ಇನ್ಮುಂದೆ ಸರ್ಕಾರಿ ಅಧಿಕಾರಿಗಳು ತಿಂಗಳ ಮೊದಲ ಶನಿವಾರ ಖಾದಿ ಧರಿಸಲೇಬೇಕು: ಕರ್ನಾಟಕ ಸರ್ಕಾರದಿಂದ ಆದೇಶ – Kannada News | Khadi Push in Karnataka: Govt Employees to Wear Khadi Monthly, Get Special Discounts

ಬೆಂಗಳೂರು, ಫೆ.2: ರಾಜ್ಯದ ಖಾದಿ ಬಟ್ಟೆಗಳಿಗೆ (Khadi Push in Karnataka) ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಸರ್ಕಾರ ತನ್ನ ಅಧಿಕಾರಿಗಳಿಗೆ ಹೊಸ ಆದೇಶವೊಂದನ್ನು ನೀಡಿದೆ. ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಡ್ಡಾಯವಾಗಿ ಖಾದಿ ಉಡುಪುಗಳನ್ನು ಧರಿಸಿ ಕಚೇರಿಗೆ ಬರಬೇಕು ಎಂಬ ಆದೇಶವನ್ನು ನೀಡಲಾಗಿದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ಹೇಳಿದೆ. ದೇಶೀಯವಾಗಿ ತಯಾರಿಸಿದ ಖಾದಿ ಬಟ್ಟೆಗಳಿಗೆ ಉತ್ತೇಜನ ನೀಡುವುದು ಮತ್ತು ಖಾದಿ ಗ್ರಾಮೋದ್ಯೋಗ ವಲಯವನ್ನು ಆರ್ಥಿಕವಾಗಿ ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸರ್ಕಾರಿ ನೌಕರರು ಖಾದಿ ಬಟ್ಟೆಗಳನ್ನು ಖರೀದಿಸಲು ಅನುಕೂಲವಾಗುವಂತೆ, ಸರ್ಕಾರಿ ಖಾದಿ ಮಳಿಗೆಗಳಲ್ಲಿ ಈಗಿರುವ ರಿಯಾಯಿತಿಯ ಜೊತೆಗೆ ಹೆಚ್ಚುವರಿಯಾಗಿ 5% ವಿಶೇಷ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಈ ನಿಯಮವನ್ನು ಅಧಿಕೃತವಾಗಿ ಏಪ್ರಿಲ್ 21, 2026ರಂದು (ಸರ್ಕಾರಿ ನೌಕರರ ದಿನಾಚರಣೆ) ಚಾಲನೆ ನೀಡಲಾಗುವುದು ಎಂದು ಹೇಳಲಾಗಿದೆ.ರಕ್ಷಣಾ ಇಲಾಖೆಯ (Military Canteen) ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು MSIL ಮೂಲಕ ಕ್ಯಾಂಟೀನ್ ಸ್ಥಾಪಿಸುವ ಪ್ರಸ್ತಾವನೆಯೂ ಬಜೆಟ್‌ನಲ್ಲಿ ಸೇರುವ ಸಾಧ್ಯತೆಯಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ (KSIC) ವತಿಯಿಂದ ರೇಷ್ಮೆ ಸೀರೆ ಮತ್ತು ಬಟ್ಟೆಗಳ ಖರೀದಿಯ ಮೇಲೆ ಎಲ್ಲಾ ನೌಕರರಿಗೆ ವಿಶೇಷ ರಿಯಾಯಿತಿ ವಿಸ್ತರಿಸಲು ಚರ್ಚಿಸಲಾಗಿದೆ. ಈ ನಿರ್ಧಾರವು ರಾಜ್ಯದ ಸಾವಿರಾರು ನೇಕಾರರಿಗೆ ಮತ್ತು ಖಾದಿ ಉದ್ಯಮಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಪುರುಷ ಉದ್ಯೋಗಿಗಳಿಗೆ ಸೂಚಿಸಲಾದ ಉಡುಪು ಖಾದಿ ಶರ್ಟ್‌ಗಳು, ಪ್ಯಾಂಟ್‌ಗಳು, ಓವರ್‌ಕೋಟ್‌ಗಳು ಮತ್ತು ಇತರ ಔಪಚಾರಿಕ ಉಡುಪುಗಳನ್ನು ಧರಿಸಬಹುದು, ಮಹಿಳಾ ಉದ್ಯೋಗಿಗಳು ಖಾದಿ ರೇಷ್ಮೆ ಸೀರೆಗಳು, ಚೂಡಿದಾರ್‌ಗಳು ಮತ್ತು ಇತರ ಔಪಚಾರಿಕ ಉಡುಪುಗಳನ್ನು ಧರಿಸಬಹುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಂತು ಹೋಗಿದ್ದ ಬಿಗ್ ಬಜೆಟ್ ಚಿತ್ರ ಕೈಗೆತ್ತಿಕೊಂಡ ರಿಷಬ್? ನಟನೆಯ ಜೊತೆಗೆ ನಿರ್ದೇಶನ – Kannada News | Rishab Shetty Revives Stalled Big Budget Film? Directing and Acting in Randamoozham

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಗೆಲುವಿನ ಬಳಿಕ ಬ್ರೇಕ್ ಪಡೆದಿದ್ದಾರೆ. ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಈಗ ರಿಷಬ್ ಶೆಟ್ಟಿ ಅವರು ನಟನೆಯ ಕಡೆ ಗಮನ ಹರಿಸುತ್ತಿದ್ದಾರೆ. ಒಪ್ಪಿಕೊಂಡ ಸಿನಿಮಾಗಳ ಶೂಟ್​​ನ ಅವರು ಪೂರ್ಣಗೊಳಿಸಬೇಕಿದೆ. ಈ ಮಧ್ಯೆ ಅವರು ಹೊಸ ಸಿನಿಮಾ ಕೈಗೆತ್ತಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಅದು ಕೂಡ ನಿಂತು ಹೋದ ಬಿಗ್ ಬಜೆಟ್ ಚಿತ್ರ ಎಂಬ ವದಂತಿ ಹರಿದಾಡಿದೆ.

