ಸೋನಂ ವಾಗ್​​ಚುಕ್ ಹೋರಾಟಕ್ಕೆ ಸೊನಾಕ್ಷಿ-ಸಮಯ್ ಬೆಂಬಲ – Kannada News | Sonakshi Sinha, Comedian Samay Raina express support to Sonam Wangchuk

ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam wangchuk) ಅವರು ಕಳೆದ 19 ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಬಾಲಿವುಡ್​​ನ ನಟ-ನಟಿಯರು ವಾಂಗ್ಚುಕ್ ಅವರ ಹೋರಾಟದ ಬಗ್ಗೆ ಮೌನವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ಸಹ ವ್ಯಕ್ತವಾಗಿದೆ. ಆದರೆ ಇತ್ತೀಚೆಗೆ ಕೆಲ ಬಾಲಿವುಡ್ ಮಂದಿ ಸೋನಂ ಅವರಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಟಿ ಸೋನಾಕ್ಷಿ ಸಿನ್ಹ ಅವರು ಸೋನಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ಅವರೊಟ್ಟಿಗೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸೋನಾಕ್ಷಿ ಮಾತ್ರವೇ ಅಲ್ಲದೆ, ಖ್ಯಾತ ಕಮಿಡಿಯನ್ ಸಮಯ್ ರೈನಾ ಸಹ ಸೋನಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಸಹ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಾಮಾನ್ಯವಾಗಿ ತಾವು ಇಂತಹ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡದಿದ್ದರೂ, ಈಗ ಮೌನವಾಗಿರುವುದು ತಮಗೆ ಕಷ್ಟವಾಗಿದೆ ಎಂದು ಹೇಳಿದ್ದಾರೆ. ‘ಸೋನಮ್ ವಾಂಗ್‌ಚುಕ್ ನಮಗೆಲ್ಲರಿಗೂ ಪರಿಚಿತರು. ನಮ್ಮ ದೇಶಕ್ಕಾಗಿ ಅವರು ಏನು ಮಾಡಿದ್ದಾರೆ, ಅವರ ಸಾಧನೆಗಳೇನು ಮತ್ತು ಅವರು ಎಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇಂದು ಅವರು 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರು ಏನನ್ನೂ ಸೇವಿಸಿಲ್ಲ. ಅವರು ಇದನ್ನು ಏಕೆ ಮಾಡುತ್ತಿದ್ದಾರೆ? ಅವರು ಮಕ್ಕಳ ಭವಿಷ್ಯಕ್ಕಾಗಿ ಅಲ್ಲಿ ಕುಳಿತಿದ್ದಾರೆ, ಆ ಭವಿಷ್ಯವು ವಿನಾಶದತ್ತ ಸಾಗುತ್ತಿದೆ ಎಂದು ಅವರು ನಂಬಿದ್ದಾರೆ. ತಮ್ಮ ಜೀವ ಕಳೆದುಕೊಂಡ ಮಕ್ಕಳಿಗಾಗಿ ಅವರು ಹೋರಾಡುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡದ ವ್ಯವಸ್ಥೆಯ ವಿರುದ್ಧ ಅವರು ನಿಂತಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:‘ನ್ಯಾಯಾಲಯದ ದಾರಿ ತಪ್ಪಿಸಬೇಡಿ’; ಕಾಮಿಡಿಯನ್ ಸಮಯ್ ರೈನಾಗೆ 3 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್!

‘ಈ ದೇಶದ ಮಕ್ಕಳ ಭವಿಷ್ಯಕ್ಕಾಗಿ ಕಳೆದ 18 ದಿನಗಳಿಂದ ಅವರು ಏನನ್ನೂ ಸೇವಿಸಿಲ್ಲ, ಆದರೆ ಅನೇಕ ಜನರು ಮೌನವಾಗಿ ನೋಡುತ್ತಿದ್ದಾರೆ. ನನ್ನಿಂದ ಸುಮ್ಮನಿರಲು ಸಾಧ್ಯವಾಗಲಿಲ್ಲ. ಈಗ ಏನಾಗುತ್ತದೋ ಅದು ಆಗಲಿ, ಆದರೆ ನಾನು ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಈ ವ್ಯಕ್ತಿ, ಏಕಾಂಗಿಯಾಗಿ, ಸಿಜೆಪಿ (CJP) ಯೊಂದಿಗೆ ಸೇರಿ ಸರಿಯಾದ ಕಾರಣಕ್ಕಾಗಿ ಧ್ವನಿ ಎತ್ತಿದ್ದಾರೆ. ನಾನು ನಮ್ಮ ದೇಶದ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಏಕೆ ಯಾರೂ ಕೇಳುತ್ತಿಲ್ಲ? ಯಾರಿಗೂ ಕಾಳಜಿ ಇಲ್ಲ. ಯಾರೂ ಸಂವಾದ ನಡೆಸುತ್ತಿಲ್ಲ, ಯಾರೂ ಮಾತನಾಡುತ್ತಿಲ್ಲ. ಯಾರೂ ಅವರ ಕಡೆಗೆ ತಿರುಗಿ ನೋಡುತ್ತಿಲ್ಲ’ ಎಂದು ಸೊನಾಕ್ಷಿ ಪ್ರಶ್ನೆ ಮಾಡಿದ್ದಾರೆ.

‘ನಾನು ದೇಶದ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದರಿಂದ ಮತ್ತು ತಾನು ದೇಶವಿರೋಧಿಯಲ್ಲದ ಕಾರಣ ಈ ವಿಷಯದ ಬಗ್ಗೆ ಮಾತನಾಡಲು ನಿರ್ಧರಿಸಿದೆ. ನೀವು ನಮಗೆ ಬಹಳ ಮುಖ್ಯ, ನೀವು ಒಂದು ರತ್ನ. ಈ ದೇಶಕ್ಕಾಗಿ ನೀವು ಮಾಡುತ್ತಿರುವ ಕೆಲಸಕ್ಕೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು. ನೀವು ನಿಮ್ಮ ಉಪವಾಸವನ್ನು ಮುರಿಯಿರಿ ಎಂದು ನಾನು ಹೇಳುವುದಿಲ್ಲ. ನಾನು ಕೇವಲ ಕೇಳಲು ಬಯಸುತ್ತೇನೆ, ಇದು ಯಾವಾಗ ಕೊನೆಯಾಗುತ್ತದೆ? ಈ ಮನುಷ್ಯ ಸತ್ತಾಗ ನೀವು ಎಚ್ಚರಗೊಳ್ಳುತ್ತೀರಾ? ಆಗ ಯಾರ ಜವಾಬ್ದಾರಿ ಇರುತ್ತದೆ?” ಎಂದು ಸೋನಾಕ್ಷಿ ಪ್ರಶ್ನಿಸಿದ್ದಾರೆ. ವಿಡಿಯೋದ ಕ್ಯಾಪ್ಷನ್‌ನಲ್ಲಿ, “ಇನ್ನು ನೋಡಲು ಸಾಧ್ಯವಾಗುತ್ತಿಲ್ಲ… ಮನಸ್ಸು ಒಪ್ಪುತ್ತಿಲ್ಲ. ವಾಂಗ್‌ಚುಕ್ ಸರ್, ನಾವು ನಿಮ್ಮನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಬರೆದುಕೊಂಡಿದ್ದಾರೆ.

