ಸ್ವಚ್ಛತಾ ಅಭಿಯಾನ: ರಸ್ತೆಯಲ್ಲಿ ಕಸಗುಡಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ – Kannada News | Nirmala Sitharaman Participates in Cleanliness Drive, Sweeps Streets

ಬೆಂಗಳೂರು, ಜೂನ್​ 14: ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ ಭಾಗಿಯಾಗಿದ್ದು, ಮಾಸ್ಕ್, ಗ್ಲೌಸ್ ಹಾಕಿ ಕಸ ಗುಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಳಿಕ ತಳ್ಳುವ ತರಕಾರಿ ಗಾಡಿ ವ್ಯಾಪಾರಿಗಳ ಬಳಿ ಮಾತನಾಡಿದ ಸಚಿವರು, ಕೇಂದ್ರ ಯೋಜನೆಯಡಿ ಲೋನ್ ಸಂಬಂಧ ವಿಚಾರಿಸಿದ್ದಾರೆ. ಈ ವೇಳೆ ನಮಗೆ ಲೋನ್ ಕೊಡಿಸಿ ಎಂದು ವ್ಯಾಪಾರಿಗಳು ಸಚಿವರನ್ನು ಆಗ್ರಹಿಸಿದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಕಾಲಾ ಹಿರಣ್’ ಚಿತ್ರತಂಡಕ್ಕೆ ದೆಹಲಿ ಹೈಕೋರ್ಟ್ ನೋಟಿಸ್: ಬಿಡುಗಡೆಗೆ ತಡೆ ಕೋರಿದ ಸಲ್ಮಾನ್ ಖಾನ್ – Kannada News | Delhi High Court issues notice to makers of Kala Hiran Movie after Salman Khan plea

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ, ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಪಕರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ. ಚಿತ್ರದ ಬಿಡುಗಡೆ ಮತ್ತು ಪ್ರಚಾರಕ್ಕೆ ತಡೆ ನೀಡಬೇಕು ಎಂದು ಸಲ್ಮಾನ್ ಖಾನ್ (Salman Khan) ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು, ಚಿತ್ರದ ನಿರ್ಮಾಪಕ ಅಮಿತ್ ಜಾನಿ, ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್, ನಿರ್ದೇಶಕ ಭರತ್ ಶ್ರೀನಾಥೆ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಸೇರಿದಂತೆ ಸಂಬಂಧಪಟ್ಟ ಇತರೆ ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದೆ.

ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಶಾ, ‘ಮೇ 29ರಂದು ಬಿಡುಗಡೆಯಾದ ಚಿತ್ರದ ಪ್ರಚಾರದ ಪೋಸ್ಟರ್‌ನಲ್ಲಿರುವ ಪಾತ್ರವು ಸಲ್ಮಾನ್ ಖಾನ್ ಅವರನ್ನು ಹೋಲುವಂತಿದೆ. ಅಲ್ಲದೆ, ಸಲ್ಮಾನ್ ಖಾನ್ ಅವರ ಗುರುತಾಗಿರುವ ವಿಶಿಷ್ಟವಾದ ಬ್ಲೂ ಬ್ರೇಸ್‌ಲೆಟ್ ಮಾದರಿಯನ್ನೇ ಆ ಪಾತ್ರವೂ ಧರಿಸಿದೆ. ಇದು ನಟನ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವಂತೆ 2025ರ ಡಿಸೆಂಬರ್ 11ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಜೂನ್ 20ರಂದು ಬಿಡುಗಡೆಯಾಗಬೇಕಿದ್ದ ಟ್ರೇಲರ್ ಅನ್ನು ಹಠಾತ್ತನೆ ಶುಕ್ರವಾರವೇ (ಜೂನ್ 12) ಬಿಡುಗಡೆ ಮಾಡಿದೆ ಎಂದು ಸಲ್ಮಾನ್ ಖಾನ್ ಅವರ ಕಾನೂನು ತಂಡ ಕೋರ್ಟ್‌ಗೆ ತಿಳಿಸಿತು. ಸದ್ಯಕ್ಕೆ ಈ ಸಿನಿಮಾದ ಟ್ರೇಲರ್ ಸಖತ್ ವೈರಲ್ ಆಗುತ್ತಿದೆ.

ಕಾಲಾ ಹಿರಣ್ ಸಿನಿಮಾ ಟ್ರೇಲರ್:

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇವೆ. ಈ ಪ್ರಕರಣಕ್ಕೆ ಸಂಬಂಧಿಸಿದ 4 ಎಫ್‌ಐಆರ್‌ಗಳ ಪೈಕಿ ಮೂರರಲ್ಲಿ ಸಲ್ಮಾನ್ ಈಗಾಗಲೇ ಖುಲಾಸೆಗೊಂಡಿದ್ದಾರೆ. ಮತ್ತೊಂದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಯಾವುದೇ ಅಂತಿಮ ಆದೇಶ ಬಂದಿಲ್ಲ. ಹೀಗಿರುವಾಗ ನಿರ್ಮಾಪಕರು ಸಲ್ಮಾನ್ ಖಾನ್ ಅವರ ಜನಪ್ರಿಯತೆ ಹಾಗೂ ವೈಯಕ್ತಿಕ ಜೀವನದ ಘಟನೆಗಳನ್ನು ಬಳಸಿಕೊಂಡು ವಾಣಿಜ್ಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದರು.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ತಮ್ಮ ಅನುಮತಿಯಿಲ್ಲದೆ ತಮ್ಮ ಚಿತ್ರಣ, ಶೈಲಿ ಹಾಗೂ ಬ್ರೇಸ್‌ಲೆಟ್‌ನಂತಹ ವೈಯಕ್ತಿಕ ಗುರುತುಗಳನ್ನು ಬಳಸಿ ಸಿನಿಮಾ ಮಾಡಿರುವುದು ಕಾನೂನುಬಾಹಿರ ಮತ್ತು ಇದು ತಮ್ಮ ಘನತೆಗೆ ಧಕ್ಕೆ ತರುತ್ತದೆ ಎಂದು ಸಲ್ಮಾನ್ ಖಾನ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಪ್ರಕರಣದ ಮುಂದಿನ ನಿರ್ಧಾರವು ಜೂನ್ 19ರ ಕೋರ್ಟ್ ವಿಚಾರಣೆಯ ಮೇಲೆ ನಿಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಲಂಡನ್​​ನ ಅಪಾರ್ಟ್​ಮೆಂಟ್​​ನ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ ಬಾಲಕಿಯನ್ನು ಕಾಪಾಡಿದ ಭಾರತೀಯ ವ್ಯಕ್ತಿ – Kannada News | London Hero: Indian Man Mohammed Jesil Saves Child Falling from Apartment Window