ಮಲಯಾಳಂ ಚಿತ್ರರಂಗದಲ್ಲಿ ‘ರಂಡಮೂಳಂ’ ಎಂಬ ಸಿನಿಮಾ ಸೆಟ್ಟೇರಬೇಕಿತ್ತು. ಎಂಟಿ ವಾಸುದೇವ್ ನಾಯರ್ ಬರೆದ ‘ರಂಡಮೂಳಂ’ ಕಾದಂಬರಿಯನ್ನು ಆಧರಿಸಿ ಸಿನಿಮಾ ಸಿದ್ಧಗೊಳ್ಳಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಿರಲಿಲ್ಲ. ಈಗ ಇದಕ್ಕೆ ರಿಷಬ್ ಶೆಟ್ಟಿ ಅವರು ಮರುಜೀವ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಅವರೇ ನಿರ್ದೇಶನ ಮಾಡಲಿದ್ದು, ನಟನೆ ಕೂಡ ಅವರದ್ದೇ ಎಂದು ಮಲಯಾಳಂನ ‘ಮಾತೃಭೂಮಿ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಮೊದಲು ‘ರಂಡಮೂಳನ್’ ಕಥೆಯನ್ನು ಸಿನಿಮಾ ಮಾಡುವ ಸಾಕಷ್ಟು ಪ್ರಯತ್ನಗಳು ನಡೆದವು. ಸಾಕಷ್ಟು ದೊಡ್ಡ ನಿರ್ಮಾಣ ಸಂಸ್ಥೆಗಳು ಇದನ್ನು ಮಾಡಲು ಆಸಕ್ತಿ ತೋರಿಸಿ ಸುಮ್ಮನಾದರು. ನಿರ್ದೇಶಕ ಶ್ರೀಕುಮಾರ್ ಮೆನನ್ ಕಾಂಟ್ರ್ಯಾಕ್ಟ್ ಕೂಡ ಸಹಿ ಮಾಡಿದ್ದರು. ಆದರೆ, ಅವರು ಸಿನಿಮಾದಿಂದ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ: ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ರಿಷಬ್ ಶೆಟ್ಟಿ

ಎಂ.ಟಿ. ವಾಸುದೇವನ್ ನಾಯರ್ ಅವರ ಪುತ್ರಿ ಅಶ್ವತಿ ಇತ್ತೀಚೆಗೆ ಒಂದು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದರು. ‘ಕಳೆದ ಎರಡು ವರ್ಷಗಳ ಹಿಂದೆ ನಾನು ಈ ಪ್ರಾಜೆಕ್ಟ್​​ನ ಕೈಗೆತ್ತಿಕೊಂಡಿದ್ದೇನೆ ಮತ್ತು ಸಂಪೂರ್ಣವಾಗಿ ನನ್ನನ್ನು ನಾಉ ತೊಡಗಿಸಿಕೊಂಡಿದ್ದೇನೆ. ಇದು ಒಂದು ದೊಡ್ಡ ತಂಡ. ತಂಡ ಕಟ್ಟುವ ಕೆಲಸ ಬಹುತೇಕ ಪೂರ್ಣಗೊಂಡಿದೆ’ ಎಂದು ಹೇಳಿದ್ದರು. ‘ಒಂದು ದೊಡ್ಡ ನಿರ್ಮಾಣ ಸಂಸ್ಥೆ ಮತ್ತು ಈ ಚಿತ್ರವನ್ನು ಚೆನ್ನಾಗಿ ನಿರ್ಮಿಸುವ ಸಾಮರ್ಥ್ಯವಿರುವ ತಂಡವಿದೆ’ ಎಂದಿದ್ದರು ಅವರು. ಈ ತಂಡದ ಕ್ಯಾಪ್ಟನ್ ರಿಷಬ್ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ: ಸುಪ್ರೀಂಕೋರ್ಟ್​​ನಲ್ಲಿ ಕರ್ನಾಟಕಕ್ಕೆ ಹಿನ್ನಡೆ – Kannada News | Pennar River Water Dispute Between Karnataka and Tamil Nadu: Supreme Court Orders Tribunal

ನವದೆಹಲಿ, ಫೆಬ್ರವರಿ 02: ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್​​ ಮಹತ್ವದ ಆದೇಶ ನೀಡಿದ್ದು, ನ್ಯಾಯಾಧೀಕರಣ ರಚನೆಗೆ ಸೂಚಿಸಿದೆ. ಈ ಬಗ್ಗೆ ತೀರ್ಪು ನೀಡಿರುವ ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ.ಎನ್.ವಿ. ಅಂಜಾರಿಯಾ ಪೀಠ, 1 ತಿಂಗಳ ಒಳಗೆ ನ್ಯಾಯಾಧೀಕರಣ ರಚನೆ ಮಾಡುವಂತೆ ಕೇಂದ್ರಕ್ಕೆ ತಿಳಿಸಿದೆ. ಕಳೆದ ಡಿಸೆಂಬರ್​​ನಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್​​ ತೀರ್ಪನ್ನು ಕಾಯ್ದಿರಿಸಿತ್ತು.

ಕರ್ನಾಟಕದ ವಾದ ಪುರಸ್ಕರಿಸದ ಕೋರ್ಟ್

ಇನ್ನು ನ್ಯಾಯಾಧೀಕರಣ ರಚನೆಗೆ ಆದೇಶಿಸುವ ಮೂಲಕ ಕರ್ನಾಟಕ ಸರ್ಕಾರದ ವಾದವನ್ನು ಕೋರ್ಟ್ ತಿರಸ್ಕರಿಸಿದೆ. ನ್ಯಾಯಾಧೀಕರಣ ರಚನೆ ಬೇಡ, ಮಾತುಕತೆ ಮೂಲಕ ವಿವಾದ ಬಗೆಹರಿಸುಕೊಳ್ಳುತ್ತೇವೆ ಎಂದು ಕರ್ನಾಟಕ ಹೇಳಿತ್ತು. ಆದರೆ ನ್ಯಾಯಾಧೀಕರಣ ರಚಿಸುವಂತೆ ತಮಿಳುನಾಡು ವಾದಿಸಿತ್ತು. ತಮಿಳುನಾಡು ಸರ್ಕಾರದ ವಾದ ಪುರಸ್ಕರಿಸಿರುವ ಸುಪ್ರೀಂಕೋರ್ಟ್​​ ಈ ಬಗ್ಗೆ ಆದೇಶ ಪ್ರಕಟಿಸಿದೆ.

ಇದನ್ನೂ ಓದಿ: ಎಲ್ಲ ಶಾಲೆಗಳಲ್ಲಿ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ ನೀಡುವುದು ಕಡ್ಡಾಯ; ಸುಪ್ರೀಂ ಕೋರ್ಟ್ ಆದೇಶ

ವಿವಾದ ಏನು?

ಪೆನ್ನಾರ್ ನದಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕದಿಂದ ಚೆಕ್ ಡ್ಯಾಮ್‌ಗಳು ಮತ್ತು ಜಲಾಶಯಗಳ ನಿರ್ಮಾಣಕ್ಕೆ ನೆರೆ ರಾಜ್ಯ ತಮಿಳುನಾಡು ಆಕ್ಷೇಪಿಸಿತ್ತು. ಇದು ತಮಿಳುನಾಡಿನ ಉತ್ತರ ಜಿಲ್ಲೆಗಳಾದ ಕೃಷ್ಣಗಿರಿ, ಧರ್ಮಪುರಿ ಮುಂತಾದ ಕಡೆ ನೀರಿನ ಹರಿವನ್ನು ಕುಂಠಿತಗೊಳಿಸುತ್ತದೆ ಎಂದು ವಾದಿಸಿತ್ತು. 1892ರ ಮೈಸೂರು-ಮದ್ರಾಸ್ ಒಪ್ಪಂದದ ಪ್ರಕಾರ, ಕರ್ನಾಟಕವು ಕೆಳಭಾಗದ ರಾಜ್ಯದ ಅನುಮತಿಯಿಲ್ಲದೆ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ ಎಂದು ತಮಿಳುನಾಡು ಪ್ರತಿಪಾದಿಸಿತ್ತು. ಆದರೆ ಇದಕ್ಕೆ ಕೌಂಟರ್​ ಕೊಟ್ಟಿದ್ದ ಕರ್ನಾಟಕ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಈ ಯೋಜನೆಗಳು ಇರುವುದರಿಂದ 1892ರ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ ಮತ್ತು ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಬಳಸುವ ಹಕ್ಕಿದೆ ಎಂದು ಹೇಳಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:15 pm, Mon, 2 February 26

