Headlines

ಜಮ್ಮು-ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಉಗ್ರರ ಗುಂಡಿನ ದಾಳಿ; ಪೋಲೀಸ್ ಕಾನ್​ಸ್ಟೆಬಲ್ ಹುತಾತ್ಮ – Kannada News | Police personnel killed another injured in terrorist attack in Jammu Kashmir Anantnag

ಅನಂತ್‌ನಾಗ್, ಜುಲೈ 22: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತ್‌ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಪೋಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದಾರೆ. ಅನಂತ್‌ನಾಗ್-ಕೋಕರ್‌ನಾಗ್ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಈ ದಾಳಿ ನಡೆದಿದೆ. ಅನಂತ್‌ನಾಗ್ ಜಿಲ್ಲೆಯ ಅನಂತ್‌ನಾಗ್-ಕೋಕರ್‌ನಾಗ್ ರಸ್ತೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಉಗ್ರರು ಅವರ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು. ಹುತಾತ್ಮರಾದ ಪೋಲೀಸ್ ಸಿಬ್ಬಂದಿ: ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ…

Read More

IND vs ZIM: ‘ವೈಭವ್ ಮಹಾನ್ ಆಟಗಾರನಾಗುತ್ತಾರೆ’; ಜಿಂಬಾಬ್ವೆ ನಾಯಕ ಸಿಕಂದರ್ ರಝಾ – Kannada News | Sikandar Raza Praises Vaibhav Sooryavanshi: India vs Zimbabwe T20 Star Potential

ಜುಲೈ 23 ರಿಂದ ಹರಾರೆಯಲ್ಲಿ ಪ್ರಾರಂಭವಾಗಲಿರುವ ಭಾರತ ಮತ್ತು ಜಿಂಬಾಬ್ವೆ ನಡುವಿನ ಟಿ 20 ಸರಣಿಗೆ ಮುಂಚಿತವಾಗಿ ಜಿಂಬಾಬ್ವೆ ನಾಯಕ ಸಿಕಂದರ್, 15 ವರ್ಷದ ಭಾರತೀಯ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ ಅವರ ಆಟವನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಸರಿಯಾಗಿ ಪ್ರೋತ್ಸಾಹಿಸಿದರೆ, ವೈಭವ್ ಒಂದು ಪೀಳಿಗೆಯವರೆಗೆ ನೆನಪಿನಲ್ಲಿ ಉಳಿಯುವ ಶ್ರೇಷ್ಠ ಆಟಗಾರನಾಗಿ ಬೆಳೆಯುತ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ(PC-PTI). Source link

Read More

ಭತ್ತದ ಗದ್ದೆಯಲ್ಲಿ ಅರಳಿದ ಅದೃಷ್ಟದ ತಾವರೆ: ಕೃಷಿಯಲ್ಲಿ ಹೊಸ ಕ್ರಾಂತಿ ಮಾಡಿದ ಮನೋಹರ ಶೆಟ್ಟಿ – Kannada News | Commercial Lotus Farming in Udupi: Manohar Shetty’s Organic Success Story and High Income

ಉಡುಪಿ, ಜು.22: ಒಂದು ಕಾಲದಲ್ಲಿ ಭತ್ತದ ಹಸಿರು ಹೊದಿಕೆ ಹೊದ್ದಿದ್ದ ಗದ್ದೆ, ಇಂದು ಗುಲಾಬಿ ಮತ್ತು ಬಿಳಿ ಬಣ್ಣದ ತಾವರೆ ಹೂಗಳಿಂದ ಕಂಗೊಳಿಸುತ್ತಿದೆ. ಬೆಳಗಿನ ಜಾವ ನೀರಿನ ಮೇಲೆ ಅರಳಿದ ನೂರಾರು ತಾವರೆ ಹೂಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿದ್ದರೆ, ಈ ಸಾಹಸಕ್ಕೆ ಕೈಹಾಕಿದ ರೈತನ ಮುಖದಲ್ಲಿನ ಮಂದಹಾಸ ನೂತನ ಯಶಸ್ಸಿನ ಕಥೆಯನ್ನು ಸಾರುತ್ತಿದೆ. ಮಂಡ್ಯ, ಮೈಸೂರು ಹಾಗೂ ರಾಮನಗರ ಭಾಗಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತಿದ್ದ ‘ವಾಣಿಜ್ಯ ತಾವರೆ ಕೃಷಿ’ ಇದೀಗ ಕರಾವಳಿಯ ಕೃಷಿ ನೆಲದಲ್ಲೂ ಹೊಸ ನೆಲೆ…

