ಇಶಾ ಫೌಂಡೇಶನ್​ ಸ್ಮಶಾನ ನಿರ್ಮಿಸುವುದರ ವಿರುದ್ಧ ಹೈಕೋರ್ಟ್​​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ – Kannada News | Madras High Court Dismisses Plea Against Construction Of Gasifier Crematorium By Isha Foundation

ಚೆನ್ನೈ, ಜನವರಿ 28: ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್ (Isha Foundation) ನಿರ್ಮಿಸುತ್ತಿರುವ ಗ್ಯಾಸ್ ಆಧಾರಿತ ಸ್ಮಶಾನದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಆ ಸ್ಮಶಾನವು ಸಾಮಾಜಿಕ ಕಲ್ಯಾಣಕ್ಕೆ ಸೇವೆ ಸಲ್ಲಿಸುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇಶಾ ಫೌಂಡೇಶನ್ ಸ್ಮಶಾನ ನಿರ್ಮಾಣ ಮಾಡುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇಶಾ ಫೌಂಡೇಶನ್​ನಿಂದ ಕಾಲಭೈರವ ಧಗನ ಮಂಟಪದ ನಿರ್ಮಾಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ತಮಿಳುನಾಡು ಗ್ರಾಮ ಪಂಚಾಯತ್ ನಿಯಮಗಳ ಅಡಿಯಲ್ಲಿ ವಸತಿ ಪ್ರದೇಶ ಅಥವಾ ಕುಡಿಯುವ ನೀರು ಸರಬರಾಜು ಇರುವ ಪ್ರದೇಶದಿಂದ ಸುಮಾರು 90 ಮೀಟರ್ ಒಳಗೆ ಸ್ಮಶಾನಕ್ಕೆ ಪರವಾನಗಿ ನೀಡುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠ ಹೇಳಿದೆ. ನಿಯಮಗಳ ಪ್ರಕಾರ, ಗ್ರಾಮ ಪಂಚಾಯತ್‌ನಿಂದ ಪರವಾನಗಿ ಪಡೆಯುವುದು ಮಾತ್ರ ಅಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಇಶಾ ಫೌಂಡೇಷನ್​ಗೆ ಬಿಗ್​ ರಿಲೀಫ್​: ಶೋಕಾಸ್‌ ನೋಟಿಸ್‌ ರದ್ದತಿಯನ್ನು ಎತ್ತಿ ಹಿಡಿದ ಸುಪ್ರೀಂ

ಸೂಕ್ತ ಅನುಮತಿ ಪಡೆದಿದ್ದರೆ ಸ್ಮಶಾನ ನಿರ್ಮಿಸುವುದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಗ್ಯಾಸ್ ಆಧಾರಿತ ಸ್ಮಶಾನವು ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಆಧುನಿಕ ಸೌಲಭ್ಯವಾಗಿರುವುದರಿಂದ, ಅದು ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣವು ಇಕಾರೈ ಪೊಲುವಂಪಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮೀಣ ಪಂಚಾಯತ್‌ಗಳ ಸಹಾಯಕ ನಿರ್ದೇಶಕರು ಮತ್ತು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಯಮತ್ತೂರು ದಕ್ಷಿಣ ಜಿಲ್ಲಾ ಪರಿಸರ ಎಂಜಿನಿಯರ್ ಅವರ ಆದೇಶಗಳ ವಿರುದ್ಧ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದೆ. ಈ ಆದೇಶ ಇಶಾ ಫೌಂಡೇಶನ್‌ಗೆ ಸ್ಮಶಾನವನ್ನು ಸ್ಥಾಪಿಸಲು ಅನುಮತಿ ನೀಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಗುರಿ; ಬಜೆಟ್​ನಲ್ಲಿ ಈ ಉದ್ದಿಮೆಗಳಿಗೆ ಸಿಗಲಿದೆ ಪುಷ್ಟಿ – Kannada News | Union Budget 2026, labour intensive sector to get boost

ನವದೆಹಲಿ, ಜನವರಿ 28: ಈ ಬಾರಿಯ ಬಜೆಟ್​ನಲ್ಲಿ (Union Budget) ಮ್ಯಾನುಫ್ಯಾಕ್ಚರಿಂಗ್ ಎಕನಾಮಿ ಸುದೃಢಗೊಳಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ. ಉದ್ಯೋಗ ಸೃಷ್ಟಿ ಹೆಚ್ಚು ಆಗುವಂತೆ ಕ್ರಮಗಳನ್ನು ಕೈಗೊಳ್ಳಬಹುದು. ಕಾರ್ಮಿಕರ ಕೆಲಸ ಬೇಕಿರುವ ಉದ್ಯಮಗಳಿಗೆ ಉತ್ತೇಜನ ನೀಡಲು ಬಜೆಟ್​ನಲ್ಲಿ ಒತ್ತು ನೀಡುವ ನಿರೀಕ್ಷೆ ಇದೆ. ಜವಳಿ, ಲೆದರ್, ಆಭರಣ, ಕರಕುಶಲ ಸೆಕ್ಟರ್​ಗಳಿಗೆ ನೆರವು ಸಿಗಬಹುದು. ಈ ವಲಯದ ಮಧ್ಯಮ ಗಾತ್ರದ ಉದ್ದಿಮೆಗಳ ಪ್ರಬಲ ಸಮೂಹವನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ. ಆ ನಿಟ್ಟಿನಲ್ಲಿ ಬಜೆಟ್​ನಲ್ಲಿ ಕ್ರಮ ಕೈಗೊಳ್ಳಬಹುದು. ಎಂಎಸ್​ಎಂಇಗಳಿಗೆ ಇನ್ನಷ್ಟು ಹೊಸ ಸ್ಕೀಮ್​ಗಳ ಘೋಷಣೆ ಆಗಬಹುದು.

ಭಾರತಕ್ಕೆ ಈ ಮೊದಲು ಜನಸಂಖ್ಯೆಯೇ ಆರ್ಥಿಕ ಉನ್ನತಿಗೆ ಅಡ್ಡಗಾಲಾಗಿತ್ತು. ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದದೇ ಇರುವುದು, ಮತ್ತು ಉದ್ಯೋಗ ಸೃಷ್ಟಿ ಹೆಚ್ಚು ಆಗದೇ ಇದ್ದದ್ದು ಮಾನವ ಸಂಪನ್ಮೂಲದ ಸರಿಯಾದ ಬಳಕೆಗೆ ಅವಕಾಶ ಇರಲಿಲ್ಲ. ಈಗ ಆರ್ಥಿಕತೆ ಬೃಹತ್ತಾಗಿ ಬೆಳೆಯುತ್ತಿದೆ. ಅತಿವೇಗದ ಆರ್ಥಿಕತೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಬೆಳವಣಿಗೆಗೆ ಅವಕಾಶ ಹೆಚ್ಚೆಚ್ಚು ಬೇಕಿದೆ. ಈ ನಿಟ್ಟಿನಲ್ಲಿ ನೀತಿಗಳು ರೂಪಿತವಾಗಬೇಕಾಗಿದೆ.

