ಸ್ಟ್ಯಾಂಡಪ್ ಕಾಮಿಡಿ ಶೋ ನಿಷೇಧಿಸಿ: ಮಹಾರಾಷ್ಟ್ರ ಸಿಎಂಗೆ ಪತ್ರ ಬರೆಯಲಿರುವ ಮುಂಬೈ ಮೇಯರ್ – Kannada News | Mumbai Mayor Ritu Tawde demands ban on Stand Up Comedy Shows after Sejal Pawar row

ಕಾಮಿಡಿಯನ್ ಪ್ರಣಿತ್ ಮೋರೆ (Pranit More) ಶೋನಲ್ಲಿ ಡಾ. ಸೆಜಲ್ ಪವಾರ್ ಎಂಬುವವರು ನೀಡಿದ ವಿವಾದಾತ್ಮಕ ಹೇಳಿಕೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಕುರಿತು ಆಕ್ರೋಶ ಹೊರಹಾಕಿರುವ ಮುಂಬೈ ಮೇಯರ್ ರಿತು ತಾವ್ಡೆ, ಇಂತಹ ಸ್ಟ್ಯಾಂಡಪ್ ಕಾಮಿಡಿ (Stand-up Comedy) ಕಾರ್ಯಕ್ರಮಗಳನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆಯುವುದಾಗಿ ಅವರು ಘೋಷಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ರಿತು ತಾವ್ಡೆ, ‘ಮುಂಬೈನ ಮೇಯರ್ ಆಗಿ ನಾನು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಇಂತಹ ಸ್ಟ್ಯಾಂಡಪ್ ಕಾಮಿಡಿ ಶೋಗಳು ಇಂದಿನ ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಮತ್ತು ಹಾಳು ಮಾಡುವ ಕೆಲಸವನ್ನು ಮಾಡುತ್ತಿವೆ. ಸಂವಿಧಾನ ನಮಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಾವು ಮಾತನಾಡುತ್ತೇವೆ, ಆದರೆ ಆ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಇಂತಹ ವೇದಿಕೆಗಳಲ್ಲಿ ಬಳಸಲಾಗುತ್ತಿರುವ ಭಾಷೆ ಮತ್ತು ನೀಡುತ್ತಿರುವ ಹೇಳಿಕೆಗಳು ತೀರಾ ಖಂಡನೀಯ’ ಎಂದು ಕಿಡಿಕಾರಿದ್ದಾರೆ.

ವೈದ್ಯಕೀಯ ಶಿಕ್ಷಣಕ್ಕಾಗಿ ದಾನ ಮಾಡಲಾಗುವ ಶವಗಳ ಬಗ್ಗೆ ಕಾಮಿಡಿ ಶೋನಲ್ಲಿ ಆಡಲಾದ ಮಾತುಗಳಿಗೆ ಮೇಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಕುಟುಂಬದವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲೂ, ಭವಿಷ್ಯದ ವೈದ್ಯರು ಕಲಿಯಲಿ ಎಂಬ ನಂಬಿಕೆಯಿಂದ ಶವಗಳನ್ನು ಸ್ವಯಂಪ್ರೇರಿತರಾಗಿ ವೈದ್ಯಕೀಯ ಸಂಸ್ಥೆಗಳಿಗೆ ದಾನ ಮಾಡುತ್ತಾರೆ. ಅಂತಹ ಶವಗಳ ಬಗ್ಗೆ ಈ ರೀತಿಯಾಗಿ ಹಾಸ್ಯ ಮಾಡುವುದು, ಮಾತನಾಡುವುದು ಅತ್ಯಂತ ಅಮಾನವೀಯ ಮತ್ತು ಅಸೂಕ್ಷ್ಮ ವರ್ತನೆ. ಇದು ಮಹಾರಾಷ್ಟ್ರದ ಸಂಸ್ಕೃತಿಗಾಗಲಿ ಅಥವಾ ಭಾರತದ ಸಂಸ್ಕೃತಿಗಾಗಲಿ ಒಪ್ಪುವಂಥದ್ದಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವುದನ್ನು ಮೇಯರ್ ಪ್ರಶ್ನಿಸಿದ್ದಾರೆ. ‘ಪೋಷಕರು ಬ್ಯಾಂಕ್‌ ಸಾಲಗಳನ್ನು ಮಾಡಿ, ಲಕ್ಷಾಂತರ-ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಮಟ್ಟದ ಆರ್ಥಿಕ ತ್ಯಾಗ ಮಾಡುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ದೊಡ್ಡ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದ ನಂತರ, ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ನಿಜಕ್ಕೂ ನಿರಾಶಾದಾಯಕ. ಇದು ಶವದಾನ ಮಾಡಿದ ಕುಟುಂಬಗಳ ಭಾವನೆಗಳಿಗೆ ತೀವ್ರ ಧಕ್ಕೆ ತರುತ್ತದೆ’ ಎಂದು ರಿತು ತಾವ್ಡೆ ಹೇಳಿದ್ದಾರೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು, ಡಾ. ಸೆಜಲ್​ಗೆ ಮಹಿಳಾ ಆಯೋಗ ನೋಟಿಸ್

ಕಾಮಿಡಿಯನ್ ಪ್ರಣಿತ್ ಮೋರೆ ಅವರ ಶೋನಲ್ಲಿ ಭಾಗವಹಿಸಿದ್ದ ಡಾ. ಸೆಜಲ್ ಪವಾರ್ ಅವರು ವೈದ್ಯಕೀಯ ವಿದ್ಯಾರ್ಥಿಗಳು ಶವಪರೀಕ್ಷೆ ಹಾಗೂ ಅಂಗರಚನಾಶಾಸ್ತ್ರದ ಅಧ್ಯಯನಕ್ಕಾಗಿ ಬಳಸುವ ಶವಗಳ ಕುರಿತು ಅತ್ಯಂತ ಅಸೂಕ್ಷ್ಮ ಹಾಗೂ ಲಘುವಾಗಿ ಮಾತನಾಡಿದ್ದರು. ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಇರುವ ಮೃತದೇಹಗಳನ್ನು ಕೇವಲ ತಮಾಷೆಯ ವಸ್ತುವಿನಂತೆ ಬಿಂಬಿಸಿ ಅವರು ಆಡಿದ ಮಾತುಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ವೈದ್ಯಕೀಯ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಂಬೈ ಟಿ20 ಲೀಗ್ ಫೈನಲ್​ನಲ್ಲಿ ಆಟಗಾರರ ನಡುವೆ ನೂಕಾಟ, ತಳ್ಳಾಟ, ಕಿತ್ತಾಟ! – Kannada News | T20 Mumbai Final: Heated On Field Clash Sparked by Jathar and Raje

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ಮುಂಬೈ ಲೀಗ್ 2026ರ ಫೈನಲ್ ಪಂದ್ಯದಲ್ಲಿ ಎಆರ್‌ಸಿಎಸ್ ಅಂಧೇರಿ (ARCS Andheri) ತಂಡವನ್ನು 8 ರನ್‌ಗಳಿಂದ ಸೋಲಿಸಿ ಎಂಎಸ್‌ಸಿ ಮರಾಠ ರಾಯಲ್ಸ್ (MSC Maratha Royals) ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಜೂನ್ 13, 2026 ರಂದು ನಡೆದ ಈ ರೋಚಕ ಪಂದ್ಯವು ಆಟಗಾರರ ನಡುವಿನ ಜಗಳ, ಹಾಗೂ ಮರಾಠ ರಾಯಲ್ಸ್‌ನ ಅದ್ಭುತ ಆಟಕ್ಕೆ ಸಾಕ್ಷಿಯಾಯಿತು.

