Bengaluru Air Quality: ಮಂಗಳೂರಿನಲ್ಲಿ ಗಾಳಿಯ ಮಟ್ಟ ಬೆಂಗಳೂರಿಗಿಂತ ಕಳಪೆಯಾಗಿದೆ, ಎಚ್ಚರಿಕೆ ವಹಿಸುವಂತೆ ತಜ್ಞರ ಸೂಚನೆ – Kannada News | Karnataka Air Quality Alert Jan 29: PM2.5 High, Bengaluru, Mangaluru ‘Poor’

ಕರ್ನಾಟಕದಾದ್ಯಂತ ಇಂದು (ಜನವರಿ 29, 2026) ವಾಯು ಗುಣಮಟ್ಟವು (AQI) ವಿವಿಧ ನಗರಗಳಲ್ಲಿ ವಿಭಿನ್ನವಾಗಿ ದಾಖಲಾಗಿದೆ. ಒಟ್ಟಾರೆಯಾಗಿ ರಾಜ್ಯದ ವಾಯು ಗುಣಮಟ್ಟವು ಸಾಧಾರಣ (Moderate) ದಿಂದ ಕಳಪೆ (Poor) ಹಂತದವರೆಗೆ ಇದೆ. ನಗರದಲ್ಲಿ ವಾಯು ಮಾಲಿನ್ಯವು ‘ಅನಾರೋಗ್ಯಕರ’ ಹಂತದಲ್ಲಿದೆ. ವಿಶೇಷವಾಗಿ PM2.5 ಮತ್ತು PM10 ಕಣಗಳ ಪ್ರಮಾಣ ಹೆಚ್ಚಾಗಿರುವುದರಿಂದ ಉಸಿರಾಟದ ತೊಂದರೆ ಇರುವವರು, ಮಕ್ಕಳು ಮತ್ತು ವೃದ್ಧರು ಜಾಗರೂಕರಾಗಿರಿ ಎಂದು ತಜ್ಞರು ಹೇಳಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಇಂದು ಮುಂಜಾನೆ ದಟ್ಟ ಮಂಜು ಇದ್ದ ಕಾರಣ, ಮಾಲಿನ್ಯಕಾರಕ ಕಣಗಳು ಭೂಮಿಯ ಸಮೀಪದಲ್ಲೇ ಅಡಕವಾಗಿದ್ದು AQI ಮಟ್ಟ ಏರಿಕೆಯಾಗಲು ಕಾರಣವಾಗಿದೆ.ಬೆಳಗಾವಿ ಮತ್ತು ಕಲಬುರಗಿ ಭಾಗಗಳಲ್ಲಿ ವಾಯು ಗುಣಮಟ್ಟವು ರಾಜ್ಯದ ಇತರ ಭಾಗಗಳಿಗಿಂತ ಉತ್ತಮವಾಗಿದೆ.

ಬೆಂಗಳೂರು ಮತ್ತು ಮಂಗಳೂರಿನಂತಹ ನಗರಗಳಲ್ಲಿ AQI ಮಟ್ಟ ಹೆಚ್ಚಿರುವುದರಿಂದ, ಹೊರಗಡೆ ವ್ಯಾಯಾಮ ಮಾಡುವವರು ಮುಂಜಾನೆಗಿಂತ ಸಂಜೆ ವೇಳೆ ಮಾಡುವುದು ಉತ್ತಮ. ಸಾಧ್ಯವಾದರೆ ಮಾಸ್ಕ್ ಬಳಸಿ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಇಂದು ಮಾಲಿನ್ಯದ ಮಟ್ಟ ಗಣನೀಯವಾಗಿ ಹೆಚ್ಚಾಗಿದೆ. ಪೀಣ್ಯ ಮತ್ತು ಕೆಂಪೇಗೌಡ ರಸ್ತೆ ಬಳಿ AQI 200 ದಾಟಿದ್ದು, ಮಾಲಿನ್ಯ ಹೆಚ್ಚಿದೆ. ಜಯನಗರ ಮತ್ತು ಬನಶಂಕರಿಯಲ್ಲಿ ಮಾಲಿನ್ಯ ಮಟ್ಟ ಸಾಧಾರಣದಿಂದ ಕಳಪೆ (120-150) ಹಂತದಲ್ಲಿದೆ. ವೈಟ್‌ಫೀಲ್ಡ್ ನಲ್ಲಿ ಕಟ್ಟಡ ಕಾಮಗಾರಿಗಳಿಂದಾಗಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ಮಧ್ಯಾಹ್ನ ಬಿಸಿಲು ಹೆಚ್ಚಾದಂತೆ ಮತ್ತು ಗಾಳಿಯ ವೇಗ ಸುಧಾರಿಸಿದಂತೆ AQI ಮಟ್ಟ 120-140ಕ್ಕೆ ಇಳಿಯುವ ಸಾಧ್ಯತೆಯಿದೆ. ಆದರೂ ಸಂಜೆ ಮತ್ತೆ ಏರಿಕೆಯಾಗಬಹುದು.

