಎಂಬ ಮಾತಿದೆ. ಇದನ್ನು ಶ್ರೀಲಂಕಾ ಕ್ರಿಕೆಟ್‌ನ ಲೆಜೆಂಡ್ ಕುಮಾರ್ ಸಂಗಕ್ಕಾರ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನ ಸ್ಥಳೀಯ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಕಣಕ್ಕಿಳಿದಿದ್ದ 48 ವರ್ಷದ ಸಂಗಕ್ಕಾರ, ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದರೆ ಈ ಶತಕಕ್ಕಿಂತ ಹೆಚ್ಚು ಸದ್ದು ಟೀಮ್ ಇಂಡಿಯಾದ ಹೆಲ್ಮೆಟ್.

ಅಂದರೆ ಈ ಪಂದ್ಯದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ್ದ ಕುಮಾರ್ ಸಂಗಕ್ಕಾರ ಬಿಸಿಸಿಐ ಲೋಗೋ ಮತ್ತು ಭಾರತದ ತ್ರಿವರ್ಣ ಧ್ವಜವಿರುವ ಹೆಲ್ಮೆಟ್ ಧರಿಸಿದ್ದರು. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೈಸ್ವಾಲ್ ನೀಡಿದ ಉಡುಗೊರೆ:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರ್ ಸಂಗಕ್ಕಾರ ಅವರಿಗೆ ಆರ್​ಆರ್​ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಟೀಮ್ ಇಂಡಿಯಾ ಹೆಲ್ಮೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದೇ ಹೆಲ್ಮೆಟ್ ಧರಿಸಿ ಕುಮಾರ್ ಸಂಗಕ್ಕಾರ ಇಂಗ್ಲೆಂಡ್​ನಲ್ಲಿ ನಡೆದ ಕ್ಲಬ್ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು.

ಭರ್ಜರಿ ಸೆಂಚುರಿ:

ಯುಕೆ ಮೂಲದ ಡೋರ್ಸೆಟ್ ಕೌಂಟಿ ಲೀಗ್‌ನಲ್ಲಿ ಕುಮಾರ್ ಸಂಗಕ್ಕಾರ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದರು. ಬ್ರಾಡ್‌ಸ್ಟೋನ್ ಸಿಸಿ ವಿರುದ್ಧ ನಡೆದ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸಂಗಕ್ಕಾರ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳನ್ನಟ್ಟಿದ್ದಾರೆ.

ಈ ಮೂಲಕ ಕೇವಲ 117 ಎಸೆತಗಳಲ್ಲಿ 16 ಫೋರ್ ಹಾಗೂ 11 ಭರ್ಜರಿ ಸಿಕ್ಸರ್​ಗಳೊಂದಿಗೆ ಕುಮಾರ್ ಸಂಗಕ್ಕಾರ ಅಜೇಯ 168 ರನ್ ಬಾರಿಸಿದ್ದಾರೆ. ಅಂದರೆ ಸಂಗಕ್ಕಾರ ಸಿಕ್ಸ್​-ಫೋರ್​ಗಳ ಮೂಲಕವೇ ಬರೋಬ್ಬರಿ 130 ರನ್ ಚಚ್ಚಿದ್ದರು.

ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಕೈಚಳಕ ತೋರಿದ ಸಂಗಕ್ಕಾರ, ತಮ್ಮ ರೈಟ್-ಆರ್ಮ್ ಆಫ್-ಸ್ಪಿನ್ ಮೂಲಕ 2 ಪ್ರಮುಖ ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ.

ಗೆದ್ದು ಬೀಗಿದ ಶಿಲ್ಲಿಂಗ್‌ಸ್ಟೋನ್:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ಕುಮಾರ್ ಸಂಗಕ್ಕಾರ (168) ಅವರ ಭರ್ಜರಿ ಶತಕದ ನೆರವಿನೊಂದಿಗೆ ನಿಗದಿತ 45 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 289 ರನ್ ಕಲೆಹಾಕಿತು.

ಇದನ್ನೂ ಓದಿ: 12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಭ್ ರಿಎಂಟ್ರಿ!

290 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಬ್ರಾಡ್‌ಸ್ಟೋನ್ ಕ್ರಿಕೆಟ್ ಕ್ಲಬ್ ಪರ ಸೈಮನ್ ಲೀಡ್​ಬೀಟರ್ (53) ಅರ್ಧಶತಕ ಬಾರಿಸಿದರೂ, ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಬ್ರಾಡ್‌ಸ್ಟೋನ್ ಕ್ರಿಕೆಟ್ ಕ್ಲಬ್ 45 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 196 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಶಿಲ್ಲಿಂಗ್‌ಸ್ಟೋನ್ ಕ್ರಿಕೆಟ್ ಕ್ಲಬ್ ತಂಡವು 93 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Source link

ಆರೋಗ್ಯಕರ ಜೀವನ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ – Kannada News | Follow these habits in your morning routine for a healthy life

ಯಾವುದೇ ರೋಗ ರುಜಿನಗಳಿಲ್ಲದೆ ಆರೋಗ್ಯಕರ ಜೀವನ (healthy life) ನಡೆಸಬೇಕು, ಫಿಟ್‌ ಆಂಡ್‌ ಫೈನ್‌ ಆಗಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಅನೇಕರಿಗೆ ಇದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಯಾವಾಗಲೂ ಗಡಿಬಿಡಿಯಲ್ಲೇ ಇರುತ್ತಾರೆ. ಇದು ಖಂಡಿತವಾಗಿಯೂ ಒತ್ತಡವನ್ನು ಉಂಟು ಮಾಡುತ್ತದೆ. ಈ ಒತ್ತಡ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡರ ಮೇಲೂ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು. ಮುಖ್ಯವಾಗಿ ಬೆಳಗಿನ ದಿನಚರಿಯಲ್ಲಿ ಈ ಕೆಲವೊಂದು ಅಭ್ಯಾಸಗಳನ್ನು ಪಾಲಿಸಿ. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಜೀವನವು ಗಮನಾರ್ಹವಾಗಿ ಬದಲಾಗುತ್ತದೆ. ಬೆಳಗಿನ ದಿನಚರಿಯಲ್ಲಿ ಪಾಲಿಸಲೇಬೇಕಾದ ಆ ಅಭ್ಯಾಸಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಆರೋಗ್ಯಕರ ಜೀವನಕ್ಕಾಗಿ ಬೆಳಗಿನ ದಿನಚರಿಯಲ್ಲಿ ಪಾಲಿಸಬೇಕಾದ ಅಭ್ಯಾಸಗಳಿವು:

ಬೆಳಿಗ್ಗೆ ಬೇಗ ಎದ್ದೇಳಿ: ಬೆಳಿಗ್ಗೆ ಬೇಗನೆ ಏಳುವುದು ಕೇವಲ ಅಭ್ಯಾಸವಲ್ಲ, ಬದಲಾಗಿ ಆರೋಗ್ಯಕರ ದಿನಚರಿಯ ಆರಂಭವಾಗಿದೆ. ಇದು ನಿಮ್ಮ ದೇಹವು ಅದರ ನೈಸರ್ಗಿಕ ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಬೆಳಿಗ್ಗೆ ಬೇಗನೆ ಏಳುವುದರಿಂದ ದೇಹವು ಶಕ್ತಿಯಿಂದ ತುಂಬಿರುತ್ತದೆ ಮತ್ತು ನಿಮ್ಮ ಗಮನವೂ ಸ್ಪಷ್ಟವಾಗಿರುತ್ತದೆ, ಆತುರವಿಲ್ಲದೆ ನಿಮ್ಮ ದಿನವನ್ನು ಯೋಜಿಸಲು ಸಮಯ ಸಿಗುತ್ತದೆ, ಇದು ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ.

ನಿಮ್ಮ ಫೋನ್ ಪರಿಶೀಲಿಸಬೇಡಿ: ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಹಾಗಾಗಿ ಅನೇಕರು ಬೆಳಗ್ಗೆ ಎದ್ದ ತಕ್ಷಣವೇ ಫೋನ್‌ ನೋಡಲು ಆರಂಭಿಸುತ್ತಾರೆ. ಈ ಅಭ್ಯಾಸವು ನಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಒತ್ತಡ ಮತ್ತು ನಕಾರಾತ್ಮಕ ಆಲೋಚನೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಬೆಳಿಗ್ಗೆ ಎದ್ದ ತಕ್ಷಣ ಫೋನ್ ಅನ್ನು ಪರಿಶೀಲಿಸುವ ಬದಲು, ಧ್ಯಾನ ಮಾಡಿ ಅಥವಾ ಸಂಗೀತವನ್ನು ಕೇಳಿ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ: ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್‌ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹವು ಒಳಗಿನಿಂದ ಸಕ್ರಿಯಗೊಳ್ಳುತ್ತದೆ.  ಬೆಳಿಗ್ಗೆ ಒಂದು ಲೋಟ ನೀರು ರಾತ್ರಿಯ ನಿರ್ಜಲೀಕರಣವನ್ನು ನಿವಾರಿಸುತ್ತದೆ, ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಜೊತೆಗೆ ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಈ ಅಭ್ಯಾಸ ಚರ್ಮ ಮತ್ತು ಮೂತ್ರಪಿಂಡದ ಆರೋಗ್ಯಕ್ಕೂ ಪ್ರಯೋಜನಕಾರಿ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.

ಇದನ್ನೂ ಓದಿ: ಬೆಳಗ್ಗೆ ಬೇಗ ಏಳುವುದರಿಂದ ನೀವು ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು

ಲಘು ವ್ಯಾಯಾಮ ಅಥವಾ ಯೋಗ ಮಾಡಿ: ಬೆಳಗಿನ ವ್ಯಾಯಾಮವು ದೇಹಕ್ಕೆ ಇಡೀ ದಿನಕ್ಕೆ ಶಕ್ತಿಯನ್ನು ನೀಡುತ್ತದೆ. ಯೋಗ, ಸ್ಟ್ರೆಚಿಂಗ್, ವಾಕಿಂಗ್ ಅಥವಾ ಲಘು ವ್ಯಾಯಾಮವು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದಾಗಿ ನಿಮ್ಮ ಸ್ನಾಯುಗಳು ಸಕ್ರಿಯವಾಗುತ್ತವೆ. ಇದು ದೈಹಿಕ ಸದೃಢತೆಯನ್ನು ಹೆಚ್ಚಿಸುವುದಲ್ಲದೆ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ.

ಧ್ಯಾನ ಮಾಡಿ: ಬೆಳಿಗ್ಗೆ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಈ ಅಭ್ಯಾಸವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಧ್ಯಾನದ ಅಭ್ಯಾಸವು ದಿನವಿಡೀ ಸಕಾರಾತ್ಮಕ ಚಿಂತನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ  ನಿಯಮಿತ ಧ್ಯಾನವು ಭಾವನಾತ್ಮಕ ಸಮತೋಲನವನ್ನು ಸುಧಾರಿಸುತ್ತದೆ.