ಇದನ್ನೂ ಓದಿ: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ಮಾನವ ಸಂಪನ್ಮೂಲ ಹೆಚ್ಚಿದ್ದು, ಅದರ ಸದ್ಬಳಕೆಗೆ ಬೇಕಾದಷ್ಟು ಅವಕಾಶಗಳಿಲ್ಲವಾದರೆ ಜನರ ಆದಾಯ ನಿಂತ ನೀರಾಗಿರುತ್ತದೆ. ಆರ್ಥಿಕತೆಯೂ ನಿಂತ ನೀರಾಗುತ್ತದೆ. ಹೀಗಾಗಿ, ಉದ್ಯೋಗ ಸೃಷ್ಟಿ ಹೆಚ್ಚಿರುವಂತಹ ಸೆಕ್ಟರ್​ಗಳು ಪ್ರಬಲವಾಗುವುದು ಅತ್ಯಗತ್ಯ. ಬಜೆಟ್​ನಲ್ಲಿ ಈ ಕ್ರಮ ತೆಗೆದುಕೊಳ್ಳಲು ಮುಂದಾಗಬಹುದು.

ಕಳೆದ ವರ್ಷದ ಬಜೆಟ್​ನಲ್ಲಿ ಕಾರ್ಮಿಕ ಸಮೃದ್ಧ ಕ್ಷೇತ್ರಗಳಿಗೆ ಹೆಚ್ಚಿನ ಹಣ ಒದಗಿಸಲಾಗಿತ್ತು. ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಈ ಬಾರಿಯೂ ಬಜೆಟ್ ಗಮನ ಇದೇ ನಿಟ್ಟಿನಲ್ಲಿ ಇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್​ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?

ಎಂಎಸ್​ಎಂಇಗಳಿಗೆ ಇನ್ನಷ್ಟು ಒತ್ತು ಕೊಡುವುದು ಉತ್ತಮ ಮಾರ್ಗ ಎನ್ನುವುದು ತಜ್ಞರ ಅನಿಸಿಕೆ. ಈ ಸಣ್ಣ ಉದ್ದಿಮೆಗಳಿಗೆ ಉತ್ತಮ ಮೂಲಸೌಕರ್ಯ, ಸುಲಭ ಸಾಲ ಲಭ್ಯತೆ ಬಹಳ ಮುಖ್ಯ. ಜಾಗತಿಕ ಸರಬರಾಜು ಸರಪಳಿಯಲ್ಲಿ ಹೆಚ್ಚೆಚ್ಚು ಗುರುತಿಸಿಕೊಳ್ಳಬೇಕಾದರೆ ಸದೃಢವಾದ ಎಂಎಸ್​ಎಂಇಗಳ ಅವಶ್ಯಕತೆ ಇದೆ. ಇವುಗಳಿಂದ ಉದ್ಯೋಗ ಸೃಷ್ಟಿಯೂ ಅಧಿಕ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಪವಾರ್​​​ ಸಾವಿಗೆ ಈ ಯೋಗ ಕಾರಣ?: ಯಾವ ಕಾರಣಕ್ಕೂ ಈ ಸಮಯದಲ್ಲಿ ವಿಮಾನ ಪ್ರಯಾಣ ಮಾಡಬೇಡಿ – Kannada News | Baramati Air Accident: Ajit Pawar, Viral Prophecy, and Scientific Findings

ಬಾರಾಮತಿಯಲ್ಲಿ ಅಜಿತ್ ಪವಾರ್ ಅವರ ವಿಮಾನ ಪತನಗೊಂಡಿರುವುದು ಕಾಕತಾಳೀಯವೋ ಅಥವಾ ಭವಿಷ್ಯವಾಣಿಯೋ ಎಂಬ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದೀಗ ಜ್ಯೋತಿಷ್ಯರೊಬ್ಬರು ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮೊದಲು ನಾವು ಸುದ್ದಿಯ ನಿಖರತೆಯನ್ನು ಗಮನಿಸೋಣ, ನಂತರ ಜ್ಯೋತಿಷ್ಯದ ಹಿಂದಿನ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳೋಣ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿರುವುದು ಸತ್ಯವಾದ ಮತ್ತು ಅತ್ಯಂತ ದುರದೃಷ್ಟಕರ ಸಂಗತಿ. ಈ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇದೀಗ ಈ ಘಟನೆಗೂ ಹಾಗೂ ಜ್ಯೋತಿಷ್ಯರೊಬ್ಬರು ಹೇಳಿರುವ ಮಾತು ನಿಜವಾಗಿದೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಪ್ರಕಾರ,ಈ ಅವಧಿಯಲ್ಲಿ ಭಾರಿ ಪ್ರಮಾಣದ ಅಗ್ನಿಕಾಂಡ ಸಂಭವಿಸುವ ಯೋಗವಿದೆ.

ಅಪಘಾತಕ್ಕೀಡಾಗುವ ವಿಮಾನವು ಈಶಾನ್ಯ (North-East) ಭಾಗಕ್ಕೆ ಸಂಬಂಧಿಸಿರಬಹುದು. ದೆಹಲಿಯಿಂದ ಬಿಹಾರ, ಕೊಲ್ಕತ್ತಾ ಅಥವಾ ಮ್ಯಾನ್ಮಾರ್, ಸಿಂಗಾಪುರದಂತಹ ದೇಶಗಳಿಗೆ ಪ್ರಯಾಣಿಸುವವರು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ವಿಮಾನ ಪ್ರಯಾಣವನ್ನು ತಪ್ಪಿಸಿ, ಬದಲಿಗೆ ರೈಲು ಅಥವಾ ಬಸ್ ಮೂಲಕ ಪ್ರಯಾಣಿಸುವುದು ಉತ್ತಮ ಎಂದು ಹೇಳಿದ್ದಾರೆ. ಜ್ಞಾನಿಗಳು ಮತ್ತು ವಿವೇಚನಾವಾದಿಗಳು ಇಂತಹ ಘಟನೆಗಳನ್ನು ಕೇವಲ ಕಾಕತಾಳೀಯ ಎಂದು ಕರೆಯುತ್ತಾರೆ. ಜ್ಯೋತಿಷಿಗಳು ನೀಡುವ ಭವಿಷ್ಯವಾಣಿಗಳು ಸಾಮಾನ್ಯವಾಗಿ ಅಸ್ಪಷ್ಟವಾಗಿರುತ್ತವೆ ಮತ್ತು ಲಕ್ಷಾಂತರ ಘಟನೆಗಳಲ್ಲಿ ಯಾವುದೋ ಒಂದು ನಿಜವಾದಾಗ ಅದನ್ನು ‘ಪವಾಡ’ದಂತೆ ಬಿಂಬಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇವಲ 20 ದಿನಗಳ ಹಿಂದಷ್ಟೇ ಶಿಷ್ಟಾಚಾರವನ್ನು ಮುರಿದು ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ್ದ ಅಜಿತ್ ಪವಾರ್

ಇಲ್ಲಿದೆ ನೋಡಿ ವಿಡಿಯೋ:

ಅಜಿತ್ ಪವಾರ್ ಅವರ ವಿಮಾನ ಅಪಘಾತವು ತಾಂತ್ರಿಕ ಕಾರಣಗಳಿಂದ ಮತ್ತು ಹವಾಮಾನದ ವೈಪರೀತ್ಯದಿಂದ ನಡೆದಿದೆ ಎಂದು ಡಿಜಿಸಿಎ (DGCA) ಪ್ರಾಥಮಿಕ ವರದಿ ತಿಳಿಸಿದೆ. ಜ್ಯೋತಿಷ್ಯದ ಭವಿಷ್ಯವಾಣಿಯು ವೈರಲ್ ಆಗಿರಬಹುದು, ಆದರೆ ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಇನ್ನು ಈ ಜ್ಯೋತಿಷ್ಯ ಹೇಳಿರುವ ಪ್ರಕಾರ, ಮುಂಬರುವ ದಿನಗಳಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಅಗ್ನಿಕಾಂಡ ಅಥವಾ ಬೆಂಕಿ ಅನಾಹುತಗಳು ಸಂಭವಿಸುವ ಯೋಗವಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ 3 ತಿಂಗಳವರೆಗೆ ವಿಮಾನ ಪ್ರಯಾಣವು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಸಾಧ್ಯವಾದರೆ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಿ, ರೈಲು ಅಥವಾ ಬಸ್ ಮೂಲಕ ಪ್ರಯಾಣಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.ಈ ಅಪಘಾತದ ಅಪಾಯವು ಮುಖ್ಯವಾಗಿ ಈಶಾನ್ಯ (North-East) ಭಾಗಕ್ಕೆ ಅನ್ವಯಿಸಬಹುದು. ದೆಹಲಿಯಿಂದ ಬಿಹಾರ, ಕೋಲ್ಕತ್ತಾ ಅಥವಾ ಮ್ಯಾನ್ಮಾರ್, ಸಿಂಗಾಪುರ ಮತ್ತು ಮಲೇಷ್ಯಾ ಕಡೆಗೆ ಸಂಚರಿಸುವ ವಿಮಾನಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ಅವರು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:42 pm, Wed, 28 January 26

Source link

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ – Kannada News | Bangladesh Women Qualify for 2026 T20 World Cup

ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು (Bangladesh Women’s Cricket) 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ (T20 World Cup 2026) ಅರ್ಹತೆ ಪಡೆದಿದೆ. ನೇಪಾಳದ ಮುಲ್ಪಾನಿ ​​ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್-ಸಿಕ್ಸ್ ಹಂತದ ಪಂದ್ಯದಲ್ಲಿ ಥೈಲ್ಯಾಂಡ್ ಮಹಿಳಾ ತಂಡವನ್ನು 39 ರನ್‌ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಾಂಗ್ಲಾದೇಶ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಒಂದೇ ಒಂದು ಪಂದ್ಯವನ್ನು ಸೋಲದೆ 2026 ರ ಟಿ20 ವಿಶ್ವಕಪ್‌ಗೆ ಸ್ಥಾನ ಪಡೆದುಕೊಂಡಿದೆ. ಗುಂಪು ಹಂತದಲ್ಲಿ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಬಾಂಗ್ಲಾದೇಶ, ಆ ನಂತರ ಸೂಪರ್-ಸಿಕ್ಸ್ ಸುತ್ತಿನಲ್ಲಿ ಸತತ ಮೂರು ಗೆಲುವುಗಳನ್ನು ಸಾಧಿಸಿ ಟಿ20 ವಿಶ್ವಕಪ್​ಗೆ ಟಿಕೆಟ್ ಪಡೆದುಕೊಂಡಿದೆ.

ಬಾಂಗ್ಲಾದೇಶಕ್ಕೆ ಸುಲಭ ಗೆಲುವು

ಈ ಪಂದ್ಯದಲ್ಲಿ, ಥೈಲ್ಯಾಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 165 ರನ್ ಕಲೆಹಾಕಿತು. ತಂಡದ ಸೋಭಾನಾ ಮೊಸ್ತಾರಿ ಅದ್ಭುತ ಇನ್ನಿಂಗ್ಸ್ ಆಡಿ 42 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 59 ರನ್‌ ಗಳಿಸಿದರು. ಜುವೈರಿಯಾ ಫರ್ಡೌಸ್ ಕೂಡ 45 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇನ್ನಿಂಗ್ಸ್ ಅಂತ್ಯದಲ್ಲಿ, ರಿತು ಮೋನಿ 6 ಎಸೆತಗಳಲ್ಲಿ 15 ರನ್ ಗಳಿಸಿ ತಂಡವನ್ನು ಈ ಸ್ಕೋರ್​ಗೆ ತಲುಪಿಸಿದರು. ಮತ್ತೊಂದೆಡೆ, ತಿಪಾಚಾ ಪುಟ್ಟವಾಂಗ್ ಥೈಲ್ಯಾಂಡ್ ಪರ ಅದ್ಭುತ ಬೌಲಿಂಗ್ ಮಾಡಿ, 4 ಓವರ್‌ಗಳಲ್ಲಿ 22 ರನ್‌ಗಳಿಗೆ 3 ವಿಕೆಟ್ ಪಡೆದರು. ಉಳಿದಂತೆ ಒನ್ನಿಚಾ ಕಮ್ಚೊಂಫು 2 ವಿಕೆಟ್ ಪಡೆದರೆ, ಫನ್ನಿತಾ ಮಾಯಾ ಕೂಡ 1 ವಿಕೆಟ್ ಪಡೆದರು.

ತತ್ತರಿಸಿದ ಥೈಲ್ಯಾಂಡ್

166 ರನ್‌ಗಳ ಗುರಿ ಬೆನ್ನಟ್ಟಿದ ಥೈಲ್ಯಾಂಡ್​ಗೆ ಬಾಂಗ್ಲಾ ಬೌಲರ್​ಗಳು ಆಘಾತ ನೀಡಿದರು. ಮಾರೂಫಾ ಅಖ್ತರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದರು. ಆದಾಗ್ಯೂ, ನಥಕನ್ ಚಾಂಥಮ್ 46, ನನ್ನಪತ್ ಕೊಂಚರೋಯೆಂಕೈ 29 ಮತ್ತು ನರುಯೆಮೋಲ್ ಚೈವೈ 30 ರನ್ ಬಾರಿಸಿ ಗೆಲುವಿಗಾಗಿ ಹೋರಾಟ ನೀಡಿದರು. ಆದಾಗ್ಯೂ, ಉಳಿದ ಬ್ಯಾಟರ್​ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರದ ಕಾರಣ ಥೈಲ್ಯಾಂಡ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 126 ರನ್ ಗಳಿಸಲಷ್ಟೇ ಶಕ್ತವಾಯಿತು.

U19 World Cup 2026: ಭಾರತದ ಕೈಯಲ್ಲಿದೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ

ಬಾಂಗ್ಲಾದೇಶ ಪರ ಮರುಫಾ ಅಖ್ತರ್ 3 ವಿಕೆಟ್‌ ಪಡೆದರೆ, ರಿತು ಮೋನಿ ಮತ್ತು ಶೋರ್ನಾ ಅಖ್ತರ್ ತಲಾ 2 ವಿಕೆಟ್ ಪಡೆದರು. ಫಹಿಮಾ ಖಾತುನ್ ಕೂಡ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದರು. ಬಾಂಗ್ಲಾದೇಶಕ್ಕೆ ಸೂಪರ್ 6 ಸುತ್ತಿನಲ್ಲಿ ಇನ್ನೂ 2 ಪಂದ್ಯಗಳು ಉಳಿದಿವೆಯಾದರೂ ಈಗಾಗಲೇ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾರ್ಡರ್ 2’ ಸಿನಿಮಾ ಯಶಸ್ಸು: ‘ಬಾರ್ಡರ್ 3’ ಬರೋದು ಖಚಿತ – Kannada News | Border 2 makers ready to do another sequel after box office success

‘ಬಾರ್ಡರ್’ ಸಿನಿಮಾ 1997ರಲ್ಲಿ ಬಿಡುಗಡೆ ಆಗಿತ್ತು. ಸುಮಾರು 3 ದಶಕದ ಬಳಿಕ ಆ ಸಿನಿಮಾಗೆ ಸೀಕ್ವೆಲ್ ಬಂತು. ‘ಬಾರ್ಡರ್ 2’ (Border 2) ಸಿನಿಮಾ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಯಶಸ್ಸಿನಿಂದ ನಿರ್ಮಾಪಕರಿಗೆ ಖುಷಿ ಆಗಿದೆ. ಹಾಗಾಗಿ ‘ಬಾರ್ಡರ್ 3’ ಮಾಡಲು ನಿರ್ಧರಿಸಲಾಗಿದೆ. ಈ ಸುದ್ದಿ ಕೇಳಿ ಪ್ರೇಕ್ಷಕರಿಗೆ ಖುಷಿ ಆಗಿದೆ. ನಿರ್ಮಾಪಕ ಭೂಷಣ್ ಕುಮಾರ್ ಅವರು ‘ಬಾರ್ಡರ್ 3’ (Border 3) ಬರುವುದು ಖಚಿತ ಎಂದು ಹೇಳಿದ್ದಾರೆ.

