ದತ್ತಪೀಠದಲ್ಲಿ ಹೊಸ ವಿವಾದ: ‘ಕಲಮೆ ತಯ್ಯಬಾ’ ಆಚರಣೆಗೆ ಹಿಂದೂ ಸಂಘಟನೆಗಳ ಆಕ್ರೋಶ – Kannada News | Chikmagaluru Datta Peeta: New Controversy Over Kalame Tayyaba Practice and Mujavar Rules

ಚಿಕ್ಕಮಗಳೂರು, ಫೆಬ್ರವರಿ 5: ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ದತ್ತಪೀಠವು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ದತ್ತಪೀಠದ ಗುಹೆಯೊಳಗೆ ಜನವರಿ 23ರಂದು ‘ಕಲಮೆ ತಯ್ಯಬಾ’ ಎಂಬ ಹೊಸ ಆಚರಣೆ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸುತ್ತದೆ ಎಂದು ಸಂಘಟನೆಗಳು ಹೇಳಿವೆ. ಹಿಂದೂಗಳಿಗೆ ಗುಹೆಯ ಮುಂಭಾಗ ಹೋಮ ಮಾಡಲು ಅವಕಾಶ ನೀಡದ ಜಿಲ್ಲಾಡಳಿತವು, ಹೊಸ ಆಚರಣೆಗೆ ಹೇಗೆ ಅವಕಾಶ ನೀಡಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ರಂಗನಾಥ್ ಪ್ರಶ್ನಿಸಿದ್ದಾರೆ. ದತ್ತಪೀಠದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿದ ನಂತರ ಇಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್​​ನಲ್ಲಿ ದತ್ತಪೀಠದ ಪ್ರಕರಣ ಇರುವ ಕಾರಣ, ಯಾವುದೇ ಹೊಸ ಆಚರಣೆಗಳಿಗೆ ಅವಕಾಶವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಆದರೆ, ಶಾಖಾದ್ರಿ ವಂಶಸ್ಥ ಸೈಯದ್ ಅಜ್ಮತ್ ಅವರು, ತಾವು ಯಾವುದೇ ಹೊಸ ಆಚರಣೆ ಮಾಡಿಲ್ಲ. ಜನವರಿ 25ರಂದು ಹಿಂದಿನ ಪದ್ಧತಿಯಂತೆ ದರ್ಶನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ, ‘ಕಲಮೆ ತಯ್ಯಬಾ’ ಆಚರಣೆ ಮೂಲಕ ಚಿಕ್ಕಮಗಳೂರಿನ ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ – Kannada News | An elderly woman makes a living selling bracelets on a Mumbai local train

ಮುಂಬೈ, ಫೆಬ್ರವರಿ 05: ಸ್ವಾಭಿಮಾನದ ಬದುಕೇ ಹಾಗೆ, ಯಾರ ಬಳಿ ಕೈಯೊಡ್ಡದೇ ಮೂರು ಹೊತ್ತಿನ ಊಟಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ಮಕ್ಕಳು ತಮ್ಮನ್ನು ನೋಡಬೇಕಾದ ಸಮಯದಲ್ಲಿ ತಾವೇ ದುಡಿದು ಜೀವನ ನಡೆಸುತ್ತಿರುವವರಲ್ಲಿ ಈ ವೃದ್ಧೆ (old woman) ಕೂಡ ಒಬ್ಬರು. ಹೌದು, 89 ವರ್ಷದ ಅಜ್ಜಿಯೊಬ್ಬರು ಮುಂಬೈನ (Mumbai) ಲೋಕಲ್ ರೈಲಿನಲ್ಲಿ ಬ್ರೇಸ್ಲೆಟ್‌ಗಳನ್ನು ಮಾರುತ್ತಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.

ಮೀತಾ ತುಷಿತ್ ಶಾ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದಲ್ಲಿ ಮುಂಬೈ ಲೋಕಲ್ ರೈಲಿನಲ್ಲಿ ವೃದ್ಧೆಯೊಬ್ಬರು ಬ್ರೇಸ್ಲೆಟ್‌ಗಳನ್ನು ಮಾರುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಇದು ಪ್ರೋತ್ಸಾಹದಾಯಕ ಮತ್ತು ಸ್ಪೂರ್ತಿದಾಯಕವಲ್ಲವೇ?. ಇಂದು ಮಧ್ಯಾಹ್ನ ಮುಂಬೈ ಲೋಕಲ್ ರೈಲಿನಲ್ಲಿ ಹತ್ತುತ್ತಿದ್ದಾಗ, ನಾನು ಬಳೆಗಳನ್ನು ಮಾರುತ್ತಿದ್ದ 89 ವರ್ಷದ ವೃದ್ಧೆಯನ್ನು ಭೇಟಿಯಾದೆ.