Source link

T20 World Cup 2026: ಭಾರತ ಎ ತಂಡ ಪ್ರಕಟ – Kannada News | India a squad for t20 world cup 2026 warm up match

ಟಿ20 ವಿಶ್ವಕಪ್​ನ ಅಭ್ಯಾಸ ಪಂದ್ಯಗಳಿಗಾಗಿ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರ ತಿಲಕ್ ವರ್ಮಾ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ತಿಲಕ್ ವರ್ಮಾ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ತಿಲಕ್ ವರ್ಮಾ ಇತ್ತೀಚೆಗೆ ಮುಗಿದ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.ವಿಜಯ ಹಝಾರೆ ಪಂದ್ಯದ ವೇಳೆ ವೃಷಣ ತಿರುಚುವಿಕೆಯಿಂದಾಗಿ ತೀವ್ರ ಹೊಟ್ಟೆ ನೋವಿಗೆ ಒಳಗಾಗಿದ್ದ ತಿಲಕ್ ಕೆಲ ದಿನಗಳ ಹಿಂದೆಯಷ್ಟೇ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಯುಎಸ್​ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ತಿಲಕ್ ವರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಅವರು ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ನಾಯಕ ಯಾರು?

ಟಿ20 ವಿಶ್ವಕಪ್​ನ ಅಭ್ಯಾಸ ಪಂದ್ಯಗಳಲ್ಲಿ ಭಾರತ ಎ ತಂಡವನ್ನು ಆಯುಷ್ ಬದೋನಿ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಸ್ಟಾರ್ ಬ್ಯಾಟರ್ ಪ್ರಿಯಾಂಶ್ ಆರ್ಯ, ಯುವ ಆಲ್​ರೌಂಡರ್ ರಿಯಾನ್ ಪರಾಗ್ ಹಾಗೂ ಟೀಮ್ ಇಂಡಿಯಾ ಬೌಲರ್​ಗಳಾದ ರವಿ ಬಿಷ್ಣೋಯ್ ಹಾಗೂ ಖಲೀಲ್ ಅಹ್ಮದ್ ಕಾಣಿಸಿಕೊಂಡಿದ್ದಾರೆ.

ಹಾಗೆಯೇ ಕಳೆದ ಕೆಲ ತಿಂಗಳುಗಳಿಂದ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ರಾಜಧಾನಿ ಎಕ್ಸ್​ಪ್ರೆಸ್ ಖ್ಯಾತಿಯ ಮಯಾಂಕ್ ಯಾದವ್ ಕೂಡ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ವಿಕೆಟ್ ಕೀಪರ್​ಗಳಾಗಿ ನಾರಾಯಣ್ ಜಗದೀಸನ್ ಹಾಗೂ ಉರ್ವಿಲ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಅದರಂತೆ ಅಭ್ಯಾಸ ಪಂದ್ಯಗಳಿಗೆ ಭಾರತ ಎ ತಂಡ ಈ ಕೆಳಗಿನಂತಿದೆ…

ಭಾರತ ಎ ತಂಡ: ಆಯುಷ್ ಬದೋನಿ (ನಾಯಕ), ನಮನ್ ಧೀರ್, ಅಶುತೋಷ್ ಶರ್ಮಾ, ಪ್ರಿಯಾಂಶ್ ಆರ್ಯ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಯಾನ್ ಪರಾಗ್, ಮಾನವ್ ಸುತಾರ್, ಅಶೋಕ್ ಶರ್ಮಾ, ಉರ್ವಿಲ್ ಪಟೇಲ್ (ವಿಕೆಟ್ ಕೀಪರ್), ಗುರ್ಜಪ್ನೀತ್ ಸಿಂಗ್, ವಿಪ್ರಾಜ್ ನಿಗಮ್, ರವಿ ಬಿಷ್ಣೋಯ್, ಖಲೀಲ್ ಅಹ್ಮದ್, ಮಯಾಂಕ್ ಯಾದವ್.

ಇದನ್ನೂ ಓದಿ: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಆಘಾತ

ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ:

ದಿನಾಂಕ ಪಂದ್ಯ ಸ್ಥಳ ಪ್ರಾರಂಭ ಸಮಯ
ಫೆಬ್ರವರಿ 2 ಅಫ್ಘಾನಿಸ್ತಾನ್ vs ಸ್ಕಾಟ್ಲೆಂಡ್ ಬೆಂಗಳೂರು (CoE) ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 2 ಭಾರತ ಎ vs ಅಮೆರಿಕ ನವಿ ಮುಂಬೈ ಸಂಜೆ 5:00 ಗಂಟೆಗೆ
ಫೆಬ್ರವರಿ 2 ಕೆನಡಾ vs ಇಟಲಿ ಚೆನ್ನೈ ರಾತ್ರಿ 7:00 ಗಂಟೆಗೆ
ಫೆಬ್ರವರಿ 3 ಶ್ರೀಲಂಕಾ ಎ vs ಒಮಾನ್ ಕೊಲಂಬೊ ಮಧ್ಯಾಹ್ನ 1:00 ಗಂಟೆಗೆ
ಫೆಬ್ರವರಿ 3 ನೆದರ್​ಲೆಂಡ್ಸ್ vs ಝಿಂಬಾಬ್ವೆ ಕೊಲಂಬೊ ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 3 ನೇಪಾಳ vs ಯುಎಇ ಚೆನ್ನೈ ಸಂಜೆ 5:00 ಗಂಟೆಗೆ
ಫೆಬ್ರವರಿ 4 ನಮೀಬಿಯಾ vs ಸ್ಕಾಟ್ಲೆಂಡ್ ಬೆಂಗಳೂರು (CoE) ಮಧ್ಯಾಹ್ನ 1:00 ಗಂಟೆಗೆ
ಫೆಬ್ರವರಿ 4 ಅಫ್ಘಾನಿಸ್ತಾನ್ vs ವೆಸ್ಟ್ ಇಂಡೀಸ್ ಬೆಂಗಳೂರು (CoE) ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 4 ಐರ್ಲೆಂಡ್ vs ಪಾಕಿಸ್ತಾನ್ ಕೊಲಂಬೊ ಸಂಜೆ 5:00 ಗಂಟೆಗೆ
ಫೆಬ್ರವರಿ 4 ಭಾರತ vs ಸೌತ್ ಆಫ್ರಿಕಾ ನವಿ ಮುಂಬೈ ರಾತ್ರಿ 7:00 ಗಂಟೆಗೆ
ಫೆಬ್ರವರಿ 5 ಒಮಾನ್ vs ಝಿಂಬಾಬ್ವೆ ಕೊಲಂಬೊ ಮಧ್ಯಾಹ್ನ 1:00 ಗಂಟೆಗೆ
ಫೆಬ್ರವರಿ 5 ಕೆನಡಾ vs ನೇಪಾಳ ಚೆನ್ನೈ ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 5 ಆಸ್ಟ್ರೇಲಿಯಾ vs ನೆದರ್​ಲೆಂಡ್ಸ್​ ಕೊಲಂಬೊ ಸಂಜೆ 5:00 ಗಂಟೆಗೆ
ಫೆಬ್ರವರಿ 5 ನ್ಯೂಝಿಲೆಂಡ್ vs ಅಮೆರಿಕ ನವಿ ಮುಂಬೈ ರಾತ್ರಿ 7:00 ಗಂಟೆಗೆ
ಫೆಬ್ರವರಿ 6 ಇಟಲಿ vs ಯುಎಇ ಚೆನ್ನೈ ಮಧ್ಯಾಹ್ನ 3:00 ಗಂಟೆಗೆ
ಫೆಬ್ರವರಿ 6 ಭಾರತ ಎ vs ನಮೀಬಿಯಾ ಬೆಂಗಳೂರು (CoE) ಸಂಜೆ 5:00 ಗಂಟೆಗೆ

