Headlines

IPL 2026 Final: ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್; ವಿಡಿಯೋ

ತನ್ನದೇ ಆಟಗಾರರ ಕಾಲೆಳೆದು ನಗೆ ಚಟಾಕಿ ಹಾರಿಸಲೆಂದೇ ಕಲಾವಿದನೊಬ್ಬನನ್ನು ತಂಡಕ್ಕೆ ಸೇರಿಸಿಕೊಂಡಿರುವ ಏಕೈಕ ಐಪಿಎಲ್ ಫ್ರಾಂಚೈಸಿಯೇ ಎಂದರೆ ಅದು ಆರ್​ಸಿಬಿ. 2014 ರಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡ ನಿರೂಪಕ ಮತ್ತು ಹಾಸ್ಯಗಾರ ಡ್ಯಾನಿಶ್ ಸೇಠ್ ಕಿತಾಪತಿ ಮಾಡುವುದರಿಂದಲೇ ಫೇಮಸ್. ಆರ್​ಸಿಬಿ ಪಾಳಯದಲ್ಲಿ ಮಿ. ನಾಗ್ಸ್ ಎಂದೇ ಖ್ಯಾತರಾಗಿರುವ ಡ್ಯಾನಿಶ್ ಸೇಠ್ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಕ್ಯಾಂಪ್​​ಗೆ ಭೇಟಿ ನೀಡಿ ತಂಡದ ಆಟಗಾರರ ಕಾಲೆಳೆಯುತ್ತಾ, ಜನರನ್ನು ರಂಚಿಸುತ್ತಿರುತ್ತಾರೆ. ಅದರಂತೆ ಈ ಭಾರಿಯ ಐಪಿಎಲ್​ನಲ್ಲೂ ಅದೇ ಕೆಲಸ ಮಾಡಿರುವ ಡ್ಯಾನಿಶ್…

Read More

ಕ್ಷೇತ್ರ ತ್ಯಾಗಕ್ಕೆ ಸುಮಲತಾಗೆ ಸಿಗುತ್ತಾ ಪ್ರತಿಫಲ? ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ನಡೆ

ಬೆಂಗಳೂರು, (ಜೂನ್ 01): ಕರ್ನಾಟಕ ರಾಜ್ಯಸಭಾ  ಚುನಾವಣೆ (Karnataka Rajyasabha Election) ತೀವ್ರ ಕುತೂಹಲ ಮೂಡಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​​​ನಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆದಿವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಕೇವಲ ಒಂದೇ ಸ್ಥಾನ ದೊರೆಯಲಿದ್ದು, ಒಂದು ಸ್ಥಾನಕ್ಕೆ ದೋಸ್ತಿಗಳ ಮಧ್ಯೆ ಕುಸ್ತಿ ಶುರುವಾಗಿದೆ. ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡರನ್ನೆ (HD Devegowda) ಮುಂದುವರೆಸಬೇಕೆಂದು ಪಟ್ಟು ಹಿಡಿದಿದೆ. ಆದರೂ  ಇನ್ನೂ ಖಚಿತತೆ ಸಿಕ್ಕಿಲ್ಲ. ಇನ್ನೊಂದೆಡೆ ಬಿಜೆಪಿ (BJP) ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದೆ. ಮೊನ್ನೆ…

Read More

ಪದೇಪದೇ ತಲೆನೋವು ಬರುತ್ತಾ? ಈ ರೀತಿಯಾಗುವುದಕ್ಕೂ ಹೈ ಬಿಪಿಗೂ ಸಂಬಂಧವಿದೆಯೇ?

