ಮಹಾರಾಷ್ಟ್ರದಲ್ಲಿ ಬಿರುಗಾಳಿ ಎಬ್ಬಿಸಿದ ಶರದ್ ಪವಾರ್ ಮೌನ: ಎನ್ಡಿಎ ಸೇರ್ಪಡೆ ಕುರಿತು ಹಿರಿಯ ಮುತ್ಸದ್ದಿ ಮಾರ್ಮಿಕ ನುಡಿ – Kannada News | Sharad Pawar’s Silence on NDA Entry Fuels Maharashtra Political Tensions
ಮುಂಬೈ,ಜುಲೈ 18: ಮಹಾರಾಷ್ಟ್ರ ರಾಜಕೀಯದ ಚದುರಂಗದಾಟ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಶರದ್ ಪವಾರ್(Sharad Pawar) ನೇತೃತ್ವದ ಎನ್ಸಿಪಿ ಬಣವು ಆಡಳಿತಾರೂಢ ಎನ್ಡಿಎ (NDA) ಮೈತ್ರಿಕೂಟವನ್ನು ಸೇರಲಿದೆಯೇ ಎಂಬ ಊಹಾಪೋಹಗಳು ದೇಶಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿರುವ ಬೆನ್ನಲ್ಲೇ, ಖುದ್ದಾಗಿ ಎನ್ಸಿಪಿ (SP) ಮುಖ್ಯಸ್ಥ ಶರದ್ ಪವಾರ್ ಈ ಬಗ್ಗೆ ನಿಗೂಢ ಮೌನ ವಹಿಸಿದ್ದಾರೆ. ಮಾಧ್ಯಮಗಳು ಈ ಕುರಿತು ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿದ ಅವರು, ಈ ಸಮಯದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ಮಾರ್ಮಿಕವಾಗಿ ಹೇಳಿ ಜಾರಿಕೊಂಡಿದ್ದಾರೆ….