ಸ್ಟಾರ್ ಆಟಗಾರರಿಗೆ ವಿಶ್ರಾಂತಿ: ಟೀಮ್ ಇಂಡಿಯಾಗೆ ಹೊಸ ನಾಯಕ! – Kannada News | India to Test Bench Strength Against Afghanistan

India vs Afghanistan: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆಯಿದೆ. ಸತತ ಕ್ರಿಕೆಟ್ ಪಂದ್ಯಗಳ ಒತ್ತಡ ಮತ್ತು ಕಾರ್ಯಭಾರ ನಿರ್ವಹಣೆಯ ಹಿನ್ನೆಲೆಯಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ವಿಶ್ರಾಂತಿಗೆ ಪ್ರಮುಖ ಕಾರಣಗಳು:

  • ಐಪಿಎಲ್ 2026ರ ಒತ್ತಡ: ಐಪಿಎಲ್ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದ್ದು, ಜೂನ್ 6 ರಿಂದ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆಟಗಾರರಿಗೆ ಚೇತರಿಸಿಕೊಳ್ಳಲು ಕೇವಲ 5 ದಿನಗಳ ಕಾಲಾವಕಾಶ ಮಾತ್ರ ಇರಲಿದೆ. ಹೀಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.
  • WTC ಅಂಕಪಟ್ಟಿಗೆ ಸೇರಿಲ್ಲ: ಈ ಟೆಸ್ಟ್ ಪಂದ್ಯವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2025-27) ಭಾಗವಾಗಿಲ್ಲ. ಆದ್ದರಿಂದ, ಈ ಪಂದ್ಯದ ಫಲಿತಾಂಶವು ಭಾರತದ ಫೈನಲ್ ಹಾದಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
  • ಮುಂದಿನ ಸರಣಿಗಳ ಸಿದ್ಧತೆ: ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮುಗಿದ ತಕ್ಷಣ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ನಂತರ ಇಂಗ್ಲೆಂಡ್ ಪ್ರವಾಸವಿರುವುದರಿಂದ ಪ್ರಮುಖ ಆಟಗಾರರ ಫಿಟ್​ನೆಸ್​ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ವಿಶ್ರಾಂತಿ ಪಡೆಯಲಿರುವ ಸಂಭಾವ್ಯ ಆಟಗಾರರು:

ಭಾರತ ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್, ವೇಗಾಸ್ತ್ರ ಜಸ್​​ಪ್ರೀತ್ ಬುಮ್ರಾ, ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾ ಮತ್ತು ಕೆ.ಎಲ್. ರಾಹುಲ್ ಅವರಿಗೆ ಈ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಇವರೊಂದಿಗೆ ಮತ್ತಷ್ಟು ಆಟಗಾರರ ಹೆಸರು ಕೂಡ ಸೇರ್ಪಡೆಯಾಗುವ ಸಾಧ್ಯತೆಯಿದೆ.  ಇನ್ನು ಟೆಸ್ಟ್ ಪಂದ್ಯದ ವೇಳೆ ವಿಶ್ರಾಂತಿ ಪಡೆಯುವ ಆಟಗಾರರು ನಂತರ ನಡೆಯುವ ಏಕದಿನ ಸರಣಿಗೆ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

ಹೊಸ ನಾಯಕ ಯಾರು?

ಒಂದು ವೇಳೆ ಶುಭ್​ಮನ್ ಗಿಲ್ ವಿಶ್ರಾಂತಿ ಪಡೆದರೆ ಹಿರಿಯ ಆಟಗಾರರಲ್ಲಿ ಯಾರಾದರೂ ತಂಡದ ನಾಯಕರಾಗಿ ಕಾಣಿಸಿಕೊಳ್ಳಬಹುದು. ಅಂದರೆ ಅಫ್ಘಾನ್ ವಿರುದ್ಧದ ಟೆಸ್ಟ್​ನಲ್ಲಿ ಭಾರತ ತಂಡವನ್ನು ಹೊಸ ನಾಯಕ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಸರಣಿಗೆ ಯುವ ಆಟಗಾರರಾದ ಅಭಿಮನ್ಯು ಈಶ್ವರನ್ ಮತ್ತು ಸಾಯಿ ಸುದರ್ಶನ್​ ಆಯ್ಕೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ vs ಅಫ್ಘಾನಿಸ್ತಾನ್ ಸರಣಿ ವೇಳಾಪಟ್ಟಿ:

  • ಜೂನ್ 6 – 10: ಏಕೈಕ ಟೆಸ್ಟ್ (ಮುಲ್ಲನ್‌ಪುರ)
  • ಜೂನ್ 14: ಮೊದಲ ಏಕದಿನ ಪಂದ್ಯ (ಧರ್ಮಶಾಲಾ)
  • ಜೂನ್ 17: ಎರಡನೇ ಏಕದಿನ ಪಂದ್ಯ (ಲಕ್ನೋ)
  • ಜೂನ್ 20: ಮೂರನೇ ಏಕದಿನ ಪಂದ್ಯ (ಚೆನ್ನೈ)

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..!

ಈ ಸರಣಿಯ ಬಳಿಕ ಟೀಮ್ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಅದಕ್ಕೂ ಮುನ್ನ ಭಾರತದ ‘ಬೆಂಚ್ ಸ್ಟ್ರೆಂತ್’ ಪರೀಕ್ಷಿಸಲು ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಹೀಗಾಗಿ ಅಫ್ಘಾನಿಸ್ತಾನ್ ಸರಣಿಯಲ್ಲಿ ಒಂದಷ್ಟು ಹೊಸ ಮುಖಗಳು ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Published On – 12:55 pm, Tue, 21 April 26

Source link

ತಿಲಕ್ ವರ್ಮಾ ಮೇಲೆ ಪಾಂಡ್ಯ ಗರಂ? ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! – Kannada News | Viral Moments: Hardik Pandya’s High Voltage Pep Talk to Tilak Varma

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅಮೋಘ ಗೆಲುವು ದಾಖಲಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ (101) ಅಜೇಯ ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 199 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 100 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 99 ರನ್​ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನ ಬಳಿಕ ಮೈದಾನದಲ್ಲಿ ನಡೆದ ಒಂದು ಸನ್ನಿವೇಶದ ವಿಡಿಯೋ ಭಾರೀ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಬ್ಯಾಟರ್ ತಿಲಕ್ ವರ್ಮಾ ಅವರ ಮೇಲೆ ರೇಗಿದ್ದಾರೆ ಎಂದು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ.

