Headlines

ಕೊಡಗಿನಲ್ಲಿ ಟ್ರೆಕ್ಕಿಂಗ್​ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ 4 ದಿನದ ಬಳಿಕ ಪತ್ತೆ

ಕೊಡಗು, ಏಪ್ರಿಲ್​ 05: ಮಡಿಕೇರಿಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಕೊ‌ನೆಗೂ ಪತ್ತೆ ಆಗಿದ್ದಾರೆ. ಆ ಮೂಲಕ ನಾಲ್ಕು ದಿನಗಳ‌ ಕಾರ್ಯಾಚರಣೆ ಯಶಸ್ವಿ ಆಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆ ಅರಿವಾಗದೆ ಪಾಳು ಬಿದ್ದ ಬಂಗಲೆಯೊಂದರಲ್ಲೇ ಶರಣ್ಯ ಉಳಿದುಕೊಂಡಿದ್ದರು. ಸ್ಥಳೀಯ ಜನಾಂಗದವರ ಸಹಾಯ ಬೆನ್ನಲ್ಲೇ ಇದೀಗ ಯುವತಿ ಪತ್ತೆ ಆಗಿದ್ದಾರೆ. ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ. Source link

Read More

‘ರಾಮಾಯಣ’ ಸಿನಿಮಾದ ಹೈಲೈಟ್ ವಿಎಫ್​​ಎಕ್ಸ್ ಅಲ್ಲ, ನಿರ್ದೇಶಕ ಹೇಳಿದ್ದೇನು?

ರಣ್​​ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಭಾರಿ ಅದ್ಧೂರಿ ವಿಎಫ್​​ಎಕ್ಸ್, ಅದ್ಧೂರಿ ಸೆಟ್​​ಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಪೌರಾಣಿಕ ಕತೆಗೆ ಭವ್ಯತೆಯನ್ನು ಸೇರಿಸಿ ಪ್ರೇಕ್ಷಕರಿಗೆ ನೀಡಲಾಗುತ್ತಿದೆ ‘ರಾಮಾಯಣ’ ಸಿನಿಮಾನಲ್ಲಿ. ಹಲವು ಆಸ್ಕರ್​​ಗಳನ್ನು ಗೆದ್ದಿರುವ ಡಿಎನ್​​ಇಜಿ ಸಂಸ್ಥೆ ಈ ಸಿನಿಮಾಕ್ಕೆ ವಿಎಫ್​​ಎಕ್ಸ್ ಮಾಡಿದೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರು ಸಂಗೀತ ನೀಡಲಿದ್ದಾರೆ. ರಣ್​​ಬೀರ್, ಯಶ್ ಇನ್ನೂ ಹಲವು ಸ್ಟಾರ್​​ಗಳು ಸಿನಿಮಾನಲ್ಲಿ ನಟಿಸಲಿದ್ದಾರೆ. ಇಷ್ಟೆಲ್ಲ…

Read More

ಬೆಂಗಳೂರಿನ ಐಐಎಂನ ವಾಲ್ ಆಫ್ ಫೇಮ್​ನಲ್ಲಿ ಸ್ಥಾನ ಗಿಟ್ಟಿಸಿದ ಧ್ವಿತ್​ನ ಯಶೋಗಾಥೆ

ಬೆಂಗಳೂರು, ಏಪ್ರಿಲ್ 5: ಭಾರತದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಎಂ ಬೆಂಗಳೂರು (IIM Bangalore) ಈ ಬಾರಿ ದೊಡ್ಡ ಪ್ರತಿಭೆಯೊಂದನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿದೆ. ಅದ್ಭುತ ಶೈಕ್ಷಣಿಕ ಸಾಧನೆಗಾಗಿ ಧ್ವಿತ್ ಮೆಹತಾ (Dhvit Mehta) ಐಐಎಂ ಬೆಂಗಳೂರಿನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಅವರ ಹೆಸರನ್ನು ವಾಲ್ ಆಫ್ ಫೇಮ್​ಗೆ ಸೇರಿಸಲಾಗಿದೆ. ಐಐಟಿ ಮತ್ತಿತರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಬಂದಿದ್ದ ಘಟಾನುಘಟಿ ಅಭ್ಯರ್ಥಿಗಳು ಆ ಬ್ಯಾಚ್​ನಲ್ಲಿ ಇದ್ದರು. ಇವರ ತೀವ್ರ ಪೈಪೋಟಿ ನಡುವೆ 27 ವರ್ಷದ…