Read More

ಸುಖ ನಿದ್ರೆಗಾಗಿ ಈ ಗಿಡಮೂಲಿಕೆಗಳು ಸಹಕಾರಿ ಎನ್ನುತ್ತಾರೆ ಡೈಸಿ ಬೋಪಣ್ಣ – Kannada News | Daisy Bopanna’s advice for better sleep

ಇಂದಿನ ಒತ್ತಡದ ಜೀವನ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಣ್ಣು ಮುಚ್ಚಿ ಮಲಗಿದರೂ ತಡ ರಾತ್ರಿಯವರೆಗೂ ನಿದ್ರೆ ಆವರಿಸೋದೇ ಇಲ್ಲ ಎಂದು ದೂರುತ್ತಿರುತ್ತಾರೆ. ಈ ನಿದ್ರೆಯ ಕೊರತೆ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹಾಗಾಗಿ ಸುಖ ನಿದ್ರೆಗಾಗಿ ತಜ್ಞರು ಅನೇಕಾರು ಸಲಹೆಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಗಾಳಿಪಟ ಬೆಡಗಿ ಡೈಸಿ ಬೋಪಣ್ಣ (Daisy Bopanna) ಅವರು ಉತ್ತಮ ನಿದ್ರೆಗಾಗಿ ಒಂದಷ್ಟು ಸಲಹೆಗಳನ್ನು ನೀಡಿದ್ದು, ಈ ಕೆಲವು ಗಿಡಮೂಲಿಕೆಗಳ ಸೇವನೆಯಿಂದ ಮಗುವಿನಂತೆ ಆರಾಮದಾಯಕವಾಗಿ…

Read More

ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ! – Kannada News | How to Identify Hidden Sugar on Food Labels: Expert Advice

ಇತ್ತೀಚಿನ ದಿನಗಳಲ್ಲಿ ಜನ ಶುಗರ್ ತಿನ್ನುವ ಪ್ರಮಾಣವನ್ನು ಬಹಳ ಕಡಿಮೆ ಮಾಡುತ್ತಿದ್ದಾರೆ. ಆದರೆ ನೀವು ಕಣ್ಣಿಗೆ ಕಾಣುವ ಸಕ್ಕರೆಯಿಂದ ದೂರವಿರಬಹುದು ಆದರೆ ಕಣ್ಣಿಗೆ ಕಾಣದ ಸಕ್ಕರೆ ಹೊಟ್ಟೆ ಸೇರುವುದರ ಬಗ್ಗೆ ಯೋಚಿಸಿದ್ದೀರಾ… ಸಾಮಾನ್ಯವಾಗಿ ಸಿಹಿತಿಂಡಿ, ಕ್ಯಾಂಡಿಗಳು ಮತ್ತು ತಂಪು ಪಾನೀಯಗಳನ್ನು ಪ್ರತಿದಿನ ಗಮನಿಸದೆ ಸಾಕಷ್ಟು ಪ್ರಮಾಣದ ಸೇವನೆ ಮಾಡುತ್ತಾರೆ ಇದರಲ್ಲಿರುವ ಹಿಡನ್ ಶುಗರ್ ಅರಿವಿಲ್ಲದಂತೆ ದೇಹಕ್ಕೆ ಪ್ರವೇಶ ಮಾಡುತ್ತದೆ. ಈ ರೀತಿ ಅರಿವಿಲ್ಲದಂತೆ ದಿನನಿತ್ಯ ಸೇವಿಸುವ ಆಹಾರ ಮತ್ತು ಪಾನೀಯಗಳಲ್ಲಿರುವ ಸಕ್ಕರೆ ಪ್ರಮಾಣ ಸಮತೋಲನಯುತ ಆಹಾರ ಪದ್ಧತಿಗೆ…

