ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್? ಕಾಂಗ್ರೆಸ್‌ನಲ್ಲಿ ಆಡಿಯೋ ಸಂಚಲನ

ಬೆಂಗಳೂರು/ದಾವಣಗೆರೆ, (ಜೂನ್ 01): ಕಾಂಗ್ರೆಸ್‌ (Congress) ಮುಖಂಡ ಜಮೀರ್ ಅಹಮದ್‌ (Zameer Ahmed) ವಿರುದ್ಧ ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ (Davanagere South byelection) ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್​​ನಲ್ಲಿ ಭಾರೀ ಸಂಚಲನ ಮೂಡಿಸಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡ ಸಿರಾಜ್ ಜೊತೆ ಜಮೀರ್ ಅಹಮ್ಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದ್ದು, ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ. ಮುಸ್ಲಿಂ ವೋಟಿಂಗ್ ಕಡಿಮೆ ಇದೆ ಹೊರಗಡೆ ಬಂದ್ರೆ ಅವರನ್ನ ನಂಬೋಕಾಗಲ್ಲ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ. ಒತ್ತಾಯ ಮಾಡಿ ಮನೆಯಿಂದ ಕರ್ಕೊಂಡು ಬರಬೇಡಿ. ಪಕ್ಷೇತರರಿಗೆ ಎಸ್‌ಡಿಪಿಐಗೆ ವೋಟ್ ಹಾಕಲಿ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ.

ಇನ್ನು ಈ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿದ್ದಂತೆಯೇ ಸ್ವತಃ ಜಮೀರ್ ಅಹಮ್ಮದ್ ಖಾನ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ. ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ. ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು . ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದ್ದು, ಇದು ಕಿಡಿಗೇಡಿಗಳ ಕೃತ್ಯ, ಇದನ್ನು ಯಾರೂ ನಂಬಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಆ್ಯಂಡಿ ಫ್ಲವರ್’​ನಲ್ಲಿ ಅರಳಿದ RCB | TV9 Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂಬುದು ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದೊಂದು ಭಾವನೆ. ಕಳೆದ 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ಹಣೆಬರಹವನ್ನು ಬದಲಾಯಿಸಲು ಸಾರಥಿಗಳಾಗಿ ಬಂದಿದ್ದು ಬರೋಬ್ಬರಿ 8 ಹೆಡ್ ಕೋಚ್‌ಗಳು! ಆದರೆ 7 ಕೋಚ್​ಗಳಿಂದ ಆರ್​ಸಿಬಿ ಅಭಿಮಾನಿಗಳಿಗೆ ಸಿಕ್ಕಿದ್ದು ‘ಈ ಸಲ ಕಪ್ ನಮ್ದಲ್ಲ’ ಎನ್ನುವ ಡೈಲಾಗ್ ಮಾತ್ರ.

ಅದರಲ್ಲೂ 2023 ರಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಚೈತನ್ಯ ನೀಡಿದ್ದು ಝಿಂಬಾಬ್ವೆ ತಂಡದ ಮಾಜಿ ನಾಯಕ ಆ್ಯಂಡಿ ಫ್ಲವರ್. ಹೌದು, 2024 ರಲ್ಲಿ ಆ್ಯಂಡಿ ಫ್ಲವರ್​ ಆರ್​ಸಿಬಿ ತಂಡಕ್ಕೆ ಬಂದಾಗ ಟೀಮ್ ಅಷ್ಟಕ್ಕಷ್ಟೇ ಆಗಿತ್ತು. ಆದರೆ ಯಾವಾಗ ಅವರು ತಂಡಕ್ಕೆ ಮೇಜರ್ ಸರ್ಜರಿ ಮಾಡಿದರೋ ಅಲ್ಲೇ ರಾಯಲ್ ಪಡೆ ಕಪ್ ಗೆಲ್ಲುವ ಸೂಚನೆ ಸಿಕ್ಕಿತ್ತು. ಇಂತಹದೊಂದು ಸೂಚನೆ ಸಿಗಲು ಮುಖ್ಯ ಕಾರಣ ಫ್ಲವರ್​ ಅವರ ಯಶೋಗಾಥೆ.

  • ಝಿಂಬಾಬ್ವೆ ತಂಡ ಮಾಜಿ ಆಟಗಾರ ಮೊದಲ ಬಾರಿಗೆ ಕೋಚಿಂಗ್ ಸ್ಥಾನ ಅಲಂಕರಿಸಿದ್ದು ಇಂಗ್ಲೆಂಡ್​ ತಂಡಕ್ಕೆ ಎಂಬುದು ವಿಶೇಷ. 2007 ರಲ್ಲಿ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ ಆ್ಯಂಡಿ ಫ್ಲವರ್ ಹೊಸ ಇನಿಂಗ್ಸ್ ಆರಂಭಿಸಿದ್ದರು. ಈ ಇನಿಂಗ್ಸ್ ಆರಂಭದೊಂದಿಗೆ ಇಂಗ್ಲೆಂಡ್ ಪಾಲಿಗೆ ಮರೀಚಿಕೆಯಾಗಿದ್ದ ವಿಶ್ವಕಪ್ ಅನ್ನು ತಂದುಕೊಟ್ಟಿದ್ದರು.
  • 2010 ರಲ್ಲಿ ಇಂಗ್ಲೆಂಡ್ ತಂಡವು ತನ್ನ ಮೊದಲ ಐಸಿಸಿ ವಿಶ್ವಕಪ್ ಗೆದ್ದಿತ್ತು. ಈ ವಿಶ್ವಕಪ್ ಗೆಲುವಿನ ಹಿಂದಿದ್ದ ಮಾಸ್ಟರ್ ಮೈಂಡ್ ಆ್ಯಂಡಿ ಫ್ಲವರ್. ಇನ್ನು ಆ್ಯಂಡಿ ಫ್ಲವರ್​ ಅವರ ಮಾರ್ಗದರ್ಶನದಲ್ಲೇ ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿತ್ತು.
  • ಅಷ್ಟೇ ಅಲ್ಲದೆ 2009, 2011, 2013 ರಲ್ಲಿ ಇಂಗ್ಲೆಂಡ್ ಆ್ಯಶಸ್​ನಲ್ಲಿ ಇಂಗ್ಲೆಂಡ್ ತಂಡವು ಹ್ಯಾಟ್ರಿಕ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಇಂಗ್ಲೆಂಡ್ ತಂಡ ಕೋಚ್ ಆಗಿದ್ದವರು ಆ್ಯಂಡಿ ಫ್ಲವರ್​. ಆ ಬಳಿಕ ಇಂಗ್ಲೆಂಡ್ ತಂಡ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದರ ನಡುವೆ BBC ಯ ವರ್ಷದ ಕೋಚ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.
  • 2020 ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ (ಹಿಂದೆ ಸೇಂಟ್ ಲೂಸಿಯಾ ಝೌಕ್ಸ್) ತಂಡ ಮುಖ್ಯ ತರಬೇತುದಾರರಾಗಿ ನೇಮಕಗೊಂಡರು. ಇವರ ಮಾರ್ಗದರ್ಶನದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಎರಡು ಬಾರಿ ಫೈನಲ್ ಆಡಿತ್ತು.
  • 2021 ರಲ್ಲಿ PSL (ಪಾಕಿಸ್ತಾನ್ ಸೂಪರ್ ಲೀಗ್) ನಲ್ಲಿ ಮುಲ್ತಾನ್ ಸುಲ್ತಾನ್‌ಗೆ ಮುಖ್ಯ ತರಬೇತುದಾರರಾಗಿ ಕಾಣಿಸಿಕೊಂಡಿದ್ದರು. ಅದೇ ವರ್ಷ ಮುಲ್ತಾನ್ ಸುಲ್ತಾನ್ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು.
  • ಇನ್ನು 2022 ರಲ್ಲಿ ದಿ ಹ್ರಂಡೆಡ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟ್ರೆಂಟ್ ರಾಕೆಟ್ಸ್ ತಂಡದ ಕೋಚ್ ಕೂಡ ಆ್ಯಂಡಿ ಫ್ಲವರ್.
  • ಹಾಗೆಯೇ 2023 ರಲ್ಲಿ ಇಂಟರ್​ನ್ಯಾಷನಲ್ ಲೀಗ್ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಗಲ್ಫ್ ಜೈಂಟ್ಸ್ ಟೀಮ್​ಗೆ ಯಶಸ್ವಿ ಮಾರ್ಗದರ್ಶನ ನೀಡಿದ್ದ ಆ್ಯಂಡಿ ಫ್ಲವರ್​, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
  • 2023 ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಮುಲ್ತಾನ್ ಸುಲ್ತಾನ್ ತಂಡd ಕೋಚ್ ಕೂಡ ಆ್ಯಂಡಿ ಫ್ಲವರ್ ಎಂಬುದು ವಿಶೇಷ.
  • ಹಾಗೆಯೇ ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದ ಆ್ಯಂಡಿ ಫ್ಲವರ್ ಸತತ 2 ಸೀಸನ್​ಗಳಲ್ಲೂ ಹೊಸ ತಂಡವನ್ನು ಪ್ಲೇಆಫ್​ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಈ ಎಲ್ಲಾ ಸಾಧನೆಗಳೊಂದಿಗೆ ಆ್ಯಂಡಿ ಫ್ಲವರ್ ಆರ್​ಸಿಬಿಗೆ ಬಂದಿದ್ದರು. ಬಂದ ವರ್ಷವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ಲೇಆಫ್​ಗೆ ತಲುಪಿಸಿದ್ದರು. ಇದರೊಂದಿಗೆ ಆರ್​ಸಿಬಿ ತಂಡಕ್ಕೆ ಕಪ್ ಗೆಲ್ಲುವ ಕನಸು ಬಿತ್ತಿದ್ದರು. ಈ ಕನಸಿಗಾಗಿ ಆರ್​ಸಿಬಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದರು.