ವೈರಲ್ ವಿಡಿಯೋ ಇಲ್ಲಿದೆ

ನಾನು ಎಲ್ಲವನ್ನೂ ಖರೀದಿಸಲು ಬಯಸಿದ್ದೆ, ಆದರೆ ಹಣದ ಕೊರತೆಯಿಂದಾಗಿ ಸಾಧ್ಯವಾಗಲಿಲ್ಲ. ತನ್ನ ಕುಟುಂಬದ ಜೀವನ ವೆಚ್ಚವನ್ನು ಭರಿಸಬೇಕು, ಅದಕ್ಕಾಗಿ ಈ ಕೆಲಸ ಎಂದು ಹೇಳಿದರು. ಇದು ನಿಜವಾಗಿಯೂ ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೀತಾ ತುಷಿತ್ ಶಾ ಈ ಅಜ್ಜಿಯನ್ನು ಮಾತನಾಡಿಸಿದ್ದು, ನನ್ನ ಹೆಸರು ಕಮಲಾಬೆನ್ ಮೆಹ್ತಾ. ನಾನು ನಲಸೋಪರಾದಲ್ಲಿ ನೆಲೆಸಿದ್ದೇನೆಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: 70 ನೇ ವಯಸ್ಸಿನಲ್ಲಿ ಮೊದಲ ವ್ಲಾಗ್, ಈ ವೃದ್ಧನ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಈ ವಿಡಿಯೋ ಎರಡು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರರು, ಈ ವೃದ್ಧೆಯ ಸ್ವಾಭಿಮಾನದ ಬದುಕಿಗೆ ನನ್ನದೊಂದು ಸಲಾಂ ಎಂದರೆ, ಮತ್ತೊಬ್ಬರು, ಈ ವೃದ್ಧೆ ನಾನು ಜೂನಿಯರ್ ಕಾಲೇಜಿನಲ್ಲಿದ್ದಾಗ ರೈಲುಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಈಗ ನನಗೆ 40 ವರ್ಷ. ಇವತ್ತಿಗೂ ಅವರಲ್ಲಿ ಉತ್ಸಾಹ ಹಾಗೆಯೇ ಇದೆ. ಅವರಿಗೊಂದು ಸಲಾಂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಎಲ್ಲಾ ಇದ್ದು ಕುಳಿತು ತಿನ್ನುವವರ ನಡುವೆ ಈ ವೃದ್ಧೆ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಇಬ್ಬರಿಲ್ಲದ ಮೊದಲ ಟಿ20 ವಿಶ್ವಕಪ್​ – Kannada News | First t20 world cup without two players

ಹೌದು, ಟಿ20 ವಿಶ್ವಕಪ್​ನ ಎಲ್ಲಾ ಆವೃತ್ತಿಗಳಲ್ಲಿ ಕಾಣಿಸಿಕೊಂಡ ಆಟಗಾರರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಒಬ್ಬರು. 2007ರ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಹಿಟ್​ಮ್ಯಾನ್, ಆ ಬಳಿಕ 2009, 2010, 2012, 2014, 2016, 2021, 2022 ಮತ್ತು 2024 ರ ಟಿ20 ವಿಶ್ವಕಪ್​ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದರು.

Source link

ಕಾರಿನ ಮಿರರ್​ ಮುರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಕ್​​ ಸವಾರನ ದರ್ಪ: ವಿಡಿಯೋ ವೈರಲ್​​ – Kannada News | Bengaluru Road Rage: Biker Breaks Car Mirror and Abuses Driver

ನೆಲಮಂಗಲ, ಫೆಬ್ರವರಿ 05: ಬೆಂಗಳೂರಲ್ಲಿ ರೋಡ್​​ ರೇಜ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಸಣ್ಣಪುಟ್ಟ ಕಾರಣಗಳಿಗೂ ಸವಾರರು ರೌಡಿಸಂ ಪ್ರದರ್ಶಿಸುತ್ತಿದ್ದಾರೆ. ನೆಲಮಂಗಲದಿಂದ ಕೆಲಸಕ್ಕೆ ತೆರಳುತ್ತಿದ್ದ ಆದಿತ್ಯ ಎಂಬುವವರ ಕಾರಿಗೆ ಮಾದಾವರ ಜಂಕ್ಷನ್ ಬಳಿ ಬೈಕ್ ಸವಾರನೊಬ್ಬ ಅಡ್ಡ ಹಾಕಿ ಕಿರಿಕ್ ತೆಗೆದಿದ್ದಾನೆ. ಬೈಕ್ ಸವಾರನು ಕಾರಿನ ಮಿರರ್ ಅನ್ನು ಮುರಿದು, ಆದಿತ್ಯ ಅವರನ್ನು ನಿಂದಿಸಿ ಬೆದರಿಕೆಯನ್ನೂ ಹಾಕಿದ್ದಾನೆ. ಈ ಘಟನೆ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಚಾಲಕನ ಮೊಬೈಲ್​​ನಲ್ಲಿ ಘಟನೆ ರೆಕಾರ್ಡ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Kalyana Sundareswarar Temple: ದಿನಕ್ಕೆ 5 ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ, ಈ ಅದ್ಭುತ ದೇವಸ್ಥಾನ ಎಲ್ಲಿದೆ ಗೊತ್ತಾ? – Kannada News | Color Changing Shiva Lingam: Nallur Kalyana Sundareswarar Temple’s Ancient Mystery in Tamil Nadu

ತಮಿಳುನಾಡು ರಾಜ್ಯವನ್ನು ಸಾಮಾನ್ಯವಾಗಿ “ದೇವಾಲಯಗಳ ನಾಡು” ಎಂದು ಕರೆಯಲಾಗುತ್ತದೆ. 33,000ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು, ಭವ್ಯವಾದ ಗೋಪುರಗಳು ಮತ್ತು ದ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಈ ರಾಜ್ಯವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ಅಂತಹ ಅಪೂರ್ವ ಆಧ್ಯಾತ್ಮಿಕ ತಾಣಗಳಲ್ಲಿ ಒಂದು ತಂಜಾವೂರು ಜಿಲ್ಲೆಯ ನಲ್ಲೂರು ಗ್ರಾಮದಲ್ಲಿರುವ ಕಲ್ಯಾಣ ಸುಂದರೇಶ್ವರ ದೇವಾಲಯ. ಸಾವಿರ ವರ್ಷಗಳ ಇತಿಹಾಸವನ್ನು ಹೊತ್ತಿರುವ ಈ ಪವಿತ್ರ ಕ್ಷೇತ್ರವು ತನ್ನ ಅದ್ಭುತ ಶಿವಲಿಂಗದ ಮೂಲಕ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ.

ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿ ಪೂಜಿಸಲ್ಪಡುವ ಶಿವಲಿಂಗ. ಭಕ್ತರ ನಂಬಿಕೆಯ ಪ್ರಕಾರ, ಈ ಶಿವಲಿಂಗವು ಒಂದೇ ದಿನದಲ್ಲಿ ಐದು ಬಾರಿ ಬಣ್ಣ ಬದಲಾಯಿಸುತ್ತದೆ. ಬೆಳಿಗ್ಗೆ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಲಿಂಗವು ಮಧ್ಯಾಹ್ನ ಬಿಳಿಯಾಗಿ, ಸಂಜೆ ಕೆಂಪಾಗಿ, ರಾತ್ರಿ ತಿಳಿ ನೀಲಿ ಬಣ್ಣಕ್ಕೆ, ಮಧ್ಯರಾತ್ರಿ ಹಸಿರಾಗಿ ರೂಪಾಂತರಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ದಿನದ ವಿವಿಧ ಸಮಯಗಳಲ್ಲಿ ವಿವಿಧ ಬಣ್ಣಗಳಲ್ಲಿ ಶಿವನ ದರ್ಶನ ಪಡೆಯಲು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಅಪರೂಪದ ದೃಶ್ಯವನ್ನು ನೋಡುವುದಕ್ಕಾಗಿ ತಮಿಳುನಾಡಿನಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಸಾವಿರಾರು ಜನರು ಇಲ್ಲಿ ಹರಿದು ಬರುತ್ತಾರೆ.

ಬಣ್ಣ ಬದಲಿಸುವ ಅದ್ಭುತ ಶಿವಲಿಂಗ

ಐತಿಹಾಸಿಕ ದಾಖಲೆಗಳ ಪ್ರಕಾರ, ಈ ದೇವಾಲಯವನ್ನು ಸುಮಾರು ಸಾವಿರ ವರ್ಷಗಳ ಹಿಂದೆ ಚೋಳ ಚಕ್ರವರ್ತಿ ರಾಜರಾಜ ಚೋಳನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಕಾಲಕ್ರಮೇಣ ಕೆಲವು ನವೀಕರಣಗಳು ನಡೆದಿದ್ದರೂ, ದೇವಾಲಯದ ಮೂಲ ಸಂಪ್ರದಾಯಗಳು ಮತ್ತು ಧಾರ್ಮಿಕ ಆಚರಣೆಗಳು ಇಂದಿಗೂ ಹಾಗೆಯೇ ಉಳಿದಿವೆ. ಇಲ್ಲಿ ಶಿವನನ್ನು “ಕಲ್ಯಾಣ ಸುಂದರೇಶ್ವರ” ಎಂದು ಆರಾಧಿಸಲಾಗುತ್ತದೆ. ಶಿವನ ಜೊತೆಗೆ ಮುರುಗನ್ (ಕಾರ್ತಿಕೇಯ) ದೇವರಿಗೂ ವಿಶೇಷ ಮಹತ್ವವಿದೆ.

ದೇವಾಲಯದ ಇನ್ನೊಂದು ವಿಶೇಷವೆಂದರೆ ಎರಡು ಕಪ್ಪು ಕಲ್ಲಿನ ಶಿವಲಿಂಗಗಳು. ಮುಖ್ಯ ಗರ್ಭಗುಡಿಯಲ್ಲಿ ಇರುವ ಲಿಂಗವನ್ನು ಚಿನ್ನದ ಅಲಂಕಾರಗಳಿಂದ ಸಿಂಗರಿಸಲಾಗಿದೆ. ಮತ್ತೊಂದು ಶಿವಲಿಂಗವು ದೇವಾಲಯದ ಪ್ರವೇಶದ್ವಾರದ ಬಳಿ ಇದೆ. ಪ್ರತಿದಿನ ಬೆಳಿಗ್ಗೆ ಈ ಲಿಂಗಕ್ಕೆ ಶ್ರೀಗಂಧದ ಅಭಿಷೇಕ ಮಾಡಲಾಗುತ್ತದೆ. ಮಧ್ಯಾಹ್ನ ವೇಳೆಗೆ ಅದರ ಸುಗಂಧವೇ ಭಕ್ತರನ್ನು ಆಧ್ಯಾತ್ಮಿಕ ವಾತಾವರಣಕ್ಕೆ ಕರೆದೊಯ್ಯುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಪ್ರತಿದಿನ ಇಲ್ಲಿ ಐದು ಕಾಲ ಪೂಜೆಗಳು ನಡೆಯುತ್ತವೆ. ಪ್ರತಿ ಪೂಜೆಯಲ್ಲೂ ಶಿವನು ವಿಭಿನ್ನ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ. ಬೆಳಿಗ್ಗೆ ವೈದ್ಯನಾಥ ಸ್ವರೂಪದಲ್ಲಿ, ನಂದಿಯೊಂದಿಗೆ ಭಕ್ತರಿಗೆ ಕೃಪೆ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಶಿವಲಿಂಗದ ಬಣ್ಣ ಬದಲಾವಣೆಗೆ ಇನ್ನೂ ವೈಜ್ಞಾನಿಕ ಸ್ಪಷ್ಟನೆ ಸಿಕ್ಕಿಲ್ಲ. ಆದರೂ, ಈ ಘಟನೆ ಸ್ವಾಭಾವಿಕವಾಗಿ ನಡೆಯುತ್ತದೆ ಎಂಬ ಭಕ್ತರ ವಿಶ್ವಾಸವೇ ದೇವಾಲಯದ ಮಹಿಮೆ ಮತ್ತು ಆಧ್ಯಾತ್ಮಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಶಿವರಾತ್ರಿ, ಪ್ರದೋಷ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ಈ ಕ್ಷೇತ್ರವು ಭಕ್ತರ ಸಂಚಾರದಿಂದ ಕಿಕ್ಕಿರಿದುಕೊಳ್ಳುತ್ತದೆ. ಪ್ರಾಚೀನ ಇತಿಹಾಸ, ಶಿಲ್ಪಕಲೆ, ಮತ್ತು ದೈವಿಕ ಅನುಭವ ಎಲ್ಲಾ ಸೇರಿ ಕಲ್ಯಾಣ ಸುಂದರೇಶ್ವರ ದೇವಾಲಯವನ್ನು ಒಂದು ವಿಶಿಷ್ಟ ತೀರ್ಥಕ್ಷೇತ್ರವನ್ನಾಗಿ ಮಾಡಿವೆ. ಭಕ್ತಿಭಾವದಿಂದ ಶಿವನ ದರ್ಶನ ಪಡೆಯಲು ಬಯಸುವವರಿಗೆ ಇದು ತಪ್ಪದೆ ಭೇಟಿ ನೀಡಬೇಕಾದ ಪವಿತ್ರ ಸ್ಥಳವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರಣಿ ಮಾಡುತ್ತಾರಂತೆ ರಾಜಮೌಳಿ: ಎಲ್ಲಿ? ಯಾವ ಕಾರಣಕ್ಕೆ? – Kannada News | Rajamouli said he will protest in front on IMAX office for bigger screens in India