ಕಮಿಡಿಯನ್ ಸಮಯ್ ರೈನಾ ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹದ ಫೋಟೋವನ್ನು ಹಂಚಿಕೊಂಡು, ‘ಅವರು ಸುರಕ್ಷಿತವಾಗಿರಲಿ ಮತ್ತು ಈ ವಿಷಯವು ಸಂವಾದದ ಮೂಲಕ ಶೀಘ್ರವೇ ಮುಕ್ತಾಯಗೊಳ್ಳಲಿ ಎಂದು ಹಾರೈಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಅತುಲ್ ಕುಲಕರ್ಣಿ, ಪ್ರಕಾಶ್ ರಾಜ್, ಚಿನ್ಮಯಿ ಶ್ರೀಪಾದ, ಓಮಿ ವೈದ್ಯ, ಜೀನತ್ ಅಮನ್, ಅಭಯ್ ಡಿಯೋಲ್, ಸ್ವರಾ ಭಾಸ್ಕರ್, ಸೋನಿ ರಾಜ್‌ದಾನ್, ನಾಸಿರುದ್ದೀನ್ ಶಾ, ರತ್ನಾ ಪಾಠಕ್ ಶಾ, ಶಬಾನಾ ಅಜ್ಮಿ ಮತ್ತು ಇತರ ಕೆಲವು ಸೆಲೆಬ್ರಿಟಿಗಳು ಸೋನಂ ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೀ ಟಿವಿಯ ‘ಸರಿಗಮಪ’ ಹೊಸ ಸೀಸನ್ ಆಡಿಷನ್; ಬೆಂಗಳೂರಲ್ಲೂ ನಡೆಯಲಿದೆ ಆಡಿಷನ್ – Kannada News | Zee TV SaReGaMaPa Auditions in Bengaluru Registration Details and Venue Info Inside

ಜೀ ಟಿವಿಯ (ಹಿಂದಿ) ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ ತನ್ನ ಹೊಸ ಸೀಸನ್‌ಗಾಗಿ ಆಡಿಷನ್‌ಗಳನ್ನು ಆರಂಭಿಸಿದೆ. ಈಗಾಗಲೇ ವಾರಣಾಸಿ, ಲಕ್ನೋ, ದೆಹಲಿ, ಚಂಡೀಗಢ, ಜೈಪುರ ಮತ್ತು ಮುಂಬೈನಲ್ಲಿ ಆಡಿಷನ್‌ಗಳು ಪೂರ್ಣಗೊಂಡಿದ್ದು, ಮುಂದಿನ ಹಂತವಾಗಿ ಬೆಂಗಳೂರು, ನಾಗ್ಪುರ ಹಾಗೂ ಇಂದೋರ್‌ನಲ್ಲಿ ಆಡಿಷನ್‌ಗಳು ನಡೆಯಲಿವೆ. ಈ ಸೀಸನ್‌ನಲ್ಲಿ ಒಟ್ಟು 100ಕ್ಕೂ ಹೆಚ್ಚು ಗಾಯಕರು ಭಾಗವಹಿಸಲಿದ್ದಾರೆ.

ಜೀ ಕನ್ನಡ ವೇದಿಕೆ ಮೂಲಕ ಈಗಾಗಲೇ ಅನೇಕರಿಗೆ ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಲು ವೇದಿಕೆ ಸಿಕ್ಕಿದೆ. ಅದೇ ರೀತಿ ಬೆಂಗಳೂರಿನಲ್ಲಿ ಇರುವವರಿಗೆ ಜೀ ಟಿವಿ ವೇದಿಕೆ ಏರುವ ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರ ಕೂಡ ಸಿಕ್ಕಿದೆ.

ಆಡಿಷನ್ ನಡೆಯುವ ಸ್ಥಳಗಳ ವಿವರಗಳನ್ನು ನೋಡುವುದಾದರೆ, ನಾಗ್ಪುರದಲ್ಲಿ ಜುಲೈ 18ರಂದು ನ್ಯೂ ರಾಮ್‌ದಸ್‌ಪೇಠ್‌ನ ಎನ್ ಅಂಬಾಜರಿ ರಸ್ತೆಯಲ್ಲಿರುವ ವಿಬ್ಗೈರ್ ವರ್ಲ್ಡ್ ಸ್ಕೂಲ್‌ನಲ್ಲಿ ಆಡಿಷನ್ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಜುಲೈ 19ರಂದು ಸಂಪಂಗಿರಾಮನಗರದ (ಟೌನ್ ಹಾಲ್ ಬಳಿ) ಪಿ. ಕಳಿಂಗ ರಾವ್ ರಸ್ತೆಯಲ್ಲಿರುವ ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜಿನಲ್ಲಿ ಆಡಿಷನ್ ನಡೆಯಲಿದೆ. ಇಂದೋರ್‌ನಲ್ಲಿ ಅದೇ ಜುಲೈ 19ರಂದು ಬಂಗಾಳಿ ಸ್ಕ್ವೇರ್ ಹತ್ತಿರದ ಬಿಚೋಲಿ ರಸ್ತೆಯಲ್ಲಿರುವ ಆದರ್ಶ ಶಿಶು ವಿಹಾರ್ ಹೈಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಆಡಿಷನ್‌ಗಳು ನಡೆಯಲಿವೆ.

ಇದನ್ನೂ ಓದಿ: ಅಮ್ಮಂದಿರಿಗೆ ಸುವರ್ಣಾವಕಾಶ; ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್  ಸೂಪರ್ ಮಾಮ್

ಈ ಆಡಿಷನ್‌ಗಳಲ್ಲಿ ಭಾಗವಹಿಸಲು ಆಸಕ್ತಿ ಇರುವ ಗಾಯಕರು ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು. ಆಸಕ್ತರು 9152915218 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಎಸ್‌ಎಂಎಸ್‌ನಲ್ಲಿ ಆಡಿಷನ್ ಲಿಂಕ್ ಪಡೆಯಬಹುದು. ಅಥವಾ 8655780787 ಸಂಖ್ಯೆಗೆ ವಾಟ್ಸಾಪ್ ಮೂಲಕ ತಮ್ಮ ವೈಯಕ್ತಿಕ ವಿವರಗಳು ಹಾಗೂ ತಾವು ಹಾಡಿರುವ ಎರಡು ಆಡಿಯೋ ಅಥವಾ ವಿಡಿಯೋ ಕ್ಲಿಪ್‌ಗಳನ್ನು ಕಳುಹಿಸಬಹುದು. ಇದರ ಜೊತೆಗೆ ನೇರವಾಗಿ ಅಧಿಕೃತ ವೆಬ್‌ಸೈಟ್ saregamapaauditions.zee5.com ಗೆ ಭೇಟಿ ನೀಡುವ ಮೂಲಕವೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾರಿಗೆ ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್ ಎಫೆಕ್ಟ್: ಪ್ರಯಾಣಿಕರ ಅನುಕೂಲಕ್ಕೆ ‘ಸ್ಮಾರ್ಟ್ ಕಾರ್ಡ್’ ತರಲು ಮುಂದಾದ ಬಿಎಂಟಿಸಿ! – Kannada News | BMTC Smart Card: Minister Byrathi Suresh Reality Check Brings Big Change

ಪ್ರಯಾಣಿಕರ ಅನುಕೂಲಕ್ಕೆ ‘ಸ್ಮಾರ್ಟ್ ಕಾರ್ಡ್’ ತರಲು ಮುಂದಾದ ಬಿಎಂಟಿಸಿ!