ಇಲ್ಲಿ ಆರ್​ಸಿಬಿ ಕೋಚ್ ಮಾಡಿದ ಮೊದಲ ಬದಲಾವಣೆ ಸ್ಟಾರ್ ಆಟಗಾರರ ಮೇಲಿನ ಅತಿಯಾದ ಅವಲಂಬನೆ. ಅಲ್ಲದೆ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರರನ್ನೇ ಆಯ್ಕೆ ಮಾಡಿ ಪ್ಲೇಯಿಂಗ್ ಇಲೆವೆನ್ ರೂಪಿಸಿದರು. ಈ ಪ್ಲೇಯಿಂಗ್ ಇಲೆವೆನ್​ಗೆ ಬಲವಾದ ಬೆಂಚ್ ಸ್ಟ್ರೆಂಥ್ ಸೃಷ್ಟಿಸಿದರು. ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬದಲಾಯಿತು.

  • ಐಪಿಎಲ್ 2025 ರಲ್ಲಿ ಆರ್​ಸಿಬಿ ತಂಡವು ಪ್ರಚಂಡ ಪ್ರದರ್ಶನ ನೀಡಿತು. ಈ ಪ್ರಚಂಡ ಪ್ರದರ್ಶನದೊಂದಿಗೆ ಆರಂಭದಲ್ಲೇ ಕಪ್ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿತು. ಅದರಂತೆ ಫೈನಲ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಆರ್​ಸಿಬಿ ತಂಡಕ್ಕೆ ಸೊಚ್ಚಲ ಟ್ರೋಫಿ ತಂದು ಕೊಟ್ಟರು. ಅಲ್ಲಿಗೆ ಮೊದಲ ಅಧ್ಯಾಯ ಮುಗಿಯಿತು.
  • ಎರಡನೇ ಅಧ್ಯಾಯದಲ್ಲೂ ಆರ್​ಸಿಬಿ ಮಾತ್ರ ಬದಲಾಗಲಿಲ್ಲ. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಹೊಸ ಹುರುಪಿನಲ್ಲಿ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2026ರ ಫೈನಲ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ.
  • ಅಂದರೆ ಕಳೆದ 17 ವರ್ಷಗಳಲ್ಲಿ ಸಾಧ್ಯವಾಗದೇ ಇರುವುದನ್ನು ಆ್ಯಂಡಿ ಫ್ಲವರ್​ ಮೂರು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆಲ್ಲುವ ಮೂಲಕ.

ಅಂದರೆ 17 ವರ್ಷಗಳ ಕಾಲ ಕೇವಲ ‘ಈ ಸಲ ಕಪ್ ನಮ್ದು’ ಎಂಬ ಘೋಷಣೆಗೆ ಸೀಮಿತವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹಣೆಬರಹವನ್ನು ಹೆಡ್ ಕೋಚ್ ಆ್ಯಂಡಿ ಫ್ಲವರ್ ಬದಲಾಯಿಸಿದ್ದಾರೆ. ಈ ಬದಲಾವಣೆಯೊಂದಿಗೆ ಆರ್​ಸಿಬಿ ಪಡೆ ಬ್ಯಾಕ್ ಟು ಬ್ಯಾಕ್ ಟ್ರೋಫಿ ಎತ್ತಿ ಹಿಡಿದಿದೆ.

ಇದನ್ನೂ ಓದಿ: RCB ಗೆಲುವಿನ ಬೆನ್ನಲ್ಲೇ ಅಂಬಾಟಿ ರಾಯುಡು ‘ಬಿಗ್ ಬಾಯ್ಸ್’ ಹೇಳಿಕೆ!

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎರಡು ಟ್ರೋಫಿ ಗೆಲ್ಲಿಸಿಕೊಟ್ಟಿರುವ ಆ್ಯಂಡಿ ಫ್ಲವರ್ ಇದೀಗ ದಿ ಹಂಡ್ರೆಡ್ ಲೀಗ್​ನತ್ತ ಮುಖ ಮಾಡಿದ್ದಾರೆ. ಮುಂಬರುವ ದಿ ಹಂಡ್ರೆಡ್ ಲೀಗ್​ನಲ್ಲಿ ‘ಆ್ಯಂಡಿ ಫ್ಲವರ್’​ನಲ್ಲಿ ‘ಲಂಡನ್ ಸ್ಪಿರಿಟ್’ ಅರಳಿದೆಯಾ ಕಾದು ನೋಡಬೇಕಿದೆ.