ಎಸ್ಎಸ್ ರಾಜಮೌಳಿ (SS Rajamouli), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ರಾಜಮೌಳಿ, ರಾಜಕೀಯದಿಂದ ಬಲು ದೂರವಾದರೂ ಎಲ್ಲ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಮಂದಿಯಿಂದ ಸಮಾನ ಗೌರವಕ್ಕೆ ಅರ್ಹವಾಗಿರುವ ವ್ಯಕ್ತಿ ಅವರು. ರಾಜಮೌಳಿಯ ಪ್ರತಿಭೆ, ಮಾಡಿರುವ ಕಾರ್ಯಗಳು ಅವರನ್ನು ಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿದೆ. ಪ್ರಭಾವಿ ವ್ಯಕ್ತಿ ಆಗಿರುವ ಜೊತೆಗೆ ಸಾಕಷ್ಟು ಶ್ರೀಮಂತಿಕೆಯನ್ನೂ ಹೊಂದಿರುವ ರಾಜಮೌಳಿಗೆ ಯಾವುದನ್ನೇ ಆಗಲಿ ಪಡೆದುಕೊಳ್ಳುವುದು ಕಷ್ಟವೇನೂ ಅಲ್ಲ. ಆದರೂ ರಾಜಮೌಳಿ, ಬೇಡಿಕೆಯೊಂದರ ಈಡೇರಿಕೆಗೆ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದ್ದಾರೆ.

ರಾಜಮೌಳಿ, ಸಿನಿಮಾಗಳ ಬಗ್ಗೆ ಅಪಾರ ಕಾಳಜಿ ಇರುವ ವ್ಯಕ್ತಿ. ಜನರಿಗೆ ಒಳ್ಳೆಯ ಸಿನಿಮಾ. ಅತ್ಯುತ್ತಮ ಗುಣಮಟ್ಟದ ಸಿನಿಮಾ ನೀಡಬೇಕು ಎಂಬ ಅಪಾರ ಹಪ-ಹಪಿ ಇರುವ ನಿರ್ದೇಶಕ. ಇದೇ ಕಾರಣಕ್ಕೆ ಅವರು ವಿಶ್ವದ ಅತ್ಯುತ್ತಮ ತಂತ್ರಜ್ಞರೊಟ್ಟಿಗೆ ಕೆಲಸ ಮಾಡುತ್ತಾರೆ, ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ತಮ್ಮ ಸಿನಿಮಾಕ್ಕೆ ಅಳವಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ತಂತ್ರಜ್ಞಾನದ ಮಿತಿ ಇದ್ದಾಗಲೇ ಅವರು ‘ಈಗ’ ಅಂಥಹಾ ಸಿನಿಮಾ ನೀಡಿದವರು. ಆದರೆ ರಾಜಮೌಳಿ ಅವರು ಭಾರತದ ಚಿತ್ರಮಂದಿರಗಳ ಬಗ್ಗೆ ದೂರು ಇದೆ. ಇದೇ ಕಾರಣಕ್ಕೆ ಅವರು ಪ್ರತಿಭಟನೆ ಮಾಡುವೆ ಎಂದು ಹೇಳಿರುವುದು.

ಇತ್ತೀಚೆಗಷ್ಟೆ ಆಂಗ್ಲ ಮಾಧ್ಯಮವೊಂದಕ್ಕೆ ಹೈದರಾಬಾದ್​ನಲ್ಲಿ ಸಂದರ್ಶನ ನೀಡಿರುವ ಎಸ್​​ಎಸ್ ರಾಜಮೌಳಿ, ತಾವು ‘ವಾರಣಾಸಿ’ ಸಿನಿಮಾವನ್ನು ಐಮ್ಯಾಕ್ಸ್ ಕ್ಯಾಮೆರಾನಲ್ಲಿ ಶೂಟ್ ಮಾಡಿರುವ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾನಲ್ಲಿ ದೃಶ್ಯಗಳ ಆಳ-ಅಗಲ ಮತ್ತು ಎತ್ತರ ಬಹಳ ದೊಡ್ಡದಾಗಿದ್ದು, ಅವುಗಳನ್ನು ಸರಿಯಾಗಿ ಕ್ಯಾಪ್ಚರ್ ಮಾಡಲು ಐಮ್ಯಾಕ್ಸ್​ ಸೂಕ್ತ ಎಂಬ ಕಾರಣಕ್ಕೆ ತಾವು ಐಮ್ಯಾಕ್ಸ್ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ವಾರಣಾಸಿ’ ಚಿತ್ರೀಕರಣಕ್ಕೆ ಐಮ್ಯಾಕ್ಸ್ ಬಳಸಿದ್ದೇಕೆ: ಕಾರಣ ನೀಡಿದ ರಾಜಮೌಳಿ

ಆದರೆ ಐಮ್ಯಾಕ್ಸ್​​ ನಲ್ಲಿ ಶೂಟ್ ಆದ ಸಿನಿಮಾವನ್ನು ಪ್ರದರ್ಶಿಸಲು ಭಾರತದಲ್ಲಿ ಒಂದೇ ಒಂದು ಫುಲ್ ಲೆಂತ್ ಐಮ್ಯಾಕ್ಸ್ ಸ್ಕ್ರೀನ್​​ಗಳೇ ಇಲ್ಲ. ಈ ಬಗ್ಗೆ ಅಸಮಾಧಾನ ಹೊಂದಿರುವ ರಾಜಮೌಳಿ, ಸಂದರ್ಶನದಲ್ಲಿ ಮಾತನಾಡುತ್ತಾ, ‘ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್​​ಗಳ ಅಗತ್ಯ ಇದೆ. ಭಾರತದಲ್ಲಿ ಸಹ ದೊಡ್ಡ ಐಮ್ಯಾಕ್ಸ್ ಸ್ಕ್ರೀನ್​​ಗಳನ್ನು ಹಾಕುವಂತೆ ನಾನು ಐಮ್ಯಾಕ್ಸ್ ಕಚೇರಿ ಎದುರು ಧರಣಿ ಕೂರುತ್ತೇನೆ’ ಎಂದಿದ್ದಾರೆ ರಾಜಮೌಳಿ.

ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್​​ಗಳು ಇವೆ ಆದರೆ 1.43:1 ಅಳತೆಯ ಬೃಹತ್ ಐಮ್ಯಾಕ್ಸ್​ ಸ್ಕ್ರೀನ್​​ಗಳು ಇಲ್ಲ. ಭಾರತದಲ್ಲಿ ಇರುವುದೆಲ್ಲ 70 ಎಂಎಂ ಸ್ಕ್ರೀನ್​​ಗಳು ಮಾತ್ರ. ಆದರೆ ವಿದೇಶದಲ್ಲಿ ಅದರಲ್ಲೂ ಐಮ್ಯಾಕ್ಸ್ ಸ್ಕ್ರೀನ್​​ಗಳು 100*140 ಅಡಿ ಅಗಲ-ಉದ್ದದ ಸ್ಕ್ರೀನ್​​ಗಳು ಇವೆ. ಈ ಬೃಹತ್ ಸ್ಕ್ರೀನ್​​ಗಳಲ್ಲಿ ಸಿನಿಮಾ ನೋಡುವ ಅನುಭವವೇ ಅದ್ಭುತ. ಆದರೆ 70 ಎಂಎಂ ಸ್ಕ್ರೀನ್​​ಗಳಲ್ಲಿ ದೃಶ್ಯದ ಎತ್ತರ ಗೊತ್ತೇ ಆಗುವುದಿಲ್ಲ. ಎತ್ತರವಾದ ಬೆಟ್ಟದ ದೃಶ್ಯ ತೋರಿಸಿದರೆ ಅದರ ತಲೆ ಕಟ್ ಆಗಿ ಕಾಣುತ್ತದೆ. ಇದೇ ಕಾರಣಕ್ಕೆ ರಾಜಮೌಳಿ, ಭಾರತದಲ್ಲೂ ಬೃಹತ್ ಆದ ಐಮ್ಯಾಕ್ಸ್​ ಸ್ಕ್ರೀನ್​​ಗಳು ಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ಅಮೆರಿಕ ಟ್ರೇಡ್ ಡೀಲ್ ಸಲೀಸಾಗಿ ಕುದುರಿದ್ದು ಹೇಗೆ? ಅಜಿತ್ ದೋವಲ್ ಅಮೆರಿಕ ಭೇಟಿಯಲ್ಲಿ ಆಗಿದ್ದೇನು? – Kannada News | Has Ajit Doval’s blunt message to Marco Rubio effected India US trade deal to become reality

ನವದೆಹಲಿ, ಫೆಬ್ರುವರಿ 5: ಭಾರತದ ವಿಚಾರದಲ್ಲಿ ಉಡಾಫೆಯಿಂದ ವರ್ತಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕೆಲ ದಿನಗಳ ಹಿಂದೆ ಭಾರತದ ಜೊತೆ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ ಎಂದು ಘೋಷಿಸಿದ್ದರು. ಈ ಹಿಂದೆ ಅವರ ಭಾಷೆಯಲ್ಲಿ ಇರುತ್ತಿದ್ದ ಅಹಂಕಾರ, ಉಡಾಫೆಗಳು ಈ ಬಾರಿ ಇರಲಿಲ್ಲ ಎನ್ನುವುದು ಗಮನಾರ್ಹ. ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡುವುದೇ ಇಲ್ಲ ಎನ್ನುವಂತಿದ್ದ ಸ್ಥಿತಿ ರಾತ್ರೋರಾತ್ರಿ ಬದಲಾಗಿ ಹೋಗಿದೆ. ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳುವುದು ಖಚಿತವಾಗಿದೆ.

ಅಮೆರಿಕದ ಈ ಬದಲಾವದ ವರ್ತನೆಯ ಹಿಂದೆ ಅಜಿತ್ ದೋವಲ್ (Ajit Doval) ಇದ್ದಾರೆ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಅಮೆರಿಕದ ಡಿಫೆನ್ಸ್ ಮಿನಿಸ್ಟರ್​​ರನ್ನು ಭೇಟಿ ಮಾಡಿದ್ದ ಅಜಿತ್ ದೋವಲ್, ನೇರಾನೇರ ಆಡಿದ ಮಾತುಗಳು ಫಲ ನೀಡಿವೆ ಎನ್ನಲಾಗಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರ ಟೀಕೆ

ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಹಾಗೂ ಚೀನಾ ಮುಖ್ಯಸ್ಥರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಆದ ಅಜಿತ್ ದೋವಲ್ ಅವರು ಅಮೆರಿಕಕ್ಕೆ ತೆರಳಿ, ಅಲ್ಲಿಯ ರಕ್ಷಣಾ ಸಚಿವ ಮಾರ್ಕೊ ರೂಬಿಯೋ ಅವರನ್ನು ಭೇಟಿ ಮಾಡಿದ್ದರು. ಎರಡೂ ದೇಶಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಾತುಕತೆಗಳಿಗೆ ಮತ್ತೆ ತೆರೆದುಕೊಳ್ಳುವಂತೆ ಒಪ್ಪಿಸಲು ಅಜಿತ್ ದೋವಲ್ ಯಶಸ್ವಿಯಾದರೆಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ.

