Viral Video: ಸೊಂಟ ಮುಟ್ಟಿದ ಯುವಕ; ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ ಡ್ಯಾನ್ಸರ್! – Kannada News

ಕಪಾಳಮೋಕ್ಷ ಮಾಡಿದ ಡ್ಯಾನ್ಸರ್Image Credit source: instagram

ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಕಲಾವಿದೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಡ್ಯಾನ್ಸರ್, ಯುವಕನಿಗೆ ವೇದಿಕೆಯಲ್ಲೇ ಕಪಾಳಮೋಕ್ಷ ಮಾಡಿರುವ ದೃಶ್ಯ ಇದೀಗ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ವೇದಿಕೆಯ ಸಮೀಪದಲ್ಲಿದ್ದ ಯುವಕನೊಬ್ಬ ಡ್ಯಾನ್ಸರ್ ಜೊತೆ ಅಸಭ್ಯವಾಗಿ ವರ್ತಿಸಿ, ಆಕೆಯ ಸೊಂಟ ಮುಟ್ಟಿರುವುದು ಕಾಣಿಸುತ್ತದೆ. ಇದರಿಂದ ಆಕ್ರೋಶಗೊಂಡ ಕಲಾವಿದೆ ತಕ್ಷಣವೇ ಯುವಕನಿಗೆ ಕಪಾಳಕ್ಕೆ ಹೊಡೆದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆ ಅಲ್ಲಿದ್ದ ಕೆಲವರು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದು, ಘಟನೆಯ ಸಂಪೂರ್ಣ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ

ಈ ವಿಡಿಯೋವನ್ನು ‘dimpal__choudhary_77‘ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೆಲವೇ ಸಮಯದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕರು ಕಲಾವಿದೆಯ ಧೈರ್ಯವನ್ನು ಮೆಚ್ಚಿಕೊಂಡಿದ್ದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಈ ಘಟನೆ ಎಲ್ಲಿ ನಡೆದಿದೆ ಹಾಗೂ ವಿಡಿಯೋದಲ್ಲಿರುವ ವ್ಯಕ್ತಿಗಳ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಲಿಷ್ಠ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಬಯಸುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ – Kannada News

ಶಿಶಿರ್ ಖನಾಲ್, ಜೈಶಂಕರ್Image Credit source: PTI

ನವದೆಹಲಿ, ಜೂನ್ 7: ವಿಶ್ವದ ಪ್ರಮುಖ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದೊಂದಿಗೆ ನೇಪಾಳ ಉತ್ತಮ ಸ್ನೇಹ ಹಾಗೂ ಆರ್ಥಿಕ ಸಂಬಂಧ ಬಯಸುತ್ತದೆ ಎಂದು ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್ (Shishir Khanal) ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ನೇಪಾಳದ ವಿದೇಶಾಂಗ ಸಚಿವರು, ಭಾರತವನ್ನು ಕೇವಲ ನೆರೆಹೊರೆಯ ರಾಷ್ಟ್ರವಾಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ತಾಂತ್ರಿಕ ಮತ್ತು ಆರ್ಥಿಕ ಪವರ್‌ಹೌಸ್ (Economic Powerhouse) ಎಂದು ಬಣ್ಣಿಸಿದರು.

ಭಾರತ ಮತ್ತು ನೇಪಾಳ ನಡುವಿನ ಯಾವುದೇ ಗಡಿ ವಿವಾದವನ್ನು ಎರಡು ದೇಶಗಳು ‘ಮುಕ್ತ ಮನಸ್ಸಿನಿಂದ’ (Open Heart) ಚರ್ಚಿಸಿದರೆ ಬಗೆಹರಿಸಲು ಸಾಧ್ಯವಿಲ್ಲದಷ್ಟು ದೊಡ್ಡ ಸಮಸ್ಯೆಯೇನಲ್ಲ ಎಂದು ಸಚಿವರು ಹೇಳಿದ್ದಾರೆ. ನೇಪಾಳದ ಹೊಸ ಸರ್ಕಾರವು ಭಾರತವನ್ನು 21ನೇ ಶತಮಾನದ ಅತಿ-ಸೂಕ್ಷ್ಮ ಭೌಗೋಳಿಕ ರಾಜಕೀಯದ (Geopolitics) ದೃಷ್ಟಿಕೋನದಿಂದ ನೋಡುತ್ತಿಲ್ಲ. ಬದಲಿಗೆ ನೇಪಾಳದ ಆರ್ಥಿಕ ಅಭಿವೃದ್ಧಿಗಾಗಿ ಭಾರತದೊಂದಿಗೆ ಮುಕ್ತ ಮತ್ತು ಪಾರದರ್ಶಕ ಸಹಭಾಗಿತ್ವವನ್ನು ಬಯಸುತ್ತಿದೆ ಎಂದಿದ್ದಾರೆ ಶಿಶಿರ್ ಖನಾಲ್.

ಭಾರತದ ಅತ್ಯಾಧುನಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (UPI ನಂತಹ ಕ್ರಾಸ್-ಬಾರ್ಡರ್ ಪೇಮೆಂಟ್ ಸಿಸ್ಟಂ) ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ನೇಪಾಳದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ ಸಾಧಿಸುವುದು ನೇಪಾಳದ ಉದ್ದೇಶವಾಗಿದೆ ಎಂದೂ ಶಿಶಿರ್ ವಿವರಿಸಿದರು.

ಇದನ್ನೂ ಓದಿ: ಸ್ಪೇಸ್​ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್

ಗಡಿ ವಿವಾದಕ್ಕೆ ರಾಜತಾಂತ್ರಿಕ ಪರಿಹಾರ

ಇತ್ತೀಚೆಗೆ ನೇಪಾಳದ ಪ್ರಧಾನಿ ಬಾಳೇಂದ್ರ ಶಾ (Balen Shah) ಅವರು ಗಡಿ ವಿವಾದದ ಕುರಿತು ಮಾಡಿದ್ದ ಕೆಲವು ಕಾಮೆಂಟ್‌ಗಳಿಂದ ಉಭಯ ದೇಶಗಳ ನಡುವೆ ಸಣ್ಣ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಖನಾಲ್, “ನಾವು ಮುಕ್ತ ಮನಸ್ಸಿನಿಂದ ಕುಳಿತು ಚರ್ಚಿಸಿದಾಗ ಯಾವುದೇ ಗಡಿಯೂ ಸಂಕೀರ್ಣವಾಗಿ ಉಳಿಯುವುದಿಲ್ಲ. ಅತಿ-ರಾಷ್ಟ್ರೀಯತೆಯ (Hyper-nationalistic) ರಾಜಕೀಯ ಪ್ರದರ್ಶನ ಮಾಡುವ ಬದಲು, ನಾವು ಶಾಂತಿಯುತವಾಗಿ, ದತ್ತಾಂಶ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

