Headlines

ಗರ್ಭದೊಳಗಿರುವ ಶಿಶು ಇಡೀ ದಿನ ಮಲಗಿರುತ್ತೆ ಅಂದುಕೊಂಡಿದ್ದೀರಾ, ಬೆಚ್ಚಗೆ ಮಲಗಿ ಏನು ಮಾಡುತ್ತಿರುತ್ತೆ ಗೊತ್ತಾ? – Kannada News | Unborn Baby Activities: More Than Just Sleep in the Womb, Discover Fetal Development

ಗರ್ಭದೊಳಗಿರುವ ಶಿಶುಗಳು ದಿನವಿಡೀ ಕೇವಲ ನಿದ್ರಿಸುತ್ತಾ ಕಾಲ ಕಳೆಯುತ್ತವೆ ಎಂದು ನೀವು ಅಂದುಕೊಂಡಿದ್ದೀರಾ? ಖಂಡಿತವಾಗಿಯೂ ಇದು  ಇಲ್ಲ. ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಅದ್ಭುತ ಕೊಡುಗೆಯಾಗಿರುವ ‘ಅಡ್ವಾನ್ಸ್ಡ್ ಅಲ್ಟ್ರಾಸೌಂಡ್ ಸ್ಕ್ಯಾನ್‌’ಗಳು ಗರ್ಭದೊಳಗಿನ ಆ ಅಪರೂಪದ, ರೋಮಾಂಚನಕಾರಿ ಜಗತ್ತನ್ನು ಕಣ್ಣೆದುರು ತಂದಿಟ್ಟಿವೆ. ಜಗತ್ತಿಗೆ ಕಾಲಿಡುವ ಮುನ್ನವೇ ತಾಯಿಯ ಒಡಲಲ್ಲಿ ಪುಟ್ಟ ಕಂದಮ್ಮಗಳು ನಡೆಸುವ ಕೀಟಲೆ, ಆಟಗಳು  ಹತ್ತು ಹಲವು. ಗರ್ಭದಲ್ಲೇ ಆರಂಭವಾಗುತ್ತದೆ ತುಂಟಾಟ ನಮ್ಮ ಜಗತ್ತನ್ನು ಪ್ರವೇಶಿಸುವ ಮುನ್ನವೇ ಶಿಶುಗಳು ತಮ್ಮದೇ ಆದ ಪುಟ್ಟ ಪ್ರಪಂಚವನ್ನು ಅನ್ವೇಕ್ಷಿಸಲು ಪ್ರಾರಂಭಿಸುತ್ತವೆ ಎಂಬುದನ್ನು…

Read More

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ರಹಮಾನುಲ್ಲಾ ಗುರ್ಬಾಝ್!

ಅಫ್ಘಾನಿಸ್ತಾನ್  ತಂಡದ ಆರಂಭಿಕ ದಾಂಡಿಗ ರಹಮಾನುಲ್ಲಾ ಗುರ್ಬಾಝ್ ಭಾರತದ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಧರ್ಮಶಾಲಾದ ಹೆಚ್.ಪಿ.ಸಿ.ಎ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗುರ್ಬಾಝ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ… (PC: gettyimages) ಅತ್ಯಂತ ವೇಗದ ಶತಕ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 50ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗುರ್ಬಾಝ್…

Read More

ವಿಜಯಪುರದಲ್ಲಿ ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸೈಕ್ಲಿಂಗ್ ಲೀಗ್‌: ಇಲ್ಲಿವೆ ರೇಸ್‌ನ ರೋಚಕ ಕ್ಷಣಗಳು!