Source link

ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ – Kannada News | 1 Lakh+ Namma Metro Rule Breaches: Bengaluru Metro Launches Etiquette Drive

ಬೆಂಗಳೂರು, ಫೆ.2: ನಮ್ಮ ಮೆಟ್ರೋ (Namma Metro) ಸುಮಾರು ಬಾರಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡುತ್ತ ಬಂದಿದೆ. ಆದರೆ ನಾಗರಿಕರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಸಾರ್ವಜನಿಕ ಪ್ರಜ್ಞೆಯ ಕೊರತೆಯಿಂದಾಗಿ ಕಳೆದ ಒಂದು ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳು ದಾಖಲಾಗಿದೆ.  ಹೌದು ಹೆಡ್‌ಫೋನ್ ಇಲ್ಲದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ಮಾತನಾಡುವುದು, ಮೀಸಲಿಟ್ಟ ಸೀಟ್​​​ನಲ್ಲಿ ಕುಳಿತುಕೊಳ್ಳುವುದು, ಹೀಗೆ ಅನೇಕ ಪ್ರಕರಣಗಳು ವರದಿಯಾಗಿದೆ. ಈ ಬಗ್ಗೆ ಟೈಮ್ಸ್ ನೌ ವರದಿಯನ್ನು ಮಾಡಿದೆ. ಈ ಬಗ್ಗೆ ಒಂದು ಅಭಿಯಾನವನ್ನು ಕೂಡ ಮಾಡಲು ಮೆಟ್ರೋ ಸಿಬ್ಬಂದಿಗಳು ಮುಂದಾಗಿದ್ದಾರೆ. ಪದೇ ಪದೇ ಎಚ್ಚರಿಕೆ ನೀಡಿದ್ರೂ, ಜನ ಮೆಟ್ರೋ ನಿಯಮಗಳನ್ನು ಪಾಲಿಸುತ್ತಿಲ್ಲ.

57,538 ಹೆಡ್‌ಫೋನ್ ಇಲ್ಲದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವ ಪ್ರಕರಣಗಳು ವರದಿಯಾಗಿದೆ. 37,038 ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗಾಗಿ ಇರುವ ಸೀಟುಗಳನ್ನು ಬಿಟ್ಟುಕೊಡದಿರುವ ಪ್ರಕರಣಗಳು ದಾಖಲಾಗಿದೆ. 1,907 ಮೆಟ್ರೋ ರೈಲಿನ ಒಳಗೆ ಆಹಾರ ತಿನ್ನುವುದು ಪ್ರಕರಣಗಳು ದಾಖಲಾಗಿದೆ. 1,677 ರೈಲಿನಲ್ಲಿ ಗುಟ್ಕಾ ಅಥವಾ ಪಾನ್ ಅಗಿಯುವ ಪ್ರಕರಣಗಳು ವರದಿಯಾಗಿದೆ. ಇದೀಗ ಇದನ್ನು ತಪ್ಪಿಸಲು ಪ್ರಯಾಣಿಕರಲ್ಲಿ ‘ಮೆಟ್ರೋ ಶಿಷ್ಟಾಚಾರ’ (Metro Etiquette) ಮೂಡಿಸಲು ಅಭಿಯಾನ ಆರಂಭಿಸಲಾಗಿದೆ.

ಇದನ್ನೂ ಓದಿ: ನನಗೆ ಹಣ್ಣುಗಳೆಂದರೆ ತುಂಬಾ ಇಷ್ಟ ಎಂದ ಶಿಕ್ಷಕಿಗೆ ವಿದ್ಯಾರ್ಥಿಗಳು ಮಾಡಿದ್ದೇನು? ನೋಡಿ

ಪ್ರತಿ ಮೆಟ್ರೋ ರೈಲಿನಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಇವರು ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಜಾಗೃತಿ ಮೂಡಿಸುತ್ತಾರೆ. ಪದೇ ಪದೇ ಎಚ್ಚರಿಸಿದರೂ ನಿಯಮ ಮೀರಿದರೆ ‘ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002’ ರ ಅಡಿಯಲ್ಲಿ ದಂಡ ವಿಧಿಸಲಾಗುತ್ತಿದೆ. ಮೆಟ್ರೋ ರೈಲು ಸಾರ್ವಜನಿಕ ಆಸ್ತಿಯಾಗಿದ್ದು, ಸಹ-ಪ್ರಯಾಣಿಕರಿಗೆ ತೊಂದರೆಯಾಗದಂತೆ ವರ್ತಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವಾಗಿ ಸೀಟು ಬಿಟ್ಟುಕೊಡುವ ವಿಚಾರದಲ್ಲಿ ಮತ್ತು ಶಬ್ದ ಮಾಡದಂತೆ ಎಚ್ಚರಿಕೆ ವಹಿಸಲು ಹೇಳಿದ್ದಾರೆ.