Source link

ತಮಿಳಿನಲ್ಲಿ ಶಿವರಾಜ್​ಕುಮಾರ್ 4ನೇ ಸಿನಿಮಾಗೆ ಮುಹೂರ್ತ; ಭರ್ಜರಿ ಡಿಮ್ಯಾಂಡ್

‘ಟೂರಿಸ್ಟ್ ಫ್ಯಾಮಿಲಿ’ ಮತ್ತು ‘ವಿತ್ ಲವ್’ ಚಿತ್ರಗಳ ಮೂಲಕ ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ-ನಿರ್ದೇಶಕ ಅಭಿಷನ್ ಜೀವಿಂತ್ ಅವರ ಹೊಸ ಚಿತ್ರದಲ್ಲಿ ಶಿವರಾಜ್‌ಕುಮಾರ್ (Shiva Rajkumar) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರವನ್ನು ಅಭಿಷನ್ ಅವರೇ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಅಭಿಷನ್ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ, ಬದಲಿಗೆ ಶಿವಣ್ಣ (Shivanna) ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇವರಿಬ್ಬರು ತಂದೆ-ಮಗನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು (ಜೂನ್ 1) ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಚಿತ್ರತಂಡ ಸಂಪೂರ್ಣ ತಾರಾಗಣವನ್ನು ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವನ್ನು ಗೌತಮ್ ಶಿವರಾಮನ್ ನಿರ್ದೇಶಿಸುತ್ತಿದ್ದಾರೆ. ಅವರು ಈ ಹಿಂದೆ ಅಭಿಷನ್ ಜೀವಿಂತ್ ಅವರ ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರದಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಡ್ರಾಮಾ ಕಂಪನಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಶಿವಾನಿ ನಾಗರಂ ಮತ್ತು ಯೋಗ ಲಕ್ಷ್ಮಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ನಟ ಗಾನಾ ವಿನೋದ್ ಕೂಡ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಲಿಯೋನ್ ಜೇಮ್ಸ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದ ಶಿವರಾಜ್‌ಕುಮಾರ್, ಆ ಬಳಿಕ ಧನುಷ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಅಬ್ಬರಿಸಿದ್ದರು. ಸದ್ಯದಲ್ಲೇ ಬರಲಿರುವ ‘ಜೈಲರ್ 2’ ನಂತರ, ಪ್ರಸ್ತುತ ಅನೌನ್ಸ್ ಆಗಿರುವ ಚಿತ್ರವು ಶಿವಣ್ಣ ಅವರ ಪೂರ್ಣ ಪ್ರಮಾಣದ 4ನೇ ತಮಿಳು ಸಿನಿಮಾವಾಗಲಿದೆ.

ಇದನ್ನೂ ಓದಿ: ಗುಮ್ಮಡಿ ನರಸಯ್ಯ ನಿವಾಸಕ್ಕೆ ಭೇಟಿ ನೀಡಿದ ಶಿವರಾಜ್​ಕುಮಾರ್: ಫೋಟೋ ಗ್ಯಾಲರಿ

ಸದ್ಯ ಶಿವಣ್ಣ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕರಾಗಿ ನಟಿಸಿರುವ, ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ಗೌರನಾಯ್ಡು ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಇದರ ಜೊತೆಗೆ ‘ಸತ್ಯ ಜ್ಯೋತಿ ಫಿಲ್ಮ್ಸ್’ ಬ್ಯಾನರ್‌ನಲ್ಲಿ ನಿರ್ದೇಶಕ ಶರವಣನ್ ಅವರ ಸಿನಿಮಾವೂ ಸದ್ಯದಲ್ಲೇ ಸೆಟ್ಟೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ, ಮಾಡಿದ್ದು ಬರೋಬ್ಬರಿ 7 ತಾಸು ನಿದ್ರೆ

ಬೀಜಿಂಗ್, ಜೂನ್ 01: ಜಿಮ್​ನಲ್ಲಿ ವರ್ಕೌಟ್ ಮಾಡಿದ ಬಳಿಕ ಸಾಮಾನ್ಯವಾಗಿ ಆಯಾಸವಾಗುತ್ತದೆ. ಚೀನಾದ ಜಿಮ್ ಒಂದರಲ್ಲಿ ನಗು ತರಿಸುವ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಜಿಮ್‌ನಲ್ಲಿ ವ್ಯಾಯಾಮ ಆರಂಭಿಸುವ ಮುನ್ನವೇ ಕೇವಲ ವಾರ್ಮ್-ಅಪ್ ಮಾಡಿ ಮ್ಯಾಟ್ ಮೇಲೆ ಮಲಗಿದ್ದಾರೆ. ಆದರೆ, ಅವರು ಎಷ್ಟು ದಣಿದಿದ್ದರೆಂದರೆ, ಮಲಗಿದ ತಕ್ಷಣವೇ ಅವರಿಗೆ ಗಾಢ ನಿದ್ದೆ ಹತ್ತಿಬಿಟ್ಟಿದೆ. ಅಚ್ಚರಿಯೆಂದರೆ, ಆ ವ್ಯಕ್ತಿ ಜಿಮ್‌ನಲ್ಲೇ ಸತತ 7 ಗಂಟೆಗಳ ಕಾಲ ಯಾರದೂ ತೊಂದರೆಯಿಲ್ಲದೆ ಆರಾಮವಾಗಿ ನಿದ್ದೆ ಮಾಡಿದ್ದಾರೆ. ಜಿಮ್ ಸಿಬ್ಬಂದಿ ಮತ್ತು ಅಲ್ಲಿಗೆ ಬಂದ ಇತರರು ಅವರ ಗಾಢ ನಿದ್ದೆಯನ್ನು ನೋಡಿ,  ತೊಂದರೆ ಮಾಡುವುದು ಬೇಡವೆಂದು ನಿರ್ಧರಿಸಿದ್ದಾರೆ. ಹೀಗಾಗಿ ಸಂಜೆಯಾಗುವವರೆಗೂ ಯಾರೂ ಅವರನ್ನು ಎಬ್ಬಿಸಲೇ ಇಲ್ಲ. ಬಳಿಕ ಸಂಜೆ ಮಹಿಳೆಯೊಬ್ಬರು ವರ್ಕೌಟ್ ಮುಗಿಸಿ ಮನೆಗೆ ಹೋಗುವಾಗ ಅವರನ್ನು ಎಬ್ಬಿಸಿದ್ದಾರೆ. ಆಗ ತಾನು ಇಷ್ಟು ಹೊತ್ತು ಮಲಗಿದ್ದೆನೇ ಎಂದು ಅವರಿಗೂ ಅಚ್ಚರಿಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026 Awards: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತೆರೆ ಬಿದ್ದಿದೆ. ಈ ಬಾರಿ ಕೂಡ ಪ್ರಚಂಡ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದುಕೊಂಡಿದ್ದಾರೆ. ಈ ಟ್ರೋಫಿಯೊಂದಿಗೆ ಆರ್​ಸಿಬಿ 20 ಕೋಟಿ ರೂ. ನಗದು ಬಹುಮಾನ ಪಡೆದಿದ್ದಾರೆ. ಅತ್ತ ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ವೈಯುಕ್ತಿಕ ಪ್ರಶಸ್ತಿಗಳ ಮೂಲಕ ಒಟ್ಟು 55 ಲಕ್ಷ ರೂ. ಹಾಗೂ ಟಾಟಾ ಸಿಯೆರಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಈ ಬಾರಿ ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ತಂಡಗಳ ಬಹುಮಾನದ ವಿವರ:

