Viral Video: ಇಂಜಿನಿಯರ್, ಡಾಕ್ಟರನ್ನೆಲ್ಲ ನೂಕಾಚೆ ದೂರ! ಮ್ಯಾಗಿ ಮಾಡಿ ದಿನಕ್ಕೆ 21,000 ರೂ. ಗಳಿಸಿದ ಯುವಕ – Kannada News | Content creator sells maggi in hill station earned 21000 rs for one Day netizens shocked watch video

ನವದೆಹಲಿ, ಜನವರಿ 29: ಯಾವುದೇ ಒಂದು ಬ್ಯುಸಿನೆಸ್ ಮಾಡಬೇಕೆಂದರೂ ಮೊದಲು ಆ ಜಾಗದಲ್ಲಿ ಯಾವುದರ ಅಗತ್ಯ ಜಾಸ್ತಿಯಿದೆ ಅಥವಾ ಯಾವುದರ ಪೂರೈಕೆ ಕಡಿಮೆಯಿದೆ ಎಂಬುದನ್ನು ಅಧ್ಯಯನ ಮಾಡುವುದು ಬಹಳ ಮುಖ್ಯ. ಇದು ಗೊತ್ತಾಯಿತೆಂದರೆ ಅರ್ಧ ಬ್ಯುಸಿನೆಸ್ ಗೆದ್ದಂತೆ. ಹಿಮಾಚಲ ಪ್ರದೇಶದಲ್ಲಿ ಪ್ರವಾಸಕ್ಕೆ ಹೋಗಿದ್ದ ಕಂಟೆಂಟ್ ಕ್ರಿಯೇಟರ್ ಒಬ್ಬ ಒಂದು ದಿನಕ್ಕೆ ಅಲ್ಲಿ ಎಷ್ಟು ಮ್ಯಾಗಿ (Maggi) ಮಾರಾಟವಾಗುತ್ತದೆ ಎಂದು ನೋಡುವ ಕುತೂಹಲದಿಂದ ಒಂದು ದಿನ ಮ್ಯಾಗಿ ಮಾಡಿ ಮಾರಾಟ ಮಾಡಿದ್ದಾನೆ.

ಕಂಟೆಂಟ್ ಕ್ರಿಯೇಟರ್ ಹಿಲ್ ಸ್ಟೇಷನ್​​ನಲ್ಲಿ ಮ್ಯಾಗಿ ಸ್ಟಾಲ್ ಸ್ಥಾಪಿಸುವುದರಿಂದ ಎಷ್ಟು ಹಣ ಗಳಿಸಬಹುದು ಎಂದು ತಿಳಿಯಲು, ಮ್ಯಾಗಿ ಸ್ಟಾಲ್ ಹಾಕಿದ್ದಾನೆ. ಆತ ಒಂದು ದಿನಕ್ಕೆ ಸಂಪಾದಿಸಿದ ಹಣವೆಷ್ಟು ಎಂದು ಕೇಳಿದರೆ ನೀವು ಶಾಕ್ ಆಗುತ್ತೀರಿ. ಹಿಮಾಲಯದಲ್ಲಿ ಮ್ಯಾಗಿ ಮಾರಾಟ ಮಾಡುವ ಮೂಲಕ ದಿನಕ್ಕೆ 21,000 ರೂ. ಗಳಿಸಿದ ಯುವಕ ಬಾದಲ್ ಠಾಕೂರ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ರೈಲಿನೊಳಗೆ ಮ್ಯಾಗಿ ಬೇಯಿಸಿ, ಚಹಾ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಎಚ್ಚರಿಕೆ

ಪ್ರವಾಸಿಗರ ಬೇಡಿಕೆಯನ್ನು ಗುರುತಿಸಿ ಶೀತ ವಾತಾವರಣದಲ್ಲಿ ಬಿಸಿ ಮ್ಯಾಗಿಯನ್ನು ಮಾರಾಟ ಮಾಡಿದ ಆತನ ಪ್ರಯೋಗವು ಸೂಪರ್ ಸಕ್ಸಸ್ ಆಗಿದೆ. ಒಂದು ದಿನಕ್ಕೆ ಮ್ಯಾಗಿ ಮಾರಾಟ ಮಾಡಿ 21,000 ರೂ. ಸಂಪಾದಿಸಿದ್ದಾನೆಂದರೆ ಒಂದು ತಿಂಗಳಿಗೆ ಅಲ್ಲಿರುವ ಮ್ಯಾಗಿ ವ್ಯಾಪಾರಿಗಳ ಆದಾಯ ಇಂಜಿನಿಯರ್​​ಗಳಿಗಿಂತ ದುಪ್ಪಟ್ಟಾಯಿತಲ್ಲ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬಾದಲ್ ಠಾಕೂರ್ ಪರ್ವತಗಳಲ್ಲಿ ಸಣ್ಣದೊಂದು ಮ್ಯಾಗಿ ಸ್ಟಾಲ್ ಹಾಕಿದ್ದ. ಕೇವಲ ಒಂದು ಟೇಬಲ್, ಒಂದು ಎಲ್‌ಪಿಜಿ ಸಿಲಿಂಡರ್, ಕೆಲವು ಪಾತ್ರೆಗಳನ್ನು ಇಟ್ಟುಕೊಂಡು ಒಂದು ಟಾರ್ಪಲ್ ಹಾಕಿಕೊಂಡು ಸ್ಟಾಲ್ ಹಾಕಿದ್ದ. ತಂಪಾದ ಸ್ಥಳದಲ್ಲಿ ಬಿಸಿ ಮ್ಯಾಗಿ ಎಷ್ಟು ಮಾರಾಟವಾಗುತ್ತದೆ ಎಂದು ನೋಡುವುದು ಅವನ ಉದ್ದೇಶವಾಗಿತ್ತು. ಈ ವೇಳೆ ಬಾದಲ್ ಠಾಕೂರ್ ಒಂದು ದಿನದಲ್ಲಿ 300ಕ್ಕೂ ಹೆಚ್ಚು ಮ್ಯಾಗಿ ಪ್ಲೇಟ್‌ಗಳನ್ನು ಮಾರಾಟ ಮಾಡಿದ್ದಾನೆ. ಕೇವಲ ನಾಲ್ಕೈದು ಗಂಟೆಗಳಲ್ಲಿ ಸುಮಾರು 200 ಪ್ಲೇಟ್‌ಗಳು ಮಾರಾಟವಾದವು. ಇಡೀ ದಿನದ ಒಟ್ಟು ಪ್ಲೇಟ್‌ಗಳು 300ರಿಂದ 350ರವರೆಗೆ ತಲುಪಿದವು.