ಭಾರತದ ಆರ್ಥಿಕ ಬೆಳವಣಿಗೆಗೆ ಪ್ರಶಂಸೆ

ಭಾರತದ ಆರ್ಥಿಕ ಪ್ರಗತಿಯನ್ನು ಕೊಂಡಾಡಿದ ಅವರು, “ನಾವು ಗಡಿಯ ಆಚೆ ನೋಡಿದಾಗ ಉದಯಿಸುತ್ತಿರುವ ಭಾರತ ಕಾಣುತ್ತಿದೆ. ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಶಕ್ತಿಯಾಗಿ ಭಾರತ ತನ್ನನ್ನು ತಾನು ಅದ್ಭುತವಾಗಿ ಮರುರೂಪಿಸಿಕೊಂಡಿದೆ. ತಂತ್ರಜ್ಞಾನ ಮತ್ತು ಉನ್ನತ ಆಕಾಂಕ್ಷೆಗಳಿರುವ ಈ ಭಾರತದೊಂದಿಗೆ ನಾವು ಕೈಜೋಡಿಸಲು ಬಯಸುತ್ತೇವೆ,” ಎಂದರು.

ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?

ಜೈಶಂಕರ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ

ತಮ್ಮ ಮೂರು ದಿನಗಳ ಭಾರತ ಪ್ರವಾಸದ ಭಾಗವಾಗಿ, ಶಿಶಿರ್ ಖನಾಲ್ ಅವರು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ, ಗಡಿ ಸಂಪರ್ಕ (Cross-border connectivity), ಇಂಧನ ಪಾಲುದಾರಿಕೆ (Energy partnership) ಮತ್ತು ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಾಲೋಚನೆ ನಡೆಸಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಲೋಪತಿ ಬಗ್ಗೆ ಅನುಷ್ಕಾ ಶರ್ಮಾ ಪೋಸ್ಟ್, ವೈದ್ಯರಿಂದ ತೀವ್ರ ಟೀಕೆ – Kannada News

ನಟಿ ಅನುಷ್ಕಾ ಶರ್ಮಾ (Anushka Sharma) ಸಿನಿಮಾಗಳಿಂದ ದೂರ ಉಳಿದಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನು ಸಹ ತಮ್ಮ ಸಹೋದರನಿಗೆ ವಹಿಸಿ, ಪತಿಯೊಟ್ಟಿಗೆ ಆರಾಮವಾಗಿ ಇಂಗ್ಲೆಂಡ್​​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶರ್ಮಾ, ಆಗೊಮ್ಮೆ ಈಗೊಮ್ಮೆ, ಆರೋಗ್ಯ, ಪಾಸಿಟಿವಿಟಿ, ಅಧ್ಯಾತ್ಮದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆರೋಗ್ಯದ ಬಗ್ಗೆ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದ ಪೋಸ್ಟ್ ಒಂದಕ್ಕೆ ವೈದ್ಯರುಗಳಿಂದ ತೀವ್ರ ಟೀಕೆ, ವಿಮರ್ಶೆ ವ್ಯಕ್ತವಾಗಿದೆ.

ಅನುಷ್ಕಾ ಶರ್ಮಾ ಅವರು ಹೋಮಿಯೋಪತಿಯನ್ನು ಬೆಂಬಲಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಪ್ರಖ್ಯಾತ ಹೋಮಿಯೋಪತಿ ವೈದ್ಯ ರಾಜನ್ ಸಂಕರನ್ ಅವರು ಉದ್ಯಮಿ ನಮಿತಾ ಥಾಪರ್ ಅವರೊಂದಿಗೆ ನಡೆಸಿದ ಸಂವಾದದ ವಿಡಿಯೋವನ್ನು ಹಂಚಿಕೊಂಡಿದ್ದ ಅನುಷ್ಕಾ ಶರ್ಮಾ, ಹೋಮಿಯೋಪತಿಯನ್ನು ಅನುಸರಿಸುವಂತೆ ಕರೆ ನೀಡಿದ್ದರು. ಪರ್ಯಾಯ ವೈದ್ಯಕೀಯ ಪದ್ಧತಿಯನ್ನು ನಂಬುವವರಿಂದ ಅನುಷ್ಕಾರ ಪೋಸ್ಟ್​​ಗೆ ಬೆಂಬಲ ವ್ಯಕ್ತವಾದರೆ, ವೈಜ್ಞಾನಿಕ ವೈದ್ಯಕೀಯ ಪದ್ಧತಿ ಬೆಂಬಲಿಸುವವರಿಂದ ತೀವ್ರ ಟೀಕೆಗೂ ಗುರಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಅನುಷ್ಕಾ, ತಮ್ಮ ಜೀವನದಲ್ಲಿ ಹೋಮಿಯೋಪತಿ ವಹಿಸಿದ ಪಾತ್ರದ ಬಗ್ಗೆ ಹೇಳಿದ್ದು ಮತ್ತು ಆರೋಗ್ಯ ಹಾಗೂ ಸ್ವಾಸ್ಥ್ಯದ ಕುರಿತು ಡಾ ರಾಜನ್ ಸಂಕರನ್ ಅವರ ವಿಧಾನವನ್ನು ಶ್ಲಾಘಿಸಿದ್ದಾರೆ. ‘ನನ್ನ ಜೀವನದಲ್ಲಿ ಹೋಮಿಯೋಪತಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಡಾ. ರಾಜನ್ ಸಂಕರನ್ ಆ ಪಯಣದ ಪ್ರಮುಖ ಭಾಗವಾಗಿದ್ದಾರೆ. ಆರೋಗ್ಯ ಮತ್ತು ಜಾಗರೂಕ ಜೀವನಶೈಲಿಯ ಕುರಿತಾದ ಅವರ ಒಳನೋಟಗಳನ್ನು ನಾನು ಆಳವಾಗಿ ಗೌರವಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ;ಅನುಷ್ಕಾ ಶರ್ಮಾ ಧರಿಸಿದ ಬಿಳಿ ಉಡುಪು, ವಾಚ್ ಬೆಲೆ ಎಷ್ಟು?

ಹಲವು ವೈದ್ಯರು ಅನುಷ್ಕಾ ಶರ್ಮಾರ ಪೋಸ್ಟ್ ಅನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ. ‘ದಿ ಲಿವರ್ ಡಾಕ್’ ಎಂದೇ ಹೆಸರಾಗಿರುವ ಖ್ಯಾತ ಹೆಪಟಾಲಜಿಸ್ಟ್ ಸಿರಿಯಾಕ್ ಅಬಿ ಫಿಲಿಫ್ಸ್, ಪೋಸ್ಟ್ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಪಾಡ್​​ಕಾಸ್ಟ್ ಮಾಡಿರುವ ಉದ್ಯಮಿ ನಮಿತಾ ಥಾಪರ್ ಮತ್ತು ಹೋಮಿಯೋಪತಿ ಡಾಕ್ಟರ್ ಮೂವರನ್ನೂ ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.