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ (High Blood Pressure) ಸಮಸ್ಯೆ ಯುವಕರಲ್ಲಿಯೂ ಹೆಚ್ಚಾಗುತ್ತಿದೆ. ಅದರಲ್ಲಿಯೂ ಅನೇಕರಲ್ಲಿ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದನ್ನು ಹಲವರು ಸಾಮಾನ್ಯ ದಣಿವು, ಒತ್ತಡ ಅಥವಾ ನಿದ್ರಾಹೀನತೆಯ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ನಿಮಗೆ ತಿಳಿದಿರಲಿ ಈ ರೀತಿ ಪದೇಪದೇ ಕಾಣಿಸಿಕೊಳ್ಳುವ ತಲೆನೋವು ಆರೋಗ್ಯ ಸಮಸ್ಯೆಯ ಎಚ್ಚರಿಕೆಯ ಸಂಕೇತವೂ ಆಗಿರಬಹುದು. ಹೌದು, ಇದು ದೇಹ ನೀಡುವ ಸೂಚನೆಯಾಗಿರಬಹುದು. ಇದು ಬಿಪಿ ಬಂದಿರುವ ಸೂಚನೆಯಾಗಿರಬಹುದು. ಹಾಗಾದರೆ ಹೈ ಬಿಪಿ ಮತ್ತು ತಲೆನೋವಿಗಿರುವ ಸಂಬಂಧವೇನು, ಯಾವ…

Read More

ಇಂದಿನಿಂದ ಭಾರತ-ಓಮನ್ ವ್ಯಾಪಾರ ಒಪ್ಪಂದ ಜಾರಿಯಲ್ಲಿ; ಭಾರತಕ್ಕೇನು ಲಾಭ, ಒಪ್ಪಂದ ಮುಖ್ಯಾಂಶಗಳೇನು? ಇಲ್ಲಿದೆ ಮಾಹಿತಿ

ನವದೆಹಲಿ, ಜೂನ್ 1: ಭಾರತ ಮತ್ತು ಓಮನ್ (Oman) ದೇಶಗಳ ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಇಂದು (ಜೂನ್ 1, 2026) ಹೊಸ ಇತಿಹಾಸ ಸೃಷ್ಟಿಯಾಗಿದೆ. ಎರಡೂ ದೇಶಗಳ ನಡುವಿನ ಬಹುನಿರೀಕ್ಷಿತ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA – Comprehensive Economic Partnership Agreement) ಅಥವಾ ಮುಕ್ತ ವ್ಯಾಪಾರ ಒಪ್ಪಂದವು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಒಪ್ಪಂದದ ಅಡಿಯಲ್ಲಿ, ಭಾರತದಿಂದ ಓಮನ್‌ ದೇಶಕ್ಕೆ ರಫ್ತಾಗುವ ಶೇಕಡಾ 80 ಕ್ಕೂ ಹೆಚ್ಚು ಸರಕುಗಳ ಮೇಲಿನ ಆಮದು ಸುಂಕವನ್ನು…

Read More

‘ಧುರಂಧರ್’ ಸಿನಿಮಾ ಬಳಿಕ ಮತ್ತೆ ಸಕ್ರಿಯವಾದ ದಾವೂದ್ ಇಬ್ರಾಹಿಂ ಗ್ಯಾಂಗ್ ‘ಡಿ ಕಂಪನಿ’?

ಬಾಲಿವುಡ್‌ನಲ್ಲಿ ಸೂಪರ್‌ ಹಿಟ್ ಆದ ‘ಧುರಂಧರ್’ (Dhurandhar) ಚಿತ್ರವು ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂನ ಡಿ-ಕಂಪನಿಯನ್ನು (D-Company) ಕೆರಳಿಸಿದೆ. ರಣವೀರ್ ಸಿಂಗ್ ನಟನೆಯ ಈ ಬ್ಲಾಕ್‌ಬಸ್ಟರ್ ಚಿತ್ರದ ಯಶಸ್ಸಿನ ಬೆನ್ನಲ್ಲೇ, ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ತನ್ನ ಮುಂಬೈ ನೆಟ್‌ವರ್ಕ್ ಅನ್ನು ಮತ್ತೆ ಸಕ್ರಿಯಗೊಳಿಸಿದ್ದಾನೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿರುವ ‘ಧುರಂಧರ್’ ಚಿತ್ರದಲ್ಲಿ ‘ಬಡೇ ಸಾಹೇಬ್’ ಎಂಬ ಪಾತ್ರವೊಂದಿದೆ. ಮರಣ ಶಯ್ಯೆಯಲ್ಲಿರುವಂತೆ ತೋರಿಸಲಾದ ಈ…