ಇದನ್ನೂ ಓದಿ: ಮಗನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕತ್ತಿಯಿಂದ ಕೊಚ್ಚಿ ಕೊಂದ ರೈತ

ಆತ ಒಂದು ಪ್ಲೇಟ್ ಪ್ಲೇನ್ ಮ್ಯಾಗಿಯನ್ನು 70 ರೂ.ಗೆ ಮಾರಾಟ ಮಾಡಿದ್ದರೆ, ಪನೀರ್ ಮ್ಯಾಗಿಯನ್ನು 100 ರೂ.ಗೆ ಮಾರಾಟ ಮಾಡಿದ್ದ. ಪ್ರತಿ ಪ್ಲೇಟ್‌ಗೆ ಸರಾಸರಿ 70 ರೂ. ಬೆಲೆ ಇದ್ದರೂ, ಒಟ್ಟು ದೈನಂದಿನ ಮಾರಾಟ ಸುಮಾರು 21,000 ಆಗಿತ್ತು. ಈ ಅಂಕಿ ಅಂಶವು ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಅತ್ಯಂತ ಆಶ್ಚರ್ಯಗೊಳಿಸಿದೆ. ಆತ ತನ್ನ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವೀಡಿಯೊ ಈಗ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 pm, Thu, 29 January 26

Source link

ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್​: ಕೊನೆಗೂ JDS ನಾಯಕಿಯ ಪುತ್ರ ಅರೆಸ್ಟ್​​ – Kannada News | Karwar: Rishala DSouza Suicide Case; JDS Leader Son Chirag Kotharkar Arrested

ಆರೋಪಿ ಚಿರಾಗ್​​ ಕೊಠಾರಕರ್, ರಿಶೇಲ್ ಡಿಸೋಜಾImage Credit source: tv9 kannada

ಕಾರವಾರ, ಜನವರಿ 29: ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ (Rishala D’Souza) ಆತ್ಮಹತ್ಯೆ ಪ್ರಕರಣ ಎರಡು ಗ್ರಾಮಗಳ ವೈಮನಸ್ಸಿಗೆ ಕಾರಣವಾಗಿದಲ್ಲದೇ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕ್ರಿಶ್ಚಿಯನ್ ಸಮುದಾಯ ಸಿಡಿದೆದ್ದಿತ್ತು. ಯುವಕನ ಬಂಧನಕ್ಕೆ ಆಗ್ರಹಿಸಿ ಕಾರವಾರದಲ್ಲಿ ಪ್ರತಿಭಟನೆ ನಡೆದಿತ್ತು. ಇದೀಗ ಕೊನೆಗೂ JDS ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ್​​ ಪುತ್ರ ಆರೋಪಿ ಚಿರಾಗ್​​ನನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ (Arrest).

ಘಟನೆ ಹಿನ್ನೆಲೆ 

ಉತ್ತರ ಕನ್ನಡದ ಕಾರವಾರದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿ ಪುತ್ರ ಚಿರಾಗ್​ ಕಿರುಕುಳದಿಂದ ನೊಂದಿದ್ದ ರಿಶೇಲ್ ಡಿಸೋಜಾ ಜನವರಿ 9ರಂದು ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳನ್ನ ಪ್ರಿತಿಸುವಂತೆ ಚಿರಾಗ್ ಪಿಡಿಸುತ್ತಿದ್ದ ಎಂದು ಮೃತಳ ತಂದೆ ಕ್ರಿಸ್ತೋದ ಡಿಸೋಜಾ ಅವರು ಜನವರಿ 10 ರಂದು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್​: ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ; ಕಾರಣ ಇಲ್ಲಿದೆ

ಮಗಳ ದೇಹದ ಮೇಲೆ ಕಚ್ಚಿದ ಮಾರ್ಕ್ ಇರುವುದನ್ನು ಕಂಡು ತಂದೆ ಅತ್ಯಾಚಾರದ ಅನುಮಾನ ವ್ಯಕ್ತಪಡಿಸಿದ್ದರು. ಅತ್ತ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ, ಇತ್ತ ಆರೋಪಿ ಚಿರಾಗ್ ತನ್ನ ತಂದೆ-ತಾಯಿ ಜೊತೆ ನಾಪತ್ತೆ ಆಗಿದ್ದ. 20 ದಿನಗಳಿಂದ ಆರೋಪಿಗಾಗಿ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ತನ್ನ ಅಂಕಲ್ ಜತೆ ಚೆನ್ನೈನಲ್ಲಿದ್ದ ಚಿರಾಗ್​​ನನ್ನು​ ಇದೀಗ ಬಂಧಿಸಿದ್ದಾರೆ.

ಇದನ್ನೂ ಓದಿ: JDS ಮುಖಂಡೆ ಪುತ್ರನ ಕಿರುಕುಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ: ಸಿಡಿದೆದ್ದ ಕ್ರಿಶ್ಚಿಯನ್ ಸಮುದಾಯ

ಇನ್ನು ಇಂದು ಕಾರವಾರ ಜಿಲ್ಲಾ ನ್ಯಾಯಲಯದಲ್ಲಿ ಪ್ರಕರಣದ ಅರ್ಜಿ ವಿಚಾರಣೆ ನಡೆದಿತ್ತು. ಆರೋಪಿ ಪರ ವಕೀಲ ನಾಗರಾಜ್ ನಾಯ್ಕ್​​ ಸುಮಾರು 2500 ಪುಟಗಳ ಚಾಟಿಂಗ್ ಲಿಸ್ಟ್ ಸೇರಿದಂತೆ ಹತ್ತಾರು ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಿದ್ದರು. ಆರೋಪಿ ಚಿರಾಗ್​​ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಆದರೆ ಅಷ್ಟರಲ್ಲಿ ತಿರ್ಪು ಕಾಯ್ದಿರಿಸಿ ಜನವರಿ 31ಕ್ಕೆ ಮುಂದೂಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೇಲ್ ಮೇಲೆ ಜೈಲಿನಿಂದ ಬಿಡುಗಡೆಗೊಂಡ ಕೈ ಶಾಸಕ ವಿರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್ – Kannada News | Illegal Betting Case: ED attaches Chitradurga Congress MLA KC Veerendra Puppy property worth Rs 177 crore

ಬೆಂಗಳೂರು/ಚಿತ್ರದುರ್ಗ, (ಜನವರಿ 29): ಅಕ್ರಮ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ (Illegal Betting Case) ಸಂಬಂಧಿಸಿದಂತೆ ಚಿತ್ರದುರ್ಗ ಕಾಂಗ್ರೆಸ್ ಶಾಸಕ  ಕೆ.ಸಿ. ವಿರೇಂದ್ರ ಪಪ್ಪಿಗೆ (KC Veerendra Puppy )ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿಂದೆ ದಾಳಿ ವೇಳೆ ಸಿಕ್ಕಿದ್ದ ಕೋಟ್ಯಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನ, ಬೆಳ್ಳಿ ವಶಕ್ಕೆ ಪಡೆದುಕೊಂಡಿತ್ತು. ಇದೀಗ ವಿರೇಂದ್ರ ಪಪ್ಪಿಗೆ ಸೇರಿದ ಕೃಷಿ ಜಮೀನು, ನಿವೇಶನ ಸೇರಿ ಇತರೆ  ಒಟ್ಟು 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದೆ. ಈ ಮೂಲಜ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿದ್ದ ವಿರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್ ಕೊಟ್ಟಿದೆ.