‘ಸಪ್ಲಿಮೆಂಟ್ ಮಾರಾಟಗಾರ್ತಿ (ನಮಿತಾ ಥಾಪರ್), ಕಾನೂನುಬದ್ಧ ನಕಲಿ ವೈದ್ಯ (ಹೋಮಿಯೋಪತಿ ವೈದ್ಯ ರಂಜನ್), ಅನಕ್ಷರಸ್ಥ ಸೆಲೆಬ್ರಿಟಿ (ಅನುಷ್ಕಾ ಶರ್ಮಾ)’ ಎಂದು ಅವರು ತಮ್ಮ ಕಟು ಶಬ್ದಗಳ ಪ್ರಯೋಗ ಮಾಡಿರುವ ವೈದ್ಯ ಫಿಲಿಫ್ಸ್, ‘ಹೋಮಿಯೋಪತಿ ಚಿಕಿತ್ಸೆಗಳಲ್ಲಿ ಯಾವುದೇ ಸಕ್ರಿಯ ಔಷಧೀಯ ಪದಾರ್ಥಗಳು ಇರುವುದಿಲ್ಲ. ಹೋಮಿಯೋಪತಿ ಎಂಬುದು ನೀರು, ಆಲ್ಕೋಹಾಲ್ ಮತ್ತು ಸಕ್ಕರೆಯಿಂದ ಮಾಡಲ್ಪಟ್ಟ ‘ಔಷಧ’. ಹಾಗಾಗಿ ನೀವು ಯಾವುದೇ ಔಷಧವೇ ಇಲ್ಲದ ಕೇವಲ ಸಕ್ಕರೆ ಮಾತ್ರೆಗಳಿಗೆ ಭಾರಿ ಬೆಲೆ ಕೊಡುತ್ತಿದ್ದೀರಿ’ ಎಂದು ಅವರು ಬರೆದಿದ್ದಾರೆ.

ಹೋಮಿಯೋಪತಿ ಕೇವಲ ನಂಬಿಕೆ ಆಧಾರದ ಮೇಲೆ ನಡೆಯುವ ಚಿಕಿತ್ಸೆ ಆಗಿದೆ. ಹೋಮಿಯೋಪತಿಗೆ ಯಾವುದೇ ವೈದ್ಯಕೀಯ ತಳಹದಿ ಇಲ್ಲ ಎಂದು ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಮಾತ್ರವಲ್ಲದೆ ಹಲವು ಪ್ರಮುಖ ಖಾಯಿಲೆಗಳಿಗೆ ಹೋಮಿಯೋಪತಿ ಬಳಸುವುದನ್ನು ನಿಷೇಧಿಸಿದೆ. ಈಗ ಅನುಷ್ಕಾ ಶರ್ಮಾ ಅವರು ವೈಜ್ಞಾನಿಕ ಆಧಾರ ಇಲ್ಲದ ಹೋಮಿಯೋಪತಿಗೆ ಬೆಂಬಲ ಸೂಚಿಸಿದ್ದರಿಂದ ಸಹಜವಾಗಿಯೇ ಅವರ ವಿರುದ್ಧ ಟೀಕೆ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:01 pm, Sun, 7 June 26

Source link

ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ಇಷ್ಟಬಂದಂತಿರುವಂತಿಲ್ಲ; 9 ಸ್ಟ್ಯಾಂಡರ್ಡ್ ಸೈಜ್ ನಿಗದಿ ಮಾಡಿದ ಸರ್ಕಾರ – Kannada News

ನವದೆಹಲಿ, ಜೂನ್ 7: ಇನ್ಮುಂದೆ ಕಂಪನಿಗಳು ತಮಗೆ ಇಷ್ಟಬಂದ ಅಳತೆಯಲ್ಲಿ ಎಣ್ಣೆ ಪ್ಯಾಕೆಟ್ ತಯಾರಿಸುವಂತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ 9 ನಿರ್ದಿಷ್ಟ ಅಳತೆಗಳಲ್ಲಿ ಮಾತ್ರ ಅಡುಗೆ ಎಣ್ಣೆಯನ್ನು ಮಾರಾಟ ಮಾಡಬೇಕಾಗುತ್ತದೆ. ಪ್ಯಾಕೆಟ್‌ನ ಮೇಲೆ ಎಣ್ಣೆಯ ಪ್ರಮಾಣವನ್ನು ಲೀಟರ್ ಅಥವಾ ಮಿಲಿಲೀಟರ್‌ಗಳಲ್ಲಿ (Volume) ನಮೂದಿಸಿದರೆ, ಅದರ ಜೊತೆಗೆ ಕಡ್ಡಾಯವಾಗಿ ಅದಕ್ಕೆ ಸಮಾನವಾದ ಕಿಲೋಗ್ರಾಂ ಅಥವಾ ಗ್ರಾಮ್ (Weight) ತೂಕವನ್ನೂ ಮುದ್ರಿಸಬೇಕಾಗುತ್ತದೆ. ಗ್ರಾಹಕರು ಅಡುಗೆ ಎಣ್ಣೆ (Cooking Oil) ಖರೀದಿಸುವಾಗ ಎದುರಿಸುತ್ತಿದ್ದ ಗೊಂದಲವನ್ನು ನಿವಾರಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ‘ಲೀಗಲ್ ಮೆಟ್ರೋಲಜಿ’ (Legal Metrology) ನಿಯಮಾವಳಿಗಳ ಅಡಿಯಲ್ಲಿ ಹೊಸ ಕಡ್ಡಾಯ ನಿಯಮಗಳನ್ನು ಜಾರಿಗೆ ತರುತ್ತಿದೆ. ಅಡುಗೆ ಎಣ್ಣೆ ಕಂಪನಿಗಳಿಗೆ ಈ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರ 3 ತಿಂಗಳ ಕಾಲಾವಕಾಶ (Transition Period) ನೀಡಿದೆ.

ಗ್ರಾಹಕರಿಗೆ ಇದ್ದ ಗೊಂದಲವೇನು?

ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಗಳು 650g, 700g, 810g, 850g, 870g 970g ಇತ್ಯಾದಿ ವಿಚಿತ್ರ ಅಳತೆಗಳ ಪ್ಯಾಕೆಟ್‌ಗಳಲ್ಲಿ ಲಭ್ಯವಿವೆ. ಇವು ನೋಡಲು ಒಂದೇ ತರಹ ಕಂಡರೂ ತೂಕದಲ್ಲಿ ವ್ಯತ್ಯಾಸ ಇರುತ್ತದೆ. ಇದರಿಂದಾಗಿ ಗ್ರಾಹಕರಿಗೆ ಎರಡು ವಿಭಿನ್ನ ಬ್ರ್ಯಾಂಡ್‌ಗಳ ಬೆಲೆಯನ್ನು ಹೋಲಿಕೆ ಮಾಡಿ, ಯಾವುದು ಅಗ್ಗ ಮತ್ತು ಯಾವುದು ದುಬಾರಿ ಎಂದು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಕಂಪನಿಗಳು ಬೆಲೆ ಕಡಿಮೆ ಇರುವಂತೆ ತೋರಿಸಲು ಪ್ಯಾಕೆಟ್‌ನ ತೂಕವನ್ನು ಗುಟ್ಟಾಗಿ ಕಡಿಮೆ ಮಾಡುತ್ತಿದ್ದವು (ಇದನ್ನು ‘ಶ್ರಿಂಕ್‌ಫ್ಲೇಷನ್’ ಎನ್ನಲಾಗುತ್ತದೆ). ಮಹಾಭಾರತದಲ್ಲಿ ಧರ್ಮರಾಯ ದ್ರೋಣನಿಗೆ ‘ಅಶ್ವತ್ಥಾಮ ಹತಃ ನರಃ ವಾ ಕುಂಜರಃ’ (ಅಶ್ವತ್ಥಾಮ ಎನ್ನುವ ಮನುಷ್ಯನೋ ಅಥವಾ ಆನೆಯೋ ಕೊಲಲ್ಪಟ್ಟಿದೆ) ಎಂದು ಹೇಳುವಾಗ ಶ್ರೀಕೃಷ್ಣನು ‘ನರಃ’ ಪದ ಕೇಳಿಸದಂತೆ ಶಂಖ ಊದುತ್ತಾನೆ. ಆ ರೀತಿಯ ಕಂಡೂ ಕಾಣದ ಸತ್ಯವನ್ನು ಅಡುಗೆ ಎಣ್ಣೆಯ ಪ್ಯಾಕೆಟ್​ಗಳಲ್ಲಿ ಹಾಕಲಾಗುತ್ತದೆ.

ಇದನ್ನೂ ಓದಿ: ಸ್ಪೇಸ್​ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್

ನಿಗದಿಪಡಿಸಲಾದ 9 ಸ್ಟ್ಯಾಂಡರ್ಡ್ ಸೈಜ್‌ಗಳು

ಹೊಸ ನಿಯಮದ ಪ್ರಕಾರ, ಪ್ರಮುಖ ಅಡುಗೆ ಎಣ್ಣೆಗಳಾದ ಪಾಮ್ ಆಯಿಲ್, ಸೂರ್ಯಕಾಂತಿ (Sunflower), ಸಾಸಿವೆ (Mustard), ಸೋಯಾಬೀನ್, ಶೇಂಗಾ (Groundnut), ಎಳ್ಳೆಣ್ಣೆ, ತೌಡು ಎಣ್ಣೆ (Rice Bran), ಹತ್ತಿಬೀಜದ ಎಣ್ಣೆ ಮತ್ತು ಜೋಳದ ಎಣ್ಣೆಗಳನ್ನು ಈ ಕೆಳಗಿನ ಸೈಜ್‌ಗಳಲ್ಲಿ ಮಾತ್ರ ಪ್ಯಾಕ್ ಮಾಡಬೇಕು:

ಸಣ್ಣ ಮತ್ತು ಮಧ್ಯಮ ಪ್ಯಾಕ್: 200 ml/g, 500 ml/g, 1 ಲೀಟರ್/kg, 2 ಲೀಟರ್/kg, 3 ಲೀಟರ್/kg, 4 ಲೀಟರ್/kg, 5 ಲೀಟರ್/kg.

ಬಲ್ಕ್ (ದೊಡ್ಡ) ಪ್ಯಾಕ್: 15 ಲೀಟರ್/kg ಮತ್ತು 20 ಲೀಟರ್/kg.

ಬಜೆಟ್ ಪ್ಯಾಕ್​ಗಳಿಗೆ ವಿನಾಯಿತಿ

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸುಲಭ ಬೆಲೆಯಲ್ಲಿ ಸಿಗುವ 200 ಮಿಲಿಲೀಟರ್ ಅಥವಾ 200 ಗ್ರಾಮ್‌ಗಿಂತ ಕಡಿಮೆ ಇರುವ ಸಣ್ಣ ಸ್ಯಾಚೆಟ್‌ಗಳಿಗೆ (Sachets) ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ ಬಾದಾಮಿ ಎಣ್ಣೆ, ಆಲಿವ್ ಆಯಿಲ್, ಅಕ್ರೋಟ್ (Walnut) ಎಣ್ಣೆಯಂತಹ ಮೈನರ್/ನಿಶ್ (Minor/Niche) ತೈಲಗಳಿಗೂ ಇದರಿಂದ ವಿನಾಯಿತಿ ಇದೆ.

ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?

ತೂಕ ಮತ್ತು ಲೀಟರ್ ಲೆಕ್ಕ ಕಡ್ಡಾಯ

ತಾಪಮಾನಕ್ಕೆ ಅನುಗುಣವಾಗಿ ಎಣ್ಣೆಯ ಸಾಂದ್ರತೆ (Density) ಬದಲಾಗುತ್ತದೆ. ಉದಾಹರಣೆಗೆ, 1 ಲೀಟರ್ ಅಡುಗೆ ಎಣ್ಣೆಯ ತೂಕ ಸಾಮಾನ್ಯವಾಗಿ ಸುಮಾರು 910 ಗ್ರಾಮ್ ಇರುತ್ತದೆ. ಈ ವ್ಯತ್ಯಾಸದಿಂದ ಗ್ರಾಹಕರು ಮೋಸ ಹೋಗಬಾರದು ಎಂಬ ಕಾರಣಕ್ಕೆ ಲೀಟರ್ ಜೊತೆಗೆ ಅದರ ನಿಖರ ತೂಕವನ್ನೂ (ಗ್ರಾಮ್/ಕೆಜಿ ಯಲ್ಲಿ) ಕಡ್ಡಾಯವಾಗಿ ಮುದ್ರಿಸಲು ಸೂಚಿಸಲಾಗಿದೆ.