ನಮ್ಮ ಮೆಟ್ರೋ ದಂಡದ ದರ

ರೈಲಿನ ಒಳಗಿರುವಾಗ ಯಾರಾದರೂ ಗುಟ್ಕಾ ತಿನ್ನುತ್ತಿದ್ದರೆ ಅಥವಾ ಅತಿಯಾದ ಅಶಿಸ್ತು ತೋರುತ್ತಿದ್ದರೆ, ಪ್ರತಿ ಬಾಗಿಲಿನ ಪಕ್ಕದಲ್ಲಿರುವ ‘Emergency Talkback’ ಬಟನ್ ಒತ್ತಿ ನೇರವಾಗಿ ರೈಲು ಚಾಲಕನ ಜೊತೆ ಮಾತನಾಡಬಹುದು. ಅವರು ಮುಂದಿನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. ನೀವು ಯಾವುದೇ ಸಮಯದಲ್ಲಿ ಈ ಸಹಾಯವಾಣಿ 1800-425-12345 (ಟೋಲ್ ಫ್ರೀ ಸಂಖ್ಯೆ) ಅಥವಾ 080-23019111 ಗೆ ಕರೆ ಮಾಡಿ ದೂರು ನೀಡಬಹುದು.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ಯಾಕ್ಸ್ ಪಾಲು ಕರ್ನಾಟಕಕ್ಕೆ ಅತಿಹೆಚ್ಚು ಏರಿಕೆ ಆಗಿದ್ದು ಯಾಕೆ? ಇಲ್ಲಿದೆ ಕಾರಣ, ಮತ್ತು ವಿವಿಧ ರಾಜ್ಯಗಳ ತೆರಿಗೆ ಪಟ್ಟಿ – Kannada News | Tax devolution formula of 16th Finance Commission, how Karnataka and other southern states gain the most

ನವದೆಹಲಿ, ಫೆಬ್ರುವರಿ 2: ನಿನ್ನೆಯ ಬಜೆಟ್​ನಲ್ಲಿ (Union Budget 2026) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 16ನೇ ಹಣಕಾಸು ಆಯೋಗದ ಶಿಫಾರಸ್ಸನ್ನು (16th Finance Commission) ಸರ್ಕಾರ ಒಪ್ಪಿರುವುದಾಗಿ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಲಂಬ ತೆರಿಗೆ ಹಂಚಿಕೆ ಸೂತ್ರದ ಪ್ರಕಾರ ಶೇ. 41ರಷ್ಟು ತೆರಿಗೆ ರಾಜ್ಯಗಳಿಗೆ ನೀಡಲಾಗುತ್ತದೆ. ಇದು 15ನೇ ಹಣಕಾಸು ಆಯೋಗದ ಶಿಫಾರಸ್ಸನ್ನೇ ಪುನರುಚ್ಚರಿಸಿದೆ. ಆದರೆ, ಈ ತೆರಿಗೆಯನ್ನು ರಾಜ್ಯ ರಾಜ್ಯಗಳ ನಡುವೆ ಹಂಚಿಕೆ ಮಾಡುವ ಸಮ ತೆರಿಗೆ ಹಂಚಿಕೆ ಸೂತ್ರದಲ್ಲಿ ಬದಲಾವಣೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಶುಭ ಸುದ್ದಿ ಇದೆ. 15ನೇ ಹಣಕಾಸು ಆಯೋಗದಿಂದ ಶೇ. 3.647 ಪಾಲು ಪಡೆದಿದ್ದ ಕರ್ನಾಟಕದ ಪಾಲು ಈ ಬಾರಿ 4.13ಕ್ಕೆ ಏರಿದೆ. ಎಲ್ಲಾ ದಕ್ಷಿಣ ರಾಜ್ಯಗಳ ಪಾಲೂ ಏರಿಕೆ ಆಗಿರುವುದು ಗಮನಾರ್ಹ.

16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಗಳ ಪಾಲು

  1. ಉತ್ತರಪ್ರದೇಶ: ಶೇ 17.6
  2. ಬಿಹಾರ: ಶೇ. 9.9
  3. ಮಧ್ಯಪ್ರದೇಶ: ಶೇ. 7.35
  4. ಪಶ್ಚಿಮ ಬಂಗಾಳ: ಶೇ. 7.2
  5. ಮಹಾರಾಷ್ಟ್ರ: ಶೇ. 6.44
  6. ರಾಜಸ್ಥಾನ: ಶೇ. 5.9
  7. ಒಡಿಶಾ: ಶೇ. 4.33
  8. ಆಂಧ್ರಪ್ರದೇಶ: ಶೇ. 4.21
  9. ಕರ್ನಾಟಕ: ಶೇ. 4.13
  10. ತಮಿಳುನಾಡು: ಶೇ. 4.09
  11. ಅಸ್ಸಾಮ್: ಶೇ. 3.26
  12. ಗುಜರಾತ್: ಶೇ. 3.75
  13. ಜಾರ್ಖಂಡ್: ಶೇ. 3.36
  14. ಕೇರಳ: ಶೇ. 2.38
  15. ತೆಲಂಗಾಣ: ಶೇ. 2.17
  16. ಪಂಜಾಬ್: ಶೇ. 1.9
  17. ಅರುಣಾಚಲಪ್ರದೇಶ: ಶೇ. 1.6
  18. ಹರ್ಯಾಣ: ಶೇ. 1.36
  19. ಉತ್ತರಾಖಂಡ್: ಶೇ. 1.1
  20. ಹಿಮಾಚಲಪ್ರದೇಶ: ಶೇ 0.9
  21. ಮೇಘಾಲಯ: ಶೇ. 0.75
  22. ಮಣಿಪುರ್: ಶೇ. 0.70
  23. ತ್ರಿಪುರ: ಶೇ. 0.70
  24. ನಾಗಾಲ್ಯಾಂಡ್: ಶೇ. 0.55
  25. ಮಿಝೋರಾಂ: ಶೇ. 0.48
  26. ಸಿಕ್ಕಿಂ: ಶೇ. 0.38
  27. ಗೋವಾ: ಶೇ. 0.37

ಇದನ್ನೂ ಓದಿ: 16ನೇ ಹಣಕಾಸು ಆಯೋಗದ ಸೂತ್ರದಡಿ ಕರ್ನಾಟಕಕ್ಕೆ ಅತಿ ಹೆಚ್ಚು ಲಾಭ; ರಾಜ್ಯಕ್ಕೆ 63,050 ಕೋಟಿ ರೂ. ತೆರಿಗೆ ಪಾಲು

15ನೇ ಹಣಕಾಸು ಆಯೋಗಕ್ಕಿಂತ 16ನೆಯದ್ದರ ಸೂತ್ರದ್ದು ಏನು ಭಿನ್ನ?

ಅಧಿಕ ತೆರಿಗೆ ಆದಾಯ ಸೃಷ್ಟಿಸುವ ರಾಜ್ಯಗಳು ತಮಗೆ ತೆರಿಗೆ ಹಂಚಿಕೆಯಲ್ಲಿ ತೀರಾ ಕಡಿಮೆ ಸಿಗುತ್ತಿದೆ ಎಂದು ಹಲವಾರು ವರ್ಷಗಳಿಂದ ಟೀಕಿಸುತ್ತಾ ಬರುತ್ತಿದ್ದವು. 16ನೇ ಹಣಕಾಸು ಆಯೋಗದ ಅಧಿಕಾರಿಗಳು ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚಿಸಿ, ಸೂತ್ರದಲ್ಲಿ ತುಸು ಬದಲಾವಣೆ ಮಾಡಿದೆ. ಸೂತ್ರದ ಲೆಕ್ಕಾಚಾರಕ್ಕೆ ಜಿಡಿಪಿ ಅಂಶವನ್ನು ಸೇರಿಸಲಾಗಿದೆ. ಜಿಡಿಪಿಗೆ ಶೇ. 10 ವೈಟೇಜ್ ನೀಡಲಾಗಿದೆ. ಇದರಿಂದ ಅಧಿಕ ಜಿಡಿಪಿ ಇರುವ ದಕ್ಷಿಣದ ರಾಜ್ಯಗಳು, ಮಹಾರಾಷ್ಟ್ರ ಮೊದಲಾದವಕ್ಕೆ ತೆರಿಗೆ ಪಾಲು ಹೆಚ್ಚಿದೆ.