Read More

ವಿಕೆಟ್​ ಉರುಳುತ್ತಿದ್ದಂತೆ ದೇವರ ಫೋಟೋವನ್ನು ಹಣೆಗೊತ್ತಿ ಕೈ ಮುಗಿದ ಗೋಯೆಂಕಾ

ಐಪಿಎಲ್‌ನಲ್ಲಿ ಲಕ್ನೋ ತಂಡ ತನ್ನ ಪ್ರದರ್ಶನದಿಂದ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಮ್ಮ ನಡವಳಿಕೆಗಳಿಂದ ಸುದ್ದಿಯಾಗಿದ್ದಾರೆ. ಈ ಹಿಂದಿನ ಸೀಸನ್​ಗಳಲ್ಲಿ ತಂಡದ ನಾಯಕರನ್ನು ಕ್ರೀಡಾಂಗಣದಲ್ಲೇ ಬಹಿರಂಗವಾಗಿ ನಿಂಧಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಗೋಯೆಂಕಾ, ಈ ಆವೃತ್ತಿಯಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದರು. ಲಕ್ನೋ ತಂಡ ಡೆಲ್ಲಿ ವಿರುದ್ಧ ಸೋತಾಗ ತಂಡದ ನಾಯಕ ರಿಷಭ್ ಪಂತ್​ಗೆ ಗೋಯೆಂಕಾ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನು ಗಮನಿಸಿದ್ದ ಬಿಸಿಸಿಐ, ಬಹಿರಂಗವಾಗಿ ಆಟಗಾರರನ್ನು ಅಥವಾ ನಾಯಕರನ್ನು ನಿಂಧಿಸಿದಂತೆ ಎಲ್ಲಾ…

Read More

ಪೃಥ್ವಿ ಅಂಬರ್-ಕಾರ್ತಿಕ್ ಮಹೇಶ್​ಗೆ ‘ಗ್ಯಾಸ್ ಟ್ರಬಲ್’: ಇಬ್ಬರಲ್ಲಿ ಯಾರು ಹೀರೊ?

ನಟ ಪೃಥ್ವಿ ಅಂಬರ್ (Prithvi Ambar) ಮತ್ತು ಬಿಗ್​​ಬಾಸ್ 10 ವಿಜೇತ ಕಾರ್ತಿಕ್ ಮಹೇಶ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾ ಘೋಷಣೆಗೆಂದು ವಿಶೇಷ ಪ್ರೋಮೊ ಮಾಡಲಾಗಿದೆ. ಹಾಸ್ಯಮಯವಾದ ಈ ಪ್ರೋಮೊನಲ್ಲಿ ಪೃಥ್ವಿ ಅಂಬರ್​​ಗೆ ‘ಗ್ಯಾಸ್ ಟ್ರಬಲ್’ ಕಾರ್ತಿಕ್​​ಗೂ ‘ಗ್ಯಾಸ್ ಟ್ರಬಲ್’ ನಿರ್ಮಾಪಕರಿಗೆ ಡೊನಾಲ್ಡ್ ಟ್ರಂಪ್, ಇನ್ನೂ ಯಾರ್ಯಾರಿಂದಲೋ ಕರೆ ಬರುತ್ತಿವೆ. ಒಟ್ಟಾರೆ ಚಿತ್ರ ವಿಚಿತ್ರವಾದ ಈ ವಿಡಿಯೋದ ಉದ್ದೇಶವೇನು? ಇಬ್ಬರೂ ನಟಿಸುತ್ತಿರುವ ಸಿನಿಮಾ ಯಾವುದು? ಇಬ್ಬರಲ್ಲಿ ಯಾರು ಹೀರೋ? ವಿಡಿಯೋ…

Read More

Traditional Guidelines: ವಿದ್ಯಾರ್ಥಿಗಳು ತಾಂಬೂಲ ಯಾಕೆ ತಿನ್ನಬಾರದು? ಕಾರಣ ಇಲ್ಲಿ ತಿಳಿಯಿರಿ

