NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು ಅಂದಿದ್ದಕ್ಕೆ ಸಿಟಿ ರವಿ ಏನಂದ್ರು ನೋಡಿ

ದಾವಣಗೆರೆ, ಜುಲೈ 26: ‘ಮುಲ್ಲಾ ಹೇಳಿಕೆಯನ್ನು ಯಾವುದೇ ಭಯವಿಲ್ಲದೆ, ನೂರಕ್ಕೆ ಸಾವಿರ ಸಾರಿ ಕೋರ್ಟ್ ಮುಂದೆ ಸಹ ಹೇಳುತ್ತೇನೆ. ಜೀವನದಲ್ಲಿ ಹಿಂದಿಟ್ಟ ಹೆಜ್ಜೆ ಇಲ್ಲ’ ಎಂದು ಬಿಜೆಪಿ ಪರಿಷತ್​ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಈ ಹೇಳಿಕೆಯು ಒಬ್ಬ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಹೇಳಿರುವುದು. ದೆಹಲಿಯಲ್ಲಿ ನೀಟ್ ಚಳುವಳಿಯ ಸಂದರ್ಭದಲ್ಲಿ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಿದ ಮುಲ್ಲಾನನ್ನು ಉದ್ದೇಶಿಸಿ ನಾನು ಮಾತನಾಡಿದ್ದು, ಅವನನ್ನು ಸಮರ್ಥಿಸುವವರೆಲ್ಲರೂ ಪಾಪಿಗಳು ಮತ್ತು ಅಧರ್ಮಿಗಳು’ ಎಂದು ಅವರು ಆರೋಪಿಸಿದರು. ‘ನೀಟ್ ಪರೀಕ್ಷೆಗೆ ಸಂಬಂಧಿಸಿದ ಚಳುವಳಿಯಲ್ಲೇ ಈ ಘಟನೆ ನಡೆದಿರುವ ಮಾಹಿತಿ ಇದೆ. ಇದಲ್ಲದೆ, ಸೈನಿಕರು ಮತ್ತು ಪ್ರಧಾನಮಂತ್ರಿಗಳಿಗೆ ಅವಮಾನ ಮಾಡಿದ ಬಗ್ಗೆಯೂ ವಿಡಿಯೋ ಸಾಕ್ಷ್ಯಗಳಿವೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಇದ್ದಕ್ಕಿದ್ದಂತೆ ತಂಡ ಬದಲಾಯಿಸಿದ ಆರ್​​ಸಿಬಿ ವೇಗಿ ಯಶ್ ದಯಾಳ್

Source link

ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ತಡೆ: ಅಕ್ರಮ ತನಿಖೆಗೆ ಆಂತರಿಕ ವಿಚಾರಣಾ ಉಪಸಮಿತಿ ರಚನೆ – Kannada News | Karnataka Public Service Commission freezes vet recruitment list after scam allegations

ಬೆಂಗಳೂರು, ಜುಲೈ 26): ಕರ್ನಾಟಕ ಲೋಕಸೇವಾ ಆಯೋಗವು (KPSC) ಮೊದಲಿನಿಂದಲೂ ಒಂದಿಲ್ಲೊಂದು ವಿವಾದದ ಕೇಂದ್ರ ಬಿಂದುವೇ ಆಗಿದೆ. ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಬಗ್ಗೆ ಸಾಲು ಸಾಲು ದೂರುಗಳು ಬೆಳಕಿಗೆ ಬರುತ್ತಿದ್ದು, ಇದೀಗ ಈ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆಗೆ ಮುಂದಾಗಿದೆ. ಈ ಸಂಬಂಧ ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದ್ದು, ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ 2026ರ ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ದೂರಿನ ಹಿನ್ನೆಲೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಸೇವಾ ಆಯೋಗವು 2026ರ ಜುಲೈ 26ರಂದು ತುರ್ತು ಸಭೆ ನಡೆಸಿದೆ.
ಸಾರ್ವಜನಿಕರ ವಿಶ್ವಾಸವನ್ನು ಕಾಪಾಡುವ ಉದ್ದೇಶದಿಂದ ಹಾಗೂ ಆರೋಪಗಳ ಗಂಭೀರತೆಯನ್ನು ಮನಗಂಡು ಆಯೋಗವು ಕೆಳಕಂಡ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಅವರು ತಿಳಿಸಿದ್ದಾರೆ.