ಸ್ಥಾನ / ಪ್ರಶಸ್ತಿ ವಿಜೇತ ತಂಡ ನಗದು ಬಹುಮಾನ
ವಿನ್ನರ್ಸ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ₹20 ಕೋಟಿ
ರನ್ನರ್ಸ್ ಗುಜರಾತ್ ಟೈಟಾನ್ಸ್ ₹12.5 ಕೋಟಿ
3ನೇ ಸ್ಥಾನ ರಾಜಸ್ಥಾನ್ ರಾಯಲ್ಸ್ ₹7 ಕೋಟಿ
4ನೇ ಸ್ಥಾನ ಸನ್‌ರೈಸರ್ಸ್ ಹೈದರಾಬಾದ್ ₹6.5 ಕೋಟಿ
ಫೇರ್ ಪ್ಲೇ ಪ್ರಶಸ್ತಿ ಪಂಜಾಬ್ ಕಿಂಗ್ಸ್ ₹10 ಲಕ್ಷ

ವೈಯಕ್ತಿಕ ಪ್ರಶಸ್ತಿಗಳು:

  • ಆರೆಂಜ್ ಕ್ಯಾಪ್ (ಹೆಚ್ಚು ರನ್): ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್ – 776 ರನ್) – ₹10 ಲಕ್ಷ
  • ಪರ್ಪಲ್ ಕ್ಯಾಪ್ (ಹೆಚ್ಚು ವಿಕೆಟ್): ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್ – 29 ವಿಕೆಟ್) – ₹10 ಲಕ್ಷ
  • ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ (MVP): ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ₹15 ಲಕ್ಷ
  • ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ₹10 ಲಕ್ಷಸೀಸನ್‌ನ
  • ಸೂಪರ್ ಸ್ಟ್ರೈಕರ್: ವೈಭವ್ ಸೂರ್ಯವಂಶಿ (ಸ್ಟ್ರೈಕ್ ರೇಟ್ 237.3) – ₹10 ಲಕ್ಷ + ಟಾಟಾ ಸಿಯೆರಾ ಕಾರ್
  • ಸೂಪರ್ ಸಿಕ್ಸರ್ಸ್ ಪ್ರಶಸ್ತಿ: ವೈಭವ್ ಸೂರ್ಯವಂಶಿ (72 ಸಿಕ್ಸ್) – ₹10 ಲಕ್ಷ
  • ಹೆಚ್ಚು ಫೋರ್ ಬಾರಿಸಿದ ಆಟಗಾರ: ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್ – 75 ಫೋರ್) – ₹10 ಲಕ್ಷ
  • ಫ್ಯಾಂಟಸಿ ಪ್ಲೇಯರ್ ಆಫ್ ದಿ ಸೀಸನ್: ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – ₹10 ಲಕ್ಷ
  • ಗ್ರೀನ್ ಡಾಟ್ ಬಾಲ್ ಪ್ರಶಸ್ತಿ: ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್ – 172 ಡಾಟ್ ಬಾಲ್) – ₹10 ಲಕ್ಷ
  • ಕ್ಯಾಚ್ ಆಫ್ ದಿ ಸೀಸನ್: ಮನೀಶ್ ಪಾಂಡೆ (ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ) – ₹10 ಲಕ್ಷ
  • ಫೈನಲ್ ಪ್ಲೇಯರ್ ಆಫ್ ದಿ ಮ್ಯಾಚ್: ವಿರಾಟ್ ಕೊಹ್ಲಿ (75 ರನ್​ಗಳು)- ₹5 ಲಕ್ಷ.

ಇದನ್ನೂ ಓದಿ: RCB ಗೆಲುವಿನ ಬೆನ್ನಲ್ಲೇ ಅಂಬಾಟಿ ರಾಯುಡು ‘ಬಿಗ್ ಬಾಯ್ಸ್’ ಹೇಳಿಕೆ!

ಇನ್ನಿತರೆ ಪ್ರಶಸ್ತಿಗಳು:

  • ಉತ್ತಮ ಮೈದಾನ (5 ಕ್ಕಿಂತ ಹೆಚ್ಚು ಪಂದ್ಯಗಳು): ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) – ₹50 ಲಕ್ಷ
  • ಉತ್ತಮ ಮೈದಾನ (4 ಅಥವಾ ಕಡಿಮೆ ಪಂದ್ಯಗಳು): ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) – ₹25 ಲಕ್ಷ.

 

 

Source link

ಜೂನ್ 1ರಿಂದ ರೈಲ್ವೆ ವೈಟಿಂಗ್ ಲಿಸ್ಟ್ ನಿಯಮಗಳಲ್ಲಿ ಬದಲಾವಣೆ; ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಳ; ನಿಯಮ ಉಲ್ಲಂಘನೆಗೆ ಭಾರಿ ದಂಡ

ರೈಲ್ವೆ ನಿಲ್ದಾಣದ ಚಿತ್ರImage Credit source: PTI

ನವದೆಹಲಿ, ಜೂನ್ 1: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ರೈಲುಗಳಲ್ಲಿ ಹೆಚ್ಚುತ್ತಿರುವ ಭಾರಿ ಜನಸಂದಣಿಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆಯು (Indian Railways) ಇಂದಿನಿಂದ (ಜೂನ್ 1, 2026) ಟಿಕೆಟ್ ಬುಕಿಂಗ್ ಮತ್ತು ಪ್ರಯಾಣದ ನಿಯಮಗಳಲ್ಲಿ ಅತ್ಯಂತ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸಲಿವೆ. ಈ ನಿಯಮಗಳ ಪೈಕಿ ವೈಟಿಂಗ್ ಲಿಸ್ಟ್ ಟಿಕೆಟ್​ಗಳ ಸಂಖ್ಯೆಗೆ ಮಿತಿ ಹಾಕುವುದೂ ಒಂದು. ಇತರ ನಿಯಮಗಳು ಯಾವುವು, ಮತ್ತು ಪ್ರಯಾಣಿಕರು ಯಾವ ವಿಷಯಗಳ ಬಗ್ಗೆ ಎಚ್ಚರದಿಂದಿರಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ.

ವೈಟಿಂಗ್ ಲಿಸ್ಟ್ ಟಿಕೆಟ್‌ಗಳ ಸಂಖ್ಯೆಗೆ ಮಿತಿ

ಇನ್ಮುಂದೆ ರೈಲುಗಳಲ್ಲಿ ಇಷ್ಟಬಂದಷ್ಟು ವೈಟಿಂಗ್ ಲಿಸ್ಟ್ (Waiting List) ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶ ಇರುವುದಿಲ್ಲ. ರೈಲ್ವೆ ಇಲಾಖೆಯು ಸೀಟುಗಳ ಆಧಾರದ ಮೇಲೆ ವೈಟಿಂಗ್ ಟಿಕೆಟ್‌ಗಳ ಸಂಖ್ಯೆಗೆ ಕಠಿಣ ಮಿತಿ (ಕ್ಯಾಪಿಂಗ್) ವಿಧಿಸಿದೆ.

  • ಸ್ಲೀಪರ್ ಕ್ಲಾಸ್ (Sleeper Class): ಒಟ್ಟು ಸೀಟುಗಳ ಸಾಮರ್ಥ್ಯದ ಕೇವಲ 30% ರಷ್ಟು ಮಾತ್ರ ವೈಟಿಂಗ್ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಅಂದರೆ ಸರಾಸರಿ 150 ರಿಂದ 200 ಕ್ಕಿಂತ ಹೆಚ್ಚು ವೈಟಿಂಗ್ ಟಿಕೆಟ್‌ಗಳು ಜನರೇಟ್ ಆಗುವುದಿಲ್ಲ.
  • ಎಸಿ ಕ್ಲಾಸ್ (AC Coaches): ಎಸಿ ಕೋಚ್‌ಗಳಲ್ಲೂ ಸಹ ಒಟ್ಟು ಸೀಟುಗಳ ಗರಿಷ್ಠ 60% ರಷ್ಟು ಮಾತ್ರ ವೈಟಿಂಗ್ ಟಿಕೆಟ್‌ಗಳನ್ನು ಸೀಮಿತಗೊಳಿಸಲಾಗಿದೆ.