ಏನಿದು ಘಟನೆ?

ಈ ಪಂದ್ಯದ ನಡುವೆ ಸ್ಟ್ರಾಟಜಿಕ್ ಟೈಮ್‌ಔಟ್ ಸಮಯದಲ್ಲಿ ಈ ಘಟನೆ ನಡೆದಿದೆ. ತಿಲಕ್ ವರ್ಮಾ ಆರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದರು (22 ಎಸೆತಗಳಲ್ಲಿ 19 ರನ್). ಈ ವೇಳೆ ಮೈದಾನಕ್ಕೆ ಬಂದ ನಾಯಕ ಹಾರ್ದಿಕ್ ಪಾಂಡ್ಯ, ತಿಲಕ್ ಅವರತ್ತ ಕೈ ಸನ್ನೆಯೊಂದಿಗೆ ಜೋರಾಗಿ ಏನನ್ನೋ ಹೇಳುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಅಭಿಮಾನಿಗಳು ಹಾರ್ದಿಕ್ ತನ್ನದೇ ಆಟಗಾರನ ಮೇಲೆ ಕೋಪಗೊಂಡಿದ್ದಾರೆ ಎಂದು ಭಾವಿಸಿದ್ದರು.

ಹಾರ್ದಿಕ್ ಪಾಂಡ್ಯ ಸ್ಪಷ್ಟನೆ:

ಈ ಪಂದ್ಯದ ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಹಾರ್ದಿಕ್ ಪಾಂಡ್ಯ, “ನಾನು ಅವರ ಮೇಲೆ ರೇಗುತ್ತಿರಲಿಲ್ಲ, ಅದು ಪ್ರೇರೇಪಿಸುವ ಮಾತುಗಳಷ್ಟೇ. ‘ನೀನು ಇದನ್ನು ಮಾಡಬಲ್ಲೆ, ನೀನು ಗೆಲ್ಲಿಸಿ ತೋರಿಸುತ್ತೀಯಾ!’ ಎಂದು ಅವರನ್ನು ಹುರಿದುಂಬಿಸಿದ್ದೆ” ಎಂದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ತಿಲಕ್ ವರ್ಮಾ ಕೂಡ ಹಾರ್ದಿಕ್ ಪಾಂಡ್ಯ ತನ್ನ ಹುರಿದುಂಬಿಸಿದ್ದರು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ನಾಯಕ ರಣ ಉತ್ಸಾಹದಲ್ಲಿದ್ದರು. ಹೀಗಾಗಿ ನಾನು ಅವರಿಗೆ ಸ್ವಲ್ಪ ಶಾಂತರಾಗಿ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಕೆಲಸ ಮಾಡಿದ “ಪೆಪ್ ಟಾಕ್”:

ತಿಲಕ್ ವರ್ಮಾ ಅವರನ್ನು ಹುರಿದುಂಬಿಸಿದ ಬೆನ್ನಲ್ಲೇ ಟೈಮ್‌ಔಟ್ ಬಳಿಕ ಅಬ್ಬರಿಸಿದ ತಿಲಕ್ ವರ್ಮಾ, ಕೇವಲ 45 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕ (101* ರನ್) ಸಿಡಿಸಿದರು. ಇವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 99 ರನ್‌ಗಳ ಬೃಹತ್ ಜಯ ದಾಖಲಿಸಲು ಸಾಧ್ಯವಾಯಿತು.

ಇದನ್ನೂ ಓದಿ: ವಿರಾಟ್ ಕೊಹ್ಲಿಗಾಗಿ ಬ್ಯಾಟ್ ಹಿಡಿಯಲಿದ್ದಾರೆ ನೊವಾಕ್ ಜೋಕೊವಿಚ್!

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಏಳನೇ ಸ್ಥಾನಕ್ಕೇರಿದೆ. ಅಲ್ಲದೆ ಒಟ್ಟು 4 ಅಂಕಗಳೊಂದಿಗೆ ಪ್ಲೇಆಫ್ ರೇಸ್ ಆಸೆಯನ್ನು ಜೀವಂತವಿರಿಸಿಕೊಂಡಿದೆ.

Source link

ಕುಮಾರಸ್ವಾಮಿ ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು ನೋಡಿ!

ಬೆಂಗಳೂರು, ಏಪ್ರಿಲ್ 21: ಸಚಿವ ಜಮೀರ್ ಅಹ್ಮದ್ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಜತೆ ರಹಸ್ಯವಾಗಿ ಮಾತುಕತೆ ನಡೆಸಿದ್ದು, ಜೆಡಿಎಸ್ ಸೇರ್ಪಡೆ ಬಗ್ಗೆ ಚರ್ಚಿಸಿದ್ದಾರೆ ಎಂಬ ವದಂತಿಗಳ ಬಗ್ಗೆ ಇದೀಗ ಸ್ಪಷ್ಟನೆ ದೊರೆತಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಖಾನ್, ಅವೆಲ್ಲ ಬರೀ ಊಹಾಪೋಹ ಅಷ್ಟೆ. ನಾನ್ಯಾಕೆ ಜೆಡಿಎಸ್ ಸೇರಬೇಕು? ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದಿದ್ದಾರೆ. ನಾನು 2017ರಲ್ಲಿ ಕಾಂಗ್ರೆಸ್‌ಗೆ ಬಂದೆ. 2018ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗಲೂ ನಾನು ಮಂತ್ರಿಯಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ, ಪಕ್ಷ ನನಗೆ ಐದು ಖಾತೆಗಳ ಹೊಣೆ ನೀಡಿ ಸಚಿವನನ್ನಾಗಿ ಮಾಡಿತು. ವಕ್ಫ್, ಹಜ್, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ಖಾತೆಗಳನ್ನು ನೀಡಿತು. 2023ರಲ್ಲಿಯೂ ತಮಗೆ ನಾಲ್ಕು ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಹೀಗಿದ್ದಾಗ ಕಾಂಗ್ರೆಸ್ ಯಾಕೆ ತ್ಯಜಿಸಲಿ ಎಂದು ಪ್ರಶ್ನಿಸಿದರು.

