Char Dham Yatra 2026: ಕೇದಾರನಾಥ-ಬದರಿನಾಥ ಯಾತ್ರಿಕರ ಗಮನಕ್ಕೆ! ಹೆಲಿಕಾಪ್ಟರ್, ಪೂಜಾ ದರಗಳಲ್ಲಿ ಭಾರಿ ಏರಿಕೆ

Char Dham Yatra 2026: ಕೇದಾರನಾಥ-ಬದರಿನಾಥ ಯಾತ್ರಿಕರ ಗಮನಕ್ಕೆ! ಹೆಲಿಕಾಪ್ಟರ್, ಪೂಜಾ ದರಗಳಲ್ಲಿ ಭಾರಿ ಏರಿಕೆ

2026ರ ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಯ ಋತುವು ಆರಂಭವಾಗುತ್ತಿದ್ದು, ಈ ಬಾರಿ ಕೇದಾರನಾಥ ಮತ್ತು ಬದರಿನಾಥ ಧಾಮಗಳಿಗೆ ಭೇಟಿ ನೀಡುವ ಭಕ್ತರು ತಮ್ಮ ಪ್ರಯಾಣದ ಬಜೆಟ್ ಸ್ವಲ್ಪ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಪೂಜಾ ಶುಲ್ಕಗಳನ್ನು ಪರಿಷ್ಕರಿಸಿದೆ ಮತ್ತು ಹೆಲಿಕಾಪ್ಟರ್ ಸೇವೆಗಳಿಗೂ ಹೊಸ ದರಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಸಾಮಾನ್ಯ ಭಕ್ತರಿಗೆ ಸಮಾಧಾನದ ಸಂಗತಿಯೆಂದರೆ, ದೇವಾಲಯಗಳಲ್ಲಿನ ಸಾಂಪ್ರದಾಯಿಕ ನಿಯಮಿತ ದರ್ಶನವು ಮೊದಲಿನಂತೆಯೇ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಹೆಲಿಕಾಪ್ಟರ್ ಸೇವೆ ಮತ್ತು ಹೊಸ ದರಗಳು:

ಹೆಲಿಕಾಪ್ಟರ್ ಸೇವೆಗಳಿಗಾಗಿ ಈ ವರ್ಷ ಹೊಸ ಟೆಂಡರ್ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದ್ದು, ಒಟ್ಟು ಎಂಟು ನಿರ್ವಾಹಕರು ವಿವಿಧ ಮಾರ್ಗಗಳಲ್ಲಿ ಸೇವೆ ಒದಗಿಸಲಿದ್ದಾರೆ. ಹೊಸ ದರದ ಅನ್ವಯ, ಗುಪ್ತಕಾಶಿಯಿಂದ ಕೇದಾರನಾಥಕ್ಕೆ ಏಕಮುಖ ಪ್ರಯಾಣಕ್ಕೆ 6,077ರೂ., ಫಟಾದಿಂದ 4,840 ಮತ್ತು ಶಿರಸಿಯಿಂದ ರೂ. 3,043 ನಿಗದಿಪಡಿಸಲಾಗಿದೆ. ಈ ಬೆಲೆಗಳಿಗೆ ಜಿಎಸ್‌ಟಿ (GST) ಮತ್ತು ಆನ್‌ಲೈನ್ ಬುಕಿಂಗ್ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸುವುದರಿಂದ ಒಟ್ಟು ವೆಚ್ಚದಲ್ಲಿ ಏರಿಕೆಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಟಾ ಮಾರ್ಗದಲ್ಲಿ ಬೆಲೆ ಹೆಚ್ಚಳವು ಗಮನಾರ್ಹವಾಗಿದ್ದರೂ, ಶಿರಸಿ ಮಾರ್ಗದ ಪ್ರಯಾಣಿಕರಿಗೆ ದರವು ತುಲನಾತ್ಮಕವಾಗಿ ಸಮಾಧಾನಕರವಾಗಿದೆ.

ಕೇದಾರನಾಥದಲ್ಲಿ ಪೂಜಾ ಶುಲ್ಕಗಳ ಏರಿಕೆ:

ಕೇದಾರನಾಥ ದೇವಾಲಯದಲ್ಲಿ ವಿಶೇಷ ಪೂಜೆಗಳ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಒಂದು ದಿನದ ಪೂಜಾ ಶುಲ್ಕವನ್ನು 28,600 ರಿಂದ 51,00 ರೂ.ಗೆ ಹೆಚ್ಚಿಸಲಾಗಿದ್ದು, ಇದು ಸುಮಾರು ಶೇ.78 ರಷ್ಟು ಹೆಚ್ಚಳವಾಗಿದೆ. ಉಳಿದಂತೆ ಮಹಾಭಿಷೇಕಕ್ಕೆ 11,500, ರುದ್ರಾಭಿಷೇಕಕ್ಕೆ 7,500 ರೂ. ಮತ್ತು ಅಖಂಡ ಜ್ಯೋತಿ ಬೆಳಗಿಸಲು 5,100 ರೂ. ನಿಗದಿಪಡಿಸಲಾಗಿದೆ. ಭಕ್ತರು ಶಿವ ಸಹಸ್ರನಾಮ ಪಠಣಕ್ಕೆ 2,500 ಮತ್ತು ಬಾಲಾ ಭೋಗ್ ನೈವೇದ್ಯಕ್ಕೆ 1,500 ರೂ. ಪಾವತಿಸಬೇಕಾಗುತ್ತದೆ.

ಬದರಿನಾಥ ಧಾಮದ ಪರಿಷ್ಕೃತ ದರಪಟ್ಟಿ:

ಬದರಿನಾಥ ಧಾಮದಲ್ಲಿಯೂ ಸಹ ವಿವಿಧ ಧಾರ್ಮಿಕ ವಿಧಿವಿಧಾನಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ಇಲ್ಲಿ ಶ್ರೀಮದ್ ಭಾಗವತ ಕಥಾ ಶ್ರವಣದ ಶುಲ್ಕವನ್ನು 51,000 ರಿಂದ ನೇರವಾಗಿ 1,00,000ರೂ. ಕ್ಕೆ ಏರಿಸಲಾಗಿದೆ. ಹಾಗೆಯೇ ಮಹಾಭಿಷೇಕಕ್ಕೆ 5,500, ವೇದ ಮತ್ತು ಗೀತಾ ಪಠಣಕ್ಕೆ 6,000 ಹಾಗೂ ಅಖಂಡ ಜ್ಯೋತಿಗೆ 5,100 ನಿಗದಿಪಡಿಸಲಾಗಿದೆ. ಕಪೂರ್ ಆರತಿ ಮತ್ತು ಖೀರ್ ಭೋಗ್‌ನಂತಹ ಸೇವೆಗಳ ದರಗಳನ್ನೂ ಸಹ ಭಕ್ತರ ಅನುಕೂಲಕ್ಕೆ ತಕ್ಕಂತೆ ಪರಿಷ್ಕರಿಸಲಾಗಿದ್ದರೂ, ಒಟ್ಟಾರೆ ಪೂಜಾ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಯಾತ್ರಿಕರಿಗೆ ಮುನ್ನೆಚ್ಚರಿಕೆ:

ಈ ವರ್ಷ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಲು ಯೋಜಿಸುತ್ತಿರುವ ಭಕ್ತರು, ತಮ್ಮ ಪ್ರಯಾಣದ ಯೋಜನೆಯನ್ನು ಸಿದ್ಧಪಡಿಸುವಾಗ ಈ ಹೊಸ ದರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ವಿಶೇಷ ಪೂಜೆಗಳನ್ನು ಮಾಡಿಸಲು ಇಚ್ಛಿಸುವವರು ಮತ್ತು ಹೆಲಿಕಾಪ್ಟರ್ ಸೇವೆಯನ್ನು ಬಳಸುವವರು ಹೆಚ್ಚುವರಿ ಜಿಎಸ್‌ಟಿ ಮತ್ತು ಸೇವಾ ತೆರಿಗೆಗಳನ್ನು ಒಳಗೊಂಡಂತೆ ವೆಚ್ಚವನ್ನು ಅಂದಾಜು ಮಾಡಿಕೊಳ್ಳಬೇಕು. ದರಗಳಲ್ಲಿ ಏರಿಕೆಯಾಗಿದ್ದರೂ, ಯಾತ್ರೆಯ ಪಾವಿತ್ರ್ಯತೆ ಮತ್ತು ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಸುಗಮಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು; ವೈರಲ್ ಆಯ್ತು ಆಟೋ ಹಿಂಬದಿ ಬರೆದ ಸಾಲು

ಆಟೋ, ಬೈಕ್ ಗಳ ಹಿಂಭಾಗದಲ್ಲಿ ಬರೆದ ಬರಹಗಳನ್ನು ನೀವು ನೋಡಿದ್ದೀರಬಹುದು. ಕೆಲವು ಸಾಲುಗಳು ನಿಮ್ಮ ನಗುವಿಗೆ ಕಾರಣವಾಗುತ್ತದೆ. ಇನ್ನು ಕೆಲವು ಅರ್ಥಪೂರ್ಣ ಸಾಲುಗಳನ್ನು ನೋಡಿದಾಗ ಆಟೋ ಚಾಲಕನ (auto driver) ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳುತ್ತೇವೆ. ಇದೀಗ ಆಟೋ ಚಾಲಕನೊಬ್ಬ ಬಾಡಿಗೆ ಇದ್ರೆ ಕಾಲ್ ಮಾಡಿ ಎಂದು ಈ ಸಾಲಿನ ಮೂಲಕ ಹೇಳಿದ್ದಾನೆ. ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು ಆಟೋ ಹಿಂಬದಿ ಬರೆದ ಸಾಲು ನೆಟ್ಟಿಗರ ಗಮನ ಸೆಳೆಯುತ್ತಿದೆ.

raviraj. naik ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಟೋದ ಹಿಂಬದಿ ಬರೆದ ಅರ್ಥಪೂರ್ಣ ಸಾಲುಗಳನ್ನು ನೋಡಬಹುದು. ಆಟೋ ಚಾಲಕನು, ತನ್ನ ಆಟೋದ ಹಿಂದೆ ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಬದುಕು ನಿತ್ಯ ನಿರಂತರ ಹೋರಾಟ; ಪುಟ್ಟ ಕಂದಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಟೋ ಓಡಿಸುವ ಮಹಿಳೆ

ಈ ವಿಡಿಯೋ ಹದಿನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ನನ್ನ ಆಟೋ ಹಿಂದೆ ಈ ಲೈನ್ 10 ವರ್ಷ ಹಿಂದೆ ಇದ್ದಿತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಣ್ಣ ನಂಬರ್ ಕೊಡು ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, ಅಣ್ಣನ ಬುದ್ಧಿವಂತಿಕೆಗೆ ನೀವು ಮೆಚ್ಚುಗೆ ನೀಡಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಪ್ರವಾಸಿಗರನ್ನೇ ದಿಟ್ಟಿಸಿ ನೋಡುತ್ತಾ ಸಾಗಿದ ಹುಲಿರಾಯನ ಖದರ್ ನೋಡಿ!

ಮೈಸೂರು, ಏಪ್ರಿಲ್ 08: ಜಿಲ್ಲೆಯ ಕಬಿನಿ ಹಿನ್ನೀರು ಪ್ರದೇಶದಲ್ಲಿ ಹುಲಿಯೊಂದು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದೆ. ಹೆಚ್.ಡಿ. ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಕಾಣಿಸಿಕೊಂಡ ಈ ಹುಲಿ, ಗಾಂಭೀರ್ಯದಿಂದ ನಡೆದು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿದೆ. ಪ್ರವಾಸಿಗರತ್ತ ದಿಟ್ಟಿಸಿ ನೋಡುತ್ತಲೇ ಸಾಗಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಫಾರಿ ಪ್ರಿಯರಿಗೆ ಭರ್ಜರಿ ಅನುಭವ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

‘ಇಂಡಿಯಾ ಗಾಟ್ ಲೇಟೆಂಟ್’: ಮತ್ತೆ ಬರಲಿದ್ದಾರೆ ಸಮಯ್ ರೈನಾ

ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಬಲು ವೇಗವಾಗಿ ಬೆಳೆಯುತ್ತಿರುವ ಸ್ಟಾಂಡಪ್ ಕಾಮಿಡಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಮಯ್ ರೈನಾ (Samai Raina) ಅವರದ್ದು. ಚೆಸ್ ಸ್ಟ್ರೀಮರ್ ಆಗಿ ಬಳಿಕ ಯೂಟ್ಯೂಬ್ ಸ್ಟ್ರೀಮರ್, ಸ್ಟಾಂಡಪ್ ಕಮಿಡಿಯನ್, ಯೂಟ್ಯೂಬ್ ಶೋ ಹೋಸ್ಟ್ ಆಗಿ ಗುರುತಿಸಿಕೊಂಡಿದ್ದ ಸಮಯ್ ರೈನಾ, ಯೂಟ್ಯೂಬ್​​ನಲ್ಲಿ ಆರಂಭಿಸಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಶೋ ಭಾರಿ ದೊಡ್ಡ ಹಿಟ್ ಆಗಿತ್ತು. ಒಂದೇ ದಿನಕ್ಕೆ ಕೋಟ್ಯಂತರ ವೀವ್ಸ್ ಅನ್ನು ಈ ಶೋ ಗಳಿಸುತ್ತಿತ್ತು. ಆದರೆ ಯಾರೋ ಮಾಡಿದ ತಪ್ಪಿನಿಂದಾಗಿ ಶೋ ಅನ್ನು ಬಂದ್ ಮಾಡಿದ್ದು, ಮಾತ್ರವಲ್ಲದೆ ಹಳೆಯ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಬೇಕಾಯ್ತು ಸಮಯ್ ರೈನಾ. ಪೊಲೀಸ್ ಎಫ್​ಐಆರ್, ಹಲವು ಕೇಸುಗಳ ಬಳಿಕ ಈ ಶೋ ಮತ್ತೆ ಪ್ರಾರಂಭವೇ ಆಗುವುದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಇದೀಗ ಸ್ವತಃ ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಮೇಲೆ ಕೇಸು ದಾಖಲಾಗಿತ್ತು. ಶೋಗೆ ಅತಿಥಿಯಾಗಿ ಆಗಮಿಸಿದ್ದ ಮತ್ತೊಬ್ಬ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ ಹೇಳಿದ್ದ ಒಂದು ಕೆಟ್ಟ ಜೋಕಿನಿಂದಾಗಿ ಶೋ ಮೇಲೆ ಹಾಗೂ ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಹಲವರ ಮೇಲೆ ಹಲವಾರು ಕೇಸುಗಳು ದಾಖಲಾಗಿದ್ದವು. ಸಮಯ್ ರೈನಾ, ಸಹ ಆಗಿನಿಂದ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ, ಆದರೆ ಇದೀಗ ತಮ್ಮ ಹೊಸ ಸ್ಟಾಂಡಪ್​​ ನಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ಬಯಸಿದ್ದರೂ ಸಹ ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಅದು ಅಷ್ಟು ಜನಪ್ರಿಯತೆ ಇದ್ದಾಗ ಮುಕ್ತಾಯ ಮಾಡಲು ಆಗುತ್ತಿರಲಿಲ್ಲ, ಆದರೆ ಈಗ ಮುಕ್ತಾಯ ಆಗಿರುವುದು ಸೀಸನ್ 1 ಮಾತ್ರ’ ಎಂದಿದ್ದಾರೆ. ಆ ಮೂಲಕ ‘ಇಂಡಿಯಾ ಗಾಟ್ ಲೇಟೆಂಟ್ ಸೀಸನ್ 2’ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಸಮಯ್ ರೈನಾ.

ಇದನ್ನೂ ಓದಿ:‘ಇಂಡಿಯಾಸ್ ಗಾಟ್ ಲೇಟೆಂಟ್’ ಪುನರಾರಂಭ ಯಾವಾಗ? ಸಮಯ್ ರೈನಾ ಉತ್ತರವೇನು?

‘ಇಂಡಿಯಾ ಗಾಟ್ ಲೇಟೆಂಟ್’ ವಿವಾದ ಆದಾಗ ಅನುಭವಿಸಿದ ಕಷ್ಟಗಳ ಬಗ್ಗೆಯೂ ಮಾತನಾಡಿರುವ ಸಮಯ್ ರೈನಾ, ‘ನಾನು ಅಪ್​​ಲೋಡ್ ಮಾಡಿದ ವಿಡಿಯೋದಿಂದ ಹಲವಾರು ಮಂದಿ ತೊಂದರೆಗೆ ಒಳಗಾದರು. ಶೋ ನಡೆದ ಹ್ಯಾಬಿಟಾಟ್ ಜಾಗದ ಮಾಲೀಕ ಬಲರಾಜ್ ಮತ್ತು ಅವರ ವಯ್ಯಸ್ಸಾದ ಪೋಷಕರು ಪೊಲೀಸರಿಂದ ತೀವ್ರ ಕಷ್ಟ ಅನುಭವಿಸುವಂತಾಯ್ತು. ರಣ್ವೀರ್ ಅವರ ತಾಯಿಯ ಕ್ಲಿನಿಕ್ ಮೇಲೆ ದಾಳಿ ಮಾಡಲಾಯ್ತು, ಅಪೂರ್ವಗೆ ಕೊಲೆ ಬೆದರಿಕೆಗಳು ಬಂದವು. ನನ್ನ ಮೇಲೆ ಹಲವಾರು ಎಫ್​​ಐಆರ್​​ಗಳು ದಾಖಲಾದವು, ಹ್ಯಾಬಿಟಾಟ್ ಅನ್ನು ಒಡೆದು ಹಾಕಿದರು’ ಎಂದೆಲ್ಲ ನೋವಿನಿಂದ ಸಮಯ್ ರೈನಾ ಹೇಳಿದ್ದಾರೆ.

ಆ ಕಷ್ಟದ ಸಮಯದಲ್ಲಿ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದ ಮೀಡಿಯಾದವರು, ರಾಜಕಾರಣಿಗಳು ವಿಶೇಷವಾಗಿ ನ್ಯೂಸ್ ಚಾನೆಲ್​​ಗಳವರಿಗೆ ಸಮಯ್ ರೈನಾ ತಮ್ಮ ಹೊಸ ಸ್ಟಾಂಡಪ್​​ನಲ್ಲಿ ತಿರುಗೇಟು ನೀಡಿದ್ದಾರೆ. ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್ 2’ ಮಾಡುತ್ತಿರುವುದನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಸ್​ಪ್ರೀತ್ ಬುಮ್ರಾ ವಿರುದ್ಧ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

Source link

ಪತ್ನಿಯ ಪ್ರಿಯಕರನಿಂದಲೇ ನಡೀತು ಪತಿಯ ಕೊಲೆ! ಸ್ನೇಹಿತನಂತೆ ನಟಿಸಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಬೆಂಗಳೂರು, ಏಪ್ರಿಲ್ 08: ಹೆಂಡತಿಯ ಅಕ್ರಮ ಸಂಬಂಧಕ್ಕೆ (Extramarital Affair) ಗಂಡ ಬಲಿಯಾದ ಘಟನೆ ಮಾರ್ಚ್ 26 ರಂದು ಬೊಮ್ಮಸಂದ್ರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ಪ್ರಿಯಕರ ಆಕೆಯ ಪತಿಯೊಂದಿಗೆ ಸ್ನೇಹ ಬೆಳೆಸಿ, ಮಧ್ಯಪಾನ ಮಾಡಿಸಿ ಕೊನೆಗೆ ಚಾಕುವಿನಿಂದ ಕತ್ತು ಸೀಳಿ ಆತನ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದ್ಯಪಾನ ಮಾಡಿಸಿ ಕತ್ತು ಸೀಳಿದ

ಮೃತ ವ್ಯಕ್ತಿಯನ್ನು 42 ವರ್ಷದ ಸುನಿಲ್ ನಾಯಕ್ ಎಂದು ಗುರುತಿಸಲಾಗಿದೆ. ಆರೋಪಿ ಬಸುದೇವ್ ಮಲಿಕ್ ಮತ್ತು ಸುನಿಲ್ ನಾಯಕ್ ಅವರ ಪತ್ನಿ ಪುಷ್ಪ ನಡುವೆ ಅಕ್ರಮ ಸಂಬಂಧವಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಲಿಕ್, ಸುನಿಲ್ ನಾಯಕ್ ಜೊತೆ ಸ್ನೇಹ ಬೆಳೆಸಿ, ಅವರೊಂದಿಗೆ ಮದ್ಯಪಾನ ಮಾಡುತ್ತಿದ್ದನು. ಬಳಿಕ ಸೂಕ್ತ ಸಂದರ್ಭ ನೋಡಿಕೊಂಡು ಸುನಿಲ್ ನಾಯಕ್ ಮೇಲೆ ದಾಳಿ ನಡೆಸಿ, ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ ಶರಣ್ಯ ಸಿಕ್ಕ ಬೆನ್ನಲ್ಲೇ ಮತ್ತೋರ್ವ ಬಾಲಕಿ ಕಾಣೆ: ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

ಆರೋಪಿಯ ಬಂಧನ

ಮಾರ್ಚ್ 26ರಂದು ಘಟನೆ ನಡೆದಿದ್ದು, ಮಾಲಿಕ್ ಚಾಕುವಿನಿಂದ ಸುನಿಲ್ ನಾಯಕ್ ಅವರ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಬೆಂಗಳೂರು ನಗರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಸಮೀಪದ ಬಾರ್ ಬಳಿ ಎಸೆದು ಪರಾರಿಯಾಗಿದ್ದಾನೆ. ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹತ್ಯೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RBI Policy: ಆರ್​ಬಿಐನಿಂದ ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಹಣದುಬ್ಬರ ಶೇ. 4.6 ಎಂದು ಅಂದಾಜು

ನವದೆಹಲಿ, ಏಪ್ರಿಲ್ 8: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಸಮಿತಿಯು (RBI MPC meeting) ನಿರೀಕ್ಷೆಯಂತೆ ರಿಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಆರ್​ಬಿಐ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಆರ್​ಬಿಐನ ರಿಪೋ ದರ ಅಥವಾ ಬಡ್ಡಿದರವು (Repo Rate) ಶೇ. 5.25ರಲ್ಲಿ ಮುಂದುವರಿಯಲಿದೆ. ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದ್ದರಿಂದ ಬಡ್ಡಿದರ ಇಳಿಸದೇ ಇರುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಎಂಪಿಸಿ ಸಭೆ ಬಳಿಕ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿ ಕರೆದು ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದರು. ಹಾಗೆಯೇ, 2026-27ರ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಾಗಬಹುದು ಎಂದು ಮಾಡಲಾಗಿರುವ ಅಂದಾಜನ್ನೂ ಬಹಿರಂಗಪಡಿಸಿದರು.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು

2026-27ರಲ್ಲಿ ಶೇ. 4.6 ಹಣದುಬ್ಬರ

ಈ ಹಣಕಾಸು ವರ್ಷದಲ್ಲಿ (2026-27) ಹಣದುಬ್ಬರ ಶೇ. 4.6 ಇರಬಹುದು ಎಂದು ಆರ್​ಬಿಐ ಪ್ರೊಜೆಕ್ಟ್ ಮಾಡಿದೆ. ಮೊದಲ ಕ್ವಾರ್ಟರ್​ನಲ್ಲಿ ಶೇ. 4, ಎರಡನೇ ಕ್ವಾರ್ಟರ್​ನಲ್ಲಿ ಶೇ. 4.4, ಮೂರನೇ ಕ್ವಾರ್ಟರ್​ನಲ್ಲಿ ಶೇ. 5.2, ನಾಲ್ಕನೇ ಕ್ವಾರ್ಟರ್​ನಲ್ಲಿ ಶೇ. 4.7ರಷ್ಟು ಹಣದುಬ್ಬರ ಇರಬಹುದು ಎನ್ನುವುದು ಆರ್​ಬಿಐ ಎಂಪಿಸಿಯಲ್ಲಿ ಬಂದಿರುವ ಅಭಿಪ್ರಾಯ.

ಇನ್ನಷ್ಟು ಮಾಹಿತಿ ನಿರೀಕ್ಷಿಸಿ….

Source link

ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ತಪ್ಪಿಸಲು ಬಾಗಿಲು ತೆರೆದಿಟ್ಟು ಮಲಗಿದ್ದ ಮಹಿಳೆಗೆ ಕಾದಿತ್ತು ಶಾಕ್!

ಬೆಂಗಳೂರು, ಏ.8: ನಗರದಲ್ಲಿ ಹೆಚ್ಚುತ್ತಿರುವ ಬೇಸಿಗೆಯ ಶಾಖದಿಂದ ಪಾರಾಗಲು ಮನೆಯ ಮುಖ್ಯ ಬಾಗಿಲನ್ನು ತೆರೆದಿಟ್ಟಿದ್ದೇ ಮಹಿಳೆಯೊಬ್ಬರಿಗೆ ಮುಳುವಾಗಿದೆ. ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆನೆಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಮಾಂಗಲ್ಯ ಸರ ಮತ್ತು ಮೊಬೈಲ್‌ಗಳನ್ನು ದೋಚಿದ್ದಾರೆ.

ಅಶೋಕನಗರದ ನಿವಾಸಿ ಶೈಲಜಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಸುಮಾರು 2:30ರ ಸುಮಾರಿಗೆ ಮನೆಯೊಳಗೆ ಗಾಳಿ ಬರಲಿ ಎಂಬ ಕಾರಣಕ್ಕೆ ಮುಖ್ಯ ಬಾಗಿಲನ್ನು ತೆರೆದಿಟ್ಟು ಗಾಢ ನಿದ್ರೆಗೆ ಜಾರಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಳ್ಳರು ಮನೆಯೊಳಗೆ ನುಗ್ಗಿ, ಅವರ ಪಕ್ಕದಲ್ಲೇ ಇದ್ದ 18 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಅಪಹರಿಸಿದ್ದಾರೆ. ಕಳುವಾದ ಒಟ್ಟು ಮೌಲ್ಯ ಸುಮಾರು 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬೆಳಿಗ್ಗೆ 6 ಗಂಟೆಗೆ ಎದ್ದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಂಜಾನೆ 2:25ರ ಸುಮಾರಿಗೆ ಬರಿಗಾಲಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ಸಾಲು ಸಾಲು ಮನೆಗಳ ಬಾಗಿಲನ್ನು ತಳ್ಳುತ್ತಿರುವುದು ಕಂಡುಬಂದಿದೆ. ಶೈಲಜಾ ಅವರ ಮನೆಯ ಬಾಗಿಲು ತೆರೆದಿದ್ದರಿಂದ ಸುಲಭವಾಗಿ ಒಳನುಗ್ಗಿ ಕೃತ್ಯ ಎಸಗಿದ್ದಾನೆ.

ಘಟನೆ ನಡೆದ ಕೂಡಲೇ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ ಎಫ್‌ಐಆರ್ (FIR) ದಾಖಲಿಸಲು ಪೊಲೀಸರು ಒಂದು ದಿನ ಇಡೀ ಕಾಯುವಂತೆ ಮಾಡಿದರು ಎಂದು ಶೈಲಜಾ ಅವರು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಲಜಾ ಅವರು ಈ ಹಿಂದೆ ಸ್ಕಿನ್‌ಕೇರ್ ಕಂಪನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ಆರೋಗ್ಯದ ಕಾರಣದಿಂದ ಕೆಲಸ ಬಿಟ್ಟಿದ್ದರು.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ತ್ರಿಕೋನ ಪ್ರೇಮಕ್ಕೆ ನರ್ಸ್ ಬಲಿ: ಹೈಕೋರ್ಟ್ ತೀರ್ಪಿನಿಂದ ಅನಸ್ತೇಶಿಯಾ ವೈದ್ಯೆಗೆ ಬಿಗ್ ರಿಲೀಫ್!

ಇನ್ನು ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ರಾತ್ರಿ ವೇಳೆ ಎಷ್ಟೇ ಸೆಖೆಯಿದ್ದರೂ ಮನೆಯ ಮುಖ್ಯ ಬಾಗಿಲನ್ನು ಲಾಕ್ ಮಾಡುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ. ಕಿಟಕಿಗಳಿಗೆ ಗಟ್ಟಿಮುಟ್ಟಾದ ಗ್ರಿಲ್ ಅಳವಡಿಸಿ. ಬೆಲೆಬಾಳುವ ಚಿನ್ನಾಭರಣ ಮತ್ತು ಮೊಬೈಲ್‌ಗಳನ್ನು ಮಲಗುವಾಗ ನಿಮ್ಮ ಪಕ್ಕದಲ್ಲಿ ಅಥವಾ ಕಿಟಕಿಯ ಹತ್ತಿರ ಇಡಬೇಡಿ. ಮನೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸುರಕ್ಷಿತ ಎಂದು ಸಲಹೆಗಳನ್ನು ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಮನೆಯಲ್ಲಿ ಕಸ ಗುಡಿಸುವಾಗ ಈ ತಪ್ಪು ಮಾಡಲೇಬೇಡಿ; ವಾಸ್ತು ತಜ್ಞರ ಸಲಹೆ ಇಲ್ಲಿದೆ

ಕಸ ಗುಡಿಸುವುದು ಕೇವಲ ಸ್ವಚ್ಛತೆಯಲ್ಲ, ಅದು ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಒಂದು ಪ್ರಮುಖ ಕ್ರಿಯೆಯಾಗಿದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಧನ ಸಂಪತ್ತು ನೆಲೆಸಲು ಕಸ ಗುಡಿಸುವ ದಿಕ್ಕು ಮತ್ತು ಸಮಯ ಅತ್ಯಂತ ಮಹತ್ವದ್ದಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ನಾಲ್ಕು ಮುಖ್ಯ ದಿಕ್ಕುಗಳು (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ) ಮತ್ತು ನಾಲ್ಕು ಉಪ ದಿಕ್ಕುಗಳು (ಈಶಾನ್ಯ, ಆಗ್ನೇಯ, ವಾಯುವ್ಯ, ನೈರುತ್ಯ) ಇರುತ್ತವೆ. ಬ್ರಹ್ಮಸ್ಥಾನದ ಜೊತೆಗೆ, ಈ ಎಲ್ಲಾ ದಿಕ್ಕುಗಳು ವಿಭಿನ್ನ ಧನಾಕರ್ಷಣ ಶಕ್ತಿಗಳನ್ನು ಹೊಂದಿರುತ್ತವೆ.

ಗುರೂಜಿಯವರು ಹೇಳುವಂತೆ, ಮನೆಯಲ್ಲಿ ಕಸ ಗುಡಿಸುವಾಗ ಈಶಾನ್ಯ (North-East) ದಿಕ್ಕಿನಿಂದ ಪ್ರಾರಂಭಿಸಬೇಕು. ನಂತರ ಆಗ್ನೇಯ (South-East) ದಿಕ್ಕಿಗೆ ಸಾಗಿ, ವಾಯುವ್ಯ (North-West) ದಿಕ್ಕಿನ ಮೂಲಕ ಕಸ ಗುಡಿಸುವುದನ್ನು ನೈರುತ್ಯ (South-West) ದಿಕ್ಕಿನಲ್ಲಿ ಪೂರ್ಣಗೊಳಿಸಬೇಕು. ಈ ನಿರ್ದಿಷ್ಟ ವಿಧಾನವು ಮನೆಗೆ ಅದೃಷ್ಟ, ನೆಮ್ಮದಿ, ಸುಖ, ಶಾಂತಿ ಮತ್ತು ಧನಯೋಗವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯ ಬಾಗಿಲು ಯಾವುದೇ ದಿಕ್ಕಿಗೆ ಇದ್ದರೂ, ಈಶಾನ್ಯದಿಂದ ಪ್ರಾರಂಭಿಸಿ ನೈರುತ್ಯದಲ್ಲಿ ಕಸ ಗುಡಿಸುವುದನ್ನು ಮುಗಿಸಬೇಕು. ಗುಡಿಸಿದ ಕಸವನ್ನು ಎಂದಿಗೂ ಮುಖ್ಯ ದ್ವಾರದ ಬಳಿ ಹಾಕಬಾರದು.

ಕಸ ಗುಡಿಸುವ ಸಮಯದ ಕುರಿತು ಸಹ ಶಾಸ್ತ್ರಗಳಲ್ಲಿ ನಿರ್ದಿಷ್ಟ ನಿಯಮಗಳಿವೆ. ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆ ಕಸ ಗುಡಿಸುವುದು ಅತ್ಯಂತ ಶುಭ. ಸೂರ್ಯೋದಯದ ನಂತರ ಕಸ ಗುಡಿಸುವುದು ಅಷ್ಟು ಶುಭಕರವಲ್ಲ. ಹಾಗೆಯೇ, ಸಂಧ್ಯಾಕಾಲದಲ್ಲಿ, ಸೂರ್ಯಾಸ್ತದ ನಂತರ ಮನೆಯಲ್ಲಿ ಕಸ ಗುಡಿಸಬಾರದು. ಸಂಜೆ ಮಹಾಲಕ್ಷ್ಮಿಯು ಮನೆಗೆ ಆಗಮಿಸುವ ಸಮಯವೆಂದು ನಂಬಲಾಗಿದೆ. ಈ ಸಮಯದಲ್ಲಿ ಕಸ ಗುಡಿಸುವುದು ಒಳ್ಳೆಯದಲ್ಲ. ಅನಿವಾರ್ಯ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ನಿಯಮಗಳನ್ನು ಸಡಿಲಗೊಳಿಸಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪೊರಕೆಯ ಬಳಕೆ ಮತ್ತು ನಿರ್ವಹಣೆ ಕುರಿತು ಸಹ ಕೆಲವು ನಿಯಮಗಳಿವೆ. ಪೊರಕೆಯನ್ನು ಎಂದಿಗೂ ತುಳಿಯಬಾರದು. ಅದನ್ನು ಗೋಡೆಗೆ ಒರಗಿಸಿ ನಿಲ್ಲಿಸುವುದು ಅಥವಾ ಮೇಲ್ಮುಖವಾಗಿ ಇಡುವುದು ಶುಭವಲ್ಲ. ಬದಲಿಗೆ, ಪೊರಕೆಯನ್ನು ಅಡ್ಡಲಾಗಿ, ಯಾರಿಗೂ ಕಾಣಿಸದ ಸ್ಥಳದಲ್ಲಿ ಇಡಬೇಕು. ಅರ್ಧ ಮುರಿದ ಅಥವಾ ಹಳೆಯದಾದ ಪೊರಕೆಯನ್ನು ಬಳಸಿ ಕಸ ಗುಡಿಸುವುದು ಅಶುಭಕರ.

ವಾಸ್ತು ಪ್ರಕಾರ, ಸಾಮಾನ್ಯವಾಗಿ ಮನೆಯಲ್ಲಿ ನೀರು ಹರಿಯುವ ದಿಕ್ಕು (ನೈರುತ್ಯದಿಂದ ಈಶಾನ್ಯಕ್ಕೆ) ಅಥವಾ ಎತ್ತರದ ಪ್ರದೇಶಗಳು (ದಕ್ಷಿಣ ಮತ್ತು ಪಶ್ಚಿಮದಲ್ಲಿ ಹೆಚ್ಚು ಎತ್ತರ, ಉತ್ತರ ಮತ್ತು ಪೂರ್ವದಲ್ಲಿ ಕಡಿಮೆ ಎತ್ತರ) ಬೇರೆ ನಿಯಮಗಳನ್ನು ಹೊಂದಿದ್ದರೂ, ಕಸ ಗುಡಿಸುವ ವಿಷಯದಲ್ಲಿ ಈಶಾನ್ಯದಿಂದ ಪ್ರಾರಂಭಿಸಿ ನೈರುತ್ಯದಲ್ಲಿ ಪೂರ್ಣಗೊಳಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಮುಕ್ತಗೊಳಿಸಲು ಬಿಗ್ ಪ್ಲಾನ್: 35 ಫ್ಲೈಓವರ್, 25 ಅಂಡರ್‌ಪಾಸ್

ಬೆಂಗಳೂರು, ಏ. 8: ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿದಿನ ಸುಮಾರು 2,000 ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಈ ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲು ಬೆಂಗಳೂರು ಸಂಚಾರ ಪೊಲೀಸರು 35 ಫ್ಲೈಓವರ್‌ಗಳು, 25 ಅಂಡರ್‌ಪಾಸ್‌ಗಳು ಮತ್ತು 101 ಸ್ಕೈವಾಕ್‌ಗಳನ್ನು ಒಳಗೊಂಡ ಬೃಹತ್ ಯೋಜನೆಯನ್ನು ಬೃಹತ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಸಲ್ಲಿಸಿದ್ದಾರೆ.

ಪೂರ್ವ ಬೆಂಗಳೂರಿನ ಮಹದೇವಪುರ ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಒತ್ತಡವಿದ್ದು, ಇಲ್ಲಿ ಹೆಚ್ಚಿನ ಫ್ಲೈಓವರ್ ಮತ್ತು ಪಾದಚಾರಿ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ. ಹೆಬ್ಬಾಳ, ಸಾರಕ್ಕಿ ಸರ್ಕಲ್ ಮತ್ತು ಬನ್ನೇರುಘಟ್ಟ ರಸ್ತೆಯ ದಾಲ್ಮಿಯಾ ಜಂಕ್ಷನ್ ಸೇರಿದಂತೆ 25 ಪ್ರಮುಖ ಜಂಕ್ಷನ್‌ಗಳನ್ನು ಅಂಡರ್‌ಪಾಸ್ ಮೂಲಕ ಸಿಗ್ನಲ್ ಮುಕ್ತಗೊಳಿಸಲು ಯೋಜಿಸಲಾಗಿದೆ.

ವರ್ತೂರು ಕೋಡಿ, ದೊಮ್ಮಸಂದ್ರ, ಗುಂಜೂರು, ಎಚ್‌ಎಎಲ್ ಹಳೇ ವಿಮಾನ ನಿಲ್ದಾಣ ರಸ್ತೆ ಮತ್ತು ಯಲಹಂಕ ಭಾಗಗಳಲ್ಲಿ ಹೊಸ ಫ್ಲೈಓವರ್‌ಗಳನ್ನು ಪ್ರಸ್ತಾಪಿಸಲಾಗಿದೆ. ನಗರದಲ್ಲಿ ವಾರ್ಷಿಕವಾಗಿ ಸುಮಾರು 200 ಪಾದಚಾರಿಗಳು ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಲು 101 ಹೊಸ ಸ್ಕೈವಾಕ್‌ಗಳು ಅನಿವಾರ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇತರ ಸಣ್ಣ ಬದಲಾವಣೆಗಳು:

2,340 ಹೊಸ ಟ್ರಾಫಿಕ್ ಸೈನ್‌ಬೋರ್ಡ್‌ಗಳ ಅಳವಡಿಕೆ.

103 ಬಸ್ ನಿಲ್ದಾಣಗಳ ಸ್ಥಳಾಂತರ ಮತ್ತು 63 ಹೊಸ ಬಸ್ ಬೇಗಳ ನಿರ್ಮಾಣ.

ಅವೈಜ್ಞಾನಿಕವಾಗಿರುವ 84 ಸ್ಪೀಡ್ ಬ್ರೇಕರ್‌ಗಳ ತೆರವು.

ನೀರು ನಿಲ್ಲುವ 137 ಸ್ಥಳಗಳಲ್ಲಿ ಚರಂಡಿ ವ್ಯವಸ್ಥೆ ಸುಧಾರಣೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೇ ತಿಂಗಳಿನಲ್ಲಿ ಓಪನ್ ಆಗಲ್ಲ ಪಿಂಕ್ ಲೈನ್! ವಿಳಂಬಕ್ಕೆ ಅಸಲಿ ಕಾರಣವೇನು?

ಬೃಹತ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾತನಾಡಿ, “ಇದು ಅತ್ಯಂತ ವಿವರವಾದ ಆಡಿಟ್ ವರದಿಯಾಗಿದೆ. ಆದರೆ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಭೂಸ್ವಾಧೀನ ಮತ್ತು ಹಣಕಾಸಿನ ಯೋಜನೆ ಬಹಳ ಮುಖ್ಯ. ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ನಡೆಸಲಾಗುವುದು,” ಎಂದು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version