ವೈಟಿಂಗ್ ಲಿಸ್ಟ್ ಚಿಕ್ಕದಾಗಿರುವುದರಿಂದ, ನೀವು ಟಿಕೆಟ್ ಬುಕ್ ಮಾಡಿದಾಗ ಅದು ಕನ್ಫರ್ಮ್ (Confirmed) ಆಗುವ ಅಥವಾ ಆರ್‌ಎಸಿ (RAC) ಆಗುವ ಸಾಧ್ಯತೆಗಳು ಮೊದಲಿಗಿಂತ 2 ರಿಂದ 3 ಪಟ್ಟು ಹೆಚ್ಚಾಗಲಿವೆ.

ಇದನ್ನೂ ಓದಿ: ಹಾರ್ಮುಜ್ ಬಿಕ್ಕಟ್ಟಿನ ಎಫೆಕ್ಟ್: ತೈಲದ ಗರಿಷ್ಠ ಬಳಕೆ ಸೇರಿದಂತೆ ಹೊಸ ಪ್ರವೃತ್ತಿಯಲ್ಲಿ ಭಾರತೀಯ ಆಯಿಲ್ ರಿಫೈನರಿಗಳು

ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ವೈಟಿಂಗ್ ಟಿಕೆಟ್ ಪ್ರಯಾಣ ಬ್ಯಾನ್

ಹೊಸ ನಿಯಮದ ಪ್ರಕಾರ, ಜೂನ್ 1 ರಿಂದ ವಿಂಡೋ ಟಿಕೆಟ್ ಆಗಿರಲಿ ಅಥವಾ ಇ-ಟಿಕೆಟ್ ಆಗಿರಲಿ, ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವಂತಿಲ್ಲ. ಸಾಮಾನ್ಯವಾಗಿ ಕನ್ಫರ್ಮ್ ಟಿಕೆಟ್ ಇಲ್ಲದಿದ್ದರೂ ವೈಟಿಂಗ್ ಟಿಕೆಟ್ ಹಿಡಿದು ಸ್ಲೀಪರ್ ಮತ್ತು ಎಸಿ ಕೋಚ್‌ಗಳನ್ನು ಹತ್ತಿ ಕನ್ಫರ್ಮ್ ಸೀಟುಗಳಿರುವ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಅಭ್ಯಾಸಕ್ಕೆ ಬ್ರೇಕ್ ಹಾಕಲು ರೈಲ್ವೆ ಈ ಕಠಿಣ ನಿರ್ಧಾರ ಕೈಗೊಂಡಿದೆ. ವೈಟಿಂಗ್ ಟಿಕೆಟ್ ಇರುವವರು ಕೇವಲ ‘ಜನರಲ್ ಕೋಚ್’ (General Coach) ಗಳಲ್ಲಿ ಮಾತ್ರ ಪ್ರಯಾಣಿಸಬೇಕಾಗುತ್ತದೆ.

ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ; ಟಿಟಿಇಗೆ (TTE) ಹೆಚ್ಚು ಅಧಿಕಾರ

ಒಂದು ವೇಳೆ ನೀವು ವೈಟಿಂಗ್ ಟಿಕೆಟ್ ಇಟ್ಟುಕೊಂಡು ಸ್ಲೀಪರ್ ಅಥವಾ ಎಸಿ ಕೋಚ್ ಹತ್ತಿ ಸಿಕ್ಕಿಬಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ:

  • ಸ್ಲೀಪರ್ ಕೋಚ್‌ನಲ್ಲಿ ಸಿಕ್ಕಿಬಿದ್ದರೆ: ಕನಿಷ್ಠ ₹250 ದಂಡ ವಿಧಿಸಿ, ತಕ್ಷಣವೇ ಜನರಲ್ ಬೋಗಿಗೆ ಕಳುಹಿಸಲಾಗುತ್ತದೆ.
  • ಎಸಿ ಕೋಚ್‌ಗಳಲ್ಲಿ ಸಿಕ್ಕಿಬಿದ್ದರೆ: ಕನಿಷ್ಠ ₹440 ವರೆಗೆ ದಂಡ ಮತ್ತು ಸಂಪೂರ್ಣ ಪ್ರಯಾಣದ ದರವನ್ನು ವಸೂಲಿ ಮಾಡಲಾಗುತ್ತದೆ.
  • ರೈಲಿನಿಂದ ಕೆಳಗಿಳಿಸುವ ಅಧಿಕಾರ: ಟಿಟಿಇಗೆ ದಂಡ ವಿಧಿಸುವುದಷ್ಟೇ ಅಲ್ಲದೆ, ಮುಂದಿನ ನಿಲ್ದಾಣದಲ್ಲೇ ನಿಮ್ಮನ್ನು ರೈಲಿನಿಂದ ಕೆಳಗಿಳಿಸುವ ಪೂರ್ಣ ಅಧಿಕಾರವನ್ನು ನೀಡಲಾಗಿದೆ.

ಇದನ್ನೂ ಓದಿ: ಕೋಲ್ಕತಾದಲ್ಲಿ ಅಮುಲ್​ನಿಂದ ವಿಶ್ವದ ಅತಿದೊಡ್ಡ ಮೊಸರು ಘಟಕ; ಕರ್ನಾಟಕದಲ್ಲಿ ನಂದಿನಿ ಎದುರು ಸಿಗದ ಗೆಲುವು ಅಮುಲ್​ಗೆ ಬಂಗಾಳದಲ್ಲಿ ಸಿಗುತ್ತಾ?

ಬದಲಾದ ಈ ನಿಯಮಗಳಿಂದಾಗಿ ಮುಂಬರುವ ದಿನಗಳಲ್ಲಿ ಕನ್ಫರ್ಮ್ ಟಿಕೆಟ್ ಪಡೆದ ಪ್ರಯಾಣಿಕರ ಪ್ರಯಾಣ ಹೆಚ್ಚು ಸುಖಕರ ಮತ್ತು ಸುರಕ್ಷಿತವಾಗಲಿದ್ದು, ಕೊನೆಯ ಕ್ಷಣದ ಗೊಂದಲಗಳು ಹಾಗೂ ಕೋಚ್‌ಗಳ ಒಳಗಿನ ಅತಿಯಾದ ನೂಕುನುಗ್ಗಲು ಗಣನೀಯವಾಗಿ ಕಡಿಮೆಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಿಜಾಬ್ Vs ಕೇಸರಿ ಸಂಘರ್ಷ: ಹಿಂದೂಪರ ಸಂಘಟನೆಗಳಿಂದ ಹುಬ್ಬಳ್ಳಿಯ ಅನೇಕ ಕಡೆ ಕೇಸರಿ ಶಾಲು ವಿತರಣೆ

