CBDC ಆಧಾರಿತ DBTಗೆ ಚಾಲನೆ: ಪ್ರಲ್ಹಾದ್ ಜೋಶಿ ಕಾರ್ಯವೈಖರಿ ಶ್ಲಾಘಿಸಿದ ಶಿವರಾಜ್ ಸಿಂಗ್ ಚೌಹಾಣ್ – Kannada News | Agriculture minister Shivraj Singh Chouhan praises Pralhad Joshi during launch of CBDC based DBT system for PMGKAY

ಶಿವರಾಜ್ ಸಿಂಗ್ ಚೌಹಾಣ್Image Credit source: x user @Indian_Analyzer

ಚಂಡೀಗಡ, ಆಗಸ್ಟ್ 14: ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY) ಅಡಿಯಲ್ಲಿ ಬಡ ಫಲಾನುಭವಿಗಳಿಗೆ ಪಾರದರ್ಶಕವಾಗಿ ಸೌಲಭ್ಯ ತಲುಪಿಸಲು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC – Digital Rupee) ಆಧಾರಿತ ‘ನೇರ ನಗದು ವರ್ಗಾವಣೆ’ (Direct Benefit Transfer – DBT) ವ್ಯವಸ್ಥೆಗೆ ಚಂಡೀಗಢದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರಕೃತಿ ವಿಕೋಪಗಳು ಮತ್ತು ತಾಂತ್ರಿಕ ಸವಾಲುಗಳ ನಡುವೆಯೂ ಆಹಾರ ಧಾನ್ಯಗಳ ವಿತರಣೆ ಮತ್ತು ಆಹಾರ ಭದ್ರತೆಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುತ್ತಿರುವ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವ ಹಾಗೂ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ನಾಯಕತ್ವದ ಉಪಸ್ಥಿತಿ: ಚಂಡೀಗಢದಲ್ಲಿ ನಡೆದ ಈ ಮಹತ್ವದ ಕಾರ್ಯಕ್ರಮದಲ್ಲಿ ಪಂಜಾಬ್ ರಾಜ್ಯಪಾಲರು ಹಾಗೂ ಚಂಡೀಗಢದ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಭಾಗವಹಿಸಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯೋತ್ತರ ಎಂಟು ದಶಕದಲ್ಲಿ ಭಾರತದ ಪ್ರಮುಖ ಸಾಧನೆಗಳೇನು? ಒಂದು ನೋಟ

ಬಡವರ ಕಲ್ಯಾಣಕ್ಕೆ ತಂತ್ರಜ್ಞಾನ: ಪ್ರಲ್ಹಾದ್ ಜೋಶಿ

ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ ಅವರು, ಕೇಂದ್ರ ಸರ್ಕಾರವು ದೇಶದ ಬಡ ಮತ್ತು ಅಗತ್ಯವಿರುವ ಜನರಿಗೆ ಉಚಿತ ಪಡಿತರ ಹಾಗೂ ಸೌಲಭ್ಯ ಒದಗಿಸಲು ವಾರ್ಷಿಕವಾಗಿ ₹2.10 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ವಿನಿಯೋಗಿಸುತ್ತಿದೆ ಎಂದು ತಿಳಿಸಿದರು.

ಶಿವರಾಜ್ ಸಿಂಗ್ ಚೌಹಾಣ್ ಭಾಷಣ ಮಾಡುತ್ತಿರುವುದು

CBDC ಆಧಾರಿತ DBT ವ್ಯವಸ್ಥೆ ಎಂದರೇನು?

  • ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ತಡೆ: ಸರ್ಕಾರಿ ಯೋಜನೆಗಳ ಸೌಲಭ್ಯಗಳು ನೇರವಾಗಿ ಬಡ ಫಲಾನುಭವಿಗಳನ್ನು ತಲುಪಲು ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪ ಅಥವಾ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಈ ‘ಡಿಜಿಟಲ್ ರೂಪಾಯಿ’ (e₹) ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
  • ಮೊದಲ ಕೇಂದ್ರಾಡಳಿತ ಪ್ರದೇಶಗಳು: ಚಂಡೀಗಢ ಹಾಗೂ ದಾದ್ರಾ ಮತ್ತು ನಾಗರ್ ಹವೇಲಿ ಪ್ರದೇಶಗಳು PMGKAY ಫಲಾನುಭವಿಗಳಿಗೆ ಪಡಿತರ ಸಬ್ಸಿಡಿಯನ್ನು CBDC ವಾಲೆಟ್‌ಗಳ ಮೂಲಕ ಡಿಜಿಟಲ್ ರೂಪಾಯಿ ಟೋಕನ್ ರೂಪದಲ್ಲಿ ನೇರವಾಗಿ ತಲುಪಿಸುತ್ತಿರುವ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶಗಳಾಗಿವೆ.
  • ನಿರ್ದಿಷ್ಟ ಬಳಕೆಯ ನಿಯಮ (Programmable Tokens): ಈ ಯೋಜನೆಯಡಿ ಲಭಿಸುವ ಡಿಜಿಟಲ್ ರೂಪಾಯಿಯನ್ನು ಫಲಾನುಭವಿಗಳು ಅಧಿಕೃತ ಪಡಿತರ ಅಂಗಡಿ ಅಥವಾ ವರ್ತಕರಲ್ಲಿ (Empanelled Merchants) QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಡಿತರ ಧಾನ್ಯಗಳನ್ನು ಖರೀದಿಸಲು ಮಾತ್ರ ಬಳಸಬಹುದು. ಇದರಿಂದ ಸರ್ಕಾರದ ಹಣ ದುರುಪಯೋಗವಾಗುವುದು ತಪ್ಪುತ್ತದೆ.

ಇದನ್ನೂ ಓದಿ: ಅತ್ತ ಚಿಲ್ಲರೆ ಹಣದುಬ್ಬರ ಏರಿದರೆ, ಇತ್ತ ಸಗಟು ಹಣದುಬ್ಬರ ಇಳಿಕೆ; ನಾಲ್ಕು ವರ್ಷದಲ್ಲಿ ಮೊದಲ ಬಾರಿ ತಗ್ಗಿದ ಡಬ್ಲ್ಯುಪಿಐ ದರ

ಗುಜರಾತ್ ಮತ್ತು ಪುದುಚೇರಿಗಳಲ್ಲಿ ಯಶಸ್ವಿಯಾಗಿ ನಡೆದ ಪ್ರಾಯೋಗಿಕ ಪರೀಕ್ಷೆಯ (Pilot implementation) ನಂತರ, ಈಗ ಈ ತಂತ್ರಜ್ಞಾನ ಆಧಾರಿತ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಟೊಮ್ಯಾಟೋ ಎರಚಿಕೊಂಡು ತುಳಿದು ಕೆಚಪ್ ಮಾಡುವ ಕಾರ್ಯಕ್ರಮ: ಬಿಜೆಪಿ ವಿರೋಧ – Kannada News | Bengaluru Tomato Festival Faces Opposition: BJP and Others Are Demanding Its Cancellation