ಆರೋಗ್ಯಕರ ಉಪಹಾರ ಸೇವಿಸಿ: ಬೆಳಗಿನ ಉಪಾಹಾರವು ನಿಮ್ಮ ದೇಹಕ್ಕೆ ಇಡೀ ದಿನಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ನಿಮ್ಮ ಉಪಾಹಾರದಲ್ಲಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಿ. ಆರೋಗ್ಯಕರ ಉಪಹಾರ ಸೇವಿಸುವುದರಿಂದ ಅತಿಯಾಗಿ ತಿನ್ನುವುದನ್ನು ತಡೆಯಬಹುದು. ಅಲ್ಲದೆ ಆರೋಗ್ಯಕರ ಉಪಹಾರ ಸೇವಿಸುವುದರಿಂದ ತೂಕವೂ ನಿಯಂತ್ರಣದಲ್ಲಿರುತ್ತದೆ, ಆರೋಗ್ಯವೂ ಚೆನ್ನಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ, ರಾತ್ರಿಯಿಡೀ ಕಾಯೋ ಸ್ಥಿತಿ – Kannada News | Koppal Water Crisis: Yere Hanchinal Villagers Struggle for Drinking Water

ಕೊಪ್ಪಳ, ಜೂನ್ 20: ಕೊಪ್ಪಳ ಜಿಲ್ಲೆಯ ಯರೇ ಹಂಚಿನಾಳ ಗ್ರಾಮವು ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಗ್ರಾಮಸ್ಥರ ದೈನಂದಿನ ಬದುಕಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶುದ್ಧ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಕ್ಯಾನ್‌ಗಳನ್ನು ಹಿಡಿದುಕೊಂಡು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿನ ಕುಡಿಯುವ ನೀರಿನ ಘಟಕವೇ ಗ್ರಾಮಸ್ಥರ ಏಕೈಕ ಆಸರೆಯಾಗಿದೆ. ಹೀಗಾಗಿ, ಬಹುತೇಕ ಗ್ರಾಮಸ್ಥರಿಗೆ ಈ ಶುದ್ಧ ಕುಡಿಯುವ ನೀರಿನ ಘಟಕದ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವುದು ದಿನಚರಿಯ ಭಾಗವಾಗಿದೆ.

ಗ್ರಾಮದ ಪ್ರಮುಖ ನೀರಿನ ಮೂಲವಾದ ಕೆರೆಯಲ್ಲಿ ನೀರು ಬಹುತೇಕ ಖಾಲಿಯಾಗಿದೆ. ನೀರಿನ ಕೊರತೆಯು ಈ ಭಾಗದ ಜನರ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಈ ಸಮಸ್ಯೆಯತ್ತ ಗಮನ ಹರಿಸಿ, ಯರೇ ಹಂಚಿನಾಳ ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೌಲಿಂಗ್​ನಲ್ಲಿ ಹೆನ್ರಿ ಮಿಂಚಿಂಗ್: ಬ್ಯಾಟಿಂಗ್​ನಲ್ಲಿ ಹೆನ್ರಿ ಶೈನಿಂಗ್..! – Kannada News | England vs New Zealand, 2nd Test: 3rd Day Highlights

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 391 ರನ್ ಪೇರಿಸಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಬೆನ್ ಡೆಕೆಟ್ 36 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಜೇಕಬ್ ಬೆಥೆಲ್ ಕೇವಲ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಜೋ ರೂಟ್ 46 ರನ್​ಗಳ ಕೊಡುಗೆ ನೀಡಿದರೆ, ಹ್ಯಾರಿ ಬ್ರೂಕ್ 24 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಮ್ಯಾಟ್ ಹೆನ್ರಿ ಮಿಂಚಿಂಗ್:

ಜೋ ರೂಟ್ ವಿಕೆಟ್ ಕಬಳಿಸುವ ಮೂಲಕ ವಿಕೆಟ್ ಖಾತೆ ತೆರೆದ ಮ್ಯಾಟ್ ಹೆನ್ರಿ ಕರಾರುವಾಕ್ ದಾಳಿಯೊಂದಿಗೆ ಗಮನ ಸೆಳೆದರು. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಕಾಡಿದ ಹೆನ್ರಿ 24 ಓವರ್​ಗಳಲ್ಲಿ 80 ರನ್ ನೀಡಿ 5 ವಿಕೆಟ್ ಉರುಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ​ 291 ರನ್​ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ಹೆನ್ರಿ ನಿಕೋಲ್ಸ್ ಶೈನಿಂಗ್:

ಮೊದಲ ಇನಿಂಗ್ಸ್​ನಲ್ಲಿನ 100 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಆರಂಭದಲ್ಲೇ ಟಾಮ್ ಲ್ಯಾಥಮ್ (4) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಡೆವೊನ್ ಕಾನ್ವೆ (11) ಕೂಡ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಹೆನ್ರಿ ನಿಕೋಲ್ಸ್ ತಾಳ್ಮೆಯುತ ಬ್ಯಾಟಿಂಗ್​ನೊಂದಿಗೆ ನ್ಯೂಝಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಲ್ಲದೆ ಕ್ರೀಸ್ ಕಚ್ಚಿ ನಿಂತು ಇಂಗ್ಲೆಂಡ್ ವೇಗಿಗಳನ್ನು ಕಾಡಿದ ನಿಕೋಲ್ಸ್ ಆಕರ್ಷಕ ಫೋರ್​ಗಳೊಂದಿಗೆ ಇನಿಂಗ್ಸ್ ಕಟ್ಟಿದರು.

ಅದರಂತೆ ಮೂರನೇ ದಿನದಾಟದ ಅಂತ್ಯದವರೆಗೆ ಬ್ಯಾಟ್ ಬೀಸಿದ ಹೆನ್ರಿ ನಿಕೋಲ್ಸ್ 164 ಎಸೆತಗಳಲ್ಲಿ 16 ಫೋರ್​ಗಳೊಂದಿಗೆ ಅಜೇಯ 119 ರನ್​ ಬಾರಿಸಿದ್ದಾರೆ. ಹೆನ್ರಿಯ ಈ ಭರ್ಜರಿ ಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನಿಂಗ್ಸ್​ನಲ್ಲಿ 3 ವಿಕೆಟ್ ಕಳೆದುಕೊಂಡು 252 ರನ್​ ಕಲೆಹಾಕಿದೆ.