ಸೈಕ್ಲಿಸ್ಟ್‌ಗಳ ತವರೂರು ಎಂದೇ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ವಿಜಯಪುರ ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಅಸ್ಮಿತಾ ಖೇಲೋ ಇಂಡಿಯಾ ವುಮೆನ್ಸ್ ಸೈಕ್ಲಿಂಗ್ ಸಿಟಿ ಲೀಗ್' ಅತ್ಯಂತ ಯಶಸ್ವಿಯಾಗಿ ನಡೆಯಿತು. ಮಹಿಳಾ ಸೈಕ್ಲಿಸ್ಟ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ವಿಶಿಷ್ಟ ಕ್ರೀಡಾಕೂಟಕ್ಕೆ ಇಡೀ ನಗರವೇ ಸಾಕ್ಷಿಯಾಯಿತು ಮತ್ತು ನೂರಾರು ಮಹಿಳಾ ಸೈಕ್ಲಿಸ್ಟ್‌ಗಳು ಸೈಕಲ್ ಸವಾರಿ ಮಾಡುವ ಮೂಲಕ ನಗರದಲ್ಲಿ ಹೊಸ ಕಳೆ ತಂದರು. ಈ ಲೀಗ್ ಅನ್ನು ಕ್ರೀಡಾ ಪ್ರೋತ್ಸಾಹಕ್ಕಾಗಿ ದೇಶದ ಮತ್ತು ರಾಜ್ಯದ ಪ್ರಮುಖ…

Read More

ಆಟವಾಡುವ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣ ಸಾವು – Kannada News | Tragedy in Doddaballapur: Two Children Drown to Death After Falling into Farm Pond

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವುImage Credit source: Tv9 Kannada ದೊಡ್ಡಬಳ್ಳಾಪುರ, ಜೂನ್​​ 14: ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವವರ ಸರಣಿ ರಾಜ್ಯದಲ್ಲಿ ಮುಂದುರಿದಿದೆ. ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಪೋಷಕರು ಇಲ್ಲದಿದ್ದಾಗ ಆಟ ಆಡಲು ಹೋಗಿದ್ದ ದಕ್ಷಾ(11), ಧನುಷ್(4) ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ….

Read More

Video: ಆರ್ಡರ್ ಆರ್ಡರ್, ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ನುಗ್ಗಿ ನ್ಯಾಯಾಧೀಶರ ಜಾಗದಲ್ಲಿ ಕುಳಿತ ಮಹಿಳೆ – Kannada News | Varanasi Court Chaos: Woman Sits on Judge’s Chair, Shouts Order Order Security Tightened

ವಾರಾಣಸಿ, ಜೂನ್ 14: ವಾರಾಣಸಿ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಅಸಾಮಾನ್ಯ ಘಟನೆಯೊಂದು ಸಂಭವಿಸಿದೆ. ಮಹಿಳೆಯೊಬ್ಬರು ನ್ಯಾಯಾಲಯ(Court)ಕ್ಕೆ ನುಗ್ಗಿ ನ್ಯಾಯಾಧೀಶರ ಜಾಗದಲ್ಲಿ ಕುಳಿತು ಆರ್ಡರ್ ಆರ್ಡರ್ ಎಂದು ಕೂಗಿದ್ದಾರೆ. ನ್ಯಾಯಾಲಯದ ಸಿಬ್ಬಂದಿ ಮತ್ತು ಪೊಲೀಸರು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸಿ ಪರಿಸ್ಥಿತಿಯನ್ನು ಸುಸ್ಥಿತಿಗೆ ತಂದಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತ ಘಟನೆ ಇದಾಗಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನ್ಯಾಯಾಲಯದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಯಜುವೇಂದ್ರ ವಿಕ್ರಮ್ ಸಿಂಗ್ ಅವರು ರಜೆಯಲ್ಲಿದ್ದ ಸಮಯದಲ್ಲಿ,…

Read More

Somvati Amavasya 2026: ಜೂ. 15 ಸೋಮವತಿ ಅಮಾವಾಸ್ಯೆ ; ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು? – Kannada News | Somvati Amavasya 2026: Date, Puja Vidhi and Benefits for Pitru, Shiva, Lakshmi Blessings

ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯ ದಿನವು ವಿಶೇಷ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ವಿಶೇಷವಾಗಿ, ಸೋಮವಾರದಂದು ಬರುವ ಅಮಾವಾಸ್ಯೆಯನ್ನು ‘ಸೋಮವತಿ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ. ಈ ದಿನವನ್ನು ಶಿವ, ಲಕ್ಷ್ಮಿ ದೇವಿ ಹಾಗೂ ಪೂರ್ವಜರ (ಪಿತೃಗಳ) ವಿಶೇಷ ಆಶೀರ್ವಾದ ಪಡೆಯಲು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಅದರಲ್ಲೂ 2026 ರ ಅಧಿಕ ಜ್ಯೇಷ್ಠ ಮಾಸದಲ್ಲಿ ಬರುವ ಈ ಸೋಮವತಿ ಅಮಾವಾಸ್ಯೆಯು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತಷ್ಟು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಜೂನ್ 14 ಅಥವಾ ಜೂನ್ 15? ಗೊಂದಲಕ್ಕೆ ಇಲ್ಲಿದೆ ಪರಿಹಾರ:…

Read More

FIFA World Cup 2026: ಗೆಲ್ಲದ ಬ್ರೆಝಿಲ್, ಸೋಲದ ಮೊರಾಕೊ..! – Kannada News | FIFA World Cup 2026: Brazil vs Morocco Highlights

ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ಗ್ರೂಪ್ ‘ಸಿ’ ನ ರೋಚಕ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಮೊರಾಕೊ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿವೆ. ಆಫ್ರಿಕನ್ ಚಾಂಪಿಯನ್ಸ್ ಮೊರಾಕೊ ಆರಂಭದಲ್ಲೇ ಮುನ್ನಡೆ ಸಾಧಿಸಿ ಬ್ರೆಝಿಲ್‌ಗೆ ಶಾಕ್ ನೀಡಿತಾದರೂ, ವಿನೀಸಿಯಸ್ ಜೂನಿಯರ್ ಅವರ ಅದ್ಭುತ ಗೋಲಿನ ನೆರವಿನಿಂದ ಬ್ರೆಝಿಲ್ ಸೋಲಿನಿಂದ ಪಾರಾಯಿತು ಎನ್ನಬಹುದು. ಪಂದ್ಯದ ಆರಂಭದಲ್ಲೇ ಮೊರಾಕೊ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮಿಡ್‌ಫೀಲ್ಡ್‌ನಲ್ಲಿ ಬ್ರೆಝಿಲ್ ಮಾಡಿದ ತಪ್ಪನ್ನು ಬಳಸಿಕೊಂಡ ಬ್ರಾಹಿಂ ಡಿಯಾಜ್, ಇಸ್ಮಾಯಿಲ್ ಸೈಬಾರಿ ಅವರಿಗೆ…

Read More

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿನಿತ್ಯ ಭಕ್ತ ಸಾಗರ: ವಸತಿಗೂ ಪರದಾಟ – Kannada News | Heavy Rush at Mantralayam: Devotees Struggle for Accommodation as Lodge Prices Skyrocket

ರಾಯಚೂರು, ಜೂನ್​​ 14: ಮಳೆಯ ನಡುವೆಯೂ ಮಂತ್ರಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿರುವ ಪರಿಣಾಮ, ಸುತ್ತಮುತ್ತಲಿನ ವಸತಿಗೃಹಗಳ ಸುಮಾರು 3 ಸಾವಿರ ರೂಮ್​​ಗಳು ಫುಲ್​​ ಆಗುತ್ತಿವೆ. ಹೀಗಾಗಿ ಕನಿಷ್ಠ ವಸತಿಗೂ ಭಕ್ತರು ಪರದಾಡಬೇಕಾದ ಸ್ಥಿತಿ ಇದ್ದು, ಮಠದಿಂದ ಭಕ್ತರಿಗಾಗಿ ಕಲ್ಯಾಣ ಮಂಟಪಗಳಲ್ಲಿ ಮಾಡಿರುವ ವ್ಯವಸ್ಥೆಯೂ ಸಾಲದಂತಾಗಿದೆ. ಹೀಗಾಗಿ ಮಠದ ಪ್ರಾಂಗಣದಲ್ಲೇ ಭಕ್ತರು ಮಲಗುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದೆಡೆ ಖಾಸಗಿ ವಸತಿ ಗೃಹಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಭಕ್ತರ ಸುಲಿಗೆಗೆ ಇಳಿದಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ. ಮತ್ತಷ್ಟು…