ಕರಾವಳಿ ಭಾಗದಲ್ಲಿ ತೇವಾಂಶ ಹೆಚ್ಚಿರುವುದರಿಂದ ಮಾಲಿನ್ಯಕಾರಕ ಕಣಗಳು ಕೆಳಮಟ್ಟದಲ್ಲೇ ಉಳಿದಿವೆ. ಇದು ಉಸಿರಾಟದ ಸಮಸ್ಯೆ ಇರುವವರಿಗೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಗಾಳಿಯ ಗುಣಮಟ್ಟ ಬೆಂಗಳೂರಿಗೆ ಹೋಲಿಸಿದರೆ ಉತ್ತಮವಾಗಿದೆ. ಆದರೆ ಮಧ್ಯಾಹ್ನ ಬಿಸಿಲು ಹೆಚ್ಚಾದಂತೆ ಧೂಳಿನ ಪ್ರಮಾಣ ಸ್ವಲ್ಪ ಏರಬಹುದು. ಬೆಂಗಳೂರು ನಿವಾಸಿಗಳು AQI 200 ದಾಟಿರುವುದರಿಂದ, ಹೃದಯ ಅಥವಾ ಶ್ವಾಸಕೋಶದ ಸಮಸ್ಯೆ ಇರುವವರು ಮತ್ತು ಮಕ್ಕಳು ಇಂದು ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಉತ್ತಮ. ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಿಸುತ್ತದೆ, ಆದ್ದರಿಂದ ಈ ಸಮಯದಲ್ಲಿ ಹೊರಗೆ ಹೋಗುವುದು ಸುರಕ್ಷಿತ.ರಸ್ತೆ ಬದಿಯಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಧೂಳಿನಿಂದ ರಕ್ಷಣೆ ನೀಡುತ್ತದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ (ಮಂಗಳೂರು, ಉಡುಪಿ ಮತ್ತು ಕಾರವಾರ) ಇಂದು (ಜನವರಿ 29, 2026) ವಾಯು ಗುಣಮಟ್ಟವು (AQI) ‘ಸಾಧಾರಣ’ದಿಂದ ‘ಕಳಪೆ’ ಹಂತದಲ್ಲಿದೆ. ವಿಶೇಷವಾಗಿ ಮಂಗಳೂರಿನಲ್ಲಿ ಮಾಲಿನ್ಯದ ಮಟ್ಟ ಬೆಂಗಳೂರನ್ನು ಹಿಂದಿಕ್ಕಿರುವುದು ಆತಂಕಕಾರಿಯಾಗಿದೆ. ಗಾಳಿಯಲ್ಲಿನ PM2.5 ಕಣಗಳ ಪ್ರಮಾಣ 79 µg/m³ ವರೆಗೆ ಏರಿಕೆಯಾಗಿದೆ. ರಸ್ತೆ ಕಾಮಗಾರಿಗಳು, ವಾಹನಗಳ ಹೊಗೆ ಮತ್ತು ಚಳಿಗಾಲದ ಮಂಜು ಈ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ವರದಿಗಳ ಪ್ರಕಾರ ಉಡುಪಿಯಲ್ಲಿ AQI 90 ರಷ್ಟಿದ್ದು ಸಾಧಾರಣವಾಗಿತ್ತು, ಆದರೆ ದಿನ ಕಳೆದಂತೆ ಕೆಲವು ಕಡೆಗಳಲ್ಲಿ 167 ರವರೆಗೆ ತಲುಪಿದೆ. ಸೂಕ್ಷ್ಮ ವ್ಯಕ್ತಿಗಳು ಸ್ವಲ್ಪ ಉಸಿರಾಟದ ಕಿರಿಕಿರಿ ಅನುಭವಿಸಬಹುದು. ಮಂಗಳೂರು ಮತ್ತು ಉಡುಪಿಗೆ ಹೋಲಿಸಿದರೆ ಕಾರವಾರದ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಇಲ್ಲಿ ಹವಾಮಾನವು ಆಹ್ಲಾದಕರವಾಗಿದ್ದು, ವಾಯು ಮಾಲಿನ್ಯದ ಪ್ರಭಾವ ಕಡಿಮೆ ಇದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಇಂದು ಬೆಳಗಾವಿ, ವಿಜಯಪುರದಲ್ಲಿ ಬಿಸಿಲಿನ ತಾಪ ಹೆಚ್ಚಿರಲಿದೆ

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಯಲಾಯ್ತು ಟೀಮ್ ಇಂಡಿಯಾದ ಅತೀ ದೊಡ್ಡ ವೀಕ್ ​ನೆಸ್

Source link

ಬೆಂಗಳೂರಲ್ಲಿ ಕುಡಿದು ಕಾರು ಚಲಾಯಿಸಿ ಕನ್ನಡ ಹೀರೋನಿಂದ ಸರಣಿ ಅಪಘಾತ – Kannada News | Mayur Patel’s Drunk Driving Fortuner Causes Bangalore Serial Accident

ಕನ್ನಡ ಹೀರೋನ (Sandalwood Hero) ಅಜಾಗರೂಕ ಚಾಲನೆಯಿಂದ ಬೆಂಗಳೂರಲ್ಲಿ ತಡರಾತ್ರಿ ಸರಣಿ ಅಪಘಾತ ನಡೆದಿದೆ. ಈ ರೀತಿ ಕಾರು ಚಲಾಯಿಸಿದ್ದು ನಟ ಮಯೂರ್ ಪಟೇಲ್​. ಬೇಕಾಬಿಟ್ಟಿ ಕುಡಿದು ತಮ್ಮ ಫಾರ್ಚೂರನರ್ ಕಾರನ್ನು ವೇಗವಾಗಿ ಓಡಿಸಿದ್ದಾರೆ ಮಯೂರ್. ಈ ವೇಳೆ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ್ದಾರೆ. ಈ ಸಂಬಂಧ ಮಯೂರ್ ಪಟೇಲ್ ಮೇಲೆ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಆಕ್ರೋಶ ಕೇಳಿ ಬಂದಿದೆ.

2000ನೇ ಇಸ್ವಿಯಲ್ಲಿ ಬಂದ ‘ಆಂಧ್ರ ಹೆಂಡತಿ’ ಸಿನಿಮಾ ಮೂಲಕ ಮಯೂರ್ ಪಟೇಲ್ ಚಿತ್ರರಂಗಕ್ಕೆ ಕಾಲಿಟ್ಟರು. 2003ರಲ್ಲಿ ‘ಮಣಿ’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರ ಕೊಂಚ ಗಮನ ಸೆಳೆಯಿತು. ನಂತರ ‘ಉಡೀಸ್’, ‘ಗುನ್ನ’ ಸೇರಿದಂತೆ ಹಲವು ಸಿನಿಮಾ ಮಾಡಿದರು. ಆದರೆ, ಯಾವ ಚಿತ್ರ ಕೂಡ ಹೆಚ್ಚು ಸದ್ದು ಮಾಡಿಲ್ಲ. ಇಷ್ಟು ದಿನ ಅವರ ಹೆಸರು ಹೆಚ್ಚು ಚರ್ಚೆಯಲ್ಲಿ ಇರಲಿಲ್ಲ. ಈಗ ಬೇಡದ ಕಾರಣಕ್ಕೆ ಮಯೂರ್ ಸುದ್ದಿ ಆಗುತ್ತಿದ್ದಾರೆ.

ಬೆಂಗಳೂರಿನ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಸರಣಿ ಅಪಘಾತ ನಡೆದಿದೆ. ಮಯೂರ್ ಕುಡಿದು ಕಾರು ಓಡಿಸುತ್ತಿದ್ದರು. ಅವರ ಕಾರು ಗುದ್ದಿದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್​ ಎಂಬುವರ ಕಾರುಗಳು ಹಾಗೂ ಸರ್ಕಾರಿ ವಾಹನ ಜಖಂ ಆಗಿದೆ. ಆಗ ಅಲ್ಲೇ ಇದ್ದವರು ಕಂಟ್ರೋಲ್ ರೂಮ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೊಯ್ಸಳ ಪೊಲೀಸರು ಮಯೂರ್​ ಪಟೇಲ್​ನನ್ನ ಠಾಣೆಗೆ ಕರೆದೊಯ್ದಿದ್ದಾರೆ. ತಪಾಸಣೆ ವೇಳೆ ಕುಡಿದು ವಾಹನ ಚಲಾಯಿಸಿರುವುದು ಸಾಬೀತಾಗಿದೆ.