ಕಿವೀಸ್ ಪಡೆಗೆ ಭರ್ಜರಿ ಮುನ್ನಡೆ:

ಮೊದಲ ಇನಿಂಗ್ಸ್​ನಲ್ಲಿ 100 ರನ್​ಗಳ ಪಡೆದುಕೊಂಡಿದ್ದ ನ್ಯೂಝಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 252 ರನ್​ ಕಲೆಹಾಕಿ 352 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ನಾಲ್ಕನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಮುಂದುವರೆಸಿ ಬೃಹತ್ ಮೊತ್ತ ಕಲೆಹಾಕುವ ಸಾಧ್ಯತೆಯಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಕೊನೆಯ ದಿನದಾಟದಲ್ಲಿ ಕಠಿಣ ಗುರಿ ನೀಡಲು ಪ್ಲ್ಯಾನ್ ರೂಪಿಸಲಿದ್ದಾರೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಎಮಿಲಿಯೊ ಗೇ , ಜೇಕಬ್ ಬೆಥೆಲ್ , ಜೋ ರೂಟ್ (ನಾಯಕ) , ಹ್ಯಾರಿ ಬ್ರೂಕ್ ,
ಜೇಮ್ಸ್ ರೆವ್ (ವಿಕೆಟ್ ಕೀಪರ್) , ಜೋರ್ಡನ್ ಕಾಕ್ಸ್ , ಜೋಫ್ರಾ ಆರ್ಚರ್ , ಜೋಶ್ ಟಂಗ್ , ಮ್ಯಾಥ್ಯೂ ಫಿಶರ್ , ಸೋನಿ ಬೇಕರ್.

ಇದನ್ನೂ ಓದಿ: 12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಭ್ ರಿಎಂಟ್ರಿ!

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡೆರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ , ವಿಲಿಯಂ ಒರೋಕ್.

Source link

Shani Dosha Relief: ಶನಿವಾರದಂದು ಯಾವ ಮರವನ್ನು ಪೂಜಿಸುವುದು ಶುಭ? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | Saturday Tree Worship: Peepal & Shami for Shani Dosha Relief and Prosperity in Hinduism

ಶನಿವಾರದಂದು ಯಾವ ಮರವನ್ನು ಪೂಜಿಸುವುದು ಶುಭImage Credit source: iStock

ಹಿಂದೂ ಸನಾತನ ಧರ್ಮದಲ್ಲಿ ಪ್ರಕೃತಿ ಆರಾಧನೆಗೆ ಅತ್ಯುನ್ನತ ಸ್ಥಾನವಿದೆ. ಪ್ರಾಚೀನ ಕಾಲದಿಂದಲೂ ಗಿಡ-ಮರಗಳು, ನದಿ-ಪರ್ವತಗಳನ್ನು ದೈವಿಕ ಶಕ್ತಿಯ ಸಂಕೇತವೆಂದು ಪೂಜಿಸಲಾಗುತ್ತಿದೆ. ಪ್ರಕೃತಿಯ ಪ್ರತಿಯೊಂದು ಅಂಶದಲ್ಲೂ ದೇವರನ್ನು ಕಾಣುವ ಭಕ್ತರು, ಪವಿತ್ರ ಮರ-ಗಿಡಗಳಲ್ಲಿ ದೈವಿಕ ಶಕ್ತಿ ನೆಲೆಸಿದೆ ಎಂದು ಬಲವಾಗಿ ನಂಬುತ್ತಾರೆ.

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ವಾರದ ಏಳು ದಿನಗಳಲ್ಲಿ ಆಯಾ ದಿನಕ್ಕೆ ಸಂಬಂಧಿಸಿದ ನಿರ್ದಿಷ್ಟ ಮರಗಳನ್ನು ಪೂಜಿಸುವುದರಿಂದ ಜಾತಕದ ದೋಷಗಳು ನಿವಾರಣೆಯಾಗಿ, ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ವಿಶೇಷವಾಗಿ ಶನಿವಾರದಂದು ಶನಿದೇವನ ಕೃಪೆಗೆ ಪಾತ್ರರಾಗಲು ಮತ್ತು ಕಷ್ಟಗಳಿಂದ ಪಾರಾಗಲು ಅರಳಿ ಮರ (ಅಶ್ವತ್ಥ ಮರ) ಮತ್ತು ಶಮಿ ಮರ (ಬನ್ನಿ ಮರ) ಗಳನ್ನು ಪೂಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

ಅರಳಿ ಮರ (ಅಶ್ವತ್ಥ ವೃಕ್ಷ)ದ ಪೂಜೆ ಮತ್ತು ಮಹತ್ವ:

ಸನಾತನ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಅಗ್ರಸ್ಥಾನವಿದೆ. ಶಾಸ್ತ್ರಗಳ ಪ್ರಕಾರ, ಈ ಪವಿತ್ರ ಮರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿದ್ದಾರೆ. ಅಷ್ಟೇ ಅಲ್ಲದೆ, ಸಾಕ್ಷಾತ್ ಲಕ್ಷ್ಮಿ ದೇವಿ ಹಾಗೂ ಪಿತೃದೇವತೆಗಳ ವಾಸಸ್ಥಾನವೂ ಇದಾಗಿದೆ ಎಂಬ ನಂಬಿಕೆಯಿದೆ. ಶನಿವಾರದಂದು ಮುಂಜಾನೆ ಸ್ನಾನ ಮಾಡಿ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದು ಅತ್ಯಂತ ಪುಣ್ಯದಾಯಕ. ಸಂಜೆಯ ವೇಳೆ ಅರಳಿ ಮರದ ಕೆಳಗೆ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದರಿಂದ ಜಾತಕದಲ್ಲಿ ಕಾಡುವ ತೀವ್ರವಾದ ಶನಿ ದೋಷ (ಏಳೂವರೆ ಶನಿ, ಅಷ್ಟಮ ಶನಿ ಇತ್ಯಾದಿ) ಹಾಗೂ ಪಿತೃ ದೋಷಗಳು ನಿವಾರಣೆಯಾಗುತ್ತವೆ. ಇದರಿಂದ ಆರ್ಥಿಕ ಮುಗ್ಗಟ್ಟು ದೂರವಾಗಿ, ಮನೆಯಲ್ಲಿ ಸಂಪತ್ತು ಮತ್ತು ಮಾನಸಿಕ ಶಾಂತಿ ನೆಲೆಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಶಮಿ ಮರ (ಬನ್ನಿ ಮರ)ದ ಪೂಜೆ:

ಶಮಿ ಅಥವಾ ಬನ್ನಿ ಮರವು ಶನಿದೇವನಿಗೆ ಅತ್ಯಂತ ಪ್ರಿಯವಾದ ಮರವಾಗಿದೆ. ಮಹಾಭಾರತದ ಕಾಲದಿಂದಲೂ ಶಮಿ ವೃಕ್ಷದ ಪೂಜೆಗೆ ವಿಶೇಷವಾದ ಪ್ರಾಶಸ್ತ್ಯವಿದೆ. ಶನಿವಾರದಂದು ಶಮಿ ಮರಕ್ಕೆ ನೀರು ಎರೆದು ಪೂಜಿಸುವುದರಿಂದ ಶನಿ ದೇವನು ಪ್ರಸನ್ನನಾಗುತ್ತಾನೆ. ವಿಘ್ನಗಳು ದೂರವಾಗಿ, ಕೈಹಾಕಿದ ಪ್ರತಿ ಕೆಲಸಗಳಲ್ಲೂ ಯಶಸ್ಸು ಲಭಿಸುತ್ತದೆ. ವೃತ್ತಿಜೀವನದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುವುದರ ಜೊತೆಗೆ, ವಾಸ್ತು ದೋಷಗಳ ನಿವಾರಣೆಗೂ ಶಮಿ ವೃಕ್ಷದ ಪೂಜೆ ಅತ್ಯುತ್ತಮ ಮಾರ್ಗವಾಗಿದೆ.

ಪ್ರಕೃತಿಯ ಒಡನಾಟದಲ್ಲಿ ಭಗವಂತನನ್ನು ಕಾಣುವ ಈ ಪದ್ಧತಿಯು ಕೇವಲ ಆಧ್ಯಾತ್ಮಿಕ ಶಾಂತಿಯನ್ನು ಮಾತ್ರವಲ್ಲದೆ, ಮರಗಳನ್ನು ಬೆಳೆಸಿ ಸಂರಕ್ಷಿಸುವ ಪರಿಸರ ಕಾಳಜಿಯನ್ನೂ ಎತ್ತಿ ತೋರಿಸುತ್ತದೆ. ಶ್ರದ್ಧೆ ಮತ್ತು ಭಕ್ತಿಯಿಂದ ಈ ಮರಗಳನ್ನು ಆರಾಧಿಸುವ ಮೂಲಕ ಶನಿವಾರದ ದಿನವನ್ನು ಮತ್ತಷ್ಟು ಮಂಗಳಕರವನ್ನಾಗಿಸಿಕೊಳ್ಳಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಭ್ ರಿಎಂಟ್ರಿ! – Kannada News | Rishabh Pant will be joining Delhi Capitals at 15cr

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಹರಾಜಿಗೂ ಮುನ್ನವೇ ಬಿಗ್ ಟ್ರೇಡ್ ನಡೆದಿರುವುದು ಖಚಿತವಾಗಿದೆ. ಈ ಟ್ರೇಡಿಂಗ್ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕ ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳುತ್ತಿದ್ದಾರೆ. ಅಂದರೆ ಐಪಿಎಲ್ 2027 ರಲ್ಲಿ ರಿಷಭ್ ಡಿಸಿ ಪರ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ​​. (PC: IPL)

ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಟ್ರೇಡ್ ನಡೆದಿದ್ದು, ಈ ಟ್ರೇಡಿಂಗ್​ನಲ್ಲಿ ರಿಷಭ್ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿಸಿದೆ. ಅದು ಕೂಡ ಭಾರೀ ವೇತನ ಕಡಿತದೊಂದಿಗೆ ಎಂಬುದು ವಿಶೇಷ. (PC: IPL)

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್  ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿತ್ತು. ದಾಖಲೆಯ ಮೊತ್ತಕ್ಕೆ ಎಲ್​ಎಸ್​ಜಿ ಪಾಲಾಗಿದ್ದ ಪಂತ್ ಇದೀಗ ತಮ್ಮ ಹಳೆಯ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. (PC: IPL)

ಹೀಗೆ ಹಳೆಯ ತಂಡಕ್ಕೆ ಪಂತ್ ರಿಎಂಟ್ರಿ ಕೊಡುತ್ತಿರುವುದು ಬರೋಬ್ಬರಿ 12 ಕೋಟಿ ರೂಪಾಯಿಗಳ ವೇತನ ಕಡಿತದೊಂದಿಗೆ ಎಂಬುದು ವಿಶೇಷ. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಪಂತ್​ಗೆ 15 ಕೋಟಿ ರೂ. ನೀಡುವುದಾಗಿ ತಿಳಿಸಿದ್ದು, ಈ ಡೀಲ್​ಗೆ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. (PC: IPL)