ಬೆಂಗಳೂರು, ಜುಲೈ 17: ಇತ್ತೀಚೆಗಷ್ಟೆ ಸಾರಿಗೆ ಸಚಿವ ಭೈರತಿ ಸುರೇಶ್ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್​ನಿಂದ ಕೆಳಗೆ ಇಳಿಸಿದ್ದ ಕಂಡಕ್ಟರ್​​​ನನ್ನು ಅಮಾನತುಗೊಳಿಸಿಲಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ (BMTC) ಪ್ರಯಾಣಿಕರು ಚಿಲ್ಲರೆ ಹಣದ ಕಿರಿಕಿರಿ ಹಾಗೂ ನೆಟ್‌ವರ್ಕ್ ಸಮಸ್ಯೆಯಿಂದ ಟಿಕೆಟ್ ಸಿಗದೆ ಪರದಾಡುವುದನ್ನು ನಿಲ್ಲಿಸಲು ನಮ್ಮ ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿ ಬಸ್‌ಗಳಲ್ಲೂ ಶೀಘ್ರದಲ್ಲೇ ‘ಸ್ಮಾರ್ಟ್ ಕಾರ್ಡ್’ ವ್ಯವಸ್ಥೆಯನ್ನು ಜಾರಿಗೆ ತರಲು ನಿಗಮವು ಗಂಭೀರ ಚಿಂತನೆ ನಡೆಸಿದೆ.

ಸಚಿವರ ರಿಯಾಲಿಟಿ ಚೆಕ್ ಬೆನ್ನಲ್ಲೇ ಬಿಎಂಟಿಸಿ ಅಲರ್ಟ್!

ಕಳೆದ ಶನಿವಾರದಂದು ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ಮುಖಕ್ಕೆ ಮಾಸ್ಕ್ ಧರಿಸಿ ಬೆಂಗಳೂರಿನ ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಚಿಲ್ಲರೆ ಹಣದ ಸಮಸ್ಯೆಯಿಂದಾಗಿ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವುದು ಹಾಗೂ ಕಂಡಕ್ಟರ್‌ಗಳ ಬಳಿ ಒಂದೇ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷನ್ (ETM) ಇರುವುದರಿಂದ ಪ್ರತಿಯೊಬ್ಬರಿಗೂ ಟಿಕೆಟ್ ನೀಡಲು ವಿಳಂಬವಾಗುತ್ತಿರುವುದು ಸಚಿವರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಒಂದು ತಿಂಗಳೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ, ಬಸ್‌ನಲ್ಲಿ ಒಂದೇ ಇಟಿಎಂ ಮಿಷನ್ ಇರುವುದರಿಂದ ಟಿಕೆಟ್ ವಿತರಣೆ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಚಿಲ್ಲರೆ ಸಮಸ್ಯೆಗೆ ಮುಕ್ತಿ ನೀಡಲು ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡಲಿದೆ ‘ಸ್ಮಾರ್ಟ್ ಕಾರ್ಡ್’

ಮೆಟ್ರೋ ಕಾರ್ಡ್ ಮಾದರಿಯಲ್ಲೇ ಈ ಸ್ಮಾರ್ಟ್ ಕಾರ್ಡ್ ಕೆಲಸ ಮಾಡಲಿದ್ದು, ಪ್ರಯಾಣಿಕರು ಮೊದಲಿಗೆ ಇದನ್ನು ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಬಸ್ ಹತ್ತಿದ ಬಳಿಕ ಕಂಡಕ್ಟರ್ ಬಳಿ ಹೋಗಬೇಕಾಗುವ ಮಾರ್ಗವನ್ನು ತಿಳಿಸಿದರೆ, ಕಂಡಕ್ಟರ್ ತಮ್ಮ ಇಟಿಎಂ ಮಿಷನ್‌ನಲ್ಲಿ ಅದನ್ನು ನಮೂದಿಸುತ್ತಾರೆ. ನಂತರ ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್ ಅನ್ನು ಇಟಿಎಂ ಯಂತ್ರದ ಮೇಲೆ ಕೇವಲ ಟ್ಯಾಪ್ ಮಾಡಿದರೆ ಸಾಕು, ತಕ್ಷಣವೇ ಹಣ ಕಡಿತಗೊಂಡು ಟಿಕೆಟ್ ಕೈಸೇರುತ್ತದೆ.

ಇದನ್ನೂ ಓದಿ ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್​​​ ಬೆನ್ನಲ್ಲೇ ಚಾಲಕ-ನಿರ್ವಾಹಕರಿಗೆ ಬಿಎಂಟಿಸಿಯಿಂದ ಖಡಕ್​ ಸೂಚನೆ

ಈ ತಂತ್ರಜ್ಞಾನಕ್ಕೆ ಯಾವುದೇ ಇಂಟರ್ನೆಟ್ ಅಥವಾ ನೆಟ್‌ವರ್ಕ್ ಅಗತ್ಯವಿಲ್ಲದ ಕಾರಣ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲೂ ಇದು ಸರಾಗವಾಗಿ ಕಾರ್ಯನಿರ್ವಹಿಸಲಿದೆ. ಆನ್‌ಲೈನ್ ಯುಪಿಐ ಪಾವತಿಗೆ ತಗಲುವ ಸಮಯವೂ ಇದರಿಂದ ಉಳಿತಾಯವಾಗಲಿದೆ. ಈ ನೂತನ ಸ್ಮಾರ್ಟ್ ಕಾರ್ಡ್ ಜಾರಿಯ ನಿರ್ಧಾರಕ್ಕೆ ಬಿಎಂಟಿಸಿ ನಿತ್ಯ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ನಿತ್ಯದ ಜಂಜಾಟಕ್ಕೆ ಶೀಘ್ರವೇ ಮುಕ್ತಿ ಸಿಗಲೆಂದು ಆಶಿಸಿದ್ದಾರೆ. ಒಟ್ಟಿನಲ್ಲಿ ಸಚಿವರ ರಿಯಾಲಿಟಿ ಚೆಕ್ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಿದ್ದು, ಡಿಜಿಟಲ್ ಪಾವತಿಯ ಹೊಸ ಆಯಾಮಕ್ಕೆ ಬಿಎಂಟಿಸಿ ಸಜ್ಜಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾಗತಿಕ ರಾಜಕೀಯ ತಲ್ಲಣ: 220 ಮಿಲಿಯನ್ ಅಮೆರಿಕನ್ನರ ವೋಟರ್ ಡೇಟಾ ಚೀನಾ ಪಾಲು, ಶ್ವೇತಭವನದಿಂದ ಟ್ರಂಪ್ ಬಾಂಬ್ – Kannada News | China Hacked 220M US Voter Data, Sparking Global Cyber War Fears

ವಾಷಿಂಗ್ಟನ್, ಜುಲೈ 17:ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾ ವಿರುದ್ಧ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ‘ಸೈಬರ್ ಹ್ಯಾಕಿಂಗ್’ ಆರೋಪವನ್ನು ಹೊರಿಸುವ ಮೂಲಕ ಜಾಗತಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಚೀನಾವು ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿ, ಬರೋಬ್ಬರಿ 220 ಮಿಲಿಯನ್ (22 ಕೋಟಿ) ಅಮೆರಿಕದ ಮತದಾರರ ಅತ್ಯಂತ ರಹಸ್ಯ ಫೈಲ್‌ಗಳನ್ನು ಅಕ್ರಮವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಶ್ವೇತಭವನದಿಂದ ದೇಶವನ್ನುದ್ದೇಶಿಸಿ ನಡೆಸಿದ ಪ್ರೈಮ್-ಟೈಮ್ ಭಾಷಣದಲ್ಲಿ ಟ್ರಂಪ್ ಗುಡುಗಿದ್ದಾರೆ.

ಅಮೆರಿಕದ ಇತಿಹಾಸದಲ್ಲೇ ಇದು ಅತಿ ದೊಡ್ಡ “ಚುನಾವಣಾ ದತ್ತಾಂಶ ರಾಜಿ” ಎಂದು ಕರೆದಿರುವ ಅವರು, ಈ ಕುರಿತಾದ ಆಘಾತಕಾರಿ ರಹಸ್ಯ ವರದಿಗಳನ್ನು ಶೀಘ್ರದಲ್ಲೇ ಜಗತ್ತಿನೆದುರು ಬಿಚ್ಚಿಡುವುದಾಗಿ ಎಚ್ಚರಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಕಾರ, ಚೀನಾದ ಈ ರಹಸ್ಯ ಸೈಬರ್ ಕಾರ್ಯಾಚರಣೆಯು 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲೇ ಆರಂಭವಾಗಿತ್ತು.