ಟೊಮ್ಯಾಟೋ ಫೆಸ್ಟಿವಲ್Image Credit source: tv9 kannada

ಬೆಂಗಳೂರು, ಆಗಸ್ಟ್​ 14: ‘ಜಿಂದಗಿ ನಾ ಮಿಲೇಗಿ ದುಬಾರ’ ಸಿನಿಮಾನಲ್ಲಿ ನೀವು ‘ಟೊಮ್ಯಾಟೋ ಫೆಸ್ಟಿವಲ್’ನ (tomato festival) ಹಾಡೊಂದನ್ನು ನೋಡಿರುತ್ತೀರಾ. ಸ್ಪೇನ್ ದೇಶದ ಪ್ರಸಿದ್ಧ ಫೆಸ್ಟಿವಲ್ ಆಗಿರುವ ‘ಲಾ ಟೊಮ್ಯಾಟಿನಾ’ ಅಂದರೆ ‘ಟೊಮ್ಯಾಟೋ ಫೆಸ್ಟಿವಲ್’ ಇದೀಗ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ (bangaluru) ಆಯೋಜಿಸಲಾಗಿದೆ. ಸೆ.6ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಈ ಟೊಮ್ಯಾಟೋ ಫೆಸ್ಟಿವಲ್ ನಡೆಯಲಿದೆ. ಇದು ಸಿಲಿಕಾನ್​ ಸಿಟಿ ಜನರಿಗೆ ಖುಷಿ ತಂದಿದ್ದು, ಮತ್ತೊಂದೆಡೆ ಇದಕ್ಕೆ ಬಿಜೆಪಿ ಸೇರಿದಂತೆ ಇತರೆ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಏನಿದು ‘ಟೊಮ್ಯಾಟೋ ಫೆಸ್ಟಿವಲ್’? 

‘ಟೊಮ್ಯಾಟೋ ಫೆಸ್ಟಿವಲ್’ ಸ್ಪೇನ್ ದೇಶದ ಪ್ರಸಿದ್ಧ ಹಬ್ಬಗಳಲ್ಲಿ ಒಂದು. ಈ ಹಬ್ಬದಂದು ಜನರು ಪರಸ್ಪರ ಟೊಮ್ಯಾಟೋವನ್ನು ಎರಚಿಕೊಳ್ಳುತ್ತಾ ಮೋಜು-ಮಸ್ತಿಯಿಂದ ಸಂಭ್ರಮಿಸುತ್ತಾರೆ. ಟೊಮ್ಯಾಟೋ ಎರಚಿಕೊಂಡು ತುಳಿದು ಕೆಚಪ್ ಮಾಡಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡ ಕ್ರಮಗಳೇನು? ವಿವರ ನೀಡಲು ಜಿಬಿಎಗೆ ಹೈಕೋರ್ಟ್ ಸೂಚನೆ

ಬೆಂಗಳೂರಿನಲ್ಲಿ ಸೆ 6ರಂದು ಮಧ್ಯಾಹ್ನ 12 ಗಂಟೆಯಿಂದ ಆರಂಭಗೊಳ್ಳಲಿರುವ ಈ ಫೆಸ್ಟಿವಲ್​​ನಲ್ಲಿ ಡಿಜೆ, ವಿವಿಧ ಆಟೋಟಗಳು, ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇರಲಿದೆ. ಇನ್ನು ಉತ್ಸವದ ಪ್ರವೇಶ ದರ 499 ರೂ.ದಿಂದ ಆರಂಭವಾಗಲಿದೆ. ವಾಟ್ಸ್‌ಅರೌಂಡ್ ಬೆಂಗಳೂರು ಎಂಬ ಆ್ಯಪ್​​​ ಮೂಲಕ ಟಿಕೆಟ್‌ಗಳನ್ನು ಬುಕ್​ ಮಾಡಬಹುದಾಗಿದೆ.

ಟೊಮ್ಯಾಟೋ ಫೆಸ್ಟಿವಲ್​​ಗೆ ಬಿಜೆಪಿ ಸೇರಿ ವಿವಿಧ ಸಂಘಟನೆಗಳಿಂದ ವಿರೋಧ

ಇನ್ನು ಈ ಪಾಶ್ಚಿಮಾತ್ಯ ಶೈಲಿಯ ‘ಟೊಮ್ಯಾಟೋ ಫೆಸ್ಟಿವಲ್’ಗೆ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಟೊಮ್ಯಾಟೋವನ್ನು ಪರಸ್ಪರ ಎರಚಿಕೊಂಡು, ಕಾಲಿನಲ್ಲಿ ತುಳಿದು ಕೆಚಪ್ ಮಾಡುವ ಈ ವಿಚಿತ್ರ ಹಾಗೂ ಅನಾಗರಿಕ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಸಂಘಟನೆಗಳು ಒತ್ತಾಯಿಸಿವೆ.

ತಿನ್ನುವ ಪದಾರ್ಥವನ್ನು ತುಳಿದು, ವಿಕೃತಿ ಮೆರೆವ ಸಂಪ್ರದಾಯ ಏಕೆ ಬೇಕು?

ಸುಮಾರು 10 ವರ್ಷಗಳ ಹಿಂದೆಯೂ ಈ ಸಂಸ್ಕೃತಿಯನ್ನು ಬೆಂಗಳೂರಿಗೆ ಪರಿಚಯಿಸಲು ಯತ್ನಿಸಿದಾಗ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿ ಕೊನೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಅಂತಹದ್ದೇ ಆಚರಣೆಯನ್ನು ತರಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ತಿನ್ನುವ ಅನ್ನ ಹಾಗೂ ಆಹಾರ ಪದಾರ್ಥಗಳನ್ನು ಕಾಲಿನಡಿ ತುಳಿದು ವಿಕೃತಿ ಮೆರೆಯುವ ಇಂತಹ ಪಾಶ್ಚಿಮಾತ್ಯ ಸಂಪ್ರದಾಯ ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂದು ಸಾರ್ವಜನಿಕರು ಮತ್ತು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ

ರೈತರು ಬೆಳೆದ ಬೆಳೆಗಳಿಗೆ ಹಾಗೂ ತರಕಾರಿಗಳಿಗೆ ಸೂಕ್ತ ಬೆಲೆ ಕೊಟ್ಟು ನ್ಯಾಯ ಒದಗಿಸುವುದನ್ನು ಬಿಟ್ಟು, ಆಹಾರ ಪದಾರ್ಥಗಳನ್ನು ಈ ರೀತಿ ಕೇವಲವಾಗಿ ಪೋಲು ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಸರಿಯಲ್ಲ. ಇಂತಹ ಅಸಂಬದ್ಧ ಕಾರ್ಯಕ್ರಮಗಳಿಗೆ ಸರ್ಕಾರ ಯಾವುದೇ ರೀತಿಯಲ್ಲೂ ಅವಕಾಶ ಮಾಡಿಕೊಡಬಾರದು ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಶ್ಚಿಮ ಏಷ್ಯಾ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿ ಭಾರತಕ್ಕೆ ಇರಾನ್ ಅಧ್ಯಕ್ಷ ಭೇಟಿ – Kannada News | Iran President Masoud Pezeshkian to visit India for BRICS Summit next month for the first time after West Asia Conflict

ನವದೆಹಲಿ, ಆಗಸ್ಟ್ 14: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ (Iran War) ನಡುವೆ ಸಂಘರ್ಷ ಹೆಚ್ಚಾದ ಬೆನ್ನಲ್ಲೇ ಮೊದಲ ಭಾರಿಗೆ ಇರಾನ್ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಮುಂಬರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 18ನೇ ಬ್ರಿಕ್ಸ್ ಶೃಂಗಸಭೆಯು ಸೆಪ್ಟೆಂಬರ್ 12 ಹಾಗೂ 13ರಂದು ನಡೆಯಲಿದೆ.

