ಇಡೀ ದೇಶದ ಜನರು ಇಂದು ರಾತ್ರಿ ಸಾಯುತ್ತಾರೆ; ಗಡುವು ಸಮೀಪಿಸುತ್ತಿದ್ದಂತೆ ಇರಾನ್​ಗೆ ಟ್ರಂಪ್ ಬೆದರಿಕೆ

ಇಡೀ ದೇಶದ ಜನರು ಇಂದು ರಾತ್ರಿ ಸಾಯುತ್ತಾರೆ; ಗಡುವು ಸಮೀಪಿಸುತ್ತಿದ್ದಂತೆ ಇರಾನ್​ಗೆ ಟ್ರಂಪ್ ಬೆದರಿಕೆ

ವಾಷಿಂಗ್ಟನ್, ಏಪ್ರಿಲ್ 7: ಇಸ್ರೇಲ್ ಜೊತೆ ಸೇರಿ ಫೆಬ್ರವರಿ 28ರಂದು ಅಮೆರಿಕ ಇರಾನ್ (Iran War) ಮೇಲೆ ದಾಳಿ ಆರಂಭಿಸಿತ್ತು. ಇರಾನ್​ನ ಸುಪ್ರೀಂ ನಾಯಕನನ್ನು ಕೊಂದು, ಇರಾನ್ ಮೇಲೆ ಡ್ರೋನ್ ದಾಳಿ ನಡೆಸಿದರೆ ಈ ಯುದ್ಧ ಒಂದೆರಡು ದಿನಗಳಲ್ಲೇ ಮುಗಿದು ಹೋಗುತ್ತದೆ ಎಂಬ ಲೆಕ್ಕಾಚಾರ ಟ್ರಂಪ್​ದಾಗಿತ್ತು. ಆದರೆ, ಸುಪ್ರೀಂ ನಾಯಕ ಸೇರಿದಂತೆ ಮಿಲಿಟರಿಯ ಮುಖ್ಯಸ್ಥರನ್ನೆಲ್ಲ ಕಳೆದುಕೊಂಡರೂ ಇರಾನ್ ಕಂಗೆಡದೆ ಅಮೆರಿಕ ಮತ್ತು ಇಸ್ರೇಲ್​ನ ವಾಯುನೆಲೆಗಳನ್ನೆಲ್ಲ ಉಡೀಸ್ ಮಾಡಿತ್ತು. ನಾವು ಸಂಪೂರ್ಣ ನಾಶವಾದರೂ ಪರವಾಗಿಲ್ಲ, ನಮ್ಮ ಶತ್ರುಗಳು ನಮ್ಮ ಅರ್ಧದಷ್ಟಾದರೂ ನಾಶವಾಗಬೇಕೆಂಬ ಹಠ ತೊಟ್ಟ ಇರಾನ್ ಯಾವೆಲ್ಲ ರೀತಿಯಲ್ಲಿ ಸಾಧ್ಯವೋ ಆ ರೀತಿಯಲ್ಲೆಲ್ಲ ವಿಶ್ವದ ದೊಡ್ಡಣ್ಣ ಡೊನಾಲ್ಡ್​ ಟ್ರಂಪ್​ (Donald Trump) ನಿದ್ರೆಗೆಡಿಸಿತ್ತು.

ಈ ಯುದ್ಧ ಶುರುವಾಗಿ ತಿಂಗಳೇ ಕಳೆದರೂ ಮೂರೂ ದೇಶಗಳು ಸುಮ್ಮನಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದರ ನಡುವೆ ಕೊನೆಯ ಅವಕಾಶವಾಗಿ ಕದನವಿರಾಮದ ಒಪ್ಪಂದಕ್ಕೆ ಒಪ್ಪಿಗೆ ನೀಡಲು ಅಮೆರಿಕ ಇರಾನ್​ಗೆ ನೀಡಿದ್ದ ಗಡುವು ಅಮೆರಿಕದ ಕಾಲಮಾನದ ಪ್ರಕಾರ ಇಂದು ರಾತ್ರಿ ಹಾಗೂ ಭಾರತೀಯ ಕಾಲಮಾನದ ಪ್ರಕಾರ ನಾಳೆ ಬೆಳಗ್ಗೆ 5.30ಕ್ಕೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಎಚ್ಚರಿಕೆ ನೀಡಿರುವ ಟ್ರಂಪ್ ಇಂದು ರಾತ್ರಿ ಇರಾನ್​ನ ನಾಗರಿಕರೆಲ್ಲ ಸಾಯಲಿದ್ದಾರೆ. ಇರಾನ್ ಮತ್ತೆ ಎದ್ದುಬರಲು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಒಪ್ಪಂದ, ಶರಣಾಗತಿ ಅಥವಾ ಅತ್ಯಂತ ಮಾರಕ ದಾಳಿ? ಇರಾನ್​ಗೆ ಟ್ರಂಪ್ ಗಡುವು, ವಿನಾಶಕ್ಕೆ ಕ್ಷಣಗಣನೆ

ಇರಾನ್ ವಿರುದ್ಧ ಇದುವರೆಗೆ ಟ್ರಂಪ್ ನೀಡಿದ ಪ್ರಬಲ ಬೆದರಿಕೆಗಳಲ್ಲಿ ಇದು ಒಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್​ ಕದನವಿರಾಮಕ್ಕೆ ಒಪ್ಪದಿದ್ದರೆ ಆಗುವ ವಿನಾಶಕಾರಿ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇಂದು ರಾತ್ರಿ ಇರಾನ್‌ನ ನಾಗರಿಕತೆಯು ಸಂಪೂರ್ಣ ನಾಶವಾಗಬಹುದು ಎಂದು ಬೆದರಿಕೆ ಹಾಕಿದ್ದಾರೆ.