Read More

IPL 2026: ಆರಕ್ಕೆ ಆರು ಜಯ; ಈತ ಆಡಿದ ಪಂದ್ಯಗಳಲ್ಲಿ ಆರ್​ಸಿಬಿ ಸೋಲಲೇ ಇಲ್ಲ

ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಲುವಾಗಿಯೇ 2026 ರ ಐಪಿಎಲ್ ಅಖಾಡಕ್ಕೆ ಧುಮುಕ್ಕಿದ್ದ ಆರ್​ಸಿಬಿ ಕೊನೆಗೂ ತನ್ನ ಗುರಿಯನ್ನು ಮುಟ್ಟಿದೆ. ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್​ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಇಡೀ ಸೀಸನ್ ಉದ್ದಕ್ಕೂ ಅಲ್ಲಲ್ಲಿ ಕೊಂಚ ಎಡವಿದ್ದನ್ನು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲಿ ಆರ್​ಸಿಬಿ ಪಾರುಪತ್ಯ ಮೆರೆದಿತ್ತು. ಅದರಲ್ಲೂ ಲೀಗ್ ಹಂತದಲ್ಲಿ ಆಡಿದ14 ಲೀಗ್ ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದ…

Read More

ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಕೋಲಾರ ಜಿಲ್ಲೆಯ ಶಾಸಕರಿಂದ ಲಾಬಿ: ಇತ್ತ ಕ್ಷೇತ್ರದಲ್ಲಿ ಅಭಿಮಾನಿಗಳಿಂದ ಪೂಜೆ ಪುನಸ್ಕಾರ

ಅಭಿಮಾನಿಗಳಿಂದ ಅರೆ ಬೆತ್ತಲೆ ಸೇವೆImage Credit source: tv9 kannada ಕೋಲಾರ, ಜೂನ್​ 01: ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜೂನ್​ 3ರಂದು ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿಲಿದ್ದಾರೆ. ಈ ನಡುವೆ ಡಿಕೆ ಶಿವಕುಮಾರ್ (DK Shivakumar) ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆದಿದ್ದು, ಈಗಾಗಲೇ ಜಿಲ್ಲೆಯ ಶಾಸಕರು ದೆಹಲಿಗೆ ತೆರಳಿದ್ದಾರೆ. ಆದರೆ ಇತ್ತ ಅಭಿಮಾನಿಗಳು ಮತ್ತು ಬೆಂಬಲಿಗರು ಇನ್ನಿಲ್ಲದ ಸರ್ಕಸ್​ ಮಾಡುತ್ತಿದ್ದಾರೆ. ಮುಖ್ಯಾಂಶಗಳು ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಜೋರಾದ…