ಅಪಘಾತದ ಕುರಿತು ಶ್ರೀನಿವಾಸ್​ ದೂರು ನೀಡಿದ್ದಾರೆ. ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಎಫ್​​ಐಆರ್ ದಾಖಲು ಮಾಡಲಾಗಿದೆ. ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಯೂರ್ ಪಟೇಲ್ ಕಾರ್ ಸೀಜ್ ಮಾಡಲಾಗಿದೆ. ಅಪಘಾತದ ವೇಳೆ ಮಯೂರ್​ ಪಟೇಲ್ ಕಾರಿಗೆ ಇನ್ಸೂರೆನ್ಸ್ ಇಲ್ಲದಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ? ಉತ್ತರಿಸಿದ ಹೀರೋ

ಅಪಘಾತ ಆಗುತ್ತಿದ್ದಂತೆ ಕಾರಿನಿಂದ ಇಳಿದ ಮಯೂರ್ ಪಟೇಲ್, ‘ಏನೇ ಇದ್ದರೂ ನಾನು ಮಾಡಿಸಿಕೊಡ್ತೀನಿ’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

(ವರದಿ : ವಿಕಾಸ್)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 6:58 am, Thu, 29 January 26

Source link

ಕರ್ನಾಟಕ ಹವಾಮಾನ ವರದಿ: ಇಂದು ಬೆಳಗಾವಿ, ವಿಜಯಪುರದಲ್ಲಿ ಬಿಸಿಲಿನ ತಾಪ ಹೆಚ್ಚಿರಲಿದೆ – Kannada News | Karnataka weather today bangalore chilly north hot no rain forecast

ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದಿನ ಹವಾಮಾನ (Karnataka weather today) ಹೇಗಿದೆ? ಎಂಬುದನ್ನು ಇಲ್ಲಿ ಹೇಳಲಾಗಿದೆ. ಹವಾಮಾನ ವರದಿಗಳ ಪ್ರಕಾರ ಬೆಂಗಳೂರು ಚಳಿಯ ವಾತಾವರಣ ಇರಲಿದೆ. ರ್ನಾಟಕದಾದ್ಯಂತ ಹವಾಮಾನವು ಹೆಚ್ಚಾಗಿ ಶುಷ್ಕ ಮತ್ತು ಬಿಸಿಲಿನಿ೦ದ ಕೂಡಿರುತ್ತದೆ.ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ತಾಪಮಾನವು 30°C ನಿಂದ 34°C ವರೆಗೆ ಇರುವ ಸಾಧ್ಯತೆಯಿದೆ.ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 31°C ಮತ್ತು ಕನಿಷ್ಠ ತಾಪಮಾನ 18°C ದಾಖಲಾಗುವ ಸಂಭವವಿದೆ. ಆಕಾಶವು ಭಾಗಶಃ ಮೋಡಗಳಿಂದ ಕೂಡಿರುತ್ತದೆ. ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಹವಾಮಾನವು ಸ್ವಲ್ಪ ತೇವಾಂಶಯಿಂದ (Humid) ಕೂಡಿರಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ (ಬೆಳಗಾವಿ, ವಿಜಯಪುರ) ಬಿಸಿಲಿನ ತಾಪ ಹೆಚ್ಚಿರಲಿದೆ.

ಒಟ್ಟಾರೆಯಾಗಿ, ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಬೆಳಿಗ್ಗೆ ಮತ್ತು ರಾತ್ರಿ ವೇಳೆ ತುಸು ಚಳಿ ಇರಲಿದ್ದು ಮಧ್ಯಾಹ್ನ ಬಿಸಿಲು ಹೆಚ್ಚಿರುತ್ತದೆ. ಉತ್ತರ ಕರ್ನಾಟಕ (ಬೆಳಗಾವಿ/ಕಲಬುರಗಿ)ದಲ್ಲಿ ಬಿಸಿಲಿನ ತಾಪಮಾನ 35°C ವರೆಗೆ ಏರಿಕೆಯಾಗುವ ಸಾಧ್ಯತೆಯಿದ್ದು, ಒಣ ಹವಾಮಾನವಿರುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಿ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣವಿದ್ದು, ದಿನವಿಡೀ ಹಿತಕರವಾದ ಹವಾಮಾನವಿರಲಿದೆ. ಕರ್ನಾಟಕದ ಯಾವುದೇ ಭಾಗದಲ್ಲಿ ಇಂದಿಗೆ ಮಳೆಯ ಮುನ್ಸೂಚನೆ ಇಲ್ಲ. ರಾಜ್ಯದಾದ್ಯಂತ ಹವಾಮಾನವು ಹೆಚ್ಚಾಗಿ ಶುಷ್ಕ ಮತ್ತು ಬಿಸಿಲಿನಿಂದ ಕೂಡಿರುತ್ತದೆ.ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ ಮತ್ತು ವಿಜಯಪುರದಲ್ಲಿ ಬಿಸಿಲಿನ ತಾಪ ಹೆಚ್ಚಿರಲಿದ್ದು, ಗರಿಷ್ಠ ತಾಪಮಾನವು 34°C ನಿಂದ 35°C ವರೆಗೆ ತಲುಪಬಹುದು.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಮತ್ತು ಕಲಬುರಗಿಯಲ್ಲಿ ಬಿಸಿಲಿನ ತಾಪ ಹೆಚ್ಚಿರಲಿದ್ದು, ಗರಿಷ್ಠ ತಾಪಮಾನವು 34°C ನಿಂದ 35°C ವರೆಗೆ ತಲುಪುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಹವಾಮಾನವು ಸಂಪೂರ್ಣವಾಗಿ ಒಣದಾಗಿರಲಿದ್ದು, ಮಳೆಯ ಯಾವುದೇ ಮುನ್ಸೂಚನೆ ಇಲ್ಲ. ಒಣ ಹವಾಮಾನದ ಕಾರಣದಿಂದಾಗಿ ಗಾಳಿಯಲ್ಲಿ ಧೂಳಿನಂಶ ತುಸು ಹೆಚ್ಚಿರಬಹುದು. ಬೆಳಿಗ್ಗೆ ಮತ್ತು ರಾತ್ರಿಯ ಸಮಯದಲ್ಲಿ ವಾತಾವರಣವು ತುಸು ತಂಪಾಗಿದ್ದರೂ, ಮಧ್ಯಾಹ್ನದ ವೇಳೆಗೆ ಬಿಸಿಲಿನ ತೀವ್ರತೆ ಹೆಚ್ಚಿರಲಿದೆ.