ಟ್ರೂತ್ ಸೋಶಿಯಲ್ ಬಗ್ಗೆ ಟ್ರಂಪ್ ಈ ಬಗ್ಗೆ ಬರೆದಿದ್ದಾರೆ. “ಇಡೀ ನಾಗರಿಕತೆಯು ಇಂದು ರಾತ್ರಿ ಸಾಯುತ್ತದೆ, ಮತ್ತೆಂದೂ ಇರಾನ್​ನ ಜನರು ಹಿಂತಿರುಗುವುದಿಲ್ಲ. ಆ ರೀತಿ ಆಗಬೇಕೆಂದು ನಾನು ಬಯಸುವುದಿಲ್ಲ. ಆದರೆ ಆ ರೀತಿ ಆಗುವ ಸಾಧ್ಯತೆಯೂ ಇಲ್ಲದಿಲ್ಲ” ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಇರಾನ್ ಮುಗಿಸಲು ಒಂದೇ ಒಂದು ರಾತ್ರಿ ಸಾಕು, ಗಡುವು ಮುಗಿಯುವ ಮುನ್ನವೇ ಇರಾನ್​ಗೆ ಟ್ರಂಪ್ ಬೆದರಿಕೆ

“ಇಂದು ರಾತ್ರಿ ಏನಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ರಾತ್ರಿ ಪ್ರಪಂಚದ ದೀರ್ಘ ಮತ್ತು ಸಂಕೀರ್ಣ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕ್ಷಣಗಳಲ್ಲಿ ಒಂದಾಗಲಿದೆ. 47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಅಂತಿಮವಾಗಿ ಕೊನೆಗೊಳ್ಳುತ್ತದೆ. ಇರಾನ್‌ನ ಜನರನ್ನು ದೇವರು ಆಶೀರ್ವದಿಸಲಿ!” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು

ಟೊವಿನೋ ಥಾಮಸ್ (Tovino Thomas) ಹಾಗೂ ಖಯಾದು ಲೋಹರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮಲಯಾಳಂ ಪ್ಯಾನ್ ಇಂಡಿಯಾ ಸಿನಿಮಾ ‘ಪಲ್ಲಿಚಟ್ಟಂಬಿ’ ಇದೇ ವಾರ ಬಿಡುಗಡೆ ಆಗಲಿದ್ದು, ಚಿತ್ರತಂಡವು ದೇಶದ ಪ್ರಮುಖ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡುತ್ತಿದೆ. ‘ಪಲ್ಲಿಚಟ್ಟಂಬಿ’ ಸಿನಿಮಾವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಮ್ಸ್ ವಿತರಣೆ ಮಾಡುತ್ತಿದ್ದು, ಇಂದು (ಏಪ್ರಿಲ್ 07) ರಾಜ್ಯದಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡದ ‘ಮುಗಿಲ್ ಪೇಟೆ’ ಸಿನಿಮಾನಲ್ಲಿ ನಟಿಸಿರುವ ಖಯಾದು ಲೋಹರ್ ಅವರು ತಮ್ಮ ಹೊಸ ಸಿನಿಮಾ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು

ನವದೆಹಲಿ, ಏಪ್ರಿಲ್ 7: ಪಶ್ಚಿಮ ಏಷ್ಯನ್ ಬಿಕ್ಕಟ್ಟಿನಿಂದ ಭಾರತದ ಹಲವು ಕ್ಷೇತ್ರಗಳು ಬಾಧಿತವಾಗಿವೆ. ಈ ಸಂಕಷ್ಟದ ಸಂದರ್ಭದಲ್ಲಿ ಬಾಧಿಕ ಕ್ಷೇತ್ರಗಳೆಲ್ಲವಕ್ಕೂ ನೆರವು ನೀಡಲು ಕೇಂದ್ರ ಸರ್ಕಾರ ಸಾಲ ಖಾತ್ರಿ ಯೋಜನೆ ಆರಂಭಿಸಲು ಯೋಜಿಸಿದೆ. ಕೋವಿಡ್ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪ್ಯಾಕೇಜ್ ಮಾದರಿಯಲ್ಲಿ ಇರುವ ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್​ನ (Credit Guarantee scheme) ಒಟ್ಟು ಮೊತ್ತ 2.5 ಲಕ್ಷ ಕೋಟಿ ರೂ ಇರುವ ಅಂದಾಜು ಇದೆ ಎಂದು ಮನಿಕಂಟ್ರೋಲ್​ನಲ್ಲಿ ವರದಿ ಮಾಡಲಾಗಿದೆ. ಇಬ್ಬರು ಅಧಿಕಾರಿಗಳ ಮೂಲಗಳಿಂದ ಈ ಮಾಹಿತಿ ಸಿಕ್ಕಿದೆ.

2020ರಲ್ಲಿ ಕೋವಿಡ್ ಬಂದಾಗ ಲಾಕ್​ಡೌನ್ ಕಾರಣದಿಂದ ಆರ್ಥಿಕತೆ ಸ್ಥಗಿತಗೊಂಡಿತ್ತು. ಬಹುತೇಕ ಎಲ್ಲಾ ಉದ್ಯಮಗಳು ನಲುಗಿದ್ದವು. ಅದರಲ್ಲೂ ಎಂಎಸ್​ಎಂಇಗಳು ವಿಪರೀತ ಹೊಡೆತ ತಿಂದಿದ್ದವು. ಅವುಗಳಿಗೆ ಚೇತರಿಕೆ ನೀಡುವ ಸಲುವಾಗಿ ಸರ್ಕಾರವು ಇಸಿಜಿಎಲ್​ಎಸ್ ಅಥವಾ ತುರ್ತು ಸಾಲ ಖಾತ್ರಿ ಯೋಜನೆ ಹಾಕಿತ್ತು. ಈಗ ಸರ್ಕಾರ ಯೋಜಿಸಿರುವುದು ಆ ಯೋಜನೆಯ ವಿಸ್ತೃತ ರೂಪವಾಗಿದೆ.

ಇದನ್ನೂ ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ಉದ್ದಿಮೆಗಳಿಗೆ ಸರ್ಕಾರದಿಂದ ಸಾಲ ಖಾತ್ರಿ

ವಿವಿಧ ಉದ್ದಿಮೆಗಳು ಸಾಲ ಪಡೆಯಲು ಸಾಧ್ಯವಾಗುವಂತೆ ನ್ಯಾಷನಲ್ ಕ್ರೆಡಿಟ್ ಕ್ಯಾರಂಟಿ ಟ್ರಸ್ಟೀ ಕಂಪನಿಯಿಂದ ಶೇ. 90ರಷ್ಟು ಕ್ರೆಡಿಟ್ ಗ್ಯಾರಂಟಿ ಒದಗಿಸುವ ಉದ್ದೇಶ ಈ ಸ್ಕೀಮ್​ನದ್ದಾಗಿದೆ. ಒಂದು ವೇಳೆ, ಸಾಲ ತೆಗೆದುಕೊಂಡವರು ತೀರಿಸಲು ವಿಫಲರಾದಲ್ಲಿ ಸರ್ಕಾರವು ಆ ಸಾಲವನ್ನು ಭರಿಸುತ್ತದೆ.