ಕಿತ್ತಾಡಿಕೊಂಡ ಆಟಗಾರರು:

ಎಆರ್‌ಸಿಎಸ್ ಅಂಧೇರಿ ತಂಡದ ರನ್ ಚೇಸಿಂಗ್‌ನ 19ನೇ ಓವರ್‌ನಲ್ಲಿ ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಅಂಧೇರಿ ತಂಡದ ಬ್ಯಾಟರ್ ಗೌರವ್ ಜಾಧವ್ ಅವರು ಮರಾಠ ರಾಯಲ್ಸ್ ಬೌಲರ್ ಇರ್ಫಾನ್ ಉಮೈರ್ ಅವರಿಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಆದರೆ, ಮುಂದಿನ ಎಸೆತದಲ್ಲೇ ಉಮೈರ್ ಅವರು ಗೌರವ್ ಅವರನ್ನು ಎಲ್‌ಬಿಡಬ್ಲ್ಯೂ ಮಾಡಿ ಔಟ್ ಮಾಡಿದರು.

ವಿಕೆಟ್ ಕಳೆದುಕೊಂಡು ನಿರಾಸೆಯಿಂದ ಹೊರನಡೆಯುತ್ತಿದ್ದ ಗೌರವ್ ಹಾಗೂ ಮರಾಠ ರಾಯಲ್ಸ್ ವೇಗಿ ತುಷಾರ್ ದೇಶಪಾಂಡೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಗಲಾಟೆ ಅಷ್ಟಕ್ಕೇ ನಿಲ್ಲದೆ ಡಗೌಟ್ ವರೆಗೂ ತಲುಪಿತು.

ಮರಾಠ ರಾಯಲ್ಸ್ ಆಟಗಾರರೊಬ್ಬರು ಅಂಧೇರಿ ಡಗೌಟ್ ಬಳಿ ತೆರಳಿದಾಗ, ಅಂಧೇರಿ ತಂಡದ ನಾಯಕ ಶಿವಂ ದುಬೆ ಸೇರಿದಂತೆ ಉಭಯ ತಂಡಗಳ ಆಟಗಾರರ ನಡುವೆ ವಾಗ್ವಾದ ನಡೆದು, ನೂಕಾಟ ತಳ್ಳಾಟ ನಡೆಯಿತು,

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಆನ್-ಫೀಲ್ಡ್ ಅಂಪೈರ್‌ಗಳು ಮತ್ತು ಉಭಯ ತಂಡಗಳ ಸಹಾಯಕ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆಟಗಾರರನ್ನು ಸಮಾಧಾನಪಡಿಸಿದರು.

ಮರಾಠಾ ರಾಯಲ್ಸ್ ಚಾಂಪಿಯನ್ಸ್:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮರಾಠ ರಾಯಲ್ಸ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ, ಚಿನ್ಮಯ್ ಸುತಾರ್ (61 ರನ್, 52 ಎಸೆತ) ಮತ್ತು ನಾಯಕ ಸಿದ್ದೇಶ್ ಲಾಡ್ (33 ರನ್) ಅವರ ಜವಾಬ್ದಾರಿಯುತ ಆಟದಿಂದಾಗಿ ತಂಡ 20 ಓವರ್‌ಗಳಲ್ಲಿ 154/5 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

155 ರನ್‌ಗಳ ಗುರಿ ಬೆನ್ನಟ್ಟಿದ ಎಆರ್‌ಸಿಎಸ್ ಅಂಧೇರಿ ತಂಡಕ್ಕೆ ದಿವ್ಯಾಂಶ್ ಸಕ್ಸೇನಾ (51 ರನ್) ಮತ್ತು ಶಿವಂ ದುಬೆ ಆಸರೆಯಾಗಿದ್ದರು. ಆದರೆ ತುಷಾರ್ ದೇಶಪಾಂಡೆ ಅವರು ದುಬೆ ಅವರ ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: 1921ರ ದಂಗೆ, ಬಿಟಿಷರ ಬಾಲ್ ಬಾಯ್ಸ್, ಕೇರಳಂ ಫುಟ್​​ಬಾಲ್ ಕ್ರೇಝ್!

ಅಂತಿಮ ಓವರ್‌ನಲ್ಲಿ ರೋಹನ್ ರಾಜೆ ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ಅಂಧೇರಿ ತಂಡವನ್ನು 146/8 ರನ್‌ಗಳಿಗೆ ನಿಯಂತ್ರಿಸಿ, ಮರಾಠ ರಾಯಲ್ಸ್ ತಂಡಕ್ಕೆ 8 ರನ್‌ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಮರಾಠ ರಾಯಲ್ಸ್ ತಂಡವು ಮುಂಬೈ ಟಿ20 ಲೀಗ್​ನಲ್ಲಿ ಎರಡನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.

Source link

ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು, ಮನೆಗಳಿಗೆ ನುಗ್ಗಿದ ಚರಂಡಿ ನೀರು! – Kannada News | Raichur Rain Update: Heavy Rainfall Triggers Waterlogging, Disrupts Normal Life

ರಾಯಚೂರು, ಜೂನ್ 14: ಜಿಲ್ಲೆಯಾದ್ಯಂತ ಬೆಳ್ಳಂಬೆಳಿಗ್ಗೆ ಆರಂಭವಾದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಒಂದೇ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸರಣಿ ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರು ತಾಲೂಕಿನ ಇಡಪನೂರಿನಲ್ಲಿ ಹಳ್ಳದ ನೀರು ಕಿರು ಸೇತುವೆ ಮೇಲೆ ಹರಿದಿದ್ದರಿಂದ ಮೀರಾಪುರ ಹಾಗೂ ಯರಗೇರಾ ಮಾರ್ಗದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ನಗರದ ಐಡಿಎಸ್ ಎಂಟಿ ಲೇಔಟ್‌ನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಇತ್ತ ಹಳೆ ಆಶ್ರಯ ಕಾಲೋನಿಯಲ್ಲಿ ಸಯ್ಯದಾ ನಸಿಮುನ್ ಎಂಬುವರ ಮನೆ ಸೇರಿದಂತೆ ಹಲವೆಡೆ ಚರಂಡಿ ಮಿಶ್ರಿತ ಮಳೆನೀರು ನುಗ್ಗಿದ್ದು, ನಿವಾಸಿಗಳು ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Vastu Tips: ಸಹಿ ಮಾಡುವಾಗ ಈ ತಪ್ಪು ಮಾಡಲೇಬೇಡಿ; ಆರ್ಥಿಕ ನಷ್ಟಕ್ಕೆ ಇದೇ ಮುಖ್ಯ ಕಾರಣ! – Kannada News | Vastu Signature Mistakes: Avoid Lines Causing Financial Loss and Career Issues

ಸಹಿ ಮಾಡುವಾಗ ಈ ತಪ್ಪು ಮಾಡಲೇಬೇಡಿImage Credit source: Pinterest

ವಾಸ್ತು ಶಾಸ್ತ್ರ ಮತ್ತು ಹಸ್ತಾಕ್ಷರ ವಿಜ್ಞಾನದ ಪ್ರಕಾರ, ನಾವು ಮಾಡುವ ಸಹಿ (Signature) ನಮ್ಮ ಆಲೋಚನೆಗಳು, ಆತ್ಮವಿಶ್ವಾಸ ಮತ್ತು ಭವಿಷ್ಯದ ದಿಕ್ಕನ್ನು ಸೂಚಿಸುತ್ತದೆ. ಅನೇಕರು ಕೇವಲ ಸ್ಟೈಲ್ ಅಥವಾ ತರಾತುರಿಯಲ್ಲಿ ಸಹಿ ಮಾಡುತ್ತಾರೆ. ಆದರೆ ಸಹಿಯಲ್ಲಿ ನಾವು ಎಳೆಯುವ ಕೆಲವು ತಪ್ಪು ಗೆರೆಗಳು (Lines) ನಮ್ಮ ಉದ್ಯೋಗ, ವ್ಯಾಪಾರ ಹಾಗೂ ವೈಯಕ್ತಿಕ ಜೀವನದಲ್ಲಿ ತೀವ್ರ ಗೊಂದಲ ಮತ್ತು ಆರ್ಥಿಕ ನಷ್ಟವನ್ನು ತಂದೊಡ್ಡಬಹುದು. ಸಹಿ ಮಾಡುವಾಗ ಯಾವ ರೀತಿಯ ಗೆರೆಗಳ ತಪ್ಪುಗಳನ್ನು ತಪ್ಪಿಸಬೇಕು ಎಂಬುದರ ವಿವರ ಇಲ್ಲಿದೆ.

