ನಾನು ಸ್ಪಿನ್ನರ್​ಗಳನ್ನೇ ನಂಬಿದ್ದೆ, ಆದರೆ ಅವರೆಲ್ಲರೂ ಆಫ್ ಡೇನಲ್ಲಿದ್ದರು..! – Kannada News | Salman ali agha post match presentation of ind vs pak match

T20 World Cup 2026: ಟಿ20 ವಿಶ್ವಕಪ್​​ನಲ್ಲಿ ಭಾರತದ ವಿರುದ್ಧದ ಸೋಲಿನ ಸಂಖ್ಯೆಯನ್ನು ಪಾಕಿಸ್ತಾನ್ ತಂಡ ಎಂಟಕ್ಕೇರಿಸಿದೆ. ಈ ಹಿಂದೆ ಏಳು ಬಾರಿ ಸೋತಿದ್ದ ಪಾಕ್ ಪಡೆ ಇದೀಗ ಕೊಲಂಬೊದಲ್ಲೂ ಮುಗ್ಗರಿಸಿದೆ. ಆರ್​. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಹಿಂದೆ ಮುಂದೆ ನೋಡದೇ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ದಾಂಡಿಗರ ಆರ್ಭಟದ ಮುಂದೆ ಪಾಕ್ ತಂಡ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್​ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 18 ಓವರ್​ಗಳಲ್ಲಿ 114 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ 61 ರನ್​ಗಳ ಸೋಲನುಭವಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ, ನಾವು ಈ ಪಂದ್ಯದಲ್ಲಿ ನಮ್ಮ ಸ್ಪಿನ್ನರ್​ಗಳ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದೆವು. ಆದರೆ ಅವರ ಪಾಲಿಗೆ ಇಂದು ಅತ್ಯಂತ ಕೆಟ್ಟ ದಿನವಾಗಿತ್ತು. ಅಲ್ಲದೆ ಪಂದ್ಯದ ನಡುವೆ ನಮ್ಮ ಯೋಜನೆಗಳೇ ಕಾಣೆಯಾಗಿತ್ತು.

ಕಳೆದ ಆರು ತಿಂಗಳಲ್ಲಿ ನಮ್ಮ ಸ್ಪಿನ್ನರ್​ಗಳು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ನಾವು ಯಾವಾಗಲೂ ನಮ್ಮ ಸ್ಪಿನ್ನರ್‌ಗಳನ್ನು ನಂಬುತ್ತೇವೆ. ಅದರಂತೆ ಈ ಪಂದ್ಯದಲ್ಲೂ ನಂಬಿಕೆಯಿಟ್ಟಿದ್ದೆ. ಆದರೆ ಎಲ್ಲರೂ ಆಫ್ ಡೇನಲ್ಲಿದ್ದರು.

ಇದಾಗ್ಯೂ ನಾವು ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಬಹುದಾಗಿತ್ತು ಎಂಬುದು ನನ್ನ ಭಾವನೆ. ಟಿ20 ಪಂದ್ಯಗಳಲ್ಲಿ ನಾವು ಪವರ್‌ಪ್ಲೇನಲ್ಲಿ 3 ಅಥವಾ 4 ವಿಕೆಟ್‌ಗಳನ್ನು ಕಳೆದುಕೊಂಡರೆ, ಚೇಸಿಂಗ್ ಮಾಡುವುದು ಕಷ್ಟ. ಇವೆಲ್ಲವೂ ನಮ್ಮ ಸೋಲಿಗೆ ಕಾರಣ ಎನ್ನಬಹುದು ಎಂದು ಪಾಕ್ ನಾಯಕ ಹೇಳಿದ್ದಾರೆ.

ಇನ್ನು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಮಾತನಾಡಿದ ಸಲ್ಮಾನ್ ಅಲಿ ಅಘಾ. ಮೊದಲ ಇನ್ನಿಂಗ್ಸ್‌ ವೇಳೆ ಪಿಚ್​ ಸ್ವಲ್ಪ ಜಿಗುಟಾಗಿತ್ತು ಎಂದು ನಾನು ಭಾವಿಸುತ್ತೇನೆ. ಚೆಂಡು ಕೂಡ ಹಿಡಿತದಲ್ಲಿತ್ತು. ಇದಾಗ್ಯೂ ನಮ್ಮ ಬೌಲರ್​ಗಳಲ್ಲಿ ಯಾವುದೇ ಯೋಜನೆ ಕಾಣಿಸಿರಲಿಲ್ಲ.