ಕೋವಿಡ್ ಸಂದರ್ಭದಲ್ಲಿ ಜಾರಿಗೊಳಿಸಲಾದ ಸಾಲ ಖಾತ್ರಿ ಸ್ಕೀಮ್​ನಲ್ಲಿ ಬಡ್ಡಿದರ ಹೆಚ್ಚಾಗದಂತೆ ಮಿತಿ ಹಾಕಲಾಗಿತ್ತು. ಬ್ಯಾಂಕುಗಳು ಈ ಸ್ಕೀಮ್​ನಲ್ಲಿ ನೀಡುವ ಸಾಲಗಳಿಗೆ ವಿಧಿಸುವ ಬಡ್ಡಿ ದರ ಶೇ. 9.25 ಮೀರಬಾರದು, ಮತ್ತು ಎನ್​ಬಿಎಫ್​ಸಿಗಳು ಶೇ. 14ಕ್ಕಿಂತ ಹೆಚ್ಚು ಬಡ್ಡಿ ವಿಧಿಸಬಾರದು ಎಂದು ಸರ್ಕಾರ ಒಂದು ಮಿತಿ ಹಾಕಿತ್ತು. ಹಾಗೆಯೇ, ಒಂದು ವರ್ಷ ಅಸಲು ಹಣ ಪಾವತಿಸುವ ಅವಶ್ಯಕತೆ ಇಲ್ಲದೆ, ಕೇವಲ ಬಡ್ಡಿ ಮಾತ್ರ ಕಟ್ಟಿಕೊಂಡು ಹೋಗುವ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: ಐದು ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ

ಈ ಸ್ಕೀಮ್ ಅಡಿಯಲ್ಲಿ ಒಟ್ಟು ನೀಡಿದ ಕ್ರೆಡಿಟ್ ಗ್ಯಾರಂಟಿಗಳ ಸಂಖ್ಯೆ 1.19 ಕೋಟಿ. ಈ ಪೈಕಿ ಎಂಎಸ್​ಎಂಇಗಳಿಗೆ ನೀಡಿದ್ದು 1.13 ಕೋಟಿ ಗ್ಯಾರಂಟಿಗಳು. ಆ ಸಂದರ್ಭದಲ್ಲಿ ಬಾಧಿತ ಉದ್ದಿಮೆಗಳಿಗೆ ಈ ಸಾಲ ಬಹಳ ಉಪಯೋಗಕ್ಕೆ ಬಂದಿದ್ದು ಗಮನಾರ್ಹ. ಹೀಗಾಗಿ, ಅದೇ ಮಾದರಿಯಲ್ಲಿ ಇನ್ನೂ ವಿಸ್ತೃತವಾದ ಸ್ಕೀಮ್ ಅನ್ನು ಈಗ ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಮನಿಕಂಟ್ರೋಲ್ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಪಂದ್ಯಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ಭರ್ಜರಿ ಸಿದ್ಧತೆಯಲ್ಲಿದೆ. ಈ ಸಿದ್ಧತೆಗಳ ನಡುವೆ ಎಲ್ಲರ ಗಮನ ಸೆಳೆದಿರುವುದು ಯುವ ವೇಗಿ ಅರ್ಜುನ್ ತೆಂಡೂಲ್ಕರ್. ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿರುವ ಅರ್ಜುನ್ ತೆಂಡೂಲ್ಕರ್ ನೆಟ್ಸ್​ನಲ್ಲಿ, ತಮ್ಮ ನಿಖರವಾದ ಯಾರ್ಕರ್ ದಾಳಿಯ ಮೂಲಕ ತಂಡದ ಪ್ರಮುಖ ಬ್ಯಾಟರ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಲಕ್ನೋ ತಂಡದ ನಾಯಕ ರಿಷಬ್ ಪಂತ್ ಅವರಿಗೆ ಅರ್ಜುನ್ ತೆಂಡೂಲ್ಕರ್ ಸತತವಾಗಿ ಯಾರ್ಕರ್‌ಗಳನ್ನು ಎಸೆಯುವ ಮೂಲಕ ಬೆವರಿಳಿಸಿದರು. ಪಂತ್ ಅವರ ಬ್ಯಾಟಿಂಗ್ ಲಯವನ್ನು ಪರೀಕ್ಷಿಸಲು ಅರ್ಜುನ್ ಈ ತಂತ್ರವನ್ನು ಬಳಸಿಕೊಂಡರು.

ಇದಾದ ಬಳಿಕ ಸ್ಫೋಟಕ ಬ್ಯಾಟರ್ ಅಬ್ದುಲ್ ಸಮದ್ ಕೂಡ ಅರ್ಜುನ್ ಅವರ ವೇಗದ ಮತ್ತು ನಿಖರ ಎಸೆತಗಳನ್ನು ಎದುರಿಸಲು ಪರದಾಡಿದರು. ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಅರ್ಜುನ್ ಅವರ ಸಾಮರ್ಥ್ಯ ಈ ಅಭ್ಯಾಸದ ವೇಳೆ ಎದ್ದು ಕಾಣುತ್ತಿತ್ತು.

ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಈ ಬಾರಿಯ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡ ಟ್ರೇಡ್ ಮಾಡಿಕೊಂಡಿದೆ. ಈ ಟ್ರೇಡ್ ಹೊರತಾಗಿಯೂ ಎಲ್​ಎಸ್​ಜಿ ಪರ ಕಣಕ್ಕಿಳಿಯಲು ಅರ್ಜುನ್ ತೆಂಡೂಲ್ಕರ್​ಗೆ ಅವಕಾಶ ಸಿಕ್ಕಿಲ್ಲ.