ತನ್ನಗಿಂತ ಹಿರಿಯರಾದ ರೋಷನ್ ಬೇಗ್ (ಏಳು ಬಾರಿ ಶಾಸಕ), ತನ್ವೀರ್ ಸೇಠ್ (ಐದು ಬಾರಿ ಶಾಸಕ) ಮತ್ತು ಹ್ಯಾರಿಸ್ (ಮೂರು-ನಾಲ್ಕು ಬಾರಿ ಶಾಸಕ) ಅವರಂತಹ ನಾಯಕರು ಪಕ್ಷದಲ್ಲಿರುವಾಗಲೂ ಕಾಂಗ್ರೆಸ್ ತಮಗೆ ಅವಕಾಶ ನೀಡಿದೆ. ಪಕ್ಷ ನನಗೆ ಎರಡು ಬಾರಿ ಮಂತ್ರಿ ಸ್ಥಾನ ನೀಡಿದ್ದು, ಅದಕ್ಕಿಂತ ಹೆಚ್ಚಿನದೇನು ಬೇಕು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಂಡಿ ಬಿದ್ದ ರಸ್ತೆಗಳು, ಹದಗೆಟ್ಟ ವ್ಯವಸ್ಥೆ; ರಾಜ್ಯ ಸರ್ಕಾರದ ವಿರುದ್ಧ ಮೋಹನ್‌ದಾಸ್ ಪೈ ಸಿಡಿಮಿಡಿ! – Kannada News | Mohandas Pai Slams Bengaluru’s Failing Infrastructure, Cites Corruption and IT Flight Risk

ಗುಂಡಿ ಬಿದ್ದ ರಸ್ತೆಗಳು, ಹದಗೆಟ್ಟ ವ್ಯವಸ್ಥೆ; ಸರ್ಕಾರದ ವಿರುದ್ಧ ಮೋಹನ್‌ದಾಸ್ ಪೈ ಸಿಡಿಮಿಡಿ!

ಬೆಂಗಳೂರು, ಏಪ್ರಿಲ್ 21: ಸಿಲಿಕಾನ್ ಸಿಟಿಯ ಗುಂಡಿ ಬಿದ್ದ ರಸ್ತೆಗಳು ಮತ್ತು ಹದಗೆಡುತ್ತಿರುವ ಮೂಲಸೌಕರ್ಯಗಳ ಕುರಿತು ಖ್ಯಾತ ಉದ್ಯಮಿ ಹಾಗೂ ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ (Mohandas Pai) ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘X’ ನಲ್ಲಿ ನಗರದ ಅವ್ಯವಸ್ಥೆಯ ಫೋಟೋ ಹಂಚಿಕೊಂಡಿರುವ ಅವರು, ಜಿಬಿಎ ರಸ್ತೆ ದುರಸ್ತಿ ಕಾರ್ಯವು “ಅತ್ಯಂತ ಪ್ರಾಚೀನ ಮತ್ತು ಶೋಚನೀಯ” ಎಂದು ಕಿಡಿಕಾರಿದ್ದಾರೆ.

ಐಟಿ ವಲಯದ ಆತಂಕ ಮತ್ತು ವಲಸೆಯ ಭೀತಿ

ಬ್ಲ್ಯಾಕ್‌ಬಕ್ ಸಿಇಒ ಬೆಂಗಳೂರನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಪೈ ಅವರು ವಾಗ್ದಾಳಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವದ ಶ್ರೇಷ್ಠ ಕಂಪನಿಗಳಿರುವ, ಸುಮಾರು ಎಂಟು ಲಕ್ಷ ಜನರು ಕೆಲಸ ಮಾಡುವ ಪ್ರಮುಖ ರಸ್ತೆಗಳನ್ನೇ ದುರಸ್ತಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹೂಡಿಕೆದಾರರು ಮತ್ತು ಉದ್ಯಮಿಗಳು ನಗರದ ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಳ್ಳುತ್ತಿದ್ದು, ಐಟಿ ಕಂಪನಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಸಂಭವವಿದೆ ಎಂದು ಅವರು ಎಚ್ಚರಿಸಿದ್ದಾರೆ.

ವ್ಯವಸ್ಥೆಯ ವೈಫಲ್ಯ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಹತ್ತಾರು ಸಲಹೆಗಳನ್ನು ನೀಡಿದ್ದರೂ ಯಾವುದೇ ಸುಧಾರಣೆ ತಂದಿಲ್ಲ ಎಂದು ಪೈ ದೂರಿದ್ದಾರೆ. ಗುತ್ತಿಗೆದಾರರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಆಗುತ್ತಿಲ್ಲ ಮತ್ತು ಪ್ರತಿ ಹಂತದಲ್ಲೂ ದೊಡ್ಡ ಮಟ್ಟದ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಗುಣಮಟ್ಟದ ಕೆಲಸಗಳು ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳ ವಿಳಂಬವನ್ನು ಟೀಕಿಸಿದ ಅವರು, ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಯೋಜನೆಗಳಲ್ಲಿ ಸ್ಥಿರತೆ ಇಲ್ಲದಂತಾಗಿದೆ ಎಂದಿದ್ದಾರೆ.

ಇದನ್ನೂ ಓದಿ ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಮೋಹನ್ ದಾಸ್ ಕೆಂಡಾಮಂಡಲ

ಸಾರ್ವಜನಿಕರ ಆಕ್ರೋಶ

ಮೋಹನ್‌ದಾಸ್ ಪೈ ಅವರ ಪೋಸ್ಟ್‌ಗೆ ಸಾವಿರಾರು ನಾಗರಿಕರು ಬೆಂಬಲ ಸೂಚಿಸಿದ್ದು, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದು ನಿಜಕ್ಕೂ ಭಾರತದ ಸಿಲಿಕಾನ್ ವ್ಯಾಲಿಯೇ? ಇಲ್ಲಿ ರಸ್ತೆಗಳೇ ಇಲ್ಲ, ಕೇವಲ ತೇಪೆ ಹಚ್ಚಿದ ಗುಂಡಿಗಳಿವೆ ಎಂದು ಕೆಲವರು ಅಳಲು ತೋಡಿಕೊಂಡಿದ್ದಾರೆ. ಗುಣಮಟ್ಟದ ತಪಾಸಣೆ ನಡೆಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರ್ಕಾರದ ಮುಂದಿರುವ ಸವಾಲು