ಸಹಿಯ ಕೆಳಗಿನ ಗೆರೆ (Underline) ಹಾವಿನಂತಿರಬಾರದು:

ಸಾಮಾನ್ಯವಾಗಿ ಅನೇಕರು ಸಹಿ ಮಾಡಿದ ನಂತರ ಅದರ ಕೆಳಗೆ ಒಂದು ಗೆರೆ ಎಳೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ವಾಸ್ತು ಪ್ರಕಾರ ಸಹಿಯ ಕೆಳಗೆ ನೇರವಾದ, ಮೇಲ್ಮುಖವಾಗಿ ಹೋಗುವ ಗೆರೆ ಇರುವುದು ಒಳ್ಳೆಯದು. ಆದರೆ ಈ ಗೆರೆಯು ಅಂಕುಡೊಂಕಾಗಿ, ಅಲೆಅಲೆಯಾಗಿ ಅಥವಾ ಹಾವಿನಂತೆ ಇದ್ದರೆ ಅದು ಜೀವನದಲ್ಲಿ ಅಸ್ಥಿರತೆಯನ್ನು ತರುತ್ತದೆ. ಇಂತಹ ಗೆರೆಗಳು ನಿಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಸೃಷ್ಟಿಸುತ್ತವೆ ಮತ್ತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮ್ಮಲ್ಲಿ ನಿರಂತರ ಗೊಂದಲ ಮೂಡುವಂತೆ ಮಾಡುತ್ತವೆ.

ಹೆಸರನ್ನು ಕತ್ತರಿಸುವ ಗೆರೆಗಳು (Strike-through Lines):

ಕೆಲವರು ಸಹಿ ಮಾಡುವಾಗ ತಮ್ಮ ಹೆಸರಿನ ಅಕ್ಷರಗಳ ಮೇಲೆಯೇ ಗೆರೆ ಎಳೆದು ಅದನ್ನು ಕತ್ತರಿಸುವಂತೆ (Cross/Strike) ಸಹಿ ಮಾಡುತ್ತಾರೆ. ಇದು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ದೊಡ್ಡ ದೋಷವೆಂದು ಪರಿಗಣಿಸಲಾಗಿದೆ. ನಿಮ್ಮ ಹೆಸರನ್ನು ನೀವೇ ಗೆರೆಗಳಿಂದ ಕತ್ತರಿಸುವುದು ನಿಮ್ಮ ಸ್ವಯಂ-ವಿಧ್ವಂಸಕ (Self-destructive) ಮನಸ್ಥಿತಿಯನ್ನು ತೋರಿಸುತ್ತದೆ. ಇದು ನಿಮ್ಮಲ್ಲಿ ಕೀಳರಿಮೆಯನ್ನು ಹೆಚ್ಚಿಸುವುದಲ್ಲದೆ, ಕಷ್ಟಪಟ್ಟು ಗಳಿಸಿದ ಯಶಸ್ಸು ಮತ್ತು ಹಣವನ್ನು ನಿಮ್ಮ ಕೈಯಾರೆ ಕಳೆದುಕೊಳ್ಳುವಂತೆ ಮಾಡುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ವೃತ್ತಿಜೀವನಕ್ಕೆ ಮಾರಕವಾಗುವ ಸಹಿಯ ಇತರ ತಪ್ಪುಗಳು:

ನಿಮ್ಮ ಸಹಿಯಲ್ಲಿ ಕೆಳಗಿನ ಅಂಶಗಳಿದ್ದರೆ ಇಂದೇ ಅದನ್ನು ಬದಲಾಯಿಸಿಕೊಳ್ಳುವುದು ನಿಮ್ಮ ಕೆರಿಯರ್ ಬೆಳವಣಿಗೆಗೆ ಸಹಕಾರಿಯಾಗುತ್ತದೆ:

  • ಕೆಳಮುಖವಾಗಿ ಹೋಗುವ ಗೆರೆಗಳು (Downward Slope): ನಿಮ್ಮ ಸಹಿ ಅಥವಾ ಸಹಿಯ ಕೊನೆಯ ಗೆರೆ ಕೆಳಮುಖವಾಗಿ ಸಾಗುತ್ತಿದ್ದರೆ, ಅದು ಜೀವನದಲ್ಲಿ ನಕಾರಾತ್ಮಕತೆ ಮತ್ತು ನಿರಾಶಾವಾದವನ್ನು ಸೂಚಿಸುತ್ತದೆ. ಇಂತಹ ವ್ಯಕ್ತಿಗಳು ಎಷ್ಟೇ ಪ್ರತಿಭಾವಂತರಾಗಿದ್ದರೂ ಉದ್ಯೋಗದಲ್ಲಿ ಪ್ರಗತಿ ಕಾಣದೆ ಕುಂಠಿತರಾಗುತ್ತಾರೆ.
  • ಸಹಿಯ ಸುತ್ತ ವೃತ್ತ ಹಾಕುವುದು (Enclosing in a Circle): ಸಹಿ ಮಾಡಿದ ನಂತರ ಅದರ ಸುತ್ತ ಸಂಪೂರ್ಣವಾಗಿ ವೃತ್ತ ಅಥವಾ ಬೇಲಿ ಹಾಕುವಂತೆ ಗೆರೆ ಎಳೆಯಬಾರದು. ಇದು ನಿಮ್ಮನ್ನು ಒಂದು ನಿರ್ದಿಷ್ಟ ಚೌಕಟ್ಟಿಗೆ ಬಂಧಿಸುತ್ತದೆ. ಇದರಿಂದ ನಿಮಗೆ ಸಿಗಬೇಕಾದ ಹೊಸ ಅವಕಾಶಗಳು ಕೈತಪ್ಪುತ್ತವೆ ಮತ್ತು ಜೀವನದಲ್ಲಿ ಏಕಾಂಗಿತನ ಕಾಡ ತೊಡಗುತ್ತದೆ.
  • ಅಸ್ಪಷ್ಟ ಮತ್ತು ಗೀಚು ಗೆರೆಗಳು (Scribbling): ಕೇವಲ ಕೆಲವು ಗೆರೆಗಳನ್ನು ಗೀಚಿದಂತೆ (Scribble) ಸಹಿ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಕಡಿಮೆಯಾಗುತ್ತದೆ. ಕಚೇರಿಗಳಲ್ಲಿ ನಿಮ್ಮ ಮೇಲಾಧಿಕಾರಿಗಳು ಅಥವಾ ಗ್ರಾಹಕರೊಂದಿಗೆ ಕಮ್ಯುನಿಕೇಶನ್ ಗ್ಯಾಪ್ (ಸಂವಹನ ಕೊರತೆ) ಉಂಟಾಗಲು ಇದು ಕಾರಣವಾಗುತ್ತದೆ.