Read More

Video: ಕೈಯಲ್ಲಿದ್ದ ಒಂದೇ ಒಂದು ಚಾಕೊಲೇಟ್‌ನ್ನು ಸ್ನೇಹಿತರಿಗೂ ಕೊಟ್ಟು ತಿಂದ ಪುಟಾಣಿ

ಕೆಲ ಮಕ್ಕಳು ತಮ್ಮ ಕೈಯಲ್ಲಿರುವ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡುವುದಿಲ್ಲ. ಇನ್ನು ಕೆಲ ಪುಟಾಣಿಗಳು (little kids) ತಮ್ಮ ಹಂಚಿಕೊಳ್ಳುವ ಗುಣದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಆಟಿಕೆಗಳು, ತಿಂಡಿ ಏನೇ ಇರಲಿ, ತಮ್ಮ ಫ್ರೆಂಡ್ಸ್ ಗೆ ಕೊಟ್ಟರೇನೇ ಸಮಾಧಾನ. ಇದಕ್ಕೆ ಉದಾಹರಣೆಯಂತಿದೆ ಈ ಪುಟಾಣಿ. ತನ್ನ ಬಳಿಯಿದ್ದ ಒಂದೇ  ಒಂದು ಚಾಕೊಲೇಟ್‌ನಲ್ಲಿ ತನ್ನ ಸ್ನೇಹಿತರಿಗೂ ಕೊಟ್ಟು ತಿಂದ ಪುಟಾಣಿಯ ವಿಡಿಯೋ ವೈರಲ್ ಆಗಿದೆ. mahi_phadi_kedarwasi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿಯ ಶೇರಿಂಗ್ ಗುಣದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್…

Read More

ಮೇ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಸಂಗ್ರಹ; 1.94 ಲಕ್ಷ ಕೋಟಿ ರೂಗೆ ಏರಿದ ತೆರಿಗೆ ಆದಾಯ

ನವದೆಹಲಿ, ಜೂನ್ 1: ಭಾರತದ ಆರ್ಥಿಕತೆಯು ಬಲಿಷ್ಠವಾಗಿ ಮುನ್ನುಗ್ಗುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. 2026 ರ ಮೇ ತಿಂಗಳ ದೇಶದ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಶೇಕಡಾ 3.2 ರಷ್ಟು ಪ್ರಗತಿ ಸಾಧಿಸಿದ್ದು, ಬರೋಬ್ಬರಿ 1.94 ಲಕ್ಷ ಕೋಟಿ ರೂ ತಲುಪಿದೆ. ದೇಶೀಯ ವಹಿವಾಟುಗಳಲ್ಲಿನ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚುತ್ತಿರುವುದು ಈ ದಾಖಲೆಯ ಸಂಗ್ರಹಕ್ಕೆ ಪ್ರಮುಖ ಕಾರಣವಾಗಿದೆ. ನಿವ್ವಳ ಜಿಎಸ್​ಟಿ (Net GST) ಆದಾಯದಲ್ಲೂ ಏರಿಕೆ ಆಗಿದೆ. ಸರ್ಕಾರ ಬಿಡುಗಡೆ…

Read More

Viral: ಸ್ಕೂಟರ್‌ನಲ್ಲಿ ಗೂಡು ಕಟ್ಟಿ ಮರಿ ಇಟ್ಟ ಗುಬ್ಬಚ್ಚಿ, ಅಚ್ಚರಿಗೊಂಡ ಸ್ಥಳೀಯರು

ತೆಲಂಗಾಣ ಜೂನ್ 01: ಸಾಮಾನ್ಯವಾಗಿ ಗುಬ್ಬಚ್ಚಿಗಳು ಈ ಮರಗಳು ಇಲ್ಲವಾದರೆ ಮನೆಗಳ ಜಂತಿ, ಸಂದುಗಳು, ಛಾವಣಿಗಳನ್ನು ಆಶ್ರಯಿಸಿ ಗೂಡು ಕಟ್ಟುತ್ತವೆ. ಆದರೆ ಇದೀಗ ಸ್ಕೂಟರ್‌ನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿದೆ. ಈ ಕುತೂಕಲಕಾರಿ ಘಟನೆಯೂ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾದಲ್ಲಿ (Vaira, Khammam district of Telangana) ನಡೆದಿದೆ. ಹೌದು, ಗುಬ್ಬಚ್ಚಿಯೊಂದು ಗುಬ್ಬಚ್ಚಿ ತನ್ನ ಮರಿಗಳನ್ನು ರಕ್ಷಿಸಲು ಆಯ್ಕೆ ಮಾಡಿಕೊಂಡ ಈ  ನೂತನ ಮಾರ್ಗದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಗುಬ್ಬಚ್ಚಿಯೊಂದು ಸಂತಾನ ಅಭಿವೃದ್ಧಿಗೆ  ವೈರ…

Read More