ಚೀನಾ ಇತಿಹಾಸದಲ್ಲೇ ಕಾಣದ ಮಹಾ ವಂಚನೆಯ ಮೂಲಕ ನಮ್ಮ ಮತದಾರರ ಪ್ರಮುಖ ದತ್ತಾಂಶವನ್ನು ಕದ್ದಿದೆ. ಇದು ಅಮೆರಿಕದ ಚುನಾವಣಾ ಭದ್ರತೆಗೆ ಎದುರಾದ ಸವಾಲು. ನಮ್ಮ ದೇಶದ ಆಡಳಿತ ವ್ಯವಸ್ಥೆಯ ಒಳಗೇ ಇರುವ ಕೆಲವು ಪ್ರಭಾವಿ ವ್ಯಕ್ತಿಗಳು ಈ ಮಹಾ ಹಗರಣವನ್ನು ಇಷ್ಟು ದಿನ ಮುಚ್ಚಿಡುವ ಕೆಲಸ ಮಾಡಿದ್ದಾರೆ ಎಂದು ಟ್ರಂಪ್ ನೇರ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಓದಿ: ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್

ಕೋರ್ಟ್‌ಗಳಲ್ಲಿ ಸಾಬೀತಾಗದ ವಾದ

ಟ್ರಂಪ್ ಅವರು ಚೀನಾ ಮ ಸರ್ಕಾರದ ವಿರುದ್ಧ ಇಷ್ಟೊಂದು ಭೀಕರ ಆರೋಪಗಳನ್ನು ಮಾಡುತ್ತಿದ್ದರೂ, ಅಮೆರಿಕದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯು ಮಾತ್ರ ಇದನ್ನು ಒಪ್ಪುತ್ತಿಲ್ಲ.

60 ಕ್ಕೂ ಹೆಚ್ಚು ಮೊಕದ್ದಮೆಗಳು ವಜಾ: 2020 ರ ಚುನಾವಣಾ ಫಲಿತಾಂಶದ ನಂತರ ಟ್ರಂಪ್ ಮತ್ತು ಅವರ ಮಿತ್ರರು ಅಮೆರಿಕದ ವಿವಿಧ ನ್ಯಾಯಾಲಯಗಳಲ್ಲಿ ಹೂಡಿದ್ದ 60 ಕ್ಕೂ ಹೆಚ್ಚು ಪ್ರಮುಖ ಮೊಕದ್ದಮೆಗಳು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ವಜಾಗೊಂಡಿವೆ.

ಖುದ್ದು ಇಲಾಖೆಯಿಂದಲೇ ತಪಾಸಣೆ: ಟ್ರಂಪ್ ಅವರ ಸ್ವಂತ ಆಡಳಿತಾವಧಿಯ ನ್ಯಾಯಾಂಗ ಇಲಾಖೆ , ಎಫ್‌ಬಿಐ (FBI) ಹಾಗೂ ದೇಶಾದ್ಯಂತ ನಡೆದ ಹತ್ತಾರು ಅಧಿಕೃತ ಮರುಎಣಿಕೆ ಮತ್ತು ಆಡಿಟ್‌ಗಳಲ್ಲಿ ಚುನಾವಣಾ ಫಲಿತಾಂಶವನ್ನು ಬದಲಾಯಿಸುವಂತಹ ಯಾವುದೇ ವ್ಯವಸ್ಥಿತ ವಂಚನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಆದರೂ ಟ್ರಂಪ್ ತಮ್ಮ ವಾದದಿಂದ ಹಿಂದೆ ಸರಿದಿಲ್ಲ.

ಚೀನಾ-ಅಮೆರಿಕ ಮುಖಾಮುಖಿ ಸೈಬರ್ ಸಮರ

ಅಮೆರಿಕ ಅಧ್ಯಕ್ಷರ ಈ ಹೇಳಿಕೆಯು ಜಾಗತಿಕವಾಗಿ ಚೀನಾ ಮತ್ತು ಅಮೆರಿಕ ನಡುವಿನ ಹಳಸಿರುವ ಸಂಬಂಧವನ್ನು ಮತ್ತಷ್ಟು ಕೆಡಿಸಲಿದೆ.

ಚೀನಾದ ನಿರಾಕರಣೆ: ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯು ಟ್ರಂಪ್ ಅವರ ಆರೋಪಗಳನ್ನು ಕಟ್ಟುಕಥೆ ಎಂದು ತಳ್ಳಿಹಾಕಿದ್ದು, ತಾವು ಎಂದಿಗೂ ಇತರ ದೇಶಗಳ ಆಂತರಿಕ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಜಾಗತಿಕ ಆತಂಕ: ವಿಶ್ವದ ಅತ್ಯಂತ ಬಲಿಷ್ಠ ತಂತ್ರಜ್ಞಾನ ಹೊಂದಿರುವ ಅಮೆರಿಕದ ವೋಟರ್ ಡೇಟಾಬೇಸ್ ಅನ್ನೇ ಚೀನಾ ಹ್ಯಾಕ್ ಮಾಡಿದೆ ಎಂಬ ಟ್ರಂಪ್ ಹೇಳಿಕೆಯು ಜಗತ್ತಿನಾದ್ಯಂತ ಇವಿಎಂ  ಹಾಗೂ ಡಿಜಿಟಲ್ ಮತದಾನ ವ್ಯವಸ್ಥೆಗಳ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಟ್ರಂಪ್ ಬಿಡುಗಡೆ ಮಾಡಲಿರುವ ರಹಸ್ಯ ಗುಪ್ತಚರ ಸಾಕ್ಷ್ಯಗಳು ನಿಜವೇ ಅಥವಾ ಕೇವಲ ರಾಜಕೀಯ ಗಿಮಿಕ್ಕೇ ಎಂಬುದನ್ನು ಜಾಗತಿಕ ರಕ್ಷಣಾ ತಜ್ಞರು ತೀವ್ರವಾಗಿ ಗಮನಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಚಿತ್ರ ಮೂಢನಂಬಿಕೆಗಳು! ಜಗತ್ತಿನ ಈ 6 ನಂಬಿಕೆಗಳ ಬಗ್ಗೆ ಕೇಳಿದರೆ ನಿಮಗೂ ಅಚ್ಚರಿ ಆಗುತ್ತೆ – Kannada News | Strange superstitions from around the world you probably never knew

ಮೂಢನಂಬಿಕೆಗಳು (Superstitions) ಸಾವಿರಾರು ವರ್ಷಗಳಿಂದ ಮಾನವ ಸಮಾಜದ ಒಂದು ಭಾಗವಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಇಂದಿಗೂ ಜಗತ್ತಿನ ಹಲವು ದೇಶಗಳಲ್ಲಿ ಕೆಲವು ವಿಚಿತ್ರ ನಂಬಿಕೆಗಳನ್ನು ಜನರು ಪಾಲಿಸುತ್ತಿದ್ದಾರೆ. ಇವುಗಳಲ್ಲಿ ಕೆಲವು ಕೇವಲ ಸಂಪ್ರದಾಯವಾಗಿ ಉಳಿದಿದ್ದರೆ, ಇನ್ನೂ ಕೆಲವು ಕುಟುಂಬದ ಆಚರಣೆ ಅಥವಾ ಅದೃಷ್ಟ-ದುರಾದೃಷ್ಟದ ನಂಬಿಕೆಯಾಗಿ ಮುಂದುವರಿದಿವೆ. ಇವುಗಳಿಗೆ ವೈಜ್ಞಾನಿಕ ಆಧಾರವಿಲ್ಲದಿದ್ದರೂ, ವಿವಿಧ ಸಂಸ್ಕೃತಿಗಳ ನಂಬಿಕೆಗಳನ್ನು ತಿಳಿದುಕೊಳ್ಳಲು ಆಸಕ್ತಿದಾಯಕ ಉದಾಹರಣೆಗಳಾಗಿವೆ.