ವಾಸ್ತು ಪ್ರಕಾರ ಯಶಸ್ಸು ತರುವ ‘ಪರ್ಫೆಕ್ಟ್ ಸಹಿ’ ಹೇಗಿರಬೇಕು?

ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ಮತ್ತು ಆರ್ಥಿಕ ಪ್ರಗತಿಯನ್ನು ಕಾಣಲು ನಿಮ್ಮ ಸಹಿಯನ್ನು ಹೀಗೆ ಸುಧಾರಿಸಿಕೊಳ್ಳಿ:

  • ಸ್ಪಷ್ಟತೆ ಇರಲಿ: ನಿಮ್ಮ ಸಹಿಯಲ್ಲಿ ನಿಮ್ಮ ಹೆಸರಿನ ಮೊದಲ ಅಕ್ಷರವಾದರೂ ಸ್ಪಷ್ಟವಾಗಿ ಕಾಣಿಸುವಂತಿರಬೇಕು. ಇದು ನಿಮ್ಮ ನಾಯಕತ್ವದ ಗುಣ ಮತ್ತು ಸ್ಪಷ್ಟ ನಿರ್ಧಾರ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಒಂದೇ ಒಂದು ನೇರ ಗೆರೆ: ಸಹಿಯ ಕೆಳಗೆ ಎಡದಿಂದ ಬಲಕ್ಕೆ ಒಂದೇ ಒಂದು ನೇರವಾದ ಗೆರೆಯನ್ನು ಎಳೆಯಿರಿ ಮತ್ತು ಅದರ ಕೆಳಗೆ ಎರಡು ಸಣ್ಣ ಚುಕ್ಕೆಗಳನ್ನು (Dots) ಇಡಿ. ಇದು ಜೀವನದಲ್ಲಿ ಸ್ಥಿರತೆ (Stability) ಮತ್ತು ಬೆಂಬಲವನ್ನು ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ರಾಜ್ಯ ಸರ್ಕಾರದ ನಡೆಗೆ ವಿಜಯೇಂದ್ರ ವ್ಯಂಗ್ಯ – Kannada News | Vijayendra Slams Congress over Guarantees, Alleges Mismanagement and Betrayal of Voters

ಬೆಂಗಳೂರು, ಜೂನ್​​ 14: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ನಿರ್ವಹಣೆ ಬಗ್ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಸಾಕಷ್ಟು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿತ್ತು. ಆದರೆ, ಈಗ ಗ್ಯಾರಂಟಿಗಳು ಸರಿಯಾಗಿ ತಲುಪುತ್ತಿಲ್ಲ ಮತ್ತು ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಆರೋಪಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯನ್ನು 4-5 ತಿಂಗಳುಗಳ ಕಾಲ ತಡೆಹಿಡಿದು, ಚುನಾವಣೆ ಬಂದಾಗ ಚುನಾವಣಾ ಲಕ್ಷ್ಮಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೆ, ಗ್ಯಾರಂಟಿಗಳಿಂದ ಉಂಟಾದ ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಲಕ್ಷಾಂತರ ಫಲಾನುಭವಿಗಳನ್ನು ಕಡಿತಗೊಳಿಸುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಿದೆ ಎಂದು ಅವರು ಟೀಕಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ! ಹಿಪ್ಪೋ ಹಾಗೂ ಜೀಬ್ರಾ ಮರಿಗಳ ಜನನ! – Kannada News | Bannerghatta Biological Park: Cheetahs Open for Public View, New Hippo and Zebra Calves Born

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಸೇರ್ಪಡೆ

ಬೆಂಗಳೂರು, ಜೂನ್ 14: ವನ್ಯಜೀವಿ ಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ  ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಕರೆತರಲಾಗಿದ್ದ ಚೀತಾಗಳು ಯಶಸ್ವಿಯಾಗಿ ಹೊಸ ವಾತಾವರಣಕ್ಕೆ ಹೊಂದಿಕೊಂಡಿದ್ದು, ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿವೆ. ಇದರೊಂದಿಗೆ ಉದ್ಯಾನದಲ್ಲಿ ಜೀಬ್ರಾ ಮತ್ತು ನೀರಾನೆ ಮರಿಗಳು ಜನಿಸಿರುವುದು ಮೃಗಾಲಯದ ಸಂತಸವನ್ನು ಇಮ್ಮಡಿಗೊಳಿಸಿದೆ.

ಮುಖ್ಯಾಂಶಗಳು

  • ಬನ್ನೇರುಘಟ್ಟ ಉದ್ಯಾನವನದಲ್ಲಿ ಹೊಸದಾಗಿ ಚೀತಾಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
  • ಮೃಗಾಲಯದ ಉದ್ಯಾನದಲ್ಲಿ ಮುದ್ದಾದ ಜೀಬ್ರಾ ಮತ್ತು ಹಿಪ್ಪೋಪೊಟಮಸ್ ಮರಿಗಳು ಜನಿಸಿವೆ.
  • ದಕ್ಷಿಣ ಆಫ್ರಿಕಾದಿಂದ ಬಂದ ಚೀತಾಗಳು ಕ್ವಾರಂಟೈನ್ ಮುಗಿಸಿ ಪ್ರದರ್ಶನಕ್ಕೆ ಸಜ್ಜಾಗಿವೆ.

ಉದ್ಯಾನದಲ್ಲಿ ಜೀಬ್ರಾ ಮತ್ತು ಹಿಪ್ಪೋ ಮರಿಗಳ ಕಲರವ

ಮೃಗಾಲಯದ ಸಂರಕ್ಷಣಾ ಸಂತಾನೋತ್ಪತ್ತಿ ಕಾರ್ಯಕ್ರಮಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ‘ಕಬಿನಿ’ ಹೆಸರಿನ ಜೀಬ್ರಾ ಆರೋಗ್ಯವಂತ ಹೆಣ್ಣು ಮರಿಗೆ ಜನ್ಮ ನೀಡಿದೆ. ನವಜಾತ ಮರಿ ತಾಯಿಯ ಹಾಲನ್ನು ಕುಡಿಯುತ್ತಾ ಸಕ್ರಿಯವಾಗಿದ್ದು, ಇದರ ಸೇರ್ಪಡೆಯೊಂದಿಗೆ ಉದ್ಯಾನದಲ್ಲಿನ ಜೀಬ್ರಾಗಳ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ, ‘ದಶ್ಯಾ’ ಹೆಸರಿನ ಹೆಣ್ಣು ನೀರಾನೆ ಕೂಡ ಮುದ್ದಾದ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಯ ಆರಂಭಿಕ ಹಂತದ ನೈಸರ್ಗಿಕ ಬಾಂಧವ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಸಿಬ್ಬಂದಿ ವಿಶೇಷ ಮುನ್ನೆಚ್ಚರಿಕೆ ವಹಿಸಿದ್ದಾರೆ ಹಾಗೂ ಪ್ರಾಣಿ ಆವರಣದ ಸುತ್ತ ಸಾರ್ವಜನಿಕರಿಂದ ಯಾವುದೇ ತೊಂದರೆಯಾಗದಂತೆ ನಿಗಾ ಇರಿಸಿದ್ದಾರೆ.