ಕರ್ನಾಟಕ ಕೇಳಿದಷ್ಟು ಸಿಕ್ಕಿದೆಯಾ ತೆರಿಗೆ ಪಾಲು?

2015ರಿಂದ 2020ರವರೆಗೂ ಚಾಲನೆಯಲ್ಲಿದ್ದ 14ನೇ ಹಣಕಾಸು ಆಯೋಗವು ರಾಜ್ಯಗಳಿಗೆ ನೀಡಿದ ತೆರಿಗೆ ಹಂಚಿಕೆ ಸೂತ್ರದ ಪ್ರಕಾರ ಕರ್ನಾಟಕಕ್ಕೆ ಶೇ. 4.71 ಪಾಲು ನೀಡಲಾಗಿತ್ತು. ಆದರೆ, 15ನೇ ಹಣಕಾಸು ಆಯೋಗವು ಅದನ್ನು ಶೇ. 3.647ಕ್ಕೆ ಇಳಿಸಿತ್ತು. ಬಹುತೇಕ ಎಲ್ಲಾ ದಕ್ಷಿಣ ರಾಜ್ಯಗಳಿಗೂ ಇದೇ ರೀತಿಯ ಹಣೆಬರಹ ಬರೆಯಲಾಗಿತ್ತು. ಕರ್ನಾಟಕ ಪದೇ ಪದೇ ತಕರಾರು ಎತ್ತುತ್ತಿದ್ದುದು ಇದೇ ವಿಚಾರಕ್ಕೆ.

ತೆರಿಗೆ ಪಾಲನ್ನು 14ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಹಾಕಿ ಎಂಬುದು ಕರ್ನಾಟಕದ ಆಗ್ರಹವಾಗಿತ್ತು. ಕರ್ನಾಟಕಕ್ಕೆ ಈ ಹಿಂದೆ ಇದ್ದ ಶೇ. 4.71 ಪಾಲನ್ನು ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. 16ನೇ ಹಣಕಾಸು ಆಯೋಗವು ಕರ್ನಾಟಕ್ಕೆ ತೆರಿಗೆ ಪಾಲನ್ನು ಶೇ. 3.647ರಿಂದ ಶೇ. 4.13ಕ್ಕೆ ಏರಿಸಿದೆ.

ಕೇಂದ್ರದಿಂದ ರಾಜ್ಯಗಳಿಗೆ ಯಾವ್ಯಾವ ತೆರಿಗೆಗಳು ಸಿಗುತ್ತವೆ?

  • ಕಾರ್ಪೊರೇಶನ್ ಟ್ಯಾಕ್ಸ್
  • ಆದಾಯ ತೆರಿಗೆ
  • ಸೆಂಟ್ರಲ್ ಜಿಎಸ್​ಟಿ
  • ಕಸ್ಟಮ್ಸ್
  • ಕೇಂದ್ರ ಅಬಕಾರಿ ಸುಂಕ

ಮೇಲಿನ ಈ ಎಲ್ಲಾ ತೆರಿಗೆಗಳನ್ನು ಪಡೆಯುವ ಕೇಂದ್ರ ಸರ್ಕಾರ, ಇದರಲ್ಲಿ ಶೇ. 41ರಷ್ಟನ್ನು ರಾಜ್ಯಗಳಿಗೆ ಹಂಚುತ್ತದೆ.

ಜಿಎಸ್​ಟಿಯ ಭಾಗವಾಗಿರುವ ಎಸ್​ಜಿಎಸ್​ಟಿ ಸಂಪೂರ್ಣವಾಗಿ ಆಯಾ ರಾಜ್ಯಗಳಿಗೆ ಹೋಗುತ್ತದೆ. ಅಂತರರಾಜ್ಯ ವಹಿವಾಟು ವೇಳೆ ಸಂಗ್ರಹವಾಗುವ ಐಜಿಎಸ್​ಟಿ ಅದರದ್ದೇ ಸೂತ್ರದೊಂದಿಗೆ ಎರಡು ರಾಜ್ಯಗಳ ನಡುವೆ ಹಂಚಿಕೆ ಆಗುತ್ತದೆ. ಕೇಂದ್ರಕ್ಕೆ ಹೋಗುವ ಸಿಜಿಎಸ್​ಟಿಯನ್ನು ಮಾತ್ರ ರಾಜ್ಯಗಳ ತೆರಿಗೆ ಹಂಚಿಕೆಗೆ ಬಳಸಲಾಗುತ್ತದೆ.

ಇದನ್ನೂ ಓದಿ: ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್

2026-27ರಲ್ಲಿ ಕೇಂದ್ರದಿಂದ ವಿವಿಧ ರಾಜ್ಯಗಳಿಗೆ ಸಿಗಬಹುದಾದ ತೆರಿಗೆ ಹಣ (ಅಂದಾಜು)

  1. ಉತ್ತರಪ್ರದೇಶ: 2,68,928.38 ಕೋಟಿ ರೂ
  2. ಬಿಹಾರ: 1,51,841.75 ಕೋಟಿ ರೂ
  3. ಮಧ್ಯಪ್ರದೇಶ: 1,12,141.28 ಕೋಟಿ ರೂ
  4. ಪಶ್ಚಿಮ ಬಂಗಾಳ: 1,10,126.49 ಕೋಟಿ ರೂ
  5. ಮಹಾರಾಷ್ಟ್ರ: 98,312.5 ಕೋಟಿ ರೂ
  6. ರಾಜಸ್ಥಾನ: 90,451.78 ಕೋಟಿ ರೂ
  7. ಒಡಿಶಾ: 67,464.88 ಕೋಟಿ ರೂ
  8. ಆಂಧ್ರಪ್ರದೇಶ: 64,366.38 ಕೋಟಿ ರೂ
  9. ಕರ್ನಾಟಕ: 63,053.71 ಕೋಟಿ ರೂ
  10. ತಮಿಳುನಾಡು: 62,534.75 ಕೋಟಿ ರೂ
  11. ಗುಜರಾತ್: 57,314.62 ಕೋಟಿ ರೂ
  12. ಜಾರ್ಖಂಡ್: 51,239.73 ಕೋಟಿ ರೂ
  13. ಛತ್ತೀಸ್​ಗಡ್: 50,430.75 ಕೋಟಿ ರೂ
  14. ಅಸ್ಸಾಮ್: 49,728.63 ಕೋಟಿ ರೂ
  15. ಕೇರಳ: 36,357.77 ಕೋಟಿ ರೂ
  16. ತೆಲಂಗಾಣ: 33,182.95 ಕೋಟಿ ರೂ
  17. ಪಂಜಾಬ್: 30,466.05 ಕೋಟಿ ರೂ
  18. ಹರ್ಯಾಣ: 20,773.68 ಕೋಟಿ ರೂ
  19. ಅರುಣಾಚಲಪ್ರದೇಶ: 20,666.83 ಕೋಟಿ ರೂ
  20. ಉತ್ತರಾಖಂಡ್: 17,415.71 ಕೋಟಿ ರೂ
  21. ಹಿಮಾಚಲಪ್ರದೇಶ: 13,950.88 ಕೋಟಿ ರೂ
  22. ತ್ರಿಪುರಾ: 9,783.92 ಕೋಟಿ ರೂ
  23. ಮೇಘಾಲಯ: 9,631.3 ಕೋಟಿ ರೂ
  24. ಮಣಿಪುರ್: 9,554.99 ಕೋಟಿ ರೂ
  25. ಮಿಜೋರಾಂ: 8,608.64 ಕೋಟಿ ರೂ
  26. ನಾಗಾಲ್ಯಾಂಡ್: 7,341.76 ಕೋಟಿ ರೂ
  27. ಗೋವಾ: 5,571.2 ಕೋಟಿ ರೂ
  28. ಸಿಕ್ಕಿಂ: 5,113.29 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಆಘಾತ – Kannada News | Josh Hazelwood is likely to miss the early phase of the ICC T20 World Cup 2026

