ರಾಣಾ ದಗ್ಗುಬಾಟಿ, ಕರಣ್ ಜೋಹರ್ ಸಿನಿಮಾನಲ್ಲಿ ನಟಿಸಲ್ಲ ಅಕ್ಷಯ್ ಕುಮಾರ್ – Kannada News | Akshay Kumar not acting with Rana Daggubati in Karan Johar’s movie

ಅಕ್ಷಯ್ ಕುಮಾರ್ (Akshay Kumar), ಬಾಲಿವುಡ್​ನ ಅತ್ಯಂತ ಬ್ಯುಸಿ ಸ್ಟಾರ್ ನಟ. ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿಬಿಡುತ್ತಾರೆ. ಅಕ್ಷಯ್ ಕುಮಾರ್ ಅವರು, ಸಿನಿಮಾ ಆಫರ್​​ಗಳನ್ನು ರಿಜೆಕ್ಟ್ ಮಾಡುವುದೇ ಇಲ್ಲ ಎಂಬ ಮಾತಿದೆ. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಸಿನಿಮಾ ಒಂದನ್ನು ರಿಜೆಕ್ಟ್ ಮಾಡಿದ್ದಾರೆ. ಅದೂ ಸಾಮಾನ್ಯ ನಿರ್ಮಾಣ ಸಂಸ್ಥೆಯನ್ನಲ್ಲ. ಬದಲಿಗೆ ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯ ಆಫರ್ ಅನ್ನೇ ರಿಜೆಕ್ಟ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ.

ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಅಡಿಯಲ್ಲಿ, ಉಜ್ಜಯಿನಿ ನಗರದ ಹಿನ್ನೆಲೆಯ ಐತಿಹಾಸಿಕ ಥ್ರಿಲ್ಲರ್ ಚಿತ್ರವೊಂದರಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೇ ಸಿನಿಮಾನಲ್ಲಿ ‘ಬಾಹುಬಲಿ’ ಸಿನಿಮಾದ ವಿಲನ್ ರಾಣಾ ದಗ್ಗುಬಾಟಿ ಸಹ ನಟಿಸಲಿದ್ದು, ‘ಬಾಹುಬಲಿ’ ಮಾದರಿಯ ಸಿನಿಮಾ ಇದಾಗಿರಲಿದೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಆ ಸಿನಿಮಾನಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.

ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ ಕರಣ್ ಜೋಹರ್ ಅವರ ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಅಕ್ಷಯ್ ಕುಮಾರ್ ಅವರ ತಂಡವು ಇದನ್ನು ಅಧಿಕೃತವಾಗಿ ನಿರಾಕರಿಸಿದ್ದು, ಇದು ಕೇವಲ ವದಂತಿ ಎಂದು ತಿಳಿಸಿದೆ. ಅಕ್ಷಯ್ ಕುಮಾರ್ ಸದ್ಯ ತಮ್ಮ ಇತ್ತೀಚಿನ ಚಿತ್ರ ‘ಭೂತ್ ಬಂಗ್ಲಾ’ ಯಶಸ್ಸಿನಲ್ಲಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ಈ ಹಾರರ್ ಕಾಮಿಡಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಕ್ಷಯ್ ಕುಮಾರ್ ಅವರು ಮುಂದೆ ‘ವೆಲ್ಕಮ್ ಟು ದಿ ಜಂಗಲ್’, ‘ಹೈವಾನ್’, ಅನೀಸ್ ಬಾಜ್ಮಿ ಅವರ ಚಿತ್ರ ಮತ್ತು ‘ಗೋಲ್‌ಮಾಲ್ 5’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಆದರೆ ಈಗ ಉಜ್ಜಯಿನಿ ಆಧರಿತ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್ ಹೇಳಲು ಕಾರಣ ಏನೆಂದು ತಿಳಿದು ಬಂದಿಲ್ಲ. ಅಕ್ಷಯ್ ಕುಮಾರ್ ಅವರು ಸಾಮಾನ್ಯವಾಗಿ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಲು ಹೆಚ್ಚು ಆಸಕ್ತಿ ತೋರುತ್ತಾರೆ ಆದರೆ ಈ ಸಿನಿಮಾಕ್ಕೆ ಒಲ್ಲೆ ಎಂದಿದ್ದಾರೆ. ಕರಣ್ ಜೋಹರ್ ಜೊತೆಗೆ ಮನಸ್ತಾಪದ ಕಾರಣಕ್ಕೆ ಅಕ್ಷಯ್ ನಟಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ರಾಣಾ ದಗ್ಗುಬಾಟಿ ಸಹ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ನಟನೆಗಿಂತಲೂ ಸಿನಿಮಾ ನಿರ್ಮಾಣ, ವಿತರಣೆಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ‘ಕಾಂತಾ’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ಇದೀಗ ಇನ್ನೂ ಕೆಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ. ಕೆಲ ಸಿನಿಮಾಗಳಲ್ಲಿ ನಟನೆ ಸಹ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Copper Ring Benefits: ತಾಮ್ರದ ಉಂಗುರವನ್ನು ಈ ರಾಶಿಯವರು ಧರಿಸಿದ್ರೆ ಅದೃಷ್ಟವೇ ಬದಲಾಗಲಿದೆ – Kannada News | Copper Ring Benefits: Astrology, Health and Sun’s Grace for Prosperity