ಹೊಸ ಪರಿಸರಕ್ಕೆ ಹೊಂದಿಕೊಂಡ ದಕ್ಷಿಣ ಆಫ್ರಿಕಾದ ಚೀತಾಗಳು

ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ದಕ್ಷಿಣ ಆಫ್ರಿಕಾದ ಇಂದೂನಾ ಪ್ರೈಮೇಟ್ ಆಂಡ್ ಪ್ಯಾರಟ್ ಪಾರ್ಕ್‌ನಿಂದ ಕರೆತರಲಾಗಿದ್ದ ಎರಡು ಗಂಡು ಮತ್ತು ಎರಡು ಹೆಣ್ಣು ಚೀತಾಗಳು ತಮ್ಮ ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಅವಧಿಯಲ್ಲಿ ಪಶುವೈದ್ಯರು ಹಾಗೂ ಪ್ರಾಣಿ ಪಾಲನಾ ಸಿಬ್ಬಂದಿ ಅವುಗಳ ಆರೋಗ್ಯ, ಆಹಾರ ಪದ್ಧತಿ ಮತ್ತು ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹಗಲಿರುಳು ಸೂಕ್ಷ್ಮವಾಗಿ ಗಮನಿಸಿದ್ದರು. ಎಲ್ಲಾ ತಪಾಸಣೆಗಳು ತೃಪ್ತಿಕರವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಇದೀಗ ಅವುಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾದ ವಿಶಾಲವಾದ ಹೊರಾಂಗಣ ಆವರಣಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳ ಪ್ರಕಾರ, ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳು ಉದ್ಯಾನವನದ ವೈಜ್ಞಾನಿಕ ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ನೀಡುತ್ತಿರುವ ಆದ್ಯತೆಗೆ ಸಾಕ್ಷಿಯಾಗಿದೆ. ಮಾನವನ ಆರೈಕೆಯಲ್ಲೂ ವನ್ಯಜೀವಿಗಳು ನೈಸರ್ಗಿಕವಾಗಿ ವೃದ್ಧಿಯಾಗಲು ಪೂರಕ ವಾತಾವರಣವನ್ನು ಸೃಷ್ಟಿಸಿರುವುದಾಗಿ ಬಿಬಿಪಿ ಹೆಮ್ಮೆಯಿಂದ ಹೇಳಿಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮೆರಿಕದೊಂದಿಗಿನ ಶಾಂತಿ ಮಾತುಕತೆ ಅಂತಿಮವಾಗಿಲ್ಲ, ಇವತ್ತೇ ಸಹಿ ಹಾಕಲ್ಲ ಎಂದ ಇರಾನ್ – Kannada News | US Iran Peace Prospects: Virtual Talks and the Path to a Permanent Accord

ಟೆಹ್ರಾನ್, ಜೂನ್ 14: ಅಮೆರಿಕ ಮತ್ತು ಇರಾನ್ ನಡುವೆ ಶಾಶ್ವತ ಶಾಂತಿ ಒಪ್ಪಂದದ ಕುರಿತು ಮಹತ್ವದ ವರ್ಚುವಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಉಭಯ ದೇಶಗಳು ಮಾತ್ರವಲ್ಲದೆ, ಮಧ್ಯಸ್ಥಿಕೆ ವಹಿಸಿರುವ ರಾಷ್ಟ್ರಗಳ ಪ್ರತಿನಿಧಿಗಳು ಸಹ ಭಾಗಿಯಾಗಲಿದ್ದಾರೆ. ಒಪ್ಪಂದದ ಪತ್ರದಲ್ಲಿ ಪರಸ್ಪರ ಡಿಜಿಟಲ್ ಸಹಿ ಹಾಕಿ ಶಾಂತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ನಿರೀಕ್ಷೆಯಿದೆ. ಈ ವರ್ಚುವಲ್ ಸಭೆಯಲ್ಲಿ ಯುದ್ಧ ಅಂತ್ಯದ ಬಗ್ಗೆ ಘೋಷಣೆ ಆಗುವ ಸಾಧ್ಯತೆಯಿದ್ದು, ಪ್ರಸ್ತಾವಿತ ಒಪ್ಪಂದದಂತೆ ಕದನ ವಿರಾಮವನ್ನು 60 ದಿನಗಳವರೆಗೆ ವಿಸ್ತರಿಸಲಾಗುವುದು. ಈ ಪ್ರಕ್ರಿಯೆಯೊಂದಿಗೆ ಹಾರ್ಮೋಸ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸಲಾಗುವುದು. ಮುಂದಿನ ವಾರದಿಂದ ತಾಂತ್ರಿಕ ಮಟ್ಟದ ಮಾತುಕತೆಗಳು ಆರಂಭವಾಗಲಿದ್ದು, ಕದನ ವಿರಾಮದ ಅವಧಿಯಲ್ಲೇ ಪರಮಾಣು ಕಾರ್ಯಕ್ರಮದ ಬಗ್ಗೆಯೂ ಮಾತುಕತೆ ನಡೆಯಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಎಂದಿಗೂ ಅಣುವಸ್ತ್ರ ಹೊಂದುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಖರೀದಿ ಮತ್ತು ಸಂಶೋಧನೆ ಸೇರಿದಂತೆ ಯಾವುದೇ ರೀತಿಯಲ್ಲಿ ಅಣುವಸ್ತ್ರ ನಿಷೇಧಕ್ಕೆ ಒಪ್ಪಂದದಲ್ಲಿ ಒತ್ತು ನೀಡುವ ಸಾಧ್ಯತೆಯಿದೆ. ಇರಾನ್ ಒಳಗೆ ಯುರೇನಿಯಂ ದುರ್ಬಲಗೊಳಿಸುವ ಪ್ರಸ್ತಾಪವೂ ಇದ್ದು, ಒಪ್ಪಂದದ ಬಳಿಕ ಇರಾನ್‌ನ ನ್ಯೂಕ್ಲಿಯರ್ ಡಸ್ಟ್ ಧ್ವಂಸವಾಗಲಿದೆ. ಪರಮಾಣು ತ್ಯಾಜ್ಯವನ್ನು ನಾಶಪಡಿಸಲು ಅಮೆರಿಕ ಯೋಜನೆ ರೂಪಿಸುತ್ತಿದೆ.

ಆದರೆ, ಈ ಒಪ್ಪಂದದ ಬಗ್ಗೆ ಇರಾನ್ ಕಡೆಯಿಂದ ಇನ್ನೂ ಸ್ಪಷ್ಟ ಮತ್ತು ಏಕರೂಪದ ನಿಲುವು ಕಂಡುಬಂದಿಲ್ಲ. ಇರಾನ್‌ನ ವಿದೇಶಾಂಗ ಇಲಾಖೆಯ ವಕ್ತಾರ ಬಗಾಯಿ ಅವರು, ಅಮೆರಿಕ-ಇರಾನ್ ನಡುವಿನ ಒಪ್ಪಂದಕ್ಕೆ ಇಂದು ಸಹಿ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಅವರು ತಳ್ಳಿಹಾಕದಿದ್ದರೂ, ಒಪ್ಪಂದದಲ್ಲಿ ಪರಮಾಣು ಕಾರ್ಯಕ್ರಮದ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಇರಾನ್ ನಾಯಕರಲ್ಲೇ ಒಪ್ಪಂದದ ಬಗ್ಗೆ ದ್ವಂದ್ವಗಳಿವೆ ಎಂಬುದನ್ನು ಸೂಚಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

1921ರ ದಂಗೆ, ಬಿಟಿಷರ ಬಾಲ್ ಬಾಯ್ಸ್, ಕೇರಳಂ ಫುಟ್​​ಬಾಲ್ ಕ್ರೇಝ್! – Kannada News | The Epic Journey of Kerala Football

