ಸಿಗ್ನಲ್ ಜಂಪ್ ಕೃತಿಗೆ ಕಸಾಪ ದತ್ತಿ ಪ್ರಶಸ್ತಿ – Kannada News | Avva pustakaalaya Anant Kunigal gets Publisher RN Hubbu datti Award 2024 for tv9 creative producer Ravindra Muddi’s Signal Jump book

ಬೆಂಗಳೂರು, (ಫೆಬ್ರವರಿ 02): ಕನ್ನಡ ಟಿವಿ9 ಕ್ರಿಯೇಟಿವ್ ಪ್ರೊಡ್ಯೂಸರ್ ರವೀಂದ್ರ ಮುದ್ದಿ ಅವರ ಸಿಗ್ನಲ್ ಜಂಪ್ (Signal Jump) ಕಥಾ ಸಂಕಲನ ಪ್ರಕಟಿಸಿದ್ದ ಅವ್ವ ಪುಸ್ತಕಾಲಯದ ಅನಂತ ಕುಣಿಗಲ್ ಅವರಿಗೆ 2024ನೇ ಸಾಲಿನ ಪ್ರಕಾಶಕ ಆರ್. ಎನ್. ಹಬ್ಬು ದತ್ತಿ ಪ್ರಶಸ್ತಿ ಲಭಿಸಿದೆ. 2024ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟಗೊಂಡ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ. ವಿವಿಧ ಪ್ರಕಾರದ ಸಾಹಿತ್ಯದ ಪ್ರಶಸ್ತಿಗಾಗಿ ಸುಮಾರು 900 ಕೃತಿಗಳಲ್ಲಿ ಬಂದಿದ್ದವು. ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿಯು ಪ್ರಕಾಶಕರಿಗೆ ನೀಡುವ ದತ್ತಿ ಪ್ರಶಸ್ತಿಗಾಗಿ ಸಿಗ್ನಲ್ ಜಂಪ್ ಕೃತಿ ಆಯ್ಕೆ ಮಾಡಿದೆ

ರವೀಂದ್ರ ಮುದ್ದಿ ಅವರು ಬರೆದ ವಿಭಿನ್ನ ಹಾಗೂ ಹೊಸತನ ಹೊಂದಿದ ಒಟ್ಟು ಕಥೆಗಳು ಸಿಗ್ನಲ್ ಜಂಪ್ ಕೃತಿಯಲ್ಲಿದ್ದು ಹಲವಾರು ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಈ ಕೃತಿಯ ಮೂಲಕ ಅವ್ವ ಪುಸ್ತಕಾಲಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿ ಸಿಕ್ಕಿದೆ.

2024ರ ಜನವರಿ 1ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು, ಪ್ರಕಾಶಕರಿಂದ ದತ್ತಿ ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. ಈ ಪ್ರಶಸ್ತಿಗಳಿಗೆ 900 ಕೃತಿಗಳು ಬಂದಿದ್ದವು. ಸಾಹಿತಿ ಕೆ ಮರುಳುಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿ ಸಾಹಿತಿದ ವಿವಿಧ ಪ್ರಕಾರಳಲ್ಲಿ ಕೃತಿಗಳನ್ನು ಆಯ್ಕೆ ಮಾಡಿದೆ.

ಸಿಗ್ನಲ್ ಜಂಪ್’ ನಲ್ಲಿ ನಾಡಿನ ಹತ್ತು ಬರಹಗಾರರು

ರವೀಂದ್ರ ಮುದ್ದಿ ಅವರು ಬರೆದ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಒಟ್ಟು ವಿಭಿನ್ನ ಹತ್ತು ಕಥೆಗಳಿವೆ. ನಾಡಿನ ಹತ್ತು ಪ್ರಮುಖ ಬರಹಗಾರರು ಇಲ್ಲಿನ ಒಂದೊಂದು ಕಥೆಯನ್ನು ಒಬ್ಬೊಬ್ಬರು ಓದಿ ಆ ಕಥೆಯ ಬಗ್ಗೆ ಅವಲೋಕನ ಮಾಡಿದ್ದಾರೆ. ವಿಶೇಷ ಅಂದರೆ ಆ ಹತ್ತು ಬರಹಗಾರರು ಬರೆದ ಕಥೆಗಳ ಬಗೆಗಿನ ಅನಿಸಿಕೆ ಕೂಡಾ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಅಚ್ಚಾಗಿವೆ.

ಕನ್ನಡ ಟಿವಿ9 ಕ್ರಿಯೇಟಿವ್ ಪ್ರೊಡ್ಯೂಸರ್ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನ ಕಳೆದ ಅಂದರೆ 2025ರ ಜುಲೈ 14ರಂದು ಅವ್ವ ಪುಸ್ತಕಾಲಯದಿಂದ ಬಿಡುಗಡೆಯಾಗಿತ್ತು. ಬಳಿಕ ಈ ಪುಸ್ತಕ ಸಾಕಷ್ಟು ಓದಗರ ಗಮನಸೆಳೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:46 pm, Mon, 2 February 26

Source link

Lakkundi Excavation: ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಜ್ಜು

ಗದಗ, ಫೆಬ್ರುವರಿ 02: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವು ತನ್ನ ಅಪಾರ ಪುರಾತತ್ವ ಸಂಪತ್ತಿನಿಂದಾಗಿ ಪ್ರಾಮುಖ್ಯತೆ ಗಳಿಸಿದೆ. ಇತ್ತೀಚೆಗೆ ನಡೆದ ಚಿನ್ನದ ನಿಧಿ ಶೋಧವು ಈ ಪ್ರದೇಶದ ಬಗ್ಗೆ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಡೆಕ್ಕನ್ ಹೆರಿಟೇಜ್ ಫೌಂಡೇಶನ್ (ಡಿಎಚ್‌ಎಫ್) ಲಕ್ಕುಂಡಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರದ ಸಹಯೋಗದೊಂದಿಗೆ ಲಕ್ಕುಂಡಿಯಲ್ಲಿ ಬಯಲು ಪ್ರಾಚ್ಯವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲು ಫೌಂಡೇಶನ್ ಸಿದ್ಧತೆ ನಡೆಸುತ್ತಿದೆ.