  1. ಹೊಸ ವರ್ಷದ ಮೊದಲ ದಿನ ಮನೆ ಶುಚಿಗೊಳಿಸಬಾರದು

ಕೆಲವು ದೇಶಗಳಲ್ಲಿ ಹೊಸ ವರ್ಷದ ಮೊದಲ ದಿನ ಮನೆ ಸ್ವಚ್ಛಗೊಳಿಸುವುದು ಅಥವಾ ಬಟ್ಟೆ ತೊಳೆಯುವುದು ಶುಭವನ್ನು ಹೊರಹಾಕಿದಂತಾಗುತ್ತದೆ ಎಂಬ ನಂಬಿಕೆ ಇದೆ. ಹೀಗೆ ಮಾಡಿದರೆ ವರ್ಷಪೂರ್ತಿ ಅದೃಷ್ಟ, ಹಣ ಹಾಗೂ ಉತ್ತಮ ಅವಕಾಶಗಳು ದೂರವಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಮತ್ತೊಂದೆಡೆ, ಹಬ್ಬದ ನಂತರ ಒಂದು ದಿನ ವಿಶ್ರಾಂತಿ ತೆಗೆದುಕೊಂಡು ಕುಟುಂಬದೊಂದಿಗೆ ಸಮಯ ಕಳೆಯುವ ಸಂದೇಶವನ್ನೂ ಈ ಸಂಪ್ರದಾಯ ನೀಡುತ್ತದೆ.

  1. ಬೆನ್ನನ್ನು ಹಿಂದೆ ಹಾಕಿ ಮಲಗಿದರೆ ಕೆಟ್ಟ ಕನಸು ಬರುತ್ತದೆ!

ಕೆಲವು ಸಂಸ್ಕೃತಿಗಳಲ್ಲಿ ಬೆನ್ನನ್ನು ಹಿಂದೆ ಹಾಕಿ ನೇರವಾಗಿ ಮಲಗಿದರೆ ದುಷ್ಟಶಕ್ತಿಗಳು ಅಥವಾ ನಕಾರಾತ್ಮಕ ಶಕ್ತಿಗಳು ಸುಲಭವಾಗಿ ತೊಂದರೆ ಕೊಡುತ್ತವೆ ಎಂಬ ನಂಬಿಕೆಯಿದೆ. ಕೆಲವರು ಇದನ್ನು ಸ್ಲೀಪ್ ಪ್ಯಾರಾಲಿಸಿಸ್ (Sleep Paralysis) ಜೊತೆಯಲ್ಲಿಯೂ ಸಂಬಂಧಿಸುತ್ತಾರೆ. ವೈದ್ಯಕೀಯವಾಗಿ ಇದು ಯಾವುದೇ ಮಲಗುವ ಸ್ಥಿತಿಯಲ್ಲಿ ಸಂಭವಿಸಬಹುದಾದರೂ, ಕೆಲವು ಅಧ್ಯಯನಗಳು ಬೆನ್ನಿನ ಮೇಲೆ ಮಲಗಿದಾಗ ಸಾಧ್ಯತೆ ಸ್ವಲ್ಪ ಹೆಚ್ಚಿರಬಹುದು ಎಂದು ಸೂಚಿಸುತ್ತವೆ.

  1. ರಾತ್ರಿ ಯಾರಾದರೂ ಹೆಸರು ಕರೆದರೆ ತಕ್ಷಣ ಪ್ರತಿಕ್ರಿಯಿಸಬಾರದು

ಕೆಲವು ಜನಪದ ನಂಬಿಕೆಗಳ ಪ್ರಕಾರ, ರಾತ್ರಿ ವೇಳೆ ಯಾರೋ ನಿಮ್ಮ ಹೆಸರನ್ನು ಕರೆದರೆ ತಕ್ಷಣ ಉತ್ತರಿಸಬಾರದು. ಅದು ದುಷ್ಟಶಕ್ತಿಗಳ ಮೋಸವಾಗಿರಬಹುದು ಎಂಬ ನಂಬಿಕೆ ಇದೆ. ಪ್ರಾಯೋಗಿಕವಾಗಿ ನೋಡಿದರೆ, ಕತ್ತಲಿನಲ್ಲಿ ಅಥವಾ ಅಪರಿಚಿತ ಸ್ಥಳದಲ್ಲಿ ಧ್ವನಿಯ ಮೂಲ ತಿಳಿಯುವವರೆಗೆ ಎಚ್ಚರಿಕೆಯಿಂದಿರುವುದು ಸುರಕ್ಷಿತವೂ ಹೌದು.

  1. ಬ್ಯಾಗ್ ಅನ್ನು ನೆಲದ ಮೇಲೆ ಇಡಬಾರದು

ಅನೇಕ ದೇಶಗಳಲ್ಲಿ ಹಣವಿರುವ ಬ್ಯಾಗ್ ಅಥವಾ ಪರ್ಸ್ ಅನ್ನು ನೆಲದ ಮೇಲೆ ಇಡುವುದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆಯಿದೆ. ಇದರ ಹಿಂದಿನ ಅರ್ಥವೆಂದರೆ, ನಿಮ್ಮ ಅಮೂಲ್ಯ ವಸ್ತುಗಳನ್ನು ಗೌರವದಿಂದ ಕಾಪಾಡಿಕೊಳ್ಳಬೇಕು ಎಂಬ ಸಂದೇಶ. ನೆಲದ ಮೇಲೆ ಇಡದಿದ್ದರೆ ಬ್ಯಾಗ್ ಕೊಳಕಾಗುವುದು, ಹಾಳಾಗುವುದು ಅಥವಾ ಕಳ್ಳತನವಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

Rain Water: ನೇರವಾಗಿ ಮಳೆ ನೀರು ಕುಡಿಯುವುದು ಸುರಕ್ಷಿತವೇ? ತಜ್ಞರು ಹೇಳಿದ ಸತ್ಯ

  1. ರಸ್ತೆಯಲ್ಲಿರುವ ನಿಂತ ನೀರನ್ನು ದಾಟಬಾರದು

ಕೆಲವು ಪ್ರದೇಶಗಳಲ್ಲಿ ರಸ್ತೆಯಲ್ಲಿ ನಿಂತಿರುವ ನೀರಿನ ಮೇಲೆ ಕಾಲಿಟ್ಟು ದಾಟಿದರೆ ನಕಾರಾತ್ಮಕ ಶಕ್ತಿ ನಿಮ್ಮನ್ನು ತಾಕುತ್ತದೆ ಎಂಬ ನಂಬಿಕೆಯಿದೆ. ಆದರೆ ಇದಕ್ಕೆ ಒಂದು ಪ್ರಾಯೋಗಿಕ ಅಂಶವೂ ಇದೆ. ನಿಂತ ನೀರಿನಲ್ಲಿ ಜಾರಿ ಬೀಳುವ ಅಪಾಯ, ಕಲುಷಿತ ನೀರಿನ ಸಂಪರ್ಕ ಅಥವಾ ಪಾದರಕ್ಷೆ ಹಾಳಾಗುವ ಸಾಧ್ಯತೆ ಇರುವುದರಿಂದ ಅದನ್ನು ತಪ್ಪಿಸುವುದು ಸುರಕ್ಷಿತ ಕ್ರಮವಾಗಿದೆ.