ಆನ್​ಲೈನ್​ ಬೆಟ್ಟಿಂಗ್ ಹಗರಣ ಸಂಬಂಧ ಇಡಿ ಅಧಿಕಾರಿಗಳು ವಿರೇಂದ್ರ ಪಪ್ಪಿ ಮನೆಗಳ ಮೇಲೆ ದಾಳಿ ಮಾಡಿತ್ತು. ಆಗ ವಿರೇಂದ್ರ ಪಪ್ಪಿ ಅವರನ್ನು ಬಂಧಿಸಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿತ್ತು. ಇದೀಗ ಮತ್ತೆ ಸಿ ಅಕ್ರಮ ಹಣದಿಂದ ಸಂಪಾದನೆ ಮಾಡಿದ ಕೃಷಿ ಜಮೀನು, ನಿವೇಶನ ಸೇರಿ 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಇದನ್ನೂ ಓದಿ: ಚಿತ್ರದುರ್ಗ ಕೈ ಶಾಸಕ ವಿರೇಂದ್ರ ಪಪ್ಪಿ ಖಜಾನೆಯನ್ನೇ ತೆರೆದಿಟ್ಟ ಇಡಿ: ಲಕ್ಸುರಿ ಕಾರು, ಚಿನ್ನಾಭರಣ ಪತ್ತೆ

ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಆನ್ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ತನಿಖೆ ವೇಳೆ ಹಗರಣದಲ್ಲಿ ಕೆ.ಸಿ.ವೀರೇಂದ್ರ ಮತ್ತು ಸಹಚರರು ಮಾಸ್ಟರ್ ಮೈಂಡ್ ಎನ್ನುವುದು ಗೊತ್ತಾಗಿದೆ. ಅಲ್ಲದೇ ನೂರಾರು ಮ್ಯೂಲ್ ಅಕೌಂಟ್ ಬಳಸಿ ಅಕ್ರಮ ಹಣ ವರ್ಗಾವಣೆ ಪತ್ತೆಯಾಗಿದೆ. ತನಿಖೆ ವೇಳೆ ಸಿಕ್ಕ ಈ ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ಕೆ ಸಿ ವೀರೇಂದ್ರ ಆಸ್ತಿ ಜಪ್ತಿ ಮಾಡಲಾಗಿದೆ.

ಈ ಹಿಂದೆ ಪ್ರಕರಣ ಸಂಬಂಧ 60ಕ್ಕೂ ಹೆಚ್ಚು ಸ್ಥಳದಲ್ಲಿ ದಾಳಿ ನಡೆಸಿದ್ದ ಇಡಿ, ಚಿನ್ನ,ನಗದು,ಬೆಳ್ಳಿ, ವಾಹನಗಳನ್ನ ವಶಪಡಿಸಿಕೊಂಡಿತ್ತು. ಒಟ್ಟಾರೆ ಪ್ರಕರಣದಲ್ಲಿ ಇಲ್ಲಿವರೆಗೂ 320 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಇನ್ನು ಹಗರಣದಲ್ಲಿ 2,300 ಕೋಟಿ ರೂಪಾಯಿ ಅಧಿಕ ಅಕ್ರಮ ನಡೆದಿರುವುದು ಪತ್ತೆಯಾಗಿದ್ದು, ಈ ಸಂಬಂಧ ಇಡಿ ತನಿಖೆ ಮುಂದುವರೆಸಿದೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PAK vs AUS: ಪಾಕಿಸ್ತಾನದ ವಿರುದ್ಧ ಸೋತ ಆಸ್ಟ್ರೇಲಿಯಾ – Kannada News | Pakistan Dominates Australia in 1st T20, Secures 1 0 Series Lead and Boosts World Cup Hopes

ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ (Pakistan vs Australia) ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಭರ್ಜರಿ ಜಯ ಸಾಧಿಸಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಪ್ರವಾಸಿ ತಂಡವನ್ನು 56 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಈ ಗೆಲುವು ಟಿ0 ವಿಶ್ವಕಪ್‌ಗೆ ಸಿದ್ಧತೆಯಲ್ಲಿರುವ ಪಾಕಿಸ್ತಾನದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪಾಕಿಸ್ತಾನ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಅದ್ಭುತ ಪ್ರದರ್ಶನ ನೀಡಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿತು.

168 ರನ್ ಕಲೆಹಾಕಿದ ಪಾಕಿಸ್ತಾನ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ತಂಡದ ಪರ ಸ್ಯಾಮ್ ಅಯೂಬ್ 22 ಎಸೆತಗಳಲ್ಲಿ 40 ರನ್ ಗಳಿಸಿ, ನಾಯಕ ಸಲ್ಮಾನ್ ಆಘಾ ಅವರೊಂದಿಗೆ ಎರಡನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಸಲ್ಮಾನ್ ಆಘಾ ಕೂಡ 39 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ಮಧ್ಯಮ ಓವರ್‌ಗಳಲ್ಲಿ ರನ್ ವೇಗ ನಿಧಾನವಾಯಿತು. ಟಿ20 ತಂಡಕ್ಕೆ ಮರಳಿದ ಬಾಬರ್ ಆಝಂ 20 ಎಸೆತಗಳಲ್ಲಿ ಕೇವಲ 24 ರನ್ ಗಳಿಸಿದರೆ, ಉಸ್ಮಾನ್ ಖಾನ್ 18 ರನ್‌ಗಳ ಕೊಡುಗೆ ನೀಡಿದರು ಮತ್ತು ಮೊಹಮ್ಮದ್ ನವಾಜ್ 15 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ಆಸ್ಟ್ರೇಲಿಯಾ ಪರ ಆಡಮ್ ಜಂಪಾ ಅದ್ಭುತ ಪ್ರದರ್ಶನ ನೀಡಿ 4 ಓವರ್‌ಗಳಲ್ಲಿ 24 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರೆ, ಕ್ಸೇವಿಯರ್ ಬಾರ್ಟ್ಲೆಟ್ ಮತ್ತು ಮಹ್ಲಿ ಬಿಯರ್ಡ್‌ಮನ್ ತಲಾ 2 ವಿಕೆಟ್‌ಗಳನ್ನು ಪಡೆದು ಪಾಕಿಸ್ತಾನ ದೊಡ್ಡ ಮೊತ್ತವನ್ನು ದಾಖಲಿಸದಂತೆ ತಡೆದರು. ಆದಾಗ್ಯೂ, ಈ ಸ್ಕೋರ್ ಗೆಲುವಿನ ಮೊತ್ತವಾಗಿ ಸಾಬೀತಾಯಿತು.

ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ ಪಾಕ್ ಆರಂಭಿಕರು

ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಫಲ

169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾದ ಇನ್ನಿಂಗ್ಸ್ ಸಂಪೂರ್ಣವಾಗಿ ಕುಸಿಯಿತು. ಇಡೀ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 146 ರನ್‌ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು 22 ರನ್‌ಗಳಿಂದ ಸೋತಿತು. ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾ ಪರ ಗರಿಷ್ಠ ಸ್ಕೋರರ್ 36 ರನ್‌ಗಳಿಸಿದರೆ, ಕ್ಸೇವಿಯರ್ ಬಾರ್ಟ್ಲೆಟ್ 34 ರನ್‌ಗಳ ಕೊಡುಗೆ ನೀಡಿದರು. ಟ್ರಾವಿಸ್ ಹೆಡ್ ಕೂಡ ಕೇವಲ 23 ರನ್‌ ಬಾರಿಸಿದರು. ಆದಾಗ್ಯೂ, ಆಸ್ಟ್ರೇಲಿಯಾ ತಮ್ಮ ಇನ್ನಿಂಗ್ಸ್‌ನಲ್ಲಿ 48 ಡಾಟ್ ಬಾಲ್‌ಗಳನ್ನು ಮಾಡಿದ್ದು, ಸೋಲಿಗೆ ಪ್ರಮುಖ ಕಾರಣವಾಯಿತು.