ಸರ್ಕಾರಿ ಶಾಲೆಗಳ ಕುಸಿತ, ಉನ್ನತ ಶಿಕ್ಷಣದಲ್ಲಿನ ಖಾಲಿ ಹುದ್ದೆಗಳು ಮತ್ತು ಮೂಲಸೌಕರ್ಯದ ಕೊರತೆಯನ್ನು ನೀಗಿಸದಿದ್ದರೆ, ನಗರದ ಉದ್ಯೋಗ ಸೃಷ್ಟಿ ಸಾಮರ್ಥ್ಯ ಕುಂಠಿತಗೊಳ್ಳಲಿದೆ ಎಂದು ಪೈ ಎಚ್ಚರಿಸಿದ್ದಾರೆ. ಸದ್ಯ ಜಿಬಿಎ ಆಯುಕ್ತರು ಮಳೆಗಾಲದ ಮುನ್ನೆಚ್ಚರಿಕೆ ಹಾಗೂ ಗುಂಡಿ ಮುಚ್ಚುವ ಕಾರ್ಯಕ್ಕೆ ಸೂಚನೆ ನೀಡಿದ್ದರೂ, ಅದು ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು! – Kannada News | Tumakuru Bus Accident: KSRTC Bus Overturns Near Gubbi on NH 206; 40 Passengers Escape Miraculously

ತುಮಕೂರು, ಏಪ್ರಿಲ್ 21: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯದ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿದ್ದು, ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ತಿಪಟೂರು ಡಿಪೋಗೆ ಸೇರಿದ ಈ ಬಸ್ ಹೊಸದುರ್ಗದಿಂದ ಬೆಂಗಳೂರಿನ ಕಡೆಗೆ ತೆರಳುತ್ತಿತ್ತು. ಬಸ್‌ನಲ್ಲಿ ಪ್ರಯಾಣಿಕರು ಭರ್ತಿಯಾಗಿದ್ದರು. ಗುಬ್ಬಿ ಸಮೀಪದ ಕಳ್ಳಿಪಾಳ್ಯದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಐದಾರು ಜನರಿಗೆ ಗಂಭೀರ ಗಾಯ

ಅಪಘಾತದಲ್ಲಿ ಐದಾರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 40ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದ ಬಟ್ಟೆ ಬ್ರ್ಯಾಂಡ್ ಜಾಹೀರಾತಿನಲ್ಲಿ ಆಲಿಯಾ ಭಟ್! – Kannada News | Pakistan fashion brand used Alia Bhatt’s images to promote their brand

ಆಲಿಯಾ ಭಟ್ (Alia Bhatt) ಭಾರತದ ಸ್ಟಾರ್ ನಟಿ, ಹಲವಾರು ಬ್ರ್ಯಾಂಡುಗಳಿಗೆ ಅವರು ರಾಯಭಾರಿ ಸಹ ಆಗಿದ್ದಾರೆ. ಹಲವು ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಸಹ ಮಾಡಿದ್ದಾರೆ. ಖುದ್ದು ಆಲಿಯಾ ಅವರು ಫ್ಯಾಷನ್ ಬ್ರ್ಯಾಂಡ್ ಒಂದರ ಮಾಲಕಿಯೂ ಹೌದು. ಆದರೆ ಇದೀಗ ಆಲಿಯಾ ಭಟ್ ಅವರು ಪಾಕಿಸ್ತಾನದ ಬಟ್ಟೆ ಬ್ರ್ಯಾಂಡಿನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ! ವಜಾಯೆಶಾ ಹೆಸರಿನ ಬ್ರ್ಯಾಂಡಿನ ಬಟ್ಟೆಗಳನ್ನು ಧರಿಸಿ ಆಲಿಯಾ ಭಟ್ ಫೋಸು ನೀಡಿದ್ದಾರೆ. ಪಾಕಿಸ್ತಾನದಲ್ಲಿ ಈ ಫೋಟೊಗಳು ವೈರಲ್ ಆಗಿವೆ. ಆದರೆ ನಿಜಾಂಶ ಬೇರೆಯೇ ಇದೆ.

ಅಸಲಿಗೆ ನಟಿ ಆಲಿಯಾ ಭಟ್ ಪಾಕ್​ ಬ್ರ್ಯಾಂಡಿಗಾಗಿ ಯಾವುದೇ ಫೋಟೊಶೂಟ್ ಮಾಡಿಸಿಲ್ಲ, ಪಾಕ್ ಬ್ರ್ಯಾಂಡಿನ ಬಟ್ಟೆಗಳನ್ನು ಸಹ ಧರಿಸಿಲ್ಲ. ಆದರೆ ವಜಾಯೆಶಾ ಬ್ರ್ಯಾಂಡಿನವರು ಎಐ ಬಳಸಿ ಆಲಿಯಾ ಅವರ ಚಿತ್ರಗಳನ್ನು ತಿರುಚಿ ತಮ್ಮ ಬಟ್ಟೆಯ ಜಾಹೀರಾತಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಗಳು ವೈರಲ್ ಆಗುತ್ತಿದ್ದಂತೆ ಆಲಿಯಾ ಭಟ್ ಅಭಿಮಾನಿಗಳು, ನೆಟ್ಟಿಗರು, ವಜಾಯಿಷಾ ಇನ್​​ಸ್ಟಾಗ್ರಾಂ ಪೇಜಿನಲ್ಲಿ ಛೀಮಾರಿ ಹಾಕಿದ್ದು, ಆಲಿಯಾ ಭಟ್, ಕೇಸು ಹಾಕುವುದು ಖಾತ್ರಿ ಎಂದಿದ್ದಾರೆ.