ಇದನ್ನು ಓದಿ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್​​ಗೆ ಮತ್ತೊಂದು ಶಾಕ್​​: ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಸಂಬಂಧ FIR

ಪ್ರಾಥಮಿಕ ಮಾಹಿತಿಯ ಪರಿಶೀಲನೆ: 2026ರ ಜುಲೈ 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು, ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹಾಗೂ 2026ರ ಜುಲೈ 25ರಂದು ಪೊಲೀಸ್ ಇಲಾಖೆ ನೀಡಿರುವ ಪ್ರಾಥಮಿಕ ಮಾಹಿತಿ ವರದಿಯನ್ನು (FIR) ಆಯೋಗವು ಗಂಭೀರವಾಗಿ ಪರಿಗಣಿಸಿದೆ.

ಆಂತರಿಕ ತನಿಖಾ ಉಪಸಮಿತಿ ರಚನೆ: ಆರೋಪಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗದ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ಆಂತರಿಕ ತನಿಖಾ ಉಪಸಮಿತಿಯನ್ನು ರಚಿಸಲಾಗಿದೆ.

ಒಂದು ವಾರದಲ್ಲಿ ವರದಿ ಸಲ್ಲಿಕೆ: ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತ ಹಾಗೂ ಸಂಬಂಧಿತ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ವಾಸ್ತವಾಂಶಗಳ ಕುರಿತ ವಿವರವಾದ ವರದಿಯನ್ನು ಒಂದು ವಾರದೊಳಗೆ ಆಯೋಗಕ್ಕೆ ಸಲ್ಲಿಸುವಂತೆ ಉಪಸಮಿತಿಗೆ ನಿರ್ದೇಶನ ನೀಡಲಾಗಿದೆ.

ತನಿಖೆಗೆ ನೋಡಲ್ ಅಧಿಕಾರಿಗಳ ನೇಮಕ: ತನಿಖಾ ಕಾರ್ಯಕ್ಕೆ ಅಗತ್ಯವಾದ ಆಡಳಿತಾತ್ಮಕ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ಕೆಪಿಎಸ್‌ಸಿ ಕಾರ್ಯದರ್ಶಿಯನ್ನು ಹಾಗೂ ಅಗತ್ಯ ಕಾನೂನು ಸಲಹೆ ನೀಡಲು ಕಾನೂನು ವಿಭಾಗದ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ: ಆಂತರಿಕ ತನಿಖಾ ಉಪಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವವರೆಗೆ, 2026ರ ಜುಲೈ 17ರಂದು ಪ್ರಕಟಿಸಲಾಗಿದ್ದ ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಆಯೋಗವು ನಿರ್ಧರಿಸಿದೆ.

ಆಯೋಗವು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದ್ದು, ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ – Kannada News | Yuva Raitha Chethan talks about his movie Devi

ಯುವ ರೈತ ಚೇತನ್, ‘ದೇವಿ’ (Devi) ಸಿನಿಮಾನಲ್ಲಿ ನಾಯಕರಾಗಿ ನಟಿಸಿದ್ದಾರೆ. ನಾಯಕ ನಟ ಆಗಬೇಕು ಎಂಬುದು ಅವರ 10 ವರ್ಷದ ಕನಸಂತೆ. ಆ ಕನಸನ್ನು ‘ದೇವಿ’ ಸಿನಿಮಾ ಮೂಲಕ ಈಡೇರಿಸಿಕೊಂಡಿದ್ದಾರೆ. ಸಿನಿಮಾದ ಪ್ರಚಾರಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಚೇತನ್, ತಾವು ನಟ ದರ್ಶನ್ ಅವರ ಅಭಿಮಾನಿ ಆಗಿದ್ದು, ಅವರನ್ನು ನೋಡಿ ಸಿನಿಮಾ ಹೀರೋ ಆಗಬೇಕೆಂಬ ಕನಸು ಮೂಡಿತ್ತು ಎಂದು ಹೇಳಿದ್ದಾರೆ. ಯುವ ರೈತ ಎಂದು ತಮ್ಮನ್ನು ಕರೆದುಕೊಳ್ಳು ಚೇತನ್ ಚಿತ್ರರಂಗದ ಬಗ್ಗೆ, ತಮ್ಮ ಸಿನಿಮಾ ‘ದೇವಿ’ ಬಗ್ಗೆ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಸಲ್ಮಾನ್ ಖಾನ್ ಧರಿಸಿರುವ ವಾಚಿನ ವಿಶೇಷತೆ ಏನು? ಬೆಲೆ ಎಷ್ಟು ಗೊತ್ತೆ? – Kannada News | Salman Khan’s saphire watch worth Rs 41 lakhs with Indian flag colours