ಪಾಕಿಸ್ತಾನ ಪರ ಅಬ್ರಾರ್ ಅಹ್ಮದ್ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ಓವರ್‌ಗಳಲ್ಲಿ ಕೇವಲ 10 ರನ್ ನೀಡಿ ಎರಡು ವಿಕೆಟ್ ಪಡೆದರು. ಸ್ಯಾಮ್ ಅಯೂಬ್ ಕೂಡ ಎರಡು ವಿಕೆಟ್ ಪಡೆದರೆ, ಶದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:36 pm, Thu, 29 January 26

Source link

ಈ ವಾರ ಕನ್ನಡ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ: ಯಾವ ಚಿತ್ರಗಳು ರಿಲೀಸ್? – Kannada News | Vikalpa Valavaara and other Kannada movies releasing on 30 January

2026ನೇ ಸಾಲಿನ ಮೊದಲ ತಿಂಗಳು ಕೊನೆಗೊಳ್ಳುತ್ತಿದೆ. ‘ಲ್ಯಾಂಡ್​ಲಾರ್ಡ್’ ಮತ್ತು ‘ಕಲ್ಟ್’ ಸಿನಿಮಾಗಳಿಂದ ಕನ್ನಡ ಚಿತ್ರರಂಗ (Kannada Film Industry) ಉತ್ತಮ ಓಪನಿಂಗ್ ಪಡೆದುಕೊಂಡಿತು. ಜನವರಿ ಕೊನೇ ವಾರದಲ್ಲಿ ಒಂದಷ್ಟು ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬೇರೆ ಬೇರೆ ಪ್ರಕಾರದ ಸಿನಿಮಾಗಳು ತೆರೆಕಾಣುತ್ತಿವೆ. ‘ವಲವಾರ’, ‘ವಿಕಲ್ಪ’, ‘ಅಮೃತ ಅಂಜನ್’, ‘ರಕ್ತ ಕಾಶ್ಮೀರ’, ‘ಸೀಟ್ ಎಡ್ಜ್’, ‘ಚೌಕಿದಾರ್’ (Chowkidar) ಮುಂತಾದ ಸಿನಿಮಾಗಳು ಪ್ರೇಕ್ಷಕರ ಎದುರು ಬರುತ್ತಿವೆ. ಆ ಮೂಲಕ ಸಿನಿಪ್ರಿಯರಿಗೆ ಹೆಚ್ಚಿನ ಆಯ್ಕೆ ಸಿಗುತ್ತಿದೆ. ಜನವರಿ 30ರಂದು ತೆರೆಕಾಣಲಿರುವ ಸಿನಿಮಾಗಳ (Kannada Cinema) ಬಗ್ಗೆ ಇಲ್ಲಿದೆ ಮಾಹಿತಿ..

ವಲವಾರ: ಟ್ರೇಲರ್ ಮೂಲಕ ‘ವಲವಾರ’ ಸಿನಿಮಾ ಗಮನ ಸೆಳೆದಿತ್ತು. ಈ ಸಿನಿಮಾದಲ್ಲಿ ಮಕ್ಕಳು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಟ್ರೇಲರ್ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಸುತನ್ ಗೌಡ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಗೂ ಮುನ್ನ ಪ್ರೀಮಿಯರ್ ಶೋಗಳ ಮೂಲಕ ‘ವಲವಾರ’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಅಮೃತ ಅಂಜನ್: ಯೂಟ್ಯೂಬ್ ಕಿರುಚಿತ್ರಗಳ ಮೂಲಕ ಫೇಮಸ್ ಆದ ಕಲಾವಿದರು ಸೇರಿಕೊಂಡು ‘ಅಮೃತ ಅಂಜನ್’ ಸಿನಿಮಾ ಮಾಡಿದ್ದಾರೆ. ಸುಧಾಕರ್ ಗೌಡ, ಪಾಯಲ್ ಚಂಗಪ್ಪ, ಗೌರವ್ ಶೆಟ್ಟಿ, ಕಾರ್ತಿಕ್ ಶ್ರೀಭಾಗ್ಯ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಮಿಡಿ ಇಷ್ಟಪಡುವ ಪ್ರೇಕ್ಷಕರು ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

ರಕ್ತ ಕಾಶ್ಮೀರ: ಹಲವು ವರ್ಷಗಳ ಹಿಂದೆಯೇ ಚಿತ್ರೀಕರಣಗೊಂಡಿದ್ದ ‘ರಕ್ತ ಕಾಶ್ಮೀರ’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ರಮ್ಯಾ ದಿವ್ಯ ಸ್ಪಂದನಾ, ಉಪೇಂದ್ರ ಅವರು ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ವಿಶೇಷ ಹಾಡಿನಲ್ಲಿ ದರ್ಶನ್, ಪುನೀತ್ ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರಮೇಶ್ ಅರವಿಂದ್, ಆದಿತ್ಯ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ವಿಕಲ್ಪ: ಸೈಕಲಾಜಿಕಲ್ ಕಥಾಹಂದರ ಹೊಂದಿರುವ ‘ವಿಕಲ್ಪ’ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಬೆಂಗಳೂರು ಮತ್ತು ಮಲೆನಾಡಿನ ಭಾಗದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಪೃಥ್ವಿರಾಜ್ ಪಾಟೀಲ್ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸಿದ್ದಾರೆ. ನಾಗಶ್ರೀ ಹೆಬ್ಬಾರ್, ಆಯುಷ್, ಗಣಪತಿ ಹೆಗಡೆ, ಸ್ವರೂಪ್, ಸಂಧ್ಯಾ, ಪೂಜಾ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ

ಸೀಟ್ ​ಎಡ್ಜ್: ಯೂಟ್ಯೂಬ್ ವ್ಲಾಗರ್ ಕಹಾನಿ ಇರುವ ‘ಸೀಟ್ ಎಡ್ಜ್’ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರು ನಟಿಸಿದ್ದಾರೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಕಹಾನಿ ಈ ಸಿನಿಮಾದಲ್ಲಿ ಇದೆ. ಹಾರರ್, ಥ್ರಿಲ್ಲರ್ ಪ್ರಕಾರದ ಈ ಸಿನಿಮಾದಲ್ಲಿ ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ ಮುಂತಾದ ಕಲಾವಿದರು ನಟಿಸಿದ್ದಾರೆ.