ಕಂಪನಿಗಳು ತಮ್ಮ ಹಳೆಯ ಪ್ಯಾಕೇಜಿಂಗ್ ಸ್ಟಾಕ್ ಅನ್ನು ಖಾಲಿ ಮಾಡಲು 3 ತಿಂಗಳ ಸಮಯಾವಕಾಶ ನೀಡಲಾಗಿದ್ದು, ಇಲಾಖೆಯ ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಬರಲಿದೆ ಮತ್ತು ಗ್ರಾಹಕರು ಸುಲಭವಾಗಿ ಬೆಲೆಗಳನ್ನು ಹೋಲಿಕೆ ಮಾಡಿ ಖರೀದಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

WTC 2025-27: ಜೋ ರೂಟ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಶುಭ್​ಮನ್ ಗಿಲ್

Source link

ಬೆಳಗಾವಿಯ ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರೂ. ರಹಸ್ಯ ಬಯಲು: ಎಳೆ ಎಳೆಯಾಗಿ ಬಿಚ್ಚಿಟ್ಟ ಸಿಐಡಿ – Kannada News

ಬೆಳಗಾವಿ, (ಜೂನ್.07): ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಬರೋಬ್ಬರಿ 4500 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಶಿವಂ ಅಸೋಸಿಯೇಟ್ ಸಂಸ್ಥೆ (Shivam associates) ಮಾಲೀಕ ಶಿವಾನಂದ ನೀಲಣ್ಣನವರ್‌ (shivanand neelannavar) ಅವರನ್ನು ಈಗಾಗಲೇ ಸಿಐಡಿ ಪೊಲೀಸರು ಬಂಧಿಸಿದ್ದು, ತನಿಖೆಯಲ್ಲಿ ಶಿವಾನಂದ ನೀಲಣ್ಣವರ್ ವಂಚನೆ ಮಾಡಿರುವುದು ಸಾಬೀತಾಗಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದು, ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾರೆ. ಇದರಲ್ಲಿ ಸುಮಾರು ದುಡ್ಡು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಹೂಡಿಕೆಯಾದ ಹಣವನ್ನು ಹಳಬರಿಗೆ ಬಡ್ಡಿ ರೂಪದಲ್ಲಿ ಕೊಡುತ್ತಿದ್ದ. ಸಂಗ್ರಹದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಸಮಸ್ಯೆ ಆಗುತ್ತಿತ್ತು ಎಂದು ವಂಚನೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣ
  • ಶಿವಾನಂದ ನೀಲಣ್ಣವರ್ ವಂಚನೆ ಮಾಡಿರುವುದು ಸಾಬೀತಾಗಿದೆ
  • ಶಿವಂ ಅಸೋಸಿಯೇಟ್‌ನ ಮಾಲೀಕ ಶಿವಾನಂದ ನೀಲಣ್ಣವರ್
  • ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾನೆ
  • ಬೆಳಗಾವಿಯಲ್ಲಿ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ

ಶಿವಂ ಅಸೋಶಿಯೇಟ್ ಕಂಪನಿಯಿಂದ ಸಾವಿರಾರು ಕೋಟಿ ವಂಚನೆ ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ಮಹತ್ವದ ಸುದ್ಧಿಗೋಷ್ಠಿ ನಡೆಸಿ ಕೆಲವು ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ದಾಳಿ ನಡೆದಿದ್ದು, ಇದೀಗ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿತ್ತು. ಸಾಮಾನ್ಯವಾಗಿ ತನಿಖೆ ನಡೆಯುವಾಗ ಸುದ್ಧಿಗೋಷ್ಠಿ ಮಾಡಲ್ಲ. ಇವತ್ತಿಗೂ ಶಿವಂ ಅಸೋಸಿಯೇಟ್ ಕಂಪನಿಗೆ ಜನರು ಹಣ ಹಾಕ್ತಿದಾರೆ. ಎಫ್ಐಆರ್ ಆದ ಬಳಿಕ ಈವರೆಗೆ ಐದು ಕೋಟಿ ಮತ್ತೇ ಹೂಡಿಕೆ ಆಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸುದ್ದಿಗೋಷ್ಠಿ ಮಾಡ್ತಿದ್ದೇವೆ ಎಂದರು.

ಇದನ್ನೂ ಓದಿ: ನಾನು ಸಿಎಂ ಆಗ್ಲಾ? ಎಂದವನ ಬಂಡವಾಳ ಬಯಲು: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್

ಹಣದ ರಹಸ್ಯ ಬಿಚ್ಚಿಟ್ಟ ಸಿಐಡಿ ಡಿಐಜಿಪಿ

ಶಿವಂ ಅಸೋಸಿಯೇಟ್‌ನ ಮಾಲೀಕ ಶಿವಾನಂದ ನೀಲಣ್ಣವರ್ ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು ದುಡ್ಡು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಹೂಡಿಕೆಯಾದ ಹಣವನ್ನು ಹಳಬರಿಗೆ ಬಡ್ಡಿ ಕೊಡುತ್ತಿದ್ದ. ಆದ್ರೆ, ಸಂಗ್ರಹದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಸಮಸ್ಯೆ ಆಗುತ್ತಿತ್ತು. 540 ಕೋಟಿ ರೂಪಾಯಿಯನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹಾಕಿದ್ದು, ಈ ಪೈಕಿ ಸ್ಟಾಕ್ ಮಾರ್ಕೆಟ್‌ನಲ್ಲಿ 170 ಕೋಟಿ ರೂ. ಕಳೆದುಕೊಂಡಿದ್ದಾನೆ. ಈವರೆಗಿನ ತನಿಖೆಯಲ್ಲಿ 660 ಕೋಟಿ ರೂ. ಶಾರ್ಟೇಜ್‌ ಕಂಡುಬಂದಿದ್ದು, 330 ಕೋಟಿ ರೂಪಾಯಿ ರಿಕವರಿ ಆಗುತ್ತೆ ಎಂದು ಮಾಹಿತಿ ನೀಡಿದರು.

ಶಿವಾನಂದ ನೀಲಣ್ಣವರ್ 40,700 ಜನರಿಂದ ಹೂಡಿಕೆ ಮಾಡಿಕೊಂಡಿದ್ದು, ಈತನೊಟ್ಟಿಗೆ ಇನ್ನೊಬ್ಬ ಪಾಲುದಾರ ಸಹ ಇದ್ದಾನೆ. ಕಂಪನಿಯಿಂದ ಅಕ್ರಮವಾಗಿ ನೀಲಣ್ಣವರ್ 55 ಕೋಟಿ ರೂ. ಹಾಕಿಕೊಂಡಿದ್ದಾನೆ. ಈಗಾಗಲೇ ಐದು ಐಷಾರಾಮಿ ಕಾರು ಜಪ್ತಿ ಮಾಡಿಕೊಂಡಿದ್ದೇವೆ.ಇನ್ನೂ 11 ವೋಲ್ವೋ ಎಕ್‌ಸಿ90 ಕಾರು ಖರೀದಿ ಮಾಡಿದ್ದು, ಅವುಗಳನ್ನೂ ಶೀಘ್ರದಲ್ಲಿ ಜಪ್ತಿ ಮಾಡುತ್ತೇವೆ. ಈವರೆಗೂ 400 ಕೋಟಿ ರೂ. ಹೆಚ್ಚುವರಿಯಾಗಿ ಹೂಡಿಕೆದಾರರಿಗೆ ಹೋಗಿದೆ. ಆ ಹಣವನ್ನೂ ವಾಪಸ್ ಪಡೆದು ಇನ್ನುಳಿದ ಹೂಡಿಕೆದಾರರಿಗೆ ನೀಡುತ್ತೇವೆ ಎಂದು ಹೇಳಿದರು.