Alia Bhatt1

ಆಲಿಯಾ ಭಟ್ ಅವರು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಿತ್ರಗಳನ್ನು ಬಳಸಿಕೊಂಡು ಆಲಿಯಾ, ತಮ್ಮ ಬ್ರ್ಯಾಂಡಿನ ಸೆಲ್ವಾರ್ ಕಮೀಜ್ ಇನ್ನಿತರೆ ಉಡುಗೆಗಳನ್ನು ತೊಟ್ಟು ಫೋಸು ಕೊಡುತ್ತಿರುವಂತೆ ಚಿತ್ರಗಳನ್ನು ಬದಲಾಯಿಸಿ ಬಳಸಲಾಗಿದೆ. ಆಲಿಯಾ ಭಟ್ ಅವರು ಫ್ಯಾಷನ್ ಶೋಗಳಲ್ಲಿ ಮಾಡರ್ನ್ ಡ್ರೆಸ್ ಧರಿಸಿ ತೆಗೆಸಿಕೊಂಡ ಚಿತ್ರಗಳನ್ನು ಸಹ ತಿರುಚಿ ತಮ್ಮ ಉಡುಗೆಗಳನ್ನು ಹಾಕಿಕೊಂಡಿರುವಂತೆ ಬದಲಾಯಿಸಲಾಗಿದೆ.

Alia Bhatt2

ಆಲಿಯಾ ಭಟ್ ಅವರು ನ್ಯಾಯಾಲಯದಿಂದ ಪರ್ಸನಾಲಿಟಿ ರೈಟ್ಸ್ (ವ್ಯಕ್ತಿತ್ವ ರಕ್ಷಣೆ ಹಕ್ಕು) ಅನ್ನು ಪಡೆದುಕೊಂಡಿದ್ದಾರೆ. ಅವರ ಅನುಮತಿ ಇಲ್ಲದೆ ಯಾರೂ ಸಹ ಯಾವುದೇ ಕಾರಣಕ್ಕೂ ಸಹ ಅವರ ಚಿತ್ರವನ್ನು, ವಿಡಿಯೋವನ್ನು, ಧ್ವನಿಯನ್ನು, ಅವರ ಹಾವ-ಭಾವದ ನಕಲನ್ನು ಸಹ ಬಳಸುವಂತಿಲ್ಲ. ಆದರೆ ಪಾಕ್​​ನ ಸಂಸ್ಥೆಯೊಂದು ನೇರವಾಗಿ ಚಿತ್ರವನ್ನೇ ಬಳಸಿದೆ, ಮಾತ್ರವಲ್ಲದೆ ಆಲಿಯಾರ ಚಿತ್ರವನ್ನು ತಿರುಚಿದೆ ಸಹ. ಆಲಿಯಾ ಭಟ್ ಇದರ ವಿರುದ್ಧ ಹೇಗೆ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ. ಪಾಕಿಸ್ತಾನದ ಸಂಸ್ಥೆಯ ವಿರುದ್ಧ ಕೇಸು ಹಾಕುವುದು ಉಪಯೋಗ ಆಗಲಾರದಾದರೂ, ಇನ್​​ಸ್ಟಾಗ್ರಾಂಗೆ ರಿಪೋರ್ಟ್ ಮಾಡಿ ಆ ಸಂಸ್ಥೆಯ ಇನ್​​ಸ್ಟಾ ಪೇಜನ್ನು ರದ್ದು ಮಾಡಿಸಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:16 pm, Tue, 21 April 26

Source link

Kakanmath Temple: ಕಾಕನಮಠ ದೇವಾಲಯ; ಬರೀ ಒಂದರ ಮೇಲೊಂದರಂತೆ ಕಲ್ಲುಗಳನ್ನಿಟ್ಟು ಕಟ್ಟಿದ 115 ಅಡಿ ಎತ್ತರದ ಭವ್ಯ ಶಿವ ದೇವಾಲಯ – Kannada News | Kakanmath Temple Morena: Ancient Shiva Marvel Built Without Cement

ಕಾಕನಮಠ ದೇವಾಲಯImage Credit source: kevinstandagephotography

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಿಹೋನಿಯಾ ಪ್ರದೇಶದಲ್ಲಿರುವ ‘ಕಾಕನಮಠ ದೇವಾಲಯ’ವು ಕೇವಲ ಒಂದು ಪುರಾತನ ಕಟ್ಟಡವಲ್ಲ. ಇದು ವಾಸ್ತುಶಿಲ್ಪದ ಅಚ್ಚರಿ ಮತ್ತು ನಿಗೂಢತೆಗಳ ಸಂಗಮ. ಸುಮಾರು 115 ಅಡಿ ಎತ್ತರದ ಈ ಭವ್ಯ ಶಿವ ದೇವಾಲಯವು ಇಂದಿಗೂ ಇತಿಹಾಸಕಾರರನ್ನು ಮತ್ತು ವಿಜ್ಞಾನಿಗಳನ್ನು ಬೆರಗುಗೊಳಿಸುತ್ತಿದೆ. ತನ್ನ ವಿಶಿಷ್ಟ ನಿರ್ಮಾಣ ಶೈಲಿಯಿಂದಲೇ ಜಗತ್ಪ್ರಸಿದ್ಧಿಯಾಗಿದೆ.

ನಿರ್ಮಾಣದ ರಹಸ್ಯ: ವಾಸ್ತುಶಿಲ್ಪದ ಮಾಯಾಲೋಕ:

ಈ ದೇವಾಲಯದ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಇದರ ನಿರ್ಮಾಣದಲ್ಲಿ ಸಿಮೆಂಟ್, ಪ್ಲಾಸ್ಟರ್ ಅಥವಾ ಸುಣ್ಣದಂತಹ ಯಾವುದೇ ಅಂಟಿಕೊಳ್ಳುವ ವಸ್ತುಗಳನ್ನು ಬಳಸಲಾಗಿಲ್ಲ. ಬದಲಾಗಿ ಬೃಹತ್ ಗಾತ್ರದ ಕಲ್ಲುಗಳನ್ನು ಒಂದರ ಮೇಲೊಂದು ಸಮತೋಲನದಲ್ಲಿರಿಸಿ (Interlocking system) ಅಂತಹ ಎತ್ತರದ ರಚನೆಯನ್ನು ನಿರ್ಮಿಸಲಾಗಿದೆ. ಶತಮಾನಗಳಿಂದ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸಿದರೂ, ಸುತ್ತಲಿನ ಸಣ್ಣ ದೇವಾಲಯಗಳು ಕುಸಿದಿದ್ದರೂ, ಈ ಮುಖ್ಯ ದೇವಾಲಯವು ಇಂದಿಗೂ ಅಚಲವಾಗಿ ನಿಂತಿರುವುದು ಇಂಜಿನಿಯರ್‌ಗಳಿಗೆ ಒಂದು ದೊಡ್ಡ ಸವಾಲಾಗಿದೆ.