ಸಿದ್ದರಾಮಯ್ಯ ಸೇರಿದಂತೆ ಮುಖ್ಯಮಂತ್ರಿಗಳು ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಫೌಂಡೇಶನ್‌ನ ಮುಖ್ಯಸ್ಥೆ ಡಾ. ಹೆಲೆನ್ ನೇತೃತ್ವದ ತಂಡ ಲಕ್ಕುಂಡಿ, ಡಂಬಳ ಮತ್ತು ಗದಗ ಪ್ರದೇಶಗಳ ಕುರಿತು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹೊಸ ಕೈಪಿಡಿಯನ್ನು ಮಾರ್ಚ್ 15 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕೈಪಿಡಿಯಲ್ಲಿ ಕರ್ನಾಟಕದ ಶಿಲ್ಪಕಲೆಗಳು, ವೀರಗಲ್ಲುಗಳು, ನಾಣ್ಯಗಳು ಮತ್ತು ಇತರ ಪ್ರಾಚೀನ ಅವಶೇಷಗಳ ವಿವರಗಳು ಸೇರಿವೆ ಎಂದು ಹೆಲೆನ್ ಹೇಳಿದ್ದಾರೆ.

 

Source link

ಭಾರತದ ಪ್ರಗತಿಗೆ ಪೂರಕವಾಗಿದೆ ಈ ಬಜೆಟ್: ಅಪೋಲೋ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ. ಪ್ರತಾಪ್ ಸಿ. ರೆಡ್ಡಿ – Kannada News | Budget 2026 sends reassuring message about India’s growth: Chairman & Apollo Hospitals founder Dr PC Reddy

ಡಾ. ಪ್ರತಾಪ್ ಸಿ ರೆಡ್ಡಿ

ನವದೆಹಲಿ, ಫೆಬ್ರುವರಿ 2: ಈ ಬಾರಿಯ ಕೇಂದ್ರ ಬಜೆಟ್ (Union Budget) ಬಗ್ಗೆ ಹೆಲ್ತ್​ಕೇರ್ ಉದ್ಯಮ ಸಮಾಧಾನಪಟ್ಟಿದೆ. ದೇಶದ ಆರೋಗ್ಯ ವ್ಯವಸ್ಥೆಗೆ ಪುಷ್ಟಿ ಕೊಡಲು ಬಜೆಟ್​ನಲ್ಲಿ ತೆಗೆದುಕೊಳ್ಳಲಾದ ಕ್ರಮಗಳನ್ನು ಈ ಉದ್ಯಮದ ನಾಯಕರು ಸ್ವಾಗತಿಸಿದ್ದಾರೆ. ಹೆಚ್ಚು ಜನರಿಗೆ ಚಿಕಿತ್ಸಾ ವ್ಯವಸ್ಥೆ ಮುಟ್ಟಲು ಅನುವು ಮಾಡಿಕೊಂಡುವಂತಹ ಕ್ರಮಗಳನ್ನು ಬಜೆಟ್​ನಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದು ಇವರ ಅನಿಸಿಕೆ. ಅಪೋಲೋ ಹಾಸ್ಪಿಟಲ್ಸ್​ನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರತಾಪ್ ಸಿ ರೆಡ್ಡಿ (Dr Pratap C Reddy) ಅವರು ಸಕಾರಾತ್ಮಕ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ಧಾರೆ. ವಿಕಸಿತ ಭಾರತದ ಆಶಯದಂತೆ ಆರೋಗ್ಯಕರ ಜನರ ನಿರ್ಮಾಣಕ್ಕೆ ಪುಷ್ಟಿ ಕೊಡುತ್ತದೆ ಈ ಬಜೆಟ್. ಪಬ್ಲಿಕ್ ಹೆಲ್ತ್ ಕೆಪಾಸಿಟಿ, ವೈದ್ಯಕೀಯ ಶಿಕ್ಷಣ, ನಾವೀನ್ಯತೆ ಮತ್ತು ಅಗ್ಗದ ಚಿಕಿತ್ಸೆ ಲಭ್ಯವಾಗುವತ್ತ ಈ ಬಜೆಟ್ ಒತ್ತು ಕೊಡುತ್ತದೆ ಎಂದು ಡಾ. ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಪ್ರಗತಿಯು ಆರೋಗ್ಯಕರ ಜನರು ಹಾಗೂ ಪ್ರಬಲ ಆರೋಗ್ಯ ವ್ಯವಸ್ಥೆಯ ಜೊತೆಗೆ ಭಾರತದ ಪ್ರಗತಿಯು ಇರುತ್ತದೆ ಎನ್ನುವ ಭರವಸೆಯನ್ನು 2026-27ರ ಬಜೆಟ್​ನಲ್ಲಿ ನೀಡಲಾಗಿದೆ. ಪಬ್ಲಿಕ್ ಹೆಲ್ತ್ ಕೆಪಾಸಿಟಿಯನ್ನು ಹೆಚ್ಚಿಸುವುದು, ರೋಗ ನಿಯಂತ್ರಣ ಕಾರ್ಯವನ್ನು ಬಲಪಡಿಸುವುದು, ಎರಡನೇ ಮತ್ತು ಮೂರನೇ ಸ್ತರದ ಪ್ರದೇಶಗಳಲ್ಲಿ ಹೆಲ್ತ್ ಸಿಸ್ಟಂಗಳು ಮತ್ತಷ್ಟು ತಲುಪುವುದು ಇವುಗಳತ್ತ ಗಮನ ಇಡಲಾಗಿದೆ’ ಎಂದು ಅಪೋಲೋ ಹಾಸ್ಪಿಟಲ್ಸ್​ನ ಛೇರ್ಮನ್ ಹೇಳಿದ್ದಾರೆ.