ಇದೀಗ ನಿಖರ ಯಾರ್ಕರ್​ಗಳ ಮೂಲಕ ಗಮನ ಸೆಳೆದಿರುವ ಅರ್ಜುನ್ ತೆಂಡೂಲ್ಕರ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

 

Source link

ಅಪೋಲೋ, ಡಾ.ಅಗರ್ವಾಲ್- ಯ್ಯೂನಿಕ್ ಲ್ಯಾಬ್ಸ್ ವತಿಯಿಂದ ಟಿವಿ9 ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ

ಬೆಂಗಳೂರು, (ಏಪ್ರಿಲ್ 07): ವಿಶ್ವ ಆರೋಗ್ಯ ದಿನವನ್ನು (World Health Day) ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ವಿಶ್ವ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ  ಇಂದು (ಮಂಗಳವಾರ) ಅಪೋಲೋ ಮತ್ತು ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ಹಾಗೂ ಯ್ಯೂನಿಕ್ ಲ್ಯಾಬ್ಸ್ ವತಿಯಿಂದ ಬೆಂಗಳೂರಿನ ಟಿವಿ9 ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ (free health checkup) ಆಯೋಜಿಸಲಾಗಿದ್ದು, ಎಲ್ಲಾ ಸಿಬ್ಬಂದಿಗೆ ಬಿಪಿ, ,ಶುಗರ್, ಥೈರಾಡ್, ಸ್ಕಿನ್‌ಕೇರ್, ಇಸಿಜಿ, ಡೆಂಟಲ್‌ ಹಾಗೂ ನೇತ್ರಾ ತಪಾಸಣೆ ಮಾಡಲಾಯ್ತು. ಅಪೋಲೋ ಆಸ್ಪತ್ರೆ ಸಿಇಓಓ ಡಾ.ಯತೀಶ್ ಗೋವಿಂದಯ್ಯ, ಮಾರ್ಕೆಟಿಂಗ್ ಮ್ಯಾನೇಜರ್ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ಉಚಿತ ತಪಾಸಣೆ ಆಯೋಜನೆ ಮಾಡಿದ್ದು, ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿ ಉತ್ಸುಕರಾಗಿ ತಮ್ಮ ಹೆಲ್ತ್​ ಚೆಕ್‌ ಮಾಡಿಸಿಕೊಂಡು ತಜ್ಞ ವೈದ್ಯರಿಂದ ಕೆಲ ಸಲಹೆ ಪಡೆದುಕೊಂಡರು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ನ್ಯಾಪ್ ಚಾಟ್‌ನಲ್ಲಿ ಯುವತಿಗೆ ಗಾಳ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​​ ಮೇಲ್​; ಪೀಕಿದ್ದು 40 ಲಕ್ಷ ಹಣ, 2 ಕೆಜಿ ಚಿನ್ನ!

ಬೆಂಗಳೂರು, ಏಪ್ರಿಲ್​​ 07: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಗೆ ಪರಿಚಯವಾಗಿದ್ದ ವ್ಯಕ್ತಿ ಸೇರಿ ಇಬ್ಬರು ಮಹಿಳೆಯ ಖಾಸಗಿ ಫೋಟೋಗಳನ್ನು ವೈರಲ್​​ ಮಾಡೋದಾಗಿ ಬೆದರಿಸಿ ಆಕೆಯಿಂದ 2 ಕೆಜಿ ಚಿನ್ನ ಹಾಗೂ 40 ಲಕ್ಷ ಹಣ ಪೀಕಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ್ದ ದೂರಿನ ಅನ್ವಯ ಆಂಧ್ರ ಮೂಲದ ಚೆನ್ನೂರು ಮಹೇಶ್​ ಮತ್ತು ವನ್ನೂರು ಸ್ವಾಮಿ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 571 ಗ್ರಾಂ ಚಿನ್ನಾಭರಣ, 25 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ ಚಾಟ್‌ನಲ್ಲಿ ಮಹಿಳೆಯೊಬ್ಬರಿಗೆ ಪರಿಚಯವಾಗಿದ್ದ ಆರೋಪಿಗಳು, ಮೆಲ್ಲಗೆ ಆಕೆಯ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದರು. ನಂತರ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡುವಾಗ ಮಹಿಳೆಗೆ ತಿಳಿಯದಂತೆ ಸ್ಕ್ರೀನ್ ಶಾಟ್ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡು ಅಸಲಿ ಆಟ ಶುರು ಮಾಡಿದ್ದರು. ನಿನ್ನ ಖಾಸಗಿ ಫೋಟೋಗಳನ್ನು ಗಂಡನಿಗೆ ಕಳಿಸುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೇವೆ ಎಂದು ಬೆದರಿಸಿದ್ದ ಕಿರಾತಕರು, ಹಂತಹಂತವಾಗಿ ಮಹಿಳೆಯಿಂದ 40 ಲಕ್ಷ ಹಣ ಮತ್ತು 2 ಕೆಜಿ ಚಿನ್ನಾಭರಣವನ್ನು ಪೀಕಿದ್ದರು. ಆರೋಪಿಗಳ ಕಾಟ ತಾಳಲಾರದೆ ಮಹಿಳೆ ಕೊನೆಗೆ ತನ್ನ ಪತಿಗೆ ಈ ಬಗ್ಗೆ ವಿಷಯ ತಿಳಿಸಿದ್ದು, ಘಟನೆ ಸಂಬಂಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: ‘ಬೆತ್ತಲೆ ವೀಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಾರೆ’: ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ!