ಬಾಲಕಿಯ ಕಾಪಾಡಿದ ವ್ಯಕ್ತಿImage Credit source: Free Press Journal

ಲಂಡನ್, ಜೂನ್ 14: ಅಪಾರ್ಟ್​ಮೆಂಟ್​ನ ಕಿಟಕಿಯ ಅಂಚಿನಲ್ಲಿ ನೇತಾಡುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗು(Baby)ವನ್ನು ಭಾರತೀಯ ವ್ಯಕ್ತಿಯೊಬ್ಬರು ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಲಂಡನ್‌ನ ಇಲ್ಫೋರ್ಡ್ ಹೈ ಸ್ಟ್ರೀಟ್‌ನ ವಾಣಿಜ್ಯ ಸಂಕೀರ್ಣದಲ್ಲಿರುವ ಫ್ಲಾಟ್‌ನ ಕಿಟಕಿಯಿಂದ ಅದ್ಹೇಗೋ ಬಾಲಕಿ ಹೊರಬಂದಿದ್ದಾಳೆ, ಬಳಿಕ ಕಿಟಕಿ ಚೌಕಟ್ಟನ್ನು ಹಿಡಿದು ನೇತಾಡಿದ್ದಾಳೆ.

ಇದನ್ನು ಕಂಡ ರಸ್ತೆಯಲ್ಲಿದ್ದ ನೂರಾರು ಪ್ರೇಕ್ಷಕರು ದಿಗ್ಭ್ರಮೆಗೊಂಡರು. ಪಕ್ಕದ ಕಿಟಕಿಯಿಂದ ಮಹಿಳೆಯೊಬ್ಬಳು ಮಗುವನ್ನು ಎತ್ತಲು ಕೈಚಾಚಿದರೂ ಮಗು ಸಿಗುತ್ತಿರಲಿಲ್ಲ. ಇತ್ತ ಮಗುವಿನ ಕೈಗಳ ಶಕ್ತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿತ್ತು. ಯಾವುದೇ ಕ್ಷಣದಲ್ಲಾದರೂ ಮಗು ಕೆಳಗೆ ಬಿದ್ದು ಪ್ರಾಣ ಹೋಗುವ ಭೀತಿ ಎದುರಾಗಿತ್ತು.

ಅದೇ ರಸ್ತೆಯಲ್ಲಿ ರೆಸ್ಟೋರೆಂಟ್ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಭಾರತ ಮೂಲದ ಮೊಹಮ್ಮದ್ ಜೆಸಿಲ್ ಅವರಿಗೆ ಜನರ ಕಿರುಚಾಟ ಕೇಳಿಸಿದೆ. ಹೊರಗೆ ಬಂದು ನೋಡಿದಾಗ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗು ಕಂಡಿದೆ. ಒಂದು ಕ್ಷಣವೂ ಯೋಚಿಸದ ಜೆಸಿಲ್ ತಕ್ಷಣವೇ ಮಗುವಿನ ರಕ್ಷಣೆಗೆ ಧಾವಿಸಿದರು.
ನನಗೆ ಬೇರೆನೂ ಯೋಚನೆ ಬರಲಿಲ್ಲ. ನಾನು ಕೇವಲ ಐದು ತಿಂಗಳ ವಯಸ್ಸಿನ ಅವಳಿ ಮಕ್ಕಳ ತಂದೆ. ಕಷ್ಟದಲ್ಲಿದ್ದ ಆ ಮಗುವನ್ನು ನೋಡಿದಾಗ ನನ್ನೊಳಗಿನ ತಂದೆಯ ಹೃದಯ ಜಾಗೃತವಾಯಿತು. ನಾನು ಹೀರೋ ಅಲ್ಲ, ಒಬ್ಬ ತಂದೆಯಾಗಿ ನನ್ನ ಕರ್ತವ್ಯ ಮಾಡಿದೆ ಎಂದು ಜೆಸಿಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ನಾಯಿ ಹಾಗೂ ಎರಡು ವರ್ಷದ ಮಗು ನಾಲ್ಕು ದಿನಗಳಿಂದ ನಾಪತ್ತೆ, ಮೂರು ದಿನಗಳ ಬಳಿಕ ವಾಪಸಾದ ನಾಯಿ

ಮಗುವಿನ ಹಿಡಿತ ಸಡಿಲಗೊಳ್ಳುತ್ತಿದ್ದಂತೆ, ಜೆಸಿಲ್ ಮತ್ತು ಅಲ್ಲಿಗೆ ಬಂದಿದ್ದ ಬ್ರಿಟನ್ ಪೊಲೀಸ್ ಅಧಿಕಾರಿಯೊಬ್ಬರು ನೇರವಾಗಿ ಮಗುವಿನ ಕೆಳಭಾಗದಲ್ಲಿ ನಿಂತುಕೊಂಡರು. ದಾರಿಹೋಕರೊಬ್ಬರು ಸಣ್ಣ ಏಣಿಯೊಂದನ್ನು ತಂದು ಬೆಂಬಲವಾಗಿ ನಿಲ್ಲಿಸಿದರು.

ವಿಡಿಯೋ

ಕ್ಷಣಾರ್ಧದಲ್ಲಿ ಮಗು ಕಿಟಕಿಯ ಮೇಲಿಂದ ಕೈಬಿಟ್ಟು ಕೆಳಗೆ ಬಿದ್ದಿದೆ. ಇಡೀ ಜನಸಮೂಹವೇ ಆಘಾತದಿಂದ ಕಣ್ಣು ಮುಚ್ಚಿಕೊಂಡ ಆ ರಣರೋಚಕ ಕ್ಷಣದಲ್ಲಿ, ಜೆಸಿಲ್ ಅತ್ಯಂತ ಜಾಗರೂಕತೆಯಿಂದ ಬೀಳುತ್ತಿದ್ದ ಮಗುವನ್ನು ಗಾಳಿಯಲ್ಲೇ ಸುರಕ್ಷಿತವಾಗಿ ತಮ್ಮ ಕೈಗಳಿಂದ ಹಿಡಿದುಕೊಂಡಿದ್ದಾರೆ! ಪೊಲೀಸ್ ಅಧಿಕಾರಿ ಜೆಸಿಲ್ ಮತ್ತು ಮಗು ಇಬ್ಬರೂ ಕೆಳಗೆ ಬೀಳದಂತೆ ಗಟ್ಟಿಯಾಗಿ ಹಿಡಿದು ಸ್ಥಿರಗೊಳಿಸಿದರು.

ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾದ ಮಗುವಿನ ತಂದೆ, ಭಾರತೀಯ ಯುವಕ ಜೆಸಿಲ್ ಮತ್ತು ಪೊಲೀಸ್ ಅಧಿಕಾರಿಯನ್ನು ‘ನಮ್ಮ ಪಾಲಿನ ರಿಯಲ್ ಹೀರೋಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಲಂಡನ್ ಪೊಲೀಸರು ಮತ್ತು ಅಲ್ಲಿನ ಮಾಧ್ಯಮಗಳು ಭಾರತೀಯ ಯುವಕ ಮೊಹಮ್ಮದ್ ಜೆಸಿಲ್ ಅವರ ಈ ಅಪ್ರತಿಮ ಸಾಹಸ ಹಾಗೂ ಮಾನವೀಯತೆಯನ್ನು ಮುಕ್ತಾಕಂಠದಿಂದ ಪ್ರಶಂಸಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ರಕ್ಷಣೆಯ ವಿಡಿಯೋ ಭಾರಿ ವೈರಲ್ ಆಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate: ವಾರಾಂತ್ಯದಲ್ಲೂ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 14th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 14: ಶುಕ್ರವಾರ ಗ್ರಾಮ್​ಗೆ 270 ರೂ ಏರಿಕೆಯಾಗಿದ್ದ ಬಂಗಾರದ ದರ (Gold Rates) ಈ ವಾರಾಂತ್ಯದಲ್ಲಿ 45 ರೂಗಳಷ್ಟು ಹೆಚ್ಚಿದೆ. ಅಪರಂಜಿ ಚಿನ್ನದ ಬೆಲೆ 14,900 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಬೆಳ್ಳಿ ಬೆಲೆ 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,49,080 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,36,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 14ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,908 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,665 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,181 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,908 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,665 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,665 ರೂ
  • ಚೆನ್ನೈ: 13,860 ರೂ
  • ಮುಂಬೈ: 13,665 ರೂ
  • ದೆಹಲಿ: 13,680 ರೂ
  • ಕೋಲ್ಕತಾ: 13,665 ರೂ
  • ಕೇರಳ: 13,665 ರೂ
  • ಅಹ್ಮದಾಬಾದ್: 13,670 ರೂ
  • ಜೈಪುರ್: 13,680 ರೂ
  • ಲಕ್ನೋ: 13,680 ರೂ
  • ಭುವನೇಶ್ವರ್: 13,665 ರೂ

ಇದನ್ನೂ ಓದಿ: ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 566 ರಿಂಗಿಟ್ (13,280 ರುಪಾಯಿ)
  • ದುಬೈ: 508.50 ಡಿರಾಮ್ (13,181 ರುಪಾಯಿ)
  • ಅಮೆರಿಕ: 138.50 ಡಾಲರ್ (13,187 ರುಪಾಯಿ)
  • ಸಿಂಗಾಪುರ: 184.80 ಸಿಂಗಾಪುರ್ ಡಾಲರ್ (13,696 ರುಪಾಯಿ)
  • ಕತಾರ್: 509.50 ಕತಾರಿ ರಿಯಾಲ್ (13,305 ರೂ)
  • ಸೌದಿ ಅರೇಬಿಯಾ: 523 ಸೌದಿ ರಿಯಾಲ್ (13,268 ರುಪಾಯಿ)
  • ಓಮನ್: 53.45 ಒಮಾನಿ ರಿಯಾಲ್ (13,218 ರುಪಾಯಿ)
  • ಕುವೇತ್: 42.71 ಕುವೇತಿ ದಿನಾರ್ (13,235 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 270 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 270 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಗನನ್ನು ಪತಿಯೇ ಕಿಡ್ನಾಪ್ ಮಾಡಿದ್ದಾನೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ತಾಯಿ! – Kannada News | Kodagu: Woman Accuses Drug Addict Husband of Kidnapping 5 Year Old Son

ಕೊಡಗು, ಜೂನ್ 14: ಕೌಟುಂಬಿಕ ಕಲಹದ ಹಿನ್ನೆಲೆ ನನ್ನ ಪತಿಯೇ ಮಗನನ್ನು ಕಿಡ್ನಾಪ್ ಮಾಡಿದ್ದಾನೆ, ದಯವಿಟ್ಟು ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿಯೊಬ್ಬಳು ಕಣ್ಣೀರಿಡುತ್ತಾ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಕೊಡಗು (Kodagu) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಮಹಿಳೆ ತನ್ನ ಮಗುವಿನೊಂದಿಗೆ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಈ ವೇಳೆ ಆಕೆಯ ಮನೆಗೆ ಬಂದ ಪತಿ, ಮಗುವನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮುಖ್ಯಾಂಶಗಳು

  • ಪತಿಯೇ ತನ್ನ ಐದು ವರ್ಷದ ಮಗನನ್ನು ಅಪಹರಿಸಿದ್ದಾನೆಂದು ತಾಯಿ ಆರೋಪಿಸಿದ್ದಾಳೆ.
  • ಕೊಡಗಿನ ಭವ್ಯ ಕೌಟುಂಬಿಕ ಕಲಹದಿಂದಾಗಿ ಆರು ತಿಂಗಳ ಹಿಂದೆ ವಿಚ್ಛೇದನ ಕೋರಿದ್ದರು.
  • ಮಗುವಿನ ಪತ್ತೆಗಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.