ಇದನ್ನೂ ಓದಿ: ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್​ಡಿ ಸಮಾವೇಶದಲ್ಲಿ ಘೋಷಣೆ

‘ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಬಲಪಡಿಸುವುದು, 1,000 ಅನುಮೋದಿತ ಕ್ಲಿನಿಕಲ್ ಟ್ರಯಲ್ ಸೈಟ್​ಳ ಜಾಲ ನಿರ್ಮಿಸುವುದೂ ಒಳಗೊಂಡಂತೆ ಬಯೋಫಾರ್ಮಾ ಶಕ್ತಿ ಯೋಜನೆ ಮೂಲಕ ಜೀವ ವಿಜ್ಞಾನಗಳು (ಲೈಫ್ ಸೈನ್ಸಸ್) ಮತ್ತು ಇನ್ನೋವೇಶನ್ ಇಕೋಸಿಸ್ಟಂ ಅನ್ನು ಈ ಬಜೆಟ್​ನಲ್ಲಿ ಬಲಪಡಿಸಲಾಗುತ್ತಿರುವುದು ಸ್ವಾಗತಾರ್ಹ. ಈ ಕ್ರಮಗಳು ಸುಧಾರಿತ ಥೆರಪಿಗಳ ಅಭಿವೃದ್ಧಿಯ ವೇಗ ಹೆಚ್ಚಿಸುತ್ತವೆ. ಹೆಲ್ತ್​ಕೇರ್ ಮತ್ತು ಲೈಫ್ ಸೈನ್ಸ್​ ಕ್ಷೇತ್ರದಲ್ಲಿ ಭಾರತದ ಮೇಲೆ ಜಾಗತಿಕ ವಿಶ್ವಾಸ ಹೆಚ್ಚಿಸುತ್ತವೆ’ ಎಂದು ಡಾ. ಪ್ರತಾಪ್ ಸಿ. ರೆಡ್ಡಿ ಹೇಳಿದ್ದಾರೆ.

‘ಜನರತ್ತ ಗಮನ ನೆಟ್ಟಿರುವುದು ಬಹಳ ಖುಷಿಯ ಸಂಗತಿ. ಮುಂಬರುವ ವರ್ಷದಲ್ಲಿ 10,000 ಮೆಡಿಲ್ ಸೀಟ್​ಗಳನ್ನು ಸೇರಿಸುವದು, ಒಂದೂವರೆ ಲಕ್ಷ ಕೇರ್​ಗಿವರ್​ಗಳಿಗೆ (ಆರೋಗ್ಯ ಕಾಳಜಿ ಸಹಾಯಕ) ತರಬೇತಿ ಕೊಡುವುದು, ಸಂಬಂಧಿತ ಆರೋಗ್ಯ ವಿಭಾಗಗಳನ್ನು ಬಲಪಡಿಸುವುದು, ಇವುಗಳಿಂದ ಪ್ರಧಾನಿಗಳ ಹೀಲ್ ಇನ್ ಇಂಡಿಯಾ, ಹೀಲ್ ಬೈ ಇಂಡಿಯಾ ಆಶಯ ಮತ್ತಷ್ಟು ಬಲಗೊಳ್ಳುತ್ತದೆ’ ಎಂದು ಅಪೋಲೋ ಹಾಸ್ಪಿಟಲ್ಸ್​ನ ಛೇರ್ಮನ್ ತಿಳಿಸಿದ್ದಾರೆ.

‘ನಿಮ್ಹಾನ್ಸ್-2 ಸ್ಥಾಪಿಸುವುದು, ರಾಂಚಿ ಮತ್ತು ತೇಜ್​ಪುರ್​ನಲ್ಲಿರುವ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಬಲಪಡಿಸುವುದು, ಜಿಲ್ಲಾಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಮತ್ತು ಟ್ರೌಮಾ ಕೇರ್ ಸಾಮರ್ಥ್ಯವನ್ನು ಶೇ. 50ರಷ್ಟು ಹೆಚ್ಚಿಸುವುದು, ಇತ್ಯಾದಿ ಕ್ರಮಗಳನ್ನು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಮಾನಸಿಕ ಆರೋಗ್ಯ ಮತ್ತು ಟ್ರೌಮಾ ಕೇರ್ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇರುವುದನ್ನು ನಾವು ಪ್ರಶಂಸಿಸುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ: ಜೀವ ರಕ್ಷಕ ಔಷಧಿಗಳ ದರ ಇಳಿಕೆ, 3 ಹೊಸ ಏಮ್ಸ್ ಆಸ್ಪತ್ರೆ: ಬಜೆಟ್​​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಕೊಡುಗೆ

36 ಜೀವರಕ್ಷಕ ಔಷಧಿಗಳಿಗೆಗೆ ಸುಂಕ ತೆಗೆದುಹಾಕಿರುವುದೂ ಸೇರಿದಂತೆ ಔಷಧಗಳು ಅಗ್ಗದ ಬೆಲೆಗೆ ಲಭ್ಯವಾಗುವಂತೆ ಕ್ರಮ ತೆಗೆದುಕೊಂಡಿರುವುದರಿಂದ ರೋಗಿಗಳಿಗೆ ಹಣದ ಹೊರೆ ಕಡಿಮೆ ಆಗಬಲ್ಲುದು ಎಂದು ಡಾ. ಪ್ರತಾಪ್ ಸಿ ರೆಡ್ಡಿ ಹೇಳಿದ್ದಾರೆ.

