ದೃಢ ಸಂಕಲ್ಪಕ್ಕೆ ಸಂದ ಜಯ: ವಿಚ್ಛೇದನ, 23 ವರ್ಷಗಳ ಸುದೀರ್ಘ ಹೋರಾಟದ ಬಳಿಕ 85 ಕೋಟಿ ರೂ. ಜೀವನಾಂಶ ಪಡೆದ ವರ್ಷಾ – Kannada News

ಲಂಡನ್, ಜೂನ್ 05: ಬ್ರಿಟನ್​ನಲ್ಲಿ ನೆಲೆಸಿರುವ ಭಾರತ ಮೂಲದ ಮಹಿಳೆ ವರ್ಷಾ ಗೋಹಿಲ್ ವಿಚ್ಛೇದನ(Divorce)ದ ಬಳಿಕ ತಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ಕಳೆದ 23 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಅಂತೂ ಜಯ ಸಿಕ್ಕಿದೆ. ಪತಿಯು ಮುಚ್ಚಿಟ್ಟಿದ್ದ ಸಂಪತ್ತನ್ನು ಕಾನೂನುಬದ್ಧವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ವರ್ಷಾ ಅವರಿಗೆ ಯುಕೆ (UK) ನ್ಯಾಯಾಲಯವು ಸುಮಾರು 6.6 ಮಿಲಿಯನ್ ಪೌಂಡ್‌ಗಳು ಅಂದರೆ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 85 ಕೋಟಿ ರೂ.ವನ್ನು ನೀಡುವಂತೆ ಆದೇಶಿಸಿದೆ.

ಈ ತೀರ್ಪು ಜಾಗತಿಕ ಮಟ್ಟದಲ್ಲಿ ಕೌಟುಂಬಿಕ ನ್ಯಾಯ ಮತ್ತು ಆರ್ಥಿಕ ಪಾರದರ್ಶಕತೆಯ ಕಾನೂನಿಗೆ ಒಂದು ಅತ್ಯಂತ ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಿದೆ. ಈ ಕಥೆ ಆರಂಭವಾದದ್ದು 2002 ರಲ್ಲಿ. ವರ್ಷಾ ಗೋಹಿಲ್ ಅವರು ತಮ್ಮ ಪತಿಯಿಂದ ವಿಚ್ಛೇದನ ಪಡೆದಾಗ ಆರಂಭಿಕ ಒಪ್ಪಂದದಂತೆ ಕೆಲವು ಆಸ್ತಿ ಮತ್ತು ಆರ್ಥಿಕ ಸಹಾಯವನ್ನು ಪಡೆದುಕೊಂಡಿದ್ದರು. ಆದರೆ, ತನ್ನ ಮಾಜಿ ಪತಿ ತನ್ನ ಸಂಪೂರ್ಣ ಆಸ್ತಿಯ ವಿವರಗಳನ್ನು ನ್ಯಾಯಾಲಯಕ್ಕೆ ಹಂಚಿಕೊಳ್ಳದೆ ಮುಚ್ಚಿಟ್ಟಿದ್ದಾರೆ ಎಂಬ ಬಲವಾದ ಅನುಮಾನ ವರ್ಷಾ ಅವರಿಗೆ ಇತ್ತು. ಆರಂಭದಲ್ಲಿ ಯಾವುದೇ ಪುರಾವೆಗಳಿಲ್ಲದಿದ್ದರೂ, ಅವರು ತಮ್ಮ ನ್ಯಾಯಸಮ್ಮತ ಹೋರಾಟವನ್ನು ಎಂದಿಗೂ ಕೈಬಿಡಲಿಲ್ಲ.

 ತನಿಖೆಯಲ್ಲಿ ಬಯಲಾದ ರಹಸ್ಯ ಆಸ್ತಿ
ಕೆಲವು ವರ್ಷಗಳ ನಂತರ, ವರ್ಷಾ ಅವರ ಮಾಜಿ ಪತಿಯ ಹೆಸರು  ಅಕ್ರಮ ಹಣ ವರ್ಗಾವಣೆ ಮತ್ತು ಆರ್ಥಿಕ ಅಕ್ರಮಗಳ ಪ್ರಕರಣದಲ್ಲಿ ಸಿಲುಕಿಕೊಂಡಾಗ ಇಡೀ ಕಥೆಗೆ ದೊಡ್ಡ ತಿರುವು ಸಿಕ್ಕಿತ್ತು. ಅಪರಾಧ ತನಿಖಾ ವಿಭಾಗದ ಅಧಿಕಾರಿಗಳು ಪತಿಯನ್ನು ತನಿಖೆ ನಡೆಸಿದಾಗ, ಆತ ವಿಚ್ಛೇದನದ ಸಮಯದಲ್ಲಿ ಮುಚ್ಚಿಟ್ಟಿದ್ದ ಲಕ್ಷಾಂತರ ಪೌಂಡ್‌ ಮೌಲ್ಯದ ರಹಸ್ಯ ಬ್ಯಾಂಕ್ ಖಾತೆಗಳು ಮತ್ತು ಬೇನಾಮಿ ಆಸ್ತಿಗಳನ್ನು ಪತ್ತೆಹಚ್ಚಿದರು. ಇದು ವರ್ಷಾ ಅವರ 23 ವರ್ಷಗಳ ದೀರ್ಘಾವಧಿಯ ಅನುಮಾನ ನಿಜ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿತು.

ಮತ್ತಷ್ಟು ಓದಿ: ಅಮೆರಿಕ: ವಿಚ್ಛೇದನ ಕೊಡ್ತೀನಿ ಎಂದಿದ್ದಕ್ಕೆ ಹೆಂಡತಿ ಮಕ್ಕಳು ಮನೆಯಲ್ಲಿರುವಾಗಲೇ ಬುಲ್ಡೋಜರ್​ನಿಂದ ಮನೆ ಕೆಡವಲು ಯತ್ನಿಸಿದ ವ್ಯಕ್ತಿ

ಯುಕೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು
ವರ್ಷಾ ಗೋಹಿಲ್ ಅವರು ಹಳೆಯ ಒಪ್ಪಂದವನ್ನು ಪ್ರಶ್ನಿಸಿ ಬ್ರಿಟನ್‌ನ ಅತ್ಯುನ್ನತ ನ್ಯಾಯಾಲಯವಾದ ಯುಕೆ ಸುಪ್ರೀಂ ಕೋರ್ಟ್ (UK Supreme Court) ಮೆಟ್ಟಿಲೇರಿದರು. ಈ ವೇಳೆ ಪ್ರಕರಣವು ಅತ್ಯಂತ ಜಟಿಲವಾಯಿತು, ಏಕೆಂದರೆ ವಶಪಡಿಸಿಕೊಂಡ ಆಸ್ತಿಯು ಅಪರಾಧ ಚಟುವಟಿಕೆಗೆ ಸೇರಿದ್ದು ಎಂದು ಸರ್ಕಾರಿ ಸಂಸ್ಥೆಗಳು ವಾದಿಸಿದರೆ, ವರ್ಷಾ ಅವರು ಆಸ್ತಿಯ ಒಂದು ಭಾಗ ತನ್ನ ಪತಿಯ ಕಾನೂನುಬದ್ಧ ಗಳಿಕೆಯಾಗಿದ್ದು ವೈವಾಹಿಕ ಹಕ್ಕಿನಂತೆ ತನಗೆ ಸೇರಬೇಕೆಂದು ದೃಢವಾಗಿ ಪ್ರತಿಪಾದಿಸಿದರು.