ಟಿ20 ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ಕ್ಯಾಮರೋನ್ ಗ್ರೀನ್, ನಾಥನ್ ಎಲ್ಲಿಸ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಟ್ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ರೆನ್‌ಶಾ, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.

Source link

ಸುಳ್ವಾಡಿಯಲ್ಲಿ ಭಾರೀ ದುರಂತ: ಫ್ಲೋರೈಡ್ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ, ಜನರಲ್ಲಿ ಆರೋಗ್ಯ ಸಮಸ್ಯೆಗಳ ಸರಮಾಲೆ – Kannada News | Fluoride Water Tragedy in Chamarajanagar: 47 Suffer Kidney Failure in Sulvadi Martalli Villages

‘ಟಿವಿ9’ ಜತೆ ಅಳಲು ತೋಡಿಕೊಂಡ ಗ್ರಾಮಸ್ಥರುImage Credit source: tv9

ಚಾಮರಾಜನಗರ, ಫೆಬ್ರವರಿ 2: ಫ್ಲೋರೈಡ್ ಮಿಶ್ರಿತ ಕುಡಿಯುವ ನೀರಿನಿಂದಾಗಿ (Fluoride-contaminated water) ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಹಾಗೂ ಸುಳ್ವಾಡಿ ಗ್ರಾಮಗಳ 47 ಜನರಿಗೆ ಕಿಡ್ನಿ ವೈಫಲ್ಯ ಸಂಭವಿಸಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಅಷ್ಟೇ ಅಲ್ಲದೆ, ಈ ಗ್ರಾಮಗಳ ಹತ್ತಾರು ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ‘ಟಿವಿ9’ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಬೆಳಕಿಗೆ ಬಂದಿದೆ. ಮಾರ್ಟಳ್ಳಿ–ಸುಳ್ವಾಡಿ ಗ್ರಾಮಗಳಲ್ಲಿ ಕಳೆದ 30 ವರ್ಷಗಳಿಂದ ಗ್ರಾಮ ಪಂಚಾಯ್ತಿ ಮೂಲಕ ಸರಬರಾಜಾಗುತ್ತಿರುವ ನೀರನ್ನೇ ಕುಡಿಯುತ್ತಿರುವ ಜನರು ಇಂದು ಕಿಡ್ನಿ ವೈಫಲ್ಯ, ಥೈರಾಯ್ಡ್, ಹೈಪರ್ ಟೆನ್ಷನ್, ಸಂದಿವಾತ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಎರಡು ಗ್ರಾಮಗಳಲ್ಲಿ ಈಗಾಗಲೇ 47 ಮಂದಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಪ್ರಚುರಪಡಿಸಿದೆ.

ಗ್ರಾಮದಲ್ಲಿ ಅಂತರ್ಜಲದ ತೀವ್ರ ಕೊರತೆಯಿದ್ದು, ಲಭ್ಯವಾಗುತ್ತಿರುವ ನೀರು ಫ್ಲೋರೈಡ್ ಪ್ರಮಾಣ ಅಧಿಕವಾಗಿರುವುದೇ ಆರೋಗ್ಯ ಹಾನಿಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಈ ನೀರನ್ನು ಸೇವಿಸುವುದರಿಂದ ಅನೇಕ ಗ್ರಾಮಸ್ಥರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಆರೋಗ್ಯದ ಮೇಲೆ ಬೀರಿರುವ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತಿದೆ.

ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರಿಗೂ ಆಗಿತ್ತು ಕಿಡ್ನಿ ವೈಫಲ್ಯ

ಅನೇಕ ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೂ ಈ ಪ್ರದೇಶದ ವಿಷಕಾರಿ ನೀರು ಪರಿಣಾಮ ಬೀರಿತ್ತು. ವೀರಪ್ಪನ್‌ನನ್ನು ಸೆರೆ ಹಿಡಿಯಲು ಕರ್ನಾಟಕ ಪೊಲೀಸರು ಮಾರ್ಟಳ್ಳಿ ಗ್ರಾಮದಲ್ಲಿ ಕ್ಯಾಂಪ್ ಹಾಕಿದ್ದ ಸಂದರ್ಭದಲ್ಲಿ, ಇಬ್ಬರು ಪೊಲೀಸರಿಗೆ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತ್ತು. ಆ ವೇಳೆ ನಡೆದ ಪರಿಶೀಲನೆಯಲ್ಲಿ ಗ್ರಾಮದಲ್ಲಿ ಬಳಕೆಯಾಗುತ್ತಿದ್ದ ನೀರಿನಲ್ಲಿ ಅಧಿಕ ಪ್ರಮಾಣದ ಫ್ಲೋರೈಡ್ ಅಂಶ ಇರುವ ವಿಚಾರ ಬಯಲಾಗಿತ್ತು ಎನ್ನಲಾಗಿದೆ.