ಯಾವುದೇ ಶುಭ ಕಾರ್ಯ ಅಥವಾ ಸಂತೋಷದ ಕಾರ್ಯಕ್ರಮಗಳಲ್ಲಿ ಉತ್ತಮ ಭೋಜನದ ನಂತರ ತಾಂಬೂಲವನ್ನು ಸೇವಿಸುವುದು ಭಾರತೀಯ ಸಂಪ್ರದಾಯದಲ್ಲಿ ಮಹತ್ವ ಪಡೆದಿದೆ. ವೈಜ್ಞಾನಿಕವಾಗಿ ತಾಂಬೂಲ ಸೇವನೆಯು ಆರೋಗ್ಯ ವೃದ್ಧಿಗೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಪಚನ ಕ್ರಿಯೆಯನ್ನು ಪೂರ್ಣಗೊಳಿಸಲು ಸಹಕಾರಿಯಾಗಿದೆ. ಅಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ನೋಡಿದಾಗ, ತಾಂಬೂಲವು ಮಹಾಲಕ್ಷ್ಮಿಯ ಸಂಕೇತ, ಐಶ್ವರ್ಯ, ಸಮೃದ್ಧಿ ಮತ್ತು ಸಂತೋಷದ ಪ್ರತೀಕವಾಗಿದೆ. ವಿವಾಹ, ಗೃಹ ಪ್ರವೇಶ, ಉಪನಯನ, ಗೃಹಾರಂಭದಂತಹ ಯಾವುದೇ ಶುಭ ಸಂದರ್ಭಗಳಲ್ಲಿ ಸಂತೋಷದಿಂದ ಊಟ ಮಾಡಿದ ನಂತರ ತಾಂಬೂಲವನ್ನು ಸ್ವೀಕರಿಸಲಾಗುತ್ತದೆ. ಆದರೆ, ಎಲ್ಲರಿಗೂ…

Read More

RCB-CSK ಪಂದ್ಯ: ಸ್ಟೇಡಿಯಂ ಬಳಿ ಅನುಮಾನಾಸ್ಪದವಾಗಿ ಓಡಾಡ್ತಿದ್ದ 8 ಜನ ಪೊಲೀಸ್ ವಶಕ್ಕೆ

ಬೆಂಗಳೂರು, ಏಪ್ರಿಲ್​​ 05: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಸಂಜೆ 7.30ಕ್ಕೆ ಆರ್​ಸಿಬಿ (RCB) ಹಾಗೂ ಚೆನ್ನೈ ತಂಡದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಂದ್ಯ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತರರಾಗಿದ್ದು, ಕ್ರೀಡಾಂಗಣದತ್ತ ಆಗಮಿಸುತ್ತಿದ್ದಾರೆ. ಕ್ರೀಡಾಂಗಣದ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸಿ ಒಳ ಬಿಡುತ್ತಿದ್ದಾರೆ. ಈ ಮಧ್ಯೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಜಾರ್ಖಂಡ್ ಮೂಲದ ನಾಲ್ವರು ಸೇರಿ ಒಟ್ಟು 8 ಜನರನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ. ಕಳ್ಳತನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಎಂದ ಸೀಮಂತ್…

Read More

Akshaya Tritiya: ಅಕ್ಷಯ ತೃತೀಯದಂದು ತಪ್ಪಿಯೂ ಈ ವಸ್ತುಗಳನ್ನು ಖರೀದಿಸಬೇಡಿ!

ಸನಾತನ ಧರ್ಮದಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಗೆ ವಿಶೇಷವಾದ ಧಾರ್ಮಿಕ ಮಹತ್ವವಿದೆ. ಈ ಪವಿತ್ರ ದಿನವನ್ನೇ ‘ಅಕ್ಷಯ ತೃತೀಯ’ ಎಂದು ಆಚರಿಸುತ್ತೇವೆ. ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷ ಈ ಶುಭ ಹಬ್ಬವು ಏಪ್ರಿಲ್ 19 ರಂದು ಬಂದಿದೆ. ಶಾಸ್ತ್ರಗಳ ಪ್ರಕಾರ, ಅಕ್ಷಯ ತೃತೀಯದಂದು ಮದುವೆ, ಗೃಹಪ್ರವೇಶ ಅಥವಾ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಪ್ರತ್ಯೇಕವಾಗಿ ಪಂಚಾಂಗ ನೋಡುವ ಅವಶ್ಯಕತೆಯಿಲ್ಲ, ಇಡೀ ದಿನವು ಅತ್ಯಂತ ಮಂಗಳಕರವಾಗಿರುತ್ತದೆ. ಸಂಪತ್ತಿನ ಅಧಿದೇವತೆಯ ಆರಾಧನೆ: ಅಕ್ಷಯ ತೃತೀಯದಂದು ಐಶ್ವರ್ಯದ…