ಐತಿಹಾಸಿಕ ಹಿನ್ನೆಲೆ:

ಇತಿಹಾಸಕಾರರ ಪ್ರಕಾರ, ಈ ದೇವಾಲಯವನ್ನು 11 ನೇ ಶತಮಾನದಲ್ಲಿ ಕಚ್ಛಾಪಘಾಟ (ಕಚ್ವಾಹ) ರಾಜವಂಶದ ರಾಜ ‘ಕೀರ್ತಿರಾಜ್’ ನಿರ್ಮಿಸಿದನು. ರಾಜನ ಪತ್ನಿ ಕಾಕನವತಿ ಶಿವನ ಪರಮ ಭಕ್ತೆಯಾಗಿದ್ದಳು. ಅವಳ ಇಚ್ಛೆಯಂತೆ ಈ ಭವ್ಯ ದೇವಾಲಯ ನಿರ್ಮಾಣವಾದ ಕಾರಣ ಇದಕ್ಕೆ ‘ಕಾಕನಮಠ’ ಎಂಬ ಹೆಸರು ಬಂದಿತು. ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ ಅಷ್ಟು ಎತ್ತರಕ್ಕೆ ಭಾರೀ ಕಲ್ಲುಗಳನ್ನು ಸಾಗಿಸಿ, ಅವುಗಳ ಮೇಲೆ ಅದ್ಭುತ ಶಿಲ್ಪಗಳನ್ನು ಕೆತ್ತಿದ ಶಿಲ್ಪಿಗಳ ಕೌಶಲ್ಯ ಅವಿಸ್ಮರಣೀಯ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ದೆವ್ವಗಳು ನಿರ್ಮಿಸಿದ ದೇವಾಲಯವೇ? – ಒಂದು ರೋಚಕ ದಂತಕಥೆ:

ಸ್ಥಳೀಯವಾಗಿ ಒಂದು ಆಸಕ್ತಿದಾಯಕ ಜಾನಪದ ಕಥೆ ಪ್ರಚಲಿತದಲ್ಲಿದೆ. ಈ ದೇವಾಲಯವನ್ನು ಮನುಷ್ಯರು ಕಟ್ಟಿದ್ದಲ್ಲ, ಬದಲಾಗಿ ಶಿವನ ಆಜ್ಞೆಯ ಮೇರೆಗೆ ದೆವ್ವಗಳು ಒಂದೇ ರಾತ್ರಿಯಲ್ಲಿ ನಿರ್ಮಿಸಿದವು ಎಂದು ಜನರು ನಂಬುತ್ತಾರೆ. ಕಥೆಯ ಪ್ರಕಾರ, ಬೆಳಗಿನ ಜಾವದಲ್ಲಿ ಯಾರೋ ಹಿಟ್ಟು ಬೀಸುವ ಶಬ್ದ ಕೇಳಿದಾಗ ದೆವ್ವಗಳು ಕೆಲಸವನ್ನು ಅರ್ಧಕ್ಕೇ ಬಿಟ್ಟು ಹೋದವಂತೆ. ಅದಕ್ಕಾಗಿಯೇ ದೇವಾಲಯದ ಶಿಖರವು ಇಂದಿಗೂ ಅಪೂರ್ಣವಾಗಿ ಕಾಣುತ್ತದೆ ಎನ್ನಲಾಗುತ್ತದೆ. ಈ ಕಥೆಗೆ ಪುರಾವೆ ಇಲ್ಲದಿದ್ದರೂ, ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವ ಕಲ್ಲುಗಳ ಜೋಡಣೆಯು ಈ ನಿಗೂಢತೆಗೆ ಪುಷ್ಠಿ ನೀಡುತ್ತದೆ.

ಪ್ರಸ್ತುತ ಸ್ಥಿತಿ ಮತ್ತು ಪ್ರಾಮುಖ್ಯತೆ:

ದೇವಾಲಯದ ಕೆಲವು ಭಾಗಗಳು ಹಾನಿಗೊಳಗಾಗಿದ್ದರೂ, ಅದರ ವೈಭವ ಕಿಂಚಿತ್ತೂ ತಗ್ಗಿಲ್ಲ. ಇಲ್ಲಿನ ಅಪರೂಪದ ಶಿಲ್ಪಕಲೆಗಳನ್ನು ಪ್ರಸ್ತುತ ವಸ್ತುಸಂಗ್ರಹಾಲಯಗಳಲ್ಲಿ ಸಂರಕ್ಷಿಸಿಡಲಾಗಿದೆ. ಇಂದು ಇದು ಕೇವಲ ಭಕ್ತರ ಧಾರ್ಮಿಕ ಕೇಂದ್ರ ಮಾತ್ರವಲ್ಲದೆ, ಇತಿಹಾಸ ಪ್ರಿಯರು ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿರಾಟ್ ಕೊಹ್ಲಿಗಾಗಿ ಬ್ಯಾಟ್ ಹಿಡಿಯಲಿದ್ದಾರೆ ನೊವಾಕ್ ಜೋಕೊವಿಚ್! – Kannada News | Novak Djokovic’s Cricket Love via Virat Kohli

ವಿಶ್ವ ಟೆನ್ನಿಸ್ ಅಂಗಳದ ಅಧಿಪತಿ ನೊವಾಕ್ ಜೋಕೊವಿಚ್ (Novak Djokovic) ಈಗ ಕ್ರಿಕೆಟ್ ಪ್ರೇಮಿಯಾಗಿ ಬದಲಾಗಿದ್ದಾರೆ! ಇದಕ್ಕೆ ಕಾರಣ ಬೇರೆ ಯಾರೂ ಅಲ್ಲ, ಭಾರತದ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ (Virat Kohli). ಇತ್ತೀಚೆಗೆ ಮ್ಯಾಡ್ರಿಡ್‌ನಲ್ಲಿ ನಡೆದ ‘ಲಾರಿಯಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್’ ಸಮಾರಂಭದಲ್ಲಿ ಮಾತನಾಡಿದ ಜೋಕೊವಿಚ್, ತಾನು ಕ್ರಿಕೆಟ್ ವೀಕ್ಷಿಸಲು ಮತ್ತು ಆಸಕ್ತಿ ಬೆಳೆಸಿಕೊಳ್ಳಲು ವಿರಾಟ್ ಕೊಹ್ಲಿ ಅವರೊಂದಿಗಿನ ಸ್ನೇಹವೇ ಮುಖ್ಯ ಕಾರಣ ಎಂದು ಬಹಿರಂಗಪಡಿಸಿದ್ದಾರೆ.