ಬೆಳಗಾವಿ: ಇಲ್ಲಿ ಇಂದು ಆಕಾಶವು ಭಾಗಶಃ ಮೋಡಗಳಿಂದ (Partly sunny) ಕೂಡಿರಲಿದ್ದು, ಗರಿಷ್ಠ ತಾಪಮಾನ 31°C ಮತ್ತು ಕನಿಷ್ಠ ತಾಪಮಾನ 18°C ದಾಖಲಾಗಲಿದೆ. ಮಳೆಯ ಸಾಧ್ಯತೆ ಶೇ. 5 ರಷ್ಟು ಮಾತ್ರ ಇದೆ.

ಧಾರವಾಡ: ಇಲ್ಲಿ ಶುಭ್ರವಾದ ಬಿಸಿಲು (Sunny) ಇರಲಿದ್ದು, ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 19°C ವರೆಗೆ ಇರಲಿದೆ. ಹವಾಮಾನವು ಒಣದಾಗಿದ್ದು, ಮಳೆಯ ಮುನ್ಸೂಚನೆ ಇಲ್ಲ.

ಕಲಬುರಗಿ: ಇಲ್ಲಿ ಭಾಗಶಃ ಮೋಡಗಳಿದ್ದು (Partly sunny), ಗರಿಷ್ಠ ತಾಪಮಾನ 31°C ಮತ್ತು ಕನಿಷ್ಠ ತಾಪಮಾನ 21°C ದಾಖಲಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಇಂದು ಈ ರಾಶಿಯವರಿಗೆ ಅಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿ

ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇಂದು ಒಣ ಹವೆ (Dry Weather) ಮುಂದುವರಿಯಲಿದೆ. ಯಾವುದೇ ಜಿಲ್ಲೆಯಲ್ಲೂ ಮಳೆಯ ಮುನ್ಸೂಚನೆ ಇಲ್ಲ. ಮುಂದಿನ 4-5 ದಿನಗಳ ಕಾಲ ಇದೇ ಸ್ಥಿತಿ ಇರಲಿದೆ. ಹಗಲಿನಲ್ಲಿ ತಾಪಮಾನವು 29°C ನಿಂದ 32°C ವರೆಗೆ ಇರಲಿದ್ದು, ತುಸು ಬಿಸಿಲಿನ ಅನುಭವವಾಗಲಿದೆ. ರಾತ್ರಿ ಮತ್ತು ಮುಂಜಾನೆ ಚಳಿಯ ಪ್ರಭಾವ ಇರಲಿದ್ದು, ಕನಿಷ್ಠ ತಾಪಮಾನವು 14°C ನಿಂದ 18°C ಆಸುಪಾಸಿನಲ್ಲಿರಲಿದೆ. ರಾಜ್ಯದ ಬಯಲು ಸೀಮೆಯಲ್ಲೇ ಅತ್ಯಂತ ಕಡಿಮೆ ತಾಪಮಾನ (14.0°C) ಇಲ್ಲಿ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿತೃಗಳ ಹೆಸರಿನಲ್ಲಿ ಗಿಡಗಳನ್ನು ನೆಡುವುದರ ಹಿಂದಿನ ಮಹತ್ವ – Kannada News | Ancestral Blessings: Understanding the Merit of Planting Saplings

ಪಿತೃ ಕಾರ್ಯಗಳು ಹಿಂದೂ ಸಂಪ್ರದಾಯದಲ್ಲಿ ಮಹತ್ವಪೂರ್ಣವಾಗಿವೆ. ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆಗಳಂತಹ ದಿನಗಳಲ್ಲಿ ಪಿತೃಗಳಿಗೆ ಗೌರವ ಸಲ್ಲಿಸುವ ವಿವಿಧ ವಿಧಾನಗಳಿವೆ. ಇವುಗಳಲ್ಲಿ ಒಂದು ವಿಶೇಷ ವಿಧಾನವೆಂದರೆ ಪಿತೃಗಳ ಹೆಸರಿನಲ್ಲಿ ಗಿಡಗಳನ್ನು ನೆಡುವುದು ಅಥವಾ ವೃಕ್ಷಗಳನ್ನು ದಾನ ಮಾಡುವುದು. ಪದ್ಮ ಪುರಾಣದಲ್ಲಿ ವೇದ ವ್ಯಾಸರು ತಿಳಿಸಿರುವಂತೆ, ಪಿತೃಗಳ ಹೆಸರಿನಲ್ಲಿ ನೆಟ್ಟ ಗಿಡಗಳಿಗೆ ನೀರು ಬಿದ್ದಾಗ, ಅದರ ಎಲೆಗಳಿಂದ ಕೆಳಗೆ ಬೀಳುವ ಪ್ರತಿಯೊಂದು ಹನಿ ಆ ಪಿತೃಗಳಿಗೆ ಒಂದು ತರ್ಪಣವಾಗಿ ಸೇರುತ್ತದೆ. ಇದು ಆ ಆತ್ಮಗಳು ಎಲ್ಲಿದ್ದರೂ ಅವರಿಗೆ ಶುಭವನ್ನು ತಲುಪಿಸುತ್ತದೆ. ಇಂತಹ ಪುಣ್ಯದ ಕೆಲಸಗಳು ನಮ್ಮ ಸುಖ-ದುಃಖಗಳಿಗೆ ಕಾರಣವಾಗುವ ಪುಣ್ಯವನ್ನು ಹೆಚ್ಚಿಸುತ್ತವೆ, ಜನ್ಮ-ಜನ್ಮಗಳಿಗೂ ಒಳಿತನ್ನು ತರುತ್ತವೆ. ನಮ್ಮ ಗುರುಗಳು, ಅನ್ನದಾತರು, ಅಥವಾ ನಮಗೆ ಸಹಾಯ ಮಾಡಿದ ದಿವಂಗತ ವ್ಯಕ್ತಿಗಳ ಹೆಸರಿನಲ್ಲೂ ಗಿಡಗಳನ್ನು ನೆಡಬಹುದು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ರಾಶಿಗಳ ಮೇಲೆ ಗ್ರಹಗಳ ಶುಭಫಲ, ಇಂದು “ಓಂ ಗುಣಾಕರಾಯ ನಮಃ” ಮಂತ್ರ ಜಪ ಮಾಡಿ – Kannada News | Astrologer Dr. Basavaraj Guruji Predicts Zodiac Fortunes for January 29, 2026