  1. ಊಟಕ್ಕೆ ಅಥವಾ ಸಮಾರಂಭಕ್ಕೆ ನಿಖರವಾಗಿ 13 ಜನರನ್ನು ಆಹ್ವಾನಿಸಬಾರದು

ಜಗತ್ತಿನ ಅನೇಕ ಭಾಗಗಳಲ್ಲಿ 13 ಸಂಖ್ಯೆಯನ್ನು ದುರಾದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಊಟ ಅಥವಾ ಸಮಾರಂಭದಲ್ಲಿ ಕೇವಲ 13 ಜನ ಮಾತ್ರ ಇದ್ದರೆ ಅವರಲ್ಲಿ ಒಬ್ಬರಿಗೆ ಅನಾಹುತ ಸಂಭವಿಸಬಹುದು ಎಂಬ ನಂಬಿಕೆ ಇದೆ. ಇಂದಿನ ಕಾಲದಲ್ಲಿ ಹೆಚ್ಚಿನವರು ಇದನ್ನು ಕೇವಲ ಜನಪದ ನಂಬಿಕೆಯೆಂದು ನೋಡಿದರೂ, ಕೆಲವರು ಇನ್ನೂ 13 ಸಂಖ್ಯೆಯನ್ನು ತಪ್ಪಿಸಲು ಹೆಚ್ಚುವರಿ ಅತಿಥಿಯನ್ನು ಆಹ್ವಾನಿಸುತ್ತಾರೆ.

ವೈಜ್ಞಾನಿಕ ದೃಷ್ಟಿಕೋನವೇನು?

ಈ ಎಲ್ಲ ನಂಬಿಕೆಗಳು ವಿವಿಧ ದೇಶಗಳ ಜನಪದ ಕಥೆಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಹುಟ್ಟಿಕೊಂಡಿವೆ. ಇವುಗಳಿಗೆ ವೈಜ್ಞಾನಿಕ ಪುರಾವೆಗಳಿಲ್ಲ. ಆದ್ದರಿಂದ ಇವುಗಳನ್ನು ಸತ್ಯವೆಂದು ಪರಿಗಣಿಸದೆ, ವಿವಿಧ ಸಮಾಜಗಳ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಮಾತ್ರ ನೋಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Puri Jagannath Temple: ಪುರಿ ಜಗನ್ನಾಥ ದೇವಾಲಯಕ್ಕೆ ಅವಿವಾಹಿತ ಜೋಡಿ ಒಟ್ಟಿಗೆ ಭೇಟಿ ನೀಡಬಾರದು ಯಾಕೆ? ಇಲ್ಲಿದೆ ನಿಗೂಢ ರಹಸ್ಯ! – Kannada News | Puri Jagannath Temple: Why Unmarried Couples Face Radha’s Curse? Myth vs Reality Explained

ಪುರಿ ಜಗನ್ನಾಥ ದೇವಸ್ಥಾನImage Credit source: Getty Images

ಪುರಿ ಜಗನ್ನಾಥ ದೇವಸ್ಥಾನಕ್ಕೆ ಸಂಬಂಧಿಸಿದ ಜಾನಪದ ಕಥೆಗಳ ಪ್ರಕಾರ, ಅವಿವಾಹಿತ ಜೋಡಿ ಒಟ್ಟಿಗೆ ದೇವಾಲಯದ ಗರ್ಭಗುಡಿಗೆ ಭೇಟಿ ನೀಡಬಾರದು ಎಂಬ ವಿಶಿಷ್ಟ ನಂಬಿಕೆಯಿದೆ. ಒಂದು ವೇಳೆ ಅವಿವಾಹಿತ ಜೋಡಿ ಒಟ್ಟಿಗೆ ಜಗನ್ನಾಥ ಸ್ವಾಮಿಯ ದರ್ಶನ ಪಡೆದರೆ, ಅದು ಅವರ ಪ್ರೇಮ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು ಅಥವಾ ಅವರ ಮದುವೆಗೆ ದೊಡ್ಡ ಅಡೆತಡೆಗಳನ್ನು ತಂದೊಡ್ಡಬಹುದು ಎಂದು ನಂಬಲಾಗಿದೆ. ಈ ನಂಬಿಕೆಯು ತಲೆಮಾರುಗಳಿಂದ ಸ್ಥಳೀಯರಲ್ಲಿ ಪ್ರಚಲಿತದಲ್ಲಿದ್ದು, ಇಂದಿಗೂ ಅನೇಕ ಅವಿವಾಹಿತ ದಂಪತಿಗಳು ಈ ಸಂಪ್ರದಾಯವನ್ನು ಗೌರವಿಸಿ, ಪ್ರತ್ಯೇಕವಾಗಿಯೇ ದೇವಸ್ಥಾನದೊಳಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ.

ತಾಯಿ ರಾಧಾ ರಾಣಿಯ ಶಾಪದ ಪೌರಾಣಿಕ ಹಿನ್ನೆಲೆ:

ಈ ಜಾನಪದ ಕಥೆಯು ತಾಯಿ ರಾಧಾ ರಾಣಿಯ ಶಾಪಕ್ಕೆ ಸಂಬಂಧಿಸಿದೆ ಎಂದು ದಂತಕಥೆಗಳು ಹೇಳುತ್ತವೆ. ಪುರಾಣಗಳ ಪ್ರಕಾರ, ರಾಧಾ ರಾಣಿಯು ಒಮ್ಮೆ ಪುರಿಯಲ್ಲಿರುವ ಶ್ರೀಕೃಷ್ಣನನ್ನು (ಜಗನ್ನಾಥ) ಭೇಟಿ ಮಾಡಲು ಬಂದಿದ್ದಳು. ಆದರೆ ದೇವಾಲಯದ ಪುರೋಹಿತರು ಅವಳನ್ನು ಒಳಗೆ ಪ್ರವೇಶಿಸದಂತೆ ತಡೆದು, ಭಗವಂತ ಮತ್ತು ಅವನ ಪತ್ನಿಗೆ ಮಾತ್ರ ಒಳಗೆ ಹೋಗಲು ಅವಕಾಶವಿದೆ ಎಂದು ಹೇಳಿದರು. ಇದರಿಂದ ತೀವ್ರವಾಗಿ ನೊಂದ ರಾಧಾ, ಈ ದೇವಾಲಯವನ್ನು ಒಟ್ಟಿಗೆ ಪ್ರವೇಶಿಸುವ ಯಾವುದೇ ಅವಿವಾಹಿತ ಜೋಡಿ ಎಂದಿಗೂ ಒಂದಾಗಲ್ಲ ಎಂದು ಶಾಪ ನೀಡಿದಳು. ಈ ಶಾಪದ ಭೀತಿಯಿಂದಾಗಿ ಇಂದಿಗೂ ಭಕ್ತರು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.

ದೇವಾಲಯದ ಆಡಳಿತ ಮಂಡಳಿ ಹೇಳುವುದೇನು?