ಪೆಜೆಶ್ಕಿಯನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಮಾತುಕತೆ ಭಾರತ-ಇರಾನ್ ಸಂಬಂಧಗಳನ್ನು ಬಲಪಡಿಸಲು ಹಾದಿ ಮಾಡಿಕೊಡಲಿದೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳು, ಆರ್ಥಿಕ ಸಹಕಾರ ಹಾಗೂ ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಇರಾನ್​ಗೆ ಹೆದರಿ ಕ್ಯಾಟರಿಂಗ್ ಟ್ರಕ್ ಹತ್ತಿದ ಟ್ರಂಪ್; ಟರ್ಕಿಯಿಂದ ರಹಸ್ಯವಾಗಿ ಎಸ್ಕೇಪ್ ಆಗಿದ್ದ ಅಮೆರಿಕ ಅಧ್ಯಕ್ಷ

2024ರಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದ ಪೆಜೆಶ್ಕಿಯನ್:

ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ವೇಳೆ ಅಕ್ಟೋಬರ್ 2024ರಲ್ಲಿ ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಇದಲ್ಲದೆ, ಈಜಿಪ್ಟ್, ಇಥಿಯೋಪಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಜೊತೆಗೆ ಇರಾನ್ 2024ರಲ್ಲಿ ಬ್ರಿಕ್ಸ್ ಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಯಿತು. ನಂತರ, 2025ರಲ್ಲಿ ಇಂಡೋನೇಷ್ಯಾ ಕೂಡ ಈ ಒಕ್ಕೂಟಕ್ಕೆ ಸೇರ್ಪಡೆಯಾಗುವುದರೊಂದಿಗೆ ಒಟ್ಟು ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಕತ್ತಲೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿಯನ್ನು ಭೇಟಿಯಾದ್ರಾ ಇರಾನ್ ಅಧ್ಯಕ್ಷ?

ಕಳೆದ ಜೂನ್ ತಿಂಗಳಿನಲ್ಲಿ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಭಾರತಕ್ಕೆ ಆಗಮಿಸಿದ್ದರು. ಆ ಸಭೆಯ ನಂತರ ನವದೆಹಲಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ್ದ ಅರಾಘ್ಚಿ, ಜಾಗತಿಕ ಶಾಂತಿಪಾಲಕನಾಗಿ ಭಾರತದ ಬೆಳವಣಿಗೆಯನ್ನು ಶ್ಲಾಘಿಸಿದ್ದರು. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಭಾರತವು ದೊಡ್ಡ ಪಾತ್ರ ವಹಿಸಬಹುದು ಎಂದು ಕೂಡ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಪ್ಪನ ಅಗ್ರಹಾರ ಜೈಲು ಪರಿಶೀಲಿಸಿದ ಡಿಜೆಪಿ: ಜೈಲಾಧಿಕಾರಿಗಳಿಗೆ ಅಲೋಕ್ ಕುಮಾರ್ ಕ್ಲಾಸ್ – Kannada News | DGP Alok Kumar Talks about Phone Found In Prajwal Revanna Cell at parappana agrahara central Jail

ಬೆಂಗಳೂರು, (ಆಗಸ್ಟ್ 14): ಸಿಸಿಬಿ ದಾಳಿ ವೇಳೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಸೆಲ್​​​​ನಲ್ಲಿ ಮೊಬೈಲ್, ಪೆನ್​​​ಡ್ರೈವ್ ಸಿಕ್ಕಿದ್ದು, ಇದು ಭಾರೀ ಸಂಚಲನ ಮೂಡಿಸಿದೆ. ಪ್ರಜ್ವಲ್​​ಗೆ ಮೊಬೈಲ್ ಕೊಟ್ಟಿದ್ಯಾರು? ಹೀಗೆ ಹತ್ತಾರು ಪ್ರಶ್ನೆಗಳು ಉದ್ಭವಿಸಿದ್ದು, ಸಂಬಂಧ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಇಂದು (ಆಗಸ್ಟ್ 14) ಕಾರಾಗೃಹ ಮತ್ತು ಸುಧಾರಣೆ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೈಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪ್ರಜ್ವಲ್ ಬ್ಯಾರಕ್​ನಲ್ಲಿ ನಿಷೇಧಿತ ವಸ್ತು ಹೇಗೆ ಪತ್ತೆ ಆಯ್ತು? ಮೊಬೈಲ್, ಸಿಮ್, ಚಾರ್ಜರ್, ಪೆನ್​ಡ್ರೈವ್ ಹೇಗೆ ಹೋಯ್ತು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಅಕ್ರಮಗಳ ಕಡಿವಾಣಕ್ಕೆ ಬ್ರೇಕ್ ಹಾಕುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ಜೈಲಿನಲ್ಲಿ ಮೊಬೈಲ್ ಪತ್ತೆಯಾದ ಬಗ್ಗೆ ಸಿಸಿಬಿ ತನಿಖೆ ಮಾಡುತ್ತಿದೆ. ನಾವು ಬಹಳ ದಿನಗಳಿಂದ ಕಾರಾಗೃಹಕ್ಕೆ ಭೇಟಿ ನೀಡಿರಲಿಲ್ಲ.ಈಗ ಜನರಲ್ ವಿಸಿಟ್ ಮಾಡಿದ್ದೇವೆ. ವಿಚಾರಣೆ ನಡೀತಿದೆ ಮುಗಿದ ನಂತರ ತಿಳಿಸುತ್ತೇವೆ. ಜೈಲಿನಲ್ಲಿ ಪ್ರಜ್ವಲ್​ ಮೊಬೈಲ್​ನಲ್ಲಿ ಮಾತನಾಡ್ತಿದ್ದ ವಿಡಿಯೋ ವೈರಲ್ ಆಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.ಈ ಬಗ್ಗೆ ನಾವು ತನಿಖೆ ಮಾಡುತ್ತಿಲ್ಲ. ನಾನು ಕೇವಲ ಜನರಲ್ ವಿಸಿಟ್​ಗೆ ಬಂದಿದ್ದೆ. ಬೇರೆ ಬೇರೆ ಬ್ಯಾರಕ್​ಗಳಲ್ಲಿ ಏನು ಸಮಸ್ಯೆ ಎಂದು ಪರಿಶೀಲನೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಶೇ. 82 ರಷ್ಟು ಮಳೆ..! ಗಾಲೆ ಟೆಸ್ಟ್ ಮೊದಲ ದಿನದಾಟ ನಡೆಯುವುದು ಅನುಮಾನ – Kannada News | Galle Test Preview: India vs SL 1st Match Pitch, Weather report