‘ಬಾರ್ಡರ್ 2’ ಸಿನಿಮಾ ಜನವರಿ 23ರಂದು ಬಿಡುಗಡೆ ಆಯಿತು. ಅನುರಾಗ್ ಸಿಂಗ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ ಯುದ್ಧವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್ ಆಫೀಸ್​​ನಲ್ಲಿ ಉತ್ತಮವಾಗಿ ಕಲೆಕ್ಷನ್ ಆಗುತ್ತಿದೆ.

ವೀಕೆಂಡ್ ಮತ್ತು ಗಣರಾಜ್ಯೋತ್ಸವದ ರಜೆ ಅಕ್ಕಪಕ್ಕದಲ್ಲೇ ಬಂದಿದ್ದರಿಂದ ‘ಬಾರ್ಡರ್ 2’ ಸಿನಿಮಾಗೆ ತುಂಬಾ ಅನುಕೂಲ ಆಯಿತು. ಮೊದಲ ದಿನ ಈ ಸಿನಿಮಾಗೆ 32.10 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. 2ನೇ ದಿನ 40.59 ಕೋಟಿ ರೂಪಾಯಿ ಗಳಿಕೆ ಆಯಿತು. 3ನೇ ದಿನ ಬರೋಬ್ಬರಿ 57.20 ಕೋಟಿ ರೂಪಾಯಿ ಬಾಚಿಕೊಂಡಿತು.

ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡಿದರು. ಅಂದು 63.59 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. 5ನೇ ದಿನವಾದ ಮಂಗಳವಾರ (ಜ.27) 23.31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಯಶಸ್ಸಿನಿಂದಾಗಿ ನಿರ್ಮಾಪಕರಿಗೆ ಲಾಭ ಆಗಿದೆ. ಆದ್ದರಿಂದ ‘ಬಾರ್ಡರ್ 3’ ಸಿನಿಮಾ ಮಾಡಲು ಅವರು ರೆಡಿಯಾಗಿದ್ದಾರೆ.

ಇದನ್ನೂ ಓದಿ: Border 2 Twitter Review: ಮಿಶ್ರ ಪ್ರತಿಕ್ರಿಯೆ ಪಡೆದ ‘ಬಾರ್ಡರ್ 2’ ಸಿನಿಮಾ

‘ಬಾರ್ಡರ್ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್ ಜೊತೆ ವರುಣ್ ಧವನ್, ದಿಲ್ಜಿತ್ ದೊಸಾಂಜ್, ಅಹಾನ್ ಶೆಟ್ಟಿ, ಮೋನಾ ಸಿಂಗ್, ಸೋನಮ್ ಬಾಜ್ವಾ ಮುಂತಾದವರು ನಟಿಸಿದ್ದಾರೆ. ಸಿನಿಮಾದ ಯಶಸ್ಸಿನಿಂದ ಎಲ್ಲರೂ ಫುಲ್ ಖುಷ್ ಆಗಿದ್ದಾರೆ. ದೇಶಭಕ್ತಿ ಕಥಾಹಂದರದ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರು ‘ಬಾರ್ಡರ್ 2’ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜ್ಯಪಾಲರ ಫೋನ್ ಕದ್ದಾಲಿಕೆ: ಬಿಜೆಪಿ ಸದಸ್ಯರಿಂದ ಗಂಭೀರ ಆರೋಪ, ಸದನದಲ್ಲಿ ಚರ್ಚೆ ಜೋರು – Kannada News | Karnataka Assembly Session Discussion on phone tapping: BJP MLAs sprks out on hk patil statement

ಬೆಂಗಳೂರು, ಜನವರಿ 28: ರಾಜ್ಯಪಾಲರಿಗೆ ಕೇಶವ ಕೃಪಾದಿಂದ ಫೋನ್ ಬರುತ್ತೆ ಎಂಬ ಕಾನೂನು ಸಚಿವ ಹೆಚ್​.ಕೆ ಪಾಟೀಲ್​​​ ಹೇಳಿಕೆ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿಂದು (Assembly Session) ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆರ್​ಎಸ್​ಎಸ್ ಕಚೇರಿಯ ಫೋನ್ ಟ್ಯಾಪಿಂಗ್ (phone tapping) ಮಾಡ್ತಿದ್ದೀರಿ. ರಾಜ್ಯಪಾಲರ ಕಚೇರಿಯ ಫೋನ್ ಟ್ಯಾಪಿಂಗ್ ಪ್ರೂವ್ ಮಾಡಿದ್ದಾರೆ. ಹಾಗಾದರೆ ಇದು ಫೋನ್ ಟ್ಯಾಪಿಂಗ್ ಸರ್ಕಾರನಾ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​​ ವಾಗ್ದಾಳಿ ನಡೆಸಿದರು. ಅಲ್ಲದೇ ಹೆಚ್​​ಕೆ ಪಾಟೀಲ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಫೋನ್ ಟ್ಯಾಪಿಂಗ್ ಮಾಡಿದ್ದ ಸರ್ಕಾರಗಳು ಬಿದ್ದು ಹೋಗಿವೆ: ಆರ್ ಅಶೋಕ್

ರಾಜ್ಯಪಾಲರಿಗೆ ಕೇಂದ್ರ ಗೃಹಸಚಿವ ಕರೆ ಮಾಡಿರುವ ಆರೋಪದ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಆರ್ ಅಶೋಕ್, ನಮ್ಮ ಫೋನ್​ಗಳನ್ನು ಕೂಡ ಟ್ಯಾಪಿಂಗ್ ಮಾಡುತ್ತಿದ್ದಾರೆ. ಹಿಂದೆ ಫೋನ್ ಟ್ಯಾಪಿಂಗ್ ಮಾಡಿದ್ದ ಸರ್ಕಾರಗಳು ಬಿದ್ದು ಹೋಗಿವೆ. ಕಾನೂನು ಸಚಿವರಾಗಿದ್ದೀರಿ, ರಾಜ್ಯಪಾಲ ಓಡಿ ಹೋದರು ಎಂದರೆ ನೀವು ಕಾನೂನು ಸಚಿವ ಆಗಿರೋದೆ ಸದನಕ್ಕೆ ಅಗೌರವ. ಸದನದಲ್ಲಿ ಸುಳ್ಳು ಹೇಳಿ, ಈಗ ಸಮರ್ಥನೆ ಮಾಡಲು ಮತ್ತಷ್ಟು ಸುಳ್ಳು ಹೇಳುತ್ತಿದ್ದೀರಿ. ಕಡತದಿಂದ ಹೆಚ್. ಪಾಟೀಲ್ ಹೇಳಿಕೆಯನ್ನು ತೆಗೆದುಹಾಕಲಿ, ಇಲ್ಲ ಅಂದರೆ ಕರೆ ಮಾಡಿರುವುದಕ್ಕೆ ದಾಖಲೆ ಕೊಡಿ. ಹೆಚ್.ಕೆ ಪಾಟೀಲ್ ಕ್ಷಮೆ ಕೇಳಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.

ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಿಷ್ಟು 

ಈ ಕುರಿತು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದು, ನಾನು ಆಪಾದನೆ ಮಾಡುತ್ತಿದ್ದೇನೆ. ನಾನು ಮಾಡಿರುವ ಆಪಾದನೆಗೆ ಇಂದಿನ ಸನ್ನಿವೇಶದಲ್ಲಿ ಸಂಜಸವಾಗಿದೆ. ಇಲ್ಲದಿದ್ದರೆ ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘಿಸಲು ಸಾಧ್ಯವಾಗಿದೆ. ನನ್ನ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ನಿಮ್ಮ ಗೃಹ ಸಚಿವರನ್ನೇ ಕೇಳಿ, ನಮ್ಮನ್ನೇಕೆ ಕೇಳುತ್ತೀರಿ. ರಾಜ್ಯಪಾಲರ ನಡೆ ಬಗ್ಗೆ ದಕ್ಷಿಣ ಭಾರತದಲ್ಲಿ ಚರ್ಚೆಯಾಗುತ್ತಿದೆ. ಅವರ ನಡೆಯಿಂದ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಆ ಬಗ್ಗೆ ತನಿಖೆ ಮಾಡಿ ನಾವು ಸಾಬೀತು ಮಾಡುತ್ತೇವೆ ಎಂದರು.

ನನ್ನ ಹೇಳಿಕೆ ತಪ್ಪು, ಹೇಳಿಕೆ ಹಿಂಪಡೆಯಿರಿ ಅಂತಾ ಹೇಳ್ತಿದ್ದಾರೆ. ಲೋಕಭವನ ಅಥವಾ ಗೃಹ ಸಚಿವಾಲಯ ಏಕೆ ಸ್ಪಷ್ಟನೆ ಕೊಟ್ಟಿಲ್ಲ. ನಾವು ಎರಡು ಕಡೆಯಿಂದ ಸ್ಪಷ್ಟನೆ ಬರುವುದನ್ನು ಕಾಯುತ್ತಿದ್ದೇನೆ. ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವಾಲಯದಿಂದ ಸ್ಪಷ್ಟನೆ ಕೊಡಲಿ. ರಾಷ್ಟ್ರಗೀತೆಗೂ ನಿಲ್ಲದೆ ಹೋಗಿರುವ ಬಗ್ಗೆಯೂ ಸ್ಪಷ್ಟನೆ ಕೇಳುತ್ತಿದ್ದೇವೆ. ಈ ಬಗ್ಗೆ ಲೋಕಭವನ ಮತ್ತು ಗೃಹ ಸಚಿವಾಲಯಕ್ಕೂ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಯಾವುದೇ ದೂರವಾಣಿ ಕದ್ದಾಲಿಸುವುದಿಲ್ಲ: ಸಿಎಂ

ಫೋನ್ ಟ್ಯಾಪಿಂಗ್ ವಿಚಾರವಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ನಮ್ಮ ಸರ್ಕಾರ ಯಾವುದೇ ದೂರವಾಣಿ ಕದ್ದಾಲಿಸುವುದಿಲ್ಲ. ನಾವು ವಿರೋಧ ಪಕ್ಷಗಳ ನಾಯಕರ ಫೋನ್​ ಟ್ಯಾಪ್ ಮಾಡಿಲ್ಲ. ಕೇಂದ್ರದಿಂದ ಕರೆ ಬಂದಿರಬಹುದು ಎಂದು ಹೇಳಿದ್ದಾರೆ ಅಷ್ಟೇ ಎಂದರು.

ಇದನ್ನೂ ಓದಿ: ಅಧಿವೇಶನ ಭಾಷಣ, ಗದ್ದಲ ಬಗ್ಗೆ ರಾಷ್ಟ್ರಪತಿಗೆ ರಾಜ್ಯಪಾಲ ವರದಿ: ಏನೆಲ್ಲಾ ಅಂಶಗಳಿವೆ?

ಗವರ್ನರ್ ಭಾಷಣದ ಮೇಲೆ ಮಾತಾಡಬೇಕು ಅಂದರೆ ಮಾತಾಡಿ, ಸುಮ್ಮನೆ ಕಾಲಹರಣ ಮಾಡಲು ಚರ್ಚೆ ಮಾಡಬೇಡಿ. ಬೇಕು ಎಂದರೆ ತನಿಖೆ ಮಾಡಿಸೋಣ. ನಾವೇ ರಾಜ್ಯಪಾಲರ ಹ್ಯಾಂಡ್​ಶೇಕ್ ಮಾಡಿ ಕಳಿಸಿಕೊಟ್ಟಿದ್ದೇವೆ. ರಾಜ್ಯಪಾಲ ಥಾವರ್​​​ಚಂದ್ ಗೆಹ್ಲೋಟ್​ರಿಗೆ ಅಗೌರವ ತೋರಿಲ್ಲ. ರಾಜ್ಯಪಾಲರು ರಾಷ್ಟ್ರಗೀತೆ ಹಾಡದೇ ಹೊರಟುಹೋಗಿದ್ದು ಸರಿನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಲೂಸಿಯ’ದಲ್ಲಿ ನಾಯಕನಾಗಿ ನಟಿಸಬೇಕಿತ್ತು ‘ಕುಲಶೇಖರ’ ಕೈತಪ್ಪಿದ್ದು ಹೇಗೆ? – Kannada News | Gulshan Devaiah said he was supposed to act in Lucia Kannada movie

ಲೂಸಿಯ’ (Lucia) ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾ. ಹಲವು ಹೊಸಬರಿಗೆ ತಮ್ಮದೇ ಸಿನಿಮಾ ಮಾಡಲು ಪ್ರೇರಣೆ ನೀಡಿದ ಸಿನಿಮಾ ಇದು. ಕನ್ನಡ ಪ್ರೇಕ್ಷಕರು ಹೊಸ ಮಾದರಿಯ ಸಿನಿಮಾಗಳನ್ನು ನೋಡುತ್ತಾರೆ, ನೋಡಿ ಮೆಚ್ಚುತ್ತಾರೆ ಎಂಬುದನ್ನು ತೋರಿಸಿದ ಸಿನಿಮಾ ಅದು. ನೀನಾಸಂ ಸತೀಶ್ ಸೇರಿದಂತೆ ಹಲವು ಪ್ರತಿಭಾವಂತ ನಟ, ನಟಿ ಹಾಗೂ ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಅದು. ಹಲವರಿಗೆ ಜೀವನ ಕೊಟ್ಟ ಸಿನಿಮಾ ಅದು. ಆದರೆ ಆ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಬೇಕಿದ್ದಿದ್ದು ನೀನಾಸಂ ಸತೀಶ್ ಅಲ್ಲ, ಬದಲಿಗೆ ‘ಕುಲಶೇಖರ’ ಅಲಿಯಾಸ್ ಗುಲ್ಷನ್ ದೇವಯ್ಯ.

‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಕುಲಶೇಖರನ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯ ಆಗಿರುವ ಗುಲ್ಷನ್ ದೇವಯ್ಯ ಮೂಲತಃ ಕನ್ನಡಿಗರೇ. ಆದರೆ ಇಷ್ಟು ವರ್ಷ ಮಿಂಚಿರುವುದು ಬಾಲಿವುಡ್​​ನಲ್ಲಿ. ಹಿಂದಿಯ ಹಲವಾರು ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸಿರುವ ಗುಲ್ಷನ್ ದೇವಯ್ಯ ಅಪ್ಪಟ ಕನ್ನಡಿಗರು, ಮಾತ್ರವಲ್ಲ ಬೆಂಗಳೂರಿನಲ್ಲೇ ಹಲವು ವರ್ಷ ನೆಲೆಸಿದ್ದವರು. ಅಸಲಿಗೆ ‘ಲೂಸಿಯಾ’ ಸಿನಿಮಾನಲ್ಲಿ ಗುಲ್ಷನ್ ಅವರೇ ನಾಯಕನಾಗಿ ನಟಿಸಬೇಕಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

‘ಮೊದಲಿಂದಲೂ ಹಿಂದಿ ಸಿನಿಮಾ, ಧಾರಾವಾಹಿ ನೋಡುತ್ತಾ ಬೆಳೆದಿದ್ದ ನನಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಆಸೆಯಿಂದ ಬಹಳ ಮುಂಚೆ ಮುಂಬೈಗೆ ಬಂದೆ. ನಾಟಕ, ಸಣ್ಣ ಪುತ್ರ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ನಿರ್ದೇಶಕ ಪವನ್ ಸಹ ಮುಂಬೈನಲ್ಲಿ ನಾಟಕ ಇನ್ನಿತರೆಗಳಲ್ಲಿ ತೊಡಗಿಸಿಕೊಂಡಿದ್ದ. ಆಗಲೇ ಪವನ್ ಅವರ ಪರಿಚಯ ನನಗೆ ಇತ್ತು’ ಎಂದಿದ್ದಾರೆ ಗುಲ್ಷನ್.

ಇದನ್ನೂ ಓದಿ:ಹಗಲು ಗೌರಮ್ಮ, ರಾತ್ರಿಯಾದರೆ ಕಾಳಿ: ಸಮಂತಾ ಹೊಸ ಅವತಾರ

ಪವನ್ ಒಮ್ಮೆ ಭೇಟಿ ಆಗಿ ‘ಲೂಸಿಯಾ’ ಸಿನಿಮಾ ಮಾಡಬೇಕು ಎಂದ. ನನಗೆ ಕತೆ ಬಹಳ ಹಿಡಿಸಿತು. ಆದರೆ ಅದೇ ವರ್ಷ ಹಿಂದಿಯಲ್ಲಿ ನನ್ನ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿದ್ದವು. ಹೊಸ ಅವಕಾಶಗಳು ಸಿಗಲು ಆರಂಭವಾಗಿದ್ದವು. ‘ಗರ್ಲ್ ಇನ್ ಯೆಲ್ಲೊ ಬೂಟ್ಸ್’, ‘ಧಮ್ ಮಾರೊ ಧಮ್’, ‘ಶೈತಾನ್’ ಸಿನಿಮಾಗಳು ಅದಾಗಲೇ ಬಿಡುಗಡೆ ಆಗಿದ್ದವು. ಬಹಳ ವರ್ಷದ ಪ್ರಯತ್ನದ ಬಳಿಕ ಬಾಲಿವುಡ್​ನಲ್ಲಿ ಅವಕಾಶಗಳು ಸಿಗಲು ಆರಂಭ ಆಗಿದ್ದವು. ಆ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದು ಹೊಸಬರ ಜೊತೆಗೆ ಸೇರಿಕೊಂಡು, ಪ್ರಯೋಗಾತ್ಮಕ ಸಿನಿಮಾನಲ್ಲಿ ನಟಿಸುವುದು ಸೂಕ್ತ ಎಂದು ಆಗ ನನಗೆ ಅನಿಸಲಿಲ್ಲ. ಹಾಗಾಗಿ ಆಗ ನಾನು ಲೂಸಿಯಾ ಸಿನಿಮಾನಲ್ಲಿ ನಟಿಸಲಿಲ್ಲ ಎಂದಿದ್ದಾರೆ ಗುಲ್ಷನ್.

ಅಂದಹಾಗೆ ಗುಲ್ಷನ್ ದೇವಯ್ಯ ಅವರಿಗೆ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲೂ ನಟಿಸುವ ಅವಕಾಶ ಸಿಕ್ಕಿತ್ತು. ಸ್ವತಃ ನಿರ್ದೇಶಕಿ ಗೀತು ಮೋಹನ್​​ದಾಸ್ ನಟಿಸುವಂತೆ ಕೇಳಿದ್ದರು. ಆದರೆ ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರಿಂದ ಹಾಗೂ ಅವರ ಸೀಕ್ವೆಲ್​​ಗಳು ಸಹ ಇರುವ ಕಾರಣ ಡೇಟ್ಸ್ ಸಮಸ್ಯೆಯಿಂದಾಗಿ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಲಿಲ್ಲ ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Important Days in February 2026: ಫೆಬ್ರವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ – Kannada News | Important Days in February 2026: Here is the list of national and international days celebrated in the month of February

ವರ್ಷದ ಎರಡನೇ ತಿಂಗಳಾದ ಫೆಬ್ರವರಿಗೆ (February) ಇನ್ನೇನು ಕೆಲವೇ ಕೆಲವು ದಿನಗಳು ಬಾಕಿಯಿದೆ. ಅಧಿಕ ವರ್ಷದಲ್ಲಿ 29 ದಿನಗಳು ಹಾಗೂ ಸಾಮಾನ್ಯ ವರ್ಷಗಳಲ್ಲಿ 28 ದಿನಗಳನ್ನು ಹೊಂದಿರುವ ಈ ವಿಶೇಷ ತಿಂಗಳಿನಲ್ಲಿಯೂ ಒಂದಷ್ಟು ಪ್ರಮುಖ ಘಟನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್‌ ದಿನದಿಂದ ಹಿಡಿದು ಪ್ರೇಮಿಗಳ ದಿನದ ವರೆಗೆ ಫೆಬ್ರವರಿ ತಿಂಗಳಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದ ಸಂಪೂರ್ಣ ಮಾಹಿತಿ ಇಲ್ಲಿದೆ.