ವಿಚ್ಛೇದನದ ಸಮಯದಲ್ಲಿ ಸಂಗಾತಿಯು ತನ್ನ ಆಸ್ತಿಗಳ ಸಂಪೂರ್ಣ ವಿವರಗಳನ್ನು ಪ್ರಾಮಾಣಿಕವಾಗಿ ಬಹಿರಂಗಪಡಿಸದಿದ್ದರೆ, ಹಳೆಯ ಒಪ್ಪಂದಗಳನ್ನು ಮರುಪರಿಶೀಲಿಸಬಹುದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಪ್ರಬುದ್ಧ ತೀರ್ಪು ನೀಡಿತು.

ಅಂತಿಮವಾಗಿ ಸುದೀರ್ಘ ವಿಚಾರಣೆಗಳ ನಂತರ, ನ್ಯಾಯಾಲಯವು ಆಸ್ತಿಯ ಕೆಲವು ಭಾಗಗಳನ್ನು ಕಾನೂನುಬದ್ಧ ವೈವಾಹಿಕ ಆಸ್ತಿ ಎಂದು ಪರಿಗಣಿಸಿ, ವರ್ಷಾ ಗೋಹಿಲ್ ಅವರಿಗೆ 85 ಕೋಟಿ ರೂ.ಗಳನ್ನು ಹಸ್ತಾಂತರಿಸಲು ಆದೇಶಿಸಿತು. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೆ, ಸತ್ಯ ಮತ್ತು ನ್ಯಾಯದ ಪರವಾಗಿ ನಿಂತು ಹೋರಾಡಿದ ವರ್ಷಾ ಅವರ ಈ ಗೆಲುವು ಜಗತ್ತಿನಾದ್ಯಂತ ಲಕ್ಷಾಂತರ ಮಹಿಳೆಯರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನಕ್ಕೆ ಸಂದ ಜಯವಾಗಿದೆ ಎಂದು ಕಾನೂನು ತಜ್ಞರು ಬಣ್ಣಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ ಕಾರಣ ಏನು? ಇಲ್ಲಿದೆ ನೋಡಿ – Kannada News

ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರImage Credit source: tv9

ಬೆಂಗಳೂರು, ಜೂನ್ 5: ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಂಪುಟಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ನೀಡಿರುವ ದಿಢೀರ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿ ಜಲಸಂಪನ್ಮೂಲ ಇಲಾಖೆ ಸಿಕ್ಕಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಅವರು, ಶುಕ್ರವಾರ ಬೆಳಿಗ್ಗೆ ಅಧಿಕೃತ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.

ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರದಲ್ಲೇನಿದೆ?

‘ನನಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಕ್ಕೆ ತಮಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳು. ನಾನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ. ನಾನು ಶಾಸಕನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ’ ಎಂದು ರಾಜೀನಾಮೆ ಪತ್ರದಲ್ಲಿ ರಾಮಲಿಂಗಾ ರೆಡ್ಡಿ ಉಲ್ಲೇಖಿಸಿದ್ದಾರೆ.

ಆತ್ಮಸಾಕ್ಷಿ ಅಸ್ತ್ರ ಬಳಸಿದ ಹಿರಿಯ ನಾಯಕ

ಈ ಹಿಂದೆ ನೀಡಿದ್ದ ಭರವಸೆ ಈಡೇರದಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿರುವ ರಾಮಲಿಂಗಾ ರೆಡ್ಡಿ, ನಾನಾಗಿ ಬೆಂಗಳೂರು ಅಭಿವೃದ್ಧಿ ಖಾತೆ ಕೇಳಿರಲಿಲ್ಲ. ಆದರೂ 2023ರಲ್ಲಿ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ನನ್ನ ಮನೆಗೆ ಬಂದು ಭರವಸೆ ನೀಡಿದ್ದರು. ಎರಡೂವರೆ ವರ್ಷದ ಬಳಿಕ ಸಿಎಂ ಆದಾಗ ನಿಮಗೇ ಆ ಖಾತೆಯನ್ನು ಕೊಡುವುದಾಗಿ ಹೇಳಿದ್ದರು. ಆದರೆ, ಇದೀಗ ಬೇರೆ ಖಾತೆ ಕೊಟ್ಟಿದ್ದಾರೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಲಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಅಲ್ಲದೆ, ‘ಆತ್ಮಸಾಕ್ಷಿ’ ವಿಚಾರವನ್ನು ರಾಜೀನಾಮೆ ಪತ್ರದಲ್ಲೂ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

ಸಚಿವ ಸ್ಥಾನ ತ್ಯಜಿಸಿದರೂ ತಾವು ಕಾಂಗ್ರೆಸ್ ಪಕ್ಷದ ಶಾಸಕನಾಗಿ ಹಾಗೂ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಪತ್ರದಲ್ಲಿ ಸ್ಪಷ್ಟಪಡಿಸುವ ಮೂಲಕ ಹೈಕಮಾಂಡ್‌ಗೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:26 am, Fri, 5 June 26

Source link

RBI MPC: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ – Kannada News

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾImage Credit source: RBI Youtube

ನವದೆಹಲಿ, ಜೂನ್ 5: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಎಂಪಿಸಿ ಸಭೆಯ ನಂತರ ಇವತ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಎಸ್​ಟಿಎಫ್ ದರ ಶೇ. 5, ಎಂಎಸ್​ಎಫ್ ಮತ್ತು ಬ್ಯಾಂಕ್ ರೇಟ್ ಶೇ. 5.5 ನಲ್ಲಿ ಮುಂದುವರಿಯಲಿವೆ. ಹಾಗೆಯೇ, ಆರ್​ಬಿಐನ ಪಾಲಿಸಿ ತಟಸ್ಥ ನೀತಿಯಲ್ಲಿ ಮುಂದುವರಿಯಲಿದೆ. ಅಂದರೆ, ಅಗತ್ಯಬಿದ್ದಾಗ ರೆಪೋ ದರ ಏರಿಸಬಹುದು, ಅಥವಾ ಇಳಿಸಬಹುದು.