ಕೌಟುಂಬಿಕ ಕಲಹ ಮತ್ತು ವಿಚ್ಛೇದನ ಅರ್ಜಿ

ಮಡಿಕೇರಿ ತಾಲ್ಲೂಕಿನ ಕಾಂತೂರು ಮೂರ್ನಾಡು ಗ್ರಾಮದ ನಿವಾಸಿ ಭವ್ಯ ಎಂಬಾಕೆಗೆ ಆರು ವರ್ಷಗಳ ಹಿಂದೆ ತಿಮ್ಮಯ್ಯ ಎಂಬುವರ ಜೊತೆ ವಿವಾಹವಾಗಿತ್ತು. ದಂಪತಿಗೆ 5 ವರ್ಷದ ಗಂಡು ಮಗನಿದ್ದಾನೆ. ಆದರೆ, ಕಳೆದ ಒಂದೆರಡು ವರ್ಷಗಳಿಂದ ಇವರಿಬ್ಬರ ಮಧ್ಯೆ ತೀವ್ರ ಜಗಳ ನಡೆಯುತ್ತಿತ್ತು. ಪತಿ ತಿಮ್ಮಯ್ಯ ಗಾಂಜಾ ಮತ್ತು ಮದ್ಯದ ವ್ಯಸನಿಯಾಗಿದ್ದು, ಕೆಲಸಕ್ಕೂ ಹೋಗದೆ, ನಿತ್ಯ ಹೆಂಡತಿಯ ಮೇಲೆ ಅನುಮಾನ ಪಡುತ್ತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಪತಿಯ ಕಾಟ ತಡೆಯಲಾರದೆ ಭವ್ಯ ಆರು ತಿಂಗಳ ಹಿಂದೆ ವಿಚ್ಛೇದನ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು.

ಮಗನನ್ನು ಅಪಹರಿಸಿದ ಗಾಂಜಾ ವ್ಯಸನಿ ಪತಿ?

ಜೂನ್ 10 ರಂದು ಭವ್ಯ ಅವರ ತಾಯಿ ಮನೆ ಸಮೀಪ ಬಂದ ಪತಿ ತಿಮ್ಮಯ್ಯ, ಬಲವಂತವಾಗಿ 5 ವರ್ಷದ ಮಗನನ್ನು ಕರೆದುಕೊಂಡು ಹೋಗಿದ್ದಾನೆ. ಭವ್ಯ ಗಂಡನ ಮನೆಗೆ ಹೋಗಿ ನೋಡಿದಾಗ ಅಲ್ಲಿ ಪತಿಯಾಗಲಿ, ಮಗನಾಗಲಿ ಇರಲಿಲ್ಲ. ಪತಿ ಗಾಂಜಾ ವ್ಯಸನಿಯಾಗಿದ್ದರಿಂದ ಮಗುವಿಗೆ ಏನಾದರೂ ಹೆಚ್ಚು ಕಡಿಮೆ ಮಾಡಬಹುದು ಎಂಬ ಭೀತಿಯಲ್ಲಿ ತಾಯಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ತಿಮ್ಮಯ್ಯ ಮಚ್ಚು, ಲಾಂಗು ಹಿಡಿದು ಹಲ್ಲೆಗೆ ಮುಂದಾಗಿದ್ದರಿಂದ ಮಗುವಿಗೆ ಏನಾಗಿದೆಯೋ ಎಂಬ ಭಯದಿಂದಲೇ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಗುವಿನ ಪತ್ತೆಗಾಗಿ ಭವ್ಯ ಸದ್ಯ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಎಸ್‌ಪಿ ಅವರು ತನಿಖೆಗೆ ಆದೇಶಿಸಿದ್ದು, ಪೊಲೀಸರು ಮಗುವಿನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯ ಕಾಂಗ್ರೆಸ್​​ನಲ್ಲಿ ಬಗೆಹರಿಯದ ಗೊಂದಲ: ಸಚಿವ ಸ್ಥಾನ ಸಿಕ್ಕವರದ್ದೊಂದು, ಸಿಗದವರದ್ದೊಂದು ಕಥೆ – Kannada News | Unrest in Karnataka Congress: Portfolios Spark Discontent Among Seniors; Aspirants Step Up Lobbying for Cabinet Berth

ಬೆಂಗಳೂರು, ಜೂನ್​​ 14: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಚಾರವಾಗಿ ಕಾಂಗ್ರೆಸ್​​ನಲ್ಲಿ ಗೊಂದಲ ಮುಂದುವರಿದಿದೆ. ನೂತನ ಸಚಿವರಿಗೆ ಈಗಾಗಲೇ ಖಾತೆ ಹಂಚಿಕೆಯಾಗಿದ್ದರೂ ಅಸಮಾಧಾನ ಮಾತ್ರ ಮುಗಿದಿಲ್ಲ. ಬೇಸರಗೊಂಡಿದ್ದ ಹಿರಿಯ ಸಚಿವರ ಪೈಕಿ ಕೆಲವರನ್ನು ಮನವೊಲಿಸಲಾಗಿದೆಯಾದರೂ ಸಂಪೂರ್ಣವಾಗಿ ಇದಿನ್ನೂ ಬಗೆಹರಿದಿಲ್ಲ. ಮತ್ತೊಂದೆಡೆ ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಕುತೂಹಲವೂ ಹೆಚ್ಚಿದ್ದು ಮತ್ರಿಗಿರಿ ಯಾರಿಗೆಲ್ಲ ಎಂಬ ಬಗ್ಗೆಯೂ ಯಾವುದೇ ಉತ್ತರ ಇನ್ನೂ ಸಿಕ್ಕಿಲ್ಲ.

ಖಾತೆ ಬಗ್ಗೆ ಅಸಮಾಧಾನ

ತಮಗೆ ನೀಡಲಾಗಿರುವ ಖಾತೆಗಳ ಬಗ್ಗೆ ಕೆಲ ಹಿರಿಯ ಸಚಿವರೇ ಮುನಿಸಿಕೊಂಡಿರೋದೀಗ ಕಾಂಗ್ರೆಸ್​​ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಬಿಡಿಎ ಮತ್ತು ಬಿಎಂಆರ್ಡಿಎ ಒಳಗೊಳ್ಳದ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿರುವ ಕಾರಣಕ್ಕೆ ಪಟ್ಟು ಹಿಡಿದಿರುವ ಕೃಷ್ಣಭೈರೇಗೌಡರು, ಖಾತೆ ಹಂಚಿಕೆ ಆಗಿ 10 ದಿನಗಳು ಕಳೆದರೂ ಜವಾಬ್ದಾರಿಯನ್ನು ಮಾತ್ರ ವಹಿಸಿಕೊಂಡಿಲ್ಲ. ಇದೇ ವಿಷಯವಾಗಿ ದೆಹಲಿಯ ಹೈಕಮಾಂಡ್ ನಾಯಕರ ಜೊತೆ ಸರಣಿ ಸಭೆ ನಡೆಸಿ ಮನವಿ ಮಾಡಿರುವ ಅವರು ಸಿಎಂ ಡಿಕೆ ಶಿವಕುಮಾರ್ ಜೊತೆಗೂ ಒಂದೆರಡು ಸುತ್ತು ಚರ್ಚೆ ನಡೆಸಿದ್ದಾರೆ. ಹೀಗಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆ; ಅಡ್ಡ ಮತದಾನದ ಭೀತಿಯಲ್ಲಿ ಜೆಡಿಎಸ್, ಕಾಂಗ್ರೆಸ್ 