ಭಾರತವನ್ನು ಬೆದರಿಸುವ ಪ್ರಯತ್ನ ಬೇಡ ಎಂದ ದೋವಲ್

ಆ ಮಾತುಕತೆ ಗೌಪ್ಯ ಸಭೆಯಲ್ಲಿ ನಡೆದಿತ್ತೆಂದು ಹೇಳಲಾಗುತ್ತಿದೆ. ಹೀಗಾಗಿ, ಯಾವುದೇ ಮಾಧ್ಯಮಗಳಲ್ಲೂ ಈ ಭೇಟಿಯ ವೇಳೆ ಆದ ಮಾತುಕತೆ ಬಗ್ಗೆ ವರದಿ ಬಂದಿರಲಿಲ್ಲ. ಮೂಲಗಳು ತಿಳಿಸಿರುವ ಪ್ರಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ತಂಡದವರು ಭಾರತವನ್ನು ಹೆದರಿಸಲು ಆಗುವುದಿಲ್ಲ ಎಂದು ಮಾರ್ಕೋ ರೂಬಿಯೋ ಅವರಿಗೆ ಅಜಿತ್ ದೋವಲ್ ಕಡ್ಡಿ ತುಂಡು ಮಾಡಿದಂತೆ ತಿಳಿಸಿದರೆನ್ನಲಾಗಿದೆ.

ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

ಈ ಹಿಂದೆ ಬೇರೆ ಅಮೆರಿಕನ್ ಆಡಳಿತಗಳನ್ನು ಭಾರತ ನೋಡಿದೆ. ಟ್ರಂಪ್ ಅವರಧಿ ಮುಗಿಯುವವರೆಗೆ ಬೇಕಾದರೆ ಕಾಯಲು ಭಾರತ ಸಿದ್ಧ ಇದೆ ಎಂದು ಮಾರ್ಕ್ ರುಬಿಯೋಗೆ ನೇರಾನೇರ ಹೇಳಿದ್ದ ಅಜಿತ್ ದೋವಲ್, ಅಮೆರಿಕನ್ನರು ಭಾರತದ ಮೇಲೆ ಸಾರ್ವಜನಿಕ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿದರೆ ಸಂಬಂಧಗಳು ಮತ್ತೆ ಬೆಸೆಯಲು ಸಾಧ್ಯ ಎಂದು ಸ್ಪಷ್ಟವಾಗಿ ಹೇಳಿದ್ದರಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋ ಟಿಕೆಟ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಏರಿಕೆಯಾಗುತ್ತಾ ಕಾವೇರಿ ನೀರಿನ ದರ? ಜಲಮಂಡಳಿ ಅಧ್ಯಕ್ಷರಿಂದ ಸ್ಪಷ್ಟನೆ – Kannada News | No Proposal to Hike Cauvery Water Tariff in Bengaluru After Metro Fare Increase, Clarifies BWSSB Chairman

ಬೆಂಗಳೂರು, ಫೆಬ್ರವರಿ 5: ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ (Water Price) ಹೆಚ್ಚಳವಾಗಲಿದೆ ಎಂಬ ವದಂತಿಗಳಿಗೆ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಬ್ರೇಕ್ ಹಾಕಿದ್ದಾರೆ. ನೀರಿನ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾವೇರಿ ನೀರಿನ ಬೆಲೆ ಏರಿಕೆ ಕುರಿತು ವದಂತಿಗಳು ಹಬ್ಬಿರುವ ಕಾರಣ ಬೆಂಗಳೂರಿನಲ್ಲಿ ‘ಟಿವಿ9’ಗೆ ಮಾಹಿತಿ ನೀಡಿದ ಅವರು, ಕಾವೇರಿ ನೀರಿನ ಬೆಲೆ ಏರಿಕೆ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ. ಕುಡಿಯುವ ನೀರಿನ ದರ ಹೆಚ್ಚಿಸುವ ಬಗ್ಗೆ ಜಲಮಂಡಳಿ ಯಾವುದೇ ಮಟ್ಟದಲ್ಲೂ ಚಿಂತನೆ ನಡೆಸಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆ ಅಥವಾ ಚರ್ಚೆಯೂ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಇದರಿಂದ ಬೆಂಗಳೂರಿನ ನಾಗರಿಕರು ಸದ್ಯದ ಮಟ್ಟಿಗೆ ನಿರಾಳರಾಗುವಂತಾಗಿದೆ.

ಕಳೆದ ವರ್ಷ (2025) ಏಪ್ರಿಲ್​​ನಲ್ಲಿ ಬೆಂಗಳೂರು ಜಲ ಮಂಡಳಿ ನೀರಿನ ದರ ಏರಿಕೆ ಮಾಡಿತ್ತು. 2014ರ ಅಕ್ಟೋಬರ್ ನಂತರ ನಗರದಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ನೀರಿನ ದರ ಏರಿಕೆ ಮಾಡದೆ ಬೇರೆ ವಿಧಿಯಿಲ್ಲ ಎಂದು ಜಲಮಂಡಳಿಯು ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ಇದನ್ನೂ ಓದಿ: ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಬಿಸಿ: ಎಲ್ಲಿಂದ ಎಲ್ಲಿಗೆ ಎಷ್ಟಾಯ್ತು ಟಿಕೆಟ್ ಬೆಲೆ?

ಡೊಮೆಸ್ಟಿಕ್ ಕನೆಕ್ಷನ್​ಗೆ ಗರಿಷ್ಠ ಲೀಟರ್​ಗೆ ಒಂದು ಪೈಸೆ ಹೆಚ್ಚಳ ಮಾಡಲಾಗಿತ್ತು 0-8 ಸಾವಿರದೊಳಗೆ ಸ್ಲ್ಯಾಬ್​ಗೆ ಲೀಟರ್​ಗೆ 0.15 ಪೈಸೆ, 8-25 ಸಾವಿರದೊಳಗಿನ ಸ್ಲ್ಯಾಬ್​ಗೆ ಲೀಟರ್​ಗೆ 0.40 ಪೈಸೆ, 25 ಸಾವಿರ ಲೀಟರ್​ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ, 50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ರಾಮ ಪ್ರಸಾತ್ ಮನೋಹರ್, ನೀರಿನ ದರ ಪ್ರತಿ ವರ್ಷ ಏಪ್ರಿಲ್ 1ರಿಂದ ಶೇಕಡಾ 3ರಷ್ಟು ಹೆಚ್ಚಳವಾಗಲಿದೆ. ಸದ್ಯ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗಬಹುದು. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಹೇಳಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಹೊಸ ಅಸ್ತ್ರ ಪ್ರಯೋಗಿಸಿದ ಡಿಜಿಪಿ ಅಲೋಕ್ ಕುಮಾರ್ – Kannada News | Parappana Agrahara Staff Transfers: Alok Kumar’s Strategy to End VIP Treatment and Graft