ನಮ್ಮ ಬೌಲರ್‌ಗಳು ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಮಾಡಲಿಲ್ಲ. ಇದರಿಂದ ಎದುರಾಳಿ ತಂಡ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಈ ಸೋಲಿನ ಹೊರತಾಗಿಯೂ ನಾವು ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳಬೇಕಿದೆ. ಎರಡು ದಿನಗಳಲ್ಲೇ ನಮಗೆ ಮತ್ತೊಂದು ಮ್ಯಾಚ್ ಇದೆ. ಈ ಪಂದ್ಯವನ್ನು ಗೆದ್ದು ಸೂಪರ್ 8ಗೆ ಅರ್ಹತೆ ಪಡೆಯಬೇಕು ಎಂಬುದೇ ನಮ್ಮ ಸದ್ಯದ ಗುರಿ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.

Source link

ಕರಿಬಸೊಪ್ಪು ಬಳಿಕ ವರ್ತೂರ್ ಸಂತೋಷ್​​ಗೆ ಹೊಸ ಹೆಸರಿಟ್ಟ ರಕ್ಷಿತಾ ಶೆಟ್ಟಿ – Kannada News | Rakshita Shetty’s Viral Bigg Boss Moment: Varthur Santhosh Gets New Name

ರಕ್ಷಿತಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರಾದರೂ ಅವರು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಈ ಕಾರಣದಿಂದ ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತನಾಡೋಕೆ ಬರೋದಿಲ್ಲ. ಅವರು ಎಗ್ಸೈಟ್ ಆದಾಗ, ನರ್ವಸ್ ಆದಾಗ ಯಾರ ಹೆಸರನ್ನು ಇನ್ನು ಹೇಗೋ ಹೇಳುತ್ತಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಈ ಮೊದಲು ಕರಿಬಸಯ್ಯ ಹೆಸರನ್ನು ಅವರು ಬದಲಾಯಿಸಿದ್ದರು. ಈಗ ವರ್ತೂರು ಸಂತೋಷ್ (Varthur Santosh) ಸರದಿ.

ಬಿಗ್ ಬಾಸ್ ಮನೆಯಲ್ಲಿರುವಾಗ ರಕ್ಷಿತಾ ಶೆಟ್ಟಿ ಅವರ ನಿಜವಾದ ವ್ಯಕ್ತಿತ್ವ ಜನರಿಗೆ ಗೊತ್ತಾಯಿತು. ಅವರು ಮೊದಲು ಸಾಕಷ್ಟು ಟ್ರೋಲ್ ಆದ ಉದಾಹರಣೆ ಇದೆ. ಆದರೆ, ಬಿಗ್ ಬಾಸ್​​ಗೆ ತೆರಳಿದ ಬಳಿಕ ಅನೇಕರು ಅವರನ್ನು ಇಷ್ಟಪಟ್ಟರು. ಅವರು ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಸಂದರ್ಶನ ಒಂದರಲ್ಲಿ ಮಾತನಾಡುವಾಗ, ‘ಕರಿಬಸಯ್ಯ’ ಎನ್ನಲು ‘ಕರಿಬಸೊಪ್ಪು’ ಎಂದು ಕರೆದಿದ್ದರು.

ಕರಿಬಸಯ್ಯ ಅವರು ಕರಿಬಸೊಪ್ಪು ಎಂದೇ ಫೇಮಸ್ ಆದರು. ‘ನಾನು ಮೊದಲು ಇಷ್ಟು ಜನಪ್ರಿಯತೆ ಪಡೆದಿದ್ದೆನೋ ಇಲ್ಲವೋ. ಆದರೆ, ನೀನು ಕರಿಬಸೊಪ್ಪು ಎಂದ ಬಳಿಕ ನನಗೆ ಜನಪ್ರಿಯತೆ ಸಿಕ್ಕಿದೆ’ ಎಂದು ಕರಿಬಸಯ್ಯ ಅವರು ರಕ್ಷಿತಾ ಶೆಟ್ಟಿ ಬಳಿ ಹೇಳಿದ್ದರು. ಈಗ ಸಂದರ್ಶನದಲ್ಲಿ ಮತ್ತೊಬ್ಬರ ಹೆಸರನ್ನು ರಕ್ಷಿತಾ ಶೆಟ್ಟಿ ತಪ್ಪಾಗಿ ಹೇಳಿದ್ದಾರೆ.