‘ಈ ಆದ್ಯತೆಗಳು ಪ್ರತಿಯೊಬ್ಬ ಭಾರತೀಯನ ಆರೋಗ್ಯದ ಮೇಲೆ ಪರಿಣಾಮ ಬೀರಲಾಗುವಂತೆ ಸರ್ಕಾರ ಹಾಗೂ ಎಲ್ಲಾ ಭಾಗಿದಾರರ ಜೊತೆ ನಿಕವಾಗಿ ಕೆಲಸ ಮಾಡಲು ಅಪೋಲೋ ಹಾಸ್ಪಿಟಲ್ಸ್ ಬದ್ಧವಾಗಿರುತ್ತದೆ’ ಎಂದೂ ಈ ಸಂಸ್ಥೆಯ ಸಂಸ್ಥಾಪಕರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಾವನ ಮಗನ ಜೊತೆ ನಿಶ್ಚಿತಾರ್ಥ, ಚಾಲಕನ ಜೊತೆ ಓಡಿಹೋಗಿ ಮದುವೆಯಾದ ಯುವತಿ: ಆಮೇಲಾಯ್ತು ಸಿನಿಮೀಯ ಟ್ವಿಸ್ಟ್! – Kannada News | Tumakuru Love Twist: Engaged to Cousin, Woman Elopes With Family Driver, Police Mediation Ends Case

ತುಮಕೂರು, ಫೆಬ್ರವರಿ 2: ಅದೊಂದು ರೀತಿಯ ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ. ಆಕೆ ಶ್ರೀಮಂತರ ಮಗಳು. ಆರ್ಥಿಕವಾಗಿ ಚೆನ್ನಾಗಿದ್ದ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿತ್ತು. ಮಗಳು ಚೆನ್ನಾಗಿ ಓದದಿದ್ದರೂ ಸಹ ಮಾವನ ಮಗನ ಜೊತೆ ಮದುವೆ ಮಾಡುವ ಯೋಚನೆಯಲ್ಲಿ ಮನೆಯವರಿದ್ದರು. ಅದರಂತೆ ಸಂಬಂಧಿಕರಿಗೆಲ್ಲಾ ಕಾರ್ಡ್ ಹಂಚಿ ಚೌಲ್ಟ್ರಿ, ಊಟ, ಡೆಕೊರೇಷನ್ ಎಂದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಹೀಗೆ ಮದುವೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಯುವತಿ ಶಾಕ್ ನೀಡಿದ್ದು, ಮನೆಯ ವಾಹನ ಚಾಲಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಾಳೆ! ಅಷ್ಟೇ ಅಲ್ಲದೇ, ಕುಟುಂಬದವರ ವಿರುದ್ಧವೇ ಬೆದರಿಕೆ ಆರೋಪ ಮಾಡಿದ್ದಾಳೆ.

ತುಮಕೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತುಮಕೂರು ನಗರ ನಿವಾಸಿ ಹಾಗೂ ಉದ್ಯಮಿಯೊಬ್ಬರ ಮಗಳಿಗೆ ತನ್ನದೇ ಮನೆಗೆ ಪಾರ್ಟ್ ಟೈಂ ಚಾಲಕನಾಗಿ ಬರುತಿದ್ದ ರವೀಶ ಎಂಬಾತನ ಜೊತೆ ಪ್ರೇಮಾಂಕುರವಾಗಿದೆ. ಈ ವಿಚಾರ ಆಕೆಯ ಅಣ್ಣನಿಗೆ ತಿಳಿದು ಎಚ್ಚರಿಕೆ ಸಹ ನೀಡಿದ್ದರು. ಇದಾದ ಬಳಿಕ ಈ ಹಿಂದೆ ಕೊಟ್ಟ ಮಾತಿನಂತೆ ಮಾವನ ಮಗನ ಜೊತೆ ಆಕೆಯ ಮದುವೆಗೆ ಕುಟುಂಬ ನಿಶ್ಚಯಿಸಿ ನಿಶ್ಚಿತಾರ್ಥ ಸಹ ಮುಗಿಸಿದೆ. ಇದಾದ ಬಳಿಕ, ಮದುವೆಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಜನವರಿ 19ರಂದು ಯವತಿ ಮನೆಯ ರವೀಶ ಜೊತೆ ಓಡಿಹೊಗಿದ್ದಾಳೆ. ಚಿಕ್ಕನಾಯಕನಹಳ್ಳಿಯಲ್ಲಿ ಮದುವೆಯಾಗಿದ್ದಾಳೆ. ಇತ್ತ ಮಗಳು ಕಾಣದ ಹಿನ್ನಲೆ ಕಾಣೆಯಾದ ಬಗ್ಗೆ ನಗರ ಠಾಣೆಗೆ ದೂರು ನೀಡಿದ ಕುಟುಂಬಕ್ಕೆ ಶಾಕ್ ಆಗಿದೆ. ಅತ್ತ ಯುವತಿಯೇ, ‘ಕುಟುಂಬದವರಿಂದ ಬೆದರಿಕೆ ಇದೆ, ನನಗೆ ಭದ್ರತೆ ಬೇಕು’ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.

ಆಮೇಲೇನಾಯ್ತು?

ಯುವತಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆಕೆಯ ಸಹೋದರ, ಅವಳ ಇಚ್ಛೆಗೆ ವಿರುದ್ಧವಾಗಿ ನಾವು ಮದುವೆ ನಿಶ್ಚಯಿಸಿರಲಿಲ್ಲ. ಮನೆ ಮಗಳು ಕಾಣೆಯಾಗಿದ್ದಾಳೆಂದು ನಾವು ಠಾಣೆಗೆ ಬಂದಿದ್ದೇವೆ ಹೊರತು ಅವರಲ್ಲ. ಆಕೆಯ ಒಪ್ಪಿಗೆಯಂತೆ ಚಿನ್ನಾಭರಣ ಖರೀದಿ, ಸೀರೆ, ಮದುವೆ ಕಾರ್ಡ್​​​ಗಳನ್ನು ಮಾಡಿದ್ದೆವು. ಆಕೆಯ ತಾಯಿ ಆರೋಗ್ಯದ ಸಮಸ್ಯೆ ನಡುವೆ ಮದುವೆ ಮಾಡಲು ಓಡಾಡುತಿದ್ದರು. ಮದುವೆ ಇಷ್ಟ ಇಲ್ಲ ಎಂದು ನಮಗೆ ಹೇಳಬಹುದಿತ್ತು. ಅದರ ಬದಲು ಈ ರೀತಿ ಮಾಡಿರುವುದು ನಮಗೆ ಆಘಾತ ಉಂಟುಮಾಡಿದೆ ಎಂದಿದ್ದಾರೆ.

ಪೊಲೀಸರ ಮಧ್ಯಸ್ಥಿಕೆಯಲ್ಲೇ ರಾಜಿ ಸಂಧಾನ!

ಯುವತಿ ಕಾಣೆಯಾದ ಬಗ್ಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಪ್ರೇಮಿಗಳು ಮದುವೆಯಾಗಿರುವ ವಿಚಾರ ತಿಳಿದುಬಂತು. ಯುವತಿ ಕುಟುಂಬಸ್ಥರಿಂದ ಬೆದರಿಕೆ ಆರೋಪ ಸಹ ಮಾಡಿದ್ದರಿಂದ ಪೊಲೀಸರ ಮಧ್ಯಸ್ಥಿಕೆಯಲ್ಲೇ ರಾಜಿ ಸಂಧಾನ ನಡೆದು, ಎರಡೂ ಕಡೆಯ ಕುಟುಂಬದ ಒಪ್ಪಿಗೆ ಹಾಗೂ ಖುಲಾಸೆ ಪತ್ರಕ್ಕೆ ಸಹಿ ಹಾಕಿ ಪ್ರಕರಣಕ್ಕೆ ತೆರೆ ಎಳೆಯಲಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:55 pm, Mon, 2 February 26

Source link

Video: ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಸೆರೆಹಿಡಿದ ತಂದೆ, ವೈರಲ್‌ ಆಯ್ತು ದೃಶ್ಯ – Kannada News | Father records video of daughter dancing on stage with keypad mobile phone

ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಮತ್ತೊಂದಿಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಗಣರಾಜ್ಯೋತ್ಸವ ದಿನ ತನ್ನ ಮಗಳು ಸ್ಟೇಜ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಇತ್ತ ತಂದೆ ಕೀಪ್ಯಾಡ್ ಫೋನ್‌ನಲ್ಲಿ ರೆಕಾರ್ಡ್ ಮಾಡಲು ನಿಂತುಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಜಿತೇಂದರ್ ಸರಸ್ವತ್ (Jitendar Sarswat) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾಳೆ. ಮಕ್ಕಳ ಗುಂಪಿನ ನಡುವೆ ನಿಂತಿರುವ ವ್ಯಕ್ತಿಯೂ ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬಳಿ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಮಗಳ ಡ್ಯಾನ್ಸ್ ಅನ್ನು ಸೆರೆ ಹಿಡಿಯಬೇಕೆನ್ನುವ ತಂದೆಯ ಪ್ರಯತ್ನವು ಈ ವಿಡಿಯೋದಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೆಟ್ಟ ಅಭ್ಯಾಸಗಳಿಗೆ ಅಪ್ಪನ ಹಣವೆಲ್ಲಾ ಖರ್ಚು ಮಾಡಿ, ತಂದೆಯನ್ನೇ ನಿರ್ದಯಿಯಾಗಿ ಥಳಿಸಿದ ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಗಳ ಖುಷಿಯಲ್ಲಿ ಅಡಗಿದೆ ತಂದೆಯ ನಗು ಎಂದಿದ್ದಾರೆ. ಇನ್ನೊಬ್ಬರು, ಇರುವುದರಲ್ಲಿ ಖುಷಿ ಕಾಣುವುದು ಅಂದ್ರೆ ಇದೇನೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಂದೆಗೆ ಮಗಳೇ ಪ್ರಪಂಚವಾಗಿರುತ್ತಾಳೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ – Kannada News | Geological Survey of India Conducts Aerial Search for Gold in Gudibande KGF Hills, Chikkaballapura

ಚಿಕ್ಕಬಳ್ಳಾಪುರ, ಫೆಬ್ರವರಿ 2: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿನ್ನ ಹಾಗೂ ನಿಧಿ ನಿಕ್ಷೇಪಗಳ ಶೋಧ ಕಾರ್ಯ ತೀವ್ರಗೊಂಡಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು (GSI) ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದೆ. ಕೆಜಿಎಫ್ ಗೋಲ್ಡ್ ಮೈನಿಂಗ್ ಬೆಟ್ಟದ ಸಾಲಿನಲ್ಲಿ ಇರುವ ಈ ಪ್ರದೇಶದಲ್ಲಿ ತಜ್ಞರು ಚಿನ್ನದ ಲಭ್ಯತೆಯನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿದ್ದಾರೆ. ಈ ಹಿಂದೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಮಣ್ಣಿನಲ್ಲಿ ಚಿನ್ನದ ಕಣಗಳು ಪತ್ತೆಯಾಗಿದ್ದವು. ನಿರ್ದಿಷ್ಟವಾಗಿ ಹೇಳುವುದಾದರೆ, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನ ರೈತರ ಜಮೀನುಗಳಲ್ಲಿ ಬಂಗಾರದ ಕಣಗಳು ಸಿಕ್ಕಿರುವುದು ದೃಢಪಟ್ಟಿತ್ತು.