ಕೊಹ್ಲಿ ಕಾರಣದಿಂದ ಕ್ರಿಕೆಟ್ ಪರಿಚಯ:

ಸರ್ಬಿಯಾ ಮೂಲದ ನೊವಾಕ್ ಜೋಕೊವಿಚ್​ಗೆ ಕ್ರಿಕೆಟ್ ಬಗ್ಗೆ ಮೊದಲೇನೂ ತಿಳಿದಿರಲಿಲ್ಲ. ಆದರೆ, ವಿರಾಟ್ ಕೊಹ್ಲಿ ಅವರ ಸಾಧನೆ ಮತ್ತು ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದ ಜೋಕೊವಿಚ್, ಈಗ ಕ್ರಿಕೆಟ್ ಪಂದ್ಯಗಳನ್ನು ಗಮನಿಸುತ್ತಿದ್ದಾರೆ.  “ನನ್ನ ಗೆಳೆಯ ವಿರಾಟ್‌ಗಾಗಿ ನಾನು ಕ್ರಿಕೆಟ್ ಪ್ರೇಮಿಯಾಗಿದ್ದೇನೆ” ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾ ಸ್ನೇಹ:

ಈ ಇಬ್ಬರು ದಿಗ್ಗಜರ ಸ್ನೇಹ ಶುರುವಾಗಿದ್ದು ಇನ್‌ಸ್ಟಾಗ್ರಾಮ್ ಮೂಲಕ ಎಂಬುದು ವಿಶೇಷ. ಒಂದೊಮ್ಮೆ ಕೊಹ್ಲಿ ಅವರು ಜೋಕೊವಿಚ್‌ಗೆ ಸಂದೇಶ ಕಳುಹಿಸಲು ಹೋದಾಗ, ಅದಾಗಲೇ ಜೋಕೊವಿಚ್ ಅವರಿಂದ ಮೆಸೇಜ್ ಬಂದಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದರಂತೆ! ಅಂದಿನಿಂದ ಇಂದಿನವರೆಗೆ ಇವರಿಬ್ಬರು ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ.

ಭಾರತಕ್ಕೆ ಬರಲಿದ್ದಾರೆ ಜೋಕೊವಿಚ್:

ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ಹಂಬಲವನ್ನು ನೊವಾಕ್ ಜೋಕೊವಿಚ್ ವ್ಯಕ್ತಪಡಿಸಿದ್ದಾರೆ. ಈ ಭೇಟಿಯ ವೇಳೆ ವಿರಾಟ್ ಕೊಹ್ಲಿ ಅವರೊಂದಿಗೆ ಸೇರಿ ಟೆನ್ನಿಸ್ ಮತ್ತು ಕ್ರಿಕೆಟ್‌ನ ‘ಕ್ರಾಸ್‌ಓವರ್’ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಆಸೆಯನ್ನೂ ಅವರು ತೋಡಿಕೊಂಡಿದ್ದಾರೆ.

ಪರಸ್ಪರ ಗೌರವ:

“ವಿರಾಟ್ ಒಬ್ಬ ಅದ್ಭುತ ಕ್ರೀಡಾಪಟು ಮತ್ತು ವ್ಯಕ್ತಿ. ಅವರ ಆಟದ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದು ಜೋಕೊವಿಚ್ ಹೊಗಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಿರಾಟ್ ಕೂಡ ಹಲವು ಬಾರಿ ಜೋಕೊವಿಚ್ ಅವರ ಫಿಟ್‌ನೆಸ್ ಮತ್ತು ಮಾನಸಿಕ ದೃಢತೆಯನ್ನು ಕೊಂಡಾಡಿದ್ದಾರೆ.

ವಿಶ್ವದ ಇಬ್ಬರು ಶ್ರೇಷ್ಠ ಕ್ರೀಡಾಪಟುಗಳ ಈ ಅಪರೂಪದ ಸ್ನೇಹ ಈಗ ಕ್ರೀಡಾ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಅಭಿಮಾನಿಗಳು ಈ ‘ಜೆರ್ಸಿ ನಂ. 18’ ಮತ್ತು ‘ಟೆನ್ನಿಸ್ ನಂ. 1’ ಜೋಡಿಯನ್ನು ಒಂದೇ ವೇದಿಕೆಯಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ನೊವಾಕ್ ಜೋಕೊವಿಚ್ ಸಾಧನೆಗಳು:

ಅತಿ ಹೆಚ್ಚು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳು: ಪುರುಷರ ಸಿಂಗಲ್ಸ್ ಟೆನ್ನಿಸ್‌ನಲ್ಲಿ ದಾಖಲೆಯ 24 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಮೂಲಕ ಅತ್ಯಧಿಕ ಗ್ರಾಂಡ್ ಸ್ಲಾಮ್ ಗೆದ್ದ ಪುರುಷ ಟೆನ್ನಿಸ್ ತಾರೆ ಎನಿಸಿಕೊಂಡಿದ್ದಾರೆ.

  • ಆಸ್ಟ್ರೇಲಿಯನ್ ಓಪನ್: 10
  • ಫ್ರೆಂಚ್ ಓಪನ್: 3
  • ವಿಂಬಲ್ಡನ್: 7
  • ಯುಎಸ್ ಓಪನ್: 4

ವಿಶ್ವ ನಂ. 1 ಶ್ರೇಯಾಂಕದ ದಾಖಲೆ: ಎಟಿಪಿ (ATP) ಶ್ರೇಯಾಂಕದಲ್ಲಿ ಅತಿ ಹೆಚ್ಚು ವಾರಗಳ ಕಾಲ (400ಕ್ಕೂ ಹೆಚ್ಚು ವಾರಗಳು) ವಿಶ್ವದ ನಂ. 1 ಆಟಗಾರನಾಗಿ ಉಳಿದ ದಾಖಲೆ ಕೂಡ ನೊವಾಕ್ ಜೋಕೊವಿಚ್ ಹೆಸರಲ್ಲಿದೆ.