ಇದನ್ನೂ ಓದಿ: ತನಿಷಾ ನಿರ್ಮಾಣದ ‘ಕೋಣ’ ಚಿತ್ರದಲ್ಲಿ ವರ್ತೂರು ಸಂತೋಷ್ ನಟಿಸಿಲ್ಲ: ಇಲ್ಲಿದೆ ಅಸಲಿ ಕಾರಣ

‘ಬಿಗ್ ಬಾಸ್’ಗೆ ಕಾಲಿಟ್ಟಿದ್ದ ವರ್ತೂರು ಸಂತೋಷ್ ಸಾಕಷ್ಟು ಜನಪ್ರಿಯತೆ ಪಡೆದರು. ಅವರ ಹೆಸರನ್ನು ‘ವಂತೂರು ಸಂತೂರು’ ಎಂದು ರಕ್ಷಿತಾ ಶೆಟ್ಟಿ ಕರೆದಿದ್ದಾರೆ. ಈ ವಿಡಿಯೋನ ಟ್ರೋಲ್ ಮಾಡಲಾಗುತ್ತಾ ಇದೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳನ್ನು ಇಟ್ಟುಕೊಂಡು ‘ದೊಡ್ಮನೆ ಹಬ್ಬ’ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರದಲ್ಲಿ ರಕ್ಷಿತಾ ಶೆಟ್ಟಿ ಕೂಡ ಇದ್ದರು. ಅವರು ಬಿಗ್ ಬಾಸ್ ಮನೆಯಲ್ಲಿರುವ ದಿನಗಳನ್ನು ನೆನೆದು ಭಾವುಕರಾದರು. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಾದ್ಯಂತ ಎಲ್ಲೆಲ್ಲೂ ಶಿವರಾತ್ರಿ ಜಾಗರಣೆ, ಪರವಶರಾದ ಭಕ್ತರು – Kannada News | Karnataka Celebrates Maha Shivaratri with Night long Vigils; Grand Rituals in Bengaluru, Mysuru and Mangaluru Temples

ಬೆಂಗಳೂರು, ಫೆಬ್ರವರಿ 16: ಕರ್ನಾಟಕದಾದ್ಯಂತ ಭಾನುವಾರ ರಾತ್ರಿ ಮಹಾಶಿವರಾತ್ರಿಯ ಸಡಗರ ಮತ್ತು ಸಂಭ್ರಮ ಮನೆ ಮಾಡಿತ್ತು. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು ಮತ್ತು ಮಂಗಳೂರಿನಲ್ಲೂ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಪುಷ್ಪಾಲಂಕಾರಗಳು ಕಂಡುಬಂದವು. ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು.

ತಮಿಳುನಾಡಿನ ವೆಲ್ಲಿಯಂಗಿರಿ ಪರ್ವತಗಳ ತಪ್ಪಲಿನಲ್ಲಿರುವ ಇಶಾ ಫೌಂಡೇಶನ್‌ನಲ್ಲಿ ಶಿವರಾತ್ರಿ ಜಾಗರಣೆಯನ್ನು ಪ್ರತಿ ವರ್ಷದಂತೆ ಅದ್ದೂರಿಯಾಗಿ ಆಚರಿಸಲಾಯಿತು. ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರು ಈ ಆಚರಣೆಯಲ್ಲಿ ಭಾಗಿಯಾಗಿ, ಶಿವನ ಭಜನೆ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದರು.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಸಾನಿಧ್ಯದಲ್ಲಿ ಭಕ್ತರಿಗೆ ಮೂಲ ಸೋಮನಾಥ ಜ್ಯೋತಿರ್ಲಿಂಗದ ಐತಿಹಾಸಿಕ ಅವಶೇಷಗಳ ದರ್ಶನ ಲಭ್ಯವಾಯಿತು. ಪವಿತ್ರ ರುದ್ರಪೂಜೆ ಹಾಗೂ ಶಿವನ ಮಂಗಳಕರ ರೂಪವಾದ ರುದ್ರನ ಆರಾಧನೆಯು ಈ ಸಂದರ್ಭದಲ್ಲಿ ನೆರವೇರಿತು. ಎಲ್ಲೆಡೆ ಹರ ಹರ ಮಹಾದೇವ ಘೋಷಣೆಗಳು ಮೊಳಗಿದವು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಪ್ಲ್ಯಾನೇ ಬೇರೆಯಿತ್ತು, ಆದರೆ ಇಶಾನ್ ಕಿಶನ್ ಮಾತ್ರ ಅದನ್ನ ಪಾಲಿಸಿಲ್ಲ..! – Kannada News | Suryakumar yadav post match interview IND vs PAK 2026

ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಓವರ್​ನಲ್ಲೇ ಅಭಿಷೇಕ್ ಶರ್ಮಾ (0) ವಿಕೆಟ್ ಕಳೆದುಕೊಂಡಿತು.

ಈ ಆರಂಭಿಕ ಆಘಾತದ ಹೊರತಾಗಿಯೂ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. 40 ಎಸೆತಗಳನ್ನು ಎದುರಿಸಿದ ಇಶಾನ್ 10 ಫೋರ್ ಹಾಗೂ 3 ಭರ್ಜರಿ ಸಿಕ್ಸ್​ ಚಚ್ಚುವ ಮೂಲಕ 77 ರನ್ ಕಲೆಹಾಕಿದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 175 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 18 ಓವರ್​ಗಳಲ್ಲಿ 114 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 61 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಅವರ ಬ್ಯಾಟಿಂಗ್ ವೈಖರಿಯನ್ನು ಹಾಡಿ ಹೊಗಳಿದ್ದಾರೆ. ಈ ಪಿಚ್​ನಲ್ಲಿ ಮೊದಲು ಬ್ಯಾಟ್ ಮಾಡುವುದು ಉತ್ತಮ ಆಯ್ಕೆ ಎಂದು ಭಾವಿಸಿದ್ದೆ. ಇದಕ್ಕಾಗಿಯೇ ನಾವು ವಿಶೇಷ ಪ್ಲ್ಯಾನ್ ರೂಪಿಸಿದ್ದೆವು.

ಏಕೆಂದರೆ ಇದು ನಿಧಾನಗತಿಯ ಪಿಚ್ ಆಗಿರುವುದರಿಂದ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್​ ಮಾಡಲು ಪ್ಲ್ಯಾನ್ ರೂಪಿಸಲಾಗಿತ್ತು. ಆದರೆ ಇಶಾನ್ ಕಿಶನ್ ಮಾತ್ರ ಈ ಪ್ಲ್ಯಾನ್​​ ಅನ್ನು ಪಾಲಿಸಿಲ್ಲ. ಬದಲಾಗಿ ಔಟ್ ಆಫ್ ಬಾಕ್ಸ್​ನಂತೆ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದರು. ಅದರಲ್ಲೂ ಶೂನ್ಯಕ್ಕೆ 1 ವಿಕೆಟ್ ಕಳೆದುಕೊಂಡಾಗ ಇಶಾನ್ ಬ್ಯಾಟಿಂಗ್ ಮಾಡಿದ್ದು ಅದ್ಭುತವಾಗಿತ್ತು.

ಇಶಾನ್ ಕಿಶನ್ ನಮಗೆ ಪವರ್​ಪ್ಲೇನಲ್ಲೇ ಉತ್ತಮ ಮುನ್ನಡೆ ತಂದು ಕೊಟ್ಟರು. ಇದಾದ ಬಳಿಕ ತಿಲಕ್ ವರ್ಮಾ, ಶಿವಂ ದುಬೆ ಮತ್ತು ರಿಂಕು ಸಿಂಗ್ ಬ್ಯಾಟಿಂಗ್ ಮಾಡಿದ ರೀತಿ ಕೂಡ ಶ್ಲಾಘನೀಯ. ನಮ್ಮ ಟಾರ್ಗೆಟ್ 155 ಕ್ಕಿಂತ ಹೆಚ್ಚಿನ ಮೊತ್ತವಾಗಿತ್ತು. ಆದರೆ ಯಾವಾಗ 175 ರನ್​ಗಳು ಮೂಡಿಬಂತೋ ಪಂದ್ಯವು ನಮ್ಮ ಕೈಯಲ್ಲಿದೆ ಎಂದು ಭಾವಿಸಿದ್ದೆ.