ಹೆಲಿಕಾಪ್ಟರ್ ಬಳಸಿ ನಡೆಸುತ್ತಿರುವ ಈ ವೈಮಾನಿಕ ಸರ್ವೇ ಕಾರ್ಯವು ಪ್ರದೇಶದಲ್ಲಿ ಅಡಗಿರುವ ಚಿನ್ನ ಮತ್ತು ಇತರ ನಿಧಿ ನಿಕ್ಷೇಪಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿಯಾಗಲಿದೆ. ಈ ಸಮೀಕ್ಷೆಯ ಫಲಿತಾಂಶಗಳು ಭವಿಷ್ಯದ ಗಣಿಗಾರಿಕೆ ಚಟುವಟಿಕೆಗಳಿಗೆ ಪ್ರಮುಖ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ. ಈ ಮೂಲಕ ಈ ಐತಿಹಾಸಿಕ ಚಿನ್ನದ ಗಣಿಗಾರಿಕೆ ಪ್ರದೇಶದಲ್ಲಿ ಹೊಸ ಚಿನ್ನದ ನಿಕ್ಷೇಪಗಳು ಪತ್ತೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VIDEO: ಕೋಪ-ತಾಪ… ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ – Kannada News | Vaibhav suryavanshi sledges pakistan player

ಅಂಡರ್-19 ವಿಶ್ವಕಪ್​ನ 12ನೇ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ ಕಲೆಹಾಕಿದ್ದು 252 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 35 ಓವರ್​ಗಳಲ್ಲಿ 168 ರನ್ ಕಲೆಹಾಕಿದ್ದರು.

ಇದರ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಅದರಲ್ಲೂ ವಿಹಾನ್ ಮಲ್ಹೋತ್ರ ಎಸೆದ 37ನೇ ಓವರ್​ನ ಕೊನೆಯ ಎಸೆತದಲ್ಲಿ ಅಲಿ ಹಸನ್ ಬಲೂಚ್ ವಿಕೆಟ್ ಒಪ್ಪಿಸಿದ್ದರು. ಅತ್ತ ಅಲಿ ಹಸನ್ ಔಟಾಗುತ್ತಿದ್ದಂತೆ ವೈಭವ್ ಸೂರ್ಯವಂಶಿ ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದಿದ್ದಾರೆ.

ಅಲಿ ಹಸನ್ ಬಲೂಚ್​ನನ್ನು ಗುರಿಯಾಗಿಸಿ ವಾಗ್ದಾಳಿ ಆರಂಭಿಸಿದ್ದ ವೈಭವ್​ನನ್ನು ಸಹ ಆಟಗಾರರು ಬಂದು ತಡೆದಿದ್ದಾರೆ. ಈ ಮೂಲಕ ಇಬ್ಬರ ನಡುವಣ ವಾಕ್ಸಮರವನ್ನು ತಡೆದಿದ್ದಾರೆ. ಇದೀಗ ವೈಭವ್ ಸೂರ್ಯವಂಶಿಯ ಕೋಪ-ತಾಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 253 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ 46.2 ಓವರ್​ಗಳಲ್ಲಿ 194 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ 58 ರನ್​ಗಳ ಜಯದೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಪ್ರವೇಶಿಸಿದೆ.

 

Source link

ನೂರು ಮೊಮೊ ಅಂಗಡಿಗಳನ್ನು ಕೊಳ್ಳಬಹುದಿತ್ತು, ಮೊಮೊ ತಿನ್ನುವ ಆಸೆಗೆ ಬಾಲಕ ಮಾಡಿದ್ದೇನು ನೋಡಿ – Kannada News | UP Teen Hands Over Family Jewellery to Momo Vendor, Case Raises Eyebrows

ಸಾಮಾನ್ಯವಾಗಿ ಮಕ್ಕಳಿಗೆ ಬೇಕರಿ ತಿನಿಸುಗಳು, ಪಾನಿಪುರಿ, ಮೊಮೊ, ಸಿಹಿ ತಿನಿಸುಗಳೆಂದರೆ ಇಷ್ಟ. ಒಂದೊಮ್ಮೆ ಮನೆಯಲ್ಲಿ ಹಣ ಕೊಟ್ಟಿಲ್ಲವೆಂದರೆ ಅಲ್ಲೇ ಅಪ್ಪನ ಜೇಬಿನಲ್ಲಿದ್ದ ಐದೋ ಹತ್ತೋ ರೂಪಾಯಿ ಕದ್ದು ತಮಗಿಷ್ಟದ ತಿನಿಸನ್ನು ತಿನ್ನುವುದು ಸರ್ವೇ ಸಾಮಾನ್ಯ. ಆದರೆ ಮೊಮೊ ತಿನ್ನಲು ಬಾಲಕನೊಬ್ಬ ಮನೆಯಲ್ಲಿರುವ 85 ಲಕ್ಷ ರೂ. ಬೆಲೆ ಬಾಳುವ ಆಭರಣ(Jewellery)ವನ್ನೇ ಕೊಟ್ಟಿರುವ ವಿಚಿತ್ರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ, 7ನೇ ತರಗತಿ ಬಾಲಕ ಮೊಮೊ ತಿನ್ನುವ ಪ್ರೀತಿ ಅನಿರೀಕ್ಷಿತ ಮತ್ತು ಆಘಾತಕಾರಿ ತಿರುವು ಪಡೆದುಕೊಂಡಿತ್ತು. ಮನೆಯ ಹತ್ತಿರ ಮೊಮೊ ಅಂಗಡಿ ನಡೆಸುತ್ತಿದ್ದ ಮೂವರು ಬಾಲಕನಿಗೆ ಉಚಿತವಾಗಿ ಮೊಮೊ ಕೊಡುವ ಆಮಿಷವೊಡ್ಡಿ ಆತನಿಂದ ಮನೆಯಿಂದ ಒಂದೊಂದೇ ಆಭರಣವನ್ನು ತರಿಸಿಕೊಂಡಿದ್ದಾರೆ.