ಸಲ್ಮಾನ್ ಖಾನ್ (Salman Khan), ಬಾಲಿವುಡ್​​ನ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಕೇವಲ ನಟರಷ್ಟೆ ಅಲ್ಲದೆ, ಸಿನಿಮಾ ನಿರ್ಮಾಣ ಮತ್ತು ಉದ್ಯಮಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವರ್ಷಕ್ಕೆ ಸಾವಿರಾರು ಕೋಟಿ ಟರ್ನೋವರ್ ಉಳ್ಳ ಉದ್ಯಮಿ ಆಗಿರುವ ಸಲ್ಮಾನ್ ಖಾನ್, ಐಶಾರಾಮಿ ಜೀವನ ನಡೆಸುತ್ತಾರೆ. ಲಕ್ಷುರಿ ಕಾರುಗಳು, ಉಡುಗೆಗಳು, ಜೊತೆಗೆ ಅವರು ಧರಿಸುವ ವಾಚುಗಳ ಬೆಲೆಯೂ ಸಹ ಕೋಟಿಗಳಲ್ಲಿ ಇರುತ್ತದೆ. ಹಲವು ದುಬಾರಿ ವಾಚುಗಳ ಸಂಗ್ರಹ ಹೊಂದಿರುವ ಸಲ್ಮಾನ್ ಖಾನ್, ಇತ್ತೀಚೆಗೆ ಧರಿಸಿದ್ದ ವಾಚ್ ಒಂದು ನೆಟ್ಟಿಗರ ಗಮನ ಸೆಳೆದಿದೆ. ಏಕೆಂದರೆ ಇದು ಬಲು ಅಪರೂಪದ ವಾಚಾಗಿದೆ.

ಹಲವಾರು ಪ್ರತಿಷ್ಠಿತ ಬ್ರ್ಯಾಂಡುಗಳ ವಾಚುಗಳನ್ನು ಹೊಂದಿರುವ ಸಲ್ಮಾನ್ ಖಾನ್, ಇದೀಗ ‘ಜಾಕೋಬ್ ಆಂಡ್ ಕೋ’ ಜೊತೆ ಕೈಜೋಡಿಸಿ ವಿಶೇಷ ಆವೃತ್ತಿಯ ಕೈಗಡಿಯಾರವನ್ನು ಬಿಡುಗಡೆ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಅನ್‌ಬಾಕ್ಸಿಂಗ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಾಚು ಸಲ್ಮಾನ್ ಖಾನ್ ಎಡಿಷನ್ ಆಗಿದ್ದು, ವಾಚು ಎರಡು ಟೈಮ್​ ಜೋನ್​​ ಅನ್ನು ಸಹ ಹೊಂದಿದೆ ಎಂದು ಜಾಕೋಬ್ ಆಂಡ್ ಕೋ ಹೇಳಿದೆ.

ಸಲ್ಮಾನ್ ಖಾನ್ ಬಿಡುಗಡೆ ಮಾಡಿರುವ ವಾಚು ಐಷಾರಾಮಿ ಕರಕುಶಲತೆ ಮತ್ತು ವೈಯಕ್ತಿಕ ಕಥೆಯ ಸಮ್ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ಇದು ಬ್ರ್ಯಾಂಡ್‌ನ ಜಾಗತಿಕ ವಿನ್ಯಾಸವನ್ನು ಹೊಂದಿದ್ದರೂ, ಭಾರತ ಹಾಗೂ ಸಲ್ಮಾನ್ ಖಾನ್ ಅವರ ಗುರುತನ್ನು ಸೂಕ್ಷ್ಮವಾಗಿ ನೆನಪಿಸುತ್ತದೆ. ವಾಟರ್ ರೆಸಿಸ್ಟೆನ್ಸ್ ಸಾಮರ್ಥ್ಯವಿರುವ ಈ ವಾಚ್ ಸ್ಟೇನ್‌ಲೆಸ್ ಸ್ಟೀಲ್ ಮತ್ತು ನೀಲ ಸ್ಫಟಿಕ (ಸಫೈರ್ ಕ್ರಿಸ್ಟಲ್) ಮಾಡಲ್ಪಟ್ಟಿದೆ. ಭಾರತೀಯ ರಾಷ್ಟ್ರೀಯ ಧ್ವಜದಿಂದ ಪ್ರೇರಿತವಾದ ಅಂಶಗಳನ್ನು ಒಳಗೊಂಡಿರುವ ಈ ವಾಚಿನ ಡಯಲ್ ಒಳಗೆ ವಿಶ್ವ ನಕ್ಷೆ ಸಹ ಇದೆ. ನೀಲಿ ಬಣ್ಣದ ಲೆದರ್ ಕೈಪಟ್ಟಿಯನ್ನು ಈ ವಾಚು ಹೊಂದಿದೆ.