“ಭಾರತದ ನಕ್ಷೆಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಸಂಭ್ರಮಿಸುವ ಕೋಟ್ಯಂತರ ಜನರ ನಡುವೆ, ಕಾಲಿಗೆ ಚೆಂಡು ಸಿಕ್ಕರೆ ಸಾಕು ಇಡೀ ಜಗತ್ತನ್ನೇ ಮರೆಯುವ ಒಂದು ಸುಂದರ ರಾಜ್ಯವಿದೆ, ಅದುವೇ ಕೇರಳಂ! ಇಡೀ ದೇಶ ಕ್ರಿಕೆಟ್ ಜ್ವರದಲ್ಲಿ ಮುಳುಗಿರುವಾಗ, ಕೇರಳದ ಮಲಬಾರ್ ಗದ್ದೆಗಳಲ್ಲಿ ಮತ್ತು ಕರಾವಳಿಯ ತೀರಗಳಲ್ಲಿ ಮಾತ್ರ ಫುಟ್‌ಬಾಲ್ ಎಂಬ ಮಾಂತ್ರಿಕ ಆಟದ ಸದ್ದು ಮೊಳಗುತ್ತಿರುತ್ತದೆ. ಅಲ್ಲಿನ ಜನರಿಗೆ ಫುಟ್‌ಬಾಲ್ ಕೇವಲ 90 ನಿಮಿಷಗಳ ಆಟವಲ್ಲ, ಅದೊಂದು ಭಾವನೆ, ಉಸಿರು ಮತ್ತು ಪರಂಪರೆ. ಆದರೆ, ಭಾರತೀಯ ಫುಟ್‌ಬಾಲ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಕೇರಳದ ಮಣ್ಣಿನಲ್ಲಿ ಈ ಕ್ರೀಡೆಯ ಬೇರುಗಳು ಇಷ್ಟೊಂದು ಆಳವಾಗಿ ಇಳಿಯಲು ಒಂದು ಶತಮಾನದ ಹಿಂದಿನ ರೋಚಕ ಇತಿಹಾಸ ಮತ್ತು ಬ್ರಿಟಿಷ್ ಸೈನಿಕರ ವಿರುದ್ಧ ನಡೆದ ‘ಬರಿಗಾಲಿನ ಪ್ರತಿರೋಧ’ ಕಾರಣ ಎಂಬುದು ತಿಳಿಯುತ್ತದೆ. ಆ ರೋಚಕ ಕಥೆಯ ವಿವರ ಇಲ್ಲಿದೆ…”

ಕೇರಳದ ಫುಟ್​​ಬಾಲ್ ಹಿಸ್ಟರಿ ಶುರುವಾಗುವುದು 1921 ರಿಂದ. ಅಂದರೆ ಸ್ವಾತಂತ್ರ ಪೂರ್ವದಲ್ಲೇ ಕೇರಳದಲ್ಲಿ ಕಾಲ್ಚೆಂಡಿನಾಟದ ಕ್ರೇಝ್ ಶುರುವಾಗಿತ್ತು. ಇಂತಹದೊಂದು ಕ್ರೇಝ್ ಹುಟ್ಟುಹಾಕಿದ್ದು ಬ್ರಿಟಿಷರು.

1921ರಲ್ಲಿ ನಡೆದ ಮಲಬಾರ್ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರು ಮಲಪ್ಪುರಂ ಅನ್ನು ತಮ್ಮ ಪ್ರಮುಖ ಮಿಲಿಟರಿ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅಲ್ಲದೆ ಇದಕ್ಕಾಗಿ ಮಲಬಾರ್ ಸ್ಪೆಷಲ್ ಪೊಲೀಸ್ (MSP) ದಳವನ್ನು ಸಹ ಸ್ಥಾಪಿಸಿದ್ದರು.

ಹೀಗೆ ಮಲಬಾರ್ ತೀರಕ್ಕೆ ಬಂದ ಬ್ರಿಟಿಷ್ ಸೈನಿಕರು ತಮ್ಮ ದೈಹಿಕ ಫಿಟ್‌ನೆಸ್ ಹಾಗೂ ಬಿಡುವಿನ ವೇಳೆಯ ವಿನೋದಕ್ಕಾಗಿ ಬ್ಯಾರಾಕ್ಸ್ ಮೈದಾನಗಳಲ್ಲಿ ಫುಟ್‌ಬಾಲ್ ಆಡಲು ಆರಂಭಿಸಿದರು.

ಬ್ರಿಟಿಷರ ಕಾಲ್ಚೆಂಡಾಟವನ್ನು ಸ್ಥಳೀಯ ಮಲಯಾಳಿ ಯುವಕರು ಮೈದಾನದ ಬೇಲಿಯ ಆಚೆಯಿಂದ ನಿಂತು ಕುತೂಹಲದಿಂದ ಗಮನಿಸುತ್ತಿದ್ದರು. ಈ ಕುತೂಹಲವೇ ಯುವಕರನ್ನು ಹೊಸ ಕ್ರೀಡೆಯತ್ತ ಸೆಳೆಯಿತು.

ಬಾಲ್ ಬಾಯ್ಸ್​:

ಆರಂಭದಲ್ಲಿ ಬ್ರಿಟಿಷ್ ಸೈನಿಕರಿಗೆ ಬಾಲ್ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದ ಸ್ಥಳೀಯ ಯುವಕರು, ಕ್ರಮೇಣ ತಾವೂ ಆಟವನ್ನು ಕಲಿತರು. ಅಲ್ಲದೆ  ಸುಗ್ಗಿಯ ನಂತರದ ಗದ್ದೆಗಳಲ್ಲಿ ಆಡಲು ಆರಂಭಿಸಿದರು.

ಹೀಗೆ ಶುರುವಾದ ಆಟ ಆ ಬಳಿಕ ಬ್ರಿಟಿಷರೊಂದಿಗೆ ಜಿದ್ದಾಟವಾಗಿ ಬದಲಾಯಿತು. ಮಲಬಾರ್‌ನ ಯುವಕರಿಗೆ ಬ್ರಿಟಿಷರನ್ನು ಮೈದಾನದಲ್ಲಿ ಸೋಲಿಸುವುದು ಕೇವಲ ಆಟವಾಗಿರಲಿಲ್ಲ, ಅದು ತಮ್ಮನ್ನು ತುಳಿದಿದ್ದ ವಸಾಹತುಶಾಹಿ ಆಡಳಿತದ ವಿರುದ್ಧ ಕ್ರೀಡೆಯ ಮೂಲಕ ಸೇಡು ತೀರಿಸಿಕೊಳ್ಳುವ ತೀವ್ರವಾದ ರಾಷ್ಟ್ರೀಯತಾ ಭಾವನೆಯಾಗಿತ್ತು.

ಫುಟ್​ಬಾಲ್ ಮೆಕ್ಕಾ: ಮಲಪ್ಪುರಂ

MSP ದಳವು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ತಂಡಕ್ಕೆ ಸೇರಿಸಿಕೊಳ್ಳಲು ಆರಂಭಿಸಿದಾಗ, ಫುಟ್‌ಬಾಲ್ ಇಡೀ ಮಲಬಾರ್‌ನ ಹಳ್ಳಿ ಹಳ್ಳಿಗಳಿಗೆ ಹರಡಿತು. ಮಲಪ್ಪುರಂ ಜಿಲ್ಲೆಯು ಎಷ್ಟು ಪ್ರಸಿದ್ಧವಾಯಿತೆಂದರೆ, ಅದನ್ನು “ಕೇರಳದ ಫುಟ್‌ಬಾಲ್ ಮೆಕ್ಕಾ” ಎಂದು ಕರೆಯಲಾಯಿತು. ಇಲ್ಲಿಂದಲೇ ಮುಂದೆ ಭಾರತ ತಂಡವನ್ನು ಪ್ರತಿನಿಧಿಸಿದ ಒಲಿಂಪಿಯನ್ ರೆಹಮಾನ್ ಅವರಂತಹ ದಂತಕಥೆಗಳು ಹೊರಹೊಮ್ಮಿದರು.