ಚೌಕಿದಾರ್: ಪೃಥ್ವಿ ಅಂಬಾರ್ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಧನ್ಯಾ ರಾಮ್​ಕುಮಾರ್, ಸಾಯಿಕುಮಾರ್, ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿದ್ದಾರೆ. ಫ್ಯಾಮಿಲಿ ಸೆಂಟಿಮೆಂಟ್ ಕಥೆ ಈ ಸಿನಿಮಾದಲ್ಲಿದೆ. ಈ ಸಿನಿಮಾಗಳ ಜೊತೆ ‘ಶ್ರೀಜಗನ್ನಾಥ ದಾಸರು 2’, ‘ಮಾವುತ’ ಮುಂತಾದ ಸಿನಿಮಾಗಳು ಕೂಡ ಬಿಡುಗಡೆ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ – Kannada News | CM Siddaramaiah speech in 17th Bengaluru International Film Festival Inauguration

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ (BIFFes) ಉದ್ಘಾಟಿಸಿ ಮಾತನಾಡಿದರು. ‘ಈ ಬಾರಿ 70 ದೇಶಗಳ ಆಯ್ದ ಸುಮಾರಿ 240 ಸಿನಿಮಾಗಳ ಪ್ರದರ್ಶನ ಆಗಲಿದೆ. ರಾಯಬಾರಿಯಾಗಿ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿದ್ದೇನೆ. ಅವರು ಬರೀ ಸಿನಿಮಾಗೆ ಸೀಮಿತ ಆಗಿಲ್ಲ. ಸಾಮಾಜಿಕ ಹೋರಾಟದಲ್ಲಿ ಕೂಡ ಭಾಗಿ ಆಗಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಕಳೆದ ಬಾರಿ ಸರ್ವ ಜನಾಂಗದ ಶಾಂತಿಯ ತೋಟ ಥೀಮ್​​ನಲ್ಲಿ ಚಿತ್ರೋತ್ಸವ ಮಾಡಲಾಗಿತ್ತು. ಈಗ ಬಾರಿ ‘ಸ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ಆಯ್ಕೆ ಮಾಡಿದ್ದೇನೆ. ಚಲನಚಿತ್ರ ಬರೀ ಮನರಂಜನೆಗೆ ಸೀಮಿತವಾಗಿರುವುದು ಅಲ್ಲ. ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದುವ ಕೆಲಸ ಆಗಬೇಕು’ ಎಂದು ಸಿದ್ದರಾಮಯ್ಯ (CM Siddaramaiah) ಹೇಳಿದರು.

‘ಸಮಾಜದಲ್ಲಿ ಇಂದು ಅಸಮಾನತೆ, ಬಡತನ ಇದೆ. ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು ಇದ್ದಾರೆ. ಅವರ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ಜಗತ್ತಿನ ಮುಂದೆ ಇಡಬೇಕು. ಈ ಕೆಲಸವನ್ನು ರಾಜ್​​ಕುಮಾರ್ ಅವರ ಸಿನಿಮಾಗಳು ಯಶಸ್ವಿಯಾಗಿ ಮಾಡಿದ್ದನ್ನು ನಾವು ನೋಡಿದ್ದೇನೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಾಕೆ ಮಾಡುತ್ತೇವೆ ಎಂದರೆ, ಬೇರೆ ದೇಶಗಳ ಜನಜೀವನ, ರಾಜಕೀಯ, ಸಮಾಜ, ಪುರುಷರು-ಮಹಿಳೆಯರ ಸ್ಥಿತಿಗತಿ ಮುಂತಾದ್ದನ್ನು ಅರ್ಥ ಮಾಡಿಕೊಳ್ಳೋದು ಮುಖ್ಯ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

‘ಚಲನಚಿತ್ರೋತ್ಸವ ಒಂದು ಸುವರ್ಣ ಅವಕಾಶ. ಈ ಅವಕಾಶ ಬಳಸಿಕೊಂಡು ನಾವು ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡಬೇಕು. ಸಮಾಜದಲ್ಲಿ ಬದಲಾವಣೆ ಆಗದೇ ಇದ್ದರೆ ಸಿನಿಮಾಗಳು ಕೇವಲ ಮನರಂಜನೆಗೆ ಇರುವ ವಸ್ತುಗಳು ಆಗುತ್ತವೆ. ನಾವೆಲ್ಲ ಮನುಷ್ಯರು. ಮನುಷ್ಯರಾಗಿಯೇ ಬಾಳಬೇಕಾಗಿರುವುದು ಅತ್ಯಂತ ಅವಶ್ಯಕ’ ಎಂದರು ಸಿದ್ದರಾಮಯ್ಯ.

‘ನಾವು ಪ್ರತಿ ವ್ಯಕ್ತಿಯನ್ನು ಪ್ರೀತಿ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಾನತೆಯ ಸಮಾಜ ಕಟ್ಟಲು ಸಾಧ್ಯತೆ ಆಗುತ್ತದೆ. ಅಸಮಾನತೆಯನ್ನು ಹೋಗಲಾಡಿಸುವ ಕೆಲಸವನ್ನು ಸಿನಿಮಾ ಮಾಧ್ಯಮದ ಮೂಲಕ ಮಾಡಬೇಕು. ಬೇರೆ ದೇಶಗಳಲ್ಲಿ ಯಾಕೆ ಬದಲಾವಣೆ ಆಗಿದೆ? ನಮ್ಮಲ್ಲಿ ಯಾಕೆ ಬದಲಾವಣೆ ಆಗಿಲ್ಲ ಎಂಬುದನ್ನು ಸಿನಿಮಾಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು’ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ನೋಡಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ವಿಡಿಯೋ ನೋಡಿ..

‘ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ಸಿನಿಮಾರಂಗದ ಅಭಿವೃದ್ಧಿಗೆ ನೀಡುತ್ತೇವೆ. ನಮ್ಮ ಬದುಕನ್ನು ಹಸನು ಮಾಡುವಂತಹ ಸಿನಿಮಾಗಳು ಕನ್ನಡದಲ್ಲಿ ಬರಲಿ. ಈ ಚಲನಚಿತ್ರೋತ್ಸವ ಯಶಸ್ವಿ ಆಗಲಿ. ಜೈಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಪೂರ್ಣಗೊಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರಲಿವೆ ನೋಟು ಬದಲಿಸಿ ಚಿಲ್ಲರೆ ಕೊಡುವ ಹೈಬ್ರಿಡ್ ಎಟಿಎಂಗಳು – Kannada News | Govt plans Hybrid ATMs that dispense smaller denomination notes

ನವದೆಹಲಿ, ಜನವರಿ 29: ಡಿಜಿಟಲ್ ಟ್ರಾನ್ಸಾಕ್ಷನ್ ವ್ಯಾಪಕವಾಗಿ ಹೆಚ್ಚಾಗಿದ್ದರೂ ಕ್ಯಾಷ್ ವಹಿವಾಟು (cash transactions) ಕೂಡ ಸಾಕಷ್ಟು ನಡೆಯುತ್ತದೆ. 10, 20, 50 ಇತ್ಯಾದಿ ಸಣ್ಣ ಸಣ್ಣ ಮೊತ್ತದ ನೋಟುಗಳು ಕೆಲವೊಮ್ಮೆ ಬಹಳ ಅಗತ್ಯ ಬೀಳುತ್ತವೆ. ಚಿಲ್ಲರೆ ಅಂಗಡಿಯಲ್ಲಿ 500 ರುಪಾಯಿಗೋ ಅಥವಾ ನೂರು ರುಪಾಯಿಗೋ ಚಿಲ್ಲರೆ ನೀಡಲು ನಿರಾಕರಿಸುತ್ತಾರೆ. ಯುಪಿಐ ಮೂಲಕ ಪಾವತಿಸಲಾಗದವರಿಗೆ ಈ ಸಂದರ್ಭ ಕಷ್ಟವಾಗಬಹುದು. ಇದನ್ನು ತಪ್ಪಿಸಲು ಸರ್ಕಾರ ಹೈಬ್ರಿಡ್ ಎಟಿಎಂ ಮೆಷೀನ್​ಗಳನ್ನು ಅಳವಡಿಸಲು ಯೋಜಿಸಿದೆ ಎಂದು ವರದಿಗಳು ಹೇಳುತ್ತಿವೆ.