ಇದನ್ನೂ ಓದಿ: 42 ರನ್​ಗಳು… ಪಾಕ್ ವಿರುದ್ಧ ‘ಪವರ್’​ಫುಲ್ ದಾಖಲೆ ಬರೆದ ಇಶಾನ್ ಕಿಶನ್

ಏಕೆಂದರೆ 155 ರನ್​ ಈ ಪಿಚ್​ನಲ್ಲಿ ಸಮಾನ್ಯ ಸ್ಕೋರ್. ನಾವು 175 ತಲುಪಿದ ತಕ್ಷಣ, ಅದು ಸರಾಸರಿಗಿಂತ 15-20 ರನ್‌ಗಳು ಹೆಚ್ಚಿದೆ ಎಂದು ಭಾವಿಸಿದ್ದೆವು. ಅತ್ತ ಹಾರ್ದಿಕ್ ಪಾಂಡ್ಯ ಹೊಸ ಚೆಂಡಿನಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡರು. ಆ ನಂತರ ಬುಮ್ರಾ ತಾನೇಕೆ ವಿಶ್ವದ ಅತ್ಯುತ್ತಮ ಬೌಲರ್ ಎಂಬುದನ್ನು ತೋರಿಸಿದರು.  ನಿಜ ಹೇಳಬೇಕೆಂದರೆ, ನಾವೇನು ಅಂದುಕೊಂಡಿದ್ದೆವು ಅವೆಲ್ಲವೂ ಆಗಿದೆ. ಹೀಗಾಗಿ ಈ ಗೆಲುವು ಭಾರತಕ್ಕಾಗಿ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

Published On – 8:34 am, Mon, 16 February 26

Source link

ಗೋವಾ ಸ್ಟ್ರೀಟ್ ರೇಸ್​ 2026ರಲ್ಲಿಎರಡನೇ ಸ್ಥಾನ ಪಡೆದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಟೀಂ  – Kannada News | Kichca Sudeep Kichchas Kings Bengaluru became runner Up in Goa Street Race 2026

ಇತ್ತೀಚೆಗೆ ಗೋವಾದಲ್ಲಿ ‘ಗೋವಾ ಸ್ಟ್ರೀಟ್ ರೇಸ್​ 2026’ ನಡೆಯಿತು. ಇದರಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ. ಇದು ಸುದೀಪ್ ಅವರಿಗೆ ಖುಷಿ ನೀಡಿದೆ. ಸುದೀಪ್ ನಟನೆಯ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಕ್ರಿಕೆಟ್ ಎಂದರೆ ಅವರಿಗೆ ಬಲು ಇಷ್ಟ. ಇತ್ತೀಚೆಗೆ ಸಿಸಿಎಲ್​​ನಲ್ಲಿ ಅವರ ತಂಡ ಗೆಲುವು ಸಾಧಿಸಿತು. ಅವರು ಈಗ ರೇಸಿಂಗ್ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಮಾಲೀಕತ್ವ ಅವರ ಬಳಿ ಇದೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Bengaluru Air Quality: ಬೆಂಗಳೂರಿಗಿಂತಲೂ ಕಳಪೆ ಶಿವಮೊಗ್ಗದ ಏರ್ ಕ್ವಾಲಿಟಿ! – Kannada News | Bangalore Air Pollution Crisis: Shivamogga Air quality dropped more than Bengaluru

ಬೆಂಗಳೂರಿಗಿಂತಲೂ ಕಳಪೆ ಶಿವಮೊಗ್ಗದ ಏರ್ ಕ್ವಾಲಿಟಿ!