ಮಂತ್ರಿಗಿರಿ ಪಡೆಯಲು ಪೈಪೋಟಿ

ಖಾತೆ ಕ್ಯಾತೆ ನಡುವೆ ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿಯೂ ಕಾಂಗ್ರೆಸ್​​ನಲ್ಲಿ ಜೋರಾಗಿಯೇ ನಡೆಯತೊಡಗಿದೆ. ಹೈಕಮಾಂಡ್​​ನಿಂದ ಪ್ರಕಟವಾಗಲಿರುವ ಎರಡನೇ ಪಟ್ಟಿಯಲ್ಲಿ ಹೇಗಾದರೂ ಸ್ಥಾನಗಿಟ್ಟಿಸಬೇಕೆಂ ನಿಟ್ಟಿನಲ್ಲಿ ಆಕಾಂಕ್ಷಿ ಶಾಸಕರು ಸರ್ಕಸ್​​ ಆರಂಭಿಸಿದ್ದಾರೆ. ಅದರಲ್ಲೂಸಚಿವ ಸಂಪುಟ ಸೇರ್ಪಡೆಯಾಗಲು ಜಮೀರ್ ಅಹ್ಮದ್ ಭಾರಿ ಕಸರತ್ತು ನಡೆಸುತ್ತಿದ್ದು, ರಾಜ್ಯ ನಾಯಕರ ಮನೆ ಸುತ್ತುತ್ತಿದ್ದಾರೆ. ಈ ಸಂಬಂಧ ಸಿಎಂ ಡಿಕೆಶಿ ಭೇಟಿಯಾಗಿ ಮಾತುಕತೆ ನಡೆಸಿರುವ ಅವರು, ಎರಡು ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೂ ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Kamakhya Temple: ಕಾಮಾಕ್ಯ ದೇವಾಲಯದ ಭಕ್ತರಿಗೆ ಪ್ರಮುಖ ಸೂಚನೆ; ಇನ್ಮುಂದೆ ಆಫ್‌ಲೈನ್ ವಿಶೇಷ ದರ್ಶನ ಟಿಕೆಟ್ ಸಿಗಲ್ಲ! – Kannada News | Kamakhya Temple: Special Darshan Now Online Only from June 15 | Book Tickets Fast!

ಅಸ್ಸಾಂನ ಗುವಾಹಟಿಯಲ್ಲಿರುವ ವಿಶ್ವಪ್ರಸಿದ್ಧ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಭಕ್ತರಿಗೆ ದೇವಾಲಯ ಆಡಳಿತ ಮಂಡಳಿಯು ಅತ್ಯಂತ ಪ್ರಮುಖವಾದ ಘೋಷಣೆಯೊಂದನ್ನು ಮಾಡಿದೆ. ಇಲ್ಲಿಯವರೆಗೆ ಲಭ್ಯವಿದ್ದ ಆಫ್‌ಲೈನ್ ವಿಶೇಷ ದರ್ಶನ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಇನ್ಮುಂದೆ ಕೇವಲ ಆನ್‌ಲೈನ್ ಬುಕಿಂಗ್ ವ್ಯವಸ್ಥೆಯನ್ನು ಮಾತ್ರ ಜಾರಿಗೆ ತರಲು ನಿರ್ಧರಿಸಲಾಗಿದೆ.

ಜೂನ್ 15 ರಿಂದ ಹೊಸ ನಿಯಮ ಜಾರಿ:

‘ಗುವಾಹಟಿ ಪ್ಲಸ್’ ವರದಿಯ ಪ್ರಕಾರ, ಈ ಹೊಸ ನಿಯಮವು ಜೂನ್ 15 ರಿಂದಲೇ ಜಾರಿಗೆ ಬರಲಿದೆ. ದೇವಾಲಯದ ಆವರಣದಲ್ಲಿರುವ ಟಿಕೆಟ್ ಕೌಂಟರ್‌ಗಳಲ್ಲಿ ಆಫ್‌ಲೈನ್ ಬುಕಿಂಗ್ ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಆದ್ದರಿಂದ ಭಕ್ತರು ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕವೇ ಟಿಕೆಟ್‌ಗಳನ್ನು ಕಾಯ್ದಿರಿಸಬೇಕಾಗುತ್ತದೆ. ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ, ದರ್ಶನ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ವ್ಯವಸ್ಥಿತ ಮತ್ತು ಅನುಕೂಲಕರವಾಗಿಸಲು ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಟಿಕೆಟ್ ಕೌಂಟರ್‌ಗಳಲ್ಲಿ ಉಂಟಾಗುತ್ತಿದ್ದ ಜನಸಂದಣಿ ಮತ್ತು ಭಕ್ತರ ಕಾಯುವ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ.