ಇಷ್ಟಾದರೂ ಜಿಲ್ಲಾಡಳಿತದಿಂದ ಶುದ್ಧ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಶುದ್ಧ ನೀರಿಗಾಗಿ ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ದಾರಿ ಇಲ್ಲದೆ ತಿಂಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಟ್ಯಾಂಕರ್ ನೀರು ತರಸಿಕೊಳ್ಳುವ ಸ್ಥಿತಿಗೆ ಗ್ರಾಮಸ್ಥರು ತಲುಪಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಪೊಲೀಸರಿಗೆ ದೊಡ್ಡ ತಲೆನೋವಾದ ಕೇರಳಿಯನ್ ಮಲ್ಲು ದರೋಡೆ ಗ್ಯಾಂಗ್

‘ಟಿವಿ9’ ನಡೆಸಿದ ಗ್ರೌಂಡ್ ರಿಯಾಲಿಟಿ ಚೆಕ್‌ನಿಂದಾಗಿ ಗ್ರಾಮಸ್ಥರ ಬದುಕಿನ ಕಟು ಸತ್ಯ ಅನಾವರಣಗೊಂಡಿದೆ. ಫ್ಲೋರೈಡ್ ನೀರು ಮತ್ತು ಆಡಳಿತದ ವೈಫಲ್ಯ ಒಟ್ಟಾಗಿ ಜನರ ಜೀವಕ್ಕೆ ಮಾರಕವಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕೂಡಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸುವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಡೀಪುರ, ನಾಗರಹೊಳೆಯಲ್ಲಿ ನಡೆಯಲಿದೆ ಭಾರತದ ಮೊದಲ ಅಂತಾರಾಷ್ಟೀಯ ಹುಲಿ ಶೃಂಗಸಭೆ! – Kannada News | International Big Cat Summit from February 9:Bandipur Nagarhole will be hosting

ಬಂಡೀಪುರ, ನಾಗರಹೊಳೆಯಲ್ಲಿ ನಡೆಯಲಿದೆ ಭಾರತದ ಮೊದಲ ಅಂತಾರಾಷ್ಟೀಯ ಹುಲಿ ಶೃಂಗಸಭೆ!
Image Credit source: Christian meerman Photography

ಬೆಂಗಳೂರು, ಫೆಬ್ರುವರಿ 02: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಒಂಬತ್ತನೇ ಕೇಂದ್ರ ಬಜೆಟ್‌ನಲ್ಲಿ ಗ್ಲೋಬಲ್ ಬಿಗ್ ಕ್ಯಾಟ್ ಅಲಯನ್ಸ್ ಯೋಜನೆ ಘೋಷಿಸಿದ ಬೆನ್ನಲ್ಲೇ, ಈ ವರ್ಷದ ಅಂತಾರಾಷ್ಟ್ರೀಯ ಹುಲಿ ಶೃಂಗಸಭೆಯನ್ನು (International Big cat Summit) ಭಾರತದಲ್ಲಿ ಆಯೋಜಿಸಲು ಸಿದ್ಧತೆಗಳು ಜೋರಾಗಿವೆ. ಈ ಮಹತ್ವದ ಕಾರ್ಯಕ್ರಮಕ್ಕೆ ಕರ್ನಾಟಕದ ಬಂಡೀಪುರ (Bandipur) ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ.

5 ದಿನದ ಕಾರ್ಯಾಗಾರದಲ್ಲಿ 18 ದೇಶದ ಪ್ರತಿನಿಧಿಗಳು ಭಾಗಿ

ಫೆಬ್ರುವರಿ 9ರಿಂದ 13ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಸಂಯುಕ್ತವಾಗಿ ಆಯೋಜಿಸುತ್ತಿವೆ. ಇದು ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯಾಗಿದ್ದು, ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆಯ ಕುರತು ಜಾಗತಿಕ ಗಮನ ಸೆಳೆಯುವ ಉದ್ದೇಶ ಹೊಂದಿದೆ.

ಇದನ್ನೂ ಓದಿ ಮೋದಿ ಸಫಾರಿ: ಗಮನ ಸೆಳೆದ ಮೋದಿ ಡ್ರೆಸ್, ಬಂಡೀಪುರ ಲೋಗೋ ಇರುವ ದಿರಿಸು ಚಿತ್ರಗಳಲ್ಲಿ ನೋಡಿ

18 ದೇಶಗಳ ಪ್ರತಿನಿಧಿಗಳು ಹಾಗೂ ದೇಶದ ಎಲ್ಲಾ ರಾಜ್ಯಗಳ ಅರಣ್ಯಾಧಿಕಾರಿಗಳು ಮೊದಲ ಎರಡು ದಿನ ಬಂಡೀಪುರದಲ್ಲಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದು, ಫೆಬ್ರುವರಿ 11 ಮತ್ತು 12ರಂದು ನಾಗರಹೊಳೆಯಲ್ಲಿ ಕಾರ್ಯಕ್ರಮ ಮುಂದುವರಿಯಲಿದೆ. 2023ರಲ್ಲಿ ಮೈಸೂರುನಲ್ಲಿ ಹುಲಿ ಗಣತಿ ವರದಿ ಬಿಡುಗಡೆ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಘೋಷಿಸಿದ್ದರು.

ಸಭೆಯಲ್ಲಿ ಏನೆಲ್ಲಾ ಚರ್ಚೆ?

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದ್ದು, ಚಿರತೆ, ಹಿಮ ಚಿರತೆ ಸೇರಿದಂತೆ ಬಿಗ್ ಕ್ಯಾಟ್‌ಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಕೆ, ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಸಹಕಾರ, ಮತ್ತು ಉತ್ತಮ ಕಾರ್ಯಪದ್ಧತಿಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೊಂದಿಗೆ ಅರಣ್ಯ ನಿವಾಸಿಗಳ ಪುನರ್ವಸತಿ, ಹುಲಿ ವಾಸಸ್ಥಾನಗಳಲ್ಲಿ ಅಭಿವೃದ್ಧಿ ಯೋಜನೆಗಳ ನಿಯಂತ್ರಣ ಹಾಗೂ ಸ್ವತಂತ್ರ ವಿಮರ್ಶೆಗಳಿಗೆ ಅವಕಾಶ ನೀಡಬೇಕೆಂಬ ಅಭಿಪ್ರಾಯವೂ ತಜ್ಞರಿಂದ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:31 pm, Mon, 2 February 26

Source link

ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್; ಕ್ಯೂಟ್ ವಿಡಿಯೋ ವೈರಲ್

ಬೀದರ್ ಮೂಲದ ಪಲ್ಲವಿ ಪಾಂಚಾಲ್ ಅವರು ‘ಕಾಮಿಡಿ ಕಿಲಾಡಿಗಳು ಸೀಸನ್ 5’ ಮೂಲಕ ಗಮನ ಸೆಳೆದರು. ಈಗ ಅವರು ಕಾಮಿಡಿ ಟೈಮಿಂಗ್‌ಗಾಗಿ ಅವರು ಜನಪ್ರಿಯತೆ ಪಡೆದಿದ್ದಾರೆ. ಈಗ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಏರಿದ್ದಾರೆ. ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆಯೋ ರೀತಿಯಲ್ಲಿ ಇತ್ತು. ಡ್ಯಾನ್ಸ್ ಮುಗಿದ ಬಳಿಕ ಪಲ್ಲವಿ ಅವರು ವಿಜಯ್ ರಾಘವೇಂದ್ರ ಜೊತೆ ವಿಡಿಯೋ ಮಾಡಿದ್ದಾರೆ. ಈ ವೇಳೆ ‘ಥ್ಯಾಂಕ್​ ಯೂ ಮಾವ’ ಎಂದು ಕ್ಯೂಟ್ ಆಗಿ ಹೇಳಿದ್ದು, ವಿಡಿಯೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version