ಬೆಂಗಳೂರಿನ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆ: ಆತಂಕಕಾರಿ ಸತ್ಯ ಬಿಚ್ಚಿಟ್ಟ ಐಐಎಸ್ಸಿ ವರದಿ
ಬೆಂಗಳೂರು, ಮೇ 31: ನಗರದ ಬಹುತೇಕ ಕೆರೆಗಳಲ್ಲಿ ಇತ್ತೀಚೆಗೆ ಸಾವಿರಾರು ಮೀನುಗಳು ನಿಗೂಢವಾಗಿ ಮೃತಪಟ್ಟಿದ್ದವು. ಈ ಹಿನ್ನೆಲೆ ಐಐಎಸ್ಸಿ ತಜ್ಞರು ಕೆರೆಗಳ ನೀರನ್ನು ಪರೀಕ್ಷೆ ಮಾಡಿದ್ದು, ಆಘಾತಕಾರಿ ಸತ್ಯವೊಂದನ್ನು ಬಯಲು ಮಾಡಿದ್ದಾರೆ. ಬೆಂಗಳೂರಿನ (Bengaluru) ಅಂತರ್ಜಲ ಕಲುಷಿತಗೊಂಡಿರುವ ಬಗ್ಗೆ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ನಗರದ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆಯಾಗಿದೆಯಂತೆ. ಈ ಕೆರಗಳ ನೀರು ಇತರ ಜಲ ಮೂಲಗಳಿಗೂ ಸೇರುತ್ತಿರುವ ಕಾರಣ ಜನರು ಕುಡಿಯುತ್ತಿರೋದು ನೀರಲ್ಲ ವಿಷ ಎಂಬುದೀಗ ಬಹಿರಂಗಗೊಂಡಿದೆ. ಮುಖ್ಯಾಂಶಗಳು ತೀವ್ರ ಕಲುಷಿತಗೊಂಡಿರುವ…