ಇನ್ನು ಆರೋಪಿ ವನ್ನೂರು ಸ್ವಾಮಿಗೆ ಚೆನ್ನೂರು ಮಹೇಶ್​ ಮೂಲಕ ಮಹಿಳೆಯ ಪರಿಚಯವಾಗಿತ್ತು. ಯಾವಾಗ ಮಹೇಶನ ಬಳಿ ಆಕೆಯ ಫೋಟೋ, ವಿಡಿಯೋಗಳು ಇರುವ ಬಗ್ಗೆ ಗೊತ್ತಾಯ್ತೋ ಈತನೂ ಮಹೇಶನ ಜೊತೆ ಸೇರಿಕೊಂಡು ಮಹಿಳೆಗೆ ಬೆದರಿಸಿ ಹಣ, ಚಿನ್ನಾಭರಣ ಪೀಕಿದ್ದ. ಮಹಿಳೆಯಿಂದ ಪಡೆದಿದ್ದ ಹಣದಲ್ಲಿ ಬೆಟ್ಟಿಂಗ್ ಆಡ್ತಿದ್ದ ಆರೋಪಿಗಳು ಸಾಕಷ್ಟು ಹಣ ಕಳೆದುಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಮತ್ತೊಂದು ಕಡೆ ಇಬ್ಬರ ಮೊಬೈಲ್ ಪರಿಶೀಲಿಸಿದ ಪೊಲೀಸರೇ ಶಾಕ್ ಆಗಿದ್ದಾರೆ. ಯಾಕಂದ್ರೆ ಕೇವಲ ಈ ಮಹಿಳೆ ಮಾತ್ರವಲ್ಲ, ಇನ್ನು ಅನೇಕ ಯುವತಿಯರ ಮತ್ತು ಮಹಿಳೆಯರ ಖಾಸಗಿ ಫೋಟೋಗಳು ಫೋನ್‌ನಲ್ಲಿ ಪತ್ತೆಯಾಗಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾವಣನ ಪಾತ್ರ ಮಾಡಲು ಒಪ್ಪಿದ್ದೇಕೆ ಯಶ್, ನಿರ್ದೇಶಕರು ಕೊಟ್ಟರು ಉತ್ತರ

ರಣ್​​ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಎರಡು ಭಾಗಗಳ ನಿರ್ಮಾಣಕ್ಕೆ ಸುಮಾರು 4000 ಕೋಟಿ ಬಜೆಟ್ ಮೀಸಲಿಡಲಾಗಿದೆಯಂತೆ. ಸಿನಿಮಾಕ್ಕೆ ವಿಶ್ವದರ್ಜೆಯ ವಿಎಫ್​​ಎಕ್ಸ್ ತಂತ್ರಜ್ಞಾನ ಬಳಸಲಾಗಿದೆ. ಸಿನಿಮಾವನ್ನು ಐಮ್ಯಾಕ್ಸ್ ಗಾಗಿ ವಿಶೇಷವಾಗಿ ಚಿತ್ರೀಕರಿಸಲಾಗಿದೆ. ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿಯೂ ಹಾಗೂ ರಾವಣನಾಗಿ ನಟ ಯಶ್ ನಟಿಸಿದ್ದಾರೆ. ಆದರೆ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್, ರಾವಣನಂಥಹಾ ವಿಲನ್ ಪಾತ್ರದಲ್ಲಿ ನಟಿಸಲು ಒಪ್ಪಿದ್ದೇಕೆ? ನಿರ್ದೇಶಕ ನಿತೀಶ್ ತಿವಾರಿ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಿತೀಶ್ ತಿವಾರಿ, ‘ರಾವಣನದ್ದು ಬಹಳ ಸಂಕೀರ್ಣವಾದ ವ್ಯಕ್ತಿತ್ವ. ಆತನನ್ನು ಕೇವಲ ಒಬ್ಬ ‘ವಿಲನ್’ ಆಗಿಯೇ ನೋಡಲಾಗಿದೆ. ಆದರೆ ಆತ ಜ್ಞಾನವಂತನಾಗಿದ್ದ, ಸಂಗೀತಗಾರನಾಗಿದ್ದ, ವೈದ್ಯ ಜ್ಞಾನ ಪಾರಂಗತನಾಗಿದ್ದ, ಎಲ್ಲಕ್ಕಿಂತಲೂ ಮಿಗಿಲಾಗಿ ಆತ ಮಹಾನ್ ಶಿವಭಕ್ತನಾಗಿದ್ದ. ನಾವು ರಾವಣನನ್ನು ಒಬ್ಬ ದುಷ್ಟ ಎಂದು ಚಿತ್ರಿಸದೆ ಆತನ ಗುಣ-ಅವಗುಣ ಎರಡನ್ನು ತೋರಿಸಲಿದ್ದೇವೆ, ಇಂಥಹಾ ಪಾತ್ರ ಮಾಡಲು ದೊಡ್ಡ ಸ್ಟಾರ್​ಡಮ್ ಮತ್ತು ಕಾನ್ಫಡೆನ್ಸ್ ಇರುವ ಯಶ್ ಅವರಿಂದಲೇ ಸಾಧ್ಯ’ ಎಂದಿದ್ದಾರೆ.

ಇದನ್ನೂ ಓದಿ:ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ರಾವಣನ ಪಾತ್ರ ಸಂಕೀರ್ಣವಾಗಿರುವ ಕಾರಣ ಯಾರೆಂದರು ಅವರು ಆ ಪಾತ್ರದಲ್ಲಿ ನಟಿಸುವುದು ನನಗೆ ಇಷ್ಟವಿರಲಿಲ್ಲ. ನಾವು ರಾವಣನನ್ನು ತೋರಿಸುವ ರೀತಿ ಇಷ್ಟವಾಗಿಯೇ ಯಶ್ ಅವರು ಆ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಕತೆ ಕೇಳಿದ ಬಳಿಕ ಸ್ವತಃ ರಣ್​​ಬೀರ್ ಕಪೂರ್ ಅವರು ಸಹ, ‘ನಾವು ನೋಡಿರುವ ‘ರಾಮಾಯಣ’ಗಳಲ್ಲಿಯೇ ಅತ್ಯಂತ ಭಿನ್ನವಾಗಿ ರಾವಣನ ಪಾತ್ರವನ್ನು ಈ ಸಿನಿಮಾನಲ್ಲಿ ಡಿಸೈನ್ ಮಾಡಲಾಗಿದೆ’ ಎಂದು ಮೆಚ್ಚಿಕೊಂಡಿದ್ದಾಗಿಯೂ ಸಹ ನಿತೇಶ್ ತಿವಾರಿ ಹೇಳಿದ್ದಾರೆ.

ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿರುವುದು ಮಾತ್ರವೇ ಅಲ್ಲದೆ ಸಿನಿಮಾದ ಸಹ ನಿರ್ಮಾಪಕ ಸಹ ಆಗಿದ್ದಾರೆ. ಸಿನಿಮಾನಲ್ಲಿ ರಣ್​ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ, ಕಾಜಲ್ ಅಗರ್ವಾಲ್ ಮಂಡೋದರಿಯಾಗಿ, ರವಿ ದುಬೆ ಲಕ್ಷ್ಮಣನಾಗಿ, ರಕುಲ್ ಪ್ರೀತ್ ಸಿಂಗ್ ಶೂರ್ಪಣಕಿ ಆಗಿ, ಲಾರಾ ದತ್ತ ಕೈಕೆಯಾಗಿ, ಕುನಾಲ್ ಕಪೂರ್ ಇಂದ್ರನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾಗಿರುವ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರುಗಳು ಸಂಗೀತ ನೀಡಿದ್ದಾರೆ. ಸಿನಿಮಾ ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಅಂಗೈಯಲ್ಲಿದೆ ಸರ್ಕಾರಿ ಉದ್ಯೋಗದ ಯೋಗ? ರೇಖೆಗಳು ಹೇಳುವ ಭವಿಷ್ಯ ಹೀಗಿದೆ!

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ ರೇಖೆಗಳು ಕೇವಲ ವಿಧಿಲಿಖಿತವಲ್ಲ, ಅವು ವೃತ್ತಿಜೀವನ ಮತ್ತು ಭವಿಷ್ಯದ ದಾರಿದೀಪಗಳಾಗಿವೆ. ಕೈಯಲ್ಲಿರುವ ಪರ್ವತ ರೇಖೆ, ಸೂರ್ಯ ರೇಖೆ ಮತ್ತು ವಿಜಯ ರೇಖೆಗಳು ಒಬ್ಬ ವ್ಯಕ್ತಿಯ ಜೀವನದ ಯಶಸ್ಸನ್ನು ನಿರ್ಧರಿಸುತ್ತವೆ. ಅದರಲ್ಲೂ ವಿಶೇಷವಾಗಿ, ಸಮಾಜದಲ್ಲಿ ಗೌರವ ತಂದುಕೊಡುವ ‘ಸರ್ಕಾರಿ ಕೆಲಸ’ ಪಡೆಯುವ ಯೋಗ ನಿಮ್ಮ ಕೈ ರೇಖೆಯಲ್ಲಿದೆಯೇ ಎಂದು ತಿಳಿಯಲು ಈ ಕೆಳಗಿನ ಅಂಶಗಳನ್ನು ಗಮನಿಸಬೇಕು.

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಸರ್ಕಾರಿ ಉದ್ಯೋಗವನ್ನು ಗುರುತಿಸಲು ಸೂರ್ಯ ಪರ್ವತ ಮತ್ತು ಗುರು ಪರ್ವತಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಉಂಗುರದ ಬೆರಳಿನ ಕೆಳಭಾಗದಲ್ಲಿರುವ ಸೂರ್ಯ ಪರ್ವತವು ಕೀರ್ತಿ ಮತ್ತು ಯಶಸ್ಸನ್ನು ಸೂಚಿಸಿದರೆ, ತೋರು ಬೆರಳಿನ ಕೆಳಭಾಗದಲ್ಲಿರುವ ಗುರು ಪರ್ವತವು ಅಧಿಕಾರ ಮತ್ತು ಜ್ಞಾನದ ಸಂಕೇತವಾಗಿದೆ. ಈ ಎರಡು ಪರ್ವತಗಳ ಮೇಲೆ ಕಂಡುಬರುವ ಕೆಲವು ವಿಶಿಷ್ಟ ಗುರುತುಗಳು ಸರ್ಕಾರಿ ಕೆಲಸದ ಸಾಧ್ಯತೆಯನ್ನು ಬಲಪಡಿಸುತ್ತವೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಒಬ್ಬ ವ್ಯಕ್ತಿಯ ಅಂಗೈಯಲ್ಲಿ ಸೂರ್ಯ ಪರ್ವತದ ಮೇಲೆ ಸಣ್ಣ ರೇಖೆಗಳ ನಡುವೆ ಚೌಕಾಕಾರದ (Square) ಚಿಹ್ನೆ ಕಂಡುಬಂದರೆ, ಅದನ್ನು ಅತ್ಯಂತ ಅದೃಷ್ಟದ ಲಕ್ಷಣವೆಂದು ಪರಿಗಣಿಸಲಾಗುತ್ತದೆ. ಹಸ್ತಸಾಮುದ್ರಿಕ ತಜ್ಞರ ಪ್ರಕಾರ, ಸೂರ್ಯ ಬೆಟ್ಟದ ಮೇಲೆ ಇಂತಹ ಚೌಕಾಕಾರದ ಆಕಾರ ಹೊಂದಿರುವವರಿಗೆ ಸರ್ಕಾರಿ ಉದ್ಯೋಗ ಸಿಗುವುದು ಬಹುತೇಕ ಖಚಿತ. ಇದು ಅವರಿಗೆ ವೃತ್ತಿಜೀವನದಲ್ಲಿ ಸ್ಥಿರತೆ ಮತ್ತು ಉನ್ನತ ಸ್ಥಾನಮಾನವನ್ನು ತಂದುಕೊಡುತ್ತದೆ.

ಅದೇ ರೀತಿ, ಗುರು ಪರ್ವತದ ಮೇಲೆ ತ್ರಿಕೋನ (Triangle) ಚಿಹ್ನೆ ಇರುವುದು ಅತ್ಯಂತ ಶುಭ ಸಂಕೇತವಾಗಿದೆ. ಯಾರ ಅಂಗೈಯಲ್ಲಿ ಈ ಗುರುತು ಇರುತ್ತದೆಯೋ, ಅವರಿಗೆ ಎಲ್ಲಾ ಆಯಾಮಗಳಲ್ಲೂ ಸರ್ಕಾರಿ ಕೆಲಸ ಸಿಗುವ ಅವಕಾಶಗಳು ಹೆಚ್ಚಿರುತ್ತವೆ. ಇಂತಹ ವ್ಯಕ್ತಿಗಳು ಕೇವಲ ಉದ್ಯೋಗ ಪಡೆಯುವುದು ಮಾತ್ರವಲ್ಲದೆ, ಸಮಾಜದಲ್ಲಿ ಅಪ್ರತಿಮ ಮನ್ನಣೆ ಮತ್ತು ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ.