ಹಿಂದೂಪರ ಸಂಘಟನೆಗಳಿಂದ ಕೇಸರಿ ಶಾಲು ವಿತರಣೆImage Credit source: tv9

ಹುಬ್ಬಳ್ಳಿ, ಜೂನ್ 1: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ (Hijab) ಧರಿಸಲು ಕಾಂಗ್ರೆಸ್ ಸರ್ಕಾರ ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಮತ್ತೊಮ್ಮೆ ಪ್ರತಿಭಟನೆಯ ಹಾದಿ ಹಿಡಿದಿವೆ. ಇಂದಿನಿಂದ ಹೊಸ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಸರ್ಕಾರದ ಆದೇಶಕ್ಕೆ ಕೌಂಟರ್ ನೀಡಲು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹುಬ್ಬಳ್ಳಿ (Hubballi) ನಗರದ ಪ್ರಮುಖ ಕಾಲೇಜುಗಳ ಮುಂಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ್ದಾರೆ. ಈ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಹಿಜಾಬ್ ಆದೇಶವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಈ ಅಭಿಯಾನವನ್ನು ವಿಸ್ತರಿಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿದ ಸರ್ಕಾರದ ನೀತಿಗೆ ಖಂಡನೆ.
  • ಹುಬ್ಬಳ್ಳಿಯಲ್ಲಿ ಹಿಂದೂಪರ ಸಂಘಟನೆಗಳಿಂದ ಕೇಸರಿ ಶಾಲು ವಿತರಣೆ.
  • ಪೊಲೀಸರಿಂದ ಬಿಗಿ ಬಂದೋಬಸ್ತ್.

ಕನಕದಾಸ ಕಾಲೇಜು ಮುಂಭಾಗ ಹೈಡ್ರಾಮಾ

ಹಿಂದಿನ ಬಿಜೆಪಿ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯಗೊಳಿಸಿದ್ದ ಸಮವಸ್ತ್ರ ನಿಯಮ ಹಾಗೂ ಹಿಜಾಬ್ ನಿಷೇಧದ ಆದೇಶವನ್ನು ಪ್ರಸಕ್ತ ಸರ್ಕಾರ ಹಿಂಪಡೆದಿರುವುದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇಂದು (ಜೂನ್ 1) ಬೆಳಿಗ್ಗೆ ಹುಬ್ಬಳ್ಳಿಯ ಕನಕದಾಸ ಕಾಲೇಜು ಮುಂಭಾಗ ಜಮಾಯಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕಾಲೇಜಿಗೆ ಆಗಮಿಸುತ್ತಿದ್ದ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದರು. ಕೆಲವು ವಿದ್ಯಾರ್ಥಿಗಳು ಸ್ವಇಚ್ಛೆಯಿಂದಲೇ ಕೇಸರಿ ಶಾಲು ಧರಿಸಿ ಕಾಲೇಜಿನೊಳಗೆ ಪ್ರವೇಶಿಸಿದರೆ, ಕೆಲವು ವಿದ್ಯಾರ್ಥಿಗಳು ಶಾಲು ಧರಿಸಲು ನಿರಾಕರಿಸಿದರು. ಪೊಲೀಸರ ಕಟ್ಟುನಿಟ್ಟಿನ ಸೂಚನೆ ಇದ್ದಿದ್ದರಿಂದ ಕಾರ್ಯಕರ್ತರು ಯಾರಿಗೂ ಒತ್ತಾಯಪೂರ್ವಕವಾಗಿ ಶಾಲು ಧರಿಸದೆ ಸಂಯಮ ಕಾಯ್ದುಕೊಂಡರು.

ತುಷ್ಟೀಕರಣ ರಾಜಕಾರಣದ ವಿರುದ್ಧ ಆಕ್ರೋಶ

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂಪರ ಕಾರ್ಯಕರ್ತರಾದ ರಘು ಯಲ್ಲಕ್ಕನವರ್ ಮತ್ತು ಸಂಗಮೇಶ್, ‘ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಹಾಳುಗೆಡವುತ್ತಿದೆ. ಹಿಜಾಬ್‌ಗೆ ನೀಡಿರುವ ಅನುಮತಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಕೇಸರಿ ಶಾಲು ವಿತರಣೆ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ’ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹಿಜಾಬ್ vs ಕೇಸರಿ ಶಾಲು: ಶಾಲಾ-ಕಾಲೇಜ್​ ಆರಂಭದ ಹೊತ್ತಿನಲ್ಲೇ ದಕ್ಷಣ ಕನ್ನಡದಲ್ಲಿ ಧರ್ಮ ದಂಗಲ್ ಆತಂಕ!

ಘಟನೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ನಗರದ ಎಲ್ಲಾ ಪ್ರಮುಖ ಕಾಲೇಜುಗಳ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಕನ್ನಡಿಗನ ಪಾಲಾದ ‘ಬೆಸ್ಟ್ ಕ್ಯಾಚ್’ ಪ್ರಶಸ್ತಿ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಬೆಸ್ಟ್ ಕ್ಯಾಚ್ ಪ್ರಶಸ್ತಿಯನ್ನು ಕನ್ನಡಿಗ ಮನೀಶ್ ಪಾಂಡೆ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್​ನ 57ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು.

ಆರ್​ಸಿಬಿ ಇನಿಂಗ್ಸ್​ನ 18ನೇ ಓವರ್‌ನಲ್ಲಿ ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ತೀಕ್ಷ್ಣವಾದ ಎಸೆತವನ್ನು ಟಿಮ್ ಡೇವಿಡ್ ಆಫ್-ಸ್ಟಂಪ್‌ನಿಂದ ಹೊರಗೆ ಬಲವಾಗಿ ಕಟ್ ಮಾಡಿದರು. ಬ್ಯಾಟ್‌ನಿಂದ ಸಿಡಿದ ಚೆಂಡು ಅತಿ ವೇಗವಾಗಿ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ರಾಕೆಟ್‌ನಂತೆ ನುಗ್ಗಿತು.

ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ 36 ವರ್ಷದ ಮನೀಶ್ ಪಾಂಡೆ, ಕೇವಲ ಸೆಕೆಂಡಿನ ನೂರನೇ ಒಂದು ಭಾಗದಲ್ಲಿ ಪ್ರತಿಕ್ರಿಯಿಸಿದರು. ತಮ್ಮ ಎಡಭಾಗಕ್ಕೆ ಸಂಪೂರ್ಣವಾಗಿ ಗಾಳಿಯಲ್ಲಿ ಜಿಗಿದು ಒಂದು ಕೈಯಿಂದ ಚೆಂಡನ್ನು ಮೈದಾನಕ್ಕೆ ತಾಗುವ ಕೆಲವೇ ಇಂಚುಗಳ ಮುನ್ನ ಅದ್ಭುತವಾಗಿ ಹಿಡಿದರು.

ಪಾಂಡೆ ಅವರ ಈ ಅಸಾಧ್ಯವಾದ ಕ್ಷೇತ್ರರಕ್ಷಣೆಯನ್ನು ಕಂಡು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಮತ್ತು ಆಟಗಾರರು ದಿಗ್ಭ್ರಮೆಗೊಂಡರು. ಅಷ್ಟೇ ಅಲ್ಲದೆ ಕ್ಯಾಚ್ ಔಟ್ ಆಗಿ ಟಿಮ್ ಡೇವಿಡ್ ಹೊರ ನಡೆಯುತ್ತಿದ್ದಂತೆ ಮನೀಶ್ ಪಾಂಡೆ ಬಳಿ ತೆರಳಿದ ವಿರಾಟ್ ಕೊಹ್ಲಿ ಈ ಅದ್ಭುತ ಫೀಲ್ಡಿಂಗ್​ ಅನ್ನು ಶ್ಲಾಘಿಸಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಇದೇ ಕ್ಯಾಚ್​ಗೆ 2026ರ ಬೆಸ್ಟ್ ಕ್ಯಾಚ್ ಪ್ರಶಸ್ತಿ ಲಭಿಸಿದೆ.