ಬೆಂಗಳೂರು, ಫೆ.5: ರಾಜ್ಯದ ಜೈಲುಗಳಲ್ಲಿ ಖೈದಿಗಳಿಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಮತ್ತು ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ (DGP Alok Kumar )ಅವರು ಈಗ ‘ವರ್ಗಾವಣೆ ಅಸ್ತ್ರ’ವನ್ನು ಪ್ರಯೋಗಿಸಲು ಮುಂದಾಗಿದ್ದಾರೆ. ರಾಜ್ಯದ ವಿವಿಧ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವರ್ಷಾನುಗಟ್ಟಲೆ ಒಂದೇ ಕಡೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಪ್ಲಾನ್ ಮಾಡಲಾಗಿದೆ. ಜೈಲು ಸಿಬ್ಬಂದಿ ಹಣ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಇದೇ ತಿಂಗಳ 9ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮುಹೂರ್ತ ನಿಗದಿಯಾಗಿದೆ. ಇತ್ತೀಚೆಗೆ ಖೈದಿಗಳಿಗೆ ರಾಜಾತಿತ್ಯ ನೀಡಿ ಅತಿ ಹೆಚ್ಚು ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿಗಳ ಮೇಲೆ ಅಲೋಕ್ ಕುಮಾರ್ ಕಣ್ಣಿಟ್ಟಿದ್ದಾರೆ. ಬೇರೆ ಕಡೆಗಳಿಂದ ಜೈಲಿಗೆ ನಿಯೋಜನೆ (OOD) ಮೇಲೆ ಬಂದಿರುವ ಅಧಿಕಾರಿಗಳಿಗೂ ಈಗ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಿಬ್ಬಂದಿಗಳನ್ನು ಆಗಾಗ ಬದಲಾವಣೆ ಮಾಡುವುದರಿಂದ ಜೈಲಿನ ಒಳಗಿನ ಅಕ್ರಮ ಜಾಲವನ್ನು ತಡೆಯಬಹುದು ಹಾಗೂ ಶಿಸ್ತನ್ನು ಕಾಪಾಡಬಹುದು ಎಂಬುದು ಡಿಜಿಪಿ ಅವರ ಉದ್ದೇಶವಾಗಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಜೈಲಿನಲ್ಲಿ ಹೊಸ ರೂಲ್ಸ್: ದರ್ಶನ್ ಸೇರಿದಂತೆ ಇತರೆ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಬ್ರೇಕ್

ಅಲೋಕ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರುತ್ತಿದ್ದು, ಈ ಸರಣಿ ವರ್ಗಾವಣೆಗಳು ಜೈಲು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿದೆ. ಇದೀಗ ಅಲೋಕ್​​ ಕುಮಾರ್​ ಅವರ ಈ ಕ್ರಮದಿಂದ ಅಧಿಕಾರಿಗಳಿಗೆ ಭಯ ಶುರುವಾಗಿದೆ. ಈಗಾಗಲೇ ಅವರು ಮಂಗಳೂರು, ಬೆಂಗಳೂರು ಜೈಲಿಗೆ ಭೇಟಿ ನೀಡಿ. ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಚ್ಚರಿಕೆ ಬೆನ್ನಲ್ಲೇ ವರ್ಗಾವಣೆ ಕ್ರಮವನ್ನು ತೆಗೆದುಕೊಂಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:28 pm, Thu, 5 February 26

Source link

ವಿಚಿತ್ರ ಮುಖದ ವ್ಯಕ್ತಿಯೊಟ್ಟಿಗೆ ಪ್ರೀತಿಗೆ ಬಿದ್ದ ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ – Kannada News | Disha Patani is in love with mask man Talwiinder who is he

ಬಾಲಿವುಡ್​​ನಲ್ಲಿ (Bollywood) ಸಾಕಷ್ಟು ಹಾಟ್ ನಟಿಯರಿದ್ದಾರೆ ಆದರೆ ದಿಶಾ ಪಟಾನಿ ನಂಬರ್ 1 ಎನ್ನಬಹುದು. ಫಿಟ್​​ನೆಸ್​ಗೆ ಅಪಾರ ಒತ್ತು ಕೊಡುವ ದಿಶಾ ಪಟಾನಿ, ಗ್ಲಾಮರಸ್ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಸಿನಿಮಾ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಟಿ ದಿಶಾ ಪಟಾನಿ, ನಿಜ ಜೀವನದಲ್ಲಿ ಸಹ ಸಖತ್ ಬೋಲ್ಡ್ ಆದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾರೆ. ಪದೇ ಪದೇ ಬಾಯ್​​ಫ್ರೆಂಡ್ ಬದಲಾಯಿಸುವ ದಿಶಾ ಪಟಾನಿ ಇದೀಗ ವಿಚಿತ್ರ ವ್ಯಕ್ತಿಯೊಡನೆ ಪ್ರೀತಿಗೆ ಬಿದ್ದಿದ್ದಾರೆ. ಮುಖಕ್ಕೆ ಪ್ರೇತತ ಪೇಯಿಂಟ್ ಬಳಿದುಕೊಂಡು ಓಡಾಡುವ ಯುವಕನೊಟ್ಟಿಗೆ ದಿಶಾ ರಿಲೇಷನ್​​ನಲ್ಲಿದ್ದಾರೆ.