ಹೊಸ ಆನ್‌ಲೈನ್ ಪೋರ್ಟಲ್ ಲಭ್ಯ:

ವಿಶೇಷ ದರ್ಶನ ಟಿಕೆಟ್‌ಗಳನ್ನು ಕಾಯ್ದಿರಿಸಲು ಜೂನ್ 15 ರಂದು ಸಂಜೆ 6 ಗಂಟೆಯಿಂದ ಹೊಸ ಆನ್‌ಲೈನ್ ಪೋರ್ಟಲ್ ಸಾರ್ವಜನಿಕರಿಗೆ ಲಭ್ಯವಿರುತ್ತದೆ. ಭಕ್ತರು ದೇವಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮಗೆ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು (ಸ್ಲಾಟ್) ಆಯ್ಕೆ ಮಾಡುವ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಬುಕಿಂಗ್ ಪೂರ್ಣಗೊಂಡ ನಂತರ ಭಕ್ತರಿಗೆ ‘ಡಿಜಿಟಲ್ ಪಾಸ್’ ನೀಡಲಾಗುತ್ತದೆ. ಯಾವುದೇ ಗೊಂದಲಗಳಿಲ್ಲದೆ ದರ್ಶನ ಪಡೆಯಲು ಭಕ್ತರು ಮುಂಚಿತವಾಗಿ ಆನ್‌ಲೈನ್‌ನಲ್ಲಿ ಸ್ಲಾಟ್‌ಗಳನ್ನು ಕಾಯ್ದಿರಿಸುವಂತೆ ಆಡಳಿತ ಮಂಡಳಿ ಸೂಚಿಸಿದೆ.

ಮುಂಬರುವ ಅಂಬುಬಾಚಿ ಮೇಳ ಮತ್ತು ಕಾಮಾಕ್ಯದ ವಿಶೇಷತೆ:

ಅಸ್ಸಾಂನ ಗುವಾಹಟಿ ನಗರದ ನೀಲಾಚಲ ಬೆಟ್ಟದ ಮೇಲಿರುವ ಕಾಮಾಕ್ಯ ದೇವಾಲಯವು ದೇಶದ ಅತ್ಯಂತ ಪವಿತ್ರ ಹಾಗೂ ಪ್ರಮುಖ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಶಕ್ತಿ ದೇವತೆಯ ದರ್ಶನಕ್ಕೆ ದೇಶ-ವಿದೇಶಗಳಿಂದ ಬರುತ್ತಾರೆ. ವಿಶೇಷವಾಗಿ, ಜೂನ್ ಅಂತ್ಯದಲ್ಲಿ ಇಲ್ಲಿ ಪ್ರಸಿದ್ಧ ‘ಅಂಬುಬಾಚಿ ಮೇಳ’ ಪ್ರಾರಂಭವಾಗಲಿದ್ದು, ಈ ಸಮಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಮತ್ತು ಸಾಧುಗಳು ಇಲ್ಲಿಗೆ ಆಗಮಿಸುತ್ತಾರೆ. ಈ ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ದರ್ಶನ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಈ ಆನ್‌ಲೈನ್ ಬುಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಯಾರಿಗೆ ಈ ಆನ್‌ಲೈನ್ ಟಿಕೆಟ್ ಅನ್ವಯಿಸುತ್ತದೆ?

ಈ ಹೊಸ ಆನ್‌ಲೈನ್ ವಿಶೇಷ ದರ್ಶನ ಸೌಲಭ್ಯವು ಕೇವಲ ಸಾಮಾನ್ಯ ಭಕ್ತರು ಮತ್ತು ಹೊರಗಿನಿಂದ ಬರುವ ಯಾತ್ರಿಕರಿಗೆ ಮಾತ್ರ ಲಭ್ಯವಿರುತ್ತದೆ. ದೇವಾಲಯದ ಆಡಳಿತ ಮಂಡಳಿಯು ಈ ಬಗ್ಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಗೊಳಿಸದೆ ಸ್ಪಷ್ಟಪಡಿಸಿದೆ. ದೇವಾಲಯದ ಆಂತರಿಕ ಸಿಬ್ಬಂದಿ, ನೀಲಾಚಲ ಬೆಟ್ಟದ ಪ್ರದೇಶದ ಸ್ಥಳೀಯ ನಿವಾಸಿಗಳು ಈ ಪೋರ್ಟಲ್ ಬಳಸುವಂತಿಲ್ಲ. ಪೆಂಡಾಲ್‌ಗಳು ಅಥವಾ ದೇವಾಲಯಕ್ಕೆ ಸಂಬಂಧಿಸಿದ ಇತರ ಯಾವುದೇ ಸ್ಥಳೀಯ ಗುಂಪುಗಳು ಮಾಡುವ ಆನ್‌ಲೈನ್ ಬುಕಿಂಗ್‌ಗಳು ಮಾನ್ಯವಾಗುವುದಿಲ್ಲ. ನಿಯಮ ಮೀರಿ ಅಂತಹ ಬುಕಿಂಗ್‌ಗಳನ್ನು ಮಾಡಿದಲ್ಲಿ ಅವುಗಳನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ ಎಂದು ದೇವಾಲಯ ನಿರ್ವಹಣಾ ಸಮಿತಿ ಎಚ್ಚರಿಸಿದೆ.

ನೀವೇನಾದರೂ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಲು ಇಚ್ಛಿಸಿದರೆ, ದೇವಾಲಯದ ಆವರಣಕ್ಕೆ ಹೋದ ನಂತರ ಆಫ್‌ಲೈನ್ ಕೌಂಟರ್‌ಗಳನ್ನು ನಂಬಿಕೊಂಡು ನಿಲ್ಲಬೇಡಿ. ಪ್ರಯಾಣ ಬೆಳೆಸುವ ಮುನ್ನವೇ ಅಧಿಕೃತ ವೆಬ್‌ಸೈಟ್ ಮೂಲಕ ನಿಮ್ಮ ಡಿಜಿಟಲ್ ಪಾಸ್ ಅನ್ನು ಸುರಕ್ಷಿತವಾಗಿ ಬುಕ್ ಮಾಡಿಕೊಳ್ಳಿ ಹಾಗೂ ತಾಯಿ ಕಾಮಾಕ್ಯ ದೇವಿಯ ದರ್ಶನವನ್ನು ಸುಲಭವಾಗಿ ಪಡೆಯಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ವಾರ ಭವಿಷ್ಯ; ಗ್ರಹಗಳ ಪ್ರಭಾವ ಮತ್ತು 12 ರಾಶಿಗಳ ಫಲಾಫಲ – Kannada News | Dr. Basavaraj Gurujis Weekly Horoscope: Planetary Transits and Zodiac Sign Effects

ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 15 ರಿಂದ ಜೂನ್ 21ರವರೆಗಿನ ದ್ವಾದಶ ರಾಶಿಗಳ ಫಲಾಫಲವನ್ನು ವಿಶ್ಲೇಷಿಸಿದ್ದಾರೆ. ಈ ವಾರದಲ್ಲಿ ಪರಾಭವನಾಮ ಸಂವತ್ಸರ, ಅಧಿಕ ಜೇಷ್ಠ ಮಾಸ ಮತ್ತು ಗ್ರೀಷ್ಮ ಋತು ಇರಲಿದೆ. ಅಮಾವಾಸ್ಯೆ ಸೇರಿದಂತೆ ವಿವಿಧ ತಿಥಿಗಳು ಮತ್ತು ಕದಳಿ ಗೌರಿ ವ್ರತ, ವಿನಾಯಕಿ ಚತುರ್ಥಿ, ಶ್ರುತ ಪಂಚಮಿ, ಅರಣ್ಯ ಗೌರಿ ಆಚರಣೆಗಳು ನಡೆಯಲಿವೆ. ಗ್ರಹಗಳ ಗೋಚಾರದಂತೆ, ಶನಿ ಗ್ರಹ ಮೀನ ರಾಶಿಯಲ್ಲಿ, ಕುಜ ಗ್ರಹ ಮೇಷ ರಾಶಿಯಲ್ಲಿ ಸಂಚರಿಸಲಿದ್ದಾರೆ. ಜೂನ್ 15ರಂದು ರವಿ ಗ್ರಹ ಮಿಥುನ ರಾಶಿಗೆ ಬುಧನೊಂದಿಗೆ ಪ್ರವೇಶಿಸುವುದರಿಂದ ಬುಧಾದಿತ್ಯ ಯೋಗ ಉಂಟಾಗಲಿದೆ. ಜೂನ್ 21ರಂದು ಕುಜ ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಸಂಚರಿಸಲಿದ್ದಾನೆ. ಈ ವಾರದಲ್ಲಿ ತಮ್ಮ ರಾಶಿಗಳಿಗೆ ಅನುಗುಣವಾಗಿ ಮಾರ್ಗದರ್ಶನ ಪಾಲಿಸುವುದು ಸೂಕ್ತ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ.

Source link

‘ಸಿದ್ದರಾಮಯ್ಯ ಈ ದೇಶ ಕಂಡ ಅತ್ಯಂತ ಗೌರವಾನ್ವಿತ ಸಿಎಂ’: ಹಿರಿಯ ನಟ ಸುಂದರ್ ರಾಜ್ – Kannada News | Siddaramaiah was the best CM in the Country says actor Sundar Raj

‘ಕನಕರಾಜ’ ಸಿನಿಮಾದಲ್ಲಿ ಅನೂಪ್ ರೇವಣ್ಣ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಸುಂದರ್ ರಾಜ್ (Sundar Raj) ಕೂಡ ಅಭಿನಯಿಸಿದ್ದಾರೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಚಿತ್ರದ ಶೀರ್ಷಿಕೆಗೆ ‘ಫ್ಯಾನ್ ಆಫ್ ಸಿಎಂ’ ಎಂಬ ಟ್ಯಾಗ್ ಲೈನ್ ಇದೆ. ಆ ಬಗ್ಗೆ ಸುಂದರ್ ರಾಜ್ ವಿವರಿಸಿದರು. ‘ಹೆಚ್​.ಎಂ. ರೇವಣ್ಣ ಅವರು ರಾಜಕೀಯ ವ್ಯಕ್ತಿ ಆಗಿದ್ದರೂ ಕೂಡ ರಾಜಕಾರಣವನ್ನು ಪಕ್ಕಕ್ಕೆ ಇಟ್ಟು ಸಿನಿಮಾರಂಗದ ಬಗ್ಗೆ ಅವರು ತೋರುವ ಒಲವನ್ನು ನಾನು ಅತ್ಯಂತ ಗೌರವದಿಂದ ನೋಡುತ್ತೇನೆ. ಕನಕರಾಜ ಶೀರ್ಷಿಕೆಗೆ ಫ್ಯಾನ್ ಆಫ್ ಸಿಎಂ ಎಂಬ ಅಡಿಬರಹ ಇದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಈ ಚಿತ್ರದಲ್ಲಿ ರಾಮಯ್ಯ ಎಂಬ ಪಾತ್ರವನ್ನು ಅನೂಪ್ ಮಾಡಿದ್ದಾರೆ. ನಾವು ಸಿದ್ದರಾಮಯ್ಯ (Siddaramaiah) ಅವರನ್ನು ನೆನಪಿಸಿಕೊಂಡು ಈ ಸಿನಿಮಾ ಮಾಡಿದ್ದೇವೆ. ಈ ರಾಷ್ಟ್ರ ಕಂಡ ಅತ್ಯಂತ ಗೌರವಾನ್ವಿತ ಸಿಎಂ ಎಂದರೆ ಅದು ನಮ್ಮ ಸಿದ್ದರಾಮಯ್ಯನವರು ಅಂತ ನಾವು ಎದೆತಟ್ಟಿ ಹೇಳಬಹುದು’ ಎಂದಿದ್ದಾರೆ ಸುಂದರ್ ರಾಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗರ್ಭದೊಳಗಿರುವ ಶಿಶು ಇಡೀ ದಿನ ಮಲಗಿರುತ್ತೆ ಅಂದುಕೊಂಡಿದ್ದೀರಾ, ಬೆಚ್ಚಗೆ ಮಲಗಿ ಏನು ಮಾಡುತ್ತಿರುತ್ತೆ ಗೊತ್ತಾ? – Kannada News | Unborn Baby Activities: More Than Just Sleep in the Womb, Discover Fetal Development

ಗರ್ಭದೊಳಗಿರುವ ಶಿಶುಗಳು ದಿನವಿಡೀ ಕೇವಲ ನಿದ್ರಿಸುತ್ತಾ ಕಾಲ ಕಳೆಯುತ್ತವೆ ಎಂದು ನೀವು ಅಂದುಕೊಂಡಿದ್ದೀರಾ? ಖಂಡಿತವಾಗಿಯೂ ಇದು  ಇಲ್ಲ. ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಅದ್ಭುತ ಕೊಡುಗೆಯಾಗಿರುವ ‘ಅಡ್ವಾನ್ಸ್ಡ್ ಅಲ್ಟ್ರಾಸೌಂಡ್ ಸ್ಕ್ಯಾನ್‌’ಗಳು ಗರ್ಭದೊಳಗಿನ ಆ ಅಪರೂಪದ, ರೋಮಾಂಚನಕಾರಿ ಜಗತ್ತನ್ನು ಕಣ್ಣೆದುರು ತಂದಿಟ್ಟಿವೆ. ಜಗತ್ತಿಗೆ ಕಾಲಿಡುವ ಮುನ್ನವೇ ತಾಯಿಯ ಒಡಲಲ್ಲಿ ಪುಟ್ಟ ಕಂದಮ್ಮಗಳು ನಡೆಸುವ ಕೀಟಲೆ, ಆಟಗಳು  ಹತ್ತು ಹಲವು.