ಈಗಿರುವ ಎಟಿಎಂ ಮೆಷೀನ್​ಗಳಲ್ಲಿ 500 ರೂ ಮತ್ತು 100 ರೂ ನೋಟುಗಳು ಸಿಗುತ್ತವೆ. ಸರ್ಕಾರ ಪ್ಲಾನ್ ಮಾಡಿರುವ ಹೊಸ ಎಟಿಎಂ ಮೆಷೀನ್​ಗಳು 10 ರೂ, 20 ರೂ ಮತ್ತು 50 ರೂ ನೋಟುಗಳನ್ನು ಡಿಸ್ಪೆನ್ಸ್ ಮಾಡುತ್ತವೆ.

ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ

ಹಾಗೆಯೇ, ಈ ಎಟಿಎಂಗಳಲ್ಲಿ ನೋಟು ವಿನಿಮಯಕ್ಕೂ ಅವಕಾಶ ಕೊಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ ಎನ್ನಲಾಗಿದೆ. ಈ ಪ್ರಸ್ತಾಪದ ಪ್ರಕಾರ, ನೀವು ನಿಮ್ಮಲ್ಲಿರುವ 100 ರೂ ಅಥವಾ 500 ರೂ ನೋಟುಗಳನ್ನು ಎಟಿಎಂಗೆ ಫೀಡ್ ಮಾಡಿದರೆ, ಆ ಮೌಲ್ಯದಷ್ಟು ಸಣ್ಣ ನೋಟುಗಳನ್ನು ಮರಳಿಸುತ್ತದೆ. ಇಂಥ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೆ ಇದೆ.

ವರದಿಗಳ ಪ್ರಕಾರ ಮುಂಬೈನಲ್ಲಿ ಈಗಾಗಲೇ ಈ ಹೈಬ್ರಿಡ್ ಎಟಿಎಂಗಳನ್ನು ಕೆಲವೆಡೆ ಪ್ರಾಯೋಗಿಕವಾಗಿ ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆ, ರೈಲ್ವೆ ಸ್ಟೇಷನ್, ಬಸ್ ಡಿಪೋ, ಆಸ್ಪತ್ರೆ, ಸರ್ಕಾರಿ ಕಚೇರಿ ಇತ್ಯಾದಿ ಕ್ಯಾಷ್ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಇಂಥ ಪ್ರಾಯೋಗಿಕ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್

ಹೈಬ್ರಿಡ್ ಎಟಿಎಂಗಳ ಬಳಕೆಗೆ ಶುಲ್ಕ ಇರುತ್ತದಾ?

ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕುಗಳಿಗೆ ವೆಚ್ಚವಾಗುತ್ತದೆ. ಸ್ಥಾಪನೆ ವೆಚ್ಚ ಹಾಗೂ ಮೈಂಟನೆನ್ಸ್ ವೆಚ್ಚವೂ ಇರುತ್ತದೆ. ಹೀಗಾಗಿ, ಗ್ರಾಹಕರಿಂದ ಇಂತಿಷ್ಟು ಶುಲ್ಕ ಪಡೆಯುವ ಸಾಧ್ಯತೆ ಇಲ್ಲದಿಲ್ಲ. ಸಣ್ಣ ಮೊತ್ತದ ನೋಟುಗಳನ್ನು ಸರ್ಕಾರ ಹೆಚ್ಚೆಚ್ಚು ಮುದ್ರಿಸಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಾಳಿಪಟಕ್ಕೆ ದಾರ ಕೊಡಿಸಲಿಲ್ಲವೆಂದು 11 ವರ್ಷದ ಬಾಲಕ ಆತ್ಮಹತ್ಯೆ – Kannada News | Punjab village child hang himself after his Family not agreed to buy kite thread

ನವದೆಹಲಿ, ಜನವರಿ 29: ಗಾಳಿಪಟ (Kite) ಹಾರಿಸಲು ದಾರ ಕೊಡಿಸಲಿಲ್ಲ ಎಂದು ಮನನೊಂದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್​​ನಲ್ಲಿ ನಡೆದಿದೆ. 11 ವರ್ಷದ ಬಾಲಕನೊಬ್ಬ ಗಾಳಿಪಟ ಹಾರಿಸಲು ದಾರ ಕೊಡಿಸಿ ಎಂದು ಮನೆಯವರ ಬಳಿ ಒತ್ತಾಯಿಸಿದ್ದ. ಅದಕ್ಕೆ ಅವರು ಒಪ್ಪಿರಲಿಲ್ಲ. ಹೋಗಿ ಓದಿಕೋ ಎಂದು ಅವರು ಗದರಿ ರೂಂಗೆ ಕಳುಹಿಸಿದ್ದರು. ಸ್ವಲ್ಪ ಹೊತ್ತಾದ ಮೇಲೆ ರೂಂ ಬಳಿ ಹೋಗಿ ನೋಡಿದಾಗ ಆ ರೂಂ ಒಳಗಿಂದ ಲಾಕ್ ಆಗಿತ್ತು. ಆ ಬಾಲಕನನ್ನು ಕರೆದರೂ ಪ್ರತಿಕ್ರಿಯೆ ಬರಲಿಲ್ಲ.

ಅನುಮಾನದಿಂದ ಕುಟುಂಬದ ಸದಸ್ಯರು ಬಾಗಿಲು ಒಡೆದು ಒಳಗೆ ಹೋದಾಗ, ಮಗು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕರ್ಟನ್ ರಾಡ್‌ಗೆ ನೇಣು ಬಿಗಿದುಕೊಂಡು ಆ ಬಾಲಕ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಹಳೇ ಪ್ರೇಯಿಸಿ ಜತೆ ಪತಿ ಆತ್ಮಹತ್ಯೆ

ಕಪುರ್ತಲಾ ಜಿಲ್ಲೆಯ ಫಾಗ್ವಾರಾದ ಪನ್ಶ್ತಾ ಗ್ರಾಮದಲ್ಲಿ ಈ ಮಾಡಿಕೊಂಡ ದುರಂತ ಘಟನೆ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ, ಮಗುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

(ಸೂಚನೆ: ಆತ್ಮಹತ್ಯೆಯನ್ನು ಟಿವಿ9 ಪ್ರಚೋದಿಸುವುದಿಲ್ಲ. ಇದನ್ನು ಕೇವಲ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಆತ್ಮಹತ್ಯೆಯ ಯೋಚನೆ ಬಂದರೆ ಆಪ್ತರೊಂದಿಗೆ ಮಾತನಾಡಿ ಅಥವಾ ಮನಶಾಸ್ತ್ರಜ್ಞರ ಸಹಾಯ ಪಡೆಯಿರಿ)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಆಸ್ಪತ್ರೆ ರೋಗಿಗಳ ಮೊಟ್ಟೆ ಭಾಗ್ಯಕ್ಕೆ ಬ್ರೇಕ್? ಗೊಂದಲ ಮೂಡಿಸಿದ ಇಸ್ಕಾನ್ ನಡೆ – Kannada News | Karnataka government Hospital Food Menu Changes: Eggs Replaced by Soy