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಶಾಂತಿ ಮತ್ತು ದೈಹಿಕ ಆರೋಗ್ಯಕ್ಕೆ ಲೋಹಗಳಿಗೆ ವಿಶೇಷ ಸ್ಥಾನವಿದೆ. ಹಿಂದೂ ಸಂಪ್ರದಾಯದಲ್ಲಿ ಚಿನ್ನ ಮತ್ತು ಬೆಳ್ಳಿಯಷ್ಟೇ ತಾಮ್ರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪೂಜೆ, ಯಜ್ಞ ಮತ್ತು ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸಲು ತಾಮ್ರದ ಪಾತ್ರೆಗಳನ್ನೇ ಬಳಸುವುದು ವಾಡಿಕೆ. ತಾಮ್ರವು ಎಂದಿಗೂ ಅಶುದ್ಧವಾಗದ ಲೋಹವೆಂದು ನಂಬಲಾಗಿದ್ದು, ಇದನ್ನು ಧರಿಸುವುದರಿಂದ ದೇಹ ಮತ್ತು ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಬಹುದು ಎಂಬ ನಂಬಿಕೆಯಿದೆ.

ಸೂರ್ಯನ ಪ್ರಭಾವ ಮತ್ತು ಅದೃಷ್ಟದ ಬದಲಾವಣೆ:

ತಾಮ್ರವನ್ನು ನವಗ್ರಹಗಳ ರಾಜನಾದ ಸೂರ್ಯನಿಗೆ ಸಂಬಂಧಿಸಿದ ಲೋಹವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದ ಕಷ್ಟದ ದಿನಗಳು ಕಳೆದು ಶುಭ ದಿನಗಳು ಬರಲೆಂದು ಆಶಿಸುತ್ತಾರೆ. ಇದಕ್ಕಾಗಿ ರತ್ನಗಳು ಮತ್ತು ಲೋಹಗಳನ್ನು ಧರಿಸುವ ಸಾಂಪ್ರದಾಯಿಕ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಸರಿಯಾದ ಕ್ರಮದಲ್ಲಿ ತಾಮ್ರದ ಉಂಗುರವನ್ನು ಧರಿಸುವುದರಿಂದ ಜಾತಕದಲ್ಲಿ ಸೂರ್ಯನ ಸ್ಥಾನ ಬಲಗೊಳ್ಳುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಪ್ರಾರಂಭವಾಗುತ್ತವೆ.

ವಿಶೇಷ ಫಲ ಪಡೆಯುವ ರಾಶಿಗಳು:

ಜ್ಯೋತಿಷ್ಯದ ಪ್ರಕಾರ, ಈ ಉಂಗುರವು ಕೆಲವು ರಾಶಿಚಕ್ರದವರಿಗೆ ವರದಾನವಾಗಿ ಪರಿಣಮಿಸುತ್ತದೆ. ಮಂಗಳನ ಆಳ್ವಿಕೆಯ ಮೇಷ ರಾಶಿಯವರು ಇದನ್ನು ಧರಿಸುವುದರಿಂದ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೆ ಇದು ವೃತ್ತಿಜೀವನದಲ್ಲಿ ಅಭಿವೃದ್ಧಿ ಹಾಗೂ ಕೀರ್ತಿಯನ್ನು ತಂದುಕೊಡುತ್ತದೆ. ಇನ್ನು ಗುರುವಿನ ಆಳ್ವಿಕೆಯ ಧನು ರಾಶಿಯವರು ಇದನ್ನು ಧರಿಸುವುದರಿಂದ ಅದೃಷ್ಟ ಸುಧಾರಿಸಿ, ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಧರಿಸುವ ಕ್ರಮ ಮತ್ತು ಸಮಯ:

ತಾಮ್ರದ ಉಂಗುರವನ್ನು ಧರಿಸಲು ಭಾನುವಾರ ಮತ್ತು ಮಂಗಳವಾರ ಅತ್ಯಂತ ಶುಭ ದಿನಗಳು. ಭಾನುವಾರ ಧರಿಸುವುದರಿಂದ ಸೂರ್ಯ ದೇವನ ಅನುಗ್ರಹ ಸಿಕ್ಕರೆ, ಮಂಗಳವಾರ ಧರಿಸುವುದರಿಂದ ಮಂಗಳ ದೋಷದ ಪ್ರಭಾವ ಕಡಿಮೆಯಾಗುತ್ತದೆ. ಇದನ್ನು ಸಾಮಾನ್ಯವಾಗಿ ಬಲಗೈಯ ಉಂಗುರದ ಬೆರಳಿಗೆ ಧರಿಸುವುದು ಉತ್ತಮ. ಧರಿಸುವ ಮೊದಲು ಉಂಗುರವನ್ನು ಪವಿತ್ರ ಜಲದಿಂದ ಶುದ್ಧೀಕರಿಸುವುದು ಶಾಸ್ತ್ರೋಕ್ತ ವಿಧಾನವಾಗಿದೆ.