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15 ರ ಶನಿವಾರ ಗಾಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂಬತ್ತು ವರ್ಷಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಟೀಂ ಇಂಡಿಯಾ ಆಡುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಹೀಗಾಗಿ, ಬಹುತೇಕ ಇಡೀ ತಂಡಕ್ಕೆ ಈ ಪರಿಸ್ಥಿತಿಗಳ ಬಗ್ಗೆ ತಿಳಿದಿಲ್ಲ. ಪ್ರಸ್ತುತ ತಂಡದಲ್ಲಿರುವ ಮೂವರು ಆಟಗಾರರು ಮಾತ್ರ ಗಾಲೆಯಲ್ಲಿ ಟೆಸ್ಟ್ ಪಂದ್ಯ ಆಡಿದ್ದಾರೆ, ಆದರೆ ಕ್ಯಾಪ್ಟನ್ ಗಿಲ್ ಸೇರಿದಂತೆ ಅನೇಕ ಆಟಗಾರರು ಇಲ್ಲಿ ಏಕದಿನ ಅಥವಾ ಟಿ20 ಪಂದ್ಯಗಳನ್ನು ಆಡಿದ್ದಾರೆಯಾದರೂ ರೆಡ್-ಬಾಲ್ ಕ್ರಿಕೆಟ್ ಆಡಿಲ್ಲ. ಹೀಗಾಗಿ ಈ ಸವಾಲನ್ನು ಅನಾನುಭವಿ ಟೀಂ ಇಂಡಿಯಾ ಹೇಗೆ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ? ಪಿಚ್ ಯಾರಿಗೆ ಸಹಕರಿಸಲಿದೆ ಎಂಬುದನ್ನು ನೋಡೋಣ.

ಶೇ. 82 ರಷ್ಟು ಮಳೆ ಸಾಧ್ಯತೆ

ಪಂದ್ಯದ ದಿನದಂದು ಅಂದರೆ ಶನಿವಾರದಂದು ಗಾಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಅಕ್ಯೂವೆದರ್ ಪ್ರಕಾರ, ಹಗಲಿನಲ್ಲಿ ಮಳೆಯಾಗುವ ಸಾಧ್ಯತೆ ಶೇ. 82 ರಷ್ಟು ಇದೆ. ಪಂದ್ಯದ ದಿನದಂದು ಬೆಳಿಗ್ಗೆ 8 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ. 65 ರಷ್ಟು ಇದೆ. ಶುಕ್ರವಾರ ಸಂಜೆಯಿಂದ ಇಲ್ಲಿಯೂ ನಿರಂತರ ಮಳೆಯಾಗುವ ನಿರೀಕ್ಷೆಯಿದೆ. ಇದರರ್ಥ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಬಹುದು.

IND vs SL: ಟಿಕೆಟ್ ಖರೀದಿಸಬೇಕಿಲ್ಲ; ಅಭಿಮಾನಿಗಳಿಗೆ ಉಚಿತ ಪ್ರವೇಶ

ಗಾಲೆ ಪಿಚ್ ವರದಿ

ಭಾರತವು ಈ ಹಿಂದೆ ಗಾಲೆಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಟೀಂ ಇಂಡಿಯಾ ಕೊನೆಯದಾಗಿ 2017 ರಲ್ಲಿ ಗಾಲೆಯಲ್ಲಿ ಆಡಿದ್ದು, 304 ರನ್‌ಗಳ ಬೃಹತ್ ಗೆಲುವು ದಾಖಲಿಸಿತ್ತು. ಇನ್ನು ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್​ನ ಇತ್ತೀಚಿನ ದಾಖಲೆಗಳ ಆಧಾರದ ಮೇಲೆ ಹೇಳುವುದಾದರೆ ಇಲ್ಲಿ ಬ್ಯಾಟ್ಸ್‌ಮನ್‌ಗಳು ಆರಂಭಿಕ ನೆರವು ಪಡೆಯಬಹುದು. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಬಹುದು. ಇದಲ್ಲದೆ, ಮೊದಲ ಎರಡು ದಿನಗಳಲ್ಲಿ ವೇಗದ ಬೌಲರ್‌ಗಳು ಈ ಪಿಚ್‌ನಲ್ಲಿ ಉತ್ತಮ ಬೌನ್ಸ್ ಪಡೆಯುತ್ತಾರೆ. ಇದರರ್ಥ ಈ ಮೈದಾನದಲ್ಲಿ ಬೌಲರ್​ಗಳು ಮೇಲುಗೈ ಸಾಧಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:38 pm, Fri, 14 August 26

Source link

ಸಂಭಾವನೆ ಬಗ್ಗೆ ಮಾತನಾಡಿದ ಯಶ್, 50 ಕೋಟಿ ಅಲ್ಲ, ಮತ್ತೆಷ್ಟು? – Kannada News | Yash talks about his remuneration in Aap ki Adalat

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರ ವಿಷಯ ಬಂದಾಗ ಕನ್ನಡದ ನಟರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಶಾರುಖ್ ಖಾನ್, ವಿಜಯ್, ಪ್ರಭಾಸ್, ಅಲ್ಲು ಅರ್ಜುನ್ ಇವೇ ಹೆಸರುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಹಾಗಿಲ್ಲ. ಯಶ್ (Yash), ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೆ ಯಶ್ ಅವರು ‘ಆಪ್​​ ಕಿ ಅದಾಲತ್’ ಟಿವಿ ಸಂದರ್ಶನದಲ್ಲಿ ಭಾಗಿ ಆಗಿದ್ದು, ಸಂದರ್ಶನದಲ್ಲಿ ತಮ್ಮ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ.

ಸಂದರ್ಶಕ ರಜತ್ ಶರ್ಮಾ ಅವರು, ‘ನೀವು ಟಿವಿ ಧಾರಾವಾಹಿಗಳಲ್ಲಿ ನಟಿಸುವಾಗಲೇ ಹಲವು ಸಿನಿಮಾ ಆಫರ್ ಆಗಿತ್ತಂತೆ. ಆದರೆ ನೀವು ಅವರಿಂದ ಚಿತ್ರಕತೆ ಕೇಳಿದಿರಂತೆ. ಧಾರಾವಾಹಿ ನಟ ಚಿತ್ರಕತೆ ಕೇಳುತ್ತಾನಲ್ಲ? ಎಂದು ಅವರು ನಿಮಗೆ ಸಿನಿಮಾ ಕೊಡಲಿಲ್ಲವಂತೆ ನಿಜವೇ?’ ಎಂದು ಪ್ರಶ್ನಿಸಿದ್ದಾರೆ. ‘ಚಿತ್ರಕತೆ ಕೇಳಿದ್ದು ತಪ್ಪೆ?’ ಎಂದು ಯಶ್ ಉತ್ತರಿಸಿದ್ದಾರೆ. ಮುಂದುವರೆದು, ‘ಆ ಸಿನಿಮಾಗಳು ನನ್ನ ಕೈಬಿಟ್ಟು ಹೋದವು, ಆದರೆ ಅವರು (ನಿರ್ದೇಶಕರು) ಈಗ ಎಲ್ಲಿದ್ದಾರೋ ಗೊತ್ತಿಲ್ಲ’ ಎಂದು ಮಾಸ್ ಆಗಿ ಉತ್ತರ ಕೊಟ್ಟಿದ್ದಾರೆ.