ಈ ನಂಬಿಕೆಯು ಕೇವಲ ಜಾನಪದ ಕಥೆಯಾಗಿದ್ದು, ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯು ಅವಿವಾಹಿತ ದಂಪತಿಗಳು ಒಟ್ಟಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದಕ್ಕೆ ಯಾವುದೇ ಕಾನೂನು ಅಥವಾ ಅಧಿಕೃತ ನಿರ್ಬಂಧಗಳನ್ನು ವಿಧಿಸಿಲ್ಲ. ದೇವಾಲಯದ ನಿಯಮಾವಳಿಗಳಲ್ಲಿ ಪ್ರೇಮಿಗಳು ಒಟ್ಟಿಗೆ ಪ್ರವೇಶಿಸಬಾರದು ಎಂಬ ಯಾವುದೇ ಷರತ್ತುಗಳಿಲ್ಲ. ಇದು ಸಂಪೂರ್ಣವಾಗಿ ಭಕ್ತರ ವೈಯಕ್ತಿಕ ನಂಬಿಕೆಯ ವಿಷಯವಾಗಿದ್ದು, ನಂಬುವವರು ಇದನ್ನು ಪಾಲಿಸಿದರೆ, ಇನ್ನುಳಿದ ಅನೇಕ ಭಕ್ತರು ಸಾಮಾನ್ಯವಾಗಿ ಒಟ್ಟಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಉಡುಪುಗಳನ್ನೇ ಆಯ್ಕೆ ಮಾಡುವುದೇಕೆ ಗೊತ್ತಾ? ಇಲ್ಲಿದೆ ಆಧ್ಯಾತ್ಮಿಕ ಮಹತ್ವ!

ರಥಯಾತ್ರೆಯ ಸಂದರ್ಭದಲ್ಲಿ ಹರಿಯುವ ಭಕ್ತಿ ಸಾಗರ:

ಜಗನ್ನಾಥ ದೇವರ ರಥಯಾತ್ರೆಯನ್ನು ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಒಂಬತ್ತು ದಿನಗಳ ಮೆರವಣಿಗೆಯ ಸಮಯದಲ್ಲಿ, ಜಗನ್ನಾಥ ದೇವರು, ಅವರ ಅಣ್ಣ ಬಲಭದ್ರ ಮತ್ತು ಸಹೋದರಿ ಸುಭದ್ರಾ ದೇವಿ ಭವ್ಯವಾದ ರಥಗಳನ್ನೇರಿ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ಅದ್ಭುತ ಮತ್ತು ದೈವಿಕ ಪ್ರಯಾಣವನ್ನು ಕಣ್ಣುತುಂಬಿಕೊಳ್ಳಲು ಭಾರತದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿ ನಗರಕ್ಕೆ ಆಗಮಿಸುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮಳೆ ಕೊರತೆ, ಕರ್ನಾಟಕದ ಕೆಲವೆಡೆ ವಾಡಿಕೆಗಿಂತ 3-5 ಡಿಗ್ರಿ ಹೆಚ್ಚಿರಲಿದೆ ಗರಿಷ್ಠ ತಾಪಮಾನ – Kannada News | Karnataka Weather Forecast: Coastal Districts Likely to Receive Rain on July 17 18, temperatures 3–5 degrees above normal

ಬೆಂಗಳೂರು, ಜುಲೈ 17: ಕರ್ನಾಟಕದಲ್ಲಿ ಮುಂಗಾರು (Monsoon Rain) ದುರ್ಬಲವಾಗಿರುವ ನಡುವೆಯೇ, ತಾಪಮಾನ ಏರಿಕೆಯಾಗುತ್ತಿದೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3-5 ಡಿಗ್ರಿ ಸೆಲ್ಶಿಯಸ್ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ (Weather Forecast) ತಿಳಿಸಿದೆ. ಇಂದು (ಜುಲೈ 17) ಮತ್ತು 18ರಂದು ಕರಾವಳಿ ಕರ್ನಾಟಕ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವು ಕಡೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ಮಳೆ ಸಾಧ್ಯತೆ ಕಡಿಮೆ

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಸೀಮಿತವಾಗಿರಲಿದೆ. ಜುಲೈ 17ರಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮುಖ್ಯವಾಗಿ 30-40 ಕಿ.ಮೀ. ವೇಗದ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಜುಲೈ 18ರಂದು ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಬಲವಾದ ಗಾಳಿ ಮುಂದುವರಿಯುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನಲ್ಲೂ ಬರಲ್ಲ ಮಳೆ

ದಕ್ಷಿಣ ಒಳನಾಡಿನಲ್ಲೂ ವ್ಯಾಪಕ ಮಳೆಯ ನಿರೀಕ್ಷೆ ಇಲ್ಲ. ಜುಲೈ 17ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ದಾಖಲೆ ಬರೆದ ಉಷ್ಣಾಂಶ: 112 ವರ್ಷಗಳ ಬಳಿಕ ಜುಲೈನಲ್ಲಿ ಅತ್ಯಧಿಕ ತಾಪಮಾನ ದಾಖಲು

ಜುಲೈ 18ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ 30-40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ! – Kannada News | Koppala Railway Station Leaks Ahead of PM Modi’s Virtual Inauguration

ಕೊಪ್ಪಳ, ಜುಲೈ 17: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಉದ್ಘಾಟಿಸಬೇಕಿದ್ದ ನವೀಕೃತ ಕೊಪ್ಪಳ ರೈಲು ನಿಲ್ದಾಣದಲ್ಲಿ ಉದ್ಘಾಟನೆಗೂ ಮುನ್ನವೇ ಸೋರಿಕೆ ಕಾಣಿಸಿಕೊಂಡಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಿಲ್ದಾಣದ ಉದ್ಘಾಟನೆಗಾಗಿ ಸಿದ್ಧತೆಗಳು ನಡೆಯುತ್ತಿದ್ದವು. ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ, ಮಳೆಯಾದ ಕಾರಣ ನವೀಕೃತಗೊಂಡ ರೈಲು ನಿಲ್ದಾಣದ ಚಾವಣಿಯಿಂದ ನೀರು ಸೋರಿದ್ದು, ಕಾರ್ಯಕ್ರಮಕ್ಕೆ ಅಳವಡಿಸಿದ್ದ ಸೌಂಡ್ ಬಾಕ್ಸ್‌ಗಳು ನೀರಲ್ಲಿ ನೆನೆದು ಹೋಗಿವೆ. ಅಲ್ಲದೆ, ಪೈಪ್‌ಲೈನ್ ಸಹ ಹಾನಿಗೊಳಗಾಗಿ ಎರಡೂ ಕಡೆಗಳಿಂದ ನೀರು ಹೊರಬರುತ್ತಿರುವುದು ಕಂಡುಬಂದಿವೆ.

ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಉದ್ಘಾಟನೆಗೂ ಮುನ್ನವೇ ಇಂತಹ ಪರಿಸ್ಥಿತಿ ಎದುರಾಗಿರುವುದಕ್ಕೆ ಪ್ರಶ್ನಿಸಿದ್ದಾರೆ. ಪ್ರಧಾನಿಯವರಿಂದ ಉದ್ಘಾಟನೆಗೊಳ್ಳಬೇಕಿದ್ದ ಪ್ರಮುಖ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಮುಜುಗರದ ಸಂಗತಿಯಾಗಿದೆ ಎಂದು ಹಲವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಂಗಳೂರಿನ ವಾಯು ಗುಣಮಟ್ಟ ಉತ್ತಮ; ಚಿಕ್ಕಮಗಳೂರು, ಬೆಳಗಾವಿ ಟಾಪ್ – Kannada News | Karnataka AQI Report Today: Clean Air in Bengaluru and Major Cities