ಒಟ್ಟಾರೆಯಾಗಿ, ನಿಮ್ಮ ಪರಿಶ್ರಮದ ಜೊತೆಗೆ ಅಂಗೈಯಲ್ಲಿರುವ ಈ ಶುಭ ರೇಖೆಗಳು ಮತ್ತು ಚಿಹ್ನೆಗಳು ಒಗ್ಗೂಡಿದಾಗ, ಸರ್ಕಾರಿ ಉದ್ಯೋಗದ ಕನಸು ನನಸಾಗಲು ಸಾಧ್ಯವಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕದನವಿರಾಮದ ಮಾತುಕತೆಯ ಗಡುವು ಮುಗಿವ ಮೊದಲೇ ಇರಾನ್​ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ

ಟೆಹ್ರಾನ್, ಏಪ್ರಿಲ್ 7: ಇರಾನ್‌ನ ಪ್ರಮುಖ ಕಚ್ಚಾ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಇಂದು ಅನೇಕ ದಾಳಿಗಳನ್ನು ನಡೆಸಿದೆ. ಈ ದ್ವೀಪ ಇರಾನ್ (Iran War) ದೇಶದ ತೈಲ ರಫ್ತಿನ ಬಹುಭಾಗವನ್ನು ನಿರ್ವಹಿಸುತ್ತದೆ. ಹಾರ್ಮುಜ್ ಜಲಸಂಧಿಯನ್ನು (Strait of Hormuz) ತೆರೆಯಲು ಮತ್ತು ಶಾಂತಿ ಮಾತುಕತೆಗೆ ಒಪ್ಪಿಗೆ ಸೂಚಿಸಲು ಅಮೆರಿಕ ಇರಾನ್​ಗೆ 10 ದಿನ ಗಡುವು ನೀಡಿತ್ತು. ಆ ಗಡುವು ಮುಗಿಯಲು ಕೆಲವೇ ಗಂಟೆಗಳು ಬಾಕಿ ಇವೆ. ಅಷ್ಟರೊಳಗೆ ಅಮೆರಿಕ ಮತ್ತೆ ಇರಾನ್ ಮೇಲೆ ದಾಳಿ ನಡೆಸಿದೆ.

ಇರಾನ್ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಗದಿಪಡಿಸಿದ್ದ ಗಡುವು ಇಂದು ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನದ ಪ್ರಕಾರ ಬುಧವಾರ 5.30ಕ್ಕೆ) ಕೊನೆಗೊಳ್ಳಲಿದೆ. ಆ ಗಡುವು ಮುಗಿಯುವ ಮೊದಲೇ ಅಮೆರಿಕ ಇರಾನ್ ಮೇಲೆ ಬೃಹತ್ ದಾಳಿ ನಡೆಸಿದೆ.

ಇದನ್ನೂ ಓದಿ: ಇರಾನ್ ಮುಗಿಸಲು ಒಂದೇ ಒಂದು ರಾತ್ರಿ ಸಾಕು, ಗಡುವು ಮುಗಿಯುವ ಮುನ್ನವೇ ಇರಾನ್​ಗೆ ಟ್ರಂಪ್ ಬೆದರಿಕೆ

“ಸ್ವಲ್ಪ ಸಮಯದ ಹಿಂದೆ ಇರಾನ್‌ನಾದ್ಯಂತ ಹಲವಾರು ಪ್ರದೇಶಗಳಲ್ಲಿ ಡಜನ್​ಗಟ್ಟಲೆ ಮೂಲಸೌಕರ್ಯ ಸ್ಥಳಗಳನ್ನು ಗುರಿಯಾಗಿಸಿಕೊಂಡು ಐಡಿಎಫ್ ವ್ಯಾಪಕ ಪ್ರಮಾಣದ ದಾಳಿಗಳನ್ನು ಪೂರ್ಣಗೊಳಿಸಿದೆ” ಎಂದು ಇಸ್ರೇಲ್​ನ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್ ಮಧ್ಯದಲ್ಲಿ ಅಮೆರಿಕದ ಪಡೆಗಳು ಖಾರ್ಗ್ ದ್ವೀಪದ ಮೇಲೆಯೂ ದಾಳಿಗಳನ್ನು ನಡೆಸಿದ್ದವು. ಈ ದಾಳಿಗಳು ಆ ದ್ವೀಪದಲ್ಲಿನ ಮಿಲಿಟರಿ ನೆಲೆಗಳನ್ನು ಸಂಪೂರ್ಣವಾಗಿ ನಾಶಮಾಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದೀಗ ಮತ್ತೆ ಅದೇ ದ್ವೀಪದ ಮೇಲೆ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: ಇಂದು ಯಾರೂ ರೈಲಿನಲ್ಲಿ ಓಡಾಡ್ಬೇಡಿ, ಇರಾನ್ ಜನರಿಗೆ ಇಸ್ರೇಲ್ ಎಚ್ಚರಿಕೆ, ಹೊಸ ಅಪಾಯದ ಮುನ್ಸೂಚನೆಯೇ?

ದಾಳಿಗೆ ಒಳಗಾದ ಖಾರ್ಗ್ ದ್ವೀಪವು ಇರಾನ್‌ನ ಕರಾವಳಿಯಿಂದ ಸುಮಾರು 26 ಕಿ.ಮೀ ದೂರದಲ್ಲಿದೆ. ಇದು ಹಾರ್ಮುಜ್ ಜಲಸಂಧಿಯಿಂದ ಸುಮಾರು 483 ಕಿ.ಮೀ ದೂರದಲ್ಲಿದೆ. ಇದರ ಆಳವಾದ ನೀರು ಇರಾನ್‌ನ ಮುಖ್ಯ ಭೂಭಾಗದ ಕರಾವಳಿಗಿಂತ ಭಿನ್ನವಾಗಿ ದೊಡ್ಡ ಟ್ಯಾಂಕರ್‌ಗಳು ಡಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಈ ದ್ವೀಪವು ಇರಾನ್‌ನ ಸುಮಾರು ಶೇ. 90ರಷ್ಟು ತೈಲ ರಫ್ತನ್ನು ನಿರ್ವಹಿಸುತ್ತದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯಲ್ಲಿ ಇರಾನ್ ಮೂರನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Kala Sarpa Dosh: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ತಿಳಿಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ‘ಕಾಲಸರ್ಪ ದೋಷ’ವಿದ್ದರೆ ಅವರು ಜೀವನದ ವಿವಿಧ ಹಂತಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಆರ್ಥಿಕ ಸಂಕಷ್ಟಗಳು ಮತ್ತು ಮಾನಸಿಕ ನೆಮ್ಮದಿಯ ಕೊರತೆ ಈ ದೋಷದ ಪ್ರಮುಖ ಲಕ್ಷಣಗಳಾಗಿವೆ. ಅಷ್ಟಕ್ಕೂ ಈ ಕಾಲಸರ್ಪ ದೋಷ ಹೇಗೆ ಸಂಭವಿಸುತ್ತದೆ ಮತ್ತು ಇದರ ಪ್ರಭಾವ ಎಂತಹದ್ದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಲಸರ್ಪ ದೋಷ ಎಂದರೇನು?