ಬಳಿಕ ಯಶ್ ಅವರು, ‘ನೀವು ಸಿನಿಮಾಕ್ಕೆ 50 ಕೋಟಿ ಸಂಭಾವನೆ ಪಡೆಯುತ್ತೀರಂತೆ?’ ಎಂದಿದ್ದಾರೆ. ಅದಕ್ಕೆ ಯಶ್, ‘ಇಲ್ಲ, ಅದಕ್ಕಿಂತಲೂ ಹೆಚ್ಚು’ ಎಂದು ಮತ್ತೊಂದು ಮಾಸ್ ಉತ್ತರ ನೀಡಿದ್ದಾರೆ. ಈ ಮೂಲಕ ಯಶ್ ಸ್ಪಷ್ಟವಾಗಿ ಹೇಳಿದ್ದಾರೆ. ತಮ್ಮ ಸಂಭಾವನೆ 50 ಕೋಟಿ ಅಲ್ಲ ಅದಕ್ಕಿಂತಲೂ ಎಷ್ಟೋ ಹೆಚ್ಚೆಂದು. ಕೆಲ ಮೂಲಗಳ ಪ್ರಕಾರ ಅವರು ‘ರಾಮಾಯಣ’ ಸಿನಿಮಾಕ್ಕೆ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕೆ ಅವರು ಸಹ ನಿರ್ಮಾಪಕ ಆಗಿದ್ದಾರೆ.

ಇದನ್ನೂ ಓದಿ:ಅಭಿಮಾನಿಯ ಅಂತ್ಯಕ್ರಿಯೆಗೆ ಹೋಗಲಿಲ್ಲ ಏಕೆ? ಯಶ್ ಕೊಟ್ಟರು ಕಾರಣ

ಯಶ್, ಅವರು ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಕೊಟ್ಟಿರುವ ಉತ್ತರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಯಶ್ ಅವರು ರಜತ್ ಶರ್ಮಾ ಅವರು ಕೇಳಿರುವ ಪ್ರತಿ ಪ್ರಶ್ನೆಗೆ ಮಾಸ್ ಉತ್ತರಗಳನ್ನು ನೀಡಿದ್ದಾರೆ. ಎಪಿಸೋಡ್​​ನ ಟೀಸರ್, ಟ್ರೈಲರ್​​ಗಳು ಮಾತ್ರವೇ ಬಿಡುಗಡೆ ಆಗಿವೆ. ಪೂರ್ಣ ಎಪಿಸೋಡ್ ನಾಳೆ (ಆಗಸ್ಟ್ 15) ರಿಲೀಸ್ ಆಗಲಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ರಾಯ ಮತ್ತು ಟಿಕೆಟ್ ಹೆಸರಿನ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಅನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಶೇ. 82 ರಷ್ಟು ಮಳೆ..! ಗಾಲೆ ಟೆಸ್ಟ್ ಮೊದಲ ದಿನದಾಟ ನಡೆಯುವುದು ಅನುಮಾನ – Kannada News | Galle test india sri lanka match 1 pitch report rain threat

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವು ಆಗಸ್ಟ್ 15 ರ ಶನಿವಾರ ಗಾಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂಬತ್ತು ವರ್ಷಗಳ ಬಳಿಕ ಶ್ರೀಲಂಕಾ ನೆಲದಲ್ಲಿ ಟೀಂ ಇಂಡಿಯಾ ಆಡುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಹೀಗಾಗಿ, ಬಹುತೇಕ ಇಡೀ ತಂಡಕ್ಕೆ ಈ ಪರಿಸ್ಥಿತಿಗಳ ಬಗ್ಗೆ ತಿಳಿದಿಲ್ಲ. ಪ್ರಸ್ತುತ ತಂಡದಲ್ಲಿರುವ ಮೂವರು ಆಟಗಾರರು ಮಾತ್ರ ಗಾಲೆಯಲ್ಲಿ ಟೆಸ್ಟ್ ಪಂದ್ಯ ಆಡಿದ್ದಾರೆ, ಆದರೆ ಕ್ಯಾಪ್ಟನ್ ಗಿಲ್ ಸೇರಿದಂತೆ ಅನೇಕ ಆಟಗಾರರು ಇಲ್ಲಿ ಏಕದಿನ ಅಥವಾ ಟಿ20 ಪಂದ್ಯಗಳನ್ನು ಆಡಿದ್ದಾರೆಯಾದರೂ ರೆಡ್-ಬಾಲ್ ಕ್ರಿಕೆಟ್ ಆಡಿಲ್ಲ. ಹೀಗಾಗಿ ಈ ಸವಾಲನ್ನು ಅನಾನುಭವಿ ಟೀಂ ಇಂಡಿಯಾ ಹೇಗೆ ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ? ಪಿಚ್ ಯಾರಿಗೆ ಸಹಕರಿಸಲಿದೆ ಎಂಬುದನ್ನು ನೋಡೋಣ.

ಶೇ. 82 ರಷ್ಟು ಮಳೆ ಸಾಧ್ಯತೆ

ಪಂದ್ಯದ ದಿನದಂದು ಅಂದರೆ ಶನಿವಾರದಂದು ಗಾಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಅಕ್ಯೂವೆದರ್ ಪ್ರಕಾರ, ಹಗಲಿನಲ್ಲಿ ಮಳೆಯಾಗುವ ಸಾಧ್ಯತೆ ಶೇ. 82 ರಷ್ಟು ಇದೆ. ಪಂದ್ಯದ ದಿನದಂದು ಬೆಳಿಗ್ಗೆ 8 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ. 65 ರಷ್ಟು ಇದೆ. ಶುಕ್ರವಾರ ಸಂಜೆಯಿಂದ ಇಲ್ಲಿಯೂ ನಿರಂತರ ಮಳೆಯಾಗುವ ನಿರೀಕ್ಷೆಯಿದೆ. ಇದರರ್ಥ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಬಹುದು.