ಬ್ರೆಝಿಲ್ ಕನೆಕ್ಷನ್‌ಗೆ ಮುನ್ನುಡಿ:

ಬ್ರಿಟಿಷರಿಂದ ಫುಟ್‌ಬಾಲ್ ಕಲಿತರೂ, ಕೇರಳದ ಜನರಿಗೆ ಬ್ರಿಟಿಷ್ ಶೈಲಿಯ ‘ಲಾಂಗ್ ಬಾಲ್’ ಆಟ ಇಷ್ಟವಾಗಲಿಲ್ಲ. ಲಾಂಗ್ ಬಾಲ್ ಆಟ ಎಂದರೆ ಮೈದಾನದ ಒಂದು ಕಡೆಯಿಂದ ಮತ್ತೊಂದು ಕಡೆಗೆ, ಅಂದರೆ ದೂರದಲ್ಲಿರುವ ತನ್ನದೇ ತಂಡದ ಆಟಗಾರನಿಗೆ ಚೆಂಡನ್ನು ಗಾಳಿಯಲ್ಲೇ ಎತ್ತಿ ಪಾಸ್ ಮಾಡುವ ಒಂದು ಪ್ರಮುಖ ತಂತ್ರವಾಗಿದೆ.

ಆದರೆ ಫುಟ್​​ಬಾಲ್ ಕರಗತವಾಗುತ್ತಿದ್ದಂತೆ ಮಲಯಾಳಿಗಳು ಈ ಲಾಂಗ್ ಬಾಲ್​​ ಆಟದಿಂದ ದೂರ ಸರಿಯಲಾರಂಭಿಸಿದರು. ಬದಲಿಗೆ ಅವರು ಮೈದಾನದಲ್ಲೇ ಸಣ್ಣ ಸಣ್ಣ ಪಾಸ್‌ಗಳನ್ನು ನೀಡುತ್ತಾ ಕಲಾತ್ಮಕವಾಗಿ ಆಡಲು ಬಯಸುತ್ತಿದ್ದರು.

ಮುಂದೆ 1950-70ರ ದಶಕದಲ್ಲಿ ಬ್ರೆಝಿಲ್ ತಂಡದ ‘ಸಾಂಬಾ ಶೈಲಿ’ ಮತ್ತು ‘ಜೋಗಾ ಬೋನಿಟೋ’ ಜಗತ್ತಿಗೆ ಪರಿಚಯವಾದಾಗ, ಮಲಬಾರ್‌ನ ಜನರಿಗೆ ತಮ್ಮದೇ ಆಟದ ಸುಧಾರಿತ ರೂಪ ಬ್ರೆಝಿಲ್‌ನವರ ಆಟದಲ್ಲಿ ಕಂಡಿತು. ಬ್ರಿಟಿಷರ ಮೇಲಿನ  ಕೋಪ ಮತ್ತು ಬ್ರೆಝಿಲ್‌ನ ಆಟದ ಮೇಲಿನ ಪ್ರೀತಿ ಎರಡೂ ಸೇರಿ ಇಂದಿನ ಹಳದಿ-ಹಸಿರು ಉನ್ಮಾದಕ್ಕೆ ಕಾರಣವಾಯಿತು.

ಪೆಲೆ ಎಂಬ ಜಾದೂಗಾರ:

ಒಂದೆಡೆ ಸಾಂಬಾ ಶೈಲಿಯ ಫುಟ್​​ಬಾಲ್ ಅನ್ನು ಪ್ರೀತಿಸಲಾರಂಭಿಸಿದ ಮಲಯಾಳಿಗಳಿಗೆ ಹೀರೋ ಆಗಿ ಪೆಲೆ ಎಂಬ ಜಾದೂಗಾರ ಸಿಕ್ಕಿದ. 1958, 1962 ಮತ್ತು 1970ರಲ್ಲಿ ಬ್ರೆಝಿಲ್ ವಿಶ್ವಕಪ್ ಗೆದ್ದಾಗ ಪೆಲೆ, ಗಾರಿಂಚಾ ಕೇರಳದಲ್ಲಿ ಮನೆ ಮಾತಾದರು.

ಅದರಲ್ಲೂ ಕಡುಬಡತನದಿಂದ ಬಂದ ಕಪ್ಪು ವರ್ಣದ ಆಟಗಾರರು ಫುಟ್​​​ಬಾಲ್ ಜಗತ್ತನ್ನು ಆಳುತ್ತಿರುವುದು ಮಲಯಾಳಿಗಳನ್ನು ಹೆಚ್ಚು ಆಕರ್ಷಿಸಿತು. ಇದು ಮಲಬಾರಿನ ಜನಸಾಮಾನ್ಯರಲ್ಲಿ ಮತ್ತು ಶೋಷಿತ ವರ್ಗದಲ್ಲಿ ತಾವೂ ಏನನ್ನಾದರೂ ಸಾಧಿಸಬಹುದು ಎಂಬ ದೊಡ್ಡ ಭರವಸೆ ಮೂಡಿಸಿತು.

ಈ ಭರವಸೆ ಮುಂದೆ ಕನಸುಗಳಾಯಿತು. ಈ ಕನಸುಗಳು ಫುಟ್​​ಬಾಲ್ ಉನ್ಮಾದವಾಯಿತು. ಇದೇ ಕಾರಣಕ್ಕೆ ಇಂದಿಗೂ ವಿಶ್ವಕಪ್ ಬಂದಾಗ ಮಲಬಾರ್‌ನ ಹಳ್ಳಿಹಳ್ಳಿಗಳಲ್ಲಿ ಬ್ರೆಝಿಲ್‌ನ ಹಳದಿ-ಹಸಿರು ಧ್ವಜಗಳು, ಪೆಲೆ, ರೊನಾಲ್ಡೊ, ರೊನಾಲ್ಡಿನೊ ಮತ್ತು ನೇಮರ್ ಅವರ ದೈತ್ಯ ಕಟೌಟ್‌ಗಳು ರಾರಾಜಿಸುತ್ತವೆ.

ಇದನ್ನೂ ಓದಿ: FIFA World cup 2026: ಫುಟ್‌ಬಾಲ್ ಆಟವನ್ನೇ ಬದಲಿಸಲಿದೆ ಹೊಸ ನಿಯಮಗಳು!

ಒಟ್ಟಾರೆಯಾಗಿ, ಮಲಬಾರ್‌ನ ಈ ಹಳದಿ-ಹಸಿರು ಉನ್ಮಾದವು ಕೇವಲ 90 ನಿಮಿಷಗಳ ಆಟಕ್ಕೆ ಸೀಮಿತವಾದದ್ದಲ್ಲ, ಅದು ತಲೆಮಾರುಗಳಿಂದ ಹರಿದುಬಂದಿರುವ ಒಂದು ಜೀವಂತ ಪರಂಪರೆ. ಬ್ರೆಝಿಲ್‌ನ ಮಣ್ಣಿನ ‘ಜೋಗಾ ಬೋನಿಟೋ’ ಶೈಲಿ ಮತ್ತು ಮಲಬಾರ್‌ನ ಜನರ ಸಾಂಸ್ಕೃತಿಕ ಅಸ್ಮಿತೆ ಎರಡೂ ಒಂದಾಗಿ, ಭೌಗೋಳಿಕ ಗಡಿಗಳನ್ನು ಮೀರಿ ನಿಂತಿರುವ ಅಪರೂಪದ ಪ್ರೇಮಕಾವ್ಯವಿದು. ಜಗತ್ತಿನ ನಕ್ಷೆಯಲ್ಲಿ ಬ್ರೆಝಿಲ್ ಎಲ್ಲೋ ದೂರದಲ್ಲಿದ್ದರೂ, ವಿಶ್ವಕಪ್ ಬಂದಾಗಲೆಲ್ಲಾ ಮಲಬಾರ್‌ನ ಪ್ರತಿಯೊಂದು ಹಳ್ಳಿಯೂ ಮತ್ತೊಂದು ಪುಟ್ಟ ಬ್ರೆಝಿಲ್ ಆಗಿ ರೂಪಾಂತರಗೊಳ್ಳುತ್ತದೆ. ಫುಟ್‌ಬಾಲ್ ಕೇವಲ ಕ್ರೀಡೆಯಲ್ಲ, ಅದು ಮಲಬಾರಿನ ಪಾಲಿಗೆ ಒಂದು ಧರ್ಮ, ಒಂದು ಸಂಭ್ರಮ ಎಂಬುದೇ ಸತ್ಯ!