ಕಳೆದೆರಡು ಸೀಸನ್​ಗಳಲ್ಲಿ 27 ಕೋಟಿ ರೂ. ಪಡೆದಿದ್ದ ರಿಷಭ್ ಪಂತ್ ಮುಂದಿನ ಸೀಸನ್​ನಲ್ಲಿ 15 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಅಂದರೆ ಪಂತ್ ಡೀಲ್ ಕುದುರಿಸಿಕೊಳ್ಳಲು ಬರೋಬ್ಬರಿ 12 ಕೋಟಿ ರೂ. ವೇತನ ಕಡಿತ ಮಾಡಿಕೊಂಡಿದ್ದಾರೆ. (PC: IPL)

ಸದ್ಯ ಈ ಟ್ರೇಡ್ ಪ್ರಕ್ರಿಯೆ ಮುಗಿದಿದ್ದು, ಅಧಿಕೃತ ದಾಖಲೆಗಳನ್ನು ಬಿಸಿಸಿಐ  ಮತ್ತು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಕೆ ಮಾಡಲಾಗಿದೆ. ಇನ್ನು ಬಿಸಿಸಿಐ ಹಾಗೂ ಐಪಿಎಲ್ ಮಂಡಳಿ ಅಂತಿಮ ಒಪ್ಪಿಗೆ ನೀಡಿದ ಬೆನ್ನಲ್ಲೇ ರಿಷಭ್ ಪಂತ್ ಅವರ ಡೆಲ್ಲಿ ಕ್ಯಾಪಿಟಲ್ಸ್​ ರಿಂಟ್ರಿಯು ಅಧಿಕೃತವಾಗಲಿದೆ.  (PC: IPL)

Published On – 8:39 am, Sat, 20 June 26

Source link

ಬ್ರೇಕಪ್​ನಲ್ಲಿ ಕೊನೆ ಆಯ್ತು ಧನುಷ್-ಮೃಣಾಲ್ ಪ್ರೀತಿ? – Kannada News | Dhanush Mrunal Thakur Breakup? Unpacking Their Rumored Relationship and Why It Ended

ಕಾಲಿವುಡ್ ಸೂಪರ್‌ಸ್ಟಾರ್ ಧನುಷ್ (Dhanush) ಹಾಗೂ ಬಾಲಿವುಡ್ ಜೊತೆಗೆ ಸೌತ್‌ನಲ್ಲೂ ಮಿಂಚುತ್ತಿರುವ ನಟಿ ಮೃಣಾಲ್ ಠಾಕೂರ್ ಕಳೆದ ಕೆಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಗಾಸಿಪ್ ಗಲ್ಲಿ ಗಲ್ಲಿಯಲ್ಲಿ ಹರಿದಾಡಿತ್ತು. ಆದರೆ, ಈಗ ಈ ಜೋಡಿಯ ಅಭಿಮಾನಿಗಳಿಗೆ ನಿರಾಸೆಯಾಗುವಂತಹ ಸುದ್ದಿಯೊಂದು ಹೊರಬಿದ್ದಿದ್ದು, ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ಮೃಣಾಲ್ ‘ನಾವು ಪ್ರೀತಿಸುತ್ತಿಲ್ಲ’ ಎಂದೇ ಹೇಳುತ್ತಿದ್ದರು.

2025ರ ಆಗಸ್ಟ್‌ನಲ್ಲಿ ಮೃಣಾಲ್ ಅಭಿನಯದ ‘ಸನ್ ಆಫ್ ಸರ್ದಾರ್ 2’ ಚಿತ್ರದ ಪ್ರೀಮಿಯರ್ ಶೋನಲ್ಲಿ ಧನುಷ್ ಮತ್ತು ಮೃಣಾಲ್ ಒಟ್ಟಿಗೆ ಕಾಣಿಸಿಕೊಂಡಾಗ ಇವರಿಬ್ಬರ ಡೇಟಿಂಗ್ ವದಂತಿ ಮೊದಲ ಬಾರಿಗೆ ರೆಕ್ಕೆಪುಕ್ಕ ಪಡೆದುಕೊಂಡಿತ್ತು. ಇದಕ್ಕೂ ಮುನ್ನ ಧನುಷ್ ನಟನೆಯ ‘ತೇರೆ ಇಷ್ಕ್ ಮೇ’ ಸಿನಿಮಾದ ಶೂಟಿಂಗ್ ಮುಕ್ತಾಯದ ಪಾರ್ಟಿಯಲ್ಲೂ ಮೃಣಾಲ್ ಭಾಗವಹಿಸಿ ಎಲ್ಲರ ಹುಬ್ಬೇರಿಸಿದ್ದರು. ಇಷ್ಟೇ ಅಲ್ಲದೆ, ಮೃಣಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಧನುಷ್ ಅವರ ಸಹೋದರಿಯರಾದ ಡಾ. ಕಾರ್ತಿಕಾ ಮತ್ತು ವಿಮಲಾ ಗೀತಾ ಅವರನ್ನು ಫಾಲೋ ಮಾಡುತ್ತಿದ್ದುದು ಇವರಿಬ್ಬರ ನಡುವಿನ ಆತ್ಮೀಯತೆಗೆ ಸಾಕ್ಷಿಯಾಗಿತ್ತು.

ಫಿಲ್ಮ್‌ಫೇರ್ ವರದಿಯ ಪ್ರಕಾರ, ಧನುಷ್ ಮತ್ತು ಮೃಣಾಲ್ ತಮಗಿದ್ದ ಪ್ರೇಮ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಸ್ಟಾರ್ ಜೋಡಿಯ ಮುನಿಸಿಗೆ ಅಥವಾ ಬ್ರೇಕಪ್‌ಗೆ ಅಸಲಿ ಕಾರಣ ಏನು ಎಂಬುದು ಸದ್ಯಕ್ಕೆ ಯಾರಿಗೂ ತಿಳಿದುಬಂದಿಲ್ಲ.