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ನೀಡಿದ್ದಾರೆ. ವಿಶ್ವಾಸುನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು, ಶುಕ್ಲಪಕ್ಷ ಏಕಾದಶಿ, ಮೃಗಶಿರಾ ನಕ್ಷತ್ರ, ಐಂದ್ರ ಯೋಗ ಮತ್ತು ಭದ್ರಕರಣ ಈ ದಿನದ ವೈಶಿಷ್ಟ್ಯಗಳಾಗಿವೆ. ರಾಹುಕಾಲವು ಮಧ್ಯಾಹ್ನ 1:59 ರಿಂದ 3:26 ರವರೆಗೆ ಇರಲಿದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭ ಕಾಲವು ಮಧ್ಯಾಹ್ನ 12:33 ರಿಂದ 1:59 ರವರೆಗೆ ಇರುತ್ತದೆ. ಈ ದಿನ ರವಿ ಮಕರ ರಾಶಿಯಲ್ಲಿ, ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದು ಭೀಷ್ಮ ಏಕಾದಶಿ ಮತ್ತು ತಿಲಪದ್ಮ ವ್ರತ ಆಚರಣೆಯ ದಿನವಾಗಿದ್ದು, ಅರಕಲಗೂಡಿನಲ್ಲಿ ದೊಡ್ಡಮಳಲಿ ವೇಣುಗೋಪಾಲಸ್ವಾಮಿಯ ರಥೋತ್ಸವ ನಡೆಯಲಿದೆ. ಏಕಾದಶಿಯಂದು ಉಪವಾಸ ಮತ್ತು ದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಕೆಲಸಕಾರ್ಯಗಳಲ್ಲಿ ಪ್ರಗತಿ, ಆದಾಯದಲ್ಲಿ ಏರಿಕೆ, ವೃತ್ತಿ ಮತ್ತು ಉದ್ಯೋಗದಲ್ಲಿ ಸಂತೃಪ್ತಿ ಇರುತ್ತದೆ. ರಾಜಕೀಯ ವ್ಯಕ್ತಿಗಳು, ಸರ್ಕಾರಿ ನೌಕರರು, ವ್ಯಾಪಾರಸ್ಥರು, ರೈತರು ಮತ್ತು ವಿದ್ಯಾರ್ಥಿಗಳಿಗೆ ಶುಭ ದಿನವಾಗಿದೆ. ಅಲ್ಪ ಅನಾರೋಗ್ಯ, ಕೋಪ ನಿಯಂತ್ರಣ ಮತ್ತು ಖರ್ಚು ಕಡಿಮೆ ಮಾಡಿಕೊಳ್ಳುವ ಸಲಹೆ ನೀಡಲಾಗಿದೆ. ಹಳದಿ ಬಣ್ಣದ ಬಳಕೆ ಮತ್ತು ಪೂರ್ವ ದಿಕ್ಕಿನ ಪ್ರಯಾಣ ಶುಭಕರ. ಅದೃಷ್ಟ ಸಂಖ್ಯೆ ನಾಲ್ಕು. “ಓಂ ಗುಣಾಕರಾಯ ನಮಃ” ಮಂತ್ರ ಜಪಕ್ಕೆ ಸೂಚಿಸಲಾಗಿದೆ. ವೃಷಭ ರಾಶಿಯವರಿಗೆ ರಾಶ್ಯಾಧಿಪತಿ ಶುಕ್ರನ ಪ್ರಭಾವದಿಂದ ಐದು ಗ್ರಹಗಳ ಶುಭಫಲವಿದೆ. ಉದ್ಯೋಗದಲ್ಲಿ ಬದಲಾವಣೆ, ವ್ಯಾಪಾರದಲ್ಲಿ ಪ್ರಗತಿ, ಕೆಲಸಕಾರ್ಯಗಳಲ್ಲಿ ಶುಭ, ಆಕಸ್ಮಿಕ ಪ್ರಯಾಣ ಯೋಗ, ನಿರೀಕ್ಷಿತ ಕೆಲಸಗಳ ಪರಿಪೂರ್ಣತೆ, ಮನೆ ನಿರ್ಮಾಣ ಅಥವಾ ವಸ್ತು ಖರೀದಿ ಯೋಗಗಳು ಇರಲಿವೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಮತ್ತು ಮಕ್ಕಳಿಂದ ಶುಭ ಸಮಾಚಾರ ಸಿಗಲಿದೆ. ಆದರೆ, ನಂಬಿದವರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಹಸಿರು ಬಣ್ಣದ ಬಳಕೆ ಮತ್ತು ಉತ್ತರ ದಿಕ್ಕಿನ ಪ್ರಯಾಣ ಶುಭಕರ. ಅದೃಷ್ಟ ಸಂಖ್ಯೆ ಎರಡು. “ಓಂ ಅಂಗೀರಸಾಯ ನಮಃ” ಮಂತ್ರ ಜಪಕ್ಕೆ ಸೂಚಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುರುಷರು ಮಹಿಳೆಯರಿಗಿಂತ ಹೆಚ್ಚು ಗೊರಕೆ ಹೊಡೆಯುವುದಕ್ಕೆ ಕಾರಣವೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ – Kannada News | Snoring: Why It’s More Common in Men

ಗೊರಕೆ (Snore) ನಿದ್ರೆಗೆ ಭಂಗ ತರುವುದು ಮಾತ್ರವಲ್ಲ, ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ ಎಂಬುದು ತಿಳಿದಿರಬಹುದು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಗೊರಕೆ ಹೊಡೆಯುತ್ತಾರೆ. ಆದರೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಗೊರಕೆ ಹೊಡೆಯುತ್ತಾರೆಯೇ ಎಂಬ ಅನುಮಾನ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ಪುರುಷರು ಮಹಿಳೆಯರಿಗಿಂತ ಸುಮಾರು 2 ರಿಂದ 3 ಪಟ್ಟು ಹೆಚ್ಚು ಗೊರಕೆ ಹೊಡೆಯುವ ಸಾಧ್ಯತೆ ಇದ್ದು, ವಯಸ್ಸು ಹೆಚ್ಚಾದಂತೆ ಮಹಿಳೆಯರಿಗೂ ಈ ರೀತಿಯ ಸಮಸ್ಯೆ ಕಾಡುತ್ತದೆ. ಆದರೆ ಪುರುಷರು ಮಾತ್ರ ಮಹಿಳೆಯರಿಗಿಂತ ಹೆಚ್ಚು ಪ್ರಭಾವಿತರಾಗುತ್ತಾರೆ. ಹಾಗಾದರೆ ಇದಕ್ಕೆ ಕಾರಣವೇನು, ಯಾಕೆ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪುರುಷರು ಹೆಚ್ಚು ಗೊರಕೆ ಹೊಡೆಯುವುದಕ್ಕೆ ಕಾರಣವೇನು?

ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವಿ ಮಹಾರ್ ಹೇಳುವ ಪ್ರಕಾರ, ಪುರುಷರು ಹೆಚ್ಚು ಗೊರಕೆ ಹೊಡೆಯಲು ಹಲವಾರು ಕಾರಣಗಳಿವೆ. ಪುರುಷರ ಗಂಟಲಿನಲ್ಲಿ ವಾಯುಮಾರ್ಗವು ಮಹಿಳೆಯರಿಗೆ ಹೋಲಿಸಿದರೆ ಕಿರಿದಾಗಿರುತ್ತದೆ. ಇದು ನಿದ್ರೆಯ ಸಮಯದಲ್ಲಿ ಉಸಿರಾಡುವಾಗ ಹೆಚ್ಚು ಕಂಪನವನ್ನು ಉಂಟುಮಾಡುತ್ತದೆ, ಇದು ಗೊರಕೆಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳು ವಾಯುಮಾರ್ಗ ಸ್ನಾಯುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಆದರೆ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳು ಕಡಿಮೆಯಾಗಲು ಪ್ರಾರಂಭಿಸಿದಾಗ ಈ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ವಯಸ್ಸು ಹೆಚ್ಚಾದಂತೆ ಈ ಸಮಸ್ಯೆ ಕೂಡ ಹೆಚ್ಚಾಗಬಹುದು. ಇನ್ನೊಂದು ಕಾರಣವೆಂದರೆ ಪುರುಷರಲ್ಲಿ ಗಂಟಲಿನ ಸುತ್ತಲೂ ಮತ್ತು ಸುತ್ತಮುತ್ತಲಿನ ಸ್ನಾಯುಗಳಲ್ಲಿ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಿನ ಕೊಬ್ಬು ಇರುತ್ತದೆ. ಇದು ಗೊರಕೆ ಹೆಚ್ಚಾಗಲು ಕಾರಣವಾಗುತ್ತದೆ.

ಇದನ್ನೂ ಓದಿ: ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತೀರಾ? ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣವಾಗಿರಬಹುದು ಎಚ್ಚರ

ಗೊರಕೆ ಎಂದರೆ ನಿಮ್ಮ ಉಸಿರಾಟದ ಮಾರ್ಗ, ಅಂದರೆ ನಿಮ್ಮ ಮೂಗು ಮತ್ತು ಗಂಟಲು ಸಂಪೂರ್ಣವಾಗಿ ತೆರೆದುಕೊಂಡಿಲ್ಲ ಎಂದರ್ಥ. ಇದು ನೀವು ಉಸಿರಾಡುವಾಗ ಮತ್ತು ಬಿಡುವಾಗ ಗಂಟಲಿನಲ್ಲಿರುವ ಅಂಗಾಂಶಗಳು ಕಂಪಿಸುವಂತೆ ಮಾಡುತ್ತದೆ. ಇದನ್ನು ಗೊರಕೆ ಎಂದು ಕರೆಯಲಾಗುತ್ತದೆ. ಇದಕ್ಕೆ ಬೊಜ್ಜು ಹೆಚ್ಚಾಗುವುದು, ಟಾನ್ಸಿಲ್‌ಗಳು, ಮೂಗಿನಲ್ಲಿ ರಚನಾತ್ಮಕ ಸಮಸ್ಯೆಗಳು ಮತ್ತು ನಿದ್ರೆಯ ಕೊರತೆ ಮುಂತಾದ ಹಲವು ಕಾರಣಗಳಿವೆ. ಸೌಮ್ಯವಾದ ಗೊರಕೆ ಸಮಸ್ಯೆಯಲ್ಲ, ಆದರೆ ಈ ಸಮಸ್ಯೆ ಮುಂದುವರಿದರೆ ನೀವು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಅದು ಸ್ಲೀಪ್ ಅಪ್ನಿಯಾದ ಸಂಕೇತವಾಗಿರಬಹುದು. ಈ ಸಮಸ್ಯೆಯಲ್ಲಿ ನಿದ್ದೆ ಮಾಡುವಾಗ ಕೆಲವು ಸೆಕೆಂಡುಗಳ ಕಾಲ ಉಸಿರಾಟ ನಿಲ್ಲುತ್ತದೆ, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.

ಗೊರಕೆಯನ್ನು ತಡೆಗಟ್ಟಲು ಸಲಹೆಗಳು:

  • ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
  • ಮಲಗುವ ಮೊದಲು ಧೂಮಪಾನ, ಮದ್ಯಪಾನ ಮಾಡಬೇಡಿ.
  • ತುಂಬಾ ಗೊರಕೆ ಹೊಡೆಯುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 28ರ ದಿನಭವಿಷ್ಯ – Kannada News | January 29 Numerology Prediction: Birth Numbers 7, 8, 9 – What Awaits You Today?