ಕೇರಳದ ಬ್ರೆಝಿಲ್​ ಪ್ರೇಮಿಗಳಿಗೆ ಅರ್ಜೆಂಟೀನಾ ಎದುರಾಳಿ ಆಗಿದ್ದು ಹೇಗೆ? ನಿರೀಕ್ಷಿಸಿ…

Source link

ಸ್ವಚ್ಛತಾ ಅಭಿಯಾನ: ರಸ್ತೆಯಲ್ಲಿ ಕಸಗುಡಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ – Kannada News | Nirmala Sitharaman Participates in Cleanliness Drive, Sweeps Streets

ಬೆಂಗಳೂರು, ಜೂನ್​ 14: ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ ಭಾಗಿಯಾಗಿದ್ದು, ಮಾಸ್ಕ್, ಗ್ಲೌಸ್ ಹಾಕಿ ಕಸ ಗುಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಳಿಕ ತಳ್ಳುವ ತರಕಾರಿ ಗಾಡಿ ವ್ಯಾಪಾರಿಗಳ ಬಳಿ ಮಾತನಾಡಿದ ಸಚಿವರು, ಕೇಂದ್ರ ಯೋಜನೆಯಡಿ ಲೋನ್ ಸಂಬಂಧ ವಿಚಾರಿಸಿದ್ದಾರೆ. ಈ ವೇಳೆ ನಮಗೆ ಲೋನ್ ಕೊಡಿಸಿ ಎಂದು ವ್ಯಾಪಾರಿಗಳು ಸಚಿವರನ್ನು ಆಗ್ರಹಿಸಿದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಕಾಲಾ ಹಿರಣ್’ ಚಿತ್ರತಂಡಕ್ಕೆ ದೆಹಲಿ ಹೈಕೋರ್ಟ್ ನೋಟಿಸ್: ಬಿಡುಗಡೆಗೆ ತಡೆ ಕೋರಿದ ಸಲ್ಮಾನ್ ಖಾನ್ – Kannada News | Delhi High Court issues notice to makers of Kala Hiran Movie after Salman Khan plea

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ, ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಪಕರಿಗೆ ತುರ್ತು ನೋಟಿಸ್ ಜಾರಿ ಮಾಡಲಾಗಿದೆ. ಚಿತ್ರದ ಬಿಡುಗಡೆ ಮತ್ತು ಪ್ರಚಾರಕ್ಕೆ ತಡೆ ನೀಡಬೇಕು ಎಂದು ಸಲ್ಮಾನ್ ಖಾನ್ (Salman Khan) ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು, ಚಿತ್ರದ ನಿರ್ಮಾಪಕ ಅಮಿತ್ ಜಾನಿ, ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್, ನಿರ್ದೇಶಕ ಭರತ್ ಶ್ರೀನಾಥೆ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಸೇರಿದಂತೆ ಸಂಬಂಧಪಟ್ಟ ಇತರೆ ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿದೆ.

ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಶಾ, ‘ಮೇ 29ರಂದು ಬಿಡುಗಡೆಯಾದ ಚಿತ್ರದ ಪ್ರಚಾರದ ಪೋಸ್ಟರ್‌ನಲ್ಲಿರುವ ಪಾತ್ರವು ಸಲ್ಮಾನ್ ಖಾನ್ ಅವರನ್ನು ಹೋಲುವಂತಿದೆ. ಅಲ್ಲದೆ, ಸಲ್ಮಾನ್ ಖಾನ್ ಅವರ ಗುರುತಾಗಿರುವ ವಿಶಿಷ್ಟವಾದ ಬ್ಲೂ ಬ್ರೇಸ್‌ಲೆಟ್ ಮಾದರಿಯನ್ನೇ ಆ ಪಾತ್ರವೂ ಧರಿಸಿದೆ. ಇದು ನಟನ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವಂತೆ 2025ರ ಡಿಸೆಂಬರ್ 11ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಜೂನ್ 20ರಂದು ಬಿಡುಗಡೆಯಾಗಬೇಕಿದ್ದ ಟ್ರೇಲರ್ ಅನ್ನು ಹಠಾತ್ತನೆ ಶುಕ್ರವಾರವೇ (ಜೂನ್ 12) ಬಿಡುಗಡೆ ಮಾಡಿದೆ ಎಂದು ಸಲ್ಮಾನ್ ಖಾನ್ ಅವರ ಕಾನೂನು ತಂಡ ಕೋರ್ಟ್‌ಗೆ ತಿಳಿಸಿತು. ಸದ್ಯಕ್ಕೆ ಈ ಸಿನಿಮಾದ ಟ್ರೇಲರ್ ಸಖತ್ ವೈರಲ್ ಆಗುತ್ತಿದೆ.

ಕಾಲಾ ಹಿರಣ್ ಸಿನಿಮಾ ಟ್ರೇಲರ್:

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇವೆ. ಈ ಪ್ರಕರಣಕ್ಕೆ ಸಂಬಂಧಿಸಿದ 4 ಎಫ್‌ಐಆರ್‌ಗಳ ಪೈಕಿ ಮೂರರಲ್ಲಿ ಸಲ್ಮಾನ್ ಈಗಾಗಲೇ ಖುಲಾಸೆಗೊಂಡಿದ್ದಾರೆ. ಮತ್ತೊಂದು ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಯಾವುದೇ ಅಂತಿಮ ಆದೇಶ ಬಂದಿಲ್ಲ. ಹೀಗಿರುವಾಗ ನಿರ್ಮಾಪಕರು ಸಲ್ಮಾನ್ ಖಾನ್ ಅವರ ಜನಪ್ರಿಯತೆ ಹಾಗೂ ವೈಯಕ್ತಿಕ ಜೀವನದ ಘಟನೆಗಳನ್ನು ಬಳಸಿಕೊಂಡು ವಾಣಿಜ್ಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದರು.

ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ

ತಮ್ಮ ಅನುಮತಿಯಿಲ್ಲದೆ ತಮ್ಮ ಚಿತ್ರಣ, ಶೈಲಿ ಹಾಗೂ ಬ್ರೇಸ್‌ಲೆಟ್‌ನಂತಹ ವೈಯಕ್ತಿಕ ಗುರುತುಗಳನ್ನು ಬಳಸಿ ಸಿನಿಮಾ ಮಾಡಿರುವುದು ಕಾನೂನುಬಾಹಿರ ಮತ್ತು ಇದು ತಮ್ಮ ಘನತೆಗೆ ಧಕ್ಕೆ ತರುತ್ತದೆ ಎಂದು ಸಲ್ಮಾನ್ ಖಾನ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಪ್ರಕರಣದ ಮುಂದಿನ ನಿರ್ಧಾರವು ಜೂನ್ 19ರ ಕೋರ್ಟ್ ವಿಚಾರಣೆಯ ಮೇಲೆ ನಿಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version