ಬೆಂಗಳೂರು, ಫೆಬ್ರವರಿ 16: ಕೆಲ ದಿನಗಳಿಂದ ಏರಿಕೆಯಾಗುತ್ತಿದ್ದ ಶಿವಮೊಗ್ಗದ AQI (Bengaluru Air Quality)ಇಂದು ಕಳಪೆ ಮಟ್ಟ ತಲುಪಿದೆ. ಬೆಂಗಳೂರು, ಮಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಅನಾರೋಗ್ಯಕರ ವಾಯು ಗುಣಮಟ್ಟವಿದ್ದು, ಇಂದಿನ ಶಿವಮೊಗ್ಗದ ಏರ್ ಕ್ವಾಲಿಟಿ ಬೆಂಗಳೂರನ್ನೂ ಮೀರಿಸಿದೆ. 200ರ ಗಡಿ ತಲುಪಿರುವ ಶಿವಮೊಗ್ಗದ AQI, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 173ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಶಿವಮೊಗ್ಗದ ಏರ್ ಕ್ವಾಲಿಟಿ 198 ಆಗಿದೆ. ಜೊತೆಗೆ ಬಳ್ಳಾರಿಯ ವಾಯು ಗುಣಮಟ್ಟವೂ ಸಹ 179 ಆಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –172
  • ಮಂಗಳೂರು-176
  • ಮೈಸೂರು –176
  • ಬೆಳಗಾವಿ – 169
  • ಕಲಬುರ್ಗಿ-136
  • ಶಿವಮೊಗ್ಗ – 198
  • ಬಳ್ಳಾರಿ – 179
  • ಹುಬ್ಬಳ್ಳಿ- 153
  • ಉಡುಪಿ –173
  • ವಿಜಯಪುರ –150

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪೆಟ್ರೋಲ್ ಬಂಕ್​​ನ ಲೈಟಿಂಗ್ ಕಂಬ, ಸಮಾಜವಾದಿ ಪಕ್ಷದ ನಾಯಕ ಸಾವು – Kannada News | SP Leader Dies After High Mast Pole Collapses Onto Car in Uttar Pradesh

ಪ್ರತಾಪಗಢ, ಫೆಬ್ರವರಿ 16: ಚಲಿಸುತ್ತಿದ್ದ ಕಾರಿನ ಮೇಲೆ ಪೆಟ್ರೋಲ್ ಬಂಕ್​ನ ಲೈಟಿಂಗ್​ ಕಂಬ ಕುಸಿದು ಬಿದ್ದ ಪರಿಣಾಮ ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈಯಕ್ತಿಕ ಕೆಲಸಕ್ಕಾಗಿ ಕ್ರೆಟಾ ಕಾರಿನಲ್ಲಿ ಬಾಬುಗಂಜ್‌ನಿಂದ ಪ್ರತಾಪ್‌ಗಢ ನಗರಕ್ಕೆ ಪ್ರಯಾಣಿಸುತ್ತಿದ್ದಾಗ, ಅವರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಪೆಟ್ರೋಲ್ ಪಂಪ್ ಮುಂದೆ ಕ್ರೇನ್ ಸಹಾಯದಿಂದ ಭಾರತ್ ಪೆಟ್ರೋಲಿಯಂನ ಸುಮಾರು 65 ಅಡಿ ಎತ್ತರದ ಎತ್ತರದ ಮಾಸ್ಟ್ ಕಂಬವನ್ನು ನಿರ್ಮಿಸಲಾಗುತ್ತಿತ್ತು. ಕಂಬ ಸುಮಾರು 40 ಕ್ವಿಂಟಾಲ್ ತೂಕವಿತ್ತು ಎಂದು ವರದಿಯಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್ ಬಾಸ್ ಸ್ಪರ್ಧಿಗೆ ಬಂತು ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ – Kannada News | Bollywood Celeb Threats Rise: Himanshi Khurana Extorted for 10 Cr by Gangsters