Read More

IND vs ZIM: ‘ವೈಫಲ್ಯದ ಭಯವಿದ್ದರೆ’; ತಂಡದ ಆಟಗಾರರಿಗೆ ಶ್ರೇಯಸ್ ಕಿವಿಮಾತು – Kannada News | Shreyas Iyer’s India T20 Captaincy: Addressing Winless Streak Ahead of Zimbabwe Series

ಶ್ರೇಯಸ್ ಅಯ್ಯರ್ (Shreyas Iyer) ಭಾರತ ಟಿ20 ತಂಡದ ನಾಯಕನಾದ ಬಳಿಕ ತಂಡ 7 ಪಂದ್ಯಗಳನ್ನಾಡಿದೆ. ಆದರೆ ಈ 7 ಪಂದ್ಯಗಳಲ್ಲೂ ತಂಡಕ್ಕೆ ಒಂದೇ ಒಂದು ಗೆಲುವು ಸಿಕ್ಕಿಲ್ಲ. ಶ್ರೇಯಸ್ ನಾಯಕನಿಗೆ ಮೊದಲಿಗೆ ಐರ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಐರ್ಲೆಂಡ್, ಟೀಂ ಇಂಡಿಯಾಕ್ಕೆ ಮರ್ಮಾಘಾತ ನೀಡಿ ಸರಣಿಯ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತು. ಈ ಆಘಾತದ ಜೊತೆಗೆ ಇಂಗ್ಲೆಂಡ್‌ ಪ್ರವಾಸ ಮಾಡಿದ ಟೀಂ ಇಂಡಿಯಾಕ್ಕೆ ಆಂಗ್ಲರು ಮತ್ತೊಂದು ಹೊಡೆತ ನೀಡಿದರು. ಇದೀಗ ಶ್ರೇಯಸ್ ಅಯ್ಯರ್ ಪಡೆ ಜಿಂಬಾಬ್ವೆ ವಿರುದ್ಧ…

Read More

ಪಿಎಫ್ ಸದಸ್ಯರಿಗೆ ಪೆನ್ಷನ್; ಕನಿಷ್ಠ ಪಿಂಚಣಿಯನ್ನು 3,000 ಅಲ್ಲ, 7,500 ರೂಗೆ ಏರಿಸಬೇಕೆಂದು ಒತ್ತಾಯ; ಸರ್ಕಾರದ ಪ್ರತಿಕ್ರಿಯೆಯೇನು? – Kannada News | Demand for rising EPS minimum pension from Rs 1,000 to Rs 7,500, govt stand as of now

ನವದೆಹಲಿ, ಜುಲೈ 22: ಉದ್ಯೋಗಿಗಳ ಪಿಂಚಣಿ ಯೋಜನೆ (EPS-95) ಅಡಿಯಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಕನಿಷ್ಠ ಮಾಸಿಕ ಪಿಂಚಣಿಯನ್ನು ₹1,000 ರಿಂದ ₹7,500 ಕ್ಕೆ ಏರಿಸಬೇಕು. ಜೊತೆಗೆ ತುಟ್ಟಿಭತ್ಯೆಯನ್ನೂ (DA) ನೀಡಬೇಕು ಎಂದು ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಸರ್ಕಾರ ಕೂಡ ಕನಿಷ್ಠ ಇಪಿಎಸ್ ಪಿಂಚಣಿ ಕುರಿತು ಪ್ರಸ್ತಾಪಗಳು ಬಂದಿರುವುದನ್ನು ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಲಿಖಿತ ಉತ್ತರದಲ್ಲಿ ಈ ವಿಚಾರ…

Read More

‘ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು’: ಬಿಕೆ ಹರಿಪ್ರಸಾದ್ – Kannada News | BJP Started the Egg Throwing Culture; Says BK Hariprasad

