T20 World Cup 2026: ಟಿ20 ವಿಶ್ವಕಪ್​​​ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ ಪಾಕಿಸ್ತಾನ – Kannada News | T20 World Cup 2026: Pakistan Boycotts India Clash Over Political Tensions

2026 ರ ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನವೇ ದಿನಕ್ಕೊಂದು ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇಷ್ಟು ದಿನ ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ವಿವಾದವನ್ನು ಬಗೆಹರಿಸಲು ಹರಸಾಹಸ ಪಟ್ಟಿದ್ದ ಐಸಿಸಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಟಿ20 ವಿಶ್ವಕಪ್​ನಲ್ಲಿ ನಮ್ಮ ತಂಡ ಭಾಗವಹಿಸುವುದು ಇನ್ನು ಖಚಿತವಾಗಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಐಸಿಸಿಗೆ ದೊಡ್ಡ ಶಾಕ್ ನೀಡಿದೆ. ತನ್ನ ತಂಡ ಟಿ20 ವಿಶ್ವಕಪ್​ನಲ್ಲಿ ಆಡುವುದನ್ನು ಪಾಕಿಸ್ತಾನ ಸರ್ಕಾರ ಖಚಿತಪಡಿಸಿದೆ. ಆದರೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತದ ವಿರುದ್ಧ ಗುಂಪು ಹಂತದ ಪಂದ್ಯವನ್ನು ಆಡುವುದಿಲ್ಲ ಎಂದಿದೆ. ರಾಜಕೀಯ ಮತ್ತು ಇತ್ತೀಚಿನ ಬೆಳವಣಿಗೆಗಳ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಕ್ ಸರ್ಕಾರ ತಿಳಿಸಿದೆ.

Source link

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು! – Kannada News | Water suddenly started gushing out after Underground Pipe Bursts inside the house Video viral

ಬಿಲಾಸ್‌ಪುರ, ಫೆಬ್ರವರಿ 1: ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಶನಿವಾರ (ಜನವರಿ 31) ಮನೆಯ ನೆಲದೊಳಗಿನ ನೀರಿನ ಪೈಪ್ ಒಡೆದು ಇದ್ದಕ್ಕಿದ್ದಂತೆ ನೀರು ಮೇಲೆ ಚಿಮ್ಮಿದೆ. ನೆಲಕ್ಕೆ ಹಾಕಿದ್ದ ಟೈಲ್ಸನ್ನು ಒಡೆದು ನೀರು ಮೇಲೆ ಹಾರಿದೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿದೆ. ನೆರೆಹೊರೆಯಲ್ಲಿ ಬೋರ್​​ವೆಲ್ ಕೆಲಸ ನಡೆಯುತ್ತಿದ್ದುದರಿಂದ ಅದರ ಒತ್ತಡದಿಂದ ಈ ಮನೆಯೊಳಗೆ ನೀರಿನ ಪೈಪ್ ಒಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಿಂಗ್ ಕೊಹ್ಲಿಯ ವಿಶ್ವ ದಾಖಲೆ ಮುರಿದ ಬಾಬರ್ ಆಝಂ

Source link

ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ ಆರೆಂಜ್ ಎಕನಾಮಿ ಎಂದರೇನು? – Kannada News | What is Orange Economy, highlighted in the Budget by Nirmala Sitharaman

ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ (Union Budget 2026) ಭಾಷಣದಲ್ಲಿ ಆರೆಂಜ್ ಎಕನಾಮಿ (Orange Economy) ಬಗ್ಗೆ ಮಾತನಾಡಿದ್ದಾರೆ. ಆರೆಂಜ್ ಎಕನಾಮಿ ಅಥವಾ ಕಿತ್ತಳೆ ಆರ್ಥಿಕತೆಗೆ ಪುಷ್ಟಿ ಕೊಡುವುದಾಗಿ ಹೇಳಿದ್ದಾರೆ. ಬಜೆಟ್​ಗೆ ಮುಂಚೆ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯಲ್ಲೂ ಕಿತ್ತಳೆ ಆರ್ಥಿಕತೆಯ ಪ್ರಸ್ತಾಪ ಇತ್ತು. ಸರ್ಕಾರ ಯಾಕೆ ಆರೆಂಜ್ ಎಕನಾಮಿ ಬಗ್ಗೆ ಮುತುವರ್ತಿ ತೋರುತ್ತಿದೆ?

ಆರೆಂಜ್ ಎಕನಾಮಿ ಎಂದರೇನು?

ಅನಿಮೇಶನ್, ಗೇಮಿಂಗ್, ಫಿಲಂ, ಮ್ಯೂಸಿಕ್, ಡಿಸೈನ್, ಡಿಜಿಟಲ್ ಕಂಟೆಂಟ್ ಇತ್ಯಾದಿ ಕ್ರಿಯೇಟಿವ್ ಕೆಲಸಗಳಿರುವ ಕ್ಷೇತ್ರವನ್ನು ಆರೆಂಜ್ ಎಕನಾಮಿ ಎಂದು ಬಣ್ಣಿಸಲಾಗುತ್ತದೆ. ಹೊಸ ಕ್ರಿಯೇಟಿವ್ ಐಡಿಯಾಗಳು, ಟೆಕ್ನಾಲಜಿ, ಸಂಸ್ಕೃತಿ ಇತ್ಯಾದಿಯಿಂದ ಪ್ರೇರಿತವಾದ ಈ ಉದ್ಯಮದಿಂದ ಉದ್ಯೋಗಸೃಷ್ಟಿ, ನಗರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಮೌಲ್ಯ ವರ್ಧಿಸಬಲ್ಲುದು.

ಜಾಹೀರಾತು, ಅನಿಮೇಶನ್, ಸಾಫ್ಟ್​ವೇರ್, ವಿಡಿಯೋ ಗೇಮ್ಸ್, ಸಿನಿಮಾ, ಫ್ಯಾಷನ್, ಪಬ್ಲಿಶಿಂಗ್ ಇತ್ಯಾದಿ ಸೆಕ್ಟರ್​ಗಳು ಈ ಆರ್ಥಿಕ ವರ್ಗಕ್ಕೆ ಸೇರುತ್ತವೆ. ಯೂಟ್ಯೂಬ್​ನ ಕಂಟೆಂಟ್ ಕ್ರಿಯೇಟರ್​ಗಳು, ರೀಲ್ಸ್ ಮಾಡುವವರ ಬ್ಯುಸಿನೆಸ್ ಕೂಡ ಇದೇ ವರ್ಗಕ್ಕೆ ಸೇರುತ್ತದೆ.

ಇದನ್ನೂ ಓದಿ: Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​

‘ಭಾರತದ ಅನಿಮೇಶನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ (ಎವಿಜಿಸಿ) ಸೆಕ್ಟರ್ ಬೆಳೆಯುತ್ತಿರುವ ಉದ್ಯಮವಾಗಿದೆ. 2030ರೊಳಗೆ 20 ಲಕ್ಷ ವೃತ್ತಿಪರರ ಅಗತ್ಯತೆ ಇದಕ್ಕಿರುತ್ತದೆ. 15,000 ಹೈಸ್ಕೂಲುಗಳು, 500 ಕಾಲೇಜುಗಳಲ್ಲಿ ಎವಿಜಿಸಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್​ಗಳನ್ನು ಆರಂಭಿಸಲು ಮುಂಬೈನಲ್ಲಿರುವ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಕಂಟೆಂಟ್ ಟೆಕ್ನಾಲಜೀಸ್​ಗೆ ನೆರವು ನೀಡಲಾಗುವುದು’ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ವೇವ್ಸ್ ಸಮಿಟ್​ನಲ್ಲೂ ಪ್ರಧಾನಿ ಮೋದಿಯಿಂದ ಪ್ರಸ್ತಾಪ

2025ರ ವೇವ್ಸ್ ಶೃಂಗಸಭೆಯಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಭಾರತದ ಆರೆಂಜ್ ಎಕನಾಮಿ ಬಗ್ಗೆ ಪ್ರಸ್ತಾಪ ಮಾಡಿದ್ದರು.

2025-26ರ ಆರ್ಥಿಕ ಸಮೀಕ್ಷೆಯು ಆರೆಂಜ್ ಎಕನಾಮಿ ಬಗ್ಗೆ ಪ್ರಸ್ತಾಪಿಸಿ, ಭಾರತದ ಉದ್ಯೋಗ, ನಗರ ಸೇವೆ ಮತ್ತು ಪ್ರವಾಸೋದ್ಯಮಕ್ಕೆ ಇದು ಪುಷ್ಟಿ ಕೊಡಬಲ್ಲುದು ಎಂದು ಅಭಿಪ್ರಾಯಪಡಲಾಗಿತ್ತು.

ಇದನ್ನೂ ಓದಿ: ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್​ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು?

ಕ್ರಿಯೇಟಿವ್ ಉದ್ಯಮಗಳನ್ನು ಮನರಂಜನೆಯ ಬ್ಯುಸಿನೆಸ್ ಎಂದು ನೋಡದೇ ಏಕೀಕೃತ ನಗರ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ತಂತ್ರವಾಗಿ ಪರಿಗಣಿಸಬೇಕು. ಡಿಸೈನರ್​ಗಳು ಮತ್ತು ಕ್ರಿಯೇಟಿವ್ ಪ್ರೊಫೆಷನ್​ಗಳ ಕೊರತೆಯನ್ನು ನೀಗಿಸಲು ಸೂಕ್ತ ಕೌಶಲ್ಯ ತರಬೇತಿಯ ವ್ಯವಸ್ಥೆ ಮಾಡಬೇಕು ಎಂಬಿತ್ಯಾದಿ ಸಲಹೆಗಳನ್ನು ಆರ್ಥಿಕ ಸಮಿಕ್ಷೆಯಲ್ಲಿ ನೀಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ – Kannada News | Yash mother Pushpa talks about land dispute here is the video

ಯಶ್ (Yash) ತಾಯಿ ಪುಷ್ಪ ಅವರಿಗೆ ಸೇರಿದ ಜಾಗದ ವಿವಾದ ಮುಗಿಯುತ್ತಲೇ ಇಲ್ಲ. ಈ ಮೊದಲು ಯಶ್ ಅವರ ತಾಯಿ ಹಾಕಿದ್ದ ಕಾಂಪೌಂಡ್ ಅನ್ನು ದೇವರಾಜ್ ಹೆಸರಿನ ವ್ಯಕ್ತಿ ಧ್ವಂಸ ಮಾಡಿ, ಜಮೀನು ತಮಗೆ ಸೇರಿದ್ದರು ಎಂದಿದ್ದರು. ಇದೀಗ ಯಶ್ ಅವರ ತಾಯಿ ಪುಷ್ಪ ಅವರು ಕಾಂಪೌಂಡ್ ಅನ್ನು ಮತ್ತೆ ನಿರ್ಮಿಸುವ ಪ್ರಯತ್ನ ಮಾಡಿದ್ದು, ಈ ವೇಳೆ ಬಾರಿ ಜಗಳಗಳು ನಡೆದಿವೆ. ಇದೀಗ ಮಾಧ್ಯಮಗಳ ಎದುರು ಮಾತನಾಡಿರುವ ಯಶ್ ಅವರ ತಾಯಿ ಪುಷ್ಪ, ‘ಕೆಲವರು ಯಶ್ ಅವರ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳು ನಮ್ಮ ಬಳಿ ಇದ್ದು, ನಾನೇ ಅದರ ನಿಜವಾದ ಮಾಲಕಿ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ವಿರುದ್ಧದ ಪಂದ್ಯ ಮುಗಿಯುವ ಮುನ್ನವೇ ವಿಶ್ವಕಪ್ ಸೆಮಿಫೈನಲ್‌ಗೇರಿದ ಭಾರತ – Kannada News | U19 World Cup: India Qualifies for Semi finals via NRR after Pakistan Thriller

ಅಂಡರ್-19 ಏಕದಿನ ವಿಶ್ವಕಪ್‌ನ (U19 World Cup 2026) ಮಾಡು-ಮರು ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 252 ರನ್ ಕಲೆಹಾಕಿತು. ತಂಡದ ಪರ ಮೊದಲ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೇ ಔಟ್ ಆದರು. ಇದರಿಂದಾಗಿ, ಟೀಂ ಇಂಡಿಯಾದ ಮೇಲೆ ಒತ್ತಡ ಹೆಚ್ಚಾಯಿತು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ವೇದಾಂತ್ ತ್ರಿವೇದಿ ತಂಡದ ಇನ್ನಿಂಗ್ಸ್ ನಿಭಾಯಿಸಿ 68 ರನ್‌ ಬಾರಿಸಿದರು. ಇವರೊಂದಿಗೆ ಆರಂಭಿಕ ವೈಭವ್ ಸೂರ್ಯವಂಶಿ 30 ರನ್​, ಆರ್‌ಎಸ್ ಅಂಬ್ರೀಶ್ 29 ರನ್, ಕನಿಷ್ಕ್ ಚೌಹಾಣ್ 35 ಮತ್ತು ಖಿಲಾನ್ ಪಟೇಲ್ 21 ರನ್​ಗಳ ಕಾಣಿಕೆ ನೀಡಿದರು.

ಗುರಿ ಬೆನ್ನಟ್ಟುವಲ್ಲಿ ಪಾಕ್ ವಿಫಲ

ಈ ಹಿಂದೆ ನಡೆದಿದ್ದ ಏಷ್ಯಾಕಪ್‌ನಲ್ಲಿ ಇದೇ ಭಾರತ ತಂಡವನ್ನು ಸೋಲಿಸಿದ್ದ ಪಾಕಿಸ್ತಾನ ಈ ಪಂದ್ಯದಲ್ಲೂ ಗೆಲುವಿನ ಇರಾದೆಯಲ್ಲಿತ್ತು. ಆದರೆ ಸೆಮಿಫೈನಲ್‌ಗೇರಬೇಕೆಂದರೆ ಪಾಕಿಸ್ತಾನ ಈ ಪಂದ್ಯವನ್ನು 50 ಓವರ್​ಗಳ ಬದಲಿಗೆ 33.3 ಓವರ್​ಗಳಲ್ಲಿ ಗೆದ್ದುಕೊಳ್ಳಬೇಕಿತ್ತು. ಆದರೆ ಪಾಕಿಸ್ತಾನ ತಂಡಕ್ಕೆ 34 ಓವರ್​ಗಳ ಒಳಗೆ ಗುರಿ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ ನೆಟ್ ರನ್​ರೇಟ್ ಆದಾರದ ಮೇಲೆ ಟೀಂ ಇಂಡಿಯಾ ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

252 ರನ್ ಕಲೆಹಾಕಿದ ಭಾರತ

ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿತು. ಹಮ್ಜಾ ಜಹೂರ್ ಮತ್ತು ಸಮೀರ್ ಮಿನ್ಹಾಸ್ 23 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ಸಮೀರ್ ಮಿನ್ಹಾಸ್ ಕೇವಲ 9 ರನ್‌ಗಳಿಸಿ ಔಟಾದರು. ಇದರಿಂದಾಗಿ, ಪಾಕಿಸ್ತಾನದ ಮೇಲಿನ ಒತ್ತಡ ಹೆಚ್ಚಾಯಿತು. ಆ ನಂತರ, ಹಮ್ಜಾ ಜಹೂರ್ ಮತ್ತು ಉಸ್ಮಾನ್ ಖಾನ್ ತಂಡದ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 80 ಎಸೆತಗಳಲ್ಲಿ 65 ರನ್ ಗಳಿಸಿತು. ಇದರಿಂದಾಗಿ, ಟೀಂ ಇಂಡಿಯಾದ ಉದ್ವಿಗ್ನತೆ ಹೆಚ್ಚಾಯಿತು. ಆದರೆ ಆರಂಭಿಕ ಹಮ್ಜಾ ಜಹೂರ್ 42 ರನ್​ಗಳಿಗೆ ಔಟಾಗುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ನಂತರ ಉಸ್ಮಾನ್ ಖಾನ್ ಮತ್ತು ನಾಯಕ ಫರ್ಹಾನ್ ಯೂಸುಫ್ ನಿಧಾನಗತಿಯಾಗಿ ಇನ್ನಿಂಗ್ಸ್ ಕಟ್ಟಿದರು. ಇದೇ ವೇಳೆ ಉಸ್ಮಾನ್ ಖಾನ್ 77 ಎಸೆತಗಳಲ್ಲಿ 5 ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.

ಟಿ20 ವಿಶ್ವಕಪ್‌ನಲ್ಲಿ ಒಂದೇ ತಂಡದ ಪರವಾಗಿ ಆಡಲಿದ್ದಾರೆ ಭಾರತ- ಪಾಕ್ ಮೂಲದ ಆಟಗಾರರು

ಭಾರತದ ಕರಾರುವಕ್ಕಾದ ದಾಳಿ

ಇತ್ತ ಫರ್ಹಾನ್ ಯೂಸುಫ್ 39 ಓವರ್‌ಗಳಲ್ಲಿ 38 ರನ್ ಗಳಿಸಿ ಔಟಾದರು. ಆ ನಂತರ, ಬ್ಯಾಟಿಂಗ್‌ಗೆ ಬಂದ ಅಹ್ಮದ್ ಹುಸೇನ್ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗದೆ 6 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಔಟಾದರು. ಹೀಗಾಗಿ ಪಾಕಿಸ್ತಾನ 33.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತು. ಮೇಲೆ ಹೇಳಿದಂತೆ ಭಾರತ ಗೆಲುವಿಗೆ ನಿಗದಿಪಡಿಸಿದ 252 ರನ್‌ಗಳ ಗುರಿಯನ್ನು 33.3 ಓವರ್‌ಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಪಾಕಿಸ್ತಾನ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ಆದ್ದರಿಂದ, ಈ ಪಂದ್ಯವನ್ನು ಪಾಕಿಸ್ತಾನ ಗೆದ್ದರೂ ಸಹ, ಅದು ಅಪ್ರಸ್ತುತವಾಗುತ್ತದೆ. ಏಕೆಂದರೆ ಭಾರತಕ್ಕೆ ಸೆಮಿಫೈನಲ್‌ಗೆ ಟಿಕೆಟ್ ಸಿಕ್ಕಿದೆ. ಭಾರತದ ನೆಟ್ ರನ್ ದರ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ. ಆದ್ದರಿಂದ, ಪಾಕಿಸ್ತಾನ ಈಗ ಗೆದ್ದರೂ ಸಹ, ಉಪಯೋಗಕ್ಕೆ ಬರುವುದಿಲ್ಲ. ಪ್ರಸ್ತುತ ಭಾರತದ ನೆಟ್ ರನ್​ರೇಟ್ +3.337 ಇದ್ದರೆ, ಪಾಕಿಸ್ತಾನದ ನೆಟ್ ರನ್​ರೇಟ್ +1.484 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:22 pm, Sun, 1 February 26

Source link

ಗಂಡ ಡ್ರೈವಿಂಗ್ ಕಲಿಸುವಾಗ ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ ಹೆಂಡತಿಯಿಂದ ಕೆರೆಗೆ ಬಿದ್ದ ಕಾರು – Kannada News | Car plunged into Water pond after wife accidently pressed accelerator instead of Break in Karaikudi

ಚೆನ್ನೈ, ಫೆಬ್ರವರಿ 1: ತಮಿಳುನಾಡಿನ ಕಾರೈಕುಡಿಯಲ್ಲಿ ಕಣ್ಣನ್ ಎಂಬ ವ್ಯಕ್ತಿ ತನ್ನ ಹೆಂಡತಿಗೆ ಕಾರು ಓಡಿಸುವುದು ಹೇಗೆಂದು ಕಲಿಸುತ್ತಿದ್ದರು. ಆಗ ಆ ಮಹಿಳೆ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿದಾಗ, ಕಾರು (Car) ದೇವಸ್ಥಾನದ ಕೊಳಕ್ಕೆ ಉರುಳಿ ಬಿದ್ದಿತು. ಇದರಿಂದಾಗಿ ಆ ಪ್ರದೇಶದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಯಿತು. ಕಣ್ಣನ್ ಶಿವಗಂಗೈ ಜಿಲ್ಲೆಯ ಕಾರೈಕುಡಿ ಬಳಿಯ ಕಲ್ಲಲ್ ಪ್ರದೇಶದ ನಿವಾಸಿ. ಅವರು ನಿನ್ನೆ (ಜನವರಿ 31) ತಮ್ಮ ಮಕ್ಕಳನ್ನು ಕಾರಿನಲ್ಲಿ ಶಾಲೆಗೆ ಕರೆದೊಯ್ದರು. ಅವರನ್ನು ಶಾಲೆಗೆ ಬಿಟ್ಟ ನಂತರ ಕಣ್ಣನ್ ತನ್ನ ಹೆಂಡತಿಯೊಂದಿಗೆ ಮನೆಗೆ ಮರಳಿದರು. ಆ ಸಮಯದಲ್ಲಿ, ಅವರ ಪತ್ನಿ ಕಣ್ಣನ್ ಅವರನ್ನು ಕಾರು ಓಡಿಸುವುದು ಹೇಗೆಂದು ಕಲಿಸಲು ಕೇಳಿಕೊಂಡರು.

ಅವರ ಪತ್ನಿಯ ಆಸೆಯಂತೆ ಕಣ್ಣನ್ ಕಲ್ಲಕ್ ತೆಪ್ಪಕುಲಂ ಪ್ರದೇಶದಲ್ಲಿ ತಮ್ಮ ಹೆಂಡತಿಗೆ ಕಾರು ಓಡಿಸುವುದು ಹೇಗೆಂದು ಕಲಿಸುತ್ತಿದ್ದರು. ಕಣ್ಣನ್ ಸಹಾಯದಿಂದ ಡ್ರೈವಿಂಗ್ ಅಭ್ಯಾಸ ಮಾಡುತ್ತಿದ್ದ ಅವರ ಪತ್ನಿ ಬ್ರೇಕ್ ಹಾಕುವ ಬದಲು ಆಕ್ಸಿಲರೇಟರ್ ಮೇಲೆ ಕಾಲು ಊರಿದರು. ಇದರ ಪರಿಣಾಮವಾಗಿ ಕಾರು ನಿಯಂತ್ರಣ ತಪ್ಪಿ ದೇವಸ್ಥಾನದ ಕೆರೆಯ ಮೆಟ್ಟಿಲುಗಳ ಮೂಲಕ ರಸ್ತೆಯಿಂದ ಕೆಳಗೆ ಉರುಳಿ ಕೆರೆಯೊಳಗೆ ಬಿದ್ದಿತು. ಕೆರೆಯಲ್ಲಿ ಸಾಕಷ್ಟು ನೀರು ಇದ್ದ ಕಾರಣದಿಂದಾಗಿ ಕಾರು ನಿಧಾನವಾಗಿ ಮುಳುಗಲು ಪ್ರಾರಂಭಿಸಿತು.

ಇದನ್ನೂ ಓದಿ: ಹೈದಾರಾಬಾದ್​ನಲ್ಲಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಕಾರು ಕೊಳಕ್ಕೆ ಬಿದ್ದು ಮುಳುಗುತ್ತಿರುವುದನ್ನು ನೋಡಿ ಆ ಪ್ರದೇಶದ ಸಾರ್ವಜನಿಕರು ಆಘಾತಕ್ಕೊಳಗಾದರು. ಕಾರಿನಲ್ಲಿ ಗಂಡ ಹೆಂಡತಿ ಇದ್ದುದನ್ನು ನೋಡಿದ ಸಾರ್ವಜನಿಕರು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಕಾರು ಮುಳುಗಲು ಪ್ರಾರಂಭಿಸುತ್ತಿರುವುದನ್ನು ಅರಿತ ಗಂಡ ಹೆಂಡತಿ ತಕ್ಷಣ ಕಾರಿನ ಬಾಗಿಲು ತೆರೆದು ಹೊರಬಂದರು. ಹೀಗಾಗಿ, ಅವರು ಯಾವುದೇ ತೊಂದರೆಯಿಲ್ಲದೆ ಬದುಕುಳಿದರು.

ಇದನ್ನೂ ಓದಿ: ಬಸ್​​ ಡಿಕ್ಕಿಯ ರಭಸಕ್ಕೆ ಹಾರಿಬಿದ್ದ ಕಾರು: ವಿಡಿಯೋ ವೈರಲ್​​

ದಂಪತಿಗಳು ಬಾಗಿಲು ತೆರೆದು ಹೊರಬರುತ್ತಿದ್ದಂತೆ ಕಾರು ಕೆರೆಯ ಮಧ್ಯಕ್ಕೆ ಉರುಳಿ ಮುಳುಗಿತು. ಈ ಸಂದರ್ಭದಲ್ಲಿ, ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಅಗ್ನಿಶಾಮಕ ದಳದ ಸಹಾಯದಿಂದ ಕಾರನ್ನು ಹೊರತಂದರು. ಕಾರು ಡ್ರೈವಿಂಗ್ ಕಲಿಸುವಾಗ ಪತಿ-ಪತ್ನಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಅಪಘಾತಕ್ಕೀಡಾದ ಘಟನೆ ಈ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:12 pm, Sun, 1 February 26

Source link

ಕರ್ನಾಟಕ ಪೊಲೀಸರಿಗೆ ದೊಡ್ಡ ತಲೆನೋವಾದ ಕೇರಳಿಯನ್ ಮಲ್ಲು ದರೋಡೆ ಗ್ಯಾಂಗ್ – Kannada News | Karnataka Police Check Post In gundlupet for Kerala Mallu robbery Gang theft gold businessmen In Chamarajnagar Border

ಪೊಲೀಸ್ರು ಚಾಹನ ತಪಾಸೆ ಮಾಡುತ್ತಿರುವುದು

ಚಾಮರಾಜನಗರ, (ಫೆಬ್ರವರಿ 01): ಕರ್ನಾಟಕ (Karnataka) ಕೇರಳ  (Kerala) ಗಡಿಯಲ್ಲಿ ನಟೋರಿಯಸ್ ಕೇರಳದ ಮಲ್ಲು ಗ್ಯಾಂಗ್ ಉಪಟಳ ಹೆಚ್ಚಾಗಿದೆ. ಈ ದರೋಡೆಕೋರರ ಗ್ಯಾಂಗ್​​​ಗೆ ಚಿನ್ನದ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿದ್ದು, ಗುಂಡ್ಲುಪೇಟೆ (Gundlupet) ಮಾರ್ಗವಾಗಿ ಕೇರಳಕ್ಕೆ ತೆರಳುವ ಚಿನ್ನದ ಉದ್ಯಮಿಗಳನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತದೆ. ಕಳೆದ ಎರೆಡು ತಿಂಗಳ ಹಿಂದಷ್ಟೆ ಒಂದು ಕಾಲು ಕೆಜಿ ಚಿನ್ನ ಊಟಿ ಮಾಡಿ ಗಾಯಬ್ ಆಗಿದ್ದ ಆರೋಪಿಗಳ ಪೈಕಿ ಈಗಾಗ್ಲೆ ಪೊಲೀಸರು 3 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನು ಪ್ರಕರಣದ ಕಿಂಗ್ ಪಿನ್ ಗಾಗಿ ಶೋಧಕಾರ್ಯ ನಡೆದಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಚಿನ್ನದ ಉದ್ಯಮಿಯ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಚಿನ್ನದ ಉದ್ಯಮಿಗಳಾದ ಜಮ್ಸಿದ್ ಹಾಗೂ ಫೈಸಲ್ ನ ಅಡ್ಡಗಟ್ಟಿ 10 ಲಕ್ಷ ರೂ. ನಗದು ದೋಚಿ ಪರಾರಿಯಾಗಿದೆ. ಹೀಗಾಗಿ ಕೇರಳದ ಮಲ್ಲು ಗ್ಯಾಂಗ್ ಕೃತ್ಯಕ್ಕೆ ಕಡಿವಾಣ ಹಾಕಲು ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ.

ಇನ್ನು ಈ ಫೈಸಲ್ ಮತ್ತು ಜಮ್ಸಿದ್ ಇಬ್ಬರೂ ಕೇರಳದಿಂದ ಬಂದು ತಮ್ಮ ಚಿನ್ನವನ್ನ ಮಾರಾಟ ಮಾಡಿ 10 ಲಕ್ಷ ನಗದನ್ನ ತೆಗೆದು ಕೊಂಡು ಹೋಗುತ್ತಿದ್ದರು. ಈ ವೇಳೆ ಗುಂಡ್ಲುಪೇಟೆ ಕೇರಳ ಗಡಿ ಮಧ್ಯೆ ಬರುವ ಕಾಡಿನಲ್ಲಿ ಇನ್ನೋವಾ ಕಾರಿನಲ್ಲಿ ಬಂದು ಚಿನ್ನದ ಉದ್ಯಮಿಗಳನ್ನ ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಬೆದರಿಸಿ 10 ಲಕ್ಷ ದರೋಡೆ ಮಾಡಿ ಪರಾರಿಯಾಗಿದೆ. ದರೋಡೆ ಮಾಡಿದ ಸ್ಥಳದಲ್ಲಿ ನೆಟ್ವರ್ಕ್ ಸಿಗಲ್ಲ. ಯಾವ ಮೊಬೈಲ್ ನ ಸಿಮ್ ಕೂಡ ವರ್ಕ್ ಆಗಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ.

ಇದನ್ನೂ ಓದಿ: ಮಾದಪ್ಪನ ಭಕ್ತರಿಗೆ ಮಹತ್ವದ ಸೂಚನೆ: ಮಲೆ ಮಹದೇಶ್ವರನ ದರ್ಶನಕ್ಕೆ ಹೊಸ ರೂಲ್ಸ್

ಇನ್ನು ಘಟನೆ ನಡೆದಿದ್ದು ಜನವರಿ 10ರರಂದು. ಆದ್ರೆ ದೂರುದಾರರು ಜನವರಿ 27ಕ್ಕೆ ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಕೈಗೆತ್ತಿಕೊಂಡ ಖಾಕಿ, ದರೋಡೆ ಗ್ಯಾಂಗ್ ಬಂಧನಕ್ಕಾಗಿ ಈಗ ಮದ್ದೂರು ಚೆಕ್ ಪೋಸ್ಟ್ ಟೋಲ್ ಗೇಟ್ ಜೊತೆ ಈಗ ಮತ್ತೊಂದು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದಾರೆ. ಕೇರಳದಿಂದ ಕರ್ನಾಟಕ, ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕೇರಳದ ಮಲ್ಲು ಗ್ಯಾಂಗ್ ಬಾಲ ಬಿಚ್ಚದಂತೆ ಅಲರ್ಟ್ ಆಗಿದ್ದಾರೆ.

ಇನ್ನು ದೂರು ದಾರರ ಮೇಲೆಯು ಪೊಲೀಸರಿಗೆ ಸಂಶಯವಿದೆ. ಘಟನೆ ನಡೆದಿದ್ದು ಜನವರಿ 10ರಂದು. ಆದ್ರೆ ಬಂದು ದೂರು ನೀಡಿದ್ದು ಜನವರಿ 27ರಂದು. ಘಟನೆ ನಡೆದು 7 ದಿನ ಬಳಿಕ ತಡವಾಗಿ ಏಕೆ ದೂರು ನೀಡಿದ್ದಾರೆ? ಇನ್ನು ದರೋಡೆ ಮಾಡಿದ ಆರೋಪಿಗಳು ಕೂಡ ದೂರದಾರರ ಪರಿಚಯಸ್ಥರು ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು? – Kannada News | Film Chamber new president Jayamala talks about her plans

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka film chamber of commerce) ಅಧ್ಯಕ್ಷ ಸೇರಿದಂತೆ ಇನ್ನೂ ಕೆಲವು ಸ್ಥಾನಗಳಿಗೆ ನಿನ್ನೆ (ಜನವರಿ 31) ಮತದಾನ ನಡೆದಿದ್ದು, ಹಿರಿಯ ನಟಿ ಜಯಮಾಲ ಅವರು ನೂತನ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ. ಜಯಮಾಲ ಅವರು ಫಿಲಂ ಚೇಂಬರ್​​ನ ಮೊದಲ ಮಹಿಳಾ ಅಧ್ಯಕ್ಷೆ ಆಗಿದ್ದು, ಎರಡನೇ ಬಾರಿ ಅವರು ಫಿಲಂ ಚೇಂಬರ್​​ನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಇಂದು ಪದಗ್ರಹಣ ಮಾಡಿದ ಜಯಮಾಲ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ತಮ್ಮ ಮುಂದಿನ ಯೋಜನೆಗಳು, ತರಲಿರುವ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಾರಕಕ್ಕೇರಿದ ಯಶ್ ತಾಯಿ ಸೈಟ್ ವಿವಾದ: ಕೈಕೈ ಮಿಲಾಯಿಸುವ ಹಂತಕ್ಕೆ, ಏನಿದು ತಗಾದೆ? – Kannada News | Yash’s Mother Property Dispute Escalates in Hassan: Pushpa, Devaraj Clash Over Land

ಹಾಸನ, ಫೆಬ್ರವರಿ 01: ನಟ ಯಶ್ ತಾಯಿ ಪುಷ್ಪಾ (Pushpa) ಹಾಗೂ ದೇವರಾಜ್ (Devaraj) ಎಂಬುವವರ ನಡುವೆ ನಡೆಯುತ್ತಿರುವ ಸೈಟ್ ಸಂಘರ್ಷ ಇಂದು ವಿಕೋಪಕ್ಕೆ ತಿರುಗಿತ್ತು. ತಮ್ಮ ನಿವೇಶನದಲ್ಲಿ ಹಾಕಿದ್ದ ಕಾಂಪೌಂಡ್ ತೆರವು ಮಾಡಲಾಗಿದೆ ಎಂದು ಕಾಂಪೌಂಡ್ ಮರು ನಿರ್ಮಾಣ ಮಾಡಲು ಮುಂದಾಗಿದ್ದ ಯಶ್ ತಾಯಿ ಜೊತೆಗೆ ದೇವರಾಜ್ ಜಟಾಪಟಿಗಿಳಿದಿದ್ದು, ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಸೈಟ್ ಫೈಟ್ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆರು ವರ್ಷಗಳ ಹಿಂದೆ ನಾನು ಖರೀದಿಸಿದ ಜಾಗ ಎಂದು ಪುಷ್ಪ ಹೇಳುತ್ತಿದ್ದರೆ 1965ರಿಂದ ಸ್ವಾಧೀನದಲ್ಲಿರುವ ಜಾಗ ನಮ್ಮದು ಎನ್ನುತ್ತಿದ್ದಾರೆ ದೇವರಾಜ್. ನಿವೇಶನ ಮಾಲೀಕತ್ವದ ವಿಚಾರ ಮತ್ತೆ ಬೀದಿ ರಂಪಕ್ಕೆ ಕಾರಣವಾಗಿದ್ದು, ಮೂಲ ಮಾಲೀಕರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಸೈಟ್​​ ಸಂಘರ್ಷ

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಹಾಗೂ ನಿವೇಶನದ ಜಿಪಿಎ ಹೋಲ್ಡರ್ ಎಂದು ಹೇಳಿಕೊಂಡಿರುವ ದೇವರಾಜ್ ನಡುವಿನ ಸಂಘರ್ಷ ಇಂದು ಬೇರೆಯದೇ ಹಂತಕ್ಕೆ ಹೋಗಿತ್ತು. ನನ್ನ ಅನುಮತಿ ಇಲ್ಲದೆ ನನಗೆ ನೊಟೀಸ್ ನೀಡದೆ ನಮ್ಮ ನಿವೇಶನದ ಕಾಂಪೌಂಡ್ ಕೆಡವಲಾಗಿದೆ ಎಂದು ಆರೋಪಿಸುತ್ತಿರುವ ಯಶ್ ತಾಯಿ ಪುಷ್ಪಾ, ಇಂದು ಕಾರ್ಮಿಕರ ನೆರವಿನಿಂದ ಮತ್ತೆ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು.

ಇದನ್ನೂ ಓದಿ: ಭೂ ಒತ್ತುವರಿ ಆರೋಪ: ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ

ಈ ವಿಚಾರ ತಿಳಿದು ಸ್ಥಳಕ್ಕೆ ಓಡೋಡಿ ಬಂದ ದೇವರಾಜ್ ಹಾಗೂ ಅವರ ಕಡೆಯವರು ಕೆಲಸಕ್ಕೆ ಅಡ್ಡಿ ಪಡಿಸಿದರು. ಈ ವೇಳೆ ಅಕ್ಷರಶಃ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಸ್ಪರ ಏಕ ವಚನದಲ್ಲೇ ಪುಷ್ಪಾ ಹಾಗೂ ದೇವರಾಜ್ ನಡುವೆ ಮಾತಿನ ಚಕಮಕಿ ನಡೆಯಿತು. ಸೈಟ್ ಮಾಲಿಕ ನಾನು ಯಾವುದೇ ಕಾರಣಕ್ಕೆ ಕಾಂಪೌಂಡ್ ನಿರ್ಮಾಣ ಮಾಡಕೂಡದು ಎಂದು ದೇವರಾಜ್ ಅಡ್ಡಿ ಪಡಿಸಿದರು. ನನ್ನ ಸೈಟ್​ನಲ್ಲಿ ಕೆಲಸ ಮಾಡುವುದನ್ನು ತಡೆಯುವುದಕ್ಕೆ ನೀನ್ಯಾರು ಎಂದು ತಮ್ಮದೇ ಸ್ಟೈಲ್​​ನಲ್ಲಿ ಅವಾಜ್​​​ ಹಾಕಿದ ಪುಷ್ಪಾ, ಇದು ತಮ್ಮ ಸೈಟ್ ಎಂದು ವಾದಿಸಿದರು. ಆದರೆ ಪರಿಸ್ತಿತಿ ಕೈ ಮೀರುವ ಮೊದಲೇ ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆ ಪೊಲೀಸರು ಎರಡು ಕಡೆಯವರಿಗೆ ವಾರ್ನ್ ಮಾಡಿ ಠಾಣೆಗೆ ಬರುವಂತೆ ಸೂಚನೆ ಬೆನ್ನಲ್ಲೇ ಇದೀಗ ಪರಿಸ್ಥಿತಿ ತಿಳಿಯಾಗಿದೆ.

ಕಾನೂನು ಬದ್ಧವಾಗಿ ನಾವೇ ಮಾಲೀಕರು: ದೇವರಾಜ್

ಈ ನಿವೇಶನ 1965ರಿಂದ ಕೂಡ ಲಕ್ಷಮ್ಮ ಅವರಿಗೆ ಸೇರಿದ್ದು, ಅವರು ತನಗೆ ಜಿಪಿಎ ಮಾಡಿಕೊಟ್ಟಿದ್ದ ಕಾರಣ ತಾವು ಕೇಸ್ ಹಾಕಿ ಈ ಪ್ರಕರಣದಲ್ಲಿ ಕೇಸ್ ತಮ್ಮಂತೆ ಆಗಿದೆ, ಹಾಗಾಗಿ ಇದು ತಮ್ಮದೇ ನಿವೇಶನ. ಯಶ್ ತಾಯಿ ವಿನಾಕಾರಣ ವಾದ ಮಾಡುತ್ತಿದ್ದಾರೆ ಎಂದು ಕಿಡಿಕಾರಿರುವ ದೇವರಾಜ್, ಯಾವುದೇ ಕಾರಣಕ್ಕೂ ಅಲ್ಲಿ ಮತ್ತೆ ಕಾಂಪೌಂಡ್ ಹಾಕಲು ನಾನು ಬಿಡುವುದಿಲ್ಲ. ನಮ್ಮನ್ನ ರೌಡಿಗಳು ಅಂತಾರೆ, ಅವರೇ ಬೇಕಾಬಿಟ್ಟು ವರ್ತನೆ ಮಾಡ್ತಾರೆ ಎಂದು ಕಿಡಿಕಾರಿರುವ ದೇವರಾಜ್, ಕಾನೂನು ಬದ್ಧವಾಗಿ ನಾವೇ ಮಾಲೀಕರು ಎಂದು ನಾವು ಸಾಬೀತು ಮಾಡಿದ್ದೇವೆ. ಅವರ ಬಳಿ ದಾಖಲೆ ಇದ್ದರೆ ಸಾಬೀತು ಮಾಡಲಿ ಎಂದಿದ್ದಾರೆ.

1965ರಲ್ಲಿ ಲಕ್ಷಮ್ಮ ಅವರು ಕರೀಗೌಡ ಎಂಬುವವರಿಂದ ಖರೀದಿ ಮಾಡಿದ ನಿವೇಶನವನ್ನು 2010ರಲ್ಲಿ ಒಮ್ಮೆ ಅಂಗವಿಕಲ ಸಂಸ್ಥೆಗೆ ದಾನ ಪತ್ರ ಬರೆದುಕೊಟ್ಟು ಅವರು ಬಳಕೆ ಮಾಡಿಕೊಳ್ಳದ ಕಾರಣ ಮತ್ತೆ ದಾನಪತ್ರ ರದ್ದು ಮಾಡಿಕೊಂಡು 2015ರಲ್ಲಿ ದಾನ ಪತ್ರ ರದ್ದು ಮಾಡಲಾಗಿದ್ದು, 2020ರಲ್ಲಿ ಲಕ್ಷ್ಮಮ್ಮ ಅವರು ದೇವರಾಜ್ ಅವರಿಗೆ ಜಿಪಿಎ ಮಾಡಿಕೊಟ್ಟಿರುವುದಾಗಿ ದೇವರಾಜ್ ಹೇಳುತ್ತಿದ್ದಾರೆ. ಈ ನಡುವೆ 2020ರ ಜನವರಿ 29ರಂದು ಪುಷ್ಪಾ ಅವರು ವೀಣಾ ಕೋಂ ಗಿರೀಶ್ ಎಂಬುವವರಿಂದ ತಮ್ಮ ಮನೆ ಸಮೀಪದ ಈ ನಿವೇಶನವನ್ನು ಖರೀದಿ ಮಾಡಿ ಆಗಲೇ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ, ಆದರೆ ನಂತರ ಹಾಸನದ 4ನೇ ಜೆಎಂಎಫ್​ಸಿ ಕೋರ್ಟ್​ಗೆ ಕೇಸ್ ದಾಖಲು ಮಾಡಿದ್ದ ದೇವರಾಜ್, ಪುಷ್ಪ ಅವರನ್ನ ಪಾರ್ಟಿ ಮಾಡಿ ಕೇಸ್ ದಾಖಲು ಮಾಡಿದ್ದಾರೆ. ಆದರೆ ಪುಷ್ಪಾ ಅವರು ಕೋರ್ಟ್​ಗೆ ಹಾಜರಾಗಿಲ್ಲ ಎನ್ನುವ ಆಧಾರದ ಮೇಲೆ ಕೋರ್ಟ್​ನಲ್ಲಿ ಏಕಪಕ್ಷೀಯ ಡಿಕ್ರಿ ಆಗಿ ದೇವರಾಜ್​ ಮನವಿ ಮಾಡಿಕೊಂಡಂತೆ ಅವರು ದಾಖಲು ಮಾಡಿದ್ದ ಸ್ವತ್ತು ಅವರ ಮೂಲ ಮಾಲೀಕರಿಗೆ ಸೇರಿದ್ದೆಂದು ತೀರ್ಪುನೀಡಲಾಗಿದೆ.

ದೂರು ದಾಖಲಾದರೂ ಏಕೆ ಬಂಧಿಸಿಲ್ಲ ಎಂದ ಪುಷ್ಪಾ 

ಇಲ್ಲಿ ದೇವರಾಜ್ ಹೇಳುತ್ತಿರುವ ನಿವೇಶನಕ್ಕೂ ತಮ್ಮ ನಿವೇಶನಕ್ಕೂ ಸಂಬಂಧವೇ ಇಲ್ಲ ಎನ್ನುವುದು ಪುಷ್ಪಾ ಅವರ ವಾದ. ಅವರಿಗೆ ಐದು ಗುಂಟೆ ಜಮೀನು ಇರಬಹುದು, ಆದರೆ ನಮ್ಮದು 40X60 ಅಳತೆಯ ನಿವೇಶನ. ಇಲ್ಲಿ ಐದು ಗುಂಟೆ ಜಾಗ ಎಲ್ಲಿದೆ. ಪಕ್ಕದಲ್ಲಿ ಮತ್ತೊಂದು ಸೈಟ್ ಇದೆ. ಇನ್ನೊಂದು ಭಾಗದಲ್ಲಿ ನಮ್ಮ ಮನೆ ಇದೆ. ಇವರ ವಾದವೇ ತಪ್ಪಾಗಿದೆ ಎನ್ನುತ್ತಾರೆ.

ತಮ್ಮ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಕಾಂಪೌಂಡ್ ಕೆಡವಲಾಗಿದೆ. ಮನೆ ಬಳಿ ಬಂದು ಗಲಾಟೆ ಮಾಡಿದ ಬಗ್ಗೆ ದೂರು ದಾಖಲಾಗಿ ಕೇಸ್ ಆಗಿದೆ, ಆದರೂ ಏಕೆ ಯಾವ ಆರೋಪಿಗಳನ್ನು ಬಂಧಿಸಿಲ್ಲ. ಏಕೆ ಕಾಂಪೌಂಡ್​ ಕೆಡವಿದ ಜೆಸಿಬಿ ವಶಕ್ಕೆ ಪಡೆದಿಲ್ಲ ಎಂದು ಇಂದು ಕೂಡ ಪೊಲೀಸರನ್ನ ಪ್ರಶ್ನೆ ಮಾಡುತ್ತಿದ್ದಾರೆ. ಪುಷ್ಪಾ ಅವರು ಪೊಲೀಸರು ಠಾಣೆಗೆ ಕರೆದಿದ್ದರಿಂದ ಮಧ್ಯಾಹ್ನ 1-30ಕ್ಕೆ ಠಾಣೆಗೆ ದಾಖಲೆಗಳ ಸಮೇಪ ಬಂದು ಸುಮಾರು ಮೂರು ಗಂಟೆ ಕಾದು ಕುಳಿತಿದ್ದರೂ ಎದುರುದಾರರು ಹಾಜರಾಗಿಲ್ಲ. ಕ್ರಯ ಪತ್ರ, ಇ-ಸ್ವತ್ತು, ನಗರಸಭೆಯ ಖಾತೆ ಪತ್ರ, ಕಂದಾಯ ರಶೀದಿಗಳ ಜೊತೆಗೆ ಠಾಣೆಗೆ ಹಾಜರಾಗಿರುವ ಪುಷ್ಪಾ ಅವರು ತಮ್ಮ ಹಕ್ಕು ಸಾಬೀತು ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಪುಷ್ಪಾ-ದೇವರಾಜ್ ಮಧ್ಯೆ ವಾಗ್ವಾದ

ಒಟ್ಟಿನಲ್ಲಿ ಇರುವ ಒಂದೇ ನಿವೇಶನಕ್ಕೆ ಇಬ್ಬಿಬ್ಬರು ತಾವು ಮಾಲೀಕರು ಎಂದು ಹಕ್ಕು ಪ್ರತಿಪಾದನೆಗೆ ಮುಂದಾಗಿರುವುದು ಪೊಲೀಸರಿಗೂ ಪ್ರಕರಣ ಕಗ್ಗಂಟಾಗಿದೆ. ಸೈಟ್ ಇವರದ್ದಾದರೆ ನಾವು ಖರೀದಿ ಮಾಡಿ ಆರು ವರ್ಷ ಆಗಿದೆ. ಆಗ ಎಲ್ಲಿಗೆ ಹೋಗಿದ್ದರು ಎನ್ನುವುದು ಪುಷ್ಪಾ ಅವರ ವಾದವಾದರೆ, ನಮ್ಮ ಸೈಟ್ ಅತಿಕ್ರಮಣ ಮಾಡಲಾಗಿದೆ ಹಾಗಾಗಿಯೇ ನಾವು ಕೋರ್ಟ್ ಮೂಲಕ ವಾಪಸ್ ಪಡೆದುಕೊಂಡಿದ್ದೇವೆ ಎನ್ನೋದು ದೇವರಾಜ್ ವಾದ. ನಾನಾ- ನೀನಾ ಎನ್ನುವ ಈ ಮಾಲೀಕತ್ವ ಜಟಾಪಟಿ ಇದೀಗ ಮತ್ತೆ ಠಾಣೆ ಮೆಟ್ಟಿಲೇರಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version