ಈ ಹಿಂದೆ ಆಪ್ತ ಮೂಲಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದವು. ‘ಹೌದು, ಅವರಿಬ್ಬರೂ ಡೇಟಿಂಗ್ ಮಾಡುತ್ತಿರುವುದು ನಿಜ. ಆದರೆ ಇದು ಆರಂಭಿಕ ಹಂತದಲ್ಲಿದೆ. ತಮ್ಮ ಮೌಲ್ಯಗಳು ಮತ್ತು ಆಲೋಚನೆಗಳಲ್ಲಿ ಇಬ್ಬರೂ ಒಂದೇ ತರಹ ಇರುವುದರಿಂದ ಸ್ನೇಹಿತರು ಇವರ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಆದರೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ಅವರು ಇಷ್ಟಪಡುತ್ತಿಲ್ಲ’ ಎಂದು ತಿಳಿಸಿದ್ದವು. ಆದರೆ, ಮೃಣಾಲ್ ಮಾತ್ರ ಕಳೆದ ವರ್ಷ ಈ ಬಗ್ಗೆ ಸ್ಪಷ್ಟನೆ ನೀಡಿ, ಧನುಷ್ ತಮಗೆ ‘ಕೇವಲ ಒಳ್ಳೆಯ ಸ್ನೇಹಿತ ಅಷ್ಟೇ’ ಎಂದಿದ್ದರು.

ವೈರಲ್ ಆಗಿತ್ತು ಮದುವೆಯ ಫೋಟೋಗಳು!

ಇದೇ ವರ್ಷದ ಫೆಬ್ರವರಿಯಲ್ಲಿ ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಭಾರಿ ಸದ್ದು ಮಾಡಿತ್ತು. ದಕ್ಷಿಣ ಭಾರತದ ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಧನುಷ್-ಮೃಣಾಲ್ ಇರುವ ‘ಎಐ’ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ನಂತರ ಚಿತ್ರರಂಗದ ಆಪ್ತರು ಇದೊಂದು ಸುಳ್ಳು ವದಂತಿ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಧನುಷ್ ನಟನೆಯ ‘ಓಂ’ ಚಿತ್ರದಲ್ಲಿ ‘ಪುಷ್ಪ’ ಸಿನಿಮಾದ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ

ಧನುಷ್ ಅವರ ಮೊದಲ ಮದುವೆ:

ಧನುಷ್ ಅವರು ಈ ಹಿಂದೆ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು ವಿವಾಹವಾಗಿದ್ದರು. 18 ವರ್ಷ ಸಂಸಾರ ನಡೆಸಿದ್ದ ಈ ದಂಪತಿ 2022ರಲ್ಲಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಡುವುದಾಗಿ ಘೋಷಿಸಿದ್ದರು. ಈ ದಂಪತಿಗೆ ಯಾತ್ರಾ ಮತ್ತು ಲಿಂಗಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಏರ್‌ಪೋರ್ಟ್ ಪ್ರಯಾಣಿಕರೇ ಎಚ್ಚರ: ಬೆಂಗಳೂರಿನಲ್ಲಿ ರೈಡರ್‌ಗಳ ವಂಚಿಸಲು ನಕಲಿ ಕ್ಯಾಬ್ ಆ್ಯಪ್ ಬಳಸ್ತಿದ್ದಾರೆ ಚಾಲಕರು! – Kannada News | Bengaluru Airport Cab Scam: Drivers Using Fake Cloned Apps of Uber and Rapido to Inflate Fares Warning Issued

ಬೆಂಗಳೂರು, ಜೂನ್ 20: ಬೆಂಗಳೂರಿನ (Bengaluru) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಆವರಣದಲ್ಲಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹೊಸ ಮಾದರಿಯ ವಂಚನೆ ಜಾಲವೊಂದು ಸಕ್ರಿಯವಾಗಿರುವುದಾಗಿ ವರದಿಯಾಗಿದೆ. ಓಲಾ, ಉಬರ್ ಮತ್ತು ರ‍್ಯಾಪಿಡೋ ನಂತಹ ಪ್ರಮುಖ ರೈಡ್ ಬುಕಿಂಗ್ ಆ್ಯಪ್‌ಗಳ ರೀತಿಯೇ ಕಾಣುವ ನಕಲಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೆಲವು ಚಾಲಕರು ಬಳಸುತ್ತಿದ್ದು, ಪ್ರಯಾಣದ ಕೊನೆಯಲ್ಲಿ ಗ್ರಾಹಕರಿಗೆ ದುಪ್ಪಟ್ಟು ದರದ ಬಿಲ್ ತೋರಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಾಂಶಗಳು

  • ನಕಲಿ ಆ್ಯಪ್ ಬಳಸಿ ದುಪ್ಪಟ್ಟು ದರ ವಸೂಲಿ.
  • ಏರ್‌ಪೋರ್ಟ್ ಪ್ರಯಾಣಿಕರೇ ವಂಚಕರ ಮುಖ್ಯ ಟಾರ್ಗೆಟ್.
  • ರ‍್ಯಾಪಿಡೋ ಹಾಗೂ ಉಬರ್ ಸಂಸ್ಥೆಗಳಿಂದ ತನಿಖೆ.