ಗಾಲೆ ಪಿಚ್ ವರದಿ

ಭಾರತವು ಈ ಹಿಂದೆ ಗಾಲೆಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಟೀಂ ಇಂಡಿಯಾ ಕೊನೆಯದಾಗಿ 2017 ರಲ್ಲಿ ಗಾಲೆಯಲ್ಲಿ ಆಡಿದ್ದು, 304 ರನ್‌ಗಳ ಬೃಹತ್ ಗೆಲುವು ದಾಖಲಿಸಿತ್ತು. ಇನ್ನು ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್​ನ ಇತ್ತೀಚಿನ ದಾಖಲೆಗಳ ಆಧಾರದ ಮೇಲೆ ಹೇಳುವುದಾದರೆ ಇಲ್ಲಿ ಬ್ಯಾಟ್ಸ್‌ಮನ್‌ಗಳು ಆರಂಭಿಕ ನೆರವು ಪಡೆಯಬಹುದು. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಬಹುದು. ಇದಲ್ಲದೆ, ಮೊದಲ ಎರಡು ದಿನಗಳಲ್ಲಿ ವೇಗದ ಬೌಲರ್‌ಗಳು ಈ ಪಿಚ್‌ನಲ್ಲಿ ಉತ್ತಮ ಬೌನ್ಸ್ ಪಡೆಯುತ್ತಾರೆ. ಇದರರ್ಥ ಈ ಮೈದಾನದಲ್ಲಿ ಬೌಲರ್​ಗಳು ಮೇಲುಗೈ ಸಾಧಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ವಿಮಾನ ನಿಲ್ದಾಣ, ಹೈಕೋರ್ಟ್, ಕೆಂಪುಕೋಟೆಗೆ ಬಾಂಬ್ ಬೆದರಿಕೆ! – Kannada News | Delhi airport, High Court and Red Fort gets bomb threats ahead of Independence Day

ನವದೆಹಲಿ, ಆಗಸ್ಟ್ 14: ಸ್ವಾತಂತ್ರ್ಯ ದಿನಾಚರಣೆಗೆ (Independence Day) ಕೇವಲ ಒಂದು ದಿನ ಬಾಕಿ ಇರುವಾಗ, ಶುಕ್ರವಾರ ಸಾಲು ಸಾಲು ಬಾಂಬ್ ಬೆದರಿಕೆ ಕರೆಗಳಿಂದ ರಾಷ್ಟ್ರ ರಾಜಧಾನಿ ದೆಹಲಿ ಆತಂಕಕ್ಕೊಳಗಾಗಿದೆ. ದೆಹಲಿ ಕೆಂಪುಕೋಟೆ ಹಾಗೂ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಟರ್ಮಿನಲ್ 3 ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಥಳದಲ್ಲೂ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಇಮೇಲ್‌ನಲ್ಲಿ ದೆಹಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು, ಕೆಂಪುಕೋಟೆ ಹಾಗೂ ದೆಹಲಿಯ ರೈಲುಗಳನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೆ, ದೆಹಲಿಯನ್ನು ‘ಖಾಲಿಸ್ತಾನ್’ನ ಭಾಗವಾಗಿ ಮಾಡುವುದಾಗಿಯೂ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. “ಮಧ್ಯಾಹ್ನ 2:11ಕ್ಕೆ ದೆಹಲಿ ಹೈಕೋರ್ಟ್‌ನಲ್ಲಿ ಬಾಂಬ್ ಸ್ಫೋಟ” ಎಂದು ಇ-ಮೇಲ್​ನಲ್ಲಿ ಬರೆಯಲಾಗಿದ್ದು, 1984ರ ಸಿಖ್ ವಿರೋಧಿ ದಂಗೆ ಸೇರಿದಂತೆ ಸಿಖ್ಖರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ದೆಹಲಿ ಹೈಕೋರ್ಟ್ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೂಡ ಆರೋಪಿಸಲಾಗಿದೆ. ಇದನ್ನೇ ದಾಳಿಯ ಬೆದರಿಕೆಗೆ ಕಾರಣವೆಂದು ಬಿಂಬಿಸಲು ಯತ್ನಿಸಲಾಗಿದೆ.

ಇದನ್ನೂ ಓದಿ: Independence Day 2026: 79 ಅಥವಾ 80? ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕಾಚಾರದಲ್ಲಿ ನಿಮಗೂ ಗೊಂದಲವಿದೆಯೇ? ಇಲ್ಲಿದೆ ಸ್ಪಷ್ಟ ಉತ್ತರ!

ಬಾಂಬ್ ಬೆದರಿಕೆ ಬಂದ ಇತರ ಸ್ಥಳಗಳು:

ಇಮೇಲ್‌ನಲ್ಲಿ ಉಲ್ಲೇಖಿಸಲಾದ ಸ್ಥಳಗಳ ಜೊತೆಗೆ, ಜಾಮ್ ನಗರ ಹೌಸ್, ಜಂಡೇವಾಲನ್‌ನಲ್ಲಿರುವ FLATED ಕಟ್ಟಡ, ಎಂ.ಬಿ ಸಾಕೆಟ್‌ನಲ್ಲಿರುವ ಡಿಎಂ ಕಚೇರಿ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ಮತ್ತು ದೆಹಲಿ ಕಾಂಟೋನ್ಮೆಂಟ್‌ನಲ್ಲಿರುವ ಎಸ್‌ಡಿಎಂ ಕಚೇರಿ ಸೇರಿದಂತೆ ಇತರೆ ಹಲವು ಸಂಸ್ಥೆಗಳಿಗೂ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

ಬೆದರಿಕೆ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿಯನ್ನು ಎಲ್ಲಾ ಸ್ಥಳಗಳಲ್ಲೂ ನಿಯೋಜಿಸಲಾಗಿದೆ. ಆದರೆ, ತನಿಖೆಯ ವೇಳೆ ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲನ್ನು ತೀವ್ರಗೊಳಿಸಿವೆ.

ಇದನ್ನೂ ಓದಿ: Independence Day 2026: ಭಾರತದಂತೆಯೇ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು

19 ಜನ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ:

ಈ ವಾರದ ಆರಂಭದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು, ಖಾಲಿಸ್ತಾನಿ ಬೆಂಬಲಿತ ಗ್ರೂಪ್‌ಗಳು ಮತ್ತು ದಿಢೀರ್ ಪ್ರತಿಭಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು. ಹೆಚ್ಚುವರಿ ಭದ್ರತಾ ಯೋಜನೆಯ ಭಾಗವಾಗಿ, ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಮತ್ತು ಖಾಲಿಸ್ತಾನಿ ಗುಂಪುಗಳಿಗೆ ಸೇರಿದ 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಫೋಟೋಗಳನ್ನು ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗಿತ್ತು.

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹಾಗೂ ಖಾಲಿಸ್ತಾನಿ ಶಕ್ತಿಗಳಿಂದ ಬೆದರಿಕೆ ಇರುವ ಬಗ್ಗೆ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಚರಣೆಗೆ ಧಕ್ಕೆ ತರಬಹುದಾದ ತಡರಾತ್ರಿ ಅಥವಾ ದಿಢೀರ್ ಪ್ರತಿಭಟನೆಗಳ ಮೇಲೆಯೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಾತಂತ್ರ್ಯೋತ್ತರ ಎಂಟು ದಶಕದಲ್ಲಿ ಭಾರತದ ಪ್ರಮುಖ ಸಾಧನೆಗಳೇನು? ಒಂದು ನೋಟ – Kannada News | What India achieved in eight decades after getting Independence