Source link

ಹಾರ್ಮುಜ್ ಬಿಕ್ಕಟ್ಟಿನ ಎಫೆಕ್ಟ್: ತೈಲದ ಗರಿಷ್ಠ ಬಳಕೆ ಸೇರಿದಂತೆ ಹೊಸ ಪ್ರವೃತ್ತಿಯಲ್ಲಿ ಭಾರತೀಯ ಆಯಿಲ್ ರಿಫೈನರಿಗಳು

ನವದೆಹಲಿ, ಜೂನ್ 1: ಮಧ್ಯಪ್ರಾಚ್ಯದಲ್ಲಿ (Middle East) ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಇರಾನ್ ಸಂಘರ್ಷದಿಂದಾಗಿ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಪ್ರದೇಶದಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಇದರ ನೇರ ಪರಿಣಾಮ ಭಾರತದ ಇಂಧನ ವಲಯದ ಮೇಲಾಗಿದ್ದು, ಭಾರತೀಯ ತೈಲ ಶುದ್ಧೀಕರಣ ಸಂಸ್ಥೆಗಳು (Oil Refineries) ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಇಂಧನ ಪೂರೈಸಲು ತಮ್ಮ ತಂತ್ರಜ್ಞಾನ ಮತ್ತು ತೈಲ ಮಿಶ್ರಣದ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಚ್ಚಾ ತೈಲ ಮಿಶ್ರಣದಲ್ಲಿ ಬದಲಾವಣೆ

ಮಧ್ಯಪ್ರಾಚ್ಯದ ಸಾಂಪ್ರದಾಯಿಕ ಮಾರ್ಗಗಳಲ್ಲಿ ತೈಲ ಸರಬರಾಜು ಕಷ್ಟಕರವಾಗಿರುವುದರಿಂದ, ಭಾರತೀಯ ಸಂಸ್ಥೆಗಳು ಅನಿವಾರ್ಯವಾಗಿ ಪರ್ಯಾಯ ದೇಶಗಳಿಂದ ಕಚ್ಚಾ ತೈಲವನ್ನು (Crude Oil) ಆಮದು ಮಾಡಿಕೊಳ್ಳುತ್ತಿವೆ. ಈ ಹೊಸ ತೈಲಗಳು ಸಾಮಾನ್ಯ ತೈಲಗಳಿಗಿಂತ ಹೆಚ್ಚು ಸಂಕೀರ್ಣವಾಗಿದ್ದು (Complex Crude Grades), ಇವುಗಳನ್ನು ಸಂಸ್ಕರಿಸುವುದು ಸುಲಭವಲ್ಲ. ಆದರೂ, ದೇಶದಲ್ಲಿ ಇಂಧನ ಕೊರತೆಯಾಗದಂತೆ ತಡೆಯಲು ರಿಫೈನರಿಗಳು ಈ ಸಂಕೀರ್ಣ ತೈಲಗಳನ್ನೇ ಹೊಸ ಮಿಶ್ರಣಗಳಲ್ಲಿ ಬಳಸಿ ಗರಿಷ್ಠ ಉತ್ಪಾದನೆಗೆ ಮುಂದಾಗಿವೆ.

ಇದನ್ನೂ ಓದಿ: ಕೋಲ್ಕತಾದಲ್ಲಿ ಅಮುಲ್​ನಿಂದ ವಿಶ್ವದ ಅತಿದೊಡ್ಡ ಮೊಸರು ಘಟಕ; ಕರ್ನಾಟಕದಲ್ಲಿ ನಂದಿನಿ ಎದುರು ಸಿಗದ ಗೆಲುವು ಅಮುಲ್​ಗೆ ಬಂಗಾಳದಲ್ಲಿ ಸಿಗುತ್ತಾ?

ತಂತ್ರಜ್ಞಾನದ ಗರಿಷ್ಠ ಬಳಕೆ

ಜಾಗತಿಕ ತೈಲ ಸಂಸ್ಕರಣಾ ತಂತ್ರಜ್ಞಾನ ಒದಗಿಸುವ ಪ್ರಮುಖ ಸಂಸ್ಥೆಯಾದ ‘ಲಮ್ಮಸ್ ಟೆಕ್ನಾಲಜಿ’ (Lummus Technology) ಪ್ರಕಾರ, ಭಾರತೀಯ ರಿಫೈನರಿಗಳು ಸದ್ಯ ತಮ್ಮಲ್ಲಿರುವ ‘ಹೈಡ್ರೋಕ್ರಾಕರ್ಸ್’ (Hydrocrackers, ಇದು ಸಂಕೀರ್ಣ ತೈಲವನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕ ಘಟಕ) ನಂತಹ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಮರು-ಸಂರಚನೆ ಮಾಡುತ್ತಿವೆ. ಮೂಲ ಘಟಕದ ವಿನ್ಯಾಸಕ್ಕಿಂತ ಭಿನ್ನವಾದ ಮತ್ತು ಕಠಿಣವಾದ ಕಚ್ಚಾ ತೈಲ ಬಂದರೂ, ಅದರಿಂದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವುದು ಇದರ ಉದ್ದೇಶವಾಗಿದೆ.

ಉಕ್ರೇನ್ ಯುದ್ಧದ ಸಮಯದ ಅನುಭವ

ಭಾರತಕ್ಕೆ ಇಂತಹ ಬಿಕ್ಕಟ್ಟು ಎದುರಾಗುತ್ತಿರುವುದು ಇದೇ ಮೊದಲಲ್ಲ. ನಾಲ್ಕು ವರ್ಷಗಳ ಹಿಂದೆ ಉಕ್ರೇನ್ ಯುದ್ಧ ಆರಂಭವಾದಾಗಲೂ ಇಂತಹುದೇ ಪರಿಸ್ಥಿತಿ ಇತ್ತು. ಆಗ ಭಾರತೀಯ ರಿಫೈನರಿಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಸಿಕ್ಕ ಭಾರಿ ಪ್ರಮಾಣದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ತಮ್ಮ ಘಟಕಗಳ ಸಾಮರ್ಥ್ಯವನ್ನು ಯಶಸ್ವಿಯಾಗಿ ಬದಲಾಯಿಸಿಕೊಂಡಿದ್ದವು. ಅಂದಿನ ಅನುಭವ ಈಗ ಹಾರ್ಮುಜ್ ಬಿಕ್ಕಟ್ಟನ್ನು ಎದುರಿಸಲು ನೆರವಾಗುತ್ತಿದೆ.