ಇದನ್ನೂ ಓದಿ:‘ಮನೆಗೆ ವಾಪಸ್ ಹೋಗಿ’: ಮೋದಿ ಟ್ವೀಟ್ ಬಳಿಕ ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

‘ಜಾಕೋಬ್ ಆಂಡ್ ಕೋ’ ಹೇಳಿರುವಂತೆ, ಈ ವಿಶಿಷ್ಟವಾದ ವಾಚ್ ಸಲ್ಮಾನ್ ಖಾನ್ ಅವರ ಕುಟುಂಬ ಮತ್ತು ಅವರ ತಂದೆಯ ಪ್ರಭಾವದಿಂದ ಪ್ರೇರಿತವಾಗಿದೆ. ಕೇವಲ ಕರಕುಶಲತೆಯಷ್ಟೇ ಅಲ್ಲದೆ, ಈ ವಾಚ್ ಜೀವನದ ಸಾಧನೆ, ಶ್ರೇಷ್ಠತೆಯ ಬದ್ಧತೆ ಮತ್ತು ಅತ್ಯಂತ ಮುಖ್ಯವಾದ ಸಂಗತಿಗಳಿಗೆ ಗೌರವ ಸಲ್ಲಿಸುವ ಸಮರ್ಪಣಾ ಭಾವವನ್ನು ಪ್ರತಿನಿಧಿಸುತ್ತದೆ. ಕೇಸರಿ ಮತ್ತು ಹಸಿರು ಬಣ್ಣದ ಛಾಯೆಗಳು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸಿದರೆ, 6 ಗಂಟೆಯ ಗುರುತಿನ ಬಳಿ ಕೆತ್ತಲಾದ ನಟನ ಹೆಸರು ಮತ್ತು ‘S.K.’ ಆರಂಭಿಕ ಅಕ್ಷರಗಳು ಸಲ್ಮಾನ್ ಖಾನ್ ಅವರ ಜಾಗತಿಕ ಪ್ರಭಾವ ಮತ್ತು ಸ್ಟೈಲ್ ಐಕಾನ್ ಸ್ಥಾನಮಾನವನ್ನು ಸೂಚಿಸುತ್ತವೆಯಂತೆ. ಈ ವಾಚಿನ ಬೆಲೆ ಸುಮಾರು 41 ಲಕ್ಷ ರೂಪಾಯಿಗಳು ಎನ್ನಲಾಗಿದೆ.

ಈ ವಾಚ್‌ನ ಆಕರ್ಷಕ ವಿಷಯವೆಂದರೆ ಇದು ಸ್ವತಂತ್ರವಾಗಿ ಹೊಂದಿಸಬಹುದಾದ ಡ್ಯುಯಲ್ ಟೈಮ್ ಜೋನ್ (ಎರಡು ಕಾಲ ವಲಯ) ವೈಶಿಷ್ಟ್ಯವನ್ನು ಹೊಂದಿದೆ, ಇದು ಗಂಟೆ ಮತ್ತು ನಿಮಿಷಗಳ ಸೆಟ್ಟಿಂಗ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಈ ವಿಶಿಷ್ಟ ವೈಶಿಷ್ಟ್ಯವು ವಿವಿಧ ಕಾಲ ವಲಯಗಳ ನಡುವೆ ಸಂಚರಿಸುವವರಿಗೆ ಉಪಯೋಗವಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ

ಬಾಗಲಕೋಟೆ, (ಜುಲೈ 26): ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಮಹೀಂದ್ರಾ XUV300 ಕಾರು ಸ್ಫೋಟಗೊಂಡಿದೆ. ಹಿಪ್ಪರಗಿಯ ಯುವರಾಜ ವೈನ್ ಸ್ಟೋರ್ ಮಾಲೀಕ ಕಮ್ ಮ್ಯಾನೇಜರ್ ಹನುಮಂತ ಅಥಣಿ ಅವರ ಕಾರು ನಿನ್ನೆ (ಜುಲೈ 25) ಸಂಜೆ 4:30ಕ್ಕೆ ವೈನ್ ಸ್ಟೋರ್ ಎದುರು ನಿಲ್ಲಿಸಲಾಗಿದ್ದು, ರಾತ್ರಿ 10:45ರ ಸುಮಾರಿಗೆ ಏಕಾಏಕಿ ಕಾರು ಸ್ಫೋಟಗೊಂಡಿದೆ. ಘಟನೆಯ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ, ಎಸ್‌ಒಸಿಒ (Scene of Crime) ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಸ್ಟೋಟದ ಶಂಕೆ ವ್ಯಕ್ತವಾಗಿದ್ದು ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇನ್ನು ಈ ಕಾರು ಬ್ಲಾಸ್ಟ್‌ ಘಟನೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CWG 2026: ಚಿನ್ನದ ಖಾತೆ ತೆರೆದ ಭಾರತ; ಹ್ಯಾಟ್ರಿಕ್ ಚಿನ್ನ ಗೆದ್ದ ಮೀರಾಬಾಯಿ ಚಾನು – Kannada News | Mirabai Chanu Bags Historic 3rd Consecutive CWG Gold in 48kg Weightlifting