ಬಾಲಿವುಡ್ ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮೊದಲು, ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಅವರ ಕಟ್ಟಡದ ಹೊರಗೆ ಗುಂಡಿನ ದಾಳಿ ನಡೆದಿತ್ತು. ಆ ಬಳಿಕ ನಟ ರಣವೀರ್ ಸಿಂಗ್ ಅವರಿಗೆ ಆಡಿಯೋ ಸಂದೇಶದ ಮೂಲಕ ಬೆದರಿಕೆ ಹಾಕಲಾಗಿತ್ತು. ಈಗ, ‘ಬಿಗ್ ಬಾಸ್ 13’ ಖ್ಯಾತಿಯ ನಟಿ ಹಿಮಾಂಶಿ ಖುರಾನಾ ಅವರಿಗೆ ಸುಲಿಗೆಗಾಗಿ ಬೆದರಿಕೆ ಹಾಕಲಾಗಿದೆ. ಹಿಮಾಂಶಿ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ.

ಚಿತ್ರರಂಗದ ಹೈ ಪ್ರೊಫೈಲ್ ಜನರನ್ನು ಗುರಿಯಾಗಿಸಿಕೊಂಡ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಿಮಾಂಶಿ ಪಂಜಾಬಿ ಚಲನಚಿತ್ರೋದ್ಯಮದ ಪ್ರಸಿದ್ಧ ನಟಿ. ಈ ಬೆದರಿಕೆ ವಿರುದ್ಧ ಅವರು ಮೊಹಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏತನ್ಮಧ್ಯೆ, ಈ ಬೆದರಿಕೆ ಇ-ಮೇಲ್ ಬಗ್ಗೆ ಸೋಹಾನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅವರ ವೈಯಕ್ತಿಕ ಇ-ಮೇಲ್ ಐಡಿಯಲ್ಲಿ ಬೆದರಿಕೆ ಇ-ಮೇಲ್ ಬಂದಿದ್ದು, ಅದರಲ್ಲಿ ಒಂದು ಕಿರು ಸಂದೇಶ ಮತ್ತು ಆಡಿಯೊ ಕ್ಲಿಪ್ ಕೂಡ ಇದೆ.

ಆ ಆಡಿಯೋ ಕ್ಲಿಪ್ ವಿದೇಶಿ ದರೋಡೆಕೋರನದ್ದು ಎಂದು ಹೇಳಲಾಗುತ್ತಿದೆ. 10 ಕೋಟಿ ರೂಗೆ ಆತ ಬೇಡಿಕೆ ಇಟ್ಟಿದ್ದಾನೆ. ಪಿಟಿಐ ವರದಿಯ ಪ್ರಕಾರ, ಈ ಸಂದೇಶವನ್ನು ವಿದೇಶದಲ್ಲಿರುವ ದರೋಡೆಕೋರ ಕಳುಹಿಸಿದ್ದಾನೆ ಎಂದು ಹೇಲಲಾಗಿದೆ. ಆರೋಪಿಯನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಈ ಘಟನೆಯಿಂದ ಹಿಮಾಂಶಿ ಖುರಾನಾ ಮತ್ತು ಅವರ ಕುಟುಂಬ ಭಯಭೀತಗೊಂಡಿದೆ. ಅವರು ತಕ್ಷಣ ದೂರು ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ವಿನಂತಿಸಿದ್ದಾರೆ. ಬೆದರಿಕೆಯಲ್ಲಿ ಜೀಶನ್ ಅಖ್ತರ್ ಅವರನ್ನುಉಲ್ಲೇಖಿಸಲಾಗಿದೆ. ಅಕ್ಟೋಬರ್ 2024 ರಲ್ಲಿ ಮುಂಬೈನಲ್ಲಿ ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಕೊಲೆ ಪ್ರಕರಣದಲ್ಲಿ ಆತ ಬೇಕಾಗಿದ್ದಾನೆ. ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರ ಸೇರಿದಂತೆ ಪ್ರತಿಸ್ಪರ್ಧಿ ಗ್ಯಾಂಗ್‌ಗಳೊಂದಿಗೆ ಅಖ್ತರ್ ಸಂಪರ್ಕ ಹೊಂದಿದ್ದಾನೆ.