Read More

1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್​ ಬಗ್ಗೆ ಜಮೀರ್ ಶಾಕಿಂಗ್ ಹೇಳಿಕೆ

ದಾವಣಗೆರೆ, (ಏಪ್ರಿಲ್ 05): ಹಲವು ಅಂತೆ ಕಂತೆಗಳ ಬಗ್ಗೆ ಚರ್ಚೆ ಜೋರಾಗುತ್ತಿದ್ದಂತೆಯೇ ಸಚಿವ ಜಮೀರ್ ಅಹ್ಮದ್‌ ಖಾನ್‌ (zameer ahmed khan) ಅವರು ದಾವಣಗೆರೆ ದಕ್ಷಿಣ ಉಪಚುನಾವಣೆ (Davanagere South By Election) ಪ್ರಚಾರಕ್ಕೆ ಬಂದಿದ್ದಾರೆ. ಎಸ್‌ಎಸ್‌ ಮಲ್ಲಿಕಾರ್ಜುನ್‌ (Minister SS Mallikarjun) ಪಕ್ಕದಲ್ಲಿಯೇ ಕುಳಿತು ಸುದ್ದಿಗೋಷ್ಠಿ ನಡೆಸಿ ತಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ ಎಂಬುವುದನ್ನು ಸಾರಿದರು. ಅಲ್ಲದೇ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನೂ ಕೂಡ ಸುಮ್ಮನೆ ಇರಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೂಡ ಕೊಟ್ಟಿದ್ದಾರೆ….

Read More

ಪಾಕಿಸ್ತಾನದ ಪಾಪಿಗಳು; ದಾವೂದ್ ಇಬ್ರಾಹಿಂ ವರ್ಸಸ್ ಲೆಯಾರಿ ಕಿಂಗ್ ರೆಹಮಾನ್ ಡಕಾಯಿಟ್

ದುರಂಧರ್ ಸರಣಿಯ ಸಿನಿಮಾಗಳು ಪಾಕಿಸ್ತಾನದ ಭೂಗತ ಲೋಕವನ್ನು ಭಾರತೀಯ ಜನಸಾಮಾನ್ಯರಿಗೆ ಸ್ಪಷ್ಟವಾಗಿ ಪರಿಚಯಿಸಿವೆ. ಮುಂಬೈ ಅಂಡರ್​ವರ್ಲ್ಡ್ ಸ್ಟೋರಿಗಳನ್ನು ನೆನಪಿಸುವಂತಹ ಕ್ರೈಮ್​ಗಳು ಕರಾಚಿಯಲ್ಲಿ ನಡೆದಿರುವುದನ್ನು ಈ ಸಿನಿಮಾಗಳಲ್ಲಿ ನೋಡಬಹುದು. ಪಾಕಿಸ್ತಾನದಲ್ಲಿ ಭೂಗತಲೋಕ, ಪೊಲೀಸ್, ರಾಜಕಾರಣಿಗಳು, ಭಾರತೀಯ ಗೂಢಚಾರಿಗಳ ಜಾಲ ಇವೆಲ್ಲವೂ ಹೇಗಿದೆ ಎನ್ನುವುದನ್ನು ದುರಂಧರ್​ಗಳಲ್ಲಿ ಕಾಣಬಹುದು. ಆದರೆ, ಅವು ಅಪ್ಪಟ ವಾಸ್ತವವಾ, ಕಾಲ್ಪನಿಕವಾ ಇದು ಯಾವತ್ತಿಗೂ ಹೊರಬರದ ಸಂಗತಿ. ಇದೇ ವೇಳೆ, ಅಕ್ಷಯ್ ಖನ್ನಾ ನಟಿಸಿದ್ದ ರೆಹಮಾನ್ ಡೆಕಾಯಿಟ್ ಪಾತ್ರ ರಿಯಲ್ ಲೈಫ್​ನಲ್ಲಿ ಇದ್ದಂಥದ್ದೇ. ಮುಂಬೈ ಭೂಗತಲೋಕ ಆಳಿ…

Read More