 ಫೆಬ್ರವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:

  • ಫೆಬ್ರವರಿ 1 – ಭಾರತೀಯ ಕರಾವಳಿ ರಕ್ಷಣಾ ಪಡೆ ದಿನ
  • ಫೆಬ್ರವರಿ 2 – ವಿಶ್ವ ತೇವಭೂಮಿ ದಿನ
  • ಫೆಬ್ರವರಿ 2- 8 – ಅಂತರರಾಷ್ಟ್ರೀಯ ಅಭಿವೃದ್ಧಿ ವಾರ
  • ಫೆಬ್ರವರಿ 3 – ಅಂತಾರಾಷ್ಟ್ರೀಯ ಗೋಲ್ಡನ್ ರಿಟ್ರೈವರ್ ದಿನ
  • ಫೆಬ್ರವರಿ 4 – ವಿಶ್ವ ಕ್ಯಾನ್ಸರ್ ದಿನ
  • ಫೆಬ್ರವರಿ 7- 14 – ಪ್ರೇಮಿಗಳ ವಾರ
  • ಫೆಬ್ರವರಿ 10 – ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ
  • ಫೆಬ್ರವರಿ 10 – ವಿಶ್ವ ದ್ವಿದಳ ಧಾನ್ಯ ದಿನ
  • ಫೆಬ್ರವರಿ 10 – ಅಂತರರಾಷ್ಟ್ರೀಯ ಅಪಸ್ಮಾರ ದಿನ
  • ಫೆಬ್ರವರಿ 11 – ವಿಶ್ವ ರೋಗಿಗಳ ದಿನ
  • ಫೆಬ್ರವರಿ 11 –  ಸುರಕ್ಷಿತ ಇಂಟರ್‌ನೆಟ್‌ ದಿನ
  • ಫೆಬ್ರವರಿ 12 – ರಾಷ್ಟ್ರೀಯ ಉತ್ಪಾದಕ ದಿನ
  • ಫೆಬ್ರವರಿ 13 – ವಿಶ್ವ ರೇಡಿಯೋ ದಿನ
  • ಫೆಬ್ರವರಿ 14 – ಪ್ರೇಮಿಗಳ ದಿನ
  • ಫೆಬ್ರವರಿ 14 – ವಿಶ್ವ ಜನ್ಮಜಾತ ಹೃದಯ ದೋಷ ಜಾಗೃತಿ ದಿನ
  • ಫೆಬ್ರವರಿ 20 – ವಿಶ್ವ ಮಾನವಶಾಸ್ತ್ರ ದಿನ
  • ಫೆಬ್ರವರಿ 20 – ವಿಶ್ವ ಸಾಮಾಜಿಕ ನ್ಯಾಯ ದಿನ
  • ಫೆಬ್ರವರಿ 21 –  ಅಂತರರಾಷ್ಟ್ರೀಯ ಮಾತೃಭಾಷಾ ದಿನ
  • ಫೆಬ್ರವರಿ 22 – ವಿಶ್ವ ಚಿಂತನಾ ದಿನ
  • ಫೆಬ್ರವರಿ 23 – ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನ
  • ಫೆಬ್ರವರಿ 24 – ಕೇಂದ್ರ ಅಬಕಾರಿ ದಿನ
  • ಫೆಬ್ರವರಿ 27 – ವಿಶ್ವ ಎನ್‌ಜಿಒ ದಿನ
  • ಫೆಬ್ರವರಿ 28 – ರಾಷ್ಟ್ರೀಯ ವಿಜ್ಞಾನ ದಿನ
  • ಫೆಬ್ರವರಿ 28 – ರಂಜಾನ್

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಡಾ ಕೇಸ್: ಸಿದ್ದರಾಮಯ್ಯ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್ – Kannada News | Muda Scam Case: Court Rejects Snehamayi Krishna plea about Lokayuktas B report against CM Siddaramaiah And others

ಬೆಂಗಳೂರು/ಮೈಸೂರು, (ಜನವರಿ 28): ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ (MUDA Scam Case) ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.  ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸಎ ಬಿ-ರಿಪೋರ್ಟ್ (Lokayuktas B report) ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಕೋರ್ಟ್ ಮೆಟ್ಟಿಲೇರಿದ್ದರು. ಇದರ  ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ್ದು, ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಇಂದು (ಜನವರಿ 22) ಆದೇಶ ಹೊರಡಿಸಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಮುಡಾ ಹಗರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ಭೂಮಾಲೀಕ ದೇವರಾಜು ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಕೋರ್ಟ್​ ಮೆಟ್ಟಿಲೇರಿದ್ದರು. ಇದರಿಂದ ಸಿದ್ದರಾಮಯ್ಯಗೆ ಟೆನ್ಷನ್ ಶುರುವಾಗಿತ್ತು. ಆದ್ರೆ, ಇದೀಗ ಜನಪ್ರತಿನಿಧಿಗಳ ಕೋರ್ಟ್​, ಲೋಕಾಯುಕ್ತ ಬಿ ರಿಪೋರ್ಟ್​ ಪುರಸ್ಕರಿಸಿದೆ. ಇದರೊಂದಿಗೆ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದ ಜಡ್ಜ್​  ಸಂತೋಷ್ ಗಜಾನನ ಭಟ್ ಅವರು ವಜಾಗೊಳಿಸಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಲೋಕಾಯುಕ್ತ ತನಿಖಾ ವರದಿಯಲ್ಲಿ ಮಹತ್ವದ ಅಂಶ ಉಲ್ಲೇಖ

ಬಿ ರಿಪೋರ್ಟ್​ ಎಂದರೇನು​​?

ಸಾಮಾನ್ಯವಾಗಿ ಪೊಲೀಸರು, ಲೋಕಾಯುಕ್ತ ಅಥವಾ ಸಿಬಿಐ, ಇಡಿಯಂತಹ ತನಿಖಾ ಸಂಸ್ಥೆಗಳು ಪ್ರಕರಣವೊಂದರ ತನಿಖೆ ಮಾಡಿದಾಗ ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಸಿಗದೆ ಹೋದರೆ ಅಥವಾ ಆರೋಪದಲ್ಲಿ ಸತ್ಯಾಂಶ ಇಲ್ಲ ಅನ್ನಿಸಿದರೆ ‘ಬಿ ರಿಪೋರ್ಟ್’ ಸಲ್ಲಿಸುತ್ತಾರೆ. ಅದರಂತೆ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಹ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಒಪ್ಪಿಕೊಂಡಿದೆ. ಈ ಮೂಲಕ ಸಿಎಂ ವಿರುದ್ಧ ಮಾಡಲಾಗಿದ್ದ ಆರೋಪಗಳಿಗೆ ಬಲವಾದ ಸಾಕ್ಷಿಗಳಿಲ್ಲ ಎನ್ನುವುದು ಸಾಬೀತಾದಂತಾಗಿದೆ.

ತಮ್ಮ ರಾಜಕಾರಣದ ಇತಿಹಾಸದಲ್ಲೇ ಸಿಎಂ ಸಿದ್ದರಾಮಯ್ಯ ಕ್ಲೀನ್ ಹ್ಯಾಂಡ್ ರಾಜಕಾರಣಿ ಎನ್ನಿಸಿಕೊಂಡಿದ್ದರು. ಆದ್ರೆ, ಮುಡಾ ಹಗರಣ ಅವರನ್ನು ಸುತ್ತಿಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿತ್ತು. ಆದ್ರೆ, ಇದೀಗ ಈ ಪ್ರಕರಣದಲ್ಲಿ ಕೋರ್ಟ್​ ನೀಡಿದ ಆದೇಶದಿಂದಾಗಿ ಸಿಎಂ ಸಿದ್ದರಾಮಯ್ಯ ನಿರಾಳರಾಗಿದ್ದಾರೆ.

ಪ್ರಕರಣದ ಹಿನ್ನೆಲೆ

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂ. 464ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಪ್ರಾಧಿಕಾರವು ಬಳಸಿಕೊಂಡಿತ್ತು. ಇದಕ್ಕೆ ಪರಿಹಾರದ ಬದಲಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ 14 ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಇದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿತ್ತು. ನಂತರ ತನಗೆ ಪ್ರಾಧಿಕಾರ ನೀಡಿದ್ದ 14 ಸೈಟುಗಳನ್ನು ವಾಪಸ್ ನೀಡುವುದಾಗಿ ಪಾರ್ವತಿ ಸಿದ್ದರಾಮಯ್ಯ ಘೋಷಿಸಿದ್ದರು.

ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ, ಸಂಬಂಧಿ ಹಾಗೂ ಜಮೀನಿನ ಮಾಲೀಕರ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ನಂತರ, ನಾಲ್ವರು ಅಕ್ರಮ ಎಸಗಿರುವ ಸಂಬಂಧ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಲೋಕಾಯುಕ್ತ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಅಂದರೆ, ಆರೋಪ ಸಾಬೀತಾಗಿಲ್ಲ ಎಂದು ವರದಿ ನೀಡಲಾಗಿತ್ತು. ಇನ್ನೊಂದೆಡೆ ಈ ‘ಬಿ’ ರಿಪೋರ್ಟ್ ಅನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:18 pm, Wed, 28 January 26

Source link

ಮೊದಲ ಕಾರು ಖರೀದಿಸಿ ಭಾವುಕರಾದ ನಟಿ ಶ್ರುತಿ, ಬೆಲೆ ಎಷ್ಟು? – Kannada News | Actress Shruti Prakash purchased her first car here is the details

ಮೊದಲ ಕಾರು, ಮೊದಲ ಮನೆ ಬಹಲ ಅಮೂಲ್ಯವಾದುದು. ಇವುಗಳು ಸಾಕಾರಗೊಂಡಾಗ ಭಾವುಕರಾಗುವುದು ಸಹಜ. ಸ್ಟಾರ್ ನಟ-ನಟಿಯರಿಗೆ ಹೊಸ ಕಾರು, ಹೊಸ ಮನೆಗಳ ಖರೀದಿ ಎಂಬುದು ಬಹಳ ಸುಲಭ, ಅಷ್ಟೇನೂ ಮಹತ್ವದ ವಿಷಯ ಅಲ್ಲದೇ ಇರಬಹುದು ಆದರೆ ಚಿತ್ರರಂಗ, ಟಿವಿ ಲೋಕದಲ್ಲಿ ಬಹಳ ಕಷ್ಟಪಟ್ಟು ಒಂದೊಂದೇ ಹೆಜ್ಜೆ ಇಡುತ್ತಾ ಸಾಗುತ್ತಿರುವ ಹಲವಾರು ನಟ-ನಟಿಯರಿಗೆ ಈಗಲೂ ಮೊದಲ ಕಾರು ಬಹಳ ಅಮೂಲ್ಯ ಮತ್ತು ಬಹಳ ಭಾವುಕವಾದುದು. ಇದೀಗ ಕನ್ನಡದ ನಟಿ ಶ್ರುತಿ ಪ್ರಕಾಶ್ ಹೊಸ ಕಾರು ಖರೀದಿ ಮಾಡಿದ್ದು, ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಬೆಳಗಾವಿ ಮೂಲದ ಶ್ರುತಿ ಪ್ರಕಾಶ್, ಹಿಂದಿ, ಕನ್ನಡ ಟಿವಿ ಲೋಕದಲ್ಲಿ ಜನಪ್ರಿಯರಾಗಿದ್ದಾರೆ. ಇದೀಗ ಶ್ರುತಿ ಪ್ರಕಾಶ್ ಅವರು ಸ್ಕೋಡಾದ ಹೊಸ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ಖರೀದಿ ಮಾಡಿರುವುದು ಸ್ಕೋಡಾದ ಸ್ಲಾವಿಯಾ ಮಾಂಟೆ ಕಾರ್ಲೊ ಹೆಸರಿನ 1.5 ಲೀಟರ್ ಎಂಜಿನ್​​ನ ಹೊಸ ಕಾರು. ಇದು ಮಿಡ್ ರೇಂಜ್ ಐಶಾರಾಮಿ ಕಾರಾಗಿದೆ.

ಕಾರು ಖರೀದಿ ವಿಡಿಯೋ ಹಂಚಿಕೊಂಡಿರುವ ಶ್ರುತಿ ಪ್ರಕಾಶ್, ‘10 ವರ್ಷ ಬಾಂಬೆಯಲ್ಲಿ ಕಳೆದಿರುವ ಸಮಯ ನನಗೆ ಒಳ್ಳೆಯ ತಾಳ್ಮೆ, ಸಹಿಷ್ಣುತೆ, ನಂಬಿಕೆ, ಧೈರ್ಯವನ್ನು ಕಲಿಸಿಕೊಟ್ಟಿದೆ. ನೀಡಿದ ಪ್ರತಿ ಆಡಿಷನ್, ಪ್ರತಿ ಕಾಯುವಿಕೆ, ನಾನು ಕೆಲಸವಿಲ್ಲದೆ ಕಳೆದ ಪ್ರತಿ ದಿನವೂ ನನ್ನನ್ನು ಇಲ್ಲಿಗೆ, ಈ ಸ್ಥಿತಿಗೆ ಕರೆದು ತಂದಿವೆ. ನಿನ್ನಿಂದ ಸಾಧ್ಯವಿಲ್ಲ ಎಂದು ಜಗತ್ತು ಹೇಳಿದಾಗಲೂ, ನಾನು ಮಾಡಬಹುದು ಎಂದು ಹೇಳುವ ಒಳಗಿನ ಸಣ್ಣ ಧ್ವನಿಯನ್ನು ಕಾಪಾಡಿಕೊಂಡಿದ್ದೆ. ಭಯಕ್ಕಿಂತ ನಂಬಿಕೆಯನ್ನು ಆರಿಸಿಕೊಂಡಿದ್ದಕ್ಕಾಗಿ ದೇವರಿಗೆ, ನನ್ನ ಹೆತ್ತವರಿಗೆ, ವಿಶ್ವಕ್ಕೆ ಮತ್ತು ನಾನು ಕೃತಜ್ಞಳಾಗಿದ್ದೇನೆ’ ಎಂದಿದ್ದಾರೆ ಶ್ರುತಿ ಪ್ರಕಾಶ್.

ನಟಿ ಶ್ರುತಿ ಪ್ರಕಾಶ್ ಖರೀದಿ ಮಾಡಿರುವ ಸ್ಕೋಡಾ ಮಾಂಟೆ ಕಾರ್ಲೊ 1.5 ಡಿಜಿಐ ಕಾರು ಸುಮಾರು 21 ರಿಂದ 22 ಲಕ್ಷ ರೂಪಾಯಿ ಬೆಲೆಯದ್ದಾಗಿದೆ. ಅತ್ಯುತ್ತಮ ಪರ್ಮಾಮೆನ್ಸ್​ನ ಜೊತೆಗೆ ಐಶಾರಾಮಿ ಅನುಭೂತಿಯನ್ನು ಈ ಕಾರು ನೀಡುತ್ತದೆ. ಕಪ್ಪು ಬಣ್ಣದ ಕಾರನ್ನು ನಟಿ ಖರೀದಿ ಮಾಡಿದ್ದು, ಶೋರೂಂನಲ್ಲಿ ತಾವೇ ಪೂಜೆ ಮಾಡಿ ಕಾರನ್ನು ಡೆಲಿವರಿ ಪಡೆದುಕೊಂಡಿದ್ದಾರೆ ನಟಿ.

ಬೆಳಗಾವಿಯ ಮೂಲದ ಶ್ರುತಿ ಪ್ರಕಾಶ್ ಅವರು ಕೆಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡದ ಬಿಗ್​​ಬಾಸ್ ಕನ್ನಡ ಸೀಸನ್ 05 ರಲ್ಲಿ ಸಹ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version