ಎಫ್ಐಆರ್ ಆದ ಮೇಲೆ ನಾಲ್ಕೈದು ಕೋಟಿ ರೂ.ಡೆಪಾಸಿಟ್ ಆಗಿದ್ದು, 30 ಅಕೌಂಟ್ ಸಿಕ್ಕಿದ್ದು ಇದರಲ್ಲಿ 7 ಅಕೌಂಟ್‌ಗಳಲ್ಲಿ ಹೆಚ್ಚಿನ ಹಣ ವರ್ಗಾವಣೆ. 36,200 ಪೇಜ್ ಒಂದೇ ಅಕೌಂಟ್‌ನಲ್ಲಿ ಆಗಿದ್ದು ತನಿಖೆ ನಡೆಯುತ್ತಿದೆ. ಸಿನಿಮಾ ಸ್ಟಾರ್‌ಗಳಿಗೆ ಶಿವಂ ಅಸೋಸಿಯೇಟ್‌ನಿಂದ ಹಣ ಹೋಗಿದ್ದರೆ ಅವರಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಕರೆಯುತ್ತೇವೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಲಾಗಿದ್ದು,ಮಹಾರಾಷ್ಟ್ರದ ಪೊಲೀಸರ ಸಹಕಾರ ಪಡೆದು ತನಿಖೆ ಕೈಗೊಳ್ಳಲಾಗಿದೆ. ಹಣ ರಿಕವರಿ ಬಳಿಕ ಬಡ್ಸ್ ಕಾಯ್ದೆ ಮುಖ್ಯಸ್ಥ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಕೊಡುತ್ತೇವೆ. ಬಳಿಕ ಅವರು ಸಾರ್ವಜನಿಕರಿಗೆ ಹಣ ವಾಪಸ್ ಕೊಡುತ್ತಾರೆ. ಕಂಪನಿ ಮುಳುಗುವ ಮುನ್ನ ದಾಳಿ ಮಾಡಿ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Source link

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಹುದ್ದೆಗಳ ಸಂಖ್ಯೆ 1,170ಕ್ಕೆ ಹೆಚ್ಚಳ! – Kannada News

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿImage Credit source: Pinterest

ದೇಶಾದ್ಯಂತ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಸಿದ್ಧತೆ ನಡೆಸುತ್ತಿರುವವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಸಿಬ್ಬಂದಿ ನೇಮಕಾತಿ ಆಯೋಗವು (SSC) ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಗ್ರೇಡ್ ‘ಡಿ’ ನೇಮಕಾತಿ 2026ರ ಪರಿಷ್ಕೃತ (Revised) ಹುದ್ದೆಗಳ ವಿವರವನ್ನು ಬಿಡುಗಡೆ ಮಾಡಿದೆ. ಈ ಹೊಸ ಪ್ರಕಟಣೆಯ ಪ್ರಕಾರ, ಒಟ್ಟು ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಈಗ ಒಟ್ಟು 1,170 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹಿಂದೆ ಘೋಷಿಸಲಾಗಿದ್ದ ಹುದ್ದೆಗಳಿಗಿಂತ ಇದು ಹೆಚ್ಚಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ.

ಗ್ರೇಡ್ ‘ಸಿ’ ಮತ್ತು ‘ಡಿ’ ಇಲಾಖಾವಾರು ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 1,170 ಹುದ್ದೆಗಳನ್ನು ಎರಡು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಅನ್ವಯ ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ವಿಭಾಗದಲ್ಲಿ 261 ಹುದ್ದೆಗಳು ಮತ್ತು ಸ್ಟೆನೋಗ್ರಾಫರ್ ಗ್ರೇಡ್ ‘ಡಿ’ ವಿಭಾಗದಲ್ಲಿ 909 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಅವರ ಆಸಕ್ತಿ ಮತ್ತು ಅರ್ಹತೆಗೆ ಅನುಗುಣವಾಗಿ ಇಲಾಖಾವಾರು ಹುದ್ದೆಗಳ ಹಂಚಿಕೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಲಾಗುವುದು ಎಂದು ಸಿಬ್ಬಂದಿ ನೇಮಕಾತಿ ಆಯೋಗವು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕೆಲಸದ ಅವಕಾಶ:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಪ್ರಮುಖ ಸಚಿವಾಲಯಗಳು (Ministries) ಮತ್ತು ಇಲಾಖೆಗಳಲ್ಲಿ ನೇಮಕಾತಿ ಸಿಗಲಿದೆ. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಸದಾ ಹೆಚ್ಚಿನ ಬೇಡಿಕೆ ಇರುವುದರಿಂದ, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮತ್ತು ಪ್ರತಿಷ್ಠಿತ ಕಚೇರಿಗಳಲ್ಲಿ ಕೆಲಸ ಮಾಡಲು ಬಯಸುವ ಯುವಕರಿಗೆ ಇದು ಅತ್ಯಂತ ಮಹತ್ವದ ಹಾಗೂ ಗೌರವಾನ್ವಿತ ಅವಕಾಶವೆಂದು ಪರಿಗಣಿಸಲಾಗಿದೆ.

ಕಠಿಣ ಪರೀಕ್ಷೆ ಮತ್ತು ಅರ್ಹತೆಯ ಆಧಾರದ ಮೇಲೆ ಆಯ್ಕೆ:

ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಕಟ್ಟುನಿಟ್ಟಾದ ಲಿಖಿತ ಪರೀಕ್ಷೆ ಮತ್ತು ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆಯಲ್ಲಿ ಅವರು ಪ್ರದರ್ಶಿಸುವ ಪ್ರತಿಭೆಯ ಆಧಾರದ ಮೇಲೆಯೇ ಮಾಡಲಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳು ಮುಂದಿನ ಹಂತದ ದಾಖಲಾತಿ ಪರಿಶೀಲನೆ ಸೇರಿದಂತೆ ನಿಯಮಿತ ಪ್ರಕ್ರಿಯೆಗಳಿಗೆ ಒಳಪಡಬೇಕಾಗುತ್ತದೆ. ಅಂತಿಮವಾಗಿ ಮೆರಿಟ್ ಪಟ್ಟಿ ಮತ್ತು ಸರ್ಕಾರದ ಮೀಸಲಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುತ್ತದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಹುದ್ದೆಗಳ ಹೆಚ್ಚಳದಿಂದ ಉದ್ಯೋಗಾಕಾಂಕ್ಷಿಗಳಿಗೆ ಭಾರಿ ಲಾಭ:

ಪರೀಕ್ಷೆಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಹುದ್ದೆಗಳ ಸಂಖ್ಯೆಯಲ್ಲಿ ಆಗಿರುವ ಈ ಹೆಚ್ಚಳವು ಭರವಸೆಯ ಬೆಳಕಾಗಿದೆ. ಹುದ್ದೆಗಳ ಸಂಖ್ಯೆ ಹೆಚ್ಚಾದಷ್ಟೂ ಕಟ್-ಆಫ್ ಅಂಕಗಳಲ್ಲಿ ಧನಾತ್ಮಕ ಬದಲಾವಣೆಯಾಗಿ, ಕಠಿಣ ಪರಿಶ್ರಮ ಪಡುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಆದ್ದರಿಂದ, ಸ್ಟೆನೋಗ್ರಾಫರ್ ಪರೀಕ್ಷೆಯ ದಿನಾಂಕಕ್ಕೂ ಮುನ್ನವೇ ಅಭ್ಯರ್ಥಿಗಳು ತಮ್ಮ ತಯಾರಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡು ಈ ಸುವರ್ಣಾವಕಾಶದ ಪೂರ್ಣ ಲಾಭವನ್ನು ಪಡೆದುಕೊಳ್ಳಬೇಕಾಗಿದೆ.

ಕೇಂದ್ರ ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವ ಯುವಕರಿಗೆ ಎಸ್‌ಎಸ್‌ಸಿ ನೀಡಿರುವ ಈ ಉಡುಗೊರೆ ನಿಜಕ್ಕೂ ಪ್ರೇರಣಾದಾಯಕವಾಗಿದೆ. ಸ್ಪರ್ಧೆ ಎಷ್ಟೇ ಕಠಿಣವಾಗಿದ್ದರೂ, ಹುದ್ದೆಗಳ ಸಂಖ್ಯೆ ಹೆಚ್ಚಿರುವುದರಿಂದ ಸರಿಯಾದ ಯೋಜನಾಬದ್ಧ ಸಿದ್ಧತೆ ಮತ್ತು ನಿರಂತರ ಅಭ್ಯಾಸದಿಂದ ಈ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಉದ್ಯೋಗಾಕಾಂಕ್ಷಿಗಳು ಸಮಯ ವ್ಯರ್ಥ ಮಾಡದೆ ಇಂದಿನಿಂದಲೇ ತಮ್ಮ ರಿವಿಷನ್ ಹಾಗೂ ಮಾಕ್ ಟೆಸ್ಟ್‌ಗಳ ಕಡೆಗೆ ಗಮನ ಹರಿಸಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs AFG: ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌; ದಿಗ್ಗಜರನ್ನು ಹಿಂದಿಕ್ಕಿದ ರಿಷಭ್ ಪಂತ್

Source link

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ! – Kannada News

ಬೆಂಗಳೂರು, ಜೂನ್ 07: ಕಾಲೇಜು ಶುಲ್ಕ ಪಾವತಿಸುವ ಗಡುವಿನ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ವಿದ್ಯಾರ್ಥಿನಿಯೊಬ್ಬರ ಕುಟುಂಬಕ್ಕೆ ಸೈಬರ್ ವಂಚಕರು (Cyber Crime) ಒಂದು ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಎಂಬಿಬಿಎಸ್ ಓದುತ್ತಿರುವ ಯುವತಿಯ ಕಾಲೇಜು ಫೀಸ್ ಕಟ್ಟುವ ನೆಪದಲ್ಲಿ ಈ ವಂಚನೆ ಎಸಗಲಾಗಿದೆ.

ಮುಖ್ಯಾಂಶಗಳು

  • ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯ ಕುಟುಂಬಕ್ಕೆ ವಂಚನೆ ಮಾಡಲಾಗಿದೆ.
  • ಪರೀಕ್ಷೆಯ ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಸೈಬರ್ ಖದೀಮರು ದುರುಪಯೋಗಪಡಿಸಿಕೊಂಡಿದ್ದಾರೆ.
  • ಸ್ನೇಹಿತೆಯ ಸೋಗಿನಲ್ಲಿ ಬಂದು ಒಂದು ಲಕ್ಷ ರೂಪಾಯಿ ಪಡೆದು ನಾಪತ್ತೆಯಾಗಿದ್ದಾರೆ.

ಪರೀಕ್ಷೆಯ ನೆಪ ಹೇಳಿ ವಂಚನೆ

ಬೆಂಗಳೂರು ನಿವಾಸಿಯೊಬ್ಬರ ಸಂಬಂಧಿಕರ ಮಗಳು ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಪರೀಕ್ಷೆಗಳು ಹತ್ತಿರ ಬರುತ್ತಿದ್ದರಿಂದ ತುರ್ತಾಗಿ ಕಾಲೇಜು ಶುಲ್ಕ ಪಾವತಿಸಬೇಕಾಗಿತ್ತು. ನಿಗದಿತ ಸಮಯಕ್ಕೆ ಹಣ ಪಾವತಿಸದಿದ್ದರೆ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಸಿಗುವುದಿಲ್ಲ ಎಂದು ವಿದ್ಯಾರ್ಥಿನಿ ತನ್ನ ಕುಟುಂಬಕ್ಕೆ ತಿಳಿಸಿದ್ದರು. ಈ ಸಂದರ್ಭವನ್ನು ಸೈಬರ್ ಅಪರಾಧಿಗಳು ತಮಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.

ಸ್ನೇಹಿತೆಯ ಸೋಗಿನಲ್ಲಿ ವಂಚನೆ

ಹಣ ವರ್ಗಾವಣೆಯ ತುರ್ತಿನಲ್ಲಿದ್ದ ನವೀನ್ ಕುಟುಂಬವನ್ನು ದೀಪಿಕಾ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಸಂಪರ್ಕಿಸಿದ್ದಾಳೆ. ತಾನು ವಿದ್ಯಾರ್ಥಿನಿಯ ಸ್ನೇಹಿತೆ ಎಂದು ನಂಬಿಸಿದ ಆಕೆ, ವಿದೇಶಿ ವಿನಿಮಯದ (ಫಾರೆಕ್ಸ್) ಯಾವುದೇ ಕಡಿತವಿಲ್ಲದೆ ನೇರವಾಗಿ ಹಣವನ್ನು ತಲುಪಿಸಲು ಒಂದು ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾಳೆ. ತನ್ನ ಪರಿಚಿತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದರೆ, ಯಾವುದೇ ಶುಲ್ಕ ಕಡಿತವಾಗದೆ ಸಂಪೂರ್ಣ ಮೊತ್ತ ವಿದ್ಯಾರ್ಥಿನಿಗೆ ತಲುಪುತ್ತದೆ ಎಂದು ಆಕೆ ನಂಬಿಸಿದ್ದಾಳೆ.