ಕಾಲಸರ್ಪ ದೋಷವು ನೆರಳು ಗ್ರಹಗಳಾದ ರಾಹು ಮತ್ತು ಕೇತುಗಳ ನಡುವೆ ಉಂಟಾಗುತ್ತದೆ. ಜಾತಕದಲ್ಲಿ ಸೂರ್ಯ, ಚಂದ್ರ ಸೇರಿದಂತೆ ಉಳಿದ ಏಳು ಗ್ರಹಗಳು ರಾಹು ಮತ್ತು ಕೇತು ಎಂಬ ಈ ಎರಡು ಬಿಂದುಗಳ ಮಧ್ಯದಲ್ಲಿ ಬಂದಾಗ ಈ ದೋಷ ಸಂಭವಿಸುತ್ತದೆ. ಅಂದರೆ, ಎಲ್ಲಾ ಗ್ರಹಗಳು ಹಾವಿನ (ಸರ್ಪ) ಬಂಧನದಲ್ಲಿ ಸಿಲುಕಿದಂತೆ ಇರುತ್ತವೆ ಎಂದು ಪರಿಗಣಿಸಲಾಗುತ್ತದೆ. ಈ ಸ್ಥಿತಿಯು ವ್ಯಕ್ತಿಯ ಜ್ಯೋತಿಷ್ಯ ಚಾರ್ಟ್‌ನಲ್ಲಿ ಶಕ್ತಿಯ ಹರಿವನ್ನು ತಡೆಹಿಡಿಯುತ್ತದೆ ಎಂದು ನಂಬಲಾಗಿದೆ.

ದೋಷದ ಪ್ರಭಾವ ಮತ್ತು ಲಕ್ಷಣಗಳು:

ಈ ದೋಷವಿರುವ ವ್ಯಕ್ತಿಯ ಜೀವನದ ಮೇಲೆ ಇದರ ಪರಿಣಾಮ ದೀರ್ಘಕಾಲಿಕವಾಗಿರುತ್ತದೆ. ಕೆಲಸದಲ್ಲಿ ಅಡೆತಡೆ, ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅನಗತ್ಯ ವಿಳಂಬ ಅಥವಾ ಅಡೆತಡೆಗಳು ಎದುರಾಗುತ್ತವೆ. ನಿರಂತರ ಆರೋಗ್ಯ ಸಮಸ್ಯೆಗಳು ಕಾಡಬಹುದು ಮತ್ತು ಮನಸ್ಸು ಯಾವಾಗಲೂ ಅಶಾಂತಿಯಿಂದ ಕೂಡಿರುತ್ತದೆ. ದಂಪತಿಗಳ ನಡುವೆ ಸಣ್ಣ ವಿಷಯಗಳಿಗೂ ದೊಡ್ಡ ಜಗಳಗಳಾಗಿ, ಸಂಬಂಧವು ಬೇರ್ಪಡುವ ಹಂತಕ್ಕೆ ತಲುಪಬಹುದು. ಎಷ್ಟೇ ಶ್ರಮವಹಿಸಿದರೂ ವೃತ್ತಿಜೀವನದಲ್ಲಿ ಸೂಕ್ತ ಮನ್ನಣೆ ಸಿಗದೆ ಹಿನ್ನಡೆಯನ್ನು ಅನುಭವಿಸಬೇಕಾಗಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪರಿಹಾರ ಮಾರ್ಗಗಳು:

ಕಾಲಸರ್ಪ ದೋಷದಿಂದ ಉಂಟಾಗುವ ತೊಂದರೆಗಳನ್ನು ಸಂಪೂರ್ಣವಾಗಿ ಅಲ್ಲದಿದ್ದರೂ, ಭಕ್ತಿ ಮತ್ತು ನಿಯಮಿತ ಪೂಜಾ ವಿಧಿಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಜ್ಯೋತಿಷ್ಯ ತಜ್ಞರ ಪ್ರಕಾರ ಈ ಕೆಳಗಿನ ಕ್ರಮಗಳು ಸಹಕಾರಿ. ದೋಷ ಶಾಂತಿಗಾಗಿ ಶಾಸ್ತ್ರೋಕ್ತವಾಗಿ ರಾಹು ಮತ್ತು ಕೇತುಗಳಿಗೆ ವಿಶೇಷ ಪೂಜೆ ಅಥವಾ ಹೋಮ ಮಾಡಿಸಬೇಕು. ಪ್ರತಿದಿನ ‘ಹನುಮಾನ್ ಚಾಲೀಸಾ’ ಪಠಿಸುವುದು ಮತ್ತು ನಿಯಮಿತವಾಗಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಮಾಡುವುದು ದೋಷದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಶಿವನು ಹಾವನ್ನು ಆಭರಣವಾಗಿ ಧರಿಸಿದವನು ಮತ್ತು ಗ್ರಹಗಳ ಅಧಿಪತಿ. ಆದ್ದರಿಂದ “ಓಂ ನಮಃ ಶಿವಾಯ” ಮಂತ್ರವನ್ನು ನಿರಂತರವಾಗಿ ಜಪಿಸುವುದು ಈ ದೋಷಕ್ಕೆ ಅತ್ಯುತ್ತಮ ಪರಿಹಾರವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version