(ಇನ್ನಷ್ಟು ವಿವರಗಳನ್ನು ನಿರೀಕ್ಷಿಸಿ..)

Source link

Treasure: ಗುಪ್ತ ನಿಧಿಯನ್ನು ಹಾವುಗಳು ಕಾಯುವುದು ನಿಜವೇ? ಪುರಾಣಗಳ ಬೆನ್ನತ್ತಿದ ವಿಜ್ಞಾನ! – Kannada News

ಗುಪ್ತ ನಿಧಿಯನ್ನು ಹಾವುಗಳು ಕಾಯುವುದು ನಿಜವೇ?Image Credit source: Pinterest

ಗುಪ್ತ ನಿಧಿಯನ್ನು ಕಾಪಾಡುವ ಹಾವುಗಳ ಕಥೆಗಳು ಶತಮಾನಗಳಿಂದಲೂ ಭಾರತೀಯ ಜಾನಪದ, ಚಲನಚಿತ್ರಗಳು ಮತ್ತು ಪುರಾಣಗಳಲ್ಲಿ ಹಾಸುಹೊಕ್ಕಾಗಿವೆ. ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ನೆಲದಲ್ಲಿ ಹೂತುಹಾಕಿದಾಗಲೆಲ್ಲಾ, ಹಾವುಗಳು ಅಲ್ಲಿಗೆ ಬಂದು ಯಾವುದೋ ನಿಗೂಢ ಶಕ್ತಿಯಿಂದ ಅವುಗಳನ್ನು ರಕ್ಷಿಸುತ್ತವೆ ಎಂದು ಅನೇಕ ಜನರು ಇಂದಿಗೂ ನಂಬುತ್ತಾರೆ. ಆದರೆ, ಈ ನಂಬಿಕೆಯ ಹಿಂದಿರುವ ಅಸಲಿ ಸತ್ಯವೇನು? ವನ್ಯಜೀವಿ ಜೀವಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಈ ಬಗ್ಗೆ ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪುರಾಣಗಳು ಮತ್ತು ಜಾನಪದ ಕಥೆ:

ಭಾರತೀಯ ಪುರಾಣಗಳಲ್ಲಿ ಸರ್ಪ ದೇವತೆಗಳು ಅಥವಾ ನಾಗಗಳನ್ನು ಹೆಚ್ಚಾಗಿ ಗುಪ್ತ ನಿಧಿಗಳ ರಕ್ಷಕರಾಗಿ ಚಿತ್ರಿಸಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ನಾಗಗಳು ಭೂಗತ ಅಥವಾ ನೀರೊಳಗಿನ ಲೋಕಗಳಲ್ಲಿ ವಾಸಿಸುತ್ತಾರೆ ಮತ್ತು ರತ್ನಗಳು, ಚಿನ್ನ ಹಾಗೂ ದಿವ್ಯ ನಿಧಿಗಳನ್ನು ಕಾಪಾಡುತ್ತಾರೆ ಎಂಬ ನಂಬಿಕೆಯಿದೆ. ಕಾಲಾನಂತರದಲ್ಲಿ ಮೂಡಿಬಂದ ಕಥೆಗಳು, ಜಾನಪದ ಕಥೆಗಳು, ಚಲನಚಿತ್ರಗಳು ಮತ್ತು ಕಾದಂಬರಿಗಳು ಸಾರ್ವಜನಿಕರಲ್ಲಿ ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದವು.

ನಿಧಿ ಇರುವ ಜಾಗಗಳೇ ಹಾವುಗಳಿಗೆ ನೆಚ್ಚಿನ ಆವಾಸಸ್ಥಾನ:

ಪ್ರಾಚೀನ ಕಾಲದಲ್ಲಿ, ರಾಜರು ಅಥವಾ ಶ್ರೀಮಂತರು ತಮ್ಮ ನಿಧಿಗಳನ್ನು ಹೆಚ್ಚಾಗಿ ಭೂಗತ ಕೋಣೆಗಳು, ಹಳೆಯ ಕಟ್ಟಡಗಳ ಅವಶೇಷಗಳು, ಪಾಳುಬಿದ್ದ ಬಾವಿಗಳು ಅಥವಾ ರಹಸ್ಯ ಸುರಂಗಗಳಲ್ಲಿ ಮರೆಮಾಡುತ್ತಿದ್ದರು. ಈ ಸ್ಥಳಗಳನ್ನು ಸಾಮಾನ್ಯವಾಗಿ ವರ್ಷಗಳ ಕಾಲ ಮುಚ್ಚಿಡಲಾಗುತ್ತಿತ್ತು ಮತ್ತು ಅಲ್ಲಿ ಯಾವುದೇ ಮಾನವ ಸಂಚಾರ ಇರುತ್ತಿರಲಿಲ್ಲ. ಇದರ ಪರಿಣಾಮವಾಗಿ, ಅಲ್ಲಿ ತಂಪಾದ, ಕತ್ತಲೆಯಾದ ಮತ್ತು ಅತ್ಯಂತ ಸುರಕ್ಷಿತವಾದ ವಾತಾವರಣ ಸೃಷ್ಟಿಯಾಗುತ್ತಿತ್ತು. ಇಂತಹ ಪರಿಸರ ಎಂದರೆ ಹಾವುಗಳಿಗೆ ಪಂಚಪ್ರಾಣ. ಹೀಗಾಗಿ ಪ್ರಕೃತಿ ಸಹಜವಾಗಿಯೇ ಹಾವುಗಳು ಇಂತಹ ಸ್ಥಳಗಳನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ ಎಂದು ವನ್ಯಜೀವಿ ಜೀವಶಾಸ್ತ್ರಜ್ಞರು ಹೇಳುತ್ತಾರೆ.