ಈ ಪ್ರಕರಣ ಉತ್ತರ ಪ್ರದೇಶದ ಡಿಯೋರಿಯಾ ನಗರದಲ್ಲಿ ನಡೆದಿದೆ. ದೂರಿನ ಪ್ರಕಾರ, ವಾರಾಣಸಿಯ ದೇವಾಲಯದ ಅರ್ಚಕ ವಿಮ್ಲೇಶ್ ಮಿಶ್ರಾ, ತಮ್ಮ ಮಗನಿಗೆ ಮೊಮೊ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಮೊಮೊ ಅಂಗಡಿ ನಡೆಸುವ ಮೂವರು ವ್ಯಕ್ತಿಗಳು ಇದನ್ನು ಬಳಸಿಕೊಂಡು ಹುಡುಗನನ್ನು ಮೋಸಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂಗಡಿಯ ಮಾಲೀಕರು ತಮ್ಮ ಮಗನಿಗೆ ಮನೆಯಿಂದ ಆಭರಣ ತಂದರೆ ಉಚಿತವಾಗಿ ಮೊಮೊ ನೀಡುವುದಾಗಿ ಹೇಳಿದ್ದರು ಎಂದು ವಿಮ್ಲೇಶ್ ಆರೋಪಿಸಿದ್ದಾರೆ. ನಿಧಾನವಾಗಿ, ಹುಡುಗ ತನ್ನ ಮನೆಯಿಂದ ಆಭರಣಗಳನ್ನು ತೆಗೆದುಕೊಂಡು ಎಲ್ಲವನ್ನೂ ಮೂವರಿಗೆ ಒಪ್ಪಿಸಿದ್ದ. ವಿಮಲೇಶ್ ಅವರ ಸಹೋದರಿ ಅವರ ಮನೆಗೆ ಭೇಟಿ ನೀಡಿ ಅವರ ಆಭರಣಗಳನ್ನು ಕೇಳಿದಾಗ ಸತ್ಯ ಹೊರಬಂದಿತ್ತು.

ಮತ್ತಷ್ಟು ಓದಿ: ಬೆಂಗಳೂರಲ್ಲಿ ಮನೆಗೆಲಸದವರಿಂದಲೇ ಬಿಲ್ಡರ್​​ ಮನೆಗೆ ಕನ್ನ: ದೋಚಿದ್ದು 18 ಕೋಟಿ ಮೌಲ್ಯದ ಸಂಪತ್ತು!

ಕುಟುಂಬವು ಕಪಾಟು ತೆರೆದ ತಕ್ಷಣ, ಎಲ್ಲವೂ ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾಯಿತು. ಅವರು ಬಾಲಕನನ್ನು ವಿಚಾರಿಸಿದಾಗ, ಅವನು ಆಭರಣಗಳನ್ನು ಮೊಮೊ ಮಾರಾಟಗಾರರಿಗೆ ನೀಡಿದ್ದೇನೆ ಎಂದು ಹೇಳಿದ್ದಾನೆ, ಆದ್ದರಿಂದ ತಾನು ನಿತ್ಯವೂ ಉಚಿತವಾಗಿ ಮೋಮೋ ತಿನ್ನಬಹುದು ಎಂದಿದ್ದಾನೆ.
ನಂತರ ವಿಮಲೇಶ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿ, ಮೂವರು ಆರೋಪಿಗಳ ಹೆಸರನ್ನು ಕೊಟ್ಟಿದ್ದಾರೆ. ಆಭರಣದ ಪ್ರಸ್ತುತ ಮೌಲ್ಯ 85 ಲಕ್ಷ ರೂ. ಎಂದು ಅವರು ಹೇಳಿದ್ದಾರೆ. ದೂರಿನ ನಂತರ, ಪೊಲೀಸರು ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಂದ್ಯ ಬಹಿಷ್ಕಾರದ ಹಿಂದಿದೆ ಪಾಕಿಸ್ತಾನದ 200 ಕೋಟಿ ನಷ್ಟದ ಲೆಕ್ಕಾಚಾರ! – Kannada News | ICC may suffer loss upto 200 crores if India vs Pakistan match gets cancelled

ಭಾರತ ಮತ್ತು ಪಾಕಿಸ್ತಾನ್ ನಡುವಣ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆಯಾ? ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೊಂದಷ್ಟು ದಿನಗಳವರೆಗೆ ಕಾಯಲೇಬೇಕು. ಏಕೆಂದರೆ ಟಿ20 ವಿಶ್ವಕಪ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದೆ. ಇದಕ್ಕೆ ಪಾಕಿಸ್ತಾನ್ ಸರ್ಕಾರ ಕೂಡ ಸಂಪೂರ್ಣ ಬೆಂಬಲ ನೀಡಿದೆ. ಹೀಗಾಗಿ ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯಲಿದೆಯಾ ಎಂಬುದೇ ಈಗ ದೊಡ್ಡ ಪ್ರಶ್ನೆ.