ಸಂಬಂಧಗಳನ್ನು ನಿರ್ವಹಿಸುವುದು ಇದೆಯಲ್ಲಾ ಅದು ಬಹಳ ತಲೆನೋವು. ತಪ್ಪು ಯಾರ ಕಡೆಯಿಂದಲೇ ಆದರೂ ಕ್ಷಮೆಯನ್ನು ಮಾತ್ರ ನಾವೇ ಕೇಳಬೇಕು. ಸಂಬಂಧ, ಪ್ರೀತಿ- ಪ್ರೇಮ, ದಂಪತಿ ಮಧ್ಯೆ ಕಾಡುವ ಜಗಳ- ಕಲಹಗಳಿಗೆ ಬ್ರೇಕ್ ಹಾಕುವುದಕ್ಕೆ ರೋಸ್ ಕ್ವಾರ್ಟ್ಜ್ ಸ್ಟೋನ್ ಒಂದೊಳ್ಳೆ ಪರಿಹಾರ. ಜನ್ಮಸಂಖ್ಯೆ 7, 8, 9ರ ಜನರಿಗೆ ಈ ಸಲಹೆ ಖಂಡಿತಾ ಸಹಾಯ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಮಗೆ ಸಿಗಬೇಕು ಅಂತಿದ್ದರೆ ಹೇಗಿದ್ದರೂ ಸಿಕ್ಕೇ ಸಿಗುತ್ತದೆ ಎಂಬ ಥಿಯರಿ ಏನೋ ಸರಿ. ಆದರೆ ಆ ಕಾರಣದಿಂದ ನಿಮ್ಮ ಅಭಿಪ್ರಾಯವನ್ನು ಹೇಳುವಂತೆ ಕೇಳಿದರೂ ಬಾಯಿ ಬಿಟ್ಟು ಏನನ್ನೂ ಹೇಳದಿರುವುದು ಎಷ್ಟು ಸರಿ? ಈ ದಿನ ನಿಮಗೆ ಸಿಗುವ ಅವಕಾಶ ಚೆನ್ನಾಗಿ ಬಳಸಿಕೊಳ್ಳಿ. ಬಾಯಿ ಬಿಟ್ಟು ಹೇಳುವುದರೊಂದಿಗೆ ಬೇಕಾದದ್ದನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನೀವು ಬೇರೆ ಮತ್ತು ನಿಮ್ಮ ಆಲೋಚನೆ, ಲೆಕ್ಕಾಚಾರಗಳು ಬೇರೆ. ಉಳಿದವರಿಗಿಂತ ನೀವು ಬೇರೆ ಯಾವುದೋ ಲೆಕ್ಕ ಹಾಕಿಕೊಂಡಿದ್ದೀರಿ ಅಂತಾದಲ್ಲಿ ಸಂಶಯ ಪಡುವುದಕ್ಕೆ ಹೋಗಬೇಡಿ. ಅಂದುಕೊಂಡಿದ್ದು, ಅಂದುಕೊಂಡ ರೀತಿಯಲ್ಲಿಯೇ ಜಾರಿಗೆ ತನ್ನಿ. ನಾಲ್ಕಾರು ಜನಕ್ಕೆ ನಿಮ್ಮಿಂದ ಈ ದಿನ ಸಹಾಯ ಆಗುವ ಯೋಗ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಆರೋಗ್ಯದ ಬಗ್ಗೆ ಇನ್ನೊಂಚೂರು ಗಮನ ಕೊಡಬೇಕಿತ್ತು ಎಂದು ಬಲವಾಗಿ ಅನಿಸಲಿದೆ. ನಿಮ್ಮ ಉಳಿತಾಯದ ಹಣವನ್ನು ತೆಗೆದು ಸ್ವಲ್ಪ ರಿಸ್ಕ್ ಇರುವ ವ್ಯವಹಾರದಲ್ಲಿಯೇ ಹೂಡಿಕೆ ಮಾಡುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಆದರೆ ಈ ದಿನ ಯಾವ ಕಾರಣಕ್ಕೂ ಕುಟುಂಬ ಸದಸ್ಯರ ಮೇಲೆ ನಿಮ್ಮ ಸಿಟ್ಟು ತೋರಿಸಬೇಡಿ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 29ರ ದಿನಭವಿಷ್ಯ – Kannada News | January 29 Numerology Prediction: Birth Numbers 4, 5, 6 – What Awaits You Today?

ಜನ್ಮಸಂಖ್ಯೆಯ ಆಧಾರದಲ್ಲಿ ದಿನಭವಿಷ್ಯ ಜತೆಗೆ ಇನ್ನೊಂದು ಬೋನಸ್. ಮನಸ್ಸಿನಲ್ಲಿ ಅಂದುಕೊಂಡ ಕೆಲಸ ಪೂರ್ತಿ ಮಾಡುವ ತನಕ ಅದೇ ಉತ್ಸಾಹ ಉಳಿಸುತ್ತಾ ಇಲ್ಲ. ದಿಢೀರ್ ಉತ್ಸಾಹ ಹಾಗೂ ಅಷ್ಟೇ ವೇಗದಲ್ಲಿ ಆ ಉತ್ಸಾಹ ಕರಗಿ ಹೋಗುತ್ತಾ ಇದೆ ಅನ್ನುವವರಿಗೆ ಮೂನ್ ಸ್ಟೋನ್ ಬಹಳ ಸಹಕಾರಿ. ನಿಮ್ಮದು ವೃಷಭ, ಕರ್ಕಾಟಕ ರಾಶಿಯಾದರೆ ಇನ್ನೂ ಒಳೆಯದು. ವೃಶ್ಚಿಕ ರಾಶಿಯಾದರೆ ಮೂನ್ ಸ್ಟೋನ್ ಬೇಡ. ಆದರೆ ವೃಶ್ಚಿಕ ರಾಶಿಯವರು ಕಾರ್ನೇಲಿಯನ್ ಧರಿಸಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸರಳವಾದ ಸಂಗತಿ, ವಿಷಯಗಳೇ ಸಿಕ್ಕು ಸಿಕ್ಕಾಗಿ ತಲೆ ಕೆಡಿಸಿಕೊಳ್ಳುವಂತೆ ಮಾಡಲಿದೆ. ನೀವು ಹೇಳಿದ್ದನ್ನೆಲ್ಲ ಕೇಳಿದ ಮೇಲೋ ಯಾರೋ ಮಾಡಿಕೊಂಡ ಸಮಸ್ಯೆಗೆ ತಲೆ ಕೊಡುವಂತೆ ಆಗಿ ಬಿಡುತ್ತದೆ. ಸಂಕೋಚಕ್ಕೆ ಬಿದ್ದು, ಧ್ವನಿ ಎತ್ತರಿಸಿ ಕೇಳದೆ ಹೋಗಿಬಿಟ್ಟರೆ ನೀವು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತೆ ಆಗಿಬಿಡುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಮೊದಲಿನ ಉತ್ಸಾಹದಿಂದ ನಿಮ್ಮ ಮಾತಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಸಂಗಾತಿಯ ಮೇಲೋ ಗೆಳೆಯ- ಗೆಳತಿ, ಪ್ರಿಯಕರ ಮೇಲೋ ಸಿಟ್ಟಾಗುವಂಥ ಸಂದರ್ಭ ಎದುರಾಗಲಿದೆ. ಯಾವುದಕ್ಕೂ ತಾಳ್ಮೆಯಿಂದ ವರ್ತಿಸಿ. ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಿಕೊಳ್ಳುವ ಸ್ವಭಾವ ಈ ದಿನ ಮಾತ್ರ ಖಂಡಿತಾ ಬೇಡ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಅದೂ ಇರಲಿ, ಇದೂ ಇರಲಿ ಎಂದು ವಸ್ತುಗಳ ಮೇಲೆ ವಿಪರೀತ ಆಸೆ ಪಡುವುದಕ್ಕೆ ಹೋಗಬೇಡಿ. ಆದಾಯ ಚೆನ್ನಾಗಿ ಬರಲಿದೆ, ಲಾಭ ನಿಮ್ಮ ಕೈಯಲ್ಲಿ ಉಳಿಯಲಿದೆ ಎಂದೆನಿಸಿದ ಕೂಡಲೇ ಅದನ್ನು ಬ್ಯಾಂಕ್ ನಲ್ಲಿಯೇ ಇರಲಿ ಎಂಬ ಧೋರಣೆಯೊಂದಿಗೆ ಇರುವುದು ತುಂಬ ಒಳ್ಳೆಯದು.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 29ರ ದಿನಭವಿಷ್ಯ – Kannada News | January 29 Numerology Prediction: Birth Numbers 1, 2, 3 – What Awaits You Today?