ಆರೋಗ್ಯ ಮತ್ತು ಮಾನಸಿಕ ಲಾಭಗಳು:

ಇದು ಕೇವಲ ಜ್ಯೋತಿಷ್ಯಕ್ಕೆ ಮಾತ್ರ ಸೀಮಿತವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ. ತಾಮ್ರದ ಸಂಪರ್ಕವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ. ಮನಸ್ಸಿನಲ್ಲಿ ಅತಿಯಾದ ಆತಂಕ ಅಥವಾ ಕೋಪ ಇರುವವರು ತಾಮ್ರದ ಉಂಗುರ ಧರಿಸುವುದರಿಂದ ಮಾನಸಿಕ ಶಾಂತಿಯನ್ನು ಕಂಡುಕೊಳ್ಳಬಹುದು ಮತ್ತು ಪರಿಸ್ಥಿತಿಗಳನ್ನು ಎದುರಿಸುವ ಧೈರ್ಯ ಪಡೆಯಬಹುದು ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:27 am, Thu, 23 April 26

Source link

ಮಗನ ಚಿನ್ನದ ಪದಕದ ಸಂಭ್ರಮ ನೋಡಲು ಬರುವಾಗಲೇ ಅಪಘಾತದಲ್ಲಿ ತಂದೆ ಸಾವು: ಘಟಿಕೋತ್ಸವ ದಿನವೇ ಭೀಕರ ದುರಂತ – Kannada News | Tragedy in Kalaburagi: Father Dies in Auto Accident Just Before Son Receives Two Gold Medals at CUK Convocation

ಪತ್ನಿ ಜತೆ ಶಿವಕುಮಾರ್ ಶರ್ಮಾ ಹಾಗೂ ಬಲಚಿತ್ರದಲ್ಲಿ ದಿವ್ಯಾಂಶು ಸಕ್ಸೇನಾImage Credit source: tv9

ಕಲಬುರಗಿ, ಏಪ್ರಿಲ್ 23: ಮಗ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆಯುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಂದ ತಂದೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಮಗನ ಸಾಧನೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಮರಣದ ಶೋಕ ಆವರಿಸಿದೆ. ಮೃತರನ್ನು ಮಧ್ಯ ಪ್ರದೇಶದ ಉಜ್ಜಯಿನಿ ಮೂಲದ ಶಿವಕುಮಾರ್ ಶರ್ಮಾ (59) ಎಂದು ಗುರುತಿಸಲಾಗಿದೆ.

ಘಟಿಕೋತ್ಸವ ಸಂಭ್ರಮದ ಮಧ್ಯೆ ನಡೆದಿದ್ದೇನು?

ಉಜ್ಜಯಿನಿಯ ಶಿವಕುಮಾರ್ ಶರ್ಮಾ ಪುತ್ರ ದಿವ್ಯಾಂಶು ಸಕ್ಸೇನಾ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (CUK) ಬಿ.ಟೆಕ್ (ಇ ಆಂಡ್ ಸಿ) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎರಡು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ನಿನ್ನೆ (ಏಪ್ರಿಲ್ 22) ನಡೆದ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ದಿವ್ಯಾಂಶು ಚಿನ್ನದ ಪದಕಗಳನ್ನು ಸ್ವೀಕರಿಸಿದ್ದಾರೆ. ಮಗನ ಈ ಸಾಧನೆಯನ್ನು ನೋಡಲೆಂದೇ ತಂದೆ ಶಿವಕುಮಾರ್ ಅವರು ಮಧ್ಯಪ್ರದೇಶದಿಂದ ಕಲಬುರಗಿಗೆ ಆಗಮಿಸಿದ್ದರು.

ಆಟೋ ಪಲ್ಟಿಯಾಗಿ ದುರ್ಮರಣ

ಬುಧವಾರ ಬೆಳಗ್ಗೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಲು ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿಯಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಶಿವಕುಮಾರ್ ಶರ್ಮಾ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಶಿವಕುಮಾರ್ ಶರ್ಮಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಟೋದಲ್ಲಿದ್ದ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಹೆಚ್ಚಾಯ್ತು ಹದಿಹರೆಯದ ಗರ್ಭಧಾರಣೆ! ಒಂದೇ ವರ್ಷದಲ್ಲಿ 61 ಪ್ರಕರಣಗಳು ದಾಖಲು