Read More

ಶಾಹಿದ್ ಕಪೂರ್ ಬಟ್ಟೆ ಹರಿದು, ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್; ವಿಡಿಯೋ ವೈರಲ್ – Kannada News | Fans breach security at Cocktail 2 Pune event Kriti Sanon shields Rashmika Mandanna

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ (Cocktail 2) ಚಿತ್ರದ ಪ್ರಚಾರದ ವೇಳೆ ಭಾರಿ ನೂಕುನುಗ್ಗಲು ಉಂಟಾಗಿದೆ. ಈ ಚಿತ್ರದಲ್ಲಿ ನಟಿಸಿರುವ ಶಾಹಿದ್ ಕಪೂರ್, ಕೃತಿ ಸನನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರದ ಪ್ರಚಾರಕ್ಕಾಗಿ ಪುಣೆಯ ಮಾಲ್ ಒಂದರಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಮಿತಿ ಮೀರಿ ವರ್ತಿಸಿದ್ದಾರೆ. ಜನರು ಸೆಕ್ಯೂರಿಟಿ ಬ್ಯಾರಿಕೇಡ್‌ಗಳನ್ನು ಮುರಿದು ನಟ-ನಟಿಯರತ್ತ ನುಗ್ಗಿದ್ದಾರೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ರಶ್ಮಿಕಾ, ಶಾಹಿದ್ ಕಪೂರ್ ಮತ್ತು ಕೃತಿ…

Read More

Mantra Pronunciation: ಮಂತ್ರಗಳನ್ನು ತಪ್ಪಾಗಿ ಉಚ್ಛರಿಸಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು?

ಸನಾತನ ಧರ್ಮದಲ್ಲಿ ಮಂತ್ರಗಳಿಗೆ ಅಪಾರವಾದ ಶಕ್ತಿಯಿದೆ. ಮಂತ್ರ ಎಂದರೆ ‘ಮನನಾತ್ ತ್ರಾಯತೇ ಇತಿ ಮಂತ್ರಃ’ — ಯಾವುದನ್ನು ಪದೇ ಪದೇ ಮನನ ಮಾಡುವುದರಿಂದ ಮನಸ್ಸಿಗೆ ರಕ್ಷಣೆ ಸಿಗುತ್ತದೆಯೋ ಅದೇ ಮಂತ್ರ. ಆದರೆ, ಇತ್ತೀಚಿನ ದಿನಗಳಲ್ಲಿ ಮಂತ್ರಗಳನ್ನು ಪಠಿಸುವಾಗ ಉಚ್ಚಾರಣೆಯಲ್ಲಿ (Pronunciation) ಸಾಕಷ್ಟು ದೋಷಗಳು ಕಂಡುಬರುತ್ತಿವೆ. ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಈ ತಪ್ಪುಗಳನ್ನು ಹೇಗೆ ನೋಡಬೇಕು ಮತ್ತು ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದರ ವಿಶ್ಲೇಷಣೆ ಇಲ್ಲಿದೆ. ಧ್ವನಿ ವಿಜ್ಞಾನ ಮತ್ತು ಸಂಸ್ಕೃತದ ತಳಹದಿ: ಸಂಸ್ಕೃತವನ್ನು ‘ದೇವಭಾಷೆ’ ಎಂದು…

Read More