ಆಹಾರ ಮತ್ತು ದೇಹದ ಉಷ್ಣತೆಯ ಸಮತೋಲನ:

ಹಾವುಗಳು ನಿಧಿ ಇರುವ ಜಾಗಕ್ಕೆ ಬರಲು ಕೇವಲ ಶಾಂತ ವಾತಾವರಣವಷ್ಟೇ ಕಾರಣವಲ್ಲ, ಅಲ್ಲಿ ಅವುಗಳಿಗೆ ಸಿಗುವ ಆಹಾರವೂ ಮುಖ್ಯ ಕಾರಣವಾಗಿದೆ. ಹಳೆಯ ಅವಶೇಷಗಳು ಮತ್ತು ಭೂಗತ ಸ್ಥಳಗಳು ಹೆಚ್ಚಾಗಿ ದಂಶಕಗಳು (ಇಲಿಗಳು), ಹಲ್ಲಿಗಳು ಮತ್ತು ಕೀಟಗಳಿಗೆ ಆಶ್ರಯ ತಾಣಗಳಾಗಿರುತ್ತವೆ. ಇಲಿಗಳು ಹಾವುಗಳಿಗೆ ಮುಖ್ಯ ಆಹಾರವಾಗಿರುವುದರಿಂದ, ಅವು ಬೇಟೆಯಾಡಲು ನೈಸರ್ಗಿಕವಾಗಿ ಅಂತಹ ಪ್ರದೇಶಗಳಿಗೆ ಆಕರ್ಷಿತವಾಗುತ್ತವೆ.

ಮತ್ತೊಂದು ಪ್ರಮುಖ ಅಂಶವೆಂದರೆ, ಹಾವುಗಳು ಶೀತ-ರಕ್ತದ (Cold-blooded) ಪ್ರಾಣಿಗಳು. ಇದರರ್ಥ ಅವು ತಮ್ಮ ದೇಹದ ಉಷ್ಣತೆಯನ್ನು ತಾವಾಗಿಯೇ ನಿಯಂತ್ರಿಸಿಕೊಳ್ಳಲು ಸಾಧ್ಯವಿಲ್ಲ. ತೀವ್ರವಾದ ಶಾಖ ಅಥವಾ ಶೀತದ ವಾತಾವರಣವಿದ್ದಾಗ, ಅವು ತಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಭೂಗತ ಸುರಂಗಗಳು, ಬಿಲಗಳು ಅಥವಾ ರಹಸ್ಯ ಕೋಣೆಗಳಿಗೆ ಹಿಮ್ಮೆಟ್ಟುತ್ತವೆ.

ವಿಜ್ಞಾನಿಗಳ ಸ್ಪಷ್ಟನೆ:

ಹಾವುಗಳು ಚಿನ್ನ, ಬೆಳ್ಳಿ ಅಥವಾ ಯಾವುದೇ ಗುಪ್ತ ನಿಧಿಗೆ ಆಕರ್ಷಿತವಾಗುವುದಿಲ್ಲ. ನಿಧಿಯ ಬಳಿ ಅವುಗಳ ಉಪಸ್ಥಿತಿಯು ಸಂಪೂರ್ಣವಾಗಿ ಕಾಕತಾಳೀಯವಾಗಿದ್ದು, ಅದು ಕೇವಲ ಅವುಗಳ ಆವಾಸಸ್ಥಾನ ಮತ್ತು ಆಹಾರದ ಲಭ್ಯತೆಗೆ ಸಂಬಂಧಿಸಿದ್ದಾಗಿದೆ.

ಕಳ್ಳರನ್ನು ಹೆದರಿಸಲು ಹರಡಿದ ರಾಜತಾಂತ್ರಿಕ ವದಂತಿಗಳು:

ಇತಿಹಾಸಕಾರರ ಪ್ರಕಾರ, ಈ ಪುರಾಣಗಳ ಹಿಂದೆ ರಾಜರ ಒಂದು ಚಾಣಾಕ್ಷ ತಂತ್ರ ಅಡಗಿತ್ತು. ರಾಜರು ಮತ್ತು ಶ್ರೀಮಂತರು ತಾವು ನಿಧಿ ಬೀರಿದ ಸ್ಥಳದಿಂದ ಕಳ್ಳತನವಾಗುವುದನ್ನು ತಡೆಯಲು ತಾವಾಗಿಯೇ ಇಂತಹ ವದಂತಿಗಳನ್ನು ಹರಡುತ್ತಿದ್ದರು. “ಅಲ್ಲಿ ನಿಧಿಯಿದೆ, ಅದನ್ನು ನಾಗರಹಾವು ಕಾಯುತ್ತಿದೆ” ಎಂದು ಹೆದರಿಸಿದರೆ ಕಳ್ಳರು ಆ ಜಾಗಕ್ಕೆ ಹೋಗಲು ಹೆದರುತ್ತಾರೆ ಎಂಬುದು ಅವರ ಯೋಜನೆಯಾಗಿತ್ತು.

ಇದನ್ನೂ ಓದಿ: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ?

ಕೆಲವು ಸಂದರ್ಭಗಳಲ್ಲಿ, ನಿಧಿಗಳನ್ನು ರಕ್ಷಿಸಲು ವಿಷಪೂರಿತ ಹಾವುಗಳನ್ನು ಉದ್ದೇಶಪೂರ್ವಕವಾಗಿ ಆ ರಹಸ್ಯ ಸ್ಥಳದ ಸುತ್ತಲೂ ಬಿಡುಗಡೆ ಮಾಡಿದ ಇತಿಹಾಸವೂ ಇದೆ. ಬಾವಿಗಳು ಮತ್ತು ಗುಹೆಗಳಲ್ಲಿ ಚಿನ್ನವನ್ನು ಮರೆಮಾಡಿದಾಗ, ಅದನ್ನು ಅಗೆಯುವಾಗ ಅಲ್ಲಿ ಸಹಜವಾಗಿಯೇ ವಾಸವಿದ್ದ ಹಾವುಗಳು ಹೊರಹೊಮ್ಮುತ್ತಿದ್ದವು. ಈ ಘಟನೆಗಳು ಜನರ ಕಣ್ಣಿಗೆ ಬಿದ್ದಾಗ “ಹಾವು ನಿಧಿಯನ್ನು ಕಾಯುತ್ತಿದೆ” ಎಂಬ ಪುರಾಣಕ್ಕೆ ಮತ್ತಷ್ಟು ಸಾಕ್ಷಿಯಾಯಿತು.