ಗೋಲ್ಡನ್ ಮಾಸ್ಟರ್ಸ್: ಒಂಬತ್ತೂ ಎಟಿಪಿ ಮಾಸ್ಟರ್ಸ್ 1000 (ATP Masters 1000) ಟೂರ್ನಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ಏಕೈಕ ಆಟಗಾರ ನೊವಾಕ್ ಜೋಕೊವಿಚ್.

ಮುಖಾಮುಖಿ ದಾಖಲೆ: ಟೆನ್ನಿಸ್ ಲೋಕದ ದಿಗ್ಗಜರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಇಬ್ಬರ ವಿರುದ್ಧವೂ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಕೂಡ ಜೋಕೊವಿಚ್ ಹೆಸರಿನಲ್ಲಿದೆ.

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..!

ಒಲಿಂಪಿಕ್ ಸಾಧನೆ:2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಝ್ ಅವರನ್ನು ಸೋಲಿಸಿ ನೊವಾಕ್ ಜೋಕೊವಿಚ್ ಚಿನ್ನದ ಪದಕ ಗೆದ್ದಿದ್ದರು.

Source link

ಇಬ್ಬರು ಮಕ್ಕಳಿದ್ದೂ ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು? – Kannada News | Heart Wrenching: Children Deny Last Rites for Mother in Belagavi

ಬೆಳಗಾವಿ, ಏಪ್ರಿಲ್​​ 21: ನಗರದಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದ್ದು, ತಾಯಿ ಮೃತಪಟ್ಟ ನಂತರ ಆಕೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಕ್ಕಳು ನಿರಾಕರಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಅಂಜನಾ ಧಾಮನೆ ಮೃತಪಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ವೃದ್ಧಾಶ್ರಮದಲ್ಲಿದ್ದ ವೃದ್ಧೆ ಅಂಜನಾಗೆ, ಇಬ್ಬರು ಮಕ್ಕಳಿದ್ರೂ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಅಂಜನಾ ಸ್ಥಿತಿ ಕಂಡು ಸಹೋದರ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ. ವೃದ್ಧೆ ಮೃತಪಟ್ಟ ಹಿನ್ನೆಲೆ ಮಕ್ಕಳಿಗೆ ಆಶ್ರಮ ಸಿಬ್ಬಂದಿ ಕರೆ ಮಾಡಿದ್ದು, ಈ ವೇಳೆ ನೀವೇ ಅಂತ್ಯಕ್ರಿಯೆ ಮಾಡಿ ಎಂದು ಪಾಪಿ ಮಕ್ಕಳು ಕರೆ ಕಟ್ ಮಾಡಿದ್ದಾರೆ. ಬಳಿಕ ನಗರಸೇವಕ ಶಂಕರ್ ಪಾಟೀಲ್, ಗಂಗಾಧರ್ ಪಾಟೀಲ್​ಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಅಂತಿಮವಾಗಿ ಆಶ್ರಮಕ್ಕೆ ತೆರಳಿ ವೃದ್ಧೆಯ ಅಂತ್ಯಕ್ರಿಯೆಯನ್ನು ಸಮಾಜ ಸೇವಕರು ನೆರವೇರಿಸಿದ್ದಾರೆ. ಕೇವಲ 10 ಕಿ.ಮೀ. ದೂರದಲ್ಲಿದ್ರೂ ತಾಯಿಯ ಅಂತ್ಯಕ್ರಿಯೆಗೆ ಬಾರದ ಮಕ್ಕಳಾದ ಮಹೇಶ್, ಶ್ರೀಕಾಂತ್ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ, ದಿಕ್ಕಾಪಾಲಾಗಿ ಓಡಿದ ಜನ – Kannada News | Bee Swarm Sparks Panic at Mandore Garden, Visitors Rush for Safety

ಜೋಧ್​ಪುರ, ಏಪ್ರಿಲ್ 21: ಜೋಧ್​ಪುರದ ಮಂಡೋರ್ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ ನಡೆಸಿದ್ದು, ಜನರು ದಿಕ್ಕಾಪಾಲಾಗಿ ಓಡಿರುವ ವಿಡಿಯೋ ವೈರಲ್ ಆಗಿದೆ. ಜೋಧ್‌ಪುರ ಎಂದಿನಂತೆ ಪ್ರವಾಸಿಗರಿಂದ ಕಳೆಗಟ್ಟಿತ್ತು. ಮಂಡೋರ್ ಉದ್ಯಾನದ ಮುಖ್ಯ ದ್ವಾರದ ಬಳಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ಐತಿಹಾಸಿಕ ಸೌಂದರ್ಯವನ್ನು ಸವಿಯುತ್ತಿದ್ದರು. ಆದರೆ, ದೊಡ್ಡ ಆಪತ್ತು ಕಾದಿದೆ ಎಂದು ಯಾರೂ ಊಹಿಸಿರಲಿಲ್ಲ.

ಉದ್ಯಾನದ ಮುಖ್ಯ ದ್ವಾರದ ಬಳಿ ಇದ್ದ ಬೃಹತ್ ಜೇನುಗೂಡಿನಿಂದ ಸಾವಿರಾರು ಜೇನುನೊಣಗಳು ಒಮ್ಮೆಗೆ ಹೊರಬಂದವು. ನೋಡುನೋಡುತ್ತಿದ್ದಂತೆಯೇ ದಾಳಿ ಶುರು ಮಾಡಿದ್ದವು. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಜನರು ತಮ್ಮ ಕೈಯಲ್ಲಿದ್ದ ಬ್ಯಾಗ್, ಕೊಡೆಗಳನ್ನು ಎಸೆದು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಸಣ್ಣ ಮಕ್ಕಳು ಮತ್ತು ವೃದ್ಧರು ಆತಂಕದಿಂದ ಕಿರುಚುತ್ತಿದ್ದರು. ಇಡೀ ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಯಿತು. ಜೇನುನೊಣಗಳ ಗುಂಪು ನೂರಾರು ಪ್ರವಾಸಿಗರನ್ನು ಬೆನ್ನಟ್ಟಿತು, ಹಲವರಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version