ಬೆಂಗಳೂರಿನ ವಾಯು ಗುಣಮಟ್ಟ ಉತ್ತಮ; ಚಿಕ್ಕಮಗಳೂರು, ಬೆಳಗಾವಿ ಟಾಪ್

ಬೆಂಗಳೂರು, ಜುಲೈ 17: ರಾಜ್ಯದಲ್ಲಿ ಸಕ್ರಿಯವಾಗಿರುವ ಮುಂಗಾರು ಮಳೆಯ ಪ್ರಭಾವದಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕದ (AQI) ಪ್ರಕಾರ, ರಾಜ್ಯದ ಬಹುತೇಕ ನಗರಗಳಲ್ಲಿ ಜನತೆ ನಿರಾಳವಾಗಿ ಉಸಿರಾಡುವಂತಹ ಪರಿಸರ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ‘ಸಾಧಾರಣ’ ವಾಯು ಗುಣಮಟ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಸರಾಸರಿ AQI ಪ್ರಮಾಣವು 60 ರಿಂದ 75ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಪರಿಸರ ನಿಯಂತ್ರಣ ಮಂಡಳಿಯ ನಿಯಮಾವಳಿಗಳ ಪ್ರಕಾರ ‘ಸಾಧಾರಣ’ (Moderate) ವಲಯಕ್ಕೆ ಸೇರುತ್ತದೆ. ನಗರದ ಪ್ರಮುಖ ವಲಯಗಳ ಇಂದಿನ ಮಾಲಿನ್ಯ ಮಟ್ಟ ಹೀಗಿದೆ:

ಬಿಟಿಎಂ ಲೇಔಟ್ ಮತ್ತು ಕಡಬೀಸನಹಳ್ಳಿ: ಐಟಿ ಕಾರಿಡಾರ್ ಹಾಗೂ ವರ್ತುಲ ರಸ್ತೆಯ ಭಾಗಗಳಲ್ಲಿ ವಾಹನ ಸಂಚಾರದ ದಟ್ಟಣೆಯಿಂದಾಗಿ AQI 67 ರಿಂದ 75ರಷ್ಟಿದ್ದು, ನಗರದ ಇತರೆಡೆಗೆ ಹೋಲಿಸಿದರೆ ಕೊಂಚ ಹೆಚ್ಚಿನ ಮಾಲಿನ್ಯ ದಾಖಲಾಗಿದೆ.
ಪೀಣ್ಯ ಮತ್ತು ಮೆಜೆಸ್ಟಿಕ್: ಕೈಗಾರಿಕಾ ಪ್ರದೇಶವಾದ ಪೀಣ್ಯ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ (ಸಿಟಿ ರೈಲ್ವೆ ಸ್ಟೇಷನ್) ಸುತ್ತಮುತ್ತ ಇಂದಿನ ವಾಯು ಸೂಚ್ಯಂಕವು 59 ರಿಂದ 73ರಷ್ಟಿದ್ದು, ನಿಯಂತ್ರಣದಲ್ಲಿದೆ.

ನಗರದಲ್ಲಿ ಸದ್ಯಕ್ಕೆ ಹಾನಿಕಾರಕ ಸೂಕ್ಷ್ಮ ಕಣಗಳಾದ PM2.5 ಮತ್ತು PM10 ಮಟ್ಟವು ಅಪಾಯಕಾರಿ ಮಟ್ಟಕ್ಕಿಂತ ತಳದಲ್ಲಿದೆ. ತೀವ್ರ ಉಸಿರಾಟದ ತೊಂದರೆ ಇರುವವರನ್ನು ಹೊರತುಪಡಿಸಿ, ಸಾಮಾನ್ಯ ನಾಗರಿಕರು ಯಾವುದೇ ಆತಂಕವಿಲ್ಲದೆ ದೈನಂದಿನ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿ ‘ಉತ್ತಮ’ ಗಾಳಿ

ಬೆಂಗಳೂರಿಗೆ ಹೋಲಿಸಿದರೆ ರಾಜ್ಯದ ಇತರೆ ಪ್ರಮುಖ ನಗರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಾಯು ಗುಣಮಟ್ಟವು ಅತ್ಯಂತ ಆಶಾದಾಯಕವಾಗಿದ್ದು, ಬಹುತೇಕ ಕಡೆ ‘ಉತ್ತಮ’ (Good) ವಲಯದಲ್ಲಿ ಗುರುತಿಸಿಕೊಂಡಿದೆ. ಪ್ರಕೃತಿಯ ಮಡಿಲಾದ ಚಿಕ್ಕಮಗಳೂರಿನಲ್ಲಿ 38 AQI ಹಾಗೂ ಬೆಳಗಾವಿಯಲ್ಲಿ 43 AQI ದಾಖಲಾಗುವ ಮೂಲಕ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಗಾಳಿಯಿರುವ ನಗರಗಳಾಗಿ ಹೊರಹೊಮ್ಮಿವೆ. ಕರಾವಳಿಯ ಮಂಗಳೂರು ಹಾಗೂ ಉಡುಪಿಯಲ್ಲಿ ವಾಯು ಸೂಚ್ಯಂಕವು 54 ರಿಂದ 55ರಷ್ಟಿದ್ದರೆ, ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಮತ್ತು ದಾವಣಗೆರೆಯಲ್ಲಿ AQI 56 ರಿಂದ 58 ರ ಆಸುಪಾಸಿನಲ್ಲಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯು ವಾತಾವರಣದಲ್ಲಿನ ಧೂಳಿನ ಕಣಗಳನ್ನು ನಿಯಂತ್ರಣದಲ್ಲಿಟ್ಟಿದ್ದು, ಮುಂಬರುವ ದಿನಗಳಲ್ಲೂ ಗಾಳಿಯ ಗುಣಮಟ್ಟ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಸೂಚಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದು ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ – Kannada News | Ashada Friday 2026: July 17 Horoscope for All 12 Zodiac Signs, Dakshinayana Begins with Karka Sankranti

ಇಂದು ಜುಲೈ 17, 2026 ರಂದು ಶುಕ್ರವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ತದಿಗೆ ತಿಥಿ, ಆಷಾಢ ಶುಕ್ರವಾರ, ಕಟಕ ಸಂಕ್ರಮಣ ಇದ್ದು, ಅಮ್ಮನ ಆರಾಧನೆಗೆ ಅತ್ಯಂತ ಪ್ರಾಶಸ್ತ್ಯವಾದ ದಿನವಾಗಿದೆ. ಚಾಮುಂಡೇಶ್ವರಿ, ಮಹಾಲಕ್ಷ್ಮಿ ಅಥವಾ ಮಹಾಕಾಳಿ ದೇವಸ್ಥಾನಗಳಲ್ಲಿ ಕುಂಕುಮಾರ್ಚನೆ, ದರ್ಶನ ಮತ್ತು ಪುಷ್ಪ ಸಮರ್ಪಣೆ ಮಾಡುವುದರಿಂದ ತಾಯಿಯ ಪರಿಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ‘ಟಿವಿ9 ಕನ್ನಡ ಡಿಜಿಟಲ್​’ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಇಂದು ಸೂರ್ಯನು ಕಟಕ ರಾಶಿಗೆ ಪ್ರವೇಶಿಸುತ್ತಾನೆ. ದಕ್ಷಿಣಾಯನವೂ ಸಹ ಇಂದು ಪ್ರಾರಂಭವಾಗುತ್ತದೆ.

ಡಾ. ಬಸವರಾಜ ಗುರೂಜಿ ಅವರು 12 ರಾಶಿಗಳ ಮೇಲೆ ಗ್ರಹಗಳಾದ ರವಿ (ಕರ್ಕಾಟಕದಲ್ಲಿ) ಮತ್ತು ಚಂದ್ರ (ಸಿಂಹ ರಾಶಿಯ ಮಖಾ ನಕ್ಷತ್ರದಲ್ಲಿ) ಸಂಚಾರದ ಪರಿಣಾಮಗಳನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೆ ಆರ್ಥಿಕ ಸ್ಥಿತಿ, ವೃತ್ತಿ, ಆರೋಗ್ಯ, ಸಂಬಂಧಗಳು ಮತ್ತು ವೈಯಕ್ತಿಕ ಜೀವನದ ಮೇಲೆ ಆಗುವ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.

Source link

Exit mobile version