ಗರ್ಭದಲ್ಲೇ ಆರಂಭವಾಗುತ್ತದೆ ತುಂಟಾಟ
ನಮ್ಮ ಜಗತ್ತನ್ನು ಪ್ರವೇಶಿಸುವ ಮುನ್ನವೇ ಶಿಶುಗಳು ತಮ್ಮದೇ ಆದ ಪುಟ್ಟ ಪ್ರಪಂಚವನ್ನು ಅನ್ವೇಕ್ಷಿಸಲು ಪ್ರಾರಂಭಿಸುತ್ತವೆ ಎಂಬುದನ್ನು ಸ್ಕ್ಯಾನಿಂಗ್ ಚಿತ್ರಗಳು ಸಾಬೀತುಪಡಿಸುತ್ತವೆ. ಗರ್ಭದೊಳಗಿರುವ ಕಂದಮ್ಮಗಳು ಸುಮ್ಮನೆ ಮಲಗಿರುವುದಿಲ್ಲ.

ಆಕಳಿಸುತ್ತವೆ, ಮೈ ಮುರಿಯುತ್ತಾ ಕೈಕಾಲುಗಳನ್ನು ಚಾಚುತ್ತವೆ. ತಾಯಿಯ ಹೊಟ್ಟೆಗೆ ಪುಟ್ಟ ಪಾದಗಳಿಂದ ಒದೆಯುತ್ತಾ ಆಟವಾಡುತ್ತವೆ. ಅತ್ಯಂತ ಮುದ್ದಾಗಿ ತಮ್ಮ ಹೆಬ್ಬೆರಳನ್ನು ಚೀಪುತ್ತಾ ನಿರಾಳವಾಗಿರುತ್ತವೆ. ನಗುವುದು, ಮುಖ ಸಿಂಡರಿಸುವುದು ಸೇರಿದಂತೆ ವಿವಿಧ ಮುಖಭಾವಗಳನ್ನು ಅಭ್ಯಾಸ ಮಾಡುತ್ತಿರುತ್ತವೆ.

ಹೊರ ಜಗತ್ತಿನ ಧ್ವನಿಗೆ ಕಂದನ ಪ್ರತಿಕ್ರಿಯೆ
ಎಲ್ಲಕ್ಕಿಂತ ರೋಮಾಂಚನಕಾರಿ ಸಂಗತಿಯೆಂದರೆ, ಗರ್ಭದಲ್ಲಿರುವ ಮಗು ಕೇವಲ ತನ್ನ ಆಟದಲ್ಲೇ ಮಗ್ನವಾಗಿರುವುದಿಲ್ಲ. ಹೊರ ಜಗತ್ತಿನಿಂದ ಕೇಳಿಬರುವ ಶಬ್ದಗಳಿಗೆ, ವಿಶೇಷವಾಗಿ ತನ್ನ ಹೆತ್ತವರ ಧ್ವನಿ ಹಾಗೂ ಮೃದುವಾದ ಸಂಗೀತಕ್ಕೆ ಅದು ಸ್ಪಂದಿಸುತ್ತದೆ. ಹೊರಗಿನ ಪ್ರೀತಿಯ ಸದ್ದನ್ನು ಆಲಿಸಿದಾಗ ಮಗು ಗರ್ಭದೊಳಗೆ ಚಲಿಸುವುದನ್ನು ಅಥವಾ ಒದೆಯುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದು ಹುಟ್ಟುವ ಮುನ್ನವೇ ತಾಯಿ ಮತ್ತು ಮಗುವಿನ ನಡುವೆ ಬೆಸೆಯುವ ಅದೃಶ್ಯ ಪ್ರೀತಿಯ ಬಂಧಕ್ಕೆ ಸಾಕ್ಷಿಯಾಗಿದೆ.

ಶೈಕ್ಷಣಿಕ ದೃಷ್ಟಿಕೋನದಿಂದ ನೋಡುವುದಾದರೆ, ಮಗುವಿನ ಈ ಪ್ರತಿಯೊಂದು ಸಣ್ಣ ಚಲನೆಯೂ ಕೇವಲ ಆಟವಲ್ಲ, ಅದು ಭವಿಷ್ಯದ ಬದುಕಿಗೆ ನಿಸರ್ಗ ನಡೆಸುವ ಅದ್ಭುತ ತಯಾರಿಯಾಗಿರುತ್ತದೆ. ಮಗು ಗರ್ಭದೊಳಗೆ ಕೈಕಾಲು ಆಡಿಸುವುದರಿಂದ ಆಕೆಯ ಸ್ನಾಯುಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ.
ಹೆಬ್ಬೆರಳು ಚೀಪುವುದು ಮತ್ತು ಒದೆಯುವುದರಿಂದ ಮಗುವಿನ ನರಮಂಡಲ ಹೆಚ್ಚು ಚುರುಕಾಗುತ್ತದೆ. ಇದು ಹೊರ ಜಗತ್ತಿಗೆ ಬಂದ ತಕ್ಷಣ ತಾಯಿಯ ಎದೆಹಾಲು ಉಣ್ಣಲು ಮಗುವನ್ನು ತಯಾರು ಮಾಡುತ್ತದೆ.

ಸೂಚನೆ: ವರ್ಲ್ಡ್​ ಆಫ್ ಬಯೋಲಾಜಿ ವೋಬ್ ಎಂಬ ಇನ್​ಸ್ಟಾ ಅಕೌಂಟ್​ನಲ್ಲಿ ಮಾಹಿತಿ ನೀಡಲಾಗಿದೆ. ಇದ್ಯಾವ ಮಾಹಿತಿಯೂ ಟಿವಿ9 ಕನ್ನಡ ನೀಡುವ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಇತರೆ ವರದಿಗಳನ್ನು ಆಧರಿಸಿ ನೀಡಿರುವ ಮಾಹಿತಿಯಾಗಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version