ಭಾರತದ ಸ್ವಾತಂತ್ರ್ಯೋತ್ಸವImage Credit source: PTI

1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ (India Independence) ಭಾರತವು ಬಡತನ, ಅಕ್ಷರಸ್ಥರ ಕೊರತೆ ಮತ್ತು ಆಹಾರ ಧಾನ್ಯಗಳ ಅಭಾವ ಎದುರಿಸುತ್ತಿದ್ದ ದೇಶವಾಗಿತ್ತು. ಜನರ ಆರೋಗ್ಯ ಪರಿಸ್ಥಿತಿಯೂ ಕಳಪೆ ಇತ್ತು. ಬ್ರಿಟಿಷರು ಲೂಟಿ ಮಾಡಿ ಉಳಿದ ಆರ್ಥಿಕತೆಯನ್ನು ಇಟ್ಟುಕೊಂಡು ಭಾರತ ಅ, ಆ, ಇ, ಈ ಇಂದ ಆಟ ಆರಂಭಿಸಬೇಕಾಯಿತು. ಇವತ್ತು ಮಧ್ಯರಾತ್ರಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಬಿಟ್ಟುಕೊಟ್ಟು ಹೋಗಿ 79 ವರ್ಷ ಆಗಿದೆ. ಈ ಎಂಟು ದಶಕಗಳಲ್ಲಿ ಭಾರತವು ತಂತ್ರಜ್ಞಾನ, ಆರ್ಥಿಕತೆ, ಆರೋಗ್ಯ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ತಂತ್ರಜ್ಞಾನ ಮತ್ತು ಜಾಗತಿಕ ನಾಯಕತ್ವ

ಗೂಗಲ್ (ಸುಂದರ್ ಪಿಚೈ), ಮೈಕ್ರೋಸಾಫ್ಟ್ (ಸತ್ಯ ನಾಡೆಲ್ಲಾ), ಅಡೋಬ್ (ಶಂತನು ನಾರಾಯಣ್) ನಂತಹ ವಿಶ್ವದ ದೈತ್ಯ ತಂತ್ರಜ್ಞಾನ ಸಂಸ್ಥೆಗಳನ್ನು ಭಾರತೀಯ ಮೂಲದ ನಾಯಕರು ಮುನ್ನಡೆಸುತ್ತಿದ್ದಾರೆ.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ

  • UPI: ಜಗತ್ತಿನಲ್ಲೇ ಅತ್ಯಂತ ಯಶಸ್ವಿ ರಿಯಲ್-ಟೈಮ್ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.
  • ಆಧಾರ್: ವಿಶ್ವದ ಅತಿ ದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದ್ದು, ನಕಲಿ ದಾಖಲೆ ತಡೆದು ಕೋಟ್ಯಂತರ ಜನರಿಗೆ ನೇರ ಸೌಲಭ್ಯ ಒದಗಿಸಲು ನೆರವಾಗಿದೆ.

ಆರ್ಥಿಕತೆ ಮತ್ತು ಜಿಡಿಪಿ ಜಿಗಿತ

ಸ್ವಾತಂತ್ರ್ಯ ಲಭಿಸಿದಾಗ ವಿಶ್ವದ ಆರ್ಥಿಕತೆಯಲ್ಲಿ ಭಾರತದ ಪಾಲು ಅತ್ಯಲ್ಪವಾಗಿತ್ತು. ಆದರೆ ಇಂದು ಭಾರತವು ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ 3ನೇ ಸ್ಥಾನಕ್ಕೇರುವ ಹಾದಿಯಲ್ಲಿದೆ.

1991ರ ಆರ್ಥಿಕ ಉದಾರೀಕರಣದ ನಂತರ ಭಾರತದ ಕೈಗಾರಿಕಾ, ಸೇವಾ ವಲಯ ಮತ್ತು ಉತ್ಪಾದನಾ ರಂಗದಲ್ಲಿ ಅಭೂತಪೂರ್ವ ಪ್ರಗತಿಯಾಗಿದೆ.

ಇದನ್ನೂ ಓದಿ: ಭಾರತದಲ್ಲೇ ‘ರೇರ್ ಅರ್ಥ್ ಮ್ಯಾಗ್ನೆಟ್ಸ್’ ತಯಾರಿಕೆಗೆ ಎಲ್‌&ಟಿ ಸಜ್ಜು; ಚೀನಾ ಪ್ರಾಬಲ್ಯಕ್ಕೆ ಸವಾಲು

ಭಾರತ ಮಾಡಿರುವ ಇನ್ನೂ ಕೆಲ ಸಾಧನೆಗಳು

  • ವಿಶ್ವದ ಔಷಧಾಗಾರ: ಕೈಗೆಟುಕುವ ಬೆಲೆಯ ಜೆನೆರಿಕ್ ಔಷಧಗಳು ಮತ್ತು ಲಸಿಕೆಗಳನ್ನು ಉತ್ಪಾದಿಸುವಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ವಿಶ್ವದ ಫಾರ್ಮಸಿ (Pharmacy of the World) ಎನಿಸಿದೆ.
  • ಆಯುಷ್ಯ ಏರಿಕೆ: 1947ರಲ್ಲಿ ಭಾರತೀಯರ ಸರಾಸರಿ ಆಯಸ್ಸು (Life Expectancy) ಕೇವಲ 32 ವರ್ಷಗಳಷ್ಟಿತ್ತು, ಆದರೆ ಇಂದು ಅದು 70 ವರ್ಷ ಮೀರಿದೆ.
  • ಪೋಲಿಯೋ ಮತ್ತು ಸಿಡಬು ನಿರ್ಮೂಲನೆ: ಸಾಂಕ್ರಾಮಿಕ ರೋಗಗಳನ್ನು ಯಶಸ್ವಿಯಾಗಿ ನಿಯಂತ್ರಿಸಿ ನಿರ್ಮೂಲನೆ ಮಾಡಲಾಗಿದೆ.
  • ಸಾಕ್ಷರತೆ ಮತ್ತು ಶಿಕ್ಷಣ: 1947ರಲ್ಲಿ ಭಾರತದ ಸಾಕ್ಷರತಾ ಪ್ರಮಾಣ (Literacy) ಕೇವಲ 12% ಇತ್ತು, ಆದರೆ ಇಂದು ಅದು 77% ಗೂ ಹೆಚ್ಚಾಗಿದೆ. ಐಐಟಿ (IIT), ಐಐಎಮ್ (IIM), ಮತ್ತು ಐಐಎಸ್‌ಸಿ (IISc) ನಂತಹ ವಿಶ್ವಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಜಾಗತಿಕ ಮಟ್ಟದ ಪ್ರತಿಭೆಗಳನ್ನು ದೇಶ ರೂಪಿಸಿದೆ.
  • ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಾಧನೆ: ಚಂದ್ರಯಾನ, ಮಂಗಳಯಾನ ಯೋಜನೆಗಳನ್ನು ಕೈಗೊಂಡಿದೆ. ಇತ್ತೀಚಿನ ಚಂದ್ರಯಾನ-3ರ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಚಂದ್ರನಲ್ಲಿ ಮನುಷ್ಯರನ್ನು ಕರೆದೊಯ್ಯುವುದು, ಸ್ವಂತ ಅಂತರಿಕ್ಷ ನಿಲ್ದಾಣ ನಿರ್ಮಿಸುವುದು ಇತ್ಯಾದಿ ಇನ್ನೂ ಗುರುತರ ಯೋಜನೆಗಳಿವೆ. ಹಾಗೆಯೇ, ಅತ್ಯಂತ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುವ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ.
  • ಹಸಿರು ಕ್ರಾಂತಿ: ಆಹಾರ ಧಾನ್ಯಗಳಿಗಾಗಿ ಇತರ ದೇಶಗಳನ್ನು ಅವಲಂಬಿಸಿದ್ದ ಭಾರತ, ಇಂದು ಆಹಾರ ಧಾನ್ಯಗಳನ್ನು ರಫ್ತು ಮಾಡುವ ಹಂತಕ್ಕೆ (Green Revolution) ಬೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಕೊಳ್ಳದಿದ್ದರೆ ಡಿವೋರ್ಸ್‌ ಆಗುತ್ತಿತ್ತು’: ಬ್ರೇಕಪ್ ಬಗ್ಗೆ ಅನುಪಮಾ ಮಾತು – Kannada News | Anupama Parameswaran reveals postponing Engagement Breakup with Narcissistic Ex Boyfriend

ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ಇತ್ತೀಚಿನ ಬ್ರೇಕಪ್ (Breakup) ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಧನ್ಯಾ ವರ್ಮಾ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ಪ್ರೀತಿಸಿದ ವ್ಯಕ್ತಿ ನಿಯಂತ್ರಣ ಸಾಧಿಸುವ ಸ್ವಭಾವದವನಾಗಿದ್ದ ಹಾಗೂ ಅತಿಯಾದ ಆತ್ಮರತಿ ಗುಣ ಹೊಂದಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೇವಲ ಮೂರೇ ತಿಂಗಳಲ್ಲಿ ನಿಶ್ಚಿತಾರ್ಥಕ್ಕೆ (Engagement) ಮುಂದಾಗಿದ್ದ ಆತನ ಪ್ರಸ್ತಾಪವನ್ನು ತಾವು ಮುಂದೂಡದೇ ಹೋಗಿದ್ದರೆ, ತಮ್ಮ ಜೀವನ ವಿಚ್ಛೇದನದಲ್ಲಿ ಅಂತ್ಯವಾಗುತ್ತಿತ್ತು ಎಂದು ಅನುಪಮಾ ನೋವು ಹಂಚಿಕೊಂಡಿದ್ದಾರೆ.

‘ಮೂರೇ ತಿಂಗಳಿಗೆ ಮದುವೆಗೆ ಆತುರ’

ತಮ್ಮ ಕಹಿ ಅನುಭವವನ್ನು ನೆನಪಿಸಿಕೊಂಡ ಅನುಪಮಾ, ‘ನಾವು ಪ್ರೀತಿ ಮಾಡಲು ಆರಂಭಿಸಿದ ಮೂರೇ ತಿಂಗಳಿಗೆ ಆತ ನಿಶ್ಚಿತಾರ್ಥದ ಮಾತು ಎತ್ತಿದ್ದ. ಮನೆಯವರನ್ನು ಭೇಟಿ ಮಾಡಿಸಿ, ಯಾವ ಜಾಗದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಬೇಕು ಎಂದು ಚರ್ಚಿಸಲು ಶುರು ಮಾಡಿದ್ದ. ಸಂಬಂಧ ಆರಂಭವಾದ ಮೂರೇ ತಿಂಗಳಿಗೆ ಇಷ್ಟೊಂದು ಆತುರ ಸರಿಯಲ್ಲ ಅನಿಸಿತು. ನನ್ನನ್ನು ಸಂಪೂರ್ಣವಾಗಿ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಹಾಗೂ ನಟನೆಯಿಂದ ದೂರ ತಳ್ಳಲು ಈ ರೀತಿ ಆತುರಪಡುತ್ತಿದ್ದ’ ಎಂದು ಹೇಳಿದ್ದಾರೆ.

‘ಗೋಲ್ಡ್ ಡಿಗ್ಗರ್ ಎಂದವರಿಗೆ ಉತ್ತರ’

ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ ನಟಿ, ‘ನನ್ನನ್ನು ಗೋಲ್ಡ್ ಡಿಗ್ಗರ್ (ಹಣಕ್ಕಾಗಿ ಪ್ರೀತಿಸುವವಳು) ಎಂದು ಕಾಗೆಗಳಂತೆ ಕೂಗಾಡಿದವರಿಗೆ ಒಂದೇ ಮಾತು ಹೇಳಲು ಬಯಸುತ್ತೇನೆ. ಒಂದು ವೇಳೆ ನಾನು ಆ ನಿಶ್ಚಿತಾರ್ಥವನ್ನು ಮುಂದೂಡದೇ ಹೋಗಿದ್ದರೆ, ಇಂದು ನಮ್ಮ ಮದುವೆ ವಿಚ್ಛೇದನದಲ್ಲಿ ಮುಕ್ತಾಯವಾಗುತ್ತಿತ್ತು. ಅದು ಪ್ರೀತಿಯಾಗಿರಲಿಲ್ಲ, ಬದಲಿಗೆ ನನ್ನನ್ನು ನಿಯಂತ್ರಿಸುವ ಹತಾಶೆಯಾಗಿತ್ತು. ಈ ಮದುವೆ ಸರಿಯಲ್ಲ ಎಂಬ ಬಲವಾದ ಭಾವನೆ ನನಗಿತ್ತು’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರೀತಿಯ ಹೆಸರಿನಲ್ಲಿ ಮಾನಸಿಕ ಒತ್ತಡ:

ಸಂಬಂಧದಲ್ಲಿದ್ದಾಗ ತಮಗೆ ನೆಮ್ಮದಿ ಸಿಗಲೇ ಇಲ್ಲ ಎಂದು ಹೇಳಿದ ಅನುಪಮಾ, ‘ಆ ಸಂಬಂಧದಲ್ಲಿದ್ದಷ್ಟು ದಿನ ನನಗೆ ಶಾಂತಿ ಸಿಗಲಿಲ್ಲ. ಬದಲಿಗೆ ಯಾವಾಗಲೂ ಆತಂಕವೇ ಕಾಡುತ್ತಿತ್ತು. ನಮಗೆ ಇನ್ನೂ ವಯಸ್ಸಿದೆ, ಸ್ವಲ್ಪ ಸಮಯ ತಗೊಳ್ಳೋಣ ಅಂತ ನಾನು ಸದಾ ನಿಶ್ಚಿತಾರ್ಥವನ್ನು ಮುಂದೂಡುತ್ತಿದ್ದೆ’ ಎಂದಿದ್ದಾರೆ. ಈ ಸಂದರ್ಶನದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಇದನ್ನೂ ಓದಿ: ಟಾಕ್ಸಿಕ್ ಸಂಬಂಧದ ಕಷ್ಟ ತೆರೆದಿಟ್ಟ ನಟಿ ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಅವರು ಸಂದರ್ಶನದಲ್ಲಿ ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ. ಕಳೆದ ಜುಲೈ ತಿಂಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ತಾವು ಕಂಟ್ರೋಲಿಂಗ್ ರಿಲೇಶನ್‌ಶಿಪ್‌ನಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವ ಬಗ್ಗೆ ಪೋಸ್ಟ್ ಮಾಡುತ್ತಿದ್ದರು. ಈ ಮೊದಲು ನಟ ಧ್ರುವ್ ವಿಕ್ರಮ್ ಜೊತೆ ಅವರು ಆಪ್ತವಾಗಿದ್ದರು ಎಂಬುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version