ಇದನ್ನೂ ಓದಿ: ಒಡಿಶಾದಲ್ಲಿ ಆಸಿಡ್ ದಾಳಿ ನಡೆಸಿ ಪತ್ನಿಯನ್ನು ಕೊಂದ ವ್ಯಕ್ತಿಗೆ ಗಲ್ಲು ಶಿಕ್ಷೆ

ಪಂಜಾಬ್‌ನ ಕಿರಾತ್‌ಪುರ್ ಸಾಹಿತ್‌ನ 34 ವರ್ಷದ ನಟಿ ಹಿಮಾಂಶಿ ಖುರಾನಾ, 16 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಅನ್ನು ಪ್ರಾರಂಭಿಸಿದರು. ಅವರು 2011 ರಲ್ಲಿ ಮಿಸ್ ಲುಧಿಯಾನ ಪ್ರಶಸ್ತಿಯನ್ನು ಗೆದ್ದರು. ಅವರು ‘ಬಿಗ್ ಬಾಸ್’ ನ ಹದಿಮೂರನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ 1.2 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

42 ರನ್​ಗಳು… ಪಾಕ್ ವಿರುದ್ಧ ‘ಪವರ್’​ಫುಲ್ ದಾಖಲೆ ಬರೆದ ಇಶಾನ್ ಕಿಶನ್ – Kannada News | Ishan Kishan breaks Shubman Gill’s record agains Pakistan

ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದ ಮೂಲಕ ಇಶಾನ್ ಕಿಶನ್ (Ishan Kishan) ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಶುಭ್​​ಮನ್ ಗಿಲ್ ಹೆಸರಿನಲ್ಲಿದ್ದ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ.

Source link

ಭಯಾನಕ ವಿಡಿಯೋ: ಮನೆಯ ತಾರಸಿಯಲ್ಲಿ ಬಾಂಬ್ ಸ್ಫೋಟ, ಮಹಿಳೆಯರು ಸೇರಿ ಎಲ್ಲರ ಬಟ್ಟೆಗೂ ತಗುಲಿದ ಬೆಂಕಿ – Kannada News | Crude Bomb Explodes on Rooftop in Bhubaneswar, Four Injured

ಭುವನೇಶ್ವರ, ಫೆಬ್ರವರಿ 16: ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಸುಂದರಪಾದ ಪ್ರದೇಶದಲ್ಲಿ ಮನೆಯೊಂದರ ತಾರಸಿಯಲ್ಲಿ ನಡೆದ ಭಾರಿ ಬಾಂಬ್ ಸ್ಫೋಟ ಎಲ್ಲರನ್ನು ಬೆಚ್ಚಿಬೀಳಿಸಿದೆ. ಜನವರಿ 27ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯ ಈಗ ಹೊರಬಿದ್ದಿದೆ. ರೌಡಿ ಶೀಟರ್ ಶಾನವಾಜ್ ನವಾಬ್ ಮನೆಯ ತಾರಸಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ವೀಡಿಯೊವನ್ನು ಒಂದೊಂದಾಗಿ ಪರಿಶೀಲಿಸುತ್ತಿದೆ.

ಸ್ಫೋಟದಲ್ಲಿ ರೌಡಿ ಶೀಟರ್ ಕೂಡ ಗಾಯಗೊಂಡಿದ್ದಾನೆ. ಮೂವರು ಹೆಂಗಸರು ಕೂಡ ಇದ್ದರು. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಕಚ್ಚಾ ಬಾಂಬ್ ತಯಾರಿಸಲು ಕಾರಣವೇನು ಅದನ್ನು ಎಲ್ಲಿಗೆ ಸರಬರಾಜು ಮಾಡುತ್ತಿದ್ದ ಎಂದು ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.ಸಾಕ್ಷ್ಯಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ಘಟನಾ ಸ್ಥಳಕ್ಕೆ ವೈಜ್ಞಾನಿಕ ತಂಡವನ್ನು ಕಳುಹಿಸಲಾಗಿದೆ. ಅಕ್ರಮ ಬಾಂಬ್ ತಯಾರಿಕೆಯಲ್ಲಿ ಇತರರು ಭಾಗಿಯಾಗಿದ್ದರೆ, ಅವರ ಬಗ್ಗೆ ಮಾಹಿತಿ ಪಡೆಯಲು ಗಾಯಾಳುಗಳು ಚೇತರಿಸಿಕೊಂಡ ನಂತರ ಅವರನ್ನು ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version