ಇದನ್ನೂ ಓದಿ: ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ಭವಿಷ್ಯದ ಹೂಡಿಕೆಯಲ್ಲಿ ಬದಲಾವಣೆ

ಈ ಬಿಕ್ಕಟ್ಟಿನಿಂದಾಗಿ ಗಲ್ಫ್ ರಾಷ್ಟ್ರಗಳು (GCC) ಕೂಡ ತಮ್ಮ ಹೂಡಿಕೆಯ ಹಾದಿಯನ್ನು ಬದಲಾಯಿಸುತ್ತಿವೆ. ಏಷ್ಯಾದ ಇತರ ದೇಶಗಳಲ್ಲಿ ಹೂಡಿಕೆ ಮಾಡುವ ಬದಲು, ತಮ್ಮದೇ ದೇಶದ ಒಳಗಿನ ಇಂಧನ ಮೂಲಸೌಕರ್ಯಗಳನ್ನು ಬಲಪಡಿಸಲು ಮುಂದಾಗುತ್ತಿವೆ. ಹಾರ್ಮುಜ್ ಜಲಸಂಧಿಯನ್ನೇ ಸಂಪೂರ್ಣವಾಗಿ ನಂಬಿಕೊಂಡಿರುವ ಕುವೈತ್, ಕತಾರ್ ಮತ್ತು ಇರಾಕ್‌ನಂತಹ ದೇಶಗಳು ಭವಿಷ್ಯದಲ್ಲಿ ಸುರಕ್ಷಿತ ಇಂಧನ ರಫ್ತಿಗಾಗಿ ಪರ್ಯಾಯ ಮಾರ್ಗಗಳು ಮತ್ತು ಜಂಟಿ ಯೋಜನೆಗಳ (Joint Ventures) ಬಗ್ಗೆ ಯೋಚಿಸುವಂತಾಗಿದೆ.

ಒಟ್ಟಾರೆಯಾಗಿ, ಜಾಗತಿಕ ರಾಜಕೀಯ ಉದ್ವಿಗ್ನತೆಯು ಭಾರತಕ್ಕೆ ತೈಲ ತರುವ ಹಾದಿಯನ್ನು ಕಠಿಣಗೊಳಿಸಿದ್ದರೂ, ಭಾರತೀಯ ತೈಲ ಕಂಪನಿಗಳು ಹೊಸ ತಂತ್ರಜ್ಞಾನ ಮತ್ತು ತೈಲ ಮಿಶ್ರಣದ ಮುಖಾಂತರ ದೇಶದ ಇಂಧನ ಭದ್ರತೆಗೆ ಯಾವುದೇ ಧಕ್ಕೆಯಾಗದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿವೆ. ಗಲ್ಫ್ ರಾಷ್ಟ್ರಗಳೂ ಕೂಡ ತಮ್ಮ ಕಾರ್ಯವಿಧಾನದಲ್ಲಿ ಮಾರ್ಪಾಡು ಮಾಡಲು ಹೊರಟಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!

ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!

ಬೆಂಗಳೂರು, ಜೂನ್ 01: ಕೈಯಲ್ಲಿ ದೇಶದ ಪ್ರತಿಷ್ಠಿತ ಐಐಟಿ (IIT) ಮತ್ತು ಐಐಎಂ (IIM) ಪದವಿಗಳು, ಅಮೆರಿಕದ ಪ್ರಸಿದ್ಧ ಕಂಪನಿಯಲ್ಲಿ ಕೈತುಂಬಾ ಸಂಬಳ ತಂದುಕೊಡುವ ಉದ್ಯೋಗ, ಐಷಾರಾಮಿ ಜೀವನ ಹೀಗೆ ಎಲ್ಲವೂ ಇದ್ದರೂ, ಅವೆಲ್ಲವನ್ನೂ ಬಿಟ್ಟು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಕೆಫೆ (Cafe) ಆರಂಭಿಸುವ ಮೂಲಕ ಇಬ್ಬರು ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

ಮುಖ್ಯಾಂಶಗಳು

  • ಐಐಟಿ ಖರಗ್‌ಪುರ ಹಾಗೂ ಐಐಎಂ ಬೆಂಗಳೂರು ಪದವೀಧರರಿಂದ ಸ್ವಂತ ಉದ್ಯಮದ ಸಾಹಸ.
  • ಅಮೆರಿಕದ ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಯ ಉದ್ಯೋಗ ತೊರೆದು ಬೆಂಗಳೂರಿಗೆ ಮರಳಿದ ಸ್ನೇಹಿತರು.
  • ಸಿಲಿಕಾನ್ ಸಿಟಿಯಲ್ಲಿ ಹೊಸ ಕೆಫೆ ಆರಂಭಿಸಿದ ಯುವಕರ ಕಥೆ ನೆಟ್ಟಿಗರ ಮನಗೆದ್ದಿದೆ.

ಸ್ಟಾರ್ಟ್‌ಅಪ್ ಹಬ್‌ನಲ್ಲಿ ಹೊಸ ಸಾಹಸ

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಐಐಟಿ ಖರಗ್‌ಪುರ (IIT Kharagpur) ಮತ್ತು ಐಐಎಂ ಬೆಂಗಳೂರು (IIM Bangalore) ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದ ಇಬ್ಬರು ಯುವಕರು ಅಮೆರಿಕದ ಪ್ರಸಿದ್ಧ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ರೆಸ್ಯೂಮೆ (CV) ನೋಡಿದರೆ ಯಾವುದೇ ದೊಡ್ಡ ಕಂಪನಿಯಾದರೂ ತಕ್ಷಣ ಕೋಟ್ಯಂತರ ರೂಪಾಯಿ ಪ್ಯಾಕೇಜ್ ನೀಡಲು ಸಿದ್ಧವಿತ್ತು. ಆದರೆ, ಈ ಯುವಕರು ಕೇವಲ ಸಂಬಳದ ಗುಲಾಮರಾಗಿರಲು ಬಯಸಲಿಲ್ಲ. ಕಾರ್ಪೊರೇಟ್ ಬದುಕಿಗೆ ಬೈ ಹೇಳಿದ ಈ ಜೋಡಿ, ತಮ್ಮದೇ ಆದ ಉದ್ಯಮ ಆರಂಭಿಸಲು ನಿರ್ಧರಿಸಿ ಬೆಂಗಳೂರಿಗೆ ಮರಳಿತು

ಪ್ರಸ್ತುತ ಈ ಇಬ್ಬರು ಸ್ನೇಹಿತರು ಬೆಂಗಳೂರಿನಲ್ಲಿ ಸ್ವಂತ ಕೆಫೆಯೊಂದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇವರ ಈ ಯಶೋಗಾಥೆಯು ಲಿಂಕ್ಡ್‌ಇನ್ (LinkedIn) ಹಾಗೂ ಎಕ್ಸ್ (X) ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ

ಸಾಮಾನ್ಯವಾಗಿ ಐಐಟಿ-ಐಐಎಂ ಪದವೀಧರರು ದೊಡ್ಡ ತಂತ್ರಜ್ಞಾನ ಕಂಪನಿಗಳು ಅಥವಾ ಹಣಕಾಸು ಸಂಸ್ಥೆಗಳ ಮುಖ್ಯಸ್ಥರಾಗಲು ಬಯಸುತ್ತಾರೆ. ಆದರೆ, ಈ ಯುವಕರು ತಳಮಟ್ಟದಿಂದ ಆಹಾರ ಉದ್ಯಮದಲ್ಲಿ ಹೊಸದೇನನ್ನಾದರೂ ಸಾಧಿಸಲು ಹೊರಂತಿರುವುದು ನೆಟ್ಟಿಗರ ಗಮನ ಸೆಳೆದಿದೆ. ನಿಮ್ಮ ಕನಸನ್ನು ಬೆನ್ನಟ್ಟುವುದು ಸುಲಭವಲ್ಲ, ಅದಕ್ಕೆ ಅಪಾರ ಧೈರ್ಯ ಬೇಕು ಎಂದು ಹಲವರು ಇವರ ನಿರ್ಧಾರವನ್ನು ಕೊಂಡಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version