ಬೆಂಗಳೂರು, ಜುಲೈ 22: ಕೆಪಿಸಿಸಿ ಕಚೇರಿ ಬಳಿ ಶಾಸಕ ಬಿ.ಪಿ.ಹರೀಶ್​ ಮೇಲೆ ಮೊಟ್ಟೆ ಎಸೆತ ಪ್ರಕರಣ ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್​​ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ‘ಕೆಪಿಸಿಸಿ ಕಚೇರಿ ಬಳಿ ಬಂದಾಗ ಬಿಜೆಪಿಯವರೇ ಮೊಟ್ಟೆ ಹೊಡೆದಿದ್ದಾರೆ. ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೊದಲು ಅವರು ಹೊಡೆದಿದ್ದು, ಆನಂತರ ನಮ್ಮವರು ಹೊಡೆದಿದ್ದಾರೆ. ಬಿಜೆಪಿಯಲ್ಲೇ ರೌಡಿಗಳ ಮೋರ್ಚಾ ಇರೋದು. ಬಿಜೆಪಿ ಕಚೇರಿಗೆ ಪ್ರತಿಭಟನೆಗೆ ಹೋಗಿದ್ವಿ,…

Read More

‘ಕೊನೆಗೂ ಸತ್ಯ ಬಯಲಾಯ್ತು’; 16 ವರ್ಷದ ಬಳಿಕ ಭಾರತಕ್ಕೆ ಮರಳಲು ಲಲಿತ್ ಮೋದಿ ಸಿದ್ಧತೆ – Kannada News | IPL Founder Lalit Modi says he will Return To India Soon FEMA Case

ನವದೆಹಲಿ, ಜುಲೈ 22: ಐಪಿಎಲ್ (IPL) ಸಂಸ್ಥಾಪಕ ಲಲಿತ್ ಮೋದಿ (Lalit Modi) 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಭಾರತಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. 2009ರ ದಕ್ಷಿಣ ಆಫ್ರಿಕಾ ಐಪಿಎಲ್ ಆಯೋಜನೆಗೆ ಸಂಬಂಧಿಸಿದ ಫೆಮಾ (FEMA) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ವಿಧಿಸಿದ್ದ ದಂಡ ಹಾಗೂ ಆರೋಪಗಳನ್ನು ಮೇಲ್ಮನವಿ ಪ್ರಾಧಿಕಾರ ರದ್ದುಗೊಳಿಸಿದ ಬೆನ್ನಲ್ಲೇ ಈ ಪ್ರಮುಖ ಬೆಳವಣಿಗೆ ನಡೆದಿದೆ. ಮೇಲ್ಮನವಿ ಪ್ರಾಧಿಕಾರದ ತೀರ್ಪಿನ ನಂತರ ಹರ್ಷ ವ್ಯಕ್ತಪಡಿಸಿರುವ ಲಲಿತ್ ಮೋದಿ, ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದು, ಕೊನೆಗೂ…

Read More

‘3 ಈಡಿಯಟ್ಸ್’ ಸಿನಿಮಾ ಮರು-ಬಿಡುಗಡೆ ವದಂತಿಗೆ ತೆರೆ ಎಳೆದ ನಿರ್ಮಾಪಕರು – Kannada News | Aamir Khan 3 idiots Re release rumours denied by Vidhu Vinod Chopra films

ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲಿ ಒಂದಾದ ‘3 ಈಡಿಯಟ್ಸ್’ (3 Idiots) ಸಿನಿಮಾ ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ನಿರಾಕರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ವದಂತಿ ಸಂಪೂರ್ಣ ಸುಳ್ಳು ಎಂದು ನಿರ್ಮಾಪಕ ವಿಧು ವಿನೋದ್ ಚೋಪ್ರಾ ಸ್ಪಷ್ಟಪಡಿಸಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 4ರಂದು ಆಮಿರ್ ಖಾನ್ (Aamir Khan) ಅಭಿನಯದ ಈ ಸಿನಿಮಾ ಮರು-ಬಿಡುಗಡೆಯಾಗಲಿದೆ ಎಂಬ ವರದಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ವಿಧು ವಿನೋದ್ ಚೋಪ್ರಾ ಫಿಲ್ಮ್ಸ್ ಸ್ಪಷ್ಟನೆ: ಈ…

Read More