ದಿಶಾ ಪಟಾನಿ ಈ ಹಿಂದೆ ಬಾಲಿವುಡ್ ಸ್ಟಾರ್ ನಟ ಟೈಗರ್ ಶ್ರಾಫ್ ಜೊತೆಗೆ ಪ್ರೀತಿಯಲ್ಲಿದ್ದರು. ಇವರಿಬ್ಬರ ಪ್ರೇಮ ಸಂಬಂಧ ಕೆಲ ವರ್ಷ ನಡೆಯಿತು, ಬಳಿಕ ಇಬ್ಬರೂ ದೂರಾದರು. ಬಳಿಕ ದಿಶಾ ಹೆಸರು ವಿದೇಶಿ ವ್ಯಕ್ತಿಯೊಬ್ಬನ ಜೊತೆ ಕೇಳಿ ಬಂತು. ಆದರೆ ಇದೀಗ ದಿಶಾ ಪಟಾನಿ, ಸದಾ ಕಾಲ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಓಡಾಡುವ ಸಂಗೀತಗಾರನೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಪರಸ್ಪರ ಕೈ-ಕೈ ಹಿಡಿದುಕೊಂಡು ಓಡಾಡುವ ಹಲವು ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಷ್ಟಕ್ಕೂ ಈ ವಿಚಿತ್ರ ವ್ಯಕ್ತಿ ಯಾರು?

ಇದನ್ನೂ ಓದಿ:ರಾಯಲ್ ಲುಕ್​​ನಲ್ಲಿ ಕಂಗೊಳಿಸಿದ ನಟಿ ದಿಶಾ ಪಟಾನಿ ಇಲ್ಲಿವೆ ಚಿತ್ರಗಳು

ದಿಶಾ ಪಟಾನಿ ಪ್ರೀತಿಗೆ ಬಿದ್ದಿರುವ ಆ ವಿಚಿತ್ರ ಮುಖದ ವ್ಯಕ್ತಿಯ ಹೆಸರು ತಲ್ವಿಂಧರ್. ಭಾರತೀಯ ಮೂಲದ ಆದರೆ ಅಮೆರಿಕದ ಬೇ ಏರಿಯಾನಲ್ಲಿ ಬೆಳೆದ ತಲ್ವೀಂದರ್ ಇತ್ತೀಚೆಗೆ ಜನಪ್ರಿಯತೆ ಗಳಿಸಿರುವ ಗಾಯಕ. ಪಂಜಾಬಿ ಹಾಡುಗಳನ್ನು ಹಿಪ್-ಹಾಪ್, ಎಲೆಕ್ಟ್ರಾನಿಕ್ ಸಂಗೀತ ಜೊತೆಗೆ ಸೇರಿಸಿ ಹಾಡುವುದು ಇವರ ಸ್ಟೈಲ್. ಹಲವು ಶೋಗಳನ್ನು ಸಹ ನೀಡಿರುವ ತಲ್ವೀಂಧರ್, ಭಾರತದ ಜನಪ್ರಿಯ ಹಿಪ್-ಹಾಪ್ ಗಾಯಕರುಗಳಲ್ಲಿ ಒಬ್ಬರಾಗಿದ್ದಾರೆ.

ಮುಖಕ್ಕೆ ಬೇತಾಳದಂತೆ ಬಣ್ಣವನ್ನು ಬಳಿದುಕೊಂಡೇ ಓಡಾಡುತ್ತಾರೆ ತಲ್ವಿಂಧರ್. ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿ ಆಗಿದ್ದಾಗಲೂ ಸಹ ಮುಖಕ್ಕೆ ಅವರು ಬಣ್ಣ ಬಳಿದುಕೊಂಡಿದ್ದರು. ತಲ್ವಿಂಧರ್ ಅವರ ತಂದೆ ಪೇಂಟರ್ ಆಗಿದ್ದರಂತೆ, ಅವರಿಗೆ ಗೌರವ ನೀಡಲೆಂದು ತಲ್ವಿಂಧರ್ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ. ಮಾತ್ರವಲ್ಲದೆ, ತಮ್ಮ ಮುಖವನ್ನು ಅವರು ಈ ವರೆಗೆ ಯಾವುದೇ ಕಾರ್ಯಕ್ರಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿಲ್ಲ.

ಇತ್ತೀಚೆಗೆ ತಲ್ವಿಂಧರ್ ನೀಡಿರುವ ಸಂದರ್ಶನದಲ್ಲಿ ಅವರಿಗೆ ದಿಶಾ ಪಟಾನಿಯೊಟ್ಟಿಗಿನ ಪ್ರೀತಿಯ ಬಗ್ಗೆ ಪ್ರಶ್ನೆ ಕೇಳಲಾಯ್ತು. ಹೌದು, ತಾವು ಪ್ರೀತಿಯಲ್ಲಿರುವುದಾಗಿ ತಲ್ವಿಂಧರ್ ಹೇಳಿದ್ದಾರೆ ಅಲ್ಲದೆ, ನಾನು ಪಇನ್ನೂ ನಿಜವಾದ ಪ್ರೀತಿಯನ್ನು ಹುಡುಕುತ್ತಲೇ ಇದ್ದೇನೆ ಎಂದು ಸಹ ಹೇಳಿದ್ದಾರೆ. ಆ ಮೂಲಕ ತಾವು ದಿಶಾ ಜೊತೆಗೆ ಭವಿಷ್ಯದಲ್ಲಿ ಬ್ರೇಕ್ ಅಪ್ ಮಾಡಿಕೊಳ್ಳಬಹುದು ಎಂದು ಸಹ ಹೇಳಿದ್ದಾರೆ.

ದಿಶಾ, ಬಾಲಿವುಡ್​​ನ ಹಾಟೆಸ್ಟ್ ನಟಿ, ದಿಶಾಗೆ ಈ ದೆವ್ವದ ಮುಖದವನಿಗಿಂತಲೂ ಬಹಳ ಒಳ್ಳೆಯ ಹುಡುಗರು, ನಟರುಗಳೇ ಸಿಗುತ್ತಿದ್ದರು ಎಂದು ದಿಶಾ ಅಭಿಮಾನಿಗಳೇ ಮೂಗು ಮುರಿಯುತ್ತಿದ್ದಾರೆ. ಏನೇ ಆಗಲಿ, ಪ್ರೀತಿಗೆ ಕಣ್ಣಿಲ್ಲ ಎಂಬುದು ದಿಶಾ ಪಟಾನಿ ವಿಷಯದಲ್ಲಿ ಸತ್ಯವೇ ಆದಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version