400 ರಿಂದ 700 ರೂ.ವರೆಗೆ ಹೆಚ್ಚುವರಿ ವಸೂಲಿ

ಇತ್ತೀಚೆಗೆ ವಿಮಾನ ನಿಲ್ದಾಣದಿಂದ ಮಲ್ಲೇಶ್ವರಂಗೆ ರ‍್ಯಾಪಿಡೋ ಮೂಲಕ ಪ್ರಯಾಣಿಸಿದ ಪ್ರತೀಕ್ ಎನ್ (38) ಎಂಬ ಪ್ರಯಾಣಿಕರು ಈ ವಂಚನೆಗೆ ಒಳಗಾಗಿದ್ದಾರೆ. ಅವರ ಆ್ಯಪ್‌ನಲ್ಲಿ 720 ರೂ. ದರ ತೋರಿಸಿದ್ದರೆ, ಚಾಲಕನ ಫೋನ್‌ನಲ್ಲಿದ್ದ ನಕಲಿ ಆ್ಯಪ್‌ನಲ್ಲಿ ಬರೋಬ್ಬರಿ 1,110 ರೂ. ಬಿಲ್ ತೋರಿಸಿತ್ತು. ವಿಮಾನ ನಿಲ್ದಾಣದ ಪಾರ್ಕಿಂಗ್ ಶುಲ್ಕ ಹೆಚ್ಚಳ ಹಾಗೂ ಟ್ರಾಫಿಕ್ ನೆಪ ಒಡ್ಡಿ ಚಾಲಕ ಹೆಚ್ಚುವರಿ ಹಣ ವಸೂಲಿ ಮಾಡಿದ್ದಾಗಿ ಪ್ರತೀಕ್ ದೂರಿದ್ದಾರೆ ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ವರದಿ ಮಾಡಿದೆ.

ಇದೇ ರೀತಿ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದ ಮತ್ತೊಬ್ಬ ಪ್ರಯಾಣಿಕನಿಗೆ 1,330 ರೂ. ಬದಲಾಗಿ 2,000 ರೂಪಾಯಿಗೂ ಅಧಿಕ ದರ ತೋರಿಸಿ ವಂಚಿಸಲು ಯತ್ನಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ವಂಚನೆ ಜಾಲದ ಅಸಲಿ ತಂತ್ರ ಏನು?

ಈ ನಕಲಿ ಆ್ಯಪ್ ದೋಖಾ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಬಿಚ್ಚಿಟ್ಟಿದ್ದಾರೆ. ಚಾಲಕರು ಮೊದಲು ಸಾಮಾನ್ಯ ಆ್ಯಪ್‌ನಲ್ಲಿ ರೈಡ್ ಬುಕ್ ಮಾಡಿಕೊಂಡು, ಗ್ರಾಹಕರಿಂದ ಒಟಿಪಿ (OTP) ಪಡೆದು ರೈಡ್ ಸ್ಟಾರ್ಟ್ ಮಾಡುತ್ತಾರೆ. ಇದೇ ವೇಳೆ ತಮ್ಮ ಫೋನ್‌ನಲ್ಲಿರುವ ಮತ್ತೊಂದು ನಕಲಿ ಆ್ಯಪ್ ಅನ್ನೂ ರನ್ ಮಾಡುತ್ತಾರೆ. ಈ ನಕಲಿ ಆ್ಯಪ್‌ಗಳ ವಿನ್ಯಾಸ ತದ್ರೂಪು ಉಬರ್ ಅಥವಾ ರ‍್ಯಾಪಿಡೋದಂತೆಯೇ ಇರುತ್ತದೆ. ಇನ್ನು ಕೆಲವರು ಮೊದಲೇ ಎಡಿಟ್ ಮಾಡಿಟ್ಟುಕೊಂಡ ಹೆಚ್ಚಿನ ದರದ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ಜನರನ್ನು ನಂಬಿಸುತ್ತಾರೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಯೂನಿಯನ್ ವತಿಯಿಂದ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದೂ ತಿಳಿಸಿದ್ದಾರೆ.

ಅನುಮಾನ ಬಂದರೆ ಪ್ರಯಾಣಿಕರು ಏನು ಮಾಡಬೇಕು?

ಈ ಕುರಿತು ಪ್ರತಿಕ್ರಿಯಿಸಿರುವ ರ‍್ಯಾಪಿಡೋ ವಕ್ತಾರರು, ಇಂತಹ ದೂರುಗಳು ಕೇವಲ ವಿಮಾನ ನಿಲ್ದಾಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದಿದ್ದಾರೆ. ದೂರು ಬಂದ ತಕ್ಷಣ ತನಿಖೆ ನಡೆಸಿ ಗ್ರಾಹಕರಿಗೆ ಹಣ ಮರುಪಾವತಿ ಮಾಡಲಾಗುತ್ತಿದ್ದು, ವಂಚಕ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಗ್ರಾಹಕರು ತಮ್ಮದೇ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸುವ ದರವನ್ನು ಮಾತ್ರ ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ. ಉಬರ್ ಸಂಸ್ಥೆಯು ಸಹ ಪ್ರಯಾಣಿಕರು ಇಂತಹ ದರ ವ್ಯತ್ಯಾಸಗಳು ಕಂಡುಬಂದಲ್ಲಿ ತಕ್ಷಣವೇ ಅಪ್ಲಿಕೇಶನ್‌ನಲ್ಲಿರುವ 24×7 ಹೆಲ್ಪ್‌ಲೈನ್ ಮೂಲಕ ಕೇವಲ 30 ಸೆಕೆಂಡುಗಳಲ್ಲಿ ನೆರವು ಪಡೆಯಬಹುದು ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮಹಿಳೆಯರೇ, ಇನ್ಮುಂದೆ ಉಚಿತವಾಗಿ ಬಸ್ಸಲ್ಲಿ ಹೋಗ್ಬೇಕಿದ್ರೆ ವೋಟರ್ ಐಡಿ ಬೇಕೇಬೇಕು! ಶಕ್ತಿ ಯೋಜನೆ ದುರ್ಬಳಕೆ ತಡೆಗೆ ಸರ್ಕಾರ ಕ್ರಮ

ವಿಮಾನ ನಿಲ್ದಾಣದ ಆಪರೇಟರ್ (BIAL) ಸಂಸ್ಥೆಯು ಸಾರ್ವಜನಿಕರು ಕೇವಲ ಅಧಿಕೃತ 8 ಕ್ಯಾಬ್ ಪಾಲುದಾರರ ಸೇವೆಗಳನ್ನು ಮಾತ್ರ ಬಳಸುವಂತೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version