2026 ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕದ ಖಾತೆ ತೆರೆದಿದೆ. ಭಾರತೀಯ ವೇಟ್‌ಲಿಫ್ಟಿಂಗ್‌ನ ರಾಣಿ ಎಂದು ಕರೆಯಲ್ಪಡುವ ಸೈಖೋಮ್ ಮೀರಾಬಾಯಿ ಚಾನು ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದು, ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ(PC-PTI).

ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಇದು ಮೀರಾಬಾಯಿ ಚಾನು ಅವರ ಸತತ ಮೂರನೇ ಚಿನ್ನದ ಪದಕವಾಗಿದ್ದು, ಇದರೊಂದಿಗೆ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಮೀರಾಬಾಯಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಒಟ್ಟು 190 ಕೆಜಿ ಭಾರ ಎತ್ತಿ ಸ್ವರ್ಣವನ್ನು ತನ್ನದಾಗಿಸಿಕೊಂಡರು. ಈ ಹಿಂದೆ ಅವರು 2014 ರ ಗೋಲ್ಡ್ ಕೋಸ್ಟ್ ಮತ್ತು 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಭಾರತಕ್ಕೆ ಚಿನ್ನದ ಪದಕಗಳನ್ನು ಗೆದ್ದಿದ್ದರು(PC-PTI).

ಸ್ನ್ಯಾಚ್ ಸುತ್ತಿನಲ್ಲಿ 85 ಕೆಜಿ ತೂಕ ಎತ್ತಿದ ಮೀರಾಬಾಯಿ ಕಾಮನ್‌ವೆಲ್ತ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ನಂತರ ಅವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 105 ಕೆಜಿ ಎತ್ತುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಒಟ್ಟಾರೆಯಾಗಿ ಮೀರಾಬಾಯಿ ಚಾನು 190 ಕೆಜಿ ತೂಕ ಎತ್ತಿದರು(PC-PTI).

ಮಣಿಪುರದ ಇಂಫಾಲದವರಾದ ಸೈಖೋಮ್ ಮೀರಾಬಾಯಿ ಚಾನು ಭಾರತದ ಅತ್ಯಂತ ಯಶಸ್ವಿ ಮತ್ತು ದಂತಕಥೆಯ ವೇಟ್‌ಲಿಫ್ಟರ್‌ಗಳಲ್ಲಿ ಒಬ್ಬರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲುವುದರಿಂದ ಹಿಡಿದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸತತ ಮೂರು ಚಿನ್ನದ ಪದಕಗಳನ್ನು ಗೆಲ್ಲುವವರೆಗೆ, ಮೀರಾಬಾಯಿ ಚಾನು ಭಾರತಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ(PC-PTI).

13 ವರ್ಷದವರಿದ್ದಾಗ ತರಬೇತಿ ಪ್ರಾರಂಭಿಸಿದ ಮೀರಾಬಾಯಿ ಚಾನು ಅವರ ಪ್ರಯಾಣ ಸುಲಭವಾಗಿರಲಿಲ್ಲ. ಆರಂಭಿಕ ದಿನಗಳಲ್ಲಿ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರಿಗೆ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎಂದಿಗೂ ತಮ್ಮ ಛಲ ಬಿಡದ ಮೀರಾಬಾಯಿ ಇಂದು ಪ್ರಪಂಚದಾದ್ಯಂತ ಭಾರತಕ್ಕೆ ಕೀರ್ತಿ ತರುತ್ತಿದ್ದಾರೆ(PC-PTI).

Published On – 9:26 pm, Sun, 26 July 26

Source link

ರಾಜ್ಯದ ಸಾರಿಗೆ ಪ್ರಯಾಣಿಕರಿಗೆ ಗುಡ್​ನ್ಯೂಸ್: 4,500 ಹೊಸ ಬಸ್‌ಗಳ ಖರೀದಿಗೆ ಭೈರತಿ ಸುರೇಶ್ ಸೂಚನೆ – Kannada News | Good News for Karnataka Transport Passengers: Byrathi Suresh Approves Purchase of 4,500 New Buses