ಇತ್ತ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಪಾಕಿಸ್ತಾನಕ್ಕೇನು ಲಾಭ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ 200 ಕೋಟಿ ರೂ. ನಷ್ಟದ ಲೆಕ್ಕಾಚಾರವೊಂದು ಉತ್ತರವಾಗಿ ಸಿಗುತ್ತದೆ. ಅಂದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಐಸಿಸಿ ಹಾಗೂ ಬಿಸಿಸಿಐ ಅನ್ನು ಇಕ್ಕಟಿಗೆ ಸಿಲುಕಿಸಲೆಂದೇ ಪಂದ್ಯ ಬಹಿಷ್ಕಾರದ ಬೆದರಿಕೆಯೊಡ್ಡಿದೆ.

200 ಕೋಟಿ ರೂ. ನಷ್ಟದ ಲೆಕ್ಕಾಚಾರ!

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಆದಾಯಕ್ಕೆ ಹೊಡೆತ ಬೀಳುವುದು ಖಚಿತ. ಇತ್ತ ಈ ಬಾರಿ ಟಿ20 ವಿಶ್ವಕಪ್ ಅನ್ನು ಶ್ರೀಲಂಕಾ ಜೊತೆಗೂಡಿ ಬಿಸಿಸಿಐ ಆಯೋಜಿಸುತ್ತಿದೆ. ಹೀಗಾಗಿ ಬಿಸಿಸಿಐ ಕೂಡ ಈ ನಷ್ಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಭಾರತದ ಪಂದ್ಯಗಳು ಸುಮಾರು 100 ಕೋಟಿ ರೂ. ಗಳಿಸುತ್ತವೆ. ಇದೇ ವೇಳೆ ಭಾರತ-ಪಾಕಿಸ್ತಾನ್​ ನಡುವಣ ಪಂದ್ಯಗಳಲ್ಲಿ ಈ ಆದಾಯವು ಬಹುತೇಕ ದ್ವಿಗುಣಗೊಳ್ಳುತ್ತದೆ. ಅಂದರೆ ಕನಿಷ್ಠ 200 ಕೋಟಿ ರೂ. ಆದಾಯ ಸೃಷ್ಟಿಯಾಗುತ್ತದೆ.

ಈ ಆದಾಯದ ಮುಖ್ಯ ಮೂಲ ಜಾಹೀರಾತು. ಅದರಲ್ಲೂ ಪಂದ್ಯದ ನೇರ ಪ್ರಸಾರಕರು  ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಪ್ರತಿ 10-ಸೆಕೆಂಡ್ ಜಾಹೀರಾತಿಗೆ ಸಾಮಾನ್ಯವಾಗಿ 25 ಲಕ್ಷದಿಂದ 40 ಲಕ್ಷ ರೂ.ಗಳನ್ನು ನಿಗದಿ ಮಾಡುತ್ತಾರೆ.

ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ರದ್ದಾದರೆ, ಜಾಹೀರಾತಿನ ಆದಾಯದ ಮೇಲೆ ನೇರ ಪರಿಣಾಮ ಬೀರಲಿದೆ. ಇದಲ್ಲದೆ ಟಿಕೆಟ್ ಮಾರಾಟ, ಇತರೆ ಮೂಲಗಳಿಂದ ಬರುವ ಆದಾಯಕ್ಕೂ ಹೊಡೆತ ಬೀಳಲಿದೆ.

ಇತ್ತ ಬಿಸಿಸಿಐ ಹಾಗೂ ಐಸಿಸಿ ಗಳಿಸಲಿರುವ ಆದಾಯಕ್ಕೆ ಹೊಡೆತ ನೀಡುವ ಸಲುವಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಇದೀಗ ಭಾರತದ ವಿರುದ್ಧದ ಪಂದ್ಯದ ಬಹಿಷ್ಕಾರಕ್ಕೆ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಆಘಾತ

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತುರ್ತು ಸಭೆ ಕರೆದಿದೆ. ಅಲ್ಲದೆ ಪಿಸಿಬಿಗೆ ತನ್ನ ನಿಲುವನ್ನು ಬದಲಿಸುವಂತೆ ಮನವಿ ಮಾಡಿದೆ. ಇದಾಗ್ಯೂ ಪಾಕ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರವನ್ನು ಬದಲಿಸದೇ ಇದ್ದರೆ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Published On – 1:54 pm, Mon, 2 February 26

Source link

Video: ಹೈವೇ ಮಧ್ಯದಲ್ಲಿ ಕಪಲ್ ಫೋಟೊಶೂಟ್, ವೇಗವಾಗಿ ಬಂದ ಕಾರು, ಆಮೇಲೇನಾಯ್ತು? – Kannada News | Risky Highway Photoshoot by Couple Triggers Online Backlash

ಹೆದ್ದಾರಿಯಲ್ಲಿ ಪಕ್ಕಕ್ಕೆ ಬೈಕ್ ನಿಲ್ಲಿಸಿಕೊಂಡು ನಡು ರಸ್ತೆಯಲ್ಲಿ ದಂಪತಿ ಫೋಟೊಶೂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಾರೊಂದು ವೇಗವಾಗಿ ಬರುತ್ತಿರುತ್ತದೆ. ರಸ್ತೆ ಸ್ವಲ್ಪ ಇಳಿಜಾರಿರುತ್ತದೆ, ಅದೇ ವೇಗದಲ್ಲಿ ಮುಂದೆ ಬಂದಾಗ ಎದುರಿಗೆ ನಡುರಸ್ತೆಯಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದಂಪತಿಯನ್ನು ನೋಡಿ ಬ್ರೇಕ್ ಹಾಕಿದ್ದಾರೆ. ಒಂದು ಸೆಕೆಂಡ್ ಹೆಚ್ಚು ಕಡಿಮೆಯಾಗಿದ್ದರೂ ಅವರ ಪ್ರಾಣವೇ ಹೋಗುತ್ತಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version