ದೂರು ದಾಖಲು

ಆಕೆಯ ಮಾತನ್ನು ನಿಜವೆಂದು ನಂಬಿದ ನವೀನ್ ಮೇ 9 ರಂದು ಗೂಗಲ್ ಪೇ (Google Pay) ಮೂಲಕ ಆಕೆ ನೀಡಿದ ಖಾತೆಗೆ ಹಂತ ಹಂತವಾಗಿ ಒಟ್ಟು ಒಂದು ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಕೈ ಸೇರಿದ ಬೆನ್ನಲ್ಲೇ ಆ ಮಹಿಳೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ಎಷ್ಟು ಪ್ರಯತ್ನಿಸಿದರೂ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ತಮಗೆ ವಂಚನೆಯಾಗಿರುವುದು ಕುಟುಂಬಕ್ಕೆ ಮನವರಿಕೆಯಾಗಿದೆ.

ಕುಟುಂಬದ ಸದಸ್ಯರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರಿಂದ ದೂರು ನೀಡಲು ಕೊಂಚ ತಡವಾಗಿದೆ. ಸದ್ಯ ಹಣ ಕಳೆದುಕೊಂಡ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್ಎಸ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಿನ್ನ ಪಾತ್ರದಲ್ಲಿ ಸಾಯಿ ಪಲ್ಲವಿ, ಮೊದಲ ಬಾರಿ ರಗಡ್ ಲುಕ್ – Kannada News

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ಮತ್ತು ಬಲು ಬೇಡಿಕೆಯ ನಟಿ. ಇತರೆ ನಟಿಯರಿಗಿಂತಲೂ ಬಹಳ ಭಿನ್ನ ನಟಿಯಾಗಿರುವ ಸಾಯಿ ಪಲ್ಲವಿ, ಸಿನಿಮಾಗಳ ಆಯ್ಕೆ ವಿಷಯದಲ್ಲಿ ಬಲು ಚ್ಯೂಸಿ. ತಮ್ಮ ಪಾತ್ರಕ್ಕೆ ತೂಕವಿದ್ದರಷ್ಟೆ ಅವರು ಒಪ್ಪಿಕೊಳ್ಳುವುದು. ದೊಡ್ಡ ಸ್ಟಾರ್ ಜೊತೆಗಿನ ಸಿನಿಮಾ ಆಗಿದ್ದರೂ ಸರಿಯೇ ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಸಂದೇಶವುಳ್ಳ ಚಿತ್ರಗಳಿಗೆ ಮೊದಲ ಆದ್ಯತೆ. ಜಾಹೀರಾತುಗಳಲ್ಲಿ ಯಾವ ಕಾರಣಕ್ಕೂ ನಟಿಸುವುದಿಲ್ಲ, ಸಿನಿಮಾನಲ್ಲಿ ಉಡುವ ಉಡುಗೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಇದೇ ಕಾರಣಕ್ಕೆ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಅಂದಹಾಗೆ ಸಾಯಿ ಪಲ್ಲವಿ ಈ ವರೆಗೆ ನಟಿಸಿರುವುದು ಸೌಮ್ಯ ನಾಯಕಿಯ ಪಾತ್ರಗಳು. ಒಂದು ಸಿನಿಮಾನಲ್ಲಿ ನಕ್ಸಲೈಟ್, ಮತ್ತೊಂದು ಸಿನಿಮಾನಲ್ಲಿ ದೇವದಾಸಿಯಾಗಿ ನಟಿಸಿದ್ದಾರಾದರೂ ಆ ಸಿನಿಮಾಗಳಲ್ಲಿಯೂ ಅವರದ್ದು ಸೌಮ್ಯವಾದ ಪಾತ್ರಗಳೇ. ಆದರೆ ಇದೇ ಮೊದಲ ಬಾರಿಗೆ ಸಾಯಿ ಪಲ್ಲವಿ, ಈ ವರೆಗೆ ಪ್ರಯತ್ನಿಸದ ರೀತಿಯ ಅವರ ಪಾಲಿಗೆ ಬಹಳ ಹೊಸದಾದ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಸಾಯಿ ಪಲ್ಲವಿ ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಅದೂ ಸಾಮಾನ್ಯ ಪೊಲೀಸ್ ಅಲ್ಲ, ಬಲು ರಗಡ್ ಆದ ಪೊಲೀಸ್. ಈ ಹಿಂದೆ ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ ನಿರ್ದೇಶಿಸಿದ್ದ ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಸಾಯಿ ಪಲ್ಲವಿ ಅವರದ್ದು ಪೊಲೀಸ್ ಪಾತ್ರ. ಸಿನಿಮಾದ ನಾಯಕ ಧನುಶ್.

ಇದನ್ನೂ ಓದಿ:ಸಹೋದರಿಯ ಜೊತೆ ಕ್ಯೂಟ್ ವಿಡಿಯೋ ಹಂಚಿಕೊಂಡ ಸಾಯಿ ಪಲ್ಲವಿ

ಧನುಶ್ ಜೊತೆಗೆ ಸಾಯಿ ಪಲ್ಲವಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಇವರು ‘ಮಾರಿ 2’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಈ ಹೊಸ ಸಿನಿಮಾನಲ್ಲಿ ಧನುಶ್ ಕಳ್ಳನ ಪಾತ್ರದಲ್ಲಿ ನಟಿಸಿದರೆ ಸಾಯಿ ಪಲ್ಲವಿ ಪೊಲೀಸ್ ಅಂತೆ. ಇಬ್ಬರ ನಡುವೆ ಸ್ಪಷ್ಟ ವೈರತ್ವ ಇರಲಿದೆ ಎನ್ನಲಾಗುತ್ತಿದೆ. ಆದರೆ ಎರಡೂ ಪಾತ್ರಗಳಿಗೆ ಸಮಾನ ಅವಕಾಶ ಮತ್ತು ಪ್ರಾಧಾನ್ಯತೆ ಇರಲಿದೆ ಎನ್ನಲಾಗುತ್ತಿದೆ.

ಸಾಯಿ ಪಲ್ಲವಿ ಪಾಲಿಗೆ ಇದು ಬಲು ಸವಾಲಿನ ಪಾತ್ರ ಆಗಲಿದೆ. ಸಾಯಿ ಪಲ್ಲವಿ ಅವರ ಸಿನಿಮಾಗಳ ಪಾತ್ರದ ರೀತಿಯಲ್ಲಿಯೇ ಬಲು ಸೌಮ್ಯ ವ್ಯಕ್ತಿತ್ವದವರು. ಆದರೆ ಪೊಲೀಸ್ ಪಾತ್ರಗಳಿಗೆ ಅದರದ್ದೇ ಆದ ಗಡಸು ವ್ಯಕ್ತಿತ್ವ ಬೇಕಾಗಿರುತ್ತದೆ. ಸಾಯಿ ಪಲ್ಲವಿ ಈ ಪಾತ್ರವನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version