ಜನ್ಮಸಂಖ್ಯೆಯ ಆಧಾರದಲ್ಲಿ ದಿನಭವಿಷ್ಯ ಎಂಬುದರ ಜೊತೆಗೆ ದಿನಕ್ಕೆ ಒಂದರಂತೆ ಕ್ರಿಸ್ಟಲ್ ಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ. ಅದರ ಮೊದಲ ಪ್ರಯತ್ನ ಸನ್ ಸ್ಟೋನ್. ಹಿಂಜರಿಕೆ ಕಾಡುತ್ತಿದೆಯಾ, ಗೊತ್ತಿರುವಂಥ ವಿಷಯಗಳನ್ನೇ ಆತ್ಮವಿಶ್ವಾಸದಿಂದ ಹೇಳುವುದು ಕಷ್ಟ ಆಗುತ್ತಿದೆಯಾ? ಈ ಸನ್ ಸ್ಟೋನ್ ಬಳಸಿದ್ದಲ್ಲಿ ನಾಯಕತ್ವ ಗುಣ ನಿಮ್ಮಲ್ಲಿ ಮತ್ತೂ ಹೆಚ್ಚಾಗುತ್ತದೆ. ಹಿಂಜರಿಕೆ, ಆತ್ಮವಿಶ್ವಾಸದ ಕೊರತೆ ಇವೆಲ್ಲ ದೂರವಾಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಹೇಳಿದ್ದೆಲ್ಲ ಸರಿಯಿದೆ, ಅದೇ ರೀತಿ ಮುಂದುವರಿಯೋಣ ಎಂಬ ಉತ್ಸಾಹದ ಮಾತುಗಳನ್ನು ಆಡುತ್ತಿದ್ದವರು ಏಕಾಏಕಿ ತಮ್ಮ ಧ್ವನಿಯನ್ನೇ ಬದಲಿಸಿ, ಉಲ್ಟಾ ಹೇಳುವುದಕ್ಕೆ ಶುರು ಮಾಡ್ತಾರೆ. ದೊಡ್ಡ ಮೊತ್ತದ ಹಣವನ್ನು ಕೈಯಿಂದ ಹಾಕಿ, ಶುರು ಮಾಡಬೇಕಾದ ಆರ್ಡರ್ ಗಳು ಇದ್ದಲ್ಲಿ ಒಂದಕ್ಕೆ ನಾಲ್ಕು ಬಾರಿಗೆ ಆಲೋಚಿಸಿ ಮುಂದಕ್ಕೆ ಹೆಜ್ಜೆ ಇಡಿ. ನಂಬಿಕೆ ಬೇಕು ನಿಜ, ಆದರೆ ಅತಿಯಾದ ನಂಬಿಕೆ ಹಣಕಾಸಿಗೆ ತೊಡಕು ಎಂಬುದು ನೆನಪಲ್ಲಿರಲಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮ ಈ ಹಿಂದಿನ ಯಾವುದೇ ಪ್ರಸ್ತಾವನೆ ಈ ದಿನ ಜೀವ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇನ್ನೇನು ಅದು ವಾಪಸ್ ಬರುವ ಹಾಗೆ ಕಾಣಲ್ಲ ಎಂದು ಅಸೆಯೇ ಬಿಟ್ಟಿದ್ದ ಹಣ ಕೂಡ ಹಿಂತಿರುಗಿ ಬರುವ ಅವಕಾಶಗಳಿವೆ. ನಿಮ್ಮ ಜೊತೆಗೆ ಇದ್ದು ಕೂಡ ಉದ್ಯೋಗ- ವ್ಯವಹಾರದಲ್ಲಿ ಸಹಕಾರ ನೀಡದಿದ್ದವರು ಸಹ ಈಗ ಪೂರ್ಣ ಮನಸ್ಸಿನಿಂದ ನಿಮ್ಮ ಜೊತೆ ಇರುವುದಾಗಿ ಹೇಳಲಿದ್ದಾರೆ. ಕಡಿಮೆ ಎಂದುಕೊಂಡಂಥ ಕೆಲಸಗಳೇ ಒಳ್ಳೆ ಆದಾಯ ತಂದುಕೊಡುತ್ತವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಅಯ್ಯೋ ಮಾತನಾಡಿ, ಸಿಕ್ಕಿಹಾಕಿಕೊಂಡು ಬಿಟ್ಟೆನಲ್ಲ ಎಂಬ ಪರಿಸ್ಥಿತಿ ಈ ದಿನ ನಿಮ್ಮದಾಗಲಿದೆ. ಯಾವುದಕ್ಕೂ ಇರಲಿ ಎಂದುಕೊಂಡು ಎಮರ್ಜೆನ್ಸಿ ಫಂಡ್ ಎಂದು ನೀವಿಟ್ಟುಕೊಂಡಿದ್ದ ಹಣವೇ ಸಹಾಯಕ್ಕೆ ಬರಲಿದೆ. ಎಲ್ಲರನ್ನೂ ಒಂದೇ ರೀತಿ ಕಾಣಬೇಕು, ಅವರಿಗೆ ಬೇಕಾದ ಕೆಲಸ ಮಾಡಿಕೊಡಬೇಕು ಎಂಬ ನಿಮ್ಮ ಉದ್ದೇಶ ಈಡೇರುವ ಸಾಧ್ಯತೆ ಈ ದಿನ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

Exit mobile version