ರೋಗಿಗಳಿಗೆ ನೀಡಲಾಗುತ್ತಿರುವ ಊಟImage Credit source: tv9 kannada

ಬೆಂಗಳೂರು, ಜನವರಿ 29: ಸರ್ಕಾರಿ ಆಸ್ಪತ್ರೆ (government Hospital) ಅಂದರೆ ಸಾಕಷ್ಟು ರೋಗಿಗಳು ಆಸ್ಪತ್ರೆಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಚಿಕಿತ್ಸೆಗಿಂತ ಹೆಚ್ಚಾಗಿ ಊಟ ಸರಿ ಇರಲ್ಲ ಅನ್ನುವ ದೂರುಗಳೇ ಹೆಚ್ಚಾಗಿರುತ್ತದೆ. ಇದೀಗ ಇಂತಹ ದೂರುಗಳನ್ನು ಸರಿ ಪಡಿಸುವುದಕ್ಕೆ ಸರ್ಕಾರ ಮುಂದಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ಊಟದ ಮೆನು ಬದಲಾವಣೆ ಮಾಡಲಾಗಿದೆ. ಆದರೆ ಈ ಮೆನು ಬದಲಾವಣೆಯೇ ಇದೀಗ ದೊಡ್ಡ ತೊಂದರೆಗೆ ಕಾರಣವಾಗಿದೆ.

ಮೊಟ್ಟೆ ಭಾಗ್ಯಕ್ಕೆ ಬ್ರೇಕ್?

ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ವರದಾನವೆಂದು ಹೇಳಬಹುದು. ಆದರೆ ಇಂದಿಗೆ ಅದೆಷ್ಟೋ ಜನ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಹಿಂಜರಿಯುವವರು ಇದ್ದಾರೆ. ಇದಕ್ಕೆಲ್ಲಾ ಊಟ ಸರಿ ಇರಲ್ಲ ಎನ್ನುವುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು. ಹೀಗಾಗಿ ಆರೋಗ್ಯ ಇಲಾಖೆ ಹೊಸ ಮಾದರಿಯಲ್ಲಿ ಊಟ ನೀಡಲು ಮುಂದಾಗಿದೆ. ಇಸ್ಕಾನ್ ಜೊತೆ ಒಪ್ಪಂದ ಮಾಡಿಕೊಂಡು ಒಳ್ಳೆಯ ರುಚಿಕರ ಊಟ ಕೊಡುತ್ತಿದೆ. ಆದರೆ ಮೊಟ್ಟೆ ಮಾತ್ರ ಊಟದಲ್ಲಿ ನೀಡುತ್ತಿಲ್ಲ. ಇದು ಈಗ ಹೊಸ ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕರ್ನಾಟಕ ಪೊಲೀಸರಿಗೆ ಭರ್ಜರಿ ಗಿಫ್ಟ್, ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ

ನಗರದ ಕೆಸಿ ಜನರಲ್, ಜಯನಗರ ಹಾಗೂ ಸಿವಿ ರಾಮನ್ ಆಸ್ಪತ್ರೆಗಳಲ್ಲಿ ಊಟದ ಮೆನು ಬದಲಾಯಿಸಲಾಗಿದೆ. ಕಳೆದ 6 ತಿಂಗಳ ಹಿಂದೆಯೇ ಈ ಮೆನು ಬದಲಾವಣೆ ಮಾಡಲಾಗಿತ್ತು. ಇದೀಗ ಇದನ್ನೇ  ರಾಜ್ಯದ ಮತಷ್ಟು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಇಸ್ಕಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಆರೋಗ್ಯ ಇಲಾಖೆ, ಆಸ್ಪತ್ರೆಗಳಿಗೆ ಇಸ್ಕಾನ್ ಮೂಲಕ ಊಟ, ತಿಂಡಿ ನೀಡಲು ಮುಂದಾಗಿದೆ. ಆದರೆ ಈಗ ಮೆನು ಬದಲಾವಣೆಯಿಂದ ಪ್ರೋಟೀನ್ ಊಟ ಬದಲಾಗಿದೆ. ನ್ಯಾಷನಲ್ ಮೊಟ್ಟೆ ಸ್ಕೀಮ್ ಅಡಿ ಆಸ್ಪತ್ರೆಗಳಲ್ಲಿ ಊಟದ ಜೊತೆ ಒಂದು ಮೊಟ್ಟೆ ನೀಡಲಾಗುತ್ತಿತ್ತು. ಆದರೆ ಈಗ ಇಸ್ಕಾನ್ ದೇವಾಲಯದ ಊಟ ವಿತರಣೆ ಹಿನ್ನೆಲೆ ಮೆನುನಲ್ಲಿ ಮೊಟ್ಟೆಗೆ ಪರ್ಯಾಯವಾಗಿ ಸೋಯಾ ನೀಡಲು ಇಸ್ಕಾನ್ ಮುಂದಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದ ಮೊಟ್ಟೆಗೆ ಬ್ರೇಕ್ ಬಿದ್ದಿದೆ.

ಸರ್ಕಾರಿ ಆಸ್ಪತ್ರೆ ರೋಗಿಗಳ ಮೊಟ್ಟೆ ಭಾಗ್ಯಕ್ಕೆ ಬ್ರೇಕ್ ಹಾಕಿ, ಟು ಸೋಯಾ ಚಂಕ್ಸ್ ನೀಡಲಾಗುತ್ತಿದೆ. ಆ ಮೂಲಕ ರೋಗಿಗಳಿಗೆ ನೀಡಲಾಗುತ್ತಿದ್ದ ಮೊಟ್ಟೆ ಭಾಗ್ಯಕ್ಕೆ ಆರೋಗ್ಯ ಇಲಾಖೆ ಕತ್ತರಿ ಹಾಕಿದೆ. ರಾಷ್ಟ್ರೀಯ ಆಹಾರ ಪೌಷ್ಟಿಕಾಂಶದ ಸ್ಕೀಮ್ ಕೈಬಿಟ್ಟಿದೆ. ಆದರೆ ಮೊಟ್ಟೆ ನೀಡುವುದು ಅದರ ಅಡಿಯಲ್ಲೇ ಬರುವುದರಿಂದ ಆಸ್ಪತ್ರೆಗಳಿಗೆ ಗೊಂದಲ ಎದುರಾಗಿದೆ.

ಸದ್ಯ ನೀಡಲಾಗುತ್ತಿದ್ದ ಮೊಟ್ಟೆಯಷ್ಟೇ ಪ್ರತ್ಯೇಕವಾಗಿ ಬೇಯಿಸಿ ನೀಡಬೇಕಾ, ಬೇಡವಾ ಎನ್ನುವ ಗೊಂದಲಕ್ಕೆ ಆಸ್ಪತ್ರೆಗಳು ಸಿಲುಕಿವೆ. ಸದ್ಯ  ಒಪ್ಪಂದ ಮಾಡಿಕೊಂಡು ನೀಡಿರುವ ಮೆನುವಿನಲ್ಲಿ ಮೊಟ್ಟೆ ಸೇರಿಸಿಲ್ಲ, ಹೀಗಾಗಿ ಆಸ್ಪತ್ರೆಗಳಲ್ಲಿ ಮೊಟ್ಟೆ ನೀಡುತ್ತಿಲ್ಲ.

ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಊಟದ ಮೆನು

  • ಬೆಳ್ಳಗ್ಗೆ ಉಪಹಾರಕ್ಕೆ ಹಾಲು, ಕಾಫಿ, ಟೀ, ಬ್ರೆಡ್, ಉಪ್ಪಿಟ್ಟು
  • ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮೊಟ್ಟೆ, ಹಾಲು ಹಣ್ಣುಗಳು, ಪಲ್ಯ, ಚಪಾತಿ ಅನ್ನ-ಸಾಂಬರ್ ನೀಡಲಾಗುತ್ತದೆ.

ಇಸ್ಕಾನ್ ಮೆನು

  • ಚಿತ್ರಾನ್ನ, ರೊಟ್ಟಿ, ಉಪ್ಪಿಟ್ಟು, ಪೌಷ್ಟಿಕ ಕಾಳುಗಳು ಹಾಗೂ ಇನ್ನಿತರೆ ಬೆಳಗಿನ ಉಪಹಾರ ಸಿಗಲಿದೆ.
  • ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮುದ್ದೆ, ಸೋಯಾ, ಹಾಲು ಹಣ್ಣುಗಳು, ಹಣ್ಣಿನ ಜ್ಯೂಸ್, ಪಲ್ಯ, ಪಾಯಸಾ, ಸಾಂಬಾರ್, ಸಾಗು, ರೋಟಿ, ಚಪಾತಿ ಹೀಗೆ ಇನ್ನು ಹಲವಾರು ಊಟ ಕೂಡ ಇಸ್ಕಾನ್ ವತಿಯಿಂದ ದೊರೆಯಲಿದೆ.

ಡಯೆಟ್ ಫುಡ್ ಯಾರಿಗೆ? ಎಷ್ಟು ಖರ್ಚು?

  • ಜನರಲ್ ಡಯೆಟ್‌: 183 ರೂ
  • ಥೆರಪಿಯಲ್ಲಿರುವ ರೋಗಿಗಳಿಗೆ: 210 ರೂ
  • ಗರ್ಭಿಣಿ/ಬಾಣಂತಿ: 225 ರೂ
  • ಮಕ್ಕಳು: 170 ರೂ

ಇದನ್ನೂ ಓದಿ: ಸರ್ಕಾರದಿಂದ ಮಹತ್ವದ ಆದೇಶ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದವರಿಗೆ ಬಿಗ್ ಶಾಕ್

ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಪ್ಪೆ ಊಟ ಮಾಡುತ್ತಿದ್ದ ರೋಗಿಗಳಿಗೆ ಸರ್ಕಾರ ಮತ್ತಷ್ಟು ಪೌಷ್ಟಿಕ ಕೊಡಲು ಮುಂದಾಗಿದೆ. ಇಸ್ಕಾನ್​ನಿಂದ ಉತ್ತಮ ಊಟವು ಸಿಗುತ್ತಿದೆ. ಆದರೆ ಹೊಸ ಊಟ ನೀಡುವ ನೆಪದಲ್ಲಿ ಮೊಟ್ಟೆಯನ್ನ ಆರೋಗ್ಯ ಇಲಾಖೆ ಕಡೆಗಣಿಸಿರುವುದು ಎಷ್ಟು ಸರಿ ಎನ್ನುವ ಚರ್ಚೆ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಗನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕತ್ತಿಯಿಂದ ಕೊಚ್ಚಿ ಕೊಂದ ರೈತ – Kannada News | 60 year old Man Kills Leopard With Spear and Sickle To Save From Attack In Gujarat

ಅಹಮದಾಬಾದ್, ಜನವರಿ 29: ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ 60 ವರ್ಷದ ರೈತರೊಬ್ಬರು ತನ್ನನ್ನು ಮತ್ತು ತನ್ನ ಮಗನನ್ನು ರಕ್ಷಿಸಿಕೊಳ್ಳಲು ಚಿರತೆಯನ್ನು (Leopard Attack) ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆಯ ದಾಳಿಯ ನಂತರ ರೈತ ಬಾಬು ಅವರ ಮಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಕೊಂದಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬುಧವಾರ ರಾತ್ರಿ ಜಿಲ್ಲಾ ಕೇಂದ್ರವಾದ ವೆರಾವಲ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗ್ಯಾಂಗ್ಡಾ ಗ್ರಾಮದ ಹೊರವಲಯದಲ್ಲಿರುವ ತನ್ನ ಮನೆಯ ವರಾಂಡಾದಲ್ಲಿ ಬಾಬು ವಾಜಾ ವಿಶ್ರಾಂತಿ ಪಡೆಯುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಹತ್ತಿರದ ಹೊಲದಿಂದ ಹೊರಬಂದ ಚಿರತೆಯೊಂದು ಬಾಬು ಅವರ ಮೇಲೆ ಹಾರಿತು. ಆಗ ಅಲ್ಲಿಗೆ ಬಂದ ಅವರ ಮಗನ ಮೇಲೂ ದಾಳಿ ಮಾಡಿತು.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಬಾಬು ವಾಜಾ ಅವರ ಪ್ರಕಾರ, ಚಿರತೆ ಅವರ ತೋಳನ್ನು ಕಚ್ಚಿ ಹಿಡಿದು ಎಳೆಯಲು ಪ್ರಾರಂಭಿಸಿತು. “ನನ್ನ ಕಿರುಚಾಟ ಕೇಳಿ ನನ್ನ ಮಗ ಶಾರ್ದೂಲ್ ನನ್ನನ್ನು ರಕ್ಷಿಸಲು ಓಡಿ ಬಂದ. ಆದರೆ, ಚಿರತೆ ಅವನ ಮೇಲೆ ಹಾರಿ ಗಾಯಗೊಳಿಸಿತು. ನಾನು ಶಾರ್ದೂಲ್​ನನ್ನು ಉಳಿಸಲು ಪ್ರಯತ್ನಿಸಿದಾಗ ಚಿರತೆ ಮತ್ತೆ ನನ್ನ ಮೇಲೆ ಹಾರಿತು. ಆಗ ಏನು ಮಾಡುವುದೆಂದು ತಿಳಿಯದೆ ಅಲ್ಲೇ ಇದ್ದ ಕತ್ತಿಯನ್ನು ತೆಗೆದುಕೊಂಡು ಚಿರತೆಗೆ ಹೊಡೆದೆ” ಎಂದು ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ: ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬಾಬು ಮತ್ತು ಅವರ ಮಗನ ಮುಂಗೈ ಮತ್ತು ಹಣೆಯ ಮೇಲೆ ಗಾಯಗಳಾಗಿವೆ. ವರಾಂಡಾದಲ್ಲಿ ಇರಿಸಲಾಗಿದ್ದ ಕತ್ತಿಯನ್ನು ಹಿಡಿದು ಚಿರತೆಯನ್ನು ಕೊಲ್ಲಲಾಗಿದೆ. ಈ ಘಟನೆಯ ಬಗ್ಗೆ ತಿಳಿದ ನಂತರ, ಭರ್ವಾದ್ ಮತ್ತು ಅವರ ತಂಡ ಸ್ಥಳಕ್ಕೆ ತಲುಪಿ ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version