ಸರ್ಪಗಳು ಅಥವಾ ನಾಗಗಳ ಮೇಲಿನ ಭಕ್ತಿ ಮತ್ತು ಪೂಜೆ ಧಾರ್ಮಿಕ ನಂಬಿಕೆಯಾಗಿದ್ದರೂ, ಹಾವುಗಳು ಚಿನ್ನವನ್ನು ಕಾಯುತ್ತವೆ ಎಂಬ ಕಲ್ಪನೆಯನ್ನು ವಿಜ್ಞಾನ ಮತ್ತು ಇತಿಹಾಸ ಕೇವಲ ಒಂದು ವ್ಯವಸ್ಥಿತ ಪ್ರಚಾರ ಹಾಗೂ ಮೂಢನಂಬಿಕೆ ಎಂದು ತಳ್ಳಿಹಾಕಿವೆ. ಹಾವುಗಳಿಗೆ ಬೇಕಾಗಿರುವುದು ಕೇವಲ ಸುರಕ್ಷಿತ ಆಶ್ರಯ ಮತ್ತು ಆಹಾರವೇ ಹೊರತು ಚಿನ್ನ-ಬೆಳ್ಳಿಯಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:04 am, Fri, 5 June 26

Source link

Monsoon Rain 2026: ಭಾರತಕ್ಕೆ ಮುಂಗಾರುಅಧಿಕೃತ ಪ್ರವೇಶ, ಕರ್ನಾಟಕ ಸೇರಿ 19 ರಾಜ್ಯಗಳಲ್ಲಿ ವಿಪರೀತ ಗಾಳಿ, ಮಳೆ – Kannada News

ನವದೆಹಲಿ, ಜೂನ್ 05: ಇಡೀ ದೇಶವೇ ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನೈಋತ್ಯ ಮುಂಗಾರು(Monsoon) ಕೊನೆಗೂ ಕೇರಳಕ್ಕೆ ಆಗಮಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಜೂನ್ 4 ರ ಗುರುವಾರ ಬೆಳಗ್ಗೆ 11 ಗಂಟೆಗೆ ಮುಂಗಾರು ಮಾರುತಗಳ ಅಧಿಕೃತ ಆಗಮನವನ್ನು ಘೋಷಿಸಿದೆ. ಕೇವಲ ಒಂದು ವಾರದ ತಾಂತ್ರಿಕ ವಿಳಂಬವನ್ನು ಹೊರತುಪಡಿಸಿ, ಪ್ರಸ್ತುತ ಮುಂಗಾರು ಅತ್ಯಂತ ಸಕ್ರಿಯವಾಗಿದ್ದು, ದೇಶದ ಕೃಷಿ ಚಟುವಟಿಕೆಗಳು ಭಾರಿ ಚುರುಕಾಗಿವೆ. ಈ ಭರವಸೆಯ ಮಳೆಯು ಲಕ್ಷದ್ವೀಪ, ಕೇರಳ, ಮಾಹೆ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ಭಾಗಗಳನ್ನು ಯಶಸ್ವಿಯಾಗಿ ಆವರಿಸಿಕೊಂಡಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ವರದಾನವಾಗಲಿರುವ ಮುಂಗಾರು
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಮುಂಗಾರು ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿದೆ. ಜೂನ್ 5 ರಿಂದ ಮುಂದಿನ 5-7 ದಿನಗಳವರೆಗೆ ಕರ್ನಾಟಕ, ಕೇರಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ವಿಶೇಷವಾಗಿ ಉತ್ತರ ಒಳನಾಡಿನ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಉತ್ತಮ ಮಳೆಯಾಗಲಿದ್ದು, ಇದು ಮುಂಗಾರು ಬಿತ್ತನೆಗೆ ಸಜ್ಜಾಗಿರುವ ನಮ್ಮ ರೈತರಿಗೆ ಅತ್ಯಂತ ವರದಾನವಾಗಲಿದೆ.

ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಪರಿಸ್ಥಿತಿಗಳು ಕಂಡುಬರುತ್ತಿದ್ದರೂ, ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾಗುತ್ತಿರುವ ‘ದುರ್ಬಲ ಧನಾತ್ಮಕ ಐಓಡಿ’ (Positive Indian Ocean Dipole) ಮುಂಗಾರು ಮಳೆಗೆ ಪೂರಕ ಶಕ್ತಿಯನ್ನು ನೀಡಲಿದೆ. ಜೂನ್ 11–17ರ ಅವಧಿಯಲ್ಲಿ ಕರ್ನಾಟಕ, ಕೊಂಕಣ-ಗೋವಾ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಆಶಾದಾಯಕ ಮುನ್ಸೂಚನೆ ಇದೆ.

ಉತ್ತರ ಭಾರತ ಹಾಗೂ ದೆಹಲಿ-ಎನ್‌ಸಿಆರ್‌ಗೆ ತಂಪೆರೆದ ಮಳೆ
ಕೇರಳ ಪ್ರವೇಶಿಸಿರುವ ಮಾನ್ಸೂನ್ ಮುಂದಿನ 10-15 ದಿನಗಳಲ್ಲಿ ಮಧ್ಯ ಮತ್ತು ಪೂರ್ವ ಭಾರತಕ್ಕೂ ವ್ಯಾಪಿಸಲಿದೆ. ತೀವ್ರ ಬೇಸಿಗೆಯಿಂದ ಕಂಗಾಲಾಗಿದ್ದ ದೆಹಲಿ ಮತ್ತು ಸುತ್ತಮುತ್ತಲಿನ (Delhi-NCR) ಪ್ರದೇಶಗಳಲ್ಲಿ ಜೂನ್ 5 ರಂದು ಎರಡು ಹಂತಗಳಲ್ಲಿ ಹಗುರ ಮಳೆ ಮತ್ತು ಗುಡುಗು ಸಹಿತ ತಂಗಾಳಿ ಬೀಸಲಿದ್ದು, ತಾಪಮಾನ ಗಣನೀಯವಾಗಿ ಇಳಿಕೆಯಾಗಲಿದೆ.

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಲಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದ ಬಯಲು ಸೀಮೆಯಲ್ಲೂ ಚದುರಿದ ಮಳೆಯಾಗಿ ಇಡೀ ವಾತಾವರಣ ತಂಪಾಗಲಿದೆ.

ಒಡಿಶಾ, ಕರಾವಳಿ ಆಂಧ್ರಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಜೂನ್ 6 ರವರೆಗೆ ಸಾಧಾರಣ ತೇವಾಂಶದ ಒಣ ಹವಾಮಾನ ಇರಲಿದ್ದರೂ, ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಮುಂಗಾರು ಮಳೆಯು ಮುಂದಿನ ಕೆಲವು ದಿನಗಳಲ್ಲಿ ಇಡೀ ಭಾರತದಾದ್ಯಂತ ಕರಾವಳಿ ಹಾಗೂ ಒಳನಾಡುಗಳನ್ನು ತಂಪಾಗಿಸಿ, ಪ್ರಕೃತಿಗೆ ಹಸಿರು ಹೊದಿಕೆಯನ್ನು ನೀಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:46 am, Fri, 5 June 26

Source link

Ramalinga Reddy Resigns: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ – Kannada News

ಬೆಂಗಳೂರು, ಜೂನ್ 5: ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯಲ್ಲಿ, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಮೊದಲ ವಿಕೆಟ್ ಪತನವಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾ ರೆಡ್ಡಿ, ಶುಕ್ರವಾರ ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

Published On – 9:33 am, Fri, 5 June 26

Source link

World Environment Day 2026: ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ – Kannada News

ಪರಿಸರವು (Environment) ಸಕಲ ಜೀವ ಸಂಕುಲಗಳ ಬದುಕಿನ ಅಡಿಪಾಯ. ಪ್ರಸ್ತುತ, ಈ ಪರಿಸರವೇ ಅನೇಕ ಗಂಭೀರ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ಹವಾಮಾನ ಬದಲಾವಣೆ, ಕೈಗಾರಿಕೀಕರಣ, ಇಂಧನಗಳ ಅತಿಯಾದ ಬಳಕೆ ಮತ್ತು ಅರಣ್ಯನಾಶವು ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಪರಿಣಾಮವಾಗಿ, ಜಾಗತಿಕ ತಾಪಮಾನವು ಏರುತ್ತಿದೆ. ಹವಾಮಾನ ಬದಲಾವಣೆಯು ಪ್ರಪಂಚದ ಅನೇಕ ಭಾಗಗಳಲ್ಲಿ ಪ್ರವಾಹಗಳು, ಬರಗಳು, ಚಂಡಮಾರುತಗಳು, ಕಾಡ್ಗಿಚ್ಚು, ತೀವ್ರವಾದ ಶಾಖ ಸೇರಿದಂತೆ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದೆ.  ನಗರೀಕರ, ಅಭಿವೃದ್ಧಿ, ಅರಣ್ಯನಾಶ, ಪ್ಲಾಸ್ಟಿಕ್‌ನ ಅತಿಯಾದ ಬಳಕೆ ಒಟ್ಟಾರೆಯಾಗಿ ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಹಾಗಾಗಿ ಪರಿಸರವನ್ನು ಉಳಿಸಬೇಕು ಗಿಡ-ಮರಗಳನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್‌ 05 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪರಿಸರ ದಿನದ ಇತಿಹಾಸವೇನು?

ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು  1972 ರಲ್ಲಿ ಪ್ರಾರಂಭಿಸಿತು. 1972 ರಲ್ಲಿ, ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಮಾನವ ಪರಿಸರದ ಕುರಿತಾದ ಸ್ಟಾಕ್‌ಹೋಮ್ ಸಮ್ಮೇಳನವನ್ನು ಆಯೋಜಿಸಲಾಯಿತು. ಈ ಸಮ್ಮೇಳನದಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 5 ಅನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ಘೋಷಿಸಿತು. ಈ ದಿನವನ್ನು ಮೊದಲ ಬಾರಿಗೆ 1973 ರಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಜೂನ್‌ 05 ರಂದೇ ಏಕೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ?

1972 ರಲ್ಲಿ ಈ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸ್ಟಾಕ್‌ಹೋಮ್ ಸಮ್ಮೇಳನ ಎಂದು ಕರೆಯಲ್ಪಡುವ ಪರಿಸರ ಸಂರಕ್ಷಣೆಯ ಕುರಿತಾದ ಮೊದಲ ಜಾಗತಿಕ ಶೃಂಗಸಭೆಯನ್ನು ಆಯೋಜಿಸಿದ್ದರಿಂದ ಜೂನ್ 5 ರಂದು ವಿಶ್ವ ಪರಿಸರ ದಿನವೆಂದು ಆಯ್ಕೆ ಮಾಡಲಾಯಿತು. ಅನೇಕ ದೇಶಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ಪರಿಸರ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಿದವು. ಇದರ ನಂತರ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಅನ್ನು ಸ್ಥಾಪಿಸಲಾಯಿತು ಮತ್ತು ಜೂನ್ 5 ಅನ್ನು ವಿಶ್ವ ಪರಿಸರ ದಿನವೆಂದು ಘೋಷಿಸಲಾಯಿತು.

ಇದನ್ನೂ ಓದಿ: ಸೈಕಲ್‌ ಸವಾರಿ ಪರಿಸರ, ನಮ್ಮ ಆರೋಗ್ಯ ಎರಡಕ್ಕೂ ಒಳ್ಳೆಯದು

ವಿಶ್ವ ಪರಿಸರ ದಿನದ ಮಹತ್ವವೇನು?

  • ಹೆಚ್ಚುತ್ತಿರುವ ಮಾಲಿನ್ಯ, ಪ್ಲಾಸ್ಟಿಕ್ ಬಳಕೆ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿರುವುದರಿಂದ ಪರಿಸರವನ್ನು ರಕ್ಷಿಸುವುದು ಎಷ್ಟು ಮುಖ್ಯವೆಂದು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.
  • ಹವಾಮಾನ ಬದಲಾವಣೆ, ಮಾಲಿನ್ಯ, ಜೀವವೈವಿಧ್ಯತೆಯ ನಷ್ಟ ಮತ್ತು ಅನೇಕ ಪರಿಸರ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಪರಿಸರ ದಿನವು ಒಂದು ವಿಶೇಷ ಸಂದರ್ಭವಾಗಿದೆ.
  • ಈ ದಿನವು ಪರಿಸರವನ್ನು ಉಳಿಸಲು ಜನರನ್ನು ಪ್ರೇರೇಪಿಸುತ್ತದೆ.
  • ಈ ವಿಶೇಷ ದಿನದಂದು, ಪ್ರಪಂಚದಾದ್ಯಂತದ ಜನರು ಒಗ್ಗೂಡಿ ಪರಿಸರವನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ವಿಶ್ವ ಪರಿಸರ ದಿನದಂದು ಜನ ಸಾಮಾನ್ಯರು ಏನು ಮಾಡಬಹುದು?

  • ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ.
  • ಸಾಧ್ಯವಾದಷ್ಟು ಗಿಡ-ಮರಗಳನ್ನು ನೆಡಿ.
  • ನೀರು ಮತ್ತು ಶಕ್ತಿಯನ್ನು ಅನಗತ್ಯವಾಗಿ ವ್ಯರ್ಥ ಮಾಡುವುದನ್ನು ತಪ್ಪಿಸಿ.
  • ತ್ಯಾಜ್ಯವನ್ನು ಬೇರ್ಪಡಿಸುವ ಮೂಲಕ ಮರುಬಳಕೆಯನ್ನು ಪ್ರೋತ್ಸಾಹಿಸಿ.
  • ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅಭಿಯಾನಗಳಲ್ಲಿ ಭಾಗವಹಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ramalinga Reddy Pressmeet Live: ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಸುದ್ದಿಗೋಷ್ಠಿ ನೇರ ಪ್ರಸಾರ – Kannada News

ಬೆಂಗಳೂರು, ಜೂನ್ 5: ಜಲಸಂಪನ್ಮೂಲ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸಂಪುಟದಲ್ಲಿ ತಮಗೆ ಬೇಕಾದ ಖಾತೆ ಸಿಗದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಈ ವಿಚಾರವಾಗಿ ಅವರು ಗುರುವಾರವೇ ಸಿಎಂ ಡಿಕೆ ಶಿವಕುಮಾರ್ ಜತೆ ಮಾತುಕತೆ ನಡೆಸಿದ್ದರು. ಆದಾಗ್ಯೂ ಅವರಿಗೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಲಾಗಿದೆ. ಈ ವಿಚಾರವಾಗಿ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರಿನ ಕೋರಮಂಗಲದ ನಿವಾಸದಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಸುದ್ದಿಗೋಷ್ಠಿಯ ನೇರ ಪ್ರಸಾರ ಇಲ್ಲಿದೆ.

ಏತನ್ಮಧ್ಯೆ, ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಹೆಚ್​.ಕೆ.ಪಾಟೀಲ್, ಜಮೀರ್ ಅಹ್ಮದ್, ಮಧು ಬಂಗಾರಪ್ಪ ಕೂಡ ತೀವ್ರ ಬೇಸರಗೊಂಡಿದ್ದಾರೆ. ಇಲಾಖೆಗಳನ್ನು ಸಮರ್ಥವಾಗಿ ನಿಭಾಯಿಸಿದರೂ ಸ್ಥಾನ ಸಿಗದ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಚಿತ್ರಕ್ಕಾಗಿ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಮುಂದಾದ ಕೆವಿಎನ್? – Kannada News

ದಳಪತಿ ವಿಜಯ್ (Vijay) ನಟನೆಯ ಬಹುನಿರೀಕ್ಷಿತ ‘ಜನನಾಯಗನ್’ ಚಿತ್ರದ ಬಿಡುಗಡೆಗೆ ಎದುರಾಗಿರುವ ಅನಿಶ್ಚಿತತೆ ಮುಂದುವರಿದಿದೆ. ಸತತ ಪ್ರಯತ್ನಗಳ ಹೊರತಾಗಿಯೂ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಈ ಅನಿರೀಕ್ಷಿತ ವಿಳಂಬವು ಚಿತ್ರದ ಮೇಲೆ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡಿರುವ ವಿತರಕರು ಹಾಗೂ ಇತರ ಪಾಲುದಾರರಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ.

ಚಿತ್ರರಂಗದ ಮೂಲಗಳ ಪ್ರಕಾರ, ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ವಿತರಕರ ಹಿತರಕ್ಷಣೆಗಾಗಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಸೆನ್ಸಾರ್ ಮಂಡಳಿಯ ಸಮಸ್ಯೆಗಳು ಬಗೆಹರಿದು ಸಿನಿಮಾ ಬಿಡುಗಡೆಗೆ ಹಸಿರು ನಿಶಾನೆ ಸಿಗುವವರೆಗೆ, ವಿತರಕರಿಗೆ ಹಣವನ್ನು ಮರುಪಾವತಿ ಮಾಡಲು ನಿರ್ಮಾಪಕರು ಆಲೋಚಿಸುತ್ತಿದ್ದಾರೆ ಎಂದು ವರದಿ ಆಗಿದೆ. ನಂತರ ಚಿತ್ರ ಬಿಡುಗಡೆಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಿರ್ಧಾರದಿಂದ ನಿರ್ಮಾಪಕರ ಮೇಲಿನ ಆರ್ಥಿಕ ಹೊರೆ ಹಾಗೂ ರಿಸ್ಕ್ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.

ನಟ ವಿಜಯ್ ಅವರ ಅಪಾರ ಜನಪ್ರಿಯತೆ ಮತ್ತು ಅವರ ರಾಜಕೀಯ ಎಂಟ್ರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿರುವುದು ನಿಜವಾದರೂ, ‘ಜನನಾಯಗನ್’ ಚಿತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇದು ರಿಮೇಕ್ ಸಿನಿಮಾ ಎಂಬ ಚರ್ಚೆಗಳು ಈಗಾಗಲೇ ಜೋರಾಗಿದ್ದು, ಇದರ ಬೆನ್ನಲ್ಲೇ ಪೈರಸಿ ಕಾಟ ಕೂಡ ಚಿತ್ರದ ಬಿಸಿನೆಸ್‌ಗೆ ಹೊಡೆತ ನೀಡುವ ಭೀತಿ ಇದೆ. ಅಲ್ಲದೆ, ಬಿಡುಗಡೆ ತಡವಾದಷ್ಟೂ ಪ್ರೇಕ್ಷಕರಲ್ಲಿರುವ ಉತ್ಸಾಹ ಮತ್ತು ಚಿತ್ರದ ಮಾರುಕಟ್ಟೆ ಮೌಲ್ಯ ಕಡಿಮೆಯಾಗುವ ಅಪಾಯವಿರುತ್ತದೆ.

ಈ ಎಲ್ಲಾ ಆರ್ಥಿಕ ಒತ್ತಡಗಳಿಂದ ಹೊರಬರಲು ಮತ್ತು ಚಿತ್ರದ ಹವಾ ಹಾಗೇ ಉಳಿಸಿಕೊಳ್ಳಲು ಸೆನ್ಸಾರ್ ಮಂಡಳಿಯಿಂದ ಆದಷ್ಟು ಬೇಗ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: ವಿಜಯ್ ಕೊನೆಯ ಸಿನಿಮಾ ಆಗಬೇಕಿದ್ದಿದ್ದು ‘ಜನ ನಾಯಗನ್’ ಅಲ್ಲ, ಮತ್ಯಾವುದು?

‘ಜನ ನಾಯಗನ್’ ಚಿತ್ರವನ್ನು ಎಚ್​. ವಿನೋದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ಚಿತ್ರದಲ್ಲಿ ಮಮಿತಾ ಬೈಜು ಮುಖ್ಯ ಪಾತ್ರದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹಿಮಾಚಲದಲ್ಲಿ ವಿದೇಶಿ ಮಹಿಳೆಗೆ ರಸ್ತೆಯಲ್ಲಿ ವ್ಯಕ್ತಿಯಿಂದ ಕಿರುಕುಳ – Kannada News

ಶಿಮ್ಲಾ, ಜೂನ್ 05: ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿಯಾಗಿರುವ ಹಿಮಾಚಲ ಪ್ರದೇಶದಲ್ಲಿ ವಿದೇಶಿ ಮಹಿಳಾ ಪ್ರವಾಸಿಯೊಬ್ಬರಿಗೆ ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ(Harassment) ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಪ್ರವಾಸಿಗರ ಸುರಕ್ಷತೆಯ ಪರವಾಗಿ ಜನರು ಭಾರಿ ಧ್ವನಿ ಎತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ಅಥವಾ ಹೆಚ್ಚಿನ ಅಪಾಯ ಸಂಭವಿಸುವ ಮುನ್ನವೇ ಸಿಸಿಟಿವಿ ಮೂಲಕ ಕೃತ್ಯವು ಬೆಳಕಿಗೆ ಬಂದಿರುವುದು ಮತ್ತು ಸಾರ್ವಜನಿಕರು ತಕ್ಷಣವೇ ಕಾನೂನು ಸುವ್ಯವಸ್ಥೆಗೆ ಬೆಂಬಲವಾಗಿ ನಿಂತಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ.

‘ದಿ ಮಾಡರ್ನ್ ಹಿಮಾಚಲ’ ಸಾಮಾಜಿಕ ಮಾಧ್ಯಮ ಪುಟವು ಈ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಪ್ರವಾಸಿಗರ ಘನತೆಯನ್ನು ಎತ್ತಿಹಿಡಿಯುವ ಜವಾಬ್ದಾರಿಯುತ ಕಾರ್ಯ ಮಾಡಿದೆ. ದೃಶ್ಯಾವಳಿಗಳಲ್ಲಿ ವಿದೇಶಿ ಮಹಿಳೆ ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಕಟ್ಟಡದ ಹೊರಗೆ ನಿಂತಿದ್ದ ಯುವಕನೊಬ್ಬ ಅನುಚಿತವಾಗಿ ವರ್ತಿಸಿರುವುದು ದಾಖಲಾಗಿದೆ.
ಈ ಪೋಸ್ಟ್‌ನಲ್ಲಿ ಹಿಮಾಚಲ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಲಾಗಿದ್ದು, ಪ್ರವಾಸಿ ತಾಣಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇರುವ ಕಟ್ಟುನಿಟ್ಟಿನ ನಿಯಮಗಳನ್ನು ಮತ್ತಷ್ಟು ಬಲಪಡಿಸಲು ಇದು ಅಧಿಕಾರಿಗಳಿಗೆ ನೆರವಾಗಿದೆ.

ಪ್ರವಾಸೋದ್ಯಮದ ಇಮೇಜ್ ರಕ್ಷಣೆಗೆ ಡಿಜಿಟಲ್ ಒಗ್ಗಟ್ಟು
ವೀಡಿಯೊ ವೈರಲ್ ಆಗುತ್ತಿದ್ದಂತೆ ಅಂತರ್ಜಾಲದಲ್ಲಿ ಪ್ರವಾಸಿಗರ ಸುರಕ್ಷತೆಯ ಕುರಿತು ಅತ್ಯಂತ ಸಕಾರಾತ್ಮಕ ಮತ್ತು ಗಂಭೀರ ಚರ್ಚೆಗಳು ಆರಂಭವಾಗಿವೆ. ಭಾರತವು ಅತಿಥಿ ಸತ್ಕಾರಕ್ಕೆ ಹೆಸರಾದ ದೇಶವಾಗಿದ್ದು, ಪ್ರತಿಯೊಬ್ಬ ಸಂದರ್ಶಕನಿಗೂ ಸುರಕ್ಷಿತ ವಾತಾವರಣ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ನೆಟ್ಟಿಗರು ಒಕ್ಕೊರಲಿನಿಂದ ಪ್ರತಿಪಾದಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳೂ ಮರುಕಳಿಸದಂತೆ ತಡೆಯಲು ಆರೋಪಿಯನ್ನು ತ್ವರಿತವಾಗಿ ಗುರುತಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ವಿಡಿಯೋ

ಸುಧಾರಣೆಯ ನಿರೀಕ್ಷೆ ಮತ್ತು ಮುಂದಿನ ಹೆಜ್ಜೆ
ಈ ದೃಶ್ಯಗಳ ನಿಖರವಾದ ಸ್ಥಳದ ಸತ್ಯಾಸತ್ಯತೆಯ ಪರಿಶೀಲನೆ ನಡೆಯುತ್ತಿದ್ದರೂ, ಸಾರ್ವಜನಿಕರ ಈ ತೀವ್ರ ಜಾಗೃತಿಯು ಆಡಳಿತ ಯಂತ್ರವನ್ನು ಅಲರ್ಟ್ ಮಾಡಿದೆ. ಹಿಮಾಚಲ ಪ್ರದೇಶದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಪೊಲೀಸ್ ಗಸ್ತು ಮತ್ತು ಸಿಸಿಟಿವಿ ಕಣ್ಗಾವಲನ್ನು ಮತ್ತಷ್ಟು ಆಧುನೀಕರಿಸಲು ಈ ಘಟನೆ ಪ್ರೇರಣೆ ನೀಡಿದೆ.

ಮತ್ತಷ್ಟು ಓದಿ: ಮದುವೆಯಾಗಿ ಆರೇ ತಿಂಗಳಿಗೆ ಮಹಿಳೆ ಸಾವು: ವರದಕ್ಷಿಣೆ ಕಿರುಕುಳ, ಕೊಲೆ ಮಾಡಿ ನೇಣು ಹಾಕಿರುವ ಆರೋಪ

ಸಾರ್ವಜನಿಕರ ಮತ್ತು ಕಾನೂನು ರಕ್ಷಕರ ಈ ಜಂಟಿ ಜಾಗೃತಿಯು ಮುಂಬರುವ ದಿನಗಳಲ್ಲಿ ದೇಶ-ವಿದೇಶಗಳ ಪ್ರವಾಸಿಗರು ಹಿಮಾಚಲದ ಶಾಂತಿ ಮತ್ತು ಸೌಂದರ್ಯವನ್ನು ಯಾವುದೇ ಆತಂಕವಿಲ್ಲದೆ ಆನಂದಿಸಲು ಮತ್ತಷ್ಟು ಭದ್ರವಾದ ರಕ್ಷಣಾ ಕವಚವನ್ನು ನಿರ್ಮಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version