ಬಿಎಂಟಿಸಿ, ಕೆಎಸ್​ಆರ್​ಟಿಸಿImage Credit source: tv9 kannada

ಬೆಂಗಳೂರು, ಜುಲೈ 26: ಶಕ್ತಿ ಯೋಜನೆ ಆರಂಭವಾದ ಮೇಲೆ ಕೆಎಸ್ಆರ್​​ಟಿಸಿ (KSRTC), ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್​​​ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ರಶ್​​ ಆಗುತ್ತಿದೆ. ಇತ್ತ ಈ ವರ್ಷ 6 ಸಾವಿರ ಹಳೆಯ ಬಸ್​​ಗಳು ಗುಜರಿಗೆ ಹೋಗಲಿವೆ ಎನ್ನಲಾಗುತ್ತಿದೆ. ಹಾಗಾಗಿ ಸಾರಿಗೆ ಸಚಿವ ಭೈರತಿ ಸುರೇಶ್ (Byrathi Suresh)​​ 4500 ಹೊಸ ಬಸ್​ಗಳ ಖರೀದಿಗೆ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.

ನಿತ್ಯ 1.80 ಕೋಟಿಯಷ್ಟು ಪ್ರಯಾಣಿಕರು ಸಂಚಾರ

ಶಕ್ತಿ ಯೋಜನೆ ಆರಂಭವಾದ ಮೇಲೆ ಪ್ರತಿದಿನ ನಾಲ್ಕು ನಿಗಮದ ಬಸ್​​ಗಳಲ್ಲಿ 1.50 ಕೋಟಿಯಿಂದ 1.80ಕೋಟಿಯಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಬಸ್​​ಗಳು ಸಿಗುತ್ತಿಲ್ಲ. ಜೊತೆಗೆ ಪ್ರಯಾಣಿಕರಿಗೆ ಬಸ್​​ಗಳಲ್ಲಿ ಕೂರಲು, ನಿಲ್ಲಲು ಆಗುವುದಿಲ್ಲ. ಏಕೆಂದರೆ ಅಷ್ಟರಮಟ್ಟಿಗೆ ಜನರು ತುಂಬಿರುತ್ತಾರೆ.

ಇದನ್ನೂ ಓದಿ: ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್​​ ಬಸ್​​ ಡಿಕ್ಕಿ: ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಚಾಲಕ

ಇನ್ನು ಈ ವರ್ಷ ನಾಲ್ಕು ಸಾರಿಗೆ ನಿಗಮದಿಂದ ಬರೋಬ್ಬರಿ 6000 ಬಸ್​​ಗಳನ್ನು ಗುಜರಿಗೆ ಹಾಕಬೇಕಿರುವ ಹಿನ್ನೆಲೆ, ಸಾರಿಗೆ ಸಚಿವ ಭೈರತಿ ಸುರೇಶ್ ಕೆಎಸ್ಆರ್​ಟಿಸಿ, ಬಿಎಂಟಿಸಿಯ, NWKRTC, KKRTC ನಿಗಮಕ್ಕೆ 4500 ಬಸ್​​ಗಳ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಿ ಎಂದು ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ‘ಹೊಸ ಬಸ್​ಗಳನ್ನು ಖರೀದಿ ಮಾಡುವುದರಿಂದ ಹಳೆಯ ಗುಜರಿ ಬಸ್​​ಗಳಿಗೆ ಮುಕ್ತಿ ಸಿಗಲಿದೆ’ ಎಂದು ಪ್ರಯಾಣಿಕರಾದ ರಾಜು ಅವರ ಮಾತು.

ಒಂದು ಸಾವಿರ ಹೊಸ ಬಸ್​​ ಖರೀದಿಗೆ ಸರ್ಕಾರ ಅನುಮತಿ 

ಫ್ಲೈ ಬಸ್, ಅಂಬಾರಿ, ಐರಾವತ, ಅಂಬಾರಿ ಡ್ರೀಮ್ ಕ್ಲಾಸ್, ಐರಾವತ ಕ್ಲಬ್ ಕ್ಲಾಸ್, ರಾಜಹಂಸ, ಪಲಕ್ಕಿ ಉತ್ಸವ ಸೇರಿದಂತೆ 3500 ಡೀಸೆಲ್ ಬಸ್​​ಗಳು ಮತ್ತು ರಾಜ್ಯದಲ್ಲಿ ಬಸ್ ಸೇವೆ ಇಲ್ಲದ ಊರುಗಳಿಗೆ, ಒಂದು ಸಾವಿರ ಹೊಸ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಸಚಿವರು ಸೂಚನೆ ನೀಡಿದ್ದಾರೆ. ಈಗಾಗಲೇ ಒಂದು ಸಾವಿರ ಹೊಸ ಬಸ್​​ಗಳನ್ನು ಖರೀದಿಸಲು ಸರ್ಕಾರ ಅನುಮತಿ ನೀಡಲಾಗಿದೆ.

ಸರ್ಕಾರ ಕೂಡಲೇ ಡೀಸೆಲ್​ ಬಸ್ ಖರೀದಿಗೆ ಮುಂದಾಗಬೇಕು: ಸಾರಿಗೆ ನೌಕರರ ಮುಖಂಡ ಜಗದೀಶ್

‘ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದಲ್ಲಿ ಒಟ್ಟು 23,989 ಸಾವಿರ ಬಸ್​​ಗಳಿವೆ. ಅದರಲ್ಲಿ ಈ ವರ್ಷ 6 ಸಾವಿರ ಬಸ್​​​ಗಳು ಗುಜರಿಗೆ ಹೋದರೆ ಸಾರಿಗೆ ನಿಗಮಗಳಲ್ಲಿ 17,989 ಸಾವಿರ ಬಸ್​ಗಳು ಮಾತ್ರ ಸಂಚಾರ ಮಾಡಿಲಿದ್ದು, ಇದರಿಂದ ಪ್ರಯಾಣಿಕರಿಗೆ ತುಂಬಾ ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗಲಿದೆ. ಕೂಡಲೇ ಸರ್ಕಾರ ಡೀಸೆಲ್​ ಬಸ್ ಖರೀದಿಗೆ ಮುಂದಾಗಬೇಕು’ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಹೇಳಿದ್ದಾರೆ.

ಇದನ್ನೂ ಓದಿ: ಚಂದಾಪುರದಲ್ಲಿ ಅಗ್ನಿ ದುರಂತ: ಏಕಾಏಕಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು

ಒಟ್ಟಿನಲ್ಲಿ ಬಿಎಂಟಿಸಿ, ಕೆಎಸ್ಆರ್​​ಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ ಈ ವರ್ಷ, ಆರು ಸಾವಿರ ಬಸ್​ಗಳು ಗುಜರಿಗೆ ಹೋಗುತ್ತಿರುವುದರಿಂದ ಹೊಸ ಬಸ್​ಗಳ ಅತ್ಯವಶ್ಯಕವಾಗಿದೆ. ಒಂದು ವೇಳೆ ಸರ್ಕಾರ ಹೊಸ ಬಸ್​​​ಗಳ ಖರೀದಿಗೆ ಮುಂದಾಗಲಿಲ್ಲ ಅಂದರೆ ಪ್ರಯಾಣಿಕರು ಪರದಾಡುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

CWG 2026: ಚಿನ್ನದ ಖಾತೆ ತೆರೆದ ಭಾರತ; ಹ್ಯಾಟ್ರಿಕ್ ಚಿನ್ನ ಗೆದ್ದ ಮೀರಾಬಾಯಿ ಚಾನು – Kannada News | Mirabai Chanu Bags Historic 3rd Consecutive CWG Gold in 48kg Weightlifting

2026 ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕದ ಖಾತೆ ತೆರೆದಿದೆ. ಭಾರತೀಯ ವೇಟ್‌ಲಿಫ್ಟಿಂಗ್‌ನ ರಾಣಿ ಎಂದು ಕರೆಯಲ್ಪಡುವ ಸೈಖೋಮ್ ಮೀರಾಬಾಯಿ ಚಾನು ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದು, ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ(PC-PTI).

Source link

ವಿದೇಶಿಗರಿಗೆ ಹಿಂದು ಧರ್ಮ ಪರಿಚಯಿಸುವ ಕಾರ್ಯ ಮಾಡಿದ ‘ರಾಮಾಯಣ’ ತಂಡ – Kannada News | Ramayana movie team gave beautiful gifts in San Diego Comicon

ಭಾರತೀಯ ಚಿತ್ರರಂಗದ (Indian Cinema) ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ ‘ರಾಮಾಯಣ’. ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದೇ ಕಾರಣಕ್ಕೆ ವಿದೇಶಗಳಲ್ಲಿ ಸಿನಿಮಾದ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಇತ್ತೀಚೆಗೆ ಸ್ಯಾನ್ ಡಿಯಾಗೊನಲ್ಲಿ ನಡೆದ ಕಾಮಿಕಾನ್​​ನಲ್ಲಿ ಚಿತ್ರತಂಡ ಭಾಗಿ ಆಗಿತ್ತು. ರಣ್​​ಬೀರ್ ಕಪೂರ್, ಯಶ್, ನಮಿತ್ ಮಲ್ಹೋತ್ರಾ, ನಿತೀಶ್ ತಿವಾರಿ ಅವರುಗಳು ಸಿನಿಮಾ ಬಗ್ಗೆ ಹಲವಾರು ಸಂದರ್ಶನಗಳನ್ನು ನೀಡಿದರು. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ‘ರಾಮಾಯಣ’ ಚಿತ್ರತಂಡ ನೀಡಿದ ಉಡುಗೊರೆ ಇದೀಗ ಸಖತ್ ವೈರಲ್ ಆಗಿದೆ.

ಸ್ಯಾನ್ ಡಿಯೋಗೊ ಕಾಮಿಕಾನ್​​​ಗೆ ಬಂದಿದ್ದ ಕೆಲ ಅಭಿಮಾನಿಗಳಿಗೆ, ಯೂಟ್ಯೂಬರ್​​ಗಳಿಗೆ, ಆಯ್ದ ಪತ್ರಕರ್ತರಿಗೆ, ಆಯೋಜಕರಿಗೆ, ‘ರಾಮಾಯಣ’ ಸಿನಿಮಾದ ಪ್ರಚಾರಕ್ಕೆ ಸಹಾಯ ಮಾಡಿದವರಿಗೆ ಚಿತ್ರತಂಡವು ಉಡುಗೊರೆಗಳನ್ನು ನೀಡಿತ್ತು. ಉಡುಗೊರೆ ಪಡೆದವರಲ್ಲಿ ಯಾರೋ ಕೆಲವರು ಇದೀಗ ‘ರಾಮಾಯಣ’ ತಂಡ ಕೊಟ್ಟಿದ್ದ ಉಡುಗೊರೆಯ ಅನ್​​ಬಾಕ್ಸಿಂಗ್ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಚಿತ್ರತಂಡ ಕೊಟ್ಟಿದ್ದ ಉಡುಗೊರೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ಚಿತ್ರತಂಡವು ಕಮಲದ ಹೂವಿನ ಚಿತ್ರ ಇರುವ ಸುಂದರ ಬಾಕ್ಸ್​​​ನಲ್ಲಿ ಉಡುಗೊರೆಗಳನ್ನು ಆಯ್ದವರಿಗೆ ನೀಡಿದೆ. ಜೊತೆಗೆ ಒಂದು ನೋಟ್ ಸಹ ಇದೆ. ಆ ನೋಟ್ ಸಹ ಭಿನ್ನವಾಗಿದ್ದು ನೋಟ್​​ನ ಕೆಳಗಡೆ ಮಾಯಾಜಿಂಕೆಯ ಚಿತ್ರವಿದೆ. ಇನ್ನು ಬಾಕ್ಸ್​​ನಲ್ಲಿ ಚಿನ್ನದ ಬಣ್ಣದ ಶಂಕ ಇದೆ. ಈ ಶಂಕವನ್ನೇ ಉಡುಗೊರೆಯಾಗಿ ನೀಡಲಾಗಿದೆ. ಶಂಖದ ಮೇಲೆ ವಿಷ್ಣುವಿನ ಕೆತ್ತನೆಗಳಿವೆ. ವಿಷ್ಣು ಹಾಗೂ ಆತನ ಅವತಾರಗಳ ಕೆತ್ತನೆಗಳಿವೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಕೆತ್ತನೆಗಳು ಸಹ ಶಂಖದ ಮೇಲಿವೆ. ‘ರಾಮಾಯಣ’ ತಂಡ ನೀಡಿರುವ ಉಡುಗೊರೆಯನ್ನು ಹಲವರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

ಭಾರತೀಯ ಸಂಸ್ಕೃತಿ, ಧರ್ಮದ ಮಹತ್ವವನ್ನು ಹೊರದೇಶಗಳಲ್ಲಿಯೂ ಸಾರುವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ ಎಂದು ಭಾರತೀಯ ನೆಟ್ಟಿಗರು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿಡಿಯೋವನ್ನು ಸತತವಾಗಿ ಶೇರ್ ಮಾಡುತ್ತಿದ್ದಾರೆ. ‘ರಾಮಾಯಣ’ ಸಿನಿಮಾವು ಇದೇ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ತಂಡವು ಸೋನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಸೋನಿಯು, ವಿಶ್ವದಾದ್ಯಂತ ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ತೆರೆಗೆ ತರಲಿದೆ.

‘ರಾಮಾಯಣ’ ಸಿನಿಮಾನಲ್ಲಿ ರಾಮನಾಗಿ ರಣ್​​ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಮತ್ತು ನಟ ಯಶ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಎರಡೂ ಭಾಗಗಳ ನಿರ್ಮಾಣಕ್ಕೆ ಒಟ್ಟು 2000 ಕೋಟಿ ಬಂಡವಾಳ ಹೂಡಲಾಗುತ್ತಿದೆ ಎನ್ನಲಾಗಿದೆ. ಸಿನಿಮಾವನ್ನು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version