ಒಂದೆಡೆ ಮಗ ದಿವ್ಯಾಂಶು ವೇದಿಕೆಯ ಮೇಲೆ ಪದಕ ಸ್ವೀಕರಿಸಬೇಕಾದ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಆತನನ್ನು ಸಲಹಿ ಬೆಳೆಸಿದ ತಂದೆಯ ಶವವಾಗಿ ಪಕ್ಕದ ಆಸ್ಪತ್ರೆಯಲ್ಲಿದ್ದರು. ಈ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ಘಟನೆ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಾಲ್ಕು ವರ್ಷದ ಬಾಲಕಿಗೆ ಒಂದೇ ಅವಧಿಯಲ್ಲಿ 18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ದಂತ ವೈದ್ಯರ ಯತ್ನ, ಬಾಲಕಿ ಸಾವು – Kannada News | Tragic Dental Case in Kazakhstan: Child Dies After Procedure Under Sedation

ಕಝಾಕಿಸ್ತಾನ, ಏಪ್ರಿಲ್ 23: ನಾಲ್ಕು ವರ್ಷದ ಬಾಲಕಿಗೆ ದಂತ ವೈದ್ಯರೊಬ್ಬರು ಒಂದೇ ಬಾರಿಗೆ 18 ಹಲ್ಲುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ಯತ್ನಿಸಿದ ಕಾರಣ ಬಾಲಕಿ ಕೊನೆಯುಸಿರೆಳೆದಿರುವ ಘಟನೆ ಕಝಾಕಿಸ್ತಾನದಲ್ಲಿ ನಡೆದಿದೆ. ಆದರೆ ಬಾಲಕಿಗೆ ಅನಸ್ತೇಶಿಯಾ ಅಥವಾ ಆ ಶಸ್ತ್ರಚಿಕಿತ್ಸೆಯನ್ನೇ ತಡೆದುಕೊಳ್ಳಲಾಗದೆ ಉಸಿರುಚೆಲ್ಲಿದ್ದಾಳೆ. ಸಿಪಿಆರ್ ಮಾಡಿದರೂ ಆಕೆ ಮತ್ತೆ ಎಚ್ಚರಗೊಳ್ಳಲೇ ಇಲ್ಲ. ಮಕ್ಕಳ ಹಲ್ಲುಗಳಿಗೆ ಚಿಕಿತ್ಸೆ ಕೊಡಿಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕು.

Source link

ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು, ಹೊತ್ತಿದ ಬೆಂಕಿ, 11 ಮಂದಿ ಸಜೀವದಹನ – Kannada News | Brake Failure Turns Deadly: Chain Crash Claims 11 Lives in Mirzapur

ಮಿರ್ಜಾಪುರ, ಏಪ್ರಿಲ್ 23: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಬೃಹತ್ ಟ್ರಕ್​ಗಳ ನಡುವೆ ಡಿಕ್ಕಿ ಸಂಭವಿಸಿದೆ, ಅದರ ನಡುವೆ ಕಾರು  ಸಿಕ್ಕಿಹಾಕಿಕೊಂಡ ಪರಿಣಾಮ 11 ಮಂದಿ ಸಜೀವದಹನವಾಗಿದ್ದಾರೆ. ಎರಡು ಭಾರೀ ವಾಹನಗಳ ನಡುವೆ ಸಿಲುಕಿದ್ದ ಕಾರು ನಜ್ಜುಗುಜ್ಜಾಗಿದ್ದು, ನಂತರ ಬೆಂಕಿ ಹೊತ್ತಿಕೊಂಡಿತ್ತು. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬ್ರೇಕ್ ಫೇಲ್ ಆದ ಟ್ರಕ್ ಇಳಿಜಾರಿನಲ್ಲೊ ವೇಗವಾಗಿ ಬಂದು ಮತ್ತೊಂದು ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಆ ಟ್ರಕ್​ ಹಿಂದೆ ಕಾರು ಕೂಡ ಇತ್ತು.ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಸಂಬಂಧಿಕರಿಗೆ 2 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ.

Source link

Video: ಮಾಲ್‌ನಲ್ಲಿದ್ದ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸಿದ ಪುಟಾಣಿ – Kannada News | A little girl was blessed after seeing dolls at the mall and touched their feet

ಪುಟಾಣಿ ಮಕ್ಕಳಿಗೆ (little kids) ತಾವು ಏನು ಮಾಡುತ್ತಿದ್ದೇವೆ, ತಾವು ಮಾಡುವುದು ಸರಿಯೋ ತಪ್ಪೋ ಎನ್ನುವುದು ತಿಳಿದಿರಲ್ಲ. ಹೆತ್ತವರು ಏನು ಹೇಳಿಕೊಡುತ್ತಾರೋ ಅದನ್ನೇ ಕಲಿಯುತ್ತದೆ. ಈ ದೃಶ್ಯವು ತಾಯಿ ಹೇಳಿದ ಮಾತನ್ನು ಈ ಪುಟಾಣಿ ಹೇಗೆ ಪಾಲಿಸುತ್ತಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಪುಟಾಣಿ ಶಾಪಿಂಗ್ ಮಾಲ್‌ನಲ್ಲಿ ನಿಲ್ಲಿಸಿಟ್ಟ ಆಕರ್ಷಕ ಗೊಂಬೆಗಳನ್ನು ಕಂಡೊಡನೆ ಅದರ ಪಾದ ಸ್ಪರ್ಶಿಸಿ ನಮಸ್ಕಾರ ಮಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಪುಟ್ಟ ಹುಡುಗಿಯ ಸಂಸ್ಕಾರಯುತ ನಡವಳಿಕೆಯನ್ನು ಮೆಚ್ಚಿಕೊಂಡಿದ್ದಾರೆ.

sarcastic_doctorrr ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಮಾಲ್ ನಲ್ಲಿ ನಿಲ್ಲಿಸಿಟ್ಟ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಂಗೆ ಮನೆಗೆ ಹೋಗಬೇಕು ಅಷ್ಟೇ; ಕ್ಲಾಸ್ ರೂಮ್ ಕಿಟಕಿ ಹತ್ತಿ ರಂಪಾಟ ಮಾಡಿದ ಪುಟಾಣಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪುಟಾಣಿಯ ಸಂಸ್ಕಾರಯುತ ನಡವಳಿಕೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರ, ಕ್ಯೂಟ್ ನೆಸ್ ಎಂದರೆ, ಮತ್ತೊಬ್ಬರು, ಮುಗ್ಧತೆ ಇನ್ನೊಂದು ಉದಾಹರಣೆ ಈ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನನ್ನ ಮಗನು ಇದೇ ರೀತಿ ಮಾಡ್ತಾನೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs CSK ಪಂದ್ಯವನ್ನು ‘ಎಲ್ ಕ್ಲಾಸಿಕೋ’ ಎಂದು ಕರೆಯುವುದು ಯಾಕೆ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 33ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವನ್ನು ‘ಎಲ್ ಕ್ಲಾಸಿಕೋ’ ಮ್ಯಾಚ್ ಎಂದು ವರ್ಣಿಸಲಾಗುತ್ತಿದೆ. ಇಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನೇ ಯಾಕೆ ‘ಎಲ್ ಕ್ಲಾಸಿಕೋ’ ಎಂದು ಕರೆಯಲಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

‘ಎಲ್ ಕ್ಲಾಸಿಕೋ’ ಎಂದರೇನು?

‘ಎಲ್ ಕ್ಲಾಸಿಕೋ’ (El Clásico) ಎಂಬುದು ಮೂಲತಃ ಸ್ಪ್ಯಾನಿಷ್ ಭಾಷೆಯ ಪದ. ಇದರ ಅರ್ಥ “ದಿ ಕ್ಲಾಸಿಕ್” (The Classic) ಅಥವಾ “ಶ್ರೇಷ್ಠ” ಎಂದಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಈ ಪದವನ್ನು ಬಳಸಲಾಗಿದ್ದು ಸ್ಪೇನ್ ಫುಟ್​ಬಾಲ್​ ಅಂಗಳದಲ್ಲಿ. ಅಂದರೆ ವಿಶ್ವದ ಅತ್ಯಂತ ಹಳೆಯ ಫುಟ್‌ಬಾಲ್ ಪೈಪೋಟಿಗಳಲ್ಲಿ ಒಂದಾದ ಸ್ಪೇನ್‌ನ ರಿಯಲ್ ಮ್ಯಾಡ್ರಿಡ್ (Real Madrid) ಮತ್ತು ಬಾರ್ಸಿಲೋನಾ (FC Barcelona) ಕ್ಲಬ್‌ಗಳ ನಡುವಿನ ಮುಖಾಮುಖಿಯನ್ನು ಎಲ್​ ಕ್ಲಾಸಿಕೋ ಪಂದ್ಯ ಎಂದು ಬಣ್ಣಿಸಲಾಗುತ್ತದೆ.

ಅಂದರೆ ಇಲ್ಲಿ ಅತ್ಯುತ್ತಮ ಪೈಪೋಟಿಯ ಪಂದ್ಯವನ್ನು ದಿ ಕ್ಲಾಸಿಕ್ ಮ್ಯಾಚ್​ ಅಥವಾ ಎಲ್ ಕ್ಲಾಸಿಕೋ ಪಂದ್ಯ ಎಂದು ಕರೆಯಲಾಗುತ್ತದೆ.  ಅದರಂತೆ ಐಪಿಎಲ್​ನಲ್ಲೂ ಈ ಪದವನ್ನು ಬಳಸಲಾಗುತ್ತಿದೆ.

CSK vs MI ಪಂದ್ಯವೇಕೆ ‘ಎಲ್ ಕ್ಲಾಸಿಕೋ’?

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳೆಂದರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್​. ಉಭಯ ತಂಡಗಳು ತಲಾ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿವೆ. ಅಂದರೆ ಲೀಗ್‌ನ ಅರ್ಧಕ್ಕಿಂತ ಹೆಚ್ಚು ಟ್ರೋಫಿಗಳು ಈ ಎರಡು ತಂಡಗಳ ಬಳಿಯೇ ಇರುವುದು ವಿಶೇಷ.

ಹೀಗಾಗಿಯೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನು’ಎಲ್ ಕ್ಲಾಸಿಕೋ’ ಮ್ಯಾಚ್​ ಎಂದು ಕರೆಯಲಾಗುತ್ತದೆ. ಈ ಹೆಸರಿಗೆ ತಕ್ಕಂತೆ ಈ ಹಿಂದೆ ಉಭಯ ತಂಡಗಳು ಗೆಲುವಿಗಾಗಿ ಕೊನೆಯ ಕ್ಷಣದವರೆಗೆ ಭರ್ಜರಿ ಪೈಪೋಟಿ ನಡೆಸಿದ್ದರು.

ಉಭಯ ತಂಡಗಳ ಮುಖಾಮುಖಿ:

ಉಭಯ ತಂಡಗಳ ದಾಖಲೆಯನ್ನು ನೋಡಿದರೆ ಮುಂಬೈ ಇಂಡಿಯನ್ಸ್ ಸ್ವಲ್ಪ ಮೇಲುಗೈ ಹೊಂದಿದೆ. ಆದರೆ, ಪ್ರತಿ ಬಾರಿ ಈ ತಂಡಗಳು ಮುಖಾಮುಖಿಯಾದಾಗಲೂ ಫಲಿತಾಂಶ ಕೊನೆಯ ಓವರ್‌ವರೆಗೂ ಕುತೂಹಲಕಾರಿಯಾಗಿರುತ್ತದೆ.

  • ಒಟ್ಟು ಪಂದ್ಯಗಳು: 39
  •  ಮುಂಬೈ ಇಂಡಿಯನ್ಸ್​ ಗೆಲುವು: 21
  •  ಚೆನ್ನೈ ಸೂಪರ್ ಕಿಂಗ್ಸ್​ ಗೆಲುವು: 18
  • ಗೆಲುವಿನ ಶೇಕಡಾವಾರು: ಮುಂಬೈ ಇಂಡಿಯನ್ಸ್ (53.8%), ಚೆನ್ನೈ ಸೂಪರ್ ಕಿಂಗ್ಸ್​ (46.2%)

‘ಎಲ್ ಕ್ಲಾಸಿಕೋ’ ಪಂದ್ಯದ ಇನ್ನಿತರ ವಿಷಯಗಳು:

  • ನಗರಗಳ ನಡುವಿನ ಗೌರವ: ಇದು ಕೇವಲ ಎರಡು ತಂಡಗಳ ನಡುವಿನ ಆಟವಲ್ಲ, ಭಾರತದ ಎರಡು ದೊಡ್ಡ ನಗರಗಳಾದ ಮುಂಬೈ ಮತ್ತು ಚೆನ್ನೈ ನಡುವಿನ ಶ್ರೇಷ್ಠತೆಯ ಹೋರಾಟ.
  • ಅತಿ ಹೆಚ್ಚು ವೀಕ್ಷಣೆ: ಐಪಿಎಲ್ ಇತಿಹಾಸದಲ್ಲಿ ಲೀಗ್ ಹಂತದಲ್ಲಿ ಅತಿ ಹೆಚ್ಚು ಟಿವಿ ರೇಟಿಂಗ್ ಮತ್ತು ವೀಕ್ಷಕರ ಸಂಖ್ಯೆ ದಾಖಲಾಗಿದ್ದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮುಖಾಮುಖಿಯ ಪಂದ್ಯದಲ್ಲಿ.
  • ಬಲಿಷ್ಠ ತಂಡಗಳು: ಎರಡೂ ತಂಡಗಳು ಯಾವಾಗಲೂ ಬಲಿಷ್ಠ ಆಟಗಾರರನ್ನು ಹೊಂದಿರುತ್ತವೆ, ಹೀಗಾಗಿ ಪಂದ್ಯದ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.

ಇದನ್ನೂ ಓದಿ: IPL 2026: CSK ಪರ ಆಸ್ಟ್ರೇಲಿಯನ್ ವೇಗಿ ಪಾದಾರ್ಪಣೆ..!

ಆದರೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳಲ್ಲಿನ ಆಟಗಾರರ ಬದಲಾಗಿದ್ದಾರೆ. ಈ ಬದಲಾವಣೆಯ ಹೊರತಾಗಿಯೂ ಎಲ್​ ಕ್ಲಾಸಿಕೋ ಕುತೂಹಲ ಹಾಗೆಯೇ ಉಳಿದಿದೆ. ಈ ಕುತೂಹಲಕ್ಕೆ ಕಿಚ್ಚು ಹಚ್ಚುವಂತಹ ಪ್ರದರ್ಶನವನ್ನು ಈ ಬಾರಿ ಕೂಡ ಉಭಯ ತಂಡಗಳು ನೀಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

 

Source link

ಮಲಗುವ ಮುನ್ನ ಐಶ್ವರ್ಯಾಗೆ ಮೂರು ಬಾರಿ ಕ್ಷಮೆ ಕೇಳುತ್ತಾರೆ ಅಭಿಷೇಕ್ ಬಚ್ಚನ್ – Kannada News | Aishwarya Rai and Abhishek Bachchan’s Love Story: From Proposal to Dispelling Rumors

ಬಾಲಿವುಡ್ ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ 2007ರಲ್ಲಿ ವಿವಾಹವಾದರು. ಇಬ್ಬರೂ ಕೆಲವು ಕಾಲ ಡೇಟಿಂಗ್ ಮಾಡುತ್ತಿದ್ದರು. ನಂತರ, ಅವರು ಮದುವೆಯಾಗಲು ನಿರ್ಧರಿಸಿದರು. ಅಭಿಷೇಕ್ (Abhishek Bachchan ) ಯಾವಾಗಲೂ ಐಶ್ವರ್ಯ ರೈ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಇತ್ತೀಚೆಗೆ ಅವರು ಪ್ರಪೋಸ್ ಮಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಆದರೆ, ಆ ಸಮಯದಲ್ಲಿ, ಬಚ್ಚನ್ ಕುಟುಂಬದಿಂದ ಯಾರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇತ್ತೀಚೆಗೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಅಭಿಷೇಕ್ ಬಚ್ಚನ್ ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಪ್ರೇಮಕಥೆ ಚಿತ್ರದ ಸೆಟ್‌ಗಳಲ್ಲಿ ಪ್ರಾರಂಭವಾಯಿತು. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಅವರ ಸಂಬಂಧ ಇಷ್ಟು ದೂರ ಬರುತ್ತದೆ ಎಂದು ಅವರಿಬ್ಬರೂ ಭಾವಿಸಿರಲಿಲ್ಲ.

ಡೆಕ್ಕನ್ ಕ್ರಾನಿಕಲ್ ಜೊತೆ ಮಾತನಾಡಿದ ಅಭಿಷೇಕ್ ಬಚ್ಚನ್ , ‘ಐಶ್ವರ್ಯ ಮತ್ತು ನಾನು ಮೊದಲು ಭೇಟಿಯಾದದ್ದು 2000 ರಲ್ಲಿ. ‘ಧೈ ಅಕ್ಷರ್ ಪ್ರೇಮ್ ಕೆ’ ಚಿತ್ರದ ಸೆಟ್‌ನಲ್ಲಿ. ಆ ಸಮಯದಲ್ಲಿ, ನಾವು ಕೇವಲ ಸ್ನೇಹಿತರಾಗಿದ್ದೆವು. ನಾವಿಬ್ಬರೂ ಪರಸ್ಪರ ಚೆನ್ನಾಗಿ ಹೊಂದಿಕೊಂಡೆವು. ಆ ಸಮಯದಲ್ಲಿ, ಐಶ್ವರ್ಯ ನನ್ನ ಜೀವನ ಸಂಗಾತಿಯಾಗುತ್ತಾರೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಉಮ್ರಾವ್ ಜಾನ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾವು ನ್ಯೂಯಾರ್ಕ್‌ನಲ್ಲಿದ್ದೆವು. ಆಗ ನಾನು ಐಶ್ವರ್ಯಗೆ ಪ್ರಪೋಸ್ ಮಾಡಿದೆ’ ಎಂದು ಹೇಳಿದರು.

ತಮ್ಮ ಯಶಸ್ವಿ ದಾಂಪತ್ಯ ಜೀವನದ ರಹಸ್ಯವನ್ನು ಹಂಚಿಕೊಳ್ಳುತ್ತಾ, ಅಭಿಷೇಕ್ ಬಚ್ಚನ್ ಪ್ರತಿ ರಾತ್ರಿ ಮಲಗುವ ಮುನ್ನ ಮೂರು ಬಾರಿ ಪತ್ನಿಗೆ ಕ್ಷಮೆಯಾಚಿಸಬೇಕು ಎಂದು ಹಾಸ್ಯರೀತಿಯಲ್ಲಿ ಹೇಳಿದರು. ಮದುವೆಯ ನಂತರವೂ ಐಶ್ವರ್ಯಾ ರೈ ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದರು. ಐಶ್ವರ್ಯಾ ತಮ್ಮ ಕೆಲಸದ ಮೇಲೆ ಗಮನ ಹರಿಸಬೇಕು ಎಂಬುದು ಅವರ ಆಶಯವಾಗಿದೆ ಎಂದು ಅಭಿಷೇಕ್ ಬಚ್ಚನ್ ಹೇಳಿದರು.

ಇದನ್ನೂ ಓದಿ: ‘ಅವಳನ್ನು ಕೇಳುವಷ್ಟು ಧೈರ್ಯ ಇಲ್ಲ’; ಮಗಳ ಆರಾಧ್ಯಾ ಬಗ್ಗೆ ನೇರವಾಗಿ ಮಾತನಾಡಿದ ಅಭಿಷೇಕ್ 

ಅಭಿಮಾನಿಗಳು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿಯನ್ನು ತುಂಬಾ ಇಷ್ಟಪಡುತ್ತಾರೆ. ಆದರೆ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂದು ಕೇಳಿದಾಗ ಅಭಿಮಾನಿಗಳು ಆತಂಕಗೊಂಡರು. ಕೆಲವು ತಿಂಗಳುಗಳ ನಂತರ, ಅಭಿಷೇಕ್ ಬಚ್ಚನ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ವದಂತಿ ಎಂದು ಸ್ಪಷ್ಟಪಡಿಸಿದರು. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಗೆ ಮಗಳಿದ್ದಾಳೆ. ಐಶ್ವರ್ಯಾ ರೈ ಯಾವಾಗಲೂ ತನ್ನ ಮಗಳೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rates: ಚಿನ್ನ, ಬೆಳ್ಳಿ ಬೆಲೆಗಳು ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 23rd April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 23: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಕಡಿಮೆಗೊಂಡಿವೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ 110 ರೂಗಳಷ್ಟು ಇಳಿಕೆಗೊಂಡಿದೆ. ಆಭರಣ ಚಿನ್ನದ ಬೆಲೆ 14,100 ರೂ ಒಳಗೆ ಬಂದಿದೆ. ವಿದೇಶಗಳಲ್ಲಿ ಯಥಾಪ್ರಕಾರ ಅಲ್ಪ ಏರಿಳಿತಗಳಾಗಿವೆಯಷ್ಟೇ. ಇನ್ನು, ಬೆಳ್ಳಿ ಬೆಲೆಯೂ ಇಂದು ಗ್ರಾಮ್​ಗೆ 5 ರೂನಷ್ಟು ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,53,550 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 23ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,355 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,075 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,516 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,355 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,075 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,075 ರೂ
  • ಚೆನ್ನೈ: 14,160 ರೂ
  • ಮುಂಬೈ: 14,075 ರೂ
  • ದೆಹಲಿ: 14,090 ರೂ
  • ಕೋಲ್ಕತಾ: 14,075 ರೂ
  • ಕೇರಳ: 14,075 ರೂ
  • ಅಹ್ಮದಾಬಾದ್: 14,080 ರೂ
  • ಜೈಪುರ್: 14,090 ರೂ
  • ಲಕ್ನೋ: 14,090 ರೂ
  • ಭುವನೇಶ್ವರ್: 14,075 ರೂ

ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 579 ರಿಂಗಿಟ್ (13,736 ರುಪಾಯಿ)
  • ದುಬೈ: 530.50 ಡಿರಾಮ್ (13,592 ರುಪಾಯಿ)
  • ಅಮೆರಿಕ: 147.50 ಡಾಲರ್ (13,885 ರುಪಾಯಿ)
  • ಸಿಂಗಾಪುರ: 189 ಸಿಂಗಾಪುರ್ ಡಾಲರ್ (13,935 ರುಪಾಯಿ)
  • ಕತಾರ್: 530 ಕತಾರಿ ರಿಯಾಲ್ (13,683 ರೂ)
  • ಸೌದಿ ಅರೇಬಿಯಾ: 544 ಸೌದಿ ರಿಯಾಲ್ (13,652 ರುಪಾಯಿ)
  • ಓಮನ್: 56.30 ಒಮಾನಿ ರಿಯಾಲ್ (13,763 ರುಪಾಯಿ)
  • ಕುವೇತ್: 43.60 ಕುವೇತಿ ದಿನಾರ್ (13,389 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 270 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 270 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Bomb Attack: ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ – Kannada News | Violence Erupts During Voting in Murshidabad, Several Injured

ಮುರ್ಷಿದಾಬಾದ್, ಏಪ್ರಿಲ್ 23: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಕೆಲವು ದುಷ್ಕರ್ಮಿಗಳು ಮತದಾನದ ವೇಳೆ ಕಚ್ಚಾ ಬಾಂಬ್ ಎಸೆದ ಪರಿಣಾಮ ಹಲವು ಮಂದಿ ಗಾಯಗೊಂಡಿದ್ದಾರೆ. ನೌಡಾದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಭೀತಿ ಉಂಟಾಗಿದೆ. ಜಿಲ್ಲೆಯಲ್ಲಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ನಿನ್ನೆ ರಾತ್ರಿ ಶಿವನಗರ ಪ್ರಾಥಮಿಕ ಶಾಲೆಯ ಬಳಿ ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದ್ದು, ಒಬ್ಬ ಮಹಿಳೆ ಗಾಯಗೊಂಡಿದ್ದರು. ಸಮೀಪದಲ್ಲಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಸಾಹಿನಾ ಮುಮ್ತಾಜ್